ಪ್ರವಾಸೋದ್ಯಮದ ಅರ್ಥ ಮತ್ತು ವ್ಯಾಖ್ಯೆ

ಪ್ರವಾಸೋದ್ಯಮದ ಅರ್ಥ ಮತ್ತು ವ್ಯಾಖ್ಯೆ

ಪ್ರವಾಸೋದ್ಯಮ ಹಾಗೂ ಪ್ರವಾಸಿಗರ ನಡುವೆ ಅವಿನಾಭಾವ ಸಂಬಂಧವಿದೆ. ಏಕೆಂದರೆ ಪ್ರವಾಸ ಉದ್ಯಮವು ಪ್ರವಾಸಿಗರನ್ನು ಅವಲಂಬಿಸಿದೆ. ಪ್ರವಾಸಿಗರಲ್ಲದೆ ಪ್ರವಾಸೋದ್ಯಮವು ನಡೆಯಲಾರದು. ಪ್ರವಾಸಿಗರು ಎಂಬ ಪದವು ಆಂಗ್ಲ ಭಾಷೆಯ Turists  ಎಂದಾದರೆ ಪ್ರವಾಸೋದ್ಯಮ ಎಂಬ ಪದವು ಆಂಗ್ಲ ಭಾಷೆಯಲ್ಲಿ Turism  ಎಂದು ಅರ್ಥವಾಗುತ್ತದೆ. ಈ ಎರಡೂ ಪದಗಳು ಲ್ಯಾಟಿನ್ ಭಾಷೆಯ Tour  ಎಂಬ ಪದದಿಂದ ಉತ್ಪತ್ತಿಯಾಗಿದೆ. Tour  ಎಂಬ ಲ್ಯಾಟಿನ್ ಪದವು ಲ್ಯಾಟಿನ್ ಪದವಾದ “ ಟೋರನಸ್ʼʼ ಎಂಬ ಪದದಿಂದ ಬಂದಿದೆ. ಟೋರನಸ್ ಎಂದರೆ ಸುತ್ತಾಟ ಮಾಡುವುದು ಅಥವಾ ಚಲಿಸುವುದು ಎಂದಾಗುತ್ತದೆ.  ಸರಳವಾಗಿ ಹೇಳಬೇಕೆಂದರೆ ಪ್ರವಾಸೋದ್ಯಮ ಎಂದರೆ ವ್ಯಕ್ತಿಗಳು ತಾವು ವಾಸ ಮಾಡುವ ಸ್ಥಳದಿಂದ ಮನರಂಜನೆ, ವಿಶ್ರಾಂತಿ, ವ್ಯಾಪಾರ, ಶಿಕ್ಷಣ, ಆರೋಗ್ಯ, ಧಾರ್ಮಿಕ ಅಥವಾ ಇತರ ಉದ್ದೇಶಗಳ ಸಲುವಾಗಿ ತಾತ್ಕಾಲಿಕವಾಗಿ ಬೇರೆ ಸ್ಥಳಗಳಿಗೆ ಹೋಗುವುದು. ಅಂದರೆ ಪ್ರವಾಸಿಗನು ಬೇರಡೆ ಹೋದಾಗ ಅಲ್ಲಿ ಶಾಶ್ವತವಾಗಿ ನೆಲೆನಿಲ್ಲದೆ ಆದಾಯ ಗಳಿಸುವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದನ್ನು ಮಾಡದಿರುವುದಾಗಿದೆ. Tour and Turist  ಎಂಬ ಎರಡು ಪದಗಳು 1800 ರಲ್ಲಿ ಪ್ರಥಮ ಬಾರಿಗೆ ಬಳಕೆಯಲ್ಲಿ ಬಂದವು. ಆಂಗ್ಲ ಭಾಷೆಯಲ್ಲಿ ಟ್ರ್ಯಾವೆಲ್ ಎಂದರೆ ಸಂಕಷ್ಟ ಅಥವಾ ಯಾತನೆ ಎಂದರ್ಥ. ಅಂದರೆ ಹಿಂದಿನ ಕಾಲದಲ್ಲಿ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣದಿಂದ ಪ್ರಯಾಣ ತುಂಬಾ ಕಷ್ಟದಿಂದ ಕೂಡಿತ್ತು. ಎಂದು ಹೇಳಲಾಗಿದೆ. ಹೀಗಾಗಿ ಪ್ರಯಾಣವೆಂದರೆ ಅದು ನರಕ ಸದೃಶ್ಯವಾಗಿತ್ತು. ಈ ಕಾರಣದಿಂದ ಟ್ರ್ಯಾವೆಲ್ ಎಂಬ ಶಬ್ದವು ಹುಟ್ಟಿಕೊಂಡಿತು. 1800ರ ವೇಳೆಗೆ ಥಾಮಸ್ ಪೇಜ್ ಎಂಬುವರು ಟೂರಿಸ್ಟ್ ಎಂಬ ಪದವನ್ನು ಪ್ರವಾಸಿಗ ಎಂಬ ಪದಕ್ಕೆ ಸರಿಸಾಟಿಯಾಗಿ ಬಳಸಿದರು. ತದನಂತರ ಎಲ್ಲಾ ಪ್ರವಾಸಿ ಚಟುವಟಿಕೆಗಳನ್ನು ಸೇರಿಸಿ ಟೂರಿಸಂ ಎಂಬ ಪದವನ್ನು ಬಳಕೆಯಲ್ಲಿ ತರಲಾಯಿತು. ಆಕ್ಸ್‌ಫರ್ಡ್ ಶಬ್ದಕೋಶದ ಪ್ರಕಾರ ಪ್ರವಾಸಿಗ ಎಂದರೆ ʻʻವ್ಯಕ್ತಿಯೊಬ್ಬನು ಕುತೂಹಲ ಅಥವಾ ಮೋಜಿಗಾಗಿ ಪ್ರಯಾಣ ಮಾಡುವವನು ಎಂದರ್ಥ.

                                                                                              ವ್ಯಾಖ್ಯೆಗಳು

ಪ್ರವಾಸ, ಪ್ರವಾಸಿ ಹಾಗೂ ಪ್ರವಾಸೋದ್ಯಮದ ತಾಂತ್ರಿಕ ವ್ಯಾಖ್ಯಾನಗಳ ಬಗ್ಗೆ ಸಾಮಾನ್ಯ ಗ್ರಹಿಕೆ ಇರುವುದಾದರೂ ಅವುಗಳ ವ್ಯಾಖ್ಯಾನದ ವ್ಯಾಪ್ತಿ ಬಹಳ ವಿಶಾಲವಾಗಿದೆ. ಪ್ರವಾಸೋದ್ಯಮದ ಕುರಿತು ವಿವಿಧ ಪಂಡಿತರು ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದಾಗಿದೆ.

1.ಹ್ರನ್ಜಿಕರ್‌ ಹಾಗೂ ಕ್ರಾಪ್‌ರವರ ಪ್ರಕಾರ: ಪ್ರವಾಸೋದ್ಯಮವೆಂದರೆ ನಿವಾಸಿಯಲ್ಲದ ವ್ಯಕ್ತಿಗಳು ಪ್ರಯಾಣ ಮಾಡುವುದು ಹಾಗೂ ಶಾಶ್ವತವಾಗಿ ನೆಲೆಯೂರದೆ ಆದಾಯ ಗಳಿಕೆ ಉದ್ದೇಶವನ್ನು ಚಟುವಟಿಕೆಯಾಗಿ ಹೊಂದಿರದ ಪರಿಸ್ಥಿತಿಯನ್ನು ಪ್ರವಾಸೋದ್ಯಮ ಎಂದು ಕರೆದಿದ್ದಾರೆ.

2.ಯುನೈಟೆಡ್ ನೇಶನ್ಸ್ ವರ್ಲ್ಡ್ ಟೂರಿಸಂ ಆರ್ಗನೈಜೇಷನ್: ʻʻಪ್ರವಾಸೋದ್ಯಮವೆಂದರೆ ವ್ಯಕ್ತಿಗಳು ತಮ್ಮ ಸಾಮಾನ್ಯ ಪರಿಸರದ ಹೊರಗಿನ ಸ್ಥಳಗಳಿಗೆ ಮನರಂಜನೆ, ವ್ಯಾಪಾರ ಅಥವಾ ಇತರೆ ಉದ್ದೇಶಗಳಿಗಾಗಿ ಒಂದು ವರ್ಷದ ಅವಧಿಗೆ ಪ್ರಯಾಣಿಸಿ ವಾಸಿಸುವ ಚಟುವಟಿಕೆಗಳಾಗಿವೆ.

3. ವೆಬ್ ಸ್ಟರ್ ವಿಶ್ವಕೋಶದ ಪ್ರಕಾರ: ಸಂಭಾವನೆಯ ಉದ್ದೇಶವನ್ನು ಹೊಂದಿರದ ಒಬ್ಬ ವ್ಯಕ್ತಿ ತಾನು ವಾಸವಾಗಿದ್ದ ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗಿ ವಿಶ್ರಾಂತಿಯ ಸಮಯವನ್ನು ವಿನೋದಕ್ಕಾಗಿ ಕಳೆಯುವವನು ಪ್ರವಾಸಿಗ ಎಂದು ಹೇಳಿದ್ದಾರೆ.

4. ಹರ್ಮನ್ ವಿ ಶುಲಾರ್ಡ್‌ರವರ ಪ್ರಕಾರ: ಒಂದು ಗೊತ್ತಾದ ಪ್ರದೇಶಕ್ಕೆ ವಿದೇಶಿಯರು ಹೋಗಿ ಅಲ್ಲಿ ತಾತ್ಕಾಲಿಕವಾಗಿ ವಾಸಿಸಿ ನಂತರ ಅಲ್ಲಲ್ಲಿ ತಿರುಗಾಡಿ ಬರುವ ಎಲ್ಲಾ ಪ್ರಕ್ರಿಯೆಗಳನ್ನು ಪ್ರವಾಸೋದ್ಯಮ ಎಂದು ಕರೆಯುವರು. 

5. 1937ರಲ್ಲಿ ಸಂಯುಕ್ತ ರಾಷ್ಟ್ರಸಂಘವು ಪ್ರವಾಸೋದ್ಯಮದ ವ್ಯಾಖ್ಯಾನವನ್ನು ಈ ರೀತಿಯಾಗಿ ಮಾಡಿತು. ಒಬ್ಬ ವ್ಯಕ್ತಿ ತಾನು ವಾಸಮಾಡಿದ ನಾಡನ್ನು ಹೊರತುಪಡಿಸಿ ಬೇರೆ ನಾಡಿನಲ್ಲಿ ಕನಿಷ್ಠ 24 ಗಂಟೆಗಿಂತಲೂ ಅಧಿಕ ಸಮಯದವರೆಗೆ ಪ್ರಯಾಣಿಸಿದರೆ ಅದು ಅವನನ್ನು ಪ್ರವಾಸಿಗ ಎಂದು ಕರೆಯುವರು.

6. ಡಾ|| ಜಿವಾದಿನ್‌ ಜೋವಿಯಾಕೆ ಸಾಂಸ್ಕೃತಿಕ ಅಗತ್ಯಗಳನ್ನು ಈಡೇರಿಸಿಕೊಳ್ಳಲು ವಿಹಾರ ಮತ್ತು ವಿರಾಮದಂತ ಸಾಮಾಜಿಕ ಚಲನೆಯನ್ನು ಪ್ರವಾಸೋದ್ಯಮ ಎಂದು ಕರೆಯುವರು.

7. ಸಿ.ಪಿ ಕೂಪರ್‌ರವರ ಪ್ರಕಾರ: ಪ್ರವಾಸಿಗನು ತನ್ನ ಮೂಲ ವಾಸ ಸ್ಥಳದಿಂದ ಗಮ್ಯ ಸ್ಥಳಗಳಿಗೆ ತಾತ್ಕಾಲಿಕವಾಗಿ ಹೋಗಿ ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿದರೆ ಅದನ್ನು ಪ್ರವಾಸೋದ್ಯಮ ಎನ್ನುವರು.

8. ರಾಬಿನ್ ಸನ್ ಹೇಳಿದಂತೆ: ಬಹು ಆಕರ್ಷಕವಾದ ಮತ್ತು ಕಡಿಮೆ ಖರ್ಚಿನ ಹಾಗೂ ವಿಶೇಷ ಸೌಲಭ್ಯಗಳ ಭೌಗೋಳಿಕ ಸುಂದರವಾದ ಸ್ಥಳಗಳಿಗೆ ಜನರು ಮನಸೋತು ಹೋಗುವುದನ್ನು ಪ್ರವಾಸೋದ್ಯಮ ಎಂದು ಕರೆಯುವರು.

9. ವಿಶ್ವಸಂಸ್ಥೆಯ ಪ್ರಕಾರ ವೃತ್ತಿ ಸಂಭಾವನೆಯ ಕಾರಣಕ್ಕಾಗಿ ಒಬ್ಬ ವ್ಯಕ್ತಿ ಯಾವುದೇ ಪ್ರದೇಶಕ್ಕೆ ಭೇಟಿ ನೀಡದೆ. ತನ್ನ ಸ್ವಸ್ಥಳದಿಂದ ಅನ್ಯ ಸ್ಥಳಕ್ಕೆ ತಾತ್ಕಾಲಿಕವಾಗಿ ಹೋಗಿ ಬರುವುದನ್ನು ಪ್ರವಾಸೋದ್ಯಮ ಎಂದು ಕರೆಯಲಾಗುತ್ತದೆ. 

10. WTO ದ ಪ್ರಕಾರ ವ್ಯಕ್ತಿಯೊಬ್ಬನು ವಿರಾಮ ವ್ಯಾಪಾರ ಹಾಗೂ ಇನ್ನಿತರ ಉದ್ದೇಶಗಳಿಗಾಗಿ ಒಂದು ವರ್ಷದ ಒಳಗೆ ತನ್ನ ವಾಸ ಸ್ಥಳದಿಂದ ಹೋಗಿ ಬೇರೆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ತಂಗಿ ಬರುವ ಚಟುವಟಿಕೆಗಳನ್ನು ಪ್ರವಾಸೋದ್ಯಮ ಎಂದು ಕರೆಯುವರು. 

11. ಕಾರ್ಡಿಪ್‌ ಪ್ರಕಾರ: ವ್ಯಕ್ತಿಯೊಬ್ಬನು ತಾನು ವಾಸಮಾಡುವ ಸ್ಥಳದಿಂದ ಹೊರಗೆ ಹೋಗಿ ತನಗೆ ಮನಸ್ಸಿಗೆ ಬಂದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಬರುವುದನ್ನು ಪ್ರವಾಸೋದ್ಯಮ ಎಂದು ಕರೆದಿದ್ದಾರೆ. 

12. ಪ್ರವಾಸಿಗರ ಅಗತ್ಯಗಳನ್ನು ಪೂರೈಸುವ ವಸ್ತುಗಳು ಹಾಗೂ ಸೇವೆಗಳ ಮೂಲಕ ಆದಾಯ ಹಾಗೂ ಉದ್ಯೋಗವನ್ನು ಸೃಷ್ಟಿಸುವ ಕೈಗಾರಿಕೆಯೆ ಪ್ರವಾಸೋದ್ಯಮವಾಗಿದೆ.

 ಈ ಕೆಳಕಂಡ ವ್ಯಕ್ತಿಯು ಪ್ರವಾಸಿಗನಾಗಲಾರನು:

  1. ಪ್ರವಾಸಿಗನು 24 ಗಂಟೆಗಳ ಕಡಿಮೆ ಕಾಲ ಪ್ರಯಾಣಿಸಿ ಒಂದು ಕಡೆಯಲ್ಲಿ ವಾಸವಿದ್ದು ಮರಳಿ ಸ್ವಸ್ಥಾನಕ್ಕೆ ಬರುತ್ತಾನೆ.
  2. ಹಣ ಗಳಿಗೆಗಾಗಿ, ವ್ಯಾಪಾರ ಹಾಗೂ ವೃತ್ತಿ ಕಾರಣಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಿ ಬರುವವರು ಪ್ರವಾಸಿ ಎನಿಸಿಕೊಳ್ಳುವುದಿಲ್ಲ.
  3. ಸರ್ಕಾರಿ ಉದ್ಯೋಗದಿಂದ ನಿವೃತ್ತನಾಗಿ ವಿಶ್ರಾಂತಿಯನ್ನು ಪಡೆಯಲು ಹೋಗುವವರನ್ನು ಪ್ರವಾಸಿಗರು ಎಂದು ಕರೆಯಲಾಗದು.
  4. ಬೇರೆ ದೇಶಗಳಿಗೆ ಶಾಶ್ವತವಾಗಿ ನೆಲೆನಿಲ್ಲಲು ಪ್ರವಾಸ ಕೈಗೊಳ್ಳುವವರನ್ನು ಪ್ರವಾಸಿಗರು ಎಂದು ಪರಿಗಣಿಸಲಾಗುವುದಿಲ್ಲ.
  5. ವಿಹಾರಾರ್ಥಿಗಳು ಹಾಗೂ ವಲಸೆಗಾರರನ್ನು ಪ್ರವಾಸಿಗರು ಎಂದು ಹೇಳಲು ಸಾಧ್ಯವಿಲ್ಲ.
  6. ಹಂಗಾಮಿ ಅತಿಥಿಗಳು, ನೌಕೆಗಳಲ್ಲಿ ಸಂಚರಿಸುವವರು ಹಾಗೂ ರೈಲುಗಳಲ್ಲಿ ತಂಗುವವರನ್ನು ಪ್ರವಾಸಿಗರು ಎಂದು ಕರೆಯಲಾಗುವುದಿಲ್ಲ.
  7. ಸಂಶೋಧನೆ, ಶಿಕ್ಷಣ ಹಾಗೂ ಕರಾರಿನ ಮೇಲೆ ನೌಕರಿ ಮಾಡಲು ದೀರ್ಘಕಾಲದವರೆಗೆ ಬರುವ ಪ್ರವಾಸಿಗರನ್ನು ಪ್ರವಾಸಿಗರನ್ನಾಗಿ ಪರಿಗಣಿಸಲು ಬರುವುದಿಲ್ಲ.

ವಿದೇಶಿ ಪ್ರವಾಸಿಗರು

ಮನರಂಜನೆ, ರಜಾ ದಿನಗಳಲ್ಲಿ ಆನಂದದಿಂದ ಕಾಲಕಳೆಯುವಿಕೆ, ಸಂಶೋಧನೆ, ಅಧ್ಯಯನ, ಶಿಕ್ಷಣ, ಆರೋಗ್ಯ, ವಿರಾಮ, ಕೌಟುಂಬಿಕ ಸಮಾವೇಶ, ಕ್ರೀಡೆ, ಧಾರ್ಮಿಕ ಮೊದಲಾದ ಕಾರಣಗಳಿಗಾಗಿ ಪಾಸ್‌ಪೋರ್ಟ್‌ನ್ನು ಹೊಂದಿ ತನ್ನ ವಾಸಸ್ಥಳದಿಂದ ಅಥವಾ ದೇಶದಿಂದ ಹೊರಗೆ ಕನಿಷ್ಠ 24 ಗಂಟೆಗಳ ಕಾಲ ತಂಗುವವರನ್ನು ವಿದೇಶಿ ಪ್ರವಾಸಿಗರು ಎಂದು ಕರೆಯಬಹುದಾಗಿದೆ. ಆದರೆ ಭಾರತವು ಈ ಕೆಳಕಂಡವರನ್ನು ವಿದೇಶಿ ಪ್ರವಾಸಿಗರೆಂದು ಪರಿಗಣಿಸುವುದಿಲ್ಲ.

  1. ಗಡಿ ಭಾಗಗಳಲ್ಲಿ ವಾಸಮಾಡುವವರು.
  2. ಬೇರೆ ದೇಶಗಳಿಂದ ಭಾರತಕ್ಕೆ ಸಂಬಳಕ್ಕಾಗಿ ಕರಾರಿನ ಮೇಲೆ ಬರುವವರು.
  3. ಶಾಲಾ ವಿದ್ಯಾರ್ಥಿಗಳು ಹಾಗೂ ಈ ದೇಶದಲ್ಲಿ ವಾಸ ಮಾಡಲು ಇಚ್ಛಿಸಿ ಬರುವವರು.
  4.  ವಿಹಾರಾರ್ಥಿಗಳಾಗಿ ಬಂದು ಕನಿಷ್ಠ 24 ಗಂಟೆಗಿಂತಲೂ ಕಡಿಮೆ ಅವಧಿಯವರೆಗೆ ತಂಗುವವರು ಒಂದು ಕಡೆ ಶಾಶ್ವತವಾಗಿ ನೆಲೆ ನಿಲ್ಲದ ಒಂದು ದೇಶದವರು. ಭಾರತದ ಮೂಲಕ ಹಾಯ್ದು ಹೋಗುವ ಸಂದರ್ಶಕರು ಪ್ರವಾಸಿಗರು ಎನಿಸಿಕೊಳ್ಳುವುದಿಲ್ಲ.
  5.  ಒಬ್ಬ ವ್ಯಕ್ತಿ 24 ಗಂಟೆಗಿಂತಲೂ ಹೆಚ್ಚುಕಾಲ ಸಂಚರಿಸಿ ಆತ ಎಲ್ಲಿಯೂ ತಂಗದೆ ಒಂದು ದೇಶದ ಮೂಲಕ ಹಾಯ್ದು ಹೋದರೆ ಅವನು ಪ್ರವಾಸಿಗನಲ್ಲ.
  6. ಬಾಂಗ್ಲಾದೇಶ ಹಾಗೂ ಪಾಕಿಸ್ಥಾನಿಯ ರಾಷ್ಟ್ರೀಯರು.
  7.  ಗಡಿಭಾಗದಲ್ಲಿ ನೆಲೆಸಿದ್ದವರು ಬೇರೆ ದೇಶದಲ್ಲಿ ಕೆಲಸ ನಿರ್ವಹಿಸುವಂಥವರು ಪ್ರವಾಸಿಗರು ಆಗಲಾರರು.
  8.  ರಸ್ತೆಯ ಮೂಲಕ ಭಾರತಕ್ಕೆ ಬರುವ ನೇಪಾಳಿಯರು ಹಾಗೂ ಭೂತಾನಿಗಳು ಪ್ರವಾಸಿಗರು ಆಗಲಾರರು.

 

ಪುರಾತತ್ವಶಾಸ್ತ್ರ ಕಾಲಗಳು (ಶಿಲಾಯುಗದ ಸಂಸ್ಕೃತಿಗಳು)

ಪುರಾತತ್ವಶಾಸ್ತ್ರ ಕಾಲಗಳು (ಶಿಲಾಯುಗದ ಸಂಸ್ಕೃತಿಗಳು)

1. ಪ್ರಾಚೀನ ಹಳೆಯ ಶಿಲಾಯುಗ / ಆದಿ ಹಳೆಯ ಶಿಲಾಯುಗ (Lower Paleolithic) :

ನಿವೇಶನಗಳು:  ಆದಿ ಹಳೆ ಶಿಲಾಯುಗವು ಹಿಮಯುಗದ ಒಂದು ಭಾಗವನ್ನು ವ್ಯಾಪಿಸಿತ್ತು. ಈ ಶಿಲಾಯುಗದ ಅವಶೇಷಗಳು ಪಾಕಿಸ್ಥಾನದ ಸೋಹನ್ ನದಿ ಕಣಿವೆ. ಥಾರ್‌ ಮರುಭೂಮಿಯ ಪ್ರದೇಶ, ಕಾಶ್ಮೀರ ಹಾಗೂ ಬೇಲಂ ಕಣಿವೆ, ರಾಜಸ್ಥಾನದ ಮರಳುಗಾಡಿನ ಪ್ರದೇಶ, ನರ್ಮದಾ ನದಿ ಪ್ರದೇಶ, ಮಧ್ಯಪ್ರದೇಶದ ಭೂಪಾಲಿನ ಗುಹೆಗಳು, ತಮಿಳುನಾಡಿನ ವಾದ ಮಧುರೈ, ಆಂಧ್ರದ ಬೇತಂ ಚರ್ಲಾ, ಮಹಾರಾಷ್ಟ್ರದ ಸಾಲ್ಸೆಟ್‌ ದ್ವೀಪ, ನೇವಾಸ, ರಾಜಸ್ಥಾನದ ಜೈಪುರ, ಪಂಜಾಬಿನ ಬೌಂತ್ರ, ಉತ್ತರ ಪ್ರದೇಶದ ಬೇಲಾನ್ ಮೊದಲಾದವುಗಳಲ್ಲಿ ದೊರಕಿದೆ.

 ಕರ್ನಾಟಕದಲ್ಲಿ ಮಂಜಾರಾ, ಕಾರಂಜಾ ಭೀಮಾ, ಕೃಷ್ಣ, ಮಲಪ್ರಭಾ, ತುಂಗಭದ್ರಾ, ಹೇಮಾವತಿ, ಕಾವೇರಿ ಹಾಗೂ ನೇತ್ರಾವತಿ ನದಿಯ ದಡದಲ್ಲಿ ಶಿಲಾಯುಗದ ಅವಶೇಷಗಳು ದೊರಕಿವೆ. ಘಟಪ್ರಭಾ ಕೊಳ್ಳದ ಅನಗವಾಡಿ, ಮಲಪ್ರಭಾ ಕೊಳ್ಳದ ಖ್ಯಾಡ, ನೇತ್ರಾವತಿಕೊಳ್ಳಲು ಉಪ್ಪಿನಂಗಡಿ ಮೊದಲಾದ ಕಡೆಗಳಲ್ಲಿ ಹಳೆಯ ಶಿಲಾಯುಗದ ಸಂಸ್ಕೃತಿ ಕಂಡು ಬಂದಿದೆ. ಅದೇ ರೀತಿಯಾಗಿ ಬಳ್ಳಾರಿ ಜಿಲ್ಲೆಯ ದರೋಜಿ, ಹುಲುಕುಂಡಿ, ಗಡಿನೂರು, ನಿಟ್ಟೂರು ಹಾಗೂ ಸಂಗನಕಲ್ಲು. ವಿಜಾಪುರ ಜಿಲ್ಲೆಯ-ಖೇಡ, ಧನಕ್ಕ ಶಿರೂರು ಹಾಗೂ ಮನ್ನೇರಿ. ಬೆಳಗಾವಿ ಜಿಲ್ಲೆಯ-ಯಾದವಾಡ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಲಿಂಗದಹಳ್ಳಿ, ನಿಡಗಟ್ಟಿ. ಚಿತ್ರದುರ್ಗ ಜಿಲ್ಲೆಯ ತಾಳ್ಯ ಹಾಗೂ ಜಾನಕಲ್. ದಾವಣಗೆರೆ ಜಿಲ್ಲೆಯ-ನ್ಯಾಮತಿ. ಗುಲ್ಬರ್ಗ ಜಿಲ್ಲೆಯ-ಹುಣಸಗಿ, ಮರಳಬಾವಿ, ದೇವಪುರ ತುಮಕೂರು ಜಿಲ್ಲೆಯ-ಕರಡಿಗುಡ್ಡ, ಬಿಳಿಗೆರೆ, ಕಿಬ್ಬನಹಳ್ಳಿ ಮುಂತಾದ ಸ್ಥಳಗಳಲ್ಲಿ ಹಳೆಯ ಶಿಲಾಯುಗದ ಅವಶೇಷಗಳನ್ನು ಕಾಣಬಹುದು.

 ಉಪಕರಣಗಳು: ಹಳೆಯಶಿಲಾಯುಗದ ಮಾನವ ಕ್ವಾರ್ಟಜೈಟ್‌ ಕಲ್ಲನ್ನು ಬಳಸಿ ಉಪಕರಣಗಳನ್ನು ತಯಾರಿಸುತ್ತಿದ್ದನು. ಈ ಉಪಕರಣಗಳು ಹೆಚ್ಚಾಗಿ ಆಶ್ಯೂಲ್ ಮಾದರಿಯಲ್ಲಿವೆ. (ಆಶ್ಯೂಲ್‌ ಮಾದರಿ ಎಂದರೆ ಆಫ್ರಿಕಾದ ಆದಿ ಶಿಲಾಯುಗದ ಉಪಕರಣ)  ಇವುಗಳಲ್ಲಿ ಕೈಕೊಡಲಿ, ಸೀಳುಗತ್ತಿ, ಮಚ್ಚುಗಳು, ಕೊರೆಗತ್ತಿಗಳು ಹಾಗೂ ದುಂಡು ಚಪ್ಪಟೆ ಉಪಕರಣ ಮುಂತಾದ ಆಕೃತಿಯ ಉಪಕರಣಗಳು ಕಂಡು ಬಂದಿವೆ. ಕಲ್ಲಿನ ಉಪಕರಣಗಳ ಜೊತೆಗೆ ಮರದ ಉಪಕರಣಗಳು ಸಹ ದೊರಕಿವೆ.

 ತಯಾರಿಕೆ: ಉರುಟು ಕಲ್ಲಿನ ತಿರುಳುಭಾಗ ಮತ್ತು ದೊಡ್ಡದಾದ ಹಾಗೂ ದಪ್ಪನೆಯ ಕಲ್ಲುಗಳನ್ನು ತಮಗೆ ಬೇಕಾದ ಆಕಾರಕ್ಕೆ ತಿರುಗಿಸಿ ಉಪಕರಣಗಳನ್ನು ತಯಾರಿಸುತ್ತಿದ್ದರು. ಲಘು ಸುತ್ತಿಗೆಗಳನ್ನು ಬಳಸಿ ಆಯುಧಗಳನ್ನು ತಮಗೆ ಬೇಕಾದ ಆಕಾರಕ್ಕೆ ತಿರುಗಿಸಿಕೊಳ್ಳುತ್ತಿದ್ದರು. ಒಂದು ಕಲ್ಲು ಅಡಿಗೆ ಇಟ್ಟು ಇನ್ನೊಂದು ಕಲ್ಲನ್ನು ಸುತ್ತಿಗೆಯ ರೀತಿಯಲ್ಲಿ ಬಳಸಿ  ಉಪಕರಣಗಳನ್ನು ತಯಾರಿಸುತ್ತಿದ್ದರು.

 ಉಪಕರಣ ಬಳಕೆ : ಶಿಲಾಯುಗದ ಜನರು ತಾವು ತಯಾರಿಸಿದ ಉಪಕರಣಗಳನ್ನು ಬೇಟೆಯಾಡಲು. ಬೇಟೆಯಾಡಿದ ಪ್ರಾಣಿಗಳ ಮಾಂಸವನ್ನು ಕತ್ತರಿಸಲು, ಮರಗಿಡಗಳನ್ನು ಕಡಿಯಲು, ಅವುಗಳ ತೊಗಟೆಯನ್ನು ಬಿಚ್ಚಲು, ಗಡ್ಡೆ ಗೆಣಸುಗಳನ್ನು ಮತ್ತು ಮುಳ್ಳು ಕಂಟಿಗಳನ್ನು ಅಗೆಯಲು, ಮೃತ ಪ್ರಾಣಿಗಳ ಚರ್ಮವನ್ನು ಸುಲಿಯಲು, ಪ್ರಾಣಿಗಳ ಚರ್ಮವನ್ನು ಹದಗೊಳಿಸಲು, ಸಸ್ಯಾಹಾರ ಸಿದ್ಧಪಡಿಸಲು, ಕಟ್ಟಿಗೆ ಉಪಕರಣ ಹಾಗೂ ಆಯುಧಗಳನ್ನು ತಯಾರಿಸಲು ಬಳಸುತ್ತಿದ್ದರು.

 ಜೀವನೋಪಾಯ:  ಆದಿ ಹಳೆಯ ಶಿಲಾಯುಗದ ಮಾನವರು ಕಾಡು ಸಸ್ಯಗಳನ್ನು ಕಡಿಯುವುದು ಮತ್ತು ಕಾಡು ಪ್ರಾಣಿಗಳ ಬೇಟೆಯಾಡುವುದು ಅವರ ಪ್ರಮುಖ ಉದ್ಯೋಗವಾಗಿತ್ತು. ಹುಣಸಗಿ, ಮಲಪ್ರಭಾ ಕೊಳ್ಳ, ತುಂಗಭದ್ರ ಕೊಳ್ಳದ ನಿಟ್ಟೂರು, ಬೆಳಗಾವಿ ಜಿಲ್ಲೆಯ ಹಳೆಯ ಶಿಲಾಯುಗದ ವ್ಯವಸಾಯ ಪರಿಕರಗಳು ಸಿಕ್ಕಿವೆ. ಜೊತೆಗೆ ಕಾಡು ಎಮ್ಮೆ, ಕಾಡುಕತ್ತೆ ಹಾಗೂ ಕಾಡು ದನಗಳ ಪಳಿಯುಳಿಕೆಗಳು ದೊರಕಿವೆ. ಈ ಯುಗದ ಮಾನವ ಗೆಡ್ಡ-ಗೆಣಸು, ಹಣ್ಣು-ಹಂಪಲು, ಪ್ರಾಣಿಗಳ ಮಾಂಸ ಹಾಗೂ ಮೀನುಗಳನ್ನು ಸೇವಿಸುತ್ತಿದ್ದನು. ಪ್ರಾಣಿಗಳ ಚರ್ಮವನ್ನು ಉಡುಪಾಗಿ ಉಪಯೋಗಿಸಿಕೊಳ್ಳುತ್ತಿದ್ದನು.

2. ಪ್ರಾಚೀನ ಮಧ್ಯ ಶಿಲಾಯುಗ/ಮಧ್ಯ ಹಳೆಯ ಶಿಲಾಯುಗ (Middle Paleolithic) :

ಶಿಲಾಯುಗವು ಆದಿ ಹಳೆಯ ಶಿಲಾಯುಗ ಮತ್ತು ಅಂತಿಮ ಹಳೆಯ ಶಿಲಾಯುಗದ ನಡುವಿನ ಕಾಲವಾಗಿದೆ. ಸಂಕಾಲಿಯಾ ಅವರು 1954 ರಲ್ಲಿ ಮಹಾರಾಷ್ಟ್ರದ ಅಹಮದಾಬಾದ್‌ ಜಿಲ್ಲೆಯ ಗೋದಾವರಿಯ ಉಪನದಿಯ ಪ್ರವರಾ ನದಿಯ ದಂಡೆಯ ಮೇಲಿನ ನೇವಾಸಾದಲ್ಲಿ ಈ ಸಂಸ್ಕೃತಿ ಉಪಕರಣಗಳನ್ನು ಸಂಶೋಧಿಸಿದರು. ಎಂ.ಎಚ್ ಕೃಷ್ಣನವರು ಕರ್ನಾಟಕದ ಬ್ರಹ್ಮಗಿರಿ, ಜಾಲಹಳ್ಳಿ, ಕಿಬ್ಬನಹಳ್ಳಿ ಹಾಗೂ ಸಂಗನಕಲ್ಲನ್ನು ಪತ್ತೆ ಹಚ್ಚಿದರು. ಹಾಗೆಯೇ ಮಹಾರಾಷ್ಟ್ರದ ಪಂಚಮರಿ, ಪಂಜಾಬಿನ ಉಚಾಲಿ, ರಾಜಸ್ಥಾನದ ಬಾಗೋರ್ ಮತ್ತು ತಿವಾರ್, ಉತ್ತರಪ್ರದೇಶದ ಲೇಖಾನಿಯಾ, ಪಶ್ಚಿಮ ಬಂಗಾಳದ ಬೀಕ್‌ಬಾನ್‌ಪುರ ಇನ್ನು ಮುಂತಾದ ಕಡೆಗಳಲ್ಲಿ ಮಧ್ಯಕಾಲೀನ ಹಳೆಯ ಶಿಲಾಯುಗದ ಅವಶೇಷಗಳು ಲಭ್ಯವಾಗಿವೆ.

 ಮುಂದುವರೆದು ಬಾಗಲಕೋಟೆ, ಹೆರಕಲ್, ಕದಮಪುರ, ಅನಗವಾಡಿ, ತಮ್ಮಿನಹಾಳ, ಸಾವಳಗಿ, ಸಾಲವಾಡಗಿ, ಕೂಚಬಾಳೆ ಹಾಗೂ ಮಟಕದೇವನ ಹಳ್ಳಿಯಲ್ಲಿಯೂ ನಿವೇಶನಗಳು ಸಿಕ್ಕಿವೆ.

 ದೊರಕಿದ ಉಪಕರಣಗಳು: ಈ ಯುಗದಲ್ಲಿ ಮಾನವ ಬಳಸಿದ ವಿವಿಧ ಉಪಕರಣಗಳು ನಮಗೆ ದೊರಕಿದ್ದು ಅವುಗಳು ವಿವಿಧ ಆಕಾರವನ್ನು ಹೊಂದಿವೆ. ಉದಾ: ಹೆರೆಯುವ ಉಪಕರಣಗಳು, ಮೊನಚು ಉಪಕರಣ, ರಂಧ್ರಾಕಾರ ಉಪಕರಣ, ಚೂರಿ ತರಹದ ಉಪಕರಣ, ದಂತಾಕಾರದ ಉಪಕರಣ, ಬೈರಿಗೆಗಳು, ಕೈ ಕೊಡಲಿಗಳು, ಕಡಿಗತ್ತಿಗಳು, ಕತ್ತಿಗಳು, ಮಚ್ಚುಗಳು, ಮೊದಲಾದವುಗಳು. ಇವೆಲ್ಲವುಗಳನ್ನು ಕಲ್ಲಿನಿಂದಲೇ ತಯಾರಿಸಿದ್ದರು ಎಂಬುದು ವಿಶೇಷ. ಇವರು ಬಳಸಿದ ಉಪಕರಣಗಳಲ್ಲಿ ಕಲ್ಲು ಚಕ್ಕೆ ಉಪಕರಣಗಳ ಸಂಖ್ಯೆಯೇ ಅಧಿಕವಾಗಿವೆ. ಅವರು ಗಟ್ಟಿಯಾದ ಕಲ್ಲುಗಳಿಂದ ಚಕ್ಕೆಯನ್ನು ಬೇರ್ಪಡಿಸಿದ್ದರೆಂದು ತೋರುತ್ತದೆ. ಕಲ್ಲು ಚಕ್ಕೆಯನ್ನು ತಯಾರಿಸಲು ಮತ್ತು ಅವುಗಳಿಗೆ ಹೊಳಪು ನೀಡಲು ಅವರು ಮಸ್ತೂರ್ ತಂತ್ರವನ್ನು ಉಪಯೋಗಿಸುತ್ತಿದ್ದರು.

 ಉಪಕರಣಗಳ ನೆಲೆಗಳು:  ಆದಿ ಹಳೆಯ ಶಿಲಾಯುಗದ ಮಾನವರು ಬಳಸಿದ ಉಪಕರಣಗಳನ್ನೇ ಮಧ್ಯ ಶಿಲಾಯುಗದ ಜನರು ಬಳಸಿದರು ಸಹ ಸಾಂಸ್ಕೃತಿಕ ವಿಭಿನ್ನತೆ ಎರಡೂ ಜನಾಂಗಗಳಲ್ಲಿ ಕಂಡುಬಂದಿದೆ. ಕೈ ಕೊಡಲಿ, ಕಡಿಗತ್ತಿ ಹಾಗೂ ಉರುಟು ಕಲ್ಲುಗಳು ಆದೇಶದಿಂದ ಮಧ್ಯ ಶಿಲಾಯುಗದವರೆಗೂ ಬಳಕೆಯಲ್ಲಿದ್ದವು. ಘಟಪ್ರಭಾ ಕೊಳ್ಳದ ಅನಗವಾಡಿ, ಕೋವಳ್ಳಿ, ಹುಣಸೆ ದೇವಪುರ ಹಾಗೂ ಕಲದೇವನ ಹಳ್ಳಿಯಲ್ಲಿ ಇಂತಹ ಉಪಕರಣಗಳು ಕಂಡುಬಂದಿವೆ.

 ಉಪಕರಣಗಳ ಕಾರ್ಯ:  ಈ ಉಪಕರಣಗಳು ಗಾತ್ರದಲ್ಲಿ ಚಿಕ್ಕವೂ ಮತ್ತು ತೂಕದಲ್ಲಿ ಹಗುರವಾದವು ಆಗಿದ್ದವು. ಬೇಟೆಯಾಡುವುದು, ನೆಲವನ್ನು ಅಗೆಯುವುದು, ಮರ ಕೀಳುವುದು ಇಂತಹ ಕೆಲಸ ಕಾರ್ಯಗಳಿಗೆ ಈ ಉಪಕರಣಗಳನ್ನು ಬಳಸುತ್ತಿರಲಿಲ್ಲ. ಇವು  5 ರಿಂದ 8 ಸೆಂ ಮೀ ಉದ್ದವಾಗಿದ್ದವು.  ಹೆರೆಯುವ ಉಪಕರಣದಿಂದ ಚರ್ಮ ಹಾಗೂ ಮರದ ತೊಗಟೆಯನ್ನು ಹದಗೊಳಿಸುತ್ತಿದ್ದರು ರಂಧ್ರಕಾರಕಗಳಿಂದ ತೊಗಟೆಯಲ್ಲಿ ತೂತು ಮಾಡಲು ಹಾಗೂ ಮೊನಚು ಉಪಕರಣದಿಂದ ಕಾಡು ಮೃಗಗಳನ್ನು ಬೇಟೆಯಾಡುತ್ತಿದ್ದರು.

 ನಿವೇಶನಗಳ ಸ್ವರೂಪ:  ಆದಿ ಹಳೆಯ ಶಿಲಾಯುಗದ ಜನರ ಹಾಗೆ ಮಧ್ಯಶಿಲಾಯುಗದ ಜನರು ಸಹ ನದಿ ದಂಡೆಯ ಮೇಲೆ, ಕಡಲ ತೀರಗಳಲ್ಲಿ ಬೆಟ್ಟಗಳ ಇಳಿಜಾರು ಪ್ರದೇಶಗಳ ಕೆಳಬದಿಗಳಲ್ಲಿ ವಾಸಿಸುತ್ತಿದ್ದರು. ಉತ್ತರ ಕರ್ನಾಟಕದ ಮಲಪ್ರಭಾ, ಘಟಪ್ರಭಾ ನದಿಗಳ ದಂಡೆ ಹಾಗೂ ಇಳಿಜಾರು ಪ್ರದೇಶಗಳಲ್ಲಿ ಇಂತಹ ನಿವೇಶನಗಳು ಇದ್ದುದ್ದು ಸಂಶೋಧನೆಯಿಂದ ರುಜುವಾತಾಗಿದೆ. ಇಲ್ಲಿ ಸಿದ್ಧವಾದ ಹಾಗೂ ಅಪೂರ್ಣವಾಗಿರುವ ಉಪಕರಣಗಳು, ಚೆಕ್ಕೆಗಳು, ತಿರುಳು ಕಲ್ಲುಗಳು ಹಾಗೂ ಸಾಕಷ್ಟು ಪುಡಿ ಚಕ್ಕೆಗಳು ದೊರಕಿವೆ.

 ಪರಿಸರ:  ಆದಿ ಹಳೆಯ ಹಾಗೂ ಮಧ್ಯ ಪ್ರಾಚೀನ ಶಿಲಾಯುಗದ ಹವಾಮಾನದ ಸ್ಥಿತಿಗತಿಗಳಲ್ಲಿ ಅಷ್ಟೇನೂ ಬದಲಾವಣೆ ಇರಲಿಲ್ಲ. ಇವುಗಳ ನಡುವಿನ ಪಳೆಯುಳಿಕೆಗಳ ವ್ಯತ್ಯಾಸವೇನೂ ಕಂಡು ಬರುವುದಿಲ್ಲ. ಸುರಪುರ ನದಿ ಸಂಗಮ, ಘಟಪ್ರಭಾ, ಕೃಷ್ಣ ಹಾಗೂ ತುಂಗಭದ್ರ ನದಿ ಕೊಳ್ಳದಲ್ಲಿ ಸಿಕ್ಕ ಪ್ರಾಣಿಗಳ ಪಳೆಯುಳಿಕೆಗಳು ಎತ್ತು, ಎಮ್ಮೆ, ಕುದುರೆ, ಕತ್ತೆ, ಆನೆ, ಖಡ್ಗ ಮೃಗ, ಜಿಂಕೆ, ಆಮೆ ಮೊದಲಾದ ಪ್ರಾಣಿಗಳ ಸಂಬಂಧ ಆದಿ ಶಿಲಾಯುಗಗಳ ಸಂಬಂಧಕ್ಕೆ ಹೋಲಿಕೆಯಾಗುತ್ತದೆ.

ಕಾಲಗಣನೆ:  ಈ ಸಂಸ್ಕೃತಿಯು 10, ವರ್ಷಗಳಿಂದ 40 ಸಾವಿರ ವರ್ಷಗಳಷ್ಟು ಪೂರ್ವದಾಗಿರಬೇಕೆಂದು ತರ್ಕಿಸಲಾಗಿದೆ. ಯುರೇನಿಯಂ ಹಾಗೂ ಥೋರಿಯಂ ವಿಧಾನಗಳಿಂದ ಕಾಲಗಳನ್ನ ಕುರಿತು ಹಲವಾರು ಪರೀಕ್ಷೆಯನ್ನು ಮಾಡಲಾಗಿದೆ. ಈ ಪರೀಕ್ಷೆಯ ಫಲವಾಗಿ ಈ ಸಂಸ್ಕೃತಿಯ ಕಾಲಮಾನವು 1,00,000 ವರ್ಷಗಳಿಂದ 1,50,000 ವರ್ಷಗಳಷ್ಟು ಹಳೆಯದಾಗಿದೆಯಂದು ಹೇಳಲಾಗಿದೆ.

 ಜೀವನ ಶೈಲಿ: ಸಿದ ಅವಶೇಷಗಳ ನೀಡುವ ಮಾಹಿತಿಯ ಪ್ರಕಾರ ಆದಿಮಾನವ ಚಿಕ್ಕ ಮರಗಳು ಹಾಗೂ ಬಂಡೆಗಳ ನೆರಳಿನಲ್ಲಿ ವಾಸವಾಗಿದ್ದನೆಂದು ತಿಳಿದು ಬರುತ್ತದೆ. ಅವನು ಮೂಲತಃ ಬೇಟೆಗಾರನಾಗಿದ್ದ. ಬೇಟೆಗಾಗಿ ಕಲ್ಲು, ಮೂಳೆ, ಜಿಂಕೆಯ ಕೊಂಬು ಹಾಗೂ ದಂತವನ್ನು ಬಳಸಿ ಆಯುಧ ಮಾಡಿಕೊಳ್ಳುತ್ತಿದ್ದನು. ಕೈಯಿಂದಲೇ ಮಡಿಕೆ ಮಾಡುವ ಕಲೆಗಳನ್ನು ಕರಗತ ಮಾಡಿಕೊಂಡಿದ್ದನು. ಆಹಾರಕ್ಕಾಗಿ ಎಮ್ಮೆ, ಆಕಳು, ಕುರಿ, ಹೋತ, ಹಂದಿ, ಮೊಲ, ನರಿ, ಮೀನು, ಸಾರಂಗ, ಆಮೆ ಮೊದಲಾದ ಪ್ರಾಣಿಗಳ ಮಾಂಸವನ್ನು ಬಳಸುತ್ತಿದ್ದನು. ಶವ ಸಂಸ್ಕಾರದ ಮೇಲೆ ಕಲೆ ಇವನಿಗೆ ಗೊತ್ತಿತ್ತು. ಮಾನವನ ಮೂಳೆಯ ಹತ್ತಿರದಲ್ಲಿಯೇ ನಾಯಿಯ ಮೂಳೆಗಳು ಇರುವುದನ್ನು ಗಮನಿಸಿದರೆ ಮಾನವನಿಗೆ ಎಲ್ಲಾ ಚಟುವಟಿಕೆಗಳಲ್ಲಿ ನಾಯಿಯು ಭಾಗವಹಿಸುತ್ತಿತ್ತು ಎಂಬುದು  ಗಮನಾರ್ಹ ಬೇಸಾಯ ಅವರ ಮೂಲ ಉದ್ಯೋಗವಾಗಿತ್ತು.

3. ಪ್ರಾಚೀನ ಅಂತಿಮ ಶಿಲಾಯುಗ/ಅಂತಿಮ ಹಳೆಯ ಶಿಲಾಯುಗ (Upper Paleolithic):

ಹಳೆಯ ಶಿಲಾಯುಗದ ಸಂಸ್ಕೃತಿಯ ಅಂತಿಮ ಹಂತವೇ ಕೊನೆಯ ಶಿಲಾಯುಗ ಇದು ಮಧ್ಯಶಿಲಾಯುಗ ಮತ್ತು ಸ್ಥಿತಿಯಂತರದ ಸೂಕ್ಷ್ಮಶಿಲಾಯುಗದ ನಡುವಿನ ಹಂತವಾಗಿದೆ. ಇದು ಯುರೋಪ್ ಹಾಗೂ ಪಶ್ಚಿಮ ಏಷ್ಯಾಗಳ ಲಕ್ಷಣವನ್ನು ಹೊಂದಿದೆ.

ಈ ಶಿಲಾಯುಗದ ಅವಶೇಷಗಳು ಭಾರತದಲ್ಲಿ ಕೆಲವೇ ಪ್ರದೇಶಗಳಲ್ಲಿ ಕಂಡುಬಂದಿದೆ. ಇದಕ್ಕೆ ಕಾರಣ ಉತ್ಖನನದ ಕಾಲದಲ್ಲಿ ಈ ಶಿಲಾಯುಗದ ಸಂಸ್ಕೃತಿಯನ್ನು ಗುರುತಿಸುವಲ್ಲಿ ತುಂಬಾ ತಡವಾದುದು 1972ರವರೆಗೂ ಈ ಪ್ರದೇಶದ ವಿಷಯವಾಗಿ ಗೊಂದಲಗಳು ಉಂಟಾಗಿದ್ದವು. ಆದರೆ ಆ ಸುಂದರ ಅವರ ಉತ್ಖನನದ ನಂತರ ಅಲ್ಲಿ ಎರಡು ಔದ್ಯಮಿಕ ಸಂಪ್ರದಾಯಗಳು ಇದ್ದದ್ದು ಕಂಡುಬಂದಿತು. ಚಕ್ಕೆ ಹಾಗೂ ತೆಳು ನೀಲಿ ಚಕ್ಕೆ ಉದ್ಯಮ ಇದು ಹಳೆಯ ಶಿಲಾಯುಗಕ್ಕೆ ಸೇರಿದ್ದು. ಅಲಗು ಉಪಕರಣ ಉದ್ಯಮ ಇದು ಅಂತಿಮ ಹಳೆಯ ಶಿಲಾಯುಗಕ್ಕೆ ಸೇರಿದ್ದು. ಅಂತಿಮ ಹಳೆಯ ಶಿಲಾಯುಗದ ಅವಶೇಷಗಳನ್ನು ಮತ್ತು ನಿವೇಶನಗಳನ್ನು ಬೇರೆ ಬೇರೆ ಭಾಗಗಳಲ್ಲಿ ಕಂಡು ಹಿಡಿಯಲಾಗಿದೆ. ಮಂಜಾರಾಕೊಳ್ಳದ ಬಳ್ಳೂರಾ, ದೋಣಿ ಕೊಳ್ಳದ ಇಂಗಳೇಶ್ವರ, ಕೃಷ್ಣ ಕೊಳ್ಳದ ಸಾಲವಾಡಗಿ, ತುಂಗಭದ್ರ ಕೊಳ್ಳದ ತಕ್ಕಲಹಳ್ಳಿ, ಪೆನ್ನಾರ್‌ಕೊಳ್ಳದ, ದೊಡ್ಡಗುಣಿ ಹಾಗೂ ನಾಗಲಾಪುರಗಳಲ್ಲಿ ತೆರೆನಾದ ನಿವೇಶನಗಳು ದೊರಕಿದೆ.

ಉಪಕರಣಗಳ ವಿಧಗಳು:  ಅಂತಿಮ ಹಳೆಯ ಶಿಲಾಯುಗದ ಮಾನವನು  ನೀಳ ಅಲಗುಗಳು, ಕೊರೆಯುವ ಓರೆ ಮೊನೆಗಳು, ಹೆರೆಯುವ ಚಕ್ಕೆಗಳು, ದಬ್ಬಣ ದಂತಹ ಮೊನೆಗಳು, ಚೂರಿಗಳು ರಂಧ್ರಾಕಾರಗಳ ಮುಂತಾದ ವಿವಿಧ ಬಗೆಯ ಉಪಕರಣಗಳನ್ನು ದಿನನಿತ್ಯ ಜೀವನದಲ್ಲಿ ಬಳಕೆ ಮಾಡುತ್ತಿದ್ದನು.

 ಈ ಉಪಕರಣಗಳನ್ನು ಪ್ರಾಣಿಗಳ ಬೇಟೆಯಾಡಲು, ಕೃಷಿ ಕಾರ್ಯಮಾಡಲು, ಮೀನು ಹಿಡಿಯಲು, ಮಾಂಸವನ್ನು ತುಂಡರಿಸಲು ಬಳಸುತ್ತಿದ್ದರು. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮುಚ್ಚಟ್ಲ ಚಿಂತಾಮಣಿ ಗವಿ ಎಂಬಲ್ಲಿ ಈ ಸಂಸ್ಕೃತಿಯ ಸ್ಪಷ್ಟ ಕುರುಹುಗಳು ಪುಣೆಯ ಡೆಕ್ಕನ್ ಕಾಲೇಜಿನ ಡಾ|| ಎಂ.ಎಲ್.ಕೆ  ಮೂರ್ತಿಯವರಿಂದ ಶೋಧವಾಗಿದೆ.

ಕಲ್ಲಿನ ಉಪಕರಣಗಳೊಂದಿಗೆ ಎಲುಬಿನಿಂದ ತಯಾರಿಸಿದ ಉಪಕರಣಗಳು ಹಾಗೂ ಪ್ಲಿಸ್ಟೋಸಿನ್‌ ಕಾಲದ ಕೊನೆಯ ಹಂತದ ಪ್ರಾಣಿ ಪಳೆಯುಳಿಕೆಗಳು ಈ ನೆಲೆಯ ವೈಶಿಷ್ಟವಾಗಿದೆ. ಇಂಗಾಲ-14 (c14) ಹಾಗೂ  ಇ.ಎಸ್.ಆರ್ (ESR) ವಿಧಾನಗಳಿಂದ ಪರೀಕ್ಷಿಸಲಾದ ಸಂಸ್ಕೃತಿಯ ಕಾಲಮಾನಗಳ ವಿವರಗಳು ದೊರಕಿದ್ದು ಅವುಗಳು ಅಂತಿಮ ಹಳೆಯ ಶಿಲಾಯುಗದ ಸಂಸ್ಕೃತಿ ಅಧ್ಯಯನಕ್ಕೆ ಸಾಕ್ಷಿಯಾಗಿವೆ. ಮಹಾರಾಷ್ಟ್ರದ ಪಾಟ್ನೆ ಹಾಗೂ ರಾಜಸ್ಥಾನದ ಬಾಗೋರ್ ನೆಲೆಗಳಲ್ಲಿ ಸಹ ಈ ಶಿಲಾಯುಗದ ಅವಶೇಷಗಳು ದೊರಕಿವೆ.

ಪರಿಸರ:  ಅಂತಿಮ ಹಳೆಯ ಶಿಲಾಯುಗದ ಸಮಕಾಲಿನವೆನಿಸಬಲ್ಲ ಯಾವುದೇ ಪ್ರಾಣಿಗಳ ಪಳೆಯುಳಿಕೆಗಳು ದೊರಕಿಲ್ಲ. ಆದರೆ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಲ್ಲಿ ಅಂತಿಮ ಹಳೆ ಶಿಲಾಯುಗ ಉಪಕರಣಗಳೊಂದಿಗೆ ಆಗಿನ ಪ್ರಾಣಿಗಳ ಪಳೆಯುಳಿಕೆಗಳು ಸಿಕ್ಕಿವೆ. ಈ ಪ್ರಾಣಿಗಳ ಪಳೆಯುಳಿಕೆಗಳನ್ನು ಗಮನಿಸಿದರೆ. ಸವನ್ನಾ ಮಾದರಿ ಪರಿಸರವಿದ್ದಂತೆ ಭಾಸವಾಗುತ್ತದೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಹಲವಾರು ಪ್ರಾಣಿಗಳ ಪಳೆಯುಳಿಕೆಗಳು ದೊರಕಿವೆ. ಉದಾ: ಲಾಂಗೂರ್, ಬೆಕ್ಕಿನ ಜಾತಿಯ ಒಂದು ಪ್ರಾಣಿ, ಜಿಂಕೆ ಜಾತಿಯ ಪ್ರಾಣಿ, ಒಂದು ಪ್ರಕಾರದ ಜಿಂಕೆ ಜಾತಿ, ಆಡು, ಹಂದಿ ಹಾಗೂ ಜಿಂಕೆ ಮೊದಲಾದವುಗಳು ಪ್ರಮುಖವಾಗಿವೆ.

ಕಾಲಗಣನೆ: ಅಂತಿಮ ಹಳೆ ಶಿಲಾಯುಗದ ಸಂಸ್ಕೃತಿಯು ಮಧ್ಯ ಶಿಲಾಯುಗ ಸಂಸ್ಕೃತಿಯ ಹಂತದ ನಂತರ ಹಾಗೂ ಸೂಕ್ಷ್ಮ ಶಿಲಾಯುಗದ ಹಿಂದಿನದೆಂದು ಈಗಾಗಲೇ ಗಮನಿಸಲಾಗಿದೆ. ಹರಿಯುವ ನೀರಿನ ಚಿಪ್ಪುಗಳು, ಉಷ್ಟ್ರ ಪಕ್ಷಿಯ ಮೊಟ್ಟೆಯ ಚೂರುಗಳು ಹಾಗೂ ಎಲುಬಿನ ಚೂರುಗಳನ್ನು ಇಂಗಾಲದ c14 ಪರೀಕ್ಷೆಗೆ ಒಳಪಡಿಸಿ ಕಾಲ ನಿರ್ಣಯವನ್ನು ಮಾಡಲಾಗಿದೆ. ಈ ಶಿಲಾಯುಗದ 10,000 ವರ್ಷಗಳ ಹಿಂದೆ 25000 ವರ್ಷಗಳಷ್ಟು ಪೂರ್ವದಲ್ಲಿ ಈ ಸಂಸ್ಕೃತಿ ಇದ್ದಿತೆಂದು ಹೇಳಲಾಗುತ್ತದೆ.

4. ಮಧ್ಯಶಿಲಾ ಯುಗ (Mesolithic) :

ಈ ಶಿಲಾಯುಗದಲ್ಲಿ ಪ್ಲಿಸ್ಟೋಸಿನ್‌ ಯುಗದ ನಂತರ ಆದಿ ಹಾಲೋಸಿನ್ ಎಂಬ ಸೂಕ್ಷ್ಮ ಉಪಕರಣಗಳನ್ನು ಉಪಯೋಗಿಸುತ್ತಿದ್ದರು. ಅಸ್ಸಾಂ ಹಾಗೂ ಗಂಗಾ ನದಿಯ ಬಯಲಿನಲ್ಲಿನ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಭಾರತದ ಬಹುತೇಕ ಕಡೆಗಳಲ್ಲಿ ಈ ಸಂಸ್ಕೃತಿ ಉಪಕರಣಗಳು ಸಿಕ್ಕಿವೆ.

 ಪ್ರಸಾರ:  ತಮಿಳುನಾಡಿನ ಟೇರಿ ನೆಲೆಗಳಲ್ಲಿ ದೊರಕಿದ ವಿಶಿಷ್ಟ ಮಾದರಿಯ ಸೂಕ್ಷ್ಮ ಶಿಲಾ ಉಪಕರಣಗಳುಳ್ಳ ಉದ್ಯಮವು ಝೂನ್ನಾರ್ ಎಂಬ ವಿದ್ವಾಂಸರಿಂದ ಉತ್ಖನನವಾಯಿತು. ಇಲ್ಲಿನ ಕುರುಹುಗಳನ್ನು ಆಧಾರವಾಗಿಟ್ಟುಕೊಂಡು ಇದು ಕ್ರಿ.ಪೂ 4000 ವರ್ಷಕ್ಕೆ ಅನ್ವಯವಾಗುವುದು ಎಂದು ಹೇಳಿದ್ದಾರೆ.

 ಅದು ಅಲ್ಲದೆ ಗುಜರಾತ್  (ಲಾಘ್‌ನಾಜ್), ಬಾಗೋರ್ (ರಾಜಸ್ಥಾನ್), ಸರಾಹಿನಹರರಾಯ್‌, ಮದಹನ (ಉತ್ತರ ಪ್ರದೇಶ) ಆದಮಗಡ, ಬೀಮ್‌ಬೇಟ್ಕಾ (ಮಧ್ಯಪ್ರದೇಶ) ಗಳಲ್ಲಿ ನಡೆದ ಉತ್ಖನನಗಳು ಈ ಮಾಹಿತಿಯನ್ನು ಹೊರಹಾಕುತ್ತವೆ. ಈ ಶಿಲಾಯುಗದ ಮಾಹಿತಿಗಳನ್ನು ಕರ್ನಾಟಕದ ಕಾರಂಜಾಕೊಳ್ಳದ ಬೇಗಂಪುರ, ಮಂಜಾರಾಕೊಳ್ಳದ, ಏಕಲಾರ, ಭೀಮಾಕೊಳ್ಳದ ದೋಣಿ, ತುಂಗಾಭದ್ರ ಕೊಳ್ಳದ ಸಂಗನಕಲ್ಲು, ಮಲಪ್ರಭಾದ ಅಮ್ಮಿನಹಳ್ಳಿ, ತುಂಗಾ ನದಿಯ ದಂಡೆಯ ಶೃಂಗೇರಿ, ಹೇಮಾವತಿ ಕೊಳ್ಳದ ಕಟ್ಟೆ ಬೆಳಗಲಿ, ಜೋಳನಹಳ್ಳಿ, ಶೆಟ್ಟಿಹಳ್ಳಿ, ಕರಾವಳಿಯ ಬೇಲೆಕೆರೆ ಮೊದಲಾದ ಕಡೆಗಳಲ್ಲಿ ಈ ಶಿಲಾಯುಗದ ಅವಶೇಷಗಳು ದೊರಕಿವೆ. ಇದು ಅಲ್ಲದೆ ಬೆಟ್ಟ ಗುಡ್ಡಗಳಲ್ಲಿ ಬಯಲು ಪ್ರದೇಶಗಳಲ್ಲಿ ಹಾಗೂ ಇಳಿಜಾರಿನ ಭಾಗಗಳಲ್ಲಿ ಶಿಲಾಯುಗದ ಅವಶೇಷಗಳು ಕಂಡುಬಂದಿವೆ. ನದಿ ದಂಡೆ, ಕೆರೆಗಳು, ಸಮುದ್ರ ತೀರ, ಕಾಡುಗಳು, ದಟ್ಟ ಅರಣ್ಯಗಳಲ್ಲಿಯೂ ಸಹ ಇವೆ.

 ಉಪಕರಣಗಳ ವಿಧಗಳು:  ಈ ಶಿಲಾಯುಗದಲ್ಲಿ ದೊರಕಿದ ಬಗೆಬಗೆಯ ಕಲ್ಲುಗಳು ಹಾಗೂ ಕಲ್ಲಿನ ಉಪಕರಣಗಳು ನಿರ್ದಿಷ್ಟವಾದ ಆಕಾರದಲ್ಲಿ ಇಲ್ಲ. ಉದಾ: ಅಲಗುಗಳು, ಚಿಕ್ಕ ಅಲಗುಗಳು, ಬಾಗಿದ ಅಲಗುಗಳು, ಚಿಕ್ಕಚೂರಿಯ ಆಕಾರದ ಅಲಗುಗಳು, ಎರಡೂ ಬದಿಗಳಲ್ಲಿ ಮೊನಚಾದ ಚಿಕ್ಕ ಬೈರಿಗೆಗಳು, ಅಪರೂಪದ ಚಿಕ್ಕ ಮುಚ್ಚುಗಳು, ಮೊದಲಾದವುಗಳು ಕಂಡುಬಂದಿವೆ. ಕೆಲವು ಉಪಕರಣಗಳು ತ್ರಿಕೋನಾಕಾರ, ಕೆಲವು ಸಮಭುಜ ತ್ರಿಕೋನಾಕಾರ, ಅಸಮಭುಜ ತ್ರಿಕೋನಾಕಾರ ಹಾಗೂ ಸಮದ್ವಿಭುಜ ತ್ರಿಕೋನಾಕಾರದಲ್ಲಿ ಇವೆ.

 ಉಪಕರಣ ಬಳಕೆ:  ಈ ಉಪಕರಣಗಳನ್ನು ಗಾಳ, ಕುರುಪಿ, ಬಾಣ, ಚಾಕು ಮೊದಲಾದ ಸಲಕರಣೆಗಳನ್ನು ಮಾಡಲು ಬಳಸುತ್ತಿದ್ದರು. ಈ ಸಲಕರಣೆಗಳಿಂದ ಆಹಾರ ಸಂಗ್ರಹಣೆ ಮಾಡುತ್ತಿದ್ದರು.

 ಜೀವನ ಕ್ರಮ:  ಶಿಲಾಯುಗದ ಜನರ ಆಹಾರ ಪದ್ಧತಿಗೆ ಸಂಬಂಧಿಸಿದಂತೆ ಅಲಹಾಬಾದಿನ ಉತ್ತರಕ್ಕೆ ಬೇಲಾನ ನದಿಯ ಬಯಲಿನಲ್ಲಿ ಪಾನಿಮಾಂಡೋ, ಮಹದಹ, ಮಹಗರ ಸರಾಯಿ ಮುಂತಾದ ಕಡೆಗಳಲ್ಲಿ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಪ್ರಾಣಿಗಳ ಎಲಬುಗಳು ದೊರಕಿವೆ. ಅವುಗಳಲ್ಲಿ ದನ, ಎಮ್ಮೆ, ಹಂದಿ, ಸಾಂಬಾರ್, ಚಿರತೆ, ನೀಲಗಾಯ್‌, ಜಿಂಕೆ, ನರಿ ಮುಂತಾದ ಪ್ರಾಣಿ ಅಸ್ತಿಗಳು ಇವೆ. ಖಡ್ಗ ಮೃಗ, ಆನೆ ಹಾಗೂ ಮೀನುಗಳ ಎಲುಬುಗಳು ಸಹ ದೊರಕಿವೆ.

 ಜನರು ಗೆಡ್ಡೆ ಗೆಣಸು, ಕಾಳು ಕಡಿ, ಸಸ್ಯ, ಗೋದಿ, ಅಕ್ಕಿ, ಬೀಜಗಳು ಮೊದಲಾದವುಗಳನ್ನು ಆಹಾರವನ್ನಾಗಿ ಉಪಯೋಗಿಸುತ್ತಿದ್ದರು. ಇವುಗಳ ಅವಶೇಷಗಳು ಸುಮಾರು ಕ್ರಿ.ಪೂ 7,000-3000 ಅವಧಿಯಲ್ಲಿ ಸೂಕ್ಷ್ಮ ಶಿಲಾಯುಗದ ನೆಲೆಯಲ್ಲಿ ಸಿಕ್ಕಿವೆ. ಇದರ ಜೊತೆಗೆ ಚಾಪೆಯು ದೊರಕಿದೆ. ಅವುಗಳನ್ನು ಈಚಲು ಮರದ ಗಳದಿಂದ ಸೀಳಿದ ತೆಳ್ಳನೆಯ ದಬ್ಬೆಗಳಿಂದ ಮಾಡುತ್ತಿದ್ದರು. ಎಲುಬಿನಿಂದ ಕಿವಿಯೋಲೆ ಮಾಡುವ ಕಲೆಯನ್ನು ಕಲಿತಿದ್ದರು.

 ಶವಸಂಸ್ಕಾರ: ಜನರು ಸಾಂಪ್ರದಾಯಿಕ ಶವಸಂಸ್ಕಾರ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಸರಿಯಾಗಿ ಉದ್ದನೆಯ ಕುಣಿಯನ್ನು ತೋಡಿ ಅದರಲ್ಲಿ ಶವಗಳನ್ನು ಇಟ್ಟು ಹೂಳಲಾಗುತ್ತಿತ್ತು. ಸ್ತ್ರೀಯರು ಆಗಿದ್ದರೆ ಅವರನ್ನು ಕಿವಿಯೋಲೆ ಸಮೇತ ಹೂಳಲಾಗುತ್ತಿತ್ತು. ಕೆಲವು ಸಲ ಎರಡೆರಡು ಶವಗಳನ್ನು ಒಂದೇ ಗುಂಡಿಯಲ್ಲಿ ಹಾಕಿ ಹೂಳುತ್ತಿದ್ದರು.

 ಕಲೆ: ಬಾದಾಮಿಯ ಸಮೀಪ ಅರೆಗುಡ್ಡ ಹಾಗೂ ಹಿರೆಗುಡ್ಡ ಎಂಬಲ್ಲಿ ಗುಹೆಗಳು ಮತ್ತು ಕಲ್ಲಿನ ಆಸರೆಗಳಲ್ಲಿ ಕೆಲವು ಅಪರೂಪದ ಕೆಂಪು ಮಣ್ಣಿನ ಚಿತ್ರಗಳು ಸಿಕ್ಕಿವೆ. ಬಹುಶಃ ಸೂಕ್ಷ್ಮಶಿಲಯೋಗದ ಅದ್ಭುತ ಕಲೆಗಳಾಗಿರಬೇಕು. ಈ ಚಿತ್ರದಲ್ಲಿ ಮಾನವ, ಪ್ರಾಣಿ ಹಾಗೂ ವಿಶಿಷ್ಟ ಆಕೃತಿಯ ಚಿತ್ರಗಳ ಆಕೃತಿಗಳಾಗಿವೆ.

 ಕಾಲಗಣನೆ : ಅಂತಿಮ ಶಿಲಾಯುಗ ಮತ್ತು ನವಶಿಲಾಯುಗದ ನಡುವಿನ ಯುಗವೇ ಸೂಕ್ಷ್ಮ ಶಿಲಾಯುಗವಾಗಿದೆ. ಈ ಶಿಲಾಯುಗ 2500 ರಿಂದ 10000 ವರ್ಷಗಳ ಪೂರ್ವದಲ್ಲಿ ಇತ್ತು ಎಂದು ಅಂದಾಜಿಸಲಾಗಿದೆ. ಆದರೆ ಇದು ಆದಿ ಹಾಗೂ ಮಧ್ಯ ಹೆಲೋಸಿನ್‌ ಯುಗಕ್ಕೆ ಸಮನಾಗಿದೆ. ಜನರು ನಿರಂತರವಾಗಿ ನೀರಿನ ಸೌಲಭ್ಯವಿದ್ದ ಕಡೆಗಳಲ್ಲಿ, ಮುಕ್ತವಾದ ವಿಶಾಲ ಬಯಲಿನಲ್ಲಿ, ನದಿ ದಂಡೆಗಳಲ್ಲಿ  ಹಾಗೂ ಶಿಲೆಗಳು ವಿಫುಲವಾಗಿ ದೊರಕುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಈ ಶಿಲಾಯುಗದ ಜನಸಾಂದ್ರತೆ ಅಧಿಕವಾಗಿತ್ತು. ಜನರು ಪ್ರಾಣಿಗಳನ್ನು ಬೇಟೆಯಾಡುತ್ತಾ ಪ್ರಾಣಿ ಸಾಗಾಣಿಕೆಯನ್ನು ಮಾಡುತ್ತಿದ್ದರು. ಬೀಜವನ್ನು ಬಿತ್ತಿ ಆಹಾರ ಪಡೆಯುತ್ತಿದ್ದರು. ವಸತಿ ನಿರ್ಮಾಣ ಹಾಗೂ ಚಾಪೆ ಹೆಣೆಯುವುದು, ಮಣ್ಣಿನ ಪಾತ್ರೆ, ಎಲುಬಿನ ಮಣಿಗಳ ತಯಾರಿಕೆ ಮುಂತಾದ ಉದ್ಯೋಗದಲ್ಲಿ ನಿರತರಾಗಿರುತ್ತಿದ್ದರು. ಬೇಟೆ ಹಾಗೂ ಆಹಾರ ಸಂಗ್ರಹನೆ ಪ್ರಮುಖ ಕಸುಬುಗಳು ಆಗಿದ್ದವು. ಹಣ್ಣು-ಹಂಪಲು ಹಾಗೂ ಗೆಡ್ಡೆ-ಗೆಣಸುಗಳನ್ನು ತಿನ್ನುತ್ತಿದ್ದರು.

 

5. ತಾಮ್ರಯುಗದ ಸಂಸ್ಕೃತಿ  (Chalcolithic Age)

ನವಶಿಲಾಯುಗದ ಅಂತ್ಯದಲ್ಲಿ ಮಾನವನಿಗೆ ಲೋಹಗಳ ಪರಿಚಯವಾಯಿತು. ಈ ಅವಧಿಯಲ್ಲಿ ಮಾನವನು ತಾಮ್ರದ ಲೋಹಗಳನ್ನು ಬಳಸಲು ಆರಂಭ ಮಾಡಿದನು. ಈ ಯುಗವನ್ನು ಚಾಕೋಲಿಥಿಕ್ ಎಂದು ಕರೆಯಲಾಗಿದೆ.

ತಾಮ್ರಯುಗದ ನೆಲೆಗಳು:  ತಾಮ್ರ ಶಿಲಾಯುಗಕ್ಕೆ ಸಂಬಂಧಿಸಿದ ಸ್ಥಳಗಳು ಆಗ್ನೇಯ ರಾಜಸ್ಥಾನ್‌, ಮಧ್ಯಪ್ರದೇಶದ ಪಶ್ಚಿಮಭಾಗ, ಮಹಾರಾಷ್ಟ್ರ ಭಾರತದ ಪೂರ್ವ ಹಾಗೂ ದಕ್ಷಿಣ ಭಾಗಗಳು ಆಹಾರ ಗಿಲುಂಡ್‌, ಮಧ್ಯಪ್ರದೇಶದ ಮಾಳ್ವ, ಕೈಯಾತ್ ಮತ್ತು ಎರಾನ್, ಅಹಮ್ಮದ್ ನಗರದ ಜೋರ್ವೆ, ನೇವಾಸ, ಡೈಮಾಬಾದ್‌, ಪುಣೆ, ಚಿಂಚೋಳ್ಳಿ, ಸೋನಾಗಾಂವ್, ಗೋದಾವರಿ ನದಿ ತೀರ, ವಿಂದ್ಯ ಪರ್ವತ ಪ್ರದೇಶ, ಗಂಗಾ ತೀರ, ಚಿರಾಂಡ್‌, ಬರ್ದಮಾನ್ ರಾಜರ್ ದಿಬಿ, ಬೀರ್‌ಭೂಮ್‌, ಬಿಹಾರದ ಸೆನ್ವಾರ್, ಸೋಣ್‌ಪುರ, ತರಧಿ, ಖೈರಾಧಿ ಮೊದಲಾದವುಗಳು.

ಕರ್ನಾಟಕದಲ್ಲಿ ಸಂಗನಕಲ್ಲು, ತೆಕ್ಕಲುಕೋಟೆ, ತಾವರೆಕೆರೆ, ಬ್ರಹ್ಮಗಿರಿ, ಪಿಕ್ಲಿಹಾಳ, ಉತ್ತನೂರು, ಟಿ ನರಸೀಪುರ, ಹೆಮ್ಮಿಗೆ, ನಿಲಸಕಲ್ (ಹೊಸನಗರ) ಎಡೆಗುಡ್ಡೆ (ತೀರ್ಥಹಳ್ಳಿ) ಮೇಗರವಳ್ಳಿ ಮೊದಲಾದ ಕಡೆಗಳಲ್ಲಿ ನೂತನ ಶಿಲಾಯುಗದ ನಿವೇಶನಗಳು ದೊರಕಿವೆ.

ಸಲಕರಣೆಗಳು: ಜನರು ಮರಗಳನ್ನು ಕತ್ತರಿಸಲು, ಪ್ರಾಣಿಗಳ ಚರ್ಮವನ್ನು ಸುಲಿಯಲು ಹಾಗೂ ಕೊರೆಯಲು ಅನೇಕ ಬಗೆ ಉಪಕರಣಗಳನ್ನು ಬಳಸುತ್ತಿದ್ದರು. ಕಲ್ಲು ಹಾಗೂ ತಾಮ್ರದಿಂದ ತಯಾರಿಸಿದ ಉಪಕರಣಗಳು ಆಗಿದ್ದವು. ರಾಜಸ್ಥಾನದ ಬನಾಸ್ ನದಿ ತೀರದಲ್ಲಿ ಹಲ್ಲೆ ಕೊಡಲಿ, ಬಳೆಗಳು, ತಗಡುಗಳು, ಅಲಗು, ಮೊನೆಗಳು, ಕೊಡಲಿ, ಬಾಚಿ, ಚಿಣಿ, ಉಳಿ ಮೊದಲಾದವುಗಳು ದೊರಕಿವೆ. ಇವುಗಳು ಅರ್ಧಚಂದ್ರಾಕೃತಿ, ಚತುರ ಚತುರಸ್ರಾಕಾರದ, ತ್ರಿಕೋನಾಕಾರದಲ್ಲಿ ದೊರಕಿವೆ. ಕೆಲವನ್ನು ಬೇಟೆಯಲ್ಲಿ ಕವಣೆ ಕಲ್ಲುಗಳಾಗಿ ಉಪಯೋಗಿಸುತ್ತಿದ್ದರು. ಸೂಜಿ, ಚಾಕು ಹಾಗೂ ಉದ್ದನೆಯ ಕತ್ತಿಗಳು ಹಳ್ಳೂರು ಹಾಗೂ ಬನಹಳ್ಳಿಗಳಲ್ಲಿ ಸಿಕ್ಕಿವೆ. ಉದ್ದನೆಯ ಹಿಡಿಕೆಯುಳ್ಳ ಗಡಿಗೆಗಳು ಅಗಲವಾದ ಬಾಲವುಳ್ಳ ಬಟ್ಟಲುಗಳು, ತಟ್ಟೆಗಳು,  ಮುಚ್ಚಳ ಮೊದಲಾದ ಪಾತ್ರಗಳು ಸಿಕ್ಕಿವೆ.

ರಾಜಸ್ಥಾನ್, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ್, ಪಶ್ಚಿಮ ಬಂಗಾಳದಲ್ಲಿ ಮಣ್ಣಿನ ಮಡಿಕೆಗಳು ದೊರಕಿವೆ. ಉದಾ: ಗಿಂಡಿಗಳು, ಬೋಗುಣಿಗಳು ಮೊದಲಾದವುಗಳು.

ಅಲಂಕಾರ ಸಾಧನೆಗಳು:  ಮಣಿಗಳು ಹಾಗೂ ಬಳೆಗಳು ತಾಮ್ರಯುಗದ ಜನರ ಅಲಂಕಾರದ ವಸ್ತುಗಳಾಗಿದ್ದವು. ಉತ್ಖನನದಲ್ಲಿ ದಾರದಲ್ಲಿ ಪೋಣಿಸಿದ ಮಣಿಗಳ ಸರವಂದು ಸಿಕ್ಕಿದೆ. ತಾಮ್ರದ ದಪ್ಪ ತಂತಿಯಲ್ಲಿ ಸಿಕ್ಕಿಸಿದ ಬಳೆಗಳು ಸರ್ವೇ ಸಾಮಾನ್ಯವಾಗಿದ್ದವು. ಬ್ರಹ್ಮಗಿರಿ ಹಾಗೂ ತೇರದಾಳದಲ್ಲಿ ಬಳೆಗಳು ದೊರಕಿವೆ.

 ಕಲೆ: ತಾಮ್ರ ಶಿಲಾಯುಗದ ಜನರು ಸೌಂದರ್ಯಾಸಕ್ತರಾಗಿದ್ದರು. ಅವರು ಮಣ್ಣಿನ ಗೊಂಬೆಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಸಂಗನ ಕಲ್ಲು. ಪಿಕ್ಲಿಹಾಳ ಮುಂತಾದ ಕಡೆಗಳಲ್ಲಿ ದೊರಕಿದ ಮಣ್ಣಿನ ಗೊಂಬೆಗಳೇ ಸಾಕ್ಷಿಯಾಗಿವೆ. ದನ, ಎತ್ತು, ಪಕ್ಷಿ ಹಾಗೂ ಮನುಷ್ಯರೂಪದ ಗೊಂಬೆಗಳು ಸಿಕ್ಕಿವೆ. ಇದು ಅಲ್ಲದೆ ಗುಹೆಗಳು ಮತ್ತು ಕಲ್ಲು ಬಂಡೆಗಳ ಮೇಲೆ ನೃತ್ಯ, ಬೇಟೆಗಾರಿಕೆ, ಆಕಳು, ಜಿಂಕೆ, ಹುಲಿ ಹಾಗೂ ಹುಲಿಗಳ ರೇಖಾಚಿತ್ರಗಳಿವೆ. ಇಂತಹ ಚಿತ್ರಗಳು ಬಳ್ಳಾರಿ ಜಿಲ್ಲೆಯ ಬೆಳಗಲಿ, ಲಿಂಗಸೂರು ಜಿಲ್ಲೆಯ ಕುರುಗೋಡು, ಬಿಲ್ಲಮರಾಯನಗುಡ್ಡ, ಮಸ್ಕಿ, ಜಂಟಿಗರಾಮೇಶ್ವರ ಮೊದಲಾದ ಕಡೆಗಳಲ್ಲಿ ಕಂಡುಬಂದಿವೆ.

ಶವ ಸಂಸ್ಕಾರ ಪದ್ಧತಿ: ತಾಮ್ರ ಯುಗದಲ್ಲಿ ಶವ ಸಂಸ್ಕಾರ ಪದ್ಧತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು. ಶವವನ್ನು ದೊಡ್ಡ ಮಡಿಕೆಯಲ್ಲಿಟ್ಟಿದ್ದು ಉತ್ತರ ಅಭಿಮುಖವಾಗಿ ಮನೆಯಲ್ಲಿಯೇ ಹೂಳುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಶವದ ಜೊತೆಗೆ ಅದರ ಉಪಯೋಗಿಸುತ್ತಿದ್ದ ಬಟ್ಟೆಗಳು ಆವರಣಗಳು ಹಾಗೂ ದಿನನಿತ್ಯದ ವಸ್ತುಗಳನ್ನು ಇಟ್ಟು ಹೂಳುತ್ತಿದ್ದರು. ಟಿ.ನರಸೀಪುರ, ತೆಕ್ಕಲುಕೋಟೆ, ಬೂದಿಹಾಳ ಮೊದಲಾದ ಕಡೆಗಳಲ್ಲಿ ಅಸ್ತಿಪಂಜರಗಳು ದೊರಕಿವೆ.

ಆಗಲೇ ಸಾಮಾಜಿಕ ಅಸಮಾನತೆ ಕಂಡುಬಂದಿದ್ದಿತೆಂದು ಶವವನ್ನು ಹೂಳುವ ವಿಧಾನದಿಂದ ತಿಳಿಯಬಹುದು. ಮಹಾರಾಷ್ಟ್ರದಲ್ಲಿ ಶ್ರೇಣಿ ವ್ಯವಸ್ಥೆ ಆರಂಭವಾಗಿತ್ತು. ಊರಿನ ನಾಯಕನು ಈತ ನಡುಭಾಗದ ಊರಿನಲ್ಲಿ ವಾಸಿಸುತ್ತಿದ್ದನು.

ಸಾಮಾಜಿಕ ಜೀವನ:  ಈ ಯುಗದಲ್ಲೂ ವ್ಯವಸಾಯ ಹಾಗೂ ಪಶುಪಾಲನೆ ಮುಂದುವರೆಯಿತು. ಭತ್ತ, ರಾಗಿ, ಗೋದಿ, ಹತ್ತಿ, ಕಬ್ಬು, ಜೋಳ, ಉದ್ದು, ನೆಲಗಡಲೆ, ಬಟಾಣಿ, ಎಣ್ಣೆ ಮೊದಲಾದವುಗಳನ್ನು ಬೆಳೆಯುತ್ತಿದ್ದರು. ನಾಯಿ, ಮೇಕೆ, ಕುರಿ, ಎಮ್ಮೆ ಮುಂತಾದ ಪ್ರಾಣಿಗಳನ್ನು ಸಾಕುತ್ತಿದ್ದರು. ಮೀನು, ಮಾಂಸ ಹಾಗೂ ತರಕಾರಿಗಳನ್ನು ಆಹಾರ ಪದಾರ್ಥಗಳಾಗಿ ಬಳಸುತ್ತಿದ್ದರು. ಇಟ್ಟಿಗೆಗಳಿಂದ ಮನೆಯನ್ನು ತಯಾರಿಸುತ್ತಿದ್ದರು. ಬಣ್ಣ ಬಣ್ಣದ ಮಡಿಕೆಗಳನ್ನು ತಯಾರಿಸುತ್ತಿದ್ದರು ಶವಗಳನ್ನು ಹೋಳುತ್ತಿದ್ದರು.

ನೆಲೆಗಳ ಶೋಧ:  ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಬ್ರಿಟಿಷರ ಕಾಲದಲ್ಲಿ ಸಿಂಧೂ ನಾಗರಿಕತೆ ಬೆಳಕಿಗೆ ಬಂದಿತು. ಸ್ವಾತಂತ್ರ್ಯದ ನಂತರ ಮತ್ತಷ್ಟು ಶೋಧವನ್ನು ಸಿಂಧು ಬಯಲಿನಲ್ಲಿ ನಡೆಸಲಾಯಿತು. ಅದರ ಫಲವಾಗಿ ಪಂಜಾಬಿನ ರೋಪರ್‌ನ್ನು ವಾಯ್‌.ಡಿ.ಶರ್ಮಾ, ಆಲಂಗಿಪುರ (ವಾಯ್‌.ಡಿ.ಶರ್ಮನ್ 1958-59) ಗುಜರಾತಿನ ರಂಗಪುರ (ಎಸ್.ಆರ್. ರಾವ್ 1955-62), ಲೋಥಾಲ್ ಗುಜರಾತ್ 1955-66 ರಾಜಸ್ಥಾನದ ಕಾಲಿಬಂಗನ್‌-ಬಿ.ಬಿ ಲಾಲ್ ಹಾಗೂ ಬಿ.ಕೆ ಥಾಪರ್ ಕಚನ್ ಸರಕೋತದ ಜೋಶಿ, ನಾಗೇಶ್ವರ ಕುಂತಾಸಿ ಇತ್ಯಾದಿಗಳು ಉತ್ಖನನಗೊಂಡವು. ಸಿಂಧೂ ನಾಗರಿಕತೆಯ ಅವನತಿಯ ನಂತರ ಪುರಾತತ್ವ ಶಾಸ್ತ್ರಜ್ಞರಿಗೆ ಸಿಕ್ಕ ಮತ್ತೊಂದು ಸ್ಥಳವೆಂದರೆ ಗಂಗಾ ನದಿಯ ದಂಡೆಯ ಮೇಲಿರುವ ಹಸ್ತಿನಾಪುರ. ಇಲ್ಲಿ  ಬಿ.ಬಿ ಲಾಲ್‌ರವರು 1950-52ರ ಅವಧಿಯಲ್ಲಿ ಉತ್ಖನನ ನಡೆಸಿದರು. ಇಲ್ಲಿ ಕ್ಯಾವಿಗೆಂಪು ಬಣ್ಣದ ಮಡಿಕೆಗಳು ಬಳಕೆಯಲ್ಲಿದ್ದ ಸಂಸ್ಕೃತಿ ಅವಶೇಷಗಳು ದೊರಕಿದವು. ಈ ಸಂಸ್ಕೃತಿ ಹಾಗೂ ತಾಮ್ರ ನಿಧಿ ನೆಲೆಗಳ ನಡುವೆ ಸಂಬಂಧ ಕಲ್ಪಿಸಲಾಗಿದೆ. ನೆರೆಹಾವಳಿಗಿಂದ ಗಂಗಾನದಿಯ ಬಹುಭಾಗ ನಾಶವಾಯಿತು. ನಂತರ ಕಪ್ಪು ಮಡಿಕೆ ಬಳಕೆಯಲ್ಲಿದ್ದ ಸಂಸ್ಕೃತಿಯ ಜನರು ಇಲ್ಲಿ ವಾಸಿಸಿದರು. ಮುಂದೆ ಕುರುಕ್ಷೇತ್ರ, ಮಥುರಾ, ಕಂಪಿಲ, ಶ್ರಾವಸ್ತಿ ಹಾಗೂ ಕೌಶಾಂಬಿ ಮೊದಲಾದವು ಮುಖ್ಯ ನೆಲೆಗಳಾಗಿ ಬೆಳೆದು ಬಂದವು.

1950-51 ರಲ್ಲಿ ಮಹಾರಾಷ್ಟ್ರದ ನಾಸಿಕ್ ನೆಲೆಗಳ ಉತ್ಖನನದಲ್ಲಿ ಜೋರ್ವೆ ಸಂಸ್ಕೃತಿಯೊಂದಿಗೆ ಡೆಕ್ಕನ್ನಿನ ತಾಮ್ರ ಶಿಲಾ ಸಂಸ್ಕೃತಿಗಳ ಅಧ್ಯಯನ ಆರಂಭವಾಯಿತು. ನಂತರ 1954-55 ರಲ್ಲಿ ಸಾಂಕಾಲಿಯ ಅವರು ಕೆಂಪು ಮಡಿಕೆಯನ್ನು ಬಳಸುತ್ತಿದ್ದ ತಾಮ್ರಯುಗದ ಬನಾಸ್ ಹಾಗೂ ಆಹಾರ ಸಂಸ್ಕೃತಿಯ ಬೆಳಕಿಗೆ ತಂದರು. 1964-68 ರಲ್ಲಿ (ಎಂ ಕೆ ದವಳಿಕರ್) ಕಾಯಥಾ ಸಂಸ್ಕೃತಿ ಎಂದು ಕರೆಯಲಾಗುವ ಇನ್ನೊಂದು ತಾಮ್ರ ಶಿಲಾಯುಗ ಗಮನಕ್ಕೆ ಬಂದಿತ್ತು.

 ಕಾಲಮಾನ:  ಈ ಶಿಲಾಯುಗದ ಕಾಲಮಾನ ಕ್ರಿ.ಪೂ 2300-1000 ಎಂದು ಗುರುತಿಸಲಾಗಿದೆ. ಟಿ.ನರಸೀಪುರ, ಹಳ್ಳೂರು, ತೆಕ್ಕಲಕೋಟೆ, ಕೊಡೆಕಲ್, ತೇರದಾಳ, ಮೊದಲಾದ ನೆಲೆಗಳ ಶಿಲಾಯುಗ ತಾಮ್ರಾಯುಗ ಹಂತಗಳಿಂದ ಸಂಗ್ರಹಿಸಿದ ಇದ್ದಿಲುಗಳಿಂದ ಕಾಲಮಾನವನ್ನು ಇಂಗಾಲ 14 ರ ವೈಜ್ಞಾನಿಕ ತಂತ್ರದಿಂದ ನಿಗದಿಗೊಳಿಸಲಾಯಿತು.

6. ಕಂಚಿನ ಯುಗ  :

ಕಂಚು ಯುಗವು ಮಾನವ ಇತಿಹಾಸದ ಒಂದು ಮಹತ್ವದ ಹಂತವಾಗಿದ್ದು, ಈ ಕಾಲದಲ್ಲಿ ಮಾನವರು ಕಂಚು (Bronze) ಎಂಬ ಲೋಹವನ್ನು ತಯಾರಿಸುವುದನ್ನು ಕಲಿಸಿದರು. ಕಂಚು ಎಂದರೆ ತಾಮ್ರ ಮತ್ತು ಟಿನ್ ಮಿಶ್ರಣದಿಂದ ತಯಾರಾಗುವ ಬಲವಾದ ಲೋಹ. ಇದು ಕಲ್ಲು ಉಪಕರಣಗಳಿಗಿಂತ ಹೆಚ್ಚು ದೃಢವಾಗಿದ್ದು, ಕೃಷಿ ಮತ್ತು ಯುದ್ಧ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆಗಳನ್ನು ತಂದಿತು. ಉತ್ತಮ ಗುಣಮಟ್ಟದ ಹಗುರ ಮತ್ತು ಬಲವಾದ ಉಪಕರಣಗಳ ಕಾರಣದಿಂದ ಕೃಷಿ ಸುಲಭವಾಯಿತು; ಜೊತೆಗೆ, ಯುದ್ಧದಲ್ಲಿ ಬಳಸುವ ಆಯುಧಗಳು ಹೆಚ್ಚು ಪರಿಣಾಮಕಾರಿಯಾಗಿದವು.

ಕೃಷಿಯಲ್ಲಿ ಉಂಟಾದ ಸುಧಾರಣೆಯಿಂದ ಆಹಾರದ ಉತ್ಪಾದನೆ ಹೆಚ್ಚಾಯಿತು. ಈ ಆಹಾರ ಮಿತಿಮೀರಿದ ಉತ್ಪಾದನೆ (surplus) ಜನಸಂಖ್ಯೆ ಹೆಚ್ಚಲು ಕಾರಣವಾಯಿತು. ಜನರು ದೊಡ್ಡ ಗುಂಪುಗಳಾಗಿ ವಾಸಿಸಲು ಪ್ರಾರಂಭಿಸಿದರು ಮತ್ತು ಈ ವಾಸಸ್ಥಳಗಳು ನಿಧಾನವಾಗಿ ನಗರಗಳು ಮತ್ತು ರಾಜ್ಯಗಳಾಗಿ ರೂಪುಗೊಂಡವು. ಈ ಸಮಾಜಗಳಲ್ಲಿ ರಾಜರು, ಪೂಜಾರಿಗಳು, ವ್ಯಾಪಾರಿಗಳು ಮತ್ತು ಕಾರ್ಮಿಕರು ಎಂಬಂತೆ ಸ್ಪಷ್ಟವಾದ ಸಾಮಾಜಿಕ ವರ್ಗೀಕರಣ ಕಂಡುಬಂದಿತು.

ಕಂಚು ಯುಗದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಮಹತ್ವದ ನಾಗರಿಕತೆಗಳು ಬೆಳವಣಿಗೆ ಕಂಡವು. ಮೆಸಪೊಟೇಮಿಯ ಪ್ರದೇಶದಲ್ಲಿ ಸುಮೇರಿಯನ್ ಮತ್ತು ಬಾಬಿಲೋನಿಯನ್ ನಾಗರಿಕತೆಗಳು ನಗರಗಳನ್ನು ನಿರ್ಮಿಸಿ, ಕಾನೂನುಗಳನ್ನು ರೂಪಿಸಿ, ಜಿಗ್ಗುರಾಟ್‌ಗಳು ಎಂಬ ಭವ್ಯ ದೇವಾಲಯಗಳನ್ನು ಕಟ್ಟಿದರು. ಪ್ರಾಚೀನ ಈಜಿಪ್ಟ್‌ ನಲ್ಲಿ ಫೆರೋಗಳು ಕೇಂದ್ರಿತ ಆಡಳಿತವನ್ನು ಸ್ಥಾಪಿಸಿ, ಪಿರಮಿಡ್‌ಗಳಂತಹ ಮಹತ್ತರ ಸಮಾಧಿಗಳನ್ನು ನಿರ್ಮಿಸಿದರು. ಸಿಂದೂ ಬಯಲಿನ ನಾಗರೀಕತೆಯಲ್ಲಿ ತನ್ನ ಯೋಜಿತ ನಗರ ವಿನ್ಯಾಸ, ಸಮಮಟ್ಟದ ಇಟ್ಟಿಗೆ ಮನೆಗಳು ಮತ್ತು ಸುಧಾರಿತ ಒಳಚರಂಡಿ ವ್ಯವಸ್ಥೆಗಳಿಗಾಗಿ ಪ್ರಸಿದ್ಧವಾಗಿದೆ. ಪ್ರಾಚೀನ ಚೀನದಲ್ಲಿ ಕಂಚಿನ ನಿಪುಣ ತಯಾರಿಕೆ, ರಥಯುದ್ಧ ಮತ್ತು ಪ್ರಮುಖ ನಗರಗಳ ನಿರ್ಮಾಣ ಕಂಡುಬಂತು. ಏಜಿಯನ್ ಪ್ರದೇಶದಲ್ಲಿ ಮಿನೋನ್ ಮತ್ತು ಮೈಸಿನಿಯನ್ ನಾಗರಿಕತೆಗಳು ವ್ಯಾಪಾರ ಮತ್ತು ಸಮುದ್ರಯಾನದ ಮೂಲಕ ಅಭಿವೃದ್ಧಿ ಹೊಂದಿದವು.

ಈ ಕಾಲದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಎಂದರೆ ಲೇಖನ ಪದ್ಧತಿಯ ಆವಿಷ್ಕಾರ. ವ್ಯಾಪಾರ, ತೆರಿಗೆ ಮತ್ತು ಕೃಷಿ ದಾಖಲೆಗಳನ್ನು ಉಳಿಸಿಕೊಳ್ಳಲು ಅಗತ್ಯವಿದ್ದ ಕಾರಣ ಬರವಣಿಗೆ ವ್ಯವಸ್ಥೆಗಳು ರೂಪುಗೊಂಡವು. ಮೆಸೊಪೊಟೇಮಿಯಾದಲ್ಲಿ ಕ್ಯೂನಿಫಾರ್ಮ್ ಮತ್ತು ಈಜಿಪ್ಟ್‌ನಲ್ಲಿ ಹೈರೋಗ್ಲಿಫ್ಸ್ ಎಂಬ ಲೇಖನ ಪದ್ಧತಿಗಳು ಅಭಿವೃದ್ಧಿ ಹೊಂದಿದವು. ಬರವಣಿಗೆ ವ್ಯವಸ್ಥೆಗಳು ದೊಡ್ಡ ರಾಜ್ಯಗಳನ್ನು ನಿರ್ವಹಿಸಲು ಸಹಾಯ ಮಾಡಿದ್ದು, ಧಾರ್ಮಿಕ ನಂಬಿಕೆಗಳು ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಳಿಗೆ ಉಳಿಸಿವೆ. ಈ ಕಾಲದಲ್ಲಿ ಗಣಿತ, ಖಗೋಳಶಾಸ್ತ್ರ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿಯೂ ಮಹತ್ವದ ಪ್ರಗತಿ ಕಂಡುಬಂದಿತು.

ಕಂಚು ಯುಗದಲ್ಲಿ ದೂರವ್ಯಾಪಿ ವ್ಯಾಪಾರ ಜಾಲಗಳು ಬೆಳೆಯಲು ಆರಂಭವಾಯಿತು. ಟಿನ್ ಮೊದಲಾದ ಮೂಲವಸ್ತುಗಳು ಎಲ್ಲೆಡೆ ಲಭ್ಯವಾಗದ ಕಾರಣ ವಿವಿಧ ಪ್ರದೇಶಗಳ ನಡುವೆ ವ್ಯಾಪಾರ ನಡೆಯಿತು. ಧಾತುಗಳು, ವಸ್ತ್ರಗಳು ಮತ್ತು ಐಶ್ವರ್ಯ ವಸ್ತುಗಳ ವಿನಿಮಯದ ಜೊತೆಗೆ ಸಂಸ್ಕೃತಿ ಮತ್ತು ಆಲೋಚನೆಗಳೂ ಹರಡಿದವು. ಇದರಿಂದ ಕಂಚು ಯುಗದ ಜಗತ್ತು ಪರಸ್ಪರ ಸಂಪರ್ಕ ಹೊಂದಿದ ಜಾಲವಾಗಿ ರೂಪುಗೊಂಡಿತು.

ಆದರೆ, ಈ ಪ್ರಗತಿಯ ನಡುವೆಯೇ ಕಂಚು ಯುಗವು ಸುಮಾರು ಕ್ರಿ.ಪೂ. 1200ರ ವೇಳೆಗೆ ಅಂತ್ಯ ಕಂಡಿತು. ಬರಡು, ಆಹಾರ ಕೊರತೆ ಮತ್ತು ಪ್ರಕೃತಿ ವಿಕೋಪಗಳು ಕೃಷಿಯನ್ನು ಹಾನಿಗೊಳಿಸಿದವು. ಜೊತೆಗೆ, ಸಮುದ್ರ ಜನರು (Sea Peoples) ಎಂದು ಕರೆಯಲ್ಪಡುವ ಗುಂಪುಗಳ ದಾಳಿಗಳು ವ್ಯಾಪಾರ ಮಾರ್ಗಗಳನ್ನು ಹಾಳುಮಾಡಿದವು. ಈ ನಾಗರಿಕತೆಗಳು ಪರಸ್ಪರ ಅವಲಂಬಿತವಾಗಿದ್ದರಿಂದ, ಒಂದರ ಪತನ ಮತ್ತೊಂದರ ಮೇಲೂ ಪರಿಣಾಮ ಬೀರಿತು. ಈ ಘಟನೆಗಳನ್ನು “ವ್ಯವಸ್ಥಾತ್ಮಕ ಕುಸಿತ” (systems collapse) ಎಂದು ಕರೆಯಲಾಗುತ್ತದೆ. ಇದರಿಂದ ಕಂಚು ಯುಗ ಮುಕ್ತಾಯಗೊಂಡು ಕಬ್ಬಿಣ ಯುಗ ಆರಂಭವಾಯಿತು.

ಒಟ್ಟಿನಲ್ಲಿ, ಕಂಚು ಯುಗವು ಮಾನವ ಇತಿಹಾಸದಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ಕಾಲವಾಗಿದ್ದು, ನಗರಗಳ ಅಭಿವೃದ್ಧಿ, ಬರವಣಿಗೆ, ವ್ಯಾಪಾರ ಮತ್ತು ಶಕ್ತಿಶಾಲಿ ನಾಗರಿಕತೆಗಳ ಉದಯಕ್ಕೆ ಕಾರಣವಾಯಿತು. ಇದರ ಕೊಡುಗೆಗಳು ಮುಂದಿನ ಮಾನವ ಅಭಿವೃದ್ಧಿಗೆ ಗಟ್ಟಿ ಅಡಿಪಾಯವಾಯಿತು.

  1. ಕಬ್ಬಿಣ ಯುಗ (Iron age)

ತಾಮ್ರ ಶಿಲಾಯುಗದ ಸಂಸ್ಕೃತಿಯ ನಂತರ ಕಬ್ಬಿಣ ಯುಗ ಆರಂಭವಾಯಿತು. ಈ ಯುಗದ ಸಂಸ್ಕೃತಿಯ ನೆಲೆಗಳು ಕರ್ನಾಟಕ, ಆಂಧ್ರ, ತಮಿಳುನಾಡು ಹಾಗೂ ಕೇರಳಗಳಲ್ಲಿ ದೊರಕಿವೆ. ಬ್ರಹ್ಮಗಿರಿಯಲ್ಲಿ ಸರ್ ಮಾರ್ಟಿಮರ್ ವೀಲರ್ ನಡೆಸಿದ ಉತ್ಖನನನದಿಂದ ಈ ಸಂಸ್ಕೃತಿಯು ಕಬ್ಬಿಣ ಯುಗದ್ದು ಎಂಬ ತೀರ್ಮಾನಕ್ಕೆ ಬರಲಾಯಿತು. ನಂತರ ಕರ್ನಾಟಕದ ಮಸ್ಕಿ, ಟಿ.ನರಸೀಪುರ, ಜಡಿಗೇನಹಳ್ಳಿ, ಹೆಮ್ಮಿಗೆ, ಹಳ್ಳೂರು, ತಡಕನಹಳ್ಳಿ, ತೇರದಾಳ ಮೊದಲಾದ ಕಡೆ, ಆಂಧ್ರದ ನಾಗಾರ್ಜುನಕೊಂಡ, ಕೇರಳದ ಪೋಕಾ, ತಮಿಳುನಾಡಿನ ಸಾಣೂರು, ಅಮೃತ ಮಂಗಲಂ, ಸಂಗಮೇಡು ಮೊದಲಾದ ಪ್ರದೇಶಗಳಲ್ಲಿ ನಡೆಸಿದ ಉತ್ಖನನನಗಳಿಂದ ಬೃಹತ್ ಶಿಲಾ ಗೋರಿಗಳು ಬೆಳಕಿಗೆ ಬಂದ ಹಾಗೆಯೇ ಮಹಾರಾಷ್ಟ್ರದ ತೇಕವಾಡಾ, ವಿದರ್ಭ ಪ್ರದೇಶದ ಟಾಕಲಘಾಟ, ಮಾಹುರ್ಜರಿ, ನಯಾಕುಂಡ, ಬೋರಗಾಂವ, ಭಾಗಿ ಮೊಹರಿ ಮೊದಲಾದ ಕಡೆ ಶಿಲಾಗೋರಿಗಳು ಸಿಕ್ಕಿವೆ. ಈ ಶಿಲಾಗೋರಿಗಳನ್ನು ಡಾ|| ವಿ.ಡಿ ಕೃಷ್ಣಸ್ವಾಮಿ, ಡಾ|| ಅ ಸುಂದರ, ಡಾ|| ಬಿ.ಕೆ ಗುರುರಾಜ್‌, ಡಾ|| ಬಿ. ನರಸಿಂಹಯ್ಯ, ಆರ್ ಮೋಹಂತಿ ಮೊದಲಾದವರು ಅಧ್ಯಯನ ಮಾಡಿ ವರದಿ ನೀಡಿದ್ದಾರೆ.

ಜೀವನ ಶೈಲಿ:  ಪಶುಸಂಗೋಪನೆ, ಬೇಟೆಗಾರಿಕೆ, ಬೇಸಾಯ ಮೊದಲಾದವುಗಳು ಕಬ್ಬಿಣ ಯುಗದ ಜನರ ಪ್ರಮುಖ ಉದ್ಯೋಗಗಳಾಗಿದ್ದವು. ಇವರು ತಯಾರಿಸಿದ ಕಬ್ಬಿಣ, ಉಕ್ಕಿನ ನೇಗಿಲ ಕುಳ, ಕುಡಗೋಲು ಮೊದಲಾದವು ಕೃಷಿ ಕಾರ್ಯದಲ್ಲಿ ಬಳಕೆಯಾಗುತ್ತಿದ್ದವು. ಇವರ ಕಾಲದ ದೊಡ್ಡ ಉದ್ದಿಮೆಯೆಂದರೆ ಕಬ್ಬಿಣದ ಅದಿರಿನಿಂದ ಲೋಹ ತಯಾರಿಸುವುದು ಹಾಗೂ ಕಮ್ಮಾರಿಕೆಗೆ ಬೇಕಾದ ಆಯುಧಗಳನ್ನು ತಯಾರಿಸುವುದು ಕಬ್ಬಿಣದ ಜೊತೆಗೆ ಕಲ್ಲಿನ ಉಪಕರಣಗಳನ್ನು ಬಳಸುತ್ತಿದ್ದರು.

ಮನೆ ಬಳಕೆಯಲ್ಲಿ ಕಬ್ಬಿಣ ಹಾಗೂ ಉಕ್ಕಿನಿಂದ ತಯಾರಿಸಿದ ಉಪಕರಣಗಳಾದ ಅಡ್ಡಣಿಗೆ, ಕೈ ನೇಗಿಲ ಕುಳ, ಕುಡಗೋಲು, ಚಾಕು, ಕತ್ತಿ, ಭಲ್ಲೆ, ಈಟಿ, ಕೊಡಲಿ, ಬಿಲ್ಲುಬಾಣ ಮೊದಲಾದವುಗಳನ್ನು ಉಪಯೋಗಿಸುತ್ತಿದ್ದರು. ವಿವಿಧ ಆಕಾರದ ಬಟ್ಟಲುಗಳು, ತಪ್ಪಲಿಗಳು, ಕೊಡಗಳು ಉಂಗುರಾಕಾರದ ಅಡ್ಡಣೆಗೆಗಳು ಗೂಡಾಣಗಳು ಹಾಗೂ ಬಾನಿಗಳಂತ ಪಾತ್ರೆಗಳಿದ್ದವು.

ಇವರು ಶಂಕದಿಂದ, ಮಣ್ಣಿನಿಂದ, ಚಿನ್ನದಿಂದ ಮಾಡಿದ ಮಣಿಗಳನ್ನು ಮಾಲೆಗಳನ್ನು ಸಹ ಧರಿಸುತ್ತಿದ್ದರು.  ಶಂಕಗಳ ಮಾಲೆಯನ್ನು ಸಹ ಧರಿಸುತ್ತಿದ್ದರು. ಮಣ್ಣಿನ ಮಣಿಗಳು ಅಡಿಕೆ ಗಾತ್ರದಲ್ಲಿದ್ದವು. ಶಂಖಗಳಿಗೆ ತೂತುಗಳನ್ನು ಮಾಡಿದ್ದರು.  

ಶವಸಂಸ್ಕಾರ ಪದ್ಧತಿ:  ಶವ ಸಂಸ್ಕಾರದ ನೂರಾರು ಕಲ್ಗೋರಿಗಳು ದೊರಕಿವೆ. ಒಂದೊಂದು ಗೋರಿಗಳಲ್ಲಿ ಒಂದಕ್ಕಿಂತ ಹೆಚ್ಚು ಅಸ್ತಿಪಂಜರಗಳು ದೊರಕಿವೆ. ಕಬ್ಬಿಣ ಶಿಲಾಯುಗದ ಜನರು  ಅಂಡಾಕಾರದಲ್ಲಿ ಗುಂಡಿಯನ್ನು ತೋಡಿ ನೆಲದ ಮೇಲೆ ಬೂದಿಯನ್ನು ಹಾಕಿ ಅದರ ಮೇಲೆ ಶವವನ್ನು ಅಡ್ಡಲಾಗಿ ಮಲಗಿಸಿ ಶವದ ಜೊತೆ ಎರಡು ಪಾತ್ರಗಳನ್ನು ಇಡುತ್ತಿದ್ದರು. ಇನ್ನೊಂದು ಬಗೆಯ ಗೋರಿಯಲ್ಲಿ ಸಂಗ್ರಹಿಸಿದ ಅಸ್ತಿ ಅವಶೇಷಗಳನ್ನು ಮಣ್ಣಿನ ಪಾತ್ರೆಯೊಳಗೆ ಇಟ್ಟು ಅದನ್ನು ಗುಂಡಿಯೊಳಗೆ ಹಾಕಿ ಮಣ್ಣಿನಿಂದ ಮುಚ್ಚಿ ಗುಂಡಿಯ ಬಾಯಿ ಸುತ್ತಲೂ ಚಿಕ್ಕಚಿಕ್ಕ ಕಲ್ಲುಗಳನ್ನು ಇಟ್ಟು ವೃತ್ತದೊಳಗೆ ಕೆಲವು ಕಲ್ಲಿನ ಚೂರುಗಳನ್ನು ಹಾಕಲಾಗುತ್ತದೆ.

 ಕಾಲಮಾನ:  ಈ ಶಿಲಾಯುಗದ ಕಾಲಮಾನ ಕ್ರಿ.ಪೂ 1000 ದಿಂದ 900 ಎಂದು ತರ್ಕಿಸಲಾಗಿದೆ. ಕರ್ನಾಟಕದ ಬನಹಳ್ಳಿಯ ಇಂಗಾಲದ 14ರ ಕಾಲಮಾನದ ಕ್ರಿಸ್ತಪೂರ್ವ 600 ರಿಂದ ಕ್ರಿಸ್ತಶಕ 1ನೇ ಶತಮಾನ ಎಂದು ದೃಢಪಡಿಸಲಾಗಿದೆ.

ಭಾರತ ಮತ್ತು ಕರ್ನಾಟಕದಲ್ಲಿ ಶಿಲಾಯುಗದ ಸಂಶೋಧನೆ

ಭಾರತದಲ್ಲಿ ಶಿಲಾಯುಗದ ಸಂಶೋಧನೆಗೆ Robert Bruce Foote ಪ್ರಮುಖ ಕೊಡುಗೆ ನೀಡಿದ್ದಾರೆ.

ಕರ್ನಾಟಕದಲ್ಲಿ:

  • R. V. Joshi — ಮಲಪ್ರಭಾ ನದೀ ತೀರದಲ್ಲಿ ಸಂಶೋಧನೆ
  • Sampath Iyengar — ತುಮಕೂರು ಜಿಲ್ಲೆಯ ಕಿಬ್ಬನಹಳ್ಳಿ
  • S. Seshadri — ಮಂಡ್ಯ ಜಿಲ್ಲೆಯ Kaveri River ತೀರದಲ್ಲಿ ಆವಿಷ್ಕಾರ
  • Paddayya — ಹುಣಸಗಿ ಮತ್ತು ಸಾಲವಡಗಿ ಪ್ರದೇಶಗಳಲ್ಲಿ ಅಧ್ಯಯನ

ಇದಲ್ಲದೆ, ಬಾದಾಮಿ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಮತ್ತು ಚಿತ್ರದುರ್ಗ ಪ್ರದೇಶಗಳಲ್ಲಿ ಶಿಲಾಯುಗದ ಅವಶೇಷಗಳು ಕಂಡುಬಂದಿವೆ.

ಉಪಸಂಹಾರ

ಶಿಲಾ ಯುಗದ ಅಧ್ಯಯನವು ಮಾನವನ ಅಭಿವೃದ್ಧಿ, ತಂತ್ರಜ್ಞಾನ ಮತ್ತು ಸಮಾಜದ ರೂಪುಗೊಳಿಸುವಿಕೆಯನ್ನು ತಿಳಿಯಲು ಬಹಳ ಮುಖ್ಯವಾಗಿದೆ. ಸರಳ ಕಲ್ಲು ಉಪಕರಣಗಳಿಂದ ಪ್ರಾರಂಭಿಸಿ, ಲೋಹ ಉಪಕರಣಗಳ ಬಳಕೆಯವರೆಗೆ ಮಾನವನು ತನ್ನ ಜೀವನವನ್ನು ಕ್ರಮೇಣ ಸುಧಾರಿಸಿಕೊಂಡಿದ್ದಾನೆ.

ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ನಡೆದ ಪುರಾತತ್ತ್ವ ಸಂಶೋಧನೆಗಳು ಜಗತ್ತಿನ ಇತಿಹಾಸ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿವೆ.

ಪುರಾತತ್ವ ಶಾಸ್ತ್ರದ ವಿಧಗಳು (Kinds of Archaealogy)

ಪುರಾತತ್ವ ಶಾಸ್ತ್ರದ ವಿಧಗಳು (Kinds of Archaealogy)

ಪುರಾತನ ಅವಶೇಷಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವುದನ್ನು ಪುರಾತತ್ವಶಾಸ್ತ್ರ ಎಂದು ಕರೆಯಲಾಗಿದೆ. ಭೂಮಿಯ ಮೇಲೆ ವಾಸ ಮಾಡಿದ ಮಾನವ ಸಮಾಜ ತಾನು ಬಾಳಿ ಬದುಕಿದ ಸಮಾಜದಲ್ಲಿ ತಾನು ಉಪಯೋಗಿಸುತ್ತಿದ್ದ ದಿನನಿತ್ಯದ ವಸ್ತುಗಳು, ನಂಬಿಕೆಗಳು, ಸಾಮಾಜಿಕ ಕುರುಹುಗಳು, ವಸ್ತ್ರಗಳು, ಆಭರಣಗಳು, ಸಲಕರಣೆಗಳು ಹಾಗೂ ಆಯುಧಗಳನ್ನು ಬಿಟ್ಟು ಹೋಗುತ್ತಾನೆ. ಈತ ಬಿಟ್ಟು ಹೋಗಿದ್ದ ಕುರುಹುಗಳು ಸ್ಪಷ್ಟ ಹಾಗೂ ಪರಿಪೂರ್ಣವಾಗಿರುತ್ತವೆ ಎಂದು ಹೇಳಲು ಬರುವುದಿಲ್ಲ. ಆದರೂ ಲಿಖಿತ ಆಧಾರಗಳು ಇಲ್ಲದಿದ್ದಾಗಲೂ ಸಹ ಕೆಲವು ವಿಶಿಷ್ಟ ಅಧ್ಯಯನಗಳ ವಿಧಾನದಿಂದ ಈ ಕುರುಹುಗಳನ್ನು ಒರೆಗಲ್ಲಿಗೆ ಹಚ್ಚಿ ಆಯಾ ಸಮಾಜದ ಸಂಸ್ಕೃತಿ ವಿವರಗಳನ್ನು ಅಸ್ಪಷ್ಟವಾಗಿ ಚಿತ್ರಿಸಲು ಸಾಧ್ಯ ಎಂಬ ಸಂಗತಿಗಳನ್ನು ಪುರಾತತ್ವಶಾಸ್ತ್ರ ಮನವರಿಕೆ ಮಾಡಿಕೊಡುತ್ತದೆ. ಪುರಾತತ್ವಶಾಸ್ತ್ರವು ಪ್ರಮುಖವಾಗಿ ಎರಡು ಭಾಗಗಳನ್ನು ಒಳಗೊಂಡಿದೆ. ಅವುಗಳೆಂದರೆ.

  1. ಜನಾಂಗ ವಿವರಣ ಪುರಾತತ್ವಶಾಸ್ತ್ರ
  2. ಸಮುದ್ರ ತಳದ ಪುರಾತತ್ವಶಾಸ್ತ್ರ

1. ಜನಾಂಗ ವಿವರಣ ಪುರಾತತ್ವ ಶಾಸ್ತ್ರ (Ethno Archaeology): ಜನಾಂಗ ವಿವರಣ ಪುರಾತತ್ವಶಾಸ್ತ್ರವು ಭಾರತದಲ್ಲಿ ಇತ್ತೀಚಿಗೆ ಹೆಚ್ಚು ಪ್ರಚಲಿತವಾಗುತ್ತಿದೆ. ಔದ್ಯೋಗಿಕ ಕ್ರಾಂತಿಯ ನಂತರ ಪ್ರಗತಿಯ ಪ್ರಭಾವಕ್ಕೆ ಸಿಲುಕಿ ನಲುಗದೆ ಸಂಪ್ರದಾಯ ಹಾಗೂ ಸಂಸ್ಕೃತಿಗಳನ್ನು ಶುದ್ಧವಾಗಿ ಉಳಿಸಿಕೊಂಡು ಬಂದಿರುವ ಆದಿವಾಸಿ ಜನಾಂಗದ ಮತ್ತು ವಲಸೆ ಜನಾಂಗಗಳ ಕುರಿತು ಅಧ್ಯಯನ ಮಾಡುವುದು ಪುರಾತತ್ವ ಶಾಸ್ತ್ರದ ಪ್ರಮುಖ ಗುರಿಯಾಗಿದೆ. ಹೀಗಾಗಿ ಪುರಾತತ್ವ ಅಧ್ಯಯನದಿಂದ ಗುಡ್ಡಗಾಡು ಜನರ ನಿಜವಾದ ಸಂಸ್ಕೃತಿಯ ದಾಖಲೆಗಳು ಬೆಳಕಿಗೆ ಬಂದಿವೆ. ಆದಿವಾಸಿ ಜನರು ಪ್ರಾಣಿಗಳನ್ನು ಬೇಟೆಯಾಡುವ ರೀತಿ, ವಾಸಸ್ಥಳಕ್ಕೆ ಗುಡಿಸಲುಗಳನ್ನು ಕಟ್ಟಿಕೊಳ್ಳುವ ಪರಿ, ಅವುಗಳ ಸಾಮಾಜಿಕ ರಚನೆ ಮೊದಲಾದವುಗಳನ್ನು ಅಧ್ಯಯನದಿಂದ ತಿಳಿದುಕೊಂಡು ಪುರಾತತ್ವ ಅವಶೇಷಗಳು ನೀಡುವ ಚಿತ್ರಗಳನ್ನು ಬಳಸಿಕೊಂಡು ನಿಖರವಾದ ಮಾಹಿತಿಯನ್ನು ವರದಿಯ ಮೂಲಕ ಹೊರಹಾಕುವುದು ಪುರಾತತ್ವ ಶಾಸ್ತ್ರದ ಮೊದಲ ಆದ್ಯತೆಯಾಗಿದೆ. ಡೆಕ್ಕನ್ ಕಾಲೇಜಿನ ಸಿಬ್ಬಂದಿಯು ಆಹಾರ್, ನಾವಾತೋಲಿ ಹಾಗೂ ತೆಕ್ಕಲಕೋಟೆ ಸ್ಥಳಗಳನ್ನು ಉತ್ಖನನ ಮಾಡುವುದರ ಜೊತೆಗೆ ಅದರ ಸುತ್ತಮುತ್ತ ವಾಸಿಸುತ್ತಿದ್ದ ಜನರ ಅಧ್ಯಯನವನ್ನು ಮಾಡಿದರು. ಮಧ್ಯಪ್ರದೇಶದ ಬಸ್ತರ ಪ್ರದೇಶದ ಜನಾಂಗಗಳು ಮತ್ತು ಒಡಿಸ್ಸಾದ ಬೋಡೋ ಜನಾಂಗಗಳ ಹಾಗೂ ಆಂಧ್ರದ ಯಾನಾಡಿ ಜನಾಂಗದ ಜೀವನ ಶೈಲಿಯ ಕುರಿತು ಸಹ ಅಧ್ಯಯನವನ್ನು ಮಾಡಲಾಗಿದೆ.

2. ಜಲತಳ ಪುರಾತತ್ವ ಶಾಸ್ತ್ರ(Marine Archaeology): ಜಲತಳ ಅಥವಾ ಸಮುದ್ರತಳ ಪುರಾತತ್ವಶಾಸ್ತ್ರ ಎಂದು ಕರೆಯಲಾಗುವ ಶಾಸ್ತ್ರವು ಸಮುದ್ರ ಹಾಗೂ ಸರೋವರಗಳ ತಳಭಾಗದಲ್ಲಿ ಕಂಡುಬರುವ ಪ್ರಾಚೀನ ನೆಲೆಗಳು ಹಾಗೂ ಮುಳುಗಡೆ ಹೊಂದಿರುವ ಹಡಗುಗಳನ್ನು ಗುರುತಿಸಿ ಅಧ್ಯಯನ ಮಾಡುತ್ತದೆ. ಜಲತಳ ಅಧ್ಯಯನವು ಪ್ರಾಚ್ಯವಸ್ತು ಅಧ್ಯಯನಕ್ಕಿಂತ ಭಿನ್ನವಾಗಿದೆ. ಇದು ಜಲತಳದ ನೆಲೆಯನ್ನು ಗುರುತಿಸುವ, ಉತ್ಖನನ ಮಾಡುವ ಹಾಗೂ ಪ್ರಾಚೀನ ಅವಶೇಷಗಳನ್ನು ದಾಖಲು ಮಾಡುವ ವಿಶಿಷ್ಟ ತಂತ್ರಗಳನ್ನು ʻʻ ಸ್ಕ್ಯೂಬಾ ಡೈವಿಂಗ್‌ʼʼ ಎಂಬ ತಂತ್ರಜ್ಞಾನದಿಂದ ರೂಪಿಸಿಕೊಳ್ಳಲಾಗಿದೆ. ಜಮೈಕಾದ ಪೋರ್ಟ್ ರಾಯಲ್ ಉತ್ಖನನಗಳು, ಉತ್ತರ ಸೈಪ್ರಸ್‌ನ ಕೈರೇನಿಯಾ ಹಡಗಿನ ಪುನಾರಚನೆ ಮುಂತಾದ ಸಾಧನೆಗಳು ಸ್ಕ್ಯೂಬಾ ಡೈವಿಂಗ್‌ ತಂತ್ರಜ್ಞಾನದಿಂದಲೇ ಪತ್ತೆ ಹಚ್ಚಲಾಯಿತು.

ಭಾರತದಲ್ಲಿಯೂ ಸಹ ಜಲತಳ ಪುರಾತತ್ವಶಾಸ್ತ್ರ ಇತ್ತೀಚೆಗೆ ಬೆಳಕಿಗೆ ಬಂದು ಅದರಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಇದಕ್ಕಾಗಿ ಗೋವಾದಲ್ಲಿ ʻʻಭಾರತೀಯ ಸಾಗರ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸಲಾಗಿದೆʼʼ. ಇದು ʻʻಸಾಗರ ಪುರಾತತ್ವ ಘಟಕದ ಮೂಲಕ ಎಸ್‌. ಆರ್‌. ರಾವ್‌ ಅವರ ಅಧ್ಯಕ್ಷತೆಯಲ್ಲಿ ಭಾರತದ ಕರಾವಳಿ ಗುಂಟ ಸಂಶೋಧನೆ ಮಾಡಿ ಸುಮಾರು 200 ಹಡಗುಗಳು ಸಮುದ್ರದಲ್ಲಿ ಮುಳುಗಡೆಯಾದ ಕುರಿತು ನಿಖರ ಮಾಹಿತಿಗಳನ್ನು ಕಲೆ ಹಾಕಲಾಯಿತು. ನಂತರ ಗುಜರಾತಿನ ಕರಾವಳಿಯಲ್ಲಿ ದ್ವಾರಕಾ ನಗರದ ಅವಶೇಷಗಳನ್ನು ಗುರುತಿಸಲಾಗಿದೆ. 1983ರಲ್ಲಿ ಸ್ಕ್ಯೂಬಾ ಡೈವಿಂಗ್‌ ಮೂಲಕ ದ್ವಾರಕ ಹಾಗೂ ಬೇಟ್‌ ದ್ವಾರಕಗಳಲ್ಲಿ ಜಲತಳ ಅನ್ವೇಷಣೆ ಮಾಡಲು ಅರಬ್ಬಿ ಸಮುದ್ರದಲ್ಲಿ ಸುಮಾರು 10ಮೀಟರ್ ಆಳದಲ್ಲಿ ಇಳಿದು ಕಟ್ಟಡಗಳು ಹಾಗೂ ಕೋಟೆ ಕೊತ್ತಲುಗಳನ್ನು ಕಂಡು ಹಿಡಿಯಲಾಯಿತು. ಪ್ರಾಚೀನ ಕಾಲದ ತ್ರಿಕೋನಾಕಾರದ ಕಲ್ಲಿನ ಲಂಗರುಗಳು ಇಲ್ಲಿ ಪತ್ತೆಯಾಗಿವೆ. ಇವುಗಳು ಕ್ರಿಸ್ತಪೂರ್ವ 14 ನೇ ಶತಮಾನದ ಸೈಪ್ರಸ್‌ ಹಾಗೂ ಸಿರಿಯಾದ ಲಂಗರುಗಳನ್ನು ಹೋಲುತ್ತವೆ. ಬೇಟ್‌ ದ್ವಾರಕಾದಲ್ಲಿ ಸಿಕ್ಕ ಉತ್ತರ ಹರಪ್ಪಾ ಕಾಲದ ಮುದ್ರೆಯ ಮೇಲೆ ಮೂರು ತಲೆಯ ಪ್ರಾಣಿಯ ಚಿತ್ರವಿದೆ. ಇದು ಪರ್ಶಿಯನ್‌ ಕೊಲ್ಲಿಯ ಬೆಹ್ರನ್‌ನಲ್ಲಿ   ದೊರಕಿರುವ ಮುದ್ರೆಗಳನ್ನು ಹೋಲುತ್ತದೆ. ಇಲ್ಲಿನ ಸಾಗರ ತಳದಲ್ಲಿ ದೊರೆತ ಮಣ್ಣಿನ ಪಾತ್ರೆಯ ಮೇಲೆ ವಿಕಸಿತ ಹರಪ್ಪ ನೆಲೆಯ ಲಿಪಿಯ ಚಿತ್ರವಿದೆ. ಈ ಎಲ್ಲಾ ಪುರಾತತ್ವ ವಸ್ತುಗಳು ಬೇಟ್‌ ದ್ವಾರಕಾ ನೆಲೆ ಕ್ರಿಸ್ತಪೂರ್ವ 1500 ರಷ್ಟು ಹಿಂದೆ ಅಸ್ತಿತ್ವದಲ್ಲಿದ್ದು ತದನಂತರ ಸಮುದ್ರ ಪಾತಳಿಯ ಹೆಚ್ಚಳದಿಂದ ಮುಳುಗಡೆಯಾಗಿರ ಬಹುದೆಂದು ಉಲ್ಲೇಖಿಸಲಾಗಿದೆ.

ಇದೇ ರೀತಿ ತಮಿಳುನಾಡು ಕಾವೇರಿಪಟ್ಲಂ ಪ್ರದೇಶದಲ್ಲಿ ಅನ್ವೇಷಣೆ ಮಾಡಿ ಅನೇಕ ಅವಶೇಷಗಳನ್ನು ಹೊರ ತಗೆಯಲಾಗಿದೆ.

ಆಳವಾಗಿಲ್ಲದ ಸಾಗರ ತಳದ ನೆಲೆಯನ್ನು ವ್ಯೋಮ್‌ ಛಾಯಾಚಿತ್ರದ ಸಹಾಯದಿಂದ ಕಂಡುಹಿಡಿಯ ಬಹುದಾಗಿದೆ. ಒಂದು ವೇಳೆ ಅಲ್ಲಿ ಹಡಗುಗಳು ಮುಳಗಡೆಯಾದ ಕುರುಹುಗಳು ಇದ್ದರೆ ವ್ಯೋಮ ಛಾಯಾಚಿತ್ರ ಅದನ್ನು ಸೆರೆಹಿಡಿದು ವರದಿ ಮಾಡುತ್ತದೆ. ಸಾಗರದ ಆಳ ಹೆಚ್ಚಿದಂತೆ ವ್ಯೋಮ ಛಾಯಾಚಿತ್ರವು ಕೆಲಸ ಮಾಡಲಾರದು.

ಸಾಗರದ ಆಳದಲ್ಲಿ ಮುಳುಗಡೆಯಾಗಿರುವ ವಸ್ತುಗಳನ್ನು ಕಂಡುಹಿಡಿಯಲು ಪ್ರತಿಧ್ವನಿ ನಿನಾದಕ ಮತ್ತು ಆಕಾಸ್ಟಿಕ್‌ ವ್ಯವಸ್ಥೆ ಎಂಬ ಎರಡು ವೈಜ್ಞಾನಿಕ ಸಾಧನಗಳು ಸಹಕಾರಿಯಾಗಿವೆ. ಹಡಗು ಮುಳುಗಡೆಯಾದ ಸ್ಥಳದ ಮೇಲೆ ಈ ಉಪಕರಣ ಹಾಯ್ದು ಹೋಗುವಾಗ ನಿನಾದಕ ಹೊರಡಿಸುವ ಪ್ರತಿಧ್ವನಿಯಲ್ಲಿ ತೀವ್ರ ಹೆಚ್ಚಳ ಕಂಡು ಬರುತ್ತದೆ. ಇದರಿಂದ ಸಮುದ್ರ ತಳದಲ್ಲಿನ ಹಡಗುಗಳ ಅವಶೇಷಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ.

ಸಮುದ್ರದಲ್ಲಿ ಪೂರ್ತಿ ಮುಳುಗಿಹೋಗಿರುವ ವಸ್ತುಗಳನ್ನು ಗುರುತಿಸುವುದಕ್ಕೆ ʻʻ ಓರ್‌ ಪ್ರೊ ಫೈಲರ್‌ʼʼ ಎಂಬ ಉಪಕರಣವನ್ನು ಬಳಕೆ ಮಾಡಲಾಗುತ್ತದೆ. ಈ ಉಪಕರಣವು ಎಷ್ಟು ಆಳದಲ್ಲಿ ಬೇಕಾದರೂ ತೂರಿಕೊಳ್ಳಬಲ್ಲದು. ಸಮುದ್ರದಲ್ಲಿ ಇನ್ನೂ ಹೆಚ್ಚಿನ ಆಳದಲ್ಲಿ ಮುಳುಗಿರುವ ವಸ್ತುಗಳನ್ನು ಪತ್ತೆ ಹಚ್ಚಲು ʻʻ ಬೂಮರ್‌ ಹಾಗೂ ಸ್ವಾರ್ಕರ್‌” ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇವುಗಳು ತೀವ್ರವಾಗಿ ಶೋಧ ಕಾರ್ಯವನ್ನು ಮಾಡಿ ವಸ್ತುಗಳನ್ನು ಕಂಡು ಹಿಡಿಯುತ್ತವೆ.

ಹಾಗೆಯೇ ʻಸೈಡ್ ಸ್ಕ್ಯಾನ್ ಸೋನಾರ್ʼ ಎಂಬ ಉಪಕರಣವು ಸಮುದ್ರದ ತಳದಲ್ಲಿನ ವಸ್ತುಗಳ ಆಕೃತಿಗಳನ್ನು ಮತ್ತು ಅವುಗಳ ವಿಸ್ತಾರಗಳನ್ನು ಕಂಡುಹಿಡಿಯುವ ಪ್ರಮುಖ ಉಪಕರಣವಾಗಿದೆ. ಸರ್ವೇಕ್ಷಣ ಮಾಡುವ ಪಥದ ಎರಡೂ ಬದಿಗಳಲ್ಲಿನ ಲಕ್ಷಣಗಳನ್ನು ಸಹ ದಾಖಲು ಮಾಡುತ್ತದೆ. ಮುಳುಗಡೆಯಾಗಿರುವ ಹಡಗುಗಳು, ಲಂಗರುಗಳು ಹಾಗೂ ಕಟ್ಟಡ ರಚನೆಯ ಅವಶೇಷಗಳನ್ನು ಇದರ ಸಹಾಯದಿಂದ ದಾಖಲು ಮಾಡಿಕೊಳ್ಳಲಾಗುತ್ತದೆ.

    ಭಾರತೀಯ  ಪ್ರತಿಮಾಶಾಸ್ತ್ರ

    ಭಾರತೀಯ ಪ್ರತಿಮಾಶಾಸ್ತ್ರ

    ಹಿಂದೂ ಪ್ರತಿಮಾಶಾಸ್ತ್ರವು ಪೂಜೆ ಅಥವಾ ಆಚರಣೆಗಾಗಿ ಉದ್ದೇಶಿಸಲಾದ ಧಾರ್ಮಿಕ ಚಿತ್ರಗಳ (ಐಕಾನ್‌ಗಳು) ಅಧ್ಯಯನ ಮತ್ತು ವ್ಯಾಖ್ಯಾನವಾಗಿದೆ. ಇದನ್ನು ಭಾರತೀಯ ಸಂಪ್ರದಾಯದಲ್ಲಿ ಅರ್ಕಾ, ಬೇರಾ, ವಿಗ್ರಹ ಮತ್ತು ಪ್ರತಿಮಾ ಮುಂತಾದ ಪದಗಳಿಂದ ಸೂಚಿಸಲಾಗುತ್ತದೆ. ಇದು ಕಲಾತ್ಮಕ ಸಾಧನೆ ಮತ್ತು ವಿವಿಧ ಧಾರ್ಮಿಕ ಪಂಥಗಳ ವಿಕಾಸದ ಹಿಂದಿನ ಮಾನಸಿಕ ಅಂಶಗಳ ಸ್ಪಷ್ಟ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ.

    1. ಐತಿಹಾಸಿಕ ವಿಕಸನ ಮತ್ತು ಮೂಲ

    ಸಿಂಧೂ ಕಣಿವೆಯ ಬೇರುಗಳು: ಹಿಂದೂ ಪ್ರತಿಮಾಶಾಸ್ತ್ರದ ಆರಂಭಿಕ ಬೇರುಗಳು ಸಿಂಧೂ ಕಣಿವೆ ನಾಗರಿಕತೆಯಲ್ಲಿ ಕಂಡುಬರುತ್ತವೆ. ಮೊಹೆಂಜೊ-ದಾರೊದಂತಹ ಸ್ಥಳಗಳಲ್ಲಿ ಪತ್ತೆಯಾದ ಮುದ್ರೆಗಳು ಯೋಗ ಭಂಗಿಯಲ್ಲಿ ಕುಳಿತಿರುವ ಮೂರು ತಲೆಯ ಕೊಂಬಿನ ಆಕೃತಿಯನ್ನು ಚಿತ್ರಿಸುತ್ತವೆ. ಇದನ್ನು ವಿದ್ವಾಂಸರು ಶಿವ-ಪಶುಪತಿಯ ಮೂಲಮಾದರಿ ಎಂದು ವ್ಯಾಖ್ಯಾನಿಸುತ್ತಾರೆ.

    ವೈದಿಕ ಕಾಲದಲ್ಲಿ: ವಿದ್ವಾಂಸರಲ್ಲಿ ಆರಂಭಿಕ ವೈದಿಕ ಅವಧಿಯಲ್ಲಿ ಚಿತ್ರ-ಪೂಜೆಯ ಅಸ್ತಿತ್ವದ ಬಗ್ಗೆ ಚರ್ಚೆಗಳಿದ್ದವು. ಆರಂಭಿಕ ವೈದಿಕ ಧರ್ಮವು ಪ್ರಾಥಮಿಕವಾಗಿ ಅನಿಕೋನಿಕ್(ಸಾಂಕೇತಿಕವಾಗಿದ್ದು) ಆಗಿದ್ದು ಸೂರ್ಯನನ್ನು ಪ್ರತಿನಿಧಿಸಲು ಅಗ್ನಿ, ಬಲಿಪೀಠ ಅಥವಾ ಚಕ್ರದಂತಹ ಚಿಹ್ನೆಗಳನ್ನು ಬಳಸಿರುವುದನ್ನು ಕಾಣುತ್ತೇವೆ. ಋಗ್ವೇದದ ಕೆಲವು ಭಾಗಗಳು ಇಂದ್ರ, ರುದ್ರ ಮತ್ತು ವರುಣನಂತಹ ದೇವತೆಗಳ ಮಾನವರೂಪದ ವಿವರಣೆಗಳನ್ನು ಸಹ  ಒಳಗೊಂಡಿವೆ.

    ಭಕ್ತಿಯುಗದಲ್ಲಿ: ಭಕ್ತಿ ಚಳುವಳಿಯ ಹೊರಹೊಮ್ಮುವಿಕೆಯೊಂದಿಗೆ ಪ್ರತಿಮಾಶಾಸ್ತ್ರವು ಪ್ರವರ್ಧಮಾನಕ್ಕೆ ಬಂದಿತು. ಇದು ಧ್ಯಾನಕ್ಕಾಗಿ ವೈಯಕ್ತಿಕ ಪ್ರತಿಮೆಗಳನ್ನು ಅಗತ್ಯವಾಗಿಸಿತು. ಈ ಅವಧಿಯಲ್ಲಿ ವಾಸುದೇವ-ಕೃಷ್ಣರಂತಹ ಅಸಮಾನ್ಯ ವ್ಯಕ್ತಿಗಳು ಅನನ್ಯ ಭಕ್ತಿಯನ್ನು ಪಡೆಯುವ ದೇವತೆಗಳಾಗಿ ಪರಿವರ್ತನೆಗೊಂಡರು.

    2. ಪ್ರಮುಖ ಗುಣಲಕ್ಷಣಗಳು ಮತ್ತು ಸಾಂಕೇತಿಕತೆ

    ಬಹು ಗುಣಲಕ್ಷಣಗಳು: ದೈವಿಕ ಶಕ್ತಿ ಮತ್ತು ಕೌಶಲ್ಯಗಳ ಸಮೂಹವನ್ನು ಪ್ರತಿನಿಧಿಸಲು ದೇವತೆಗಳನ್ನು ಆಗಾಗ್ಗೆ ಬಹು ತೋಳುಗಳು ಮತ್ತು ತಲೆಗಳೊಂದಿಗೆ ಚಿತ್ರಿಸಲಾಗುತ್ತದೆ. ಕೈಗಳ ಸಂಖ್ಯೆಯು ಸಾಮಾನ್ಯವಾಗಿ ದೇವರು ಹೊಂದಿರುವ ದೈವಿಕ ಗುಣಲಕ್ಷಣಗಳು ಅಥವಾ ಆಯುಧಗಳ ಸಂಖ್ಯೆಗೆ ಅನುಗುಣವಾಗಿರುತ್ತದೆ.

    ಮುದ್ರೆಗಳು(ಕೈಸನ್ನೆಗಳು):ಇವು “ಆಂತರಿಕ ಸಂಕಲ್ಪ”ವನ್ನು ವ್ಯಕ್ತಪಡಿಸುವ ಮೌಖಿಕವಲ್ಲದ ಸಂವಹನ ವಿಧಾನವಾಗಿ ಕಾರ್ಯನಿರ್ವಹಿಸುತ್ತವೆ.

    ಅಭಯಮುದ್ರೆ: “ನಿರ್ಭಯತೆಯ ಸನ್ನೆ”, ಬಲಗೈಯನ್ನು ಭುಜದ ಮಟ್ಟಕ್ಕೆ ಎತ್ತಿ ಅಂಗೈಯನ್ನು ಹೊರಮುಖವಾಗಿ ಇರಿಸಿ ಮಾಡಲಾಗುತ್ತದೆ, ಇದು ರಕ್ಷಣೆ ಮತ್ತು ಶಾಂತಿಯನ್ನು ಸೂಚಿಸುತ್ತದೆ. ಶಿವ ನಟರಾಜನ ರೂಪದಲ್ಲಿ, ಈ ಸನ್ನೆಯು ಭಕ್ತರಿಗೆ ಯಾವುದೇ ಭಯವಿಲ್ಲ ಎಂಬ ಭರವಸೆ ನೀಡುತ್ತದೆ.

    ವಾಹನಗಳು : ದೈವಿಕ ವ್ಯಕ್ತಿಗಳು ಹೆಚ್ಚಾಗಿ ನಿರ್ದಿಷ್ಟ ಪ್ರಾಣಿಗಳು ಅಥವಾ ಪಕ್ಷಿಗಳೊಂದಿಗೆ ಇರುತ್ತಾರೆ. ಅವು ಶಿವನ ವೃಷಭ (ನಂದಿ), ವಿಷ್ಣುವಿನ ಪಕ್ಷಿ (ಗರುಡ), ಅಥವಾ ಲಕ್ಷ್ಮಿ ದೇವತೆಯ ಕಮಲದಂತಹ ವಾಹನಗಳಾಗಿ ಅಥವಾ ಸಂಕೇತಗಳಾಗಿ ಕಾರ್ಯನಿರ್ವಹಿಸುತ್ತವೆ.

    ಅಲಂಕಾರ: ಜೈನ ಧರ್ಮದ ಸರಳ, ಧ್ಯಾನಸ್ಥ ವಿಗ್ರಹಗಳಿಗಿಂತ ಭಿನ್ನವಾಗಿ, ಹಿಂದೂ ಪ್ರತಿಮೆಗಳು ಆಭರಣಗಳು, ಕಿರೀಟಗಳು ಮತ್ತು ವಿಸ್ತಾರವಾದ ಉಡುಪಿನಿಂದ ಸಮೃದ್ಧವಾಗಿ ಅಲಂಕರಿಸಲ್ಪಟ್ಟಿವೆ. ಇದು ಬ್ರಹ್ಮಾಂಡದ ಪ್ರಬಲ ನಿಯಂತ್ರಕರಾಗಿ ಅವರ ಸ್ಥಾನಮಾನವನ್ನು ಪ್ರತಿಬಿಂಬಿಸುತ್ತದೆ.

    3. ಪ್ರಮುಖ ಸಾಂಕೇತಿಕ ರೂಪಗಳು

    ಶಿವ ನಟರಾಜ: “ನೃತ್ಯದ ಪ್ರಭು” ಎಂಬುದು ಶಿವನು ಆನಂದದ ನೃತ್ಯವನ್ನು (ಆನಂದ ತಾಂಡವ) ಪ್ರದರ್ಶಿಸುವುದನ್ನು ಚಿತ್ರಿಸುವ ಸಂಕೀರ್ಣ ಸಂಕೇತವಾಗಿದೆ.”ಶಿವ ತಾಂಡವ” ನೃತ್ಯ ಪ್ರಸಿದ್ಧವಾಗಿದೆ. ಶಿವನ ಇತರೇ ಲಕ್ಷಣಗಳು ಸಹ ಅಧ್ಯಯನಯೋಗ್ಯವಾಗಿದೆ. 

            * ಸೃಷ್ಟಿಯ ಲಯವನ್ನು ಸಾರುವ ಡಮರು.

            * ವಿಶ್ವ ಚಕ್ರದ ಅಂತ್ಯವನ್ನು ಪ್ರತಿನಿಧಿಸುವ ವಿನಾಶದ ಜ್ವಾಲೆ.

            * ವಿಶ್ವ ಜ್ಞಾನವನ್ನು ಸೂಚಿಸುವ ಮೂರನೇ ಕಣ್ಣು.(ಅತೀಂದ್ರಿಯ ಶಕ್ತಿ)

            * ಅಜ್ಞಾನ ಎಂಬ ರಾಕ್ಷಸನನ್ನು ಅವನ ಪಾದಗಳ ಕೆಳಗೆ ನಾಶ ಮಾಡುವುದು.

    ಸುದರ್ಶನ: ವಿಷ್ಣುವಿನ ಸುದರ್ಶನ ಚಕ್ರವು ಶತೃನಾಶದ ಸಂಕೇತವಾಗಿ ಚಿತ್ರಿಸಲಾಗಿದೆ. ಅವನನ್ನು ಆಗಾಗ್ಗೆ ಎಂಟು ಕೈಗಳಲ್ಲಿ ಚಕ್ರ, ಶಂಖ ಮತ್ತು ಗದೆಯಂತಹ ವಿವಿಧ ಆಯುಧಗಳನ್ನು ಹೊಂದಿರುವಂತೆ ಚಿತ್ರಿಸಲಾಗಿದ್ದು ಅವುಗಳ ಅದಲು ಬದಲಿಕೆ ವಿಷ್ಣುವನ್ನು ವಿವಿಧ ರೂಪ ಮತ್ತು ಹೆಸರುಗಳಲ್ಲಿ ಆರಾಧಿಸಲು ಕಾರಣವಾಗಿದೆ.

    ಶಕ್ತಿ ಪ್ರತಿಮೆಗಳು: ಇವುಗಳಲ್ಲಿ ದುರ್ಗಿ,ಚಾಮುಂಡಿಯಂತಹ ದೇವತೆಗಳು ಸೇರಿದ್ದಾರೆ. ಅವರನ್ನು ಹೆಚ್ಚಾಗಿ ಮಹಿಷಾಸುರಮರ್ದಿನಿ (ಮಹಿಷ = ಎಮ್ಮೆ ರಾಕ್ಷಸನ ಸಂಹಾರಕ) ಎಂದು ಚಿತ್ರಿಸಲಾಗುತ್ತದೆ.

    4. ಪವಿತ್ರ ರೇಖಾಗಣಿತ – ಮಂಡಲಗಳು ಮತ್ತು ಯಂತ್ರಗಳು

    ಮಾನವರೂಪಗಳನ್ನು ಮೀರಿ, ಹಿಂದೂ ಪ್ರತಿಮಾಶಾಸ್ತ್ರವು ವಿಶ್ವಕ್ರಮವನ್ನು ಪ್ರತಿನಿಧಿಸಲು ಜ್ಯಾಮಿತೀಯ ರೇಖಾಚಿತ್ರಗಳನ್ನು ಬಳಸುತ್ತದೆ.

    • ಮಂಡಲಗಳು: ವಿಶ್ವವನ್ನು ಪ್ರತಿನಿಧಿಸುವ ವೃತ್ತಾಕಾರದ ರೇಖಾಚಿತ್ರಗಳು ಮತ್ತು ದೇವತೆಗಳಿಗೆ ಪವಿತ್ರ ಸ್ಥಳವಾಗಿ ಕಾರ್ಯನಿರ್ವಹಿಸುತ್ತವೆ.
    • ಯಂತ್ರಗಳು: ಶಿವ ಮತ್ತು ಶಕ್ತಿಯ (ಪುರುಷ ಮತ್ತು ಸ್ತ್ರೀ) ಒಕ್ಕೂಟವನ್ನು ಪ್ರತಿನಿಧಿಸುವ ಒಂಬತ್ತು ತ್ರಿಕೋನಗಳು, “ಶ್ರೀ” ಯಂತ್ರ,

    5. ತಾಂತ್ರಿಕ ಮತ್ತು ಸಾಹಿತ್ಯಿಕ ಅಡಿಪಾಯಗಳು

    ಈ ಚಿತ್ರಗಳ ರಚನೆಯು ವಾಸ್ತುಶಾಸ್ತ್ರಗಳು, ಆಗಮಗಳು ಮತ್ತು ತಂತ್ರಗಳು ಎಂದು ಕರೆಯಲ್ಪಡುವ ಅಗಾಧವಾದ ಸಾಹಿತ್ಯದಿಂದ ರೂಪಿಸಲ್ಪಟ್ಟಿದೆ. ಈ ಪಠ್ಯಗಳು “ಐಕಾನೋಮೆಟ್ರಿಯ ನಿಯಮಗಳನ್ನು” ಒದಗಿಸುತ್ತವೆ. ವಿವಿಧ ಚಿತ್ರಗಳು ಪೂಜೆಗೆ ಸೂಕ್ತವೆಂದು ಖಚಿತಪಡಿಸಿಕೊಳ್ಳಲು ಅವುಗಳ ಅನುಪಾತಗಳು, ಅಳತೆಗಳು ಮತ್ತು ವಿಶಿಷ್ಟ ಚಿಹ್ನೆಗಳಿಗೆ ನಿರ್ದಿಷ್ಟ ನಿಯಮಗಳನ್ನು ನಿಗದಿಪಡಿಸುತ್ತವೆ.

    ಆರಂಭಿಕ ಬುದ್ಧ ಪ್ರತಿಮೆಗಳ ಮೇಲೆ ಗ್ರೀಕ್ ಶೈಲಿಗಳ ಪ್ರಭಾವ

        ಪ್ರಾಥಮಿಕವಾಗಿ ಗ್ರೀಕೋ-ಬೌದ್ಧ ಅಥವಾ ಗಾಂಧಾರ ಕಲೆ ಎಂದು ಕರೆಯಲ್ಪಡುವ ಆರಂಭಿಕ ಬುದ್ಧ ಪ್ರತಿಮೆಗಳ ಮೇಲಿನ ಗ್ರೀಕ್ ಪ್ರಭಾವವು ಭಾರತೀಯ ಉಪಖಂಡದ ವಾಯುವ್ಯ ಪ್ರದೇಶದಲ್ಲಿ ಪ್ರಾಚೀನ ಗ್ರೀಕ್ ಕಲೆ ಮತ್ತು ಬೌದ್ಧಧರ್ಮದ ನಡುವಿನ ಸಾಂಸ್ಕೃತಿಕ ಸಮನ್ವಯದಿಂದ ಉಂಟಾಯಿತು. ಈ ಸಮ್ಮಿಳನದಿಂದ ಮಾನವ ರೂಪದಲ್ಲಿ ಗೌತಮ ಬುದ್ಧನ ಕೆಲವು ಮೊದಲ ಪ್ರಾತಿನಿಧ್ಯಗಳನ್ನು ಕಾಣಬಹುದು. ಇದು ಬುದ್ಧನನ್ನು ಹೆಜ್ಜೆಗುರುತುಗಳು ಅಥವಾ ಬೋಧಿ ವೃಕ್ಷದಂತಹ ಚಿಹ್ನೆಗಳಿಂದ ಮಾತ್ರ ಪ್ರತಿನಿಧಿಸುವ ಬೌದ್ಧ ಧರ್ಮದ ಆರಂಭಿಕ ಸಾಂಕೇತಿಕ ಅವಧಿಯ ಕಾಲಘಟ್ಟವನ್ನು ಕೊನೆಗೊಳಿಸಿತು.

    1. ವಾಸ್ತವಿಕ ಕಲಾತ್ಮಕ ಶೈಲಿ

    • ಆದರ್ಶವಾದಿ ವಾಸ್ತವಿಕತೆ: ಗಾಂಧಾರ ಕಲೆಯು ಹೆಲೆನಿಸ್ಟಿಕ್ ಕಲೆಯ ವಿಶಿಷ್ಟವಾದ ಬಲವಾದ ಆದರ್ಶವಾದಿ ವಾಸ್ತವಿಕತೆ ಮತ್ತು ಇಂದ್ರಿಯ ವಿವರಣೆಗಳನ್ನು ಅಳವಡಿಸಿಕೊಂಡಿದೆ.
    • ಮುಖದ ವೈಶಿಷ್ಟ್ಯಗಳು: ಈ ಆರಂಭಿಕ ಪ್ರತಿಮೆಗಳ ಮುಖಗಳನ್ನು “ಅಳತೆ ಮಾಡಿದ ಗುಣಮಟ್ಟ” ಮತ್ತು ಬಲವಾದ ಕಲಾತ್ಮಕ ವಾಸ್ತವಿಕತೆಯೊಂದಿಗೆ ನಿರೂಪಿಸಲಾಗಿದೆ.
    1. ಉಡುಪು ಮತ್ತು ದೈಹಿಕ ನಿಲುವು
    • ಹಿಮೇಷನ್(ಗ್ರೀಕ್‌ ನಿಲುವಂಗಿ-Himation) ಅನುಕರಣೆ: ಆರಂಭಿಕ ಪ್ರತಿಮೆಗಳಲ್ಲಿ, ಬುದ್ಧನನ್ನು ಹೆಚ್ಚಾಗಿ ಗ್ರೀಕ್ ರಾಜನಾಗಿ ಚಿತ್ರಿಸಲಾಗಿದೆ. ಇದು ಎರಡೂ ಭುಜಗಳನ್ನು ಆವರಿಸುವ ಹಗುರವಾದ, ಟೋಗಾ ತರಹದ ಅಲೆಅಲೆಯಾದ ನಿಲುವಂಗಿಯಾಗಿದೆ.
    • ಕಾಂಟ್ರಾಪೋಸ್ಟೊ(Contrapposto) ನಿಲುವು: ಶಿಲ್ಪಗಳು ಹೆಚ್ಚಾಗಿ ಕಾಂಟ್ರಾಪೋಸ್ಟೊ ನಿಲುವನ್ನು ಬಳಸುತ್ತಿದ್ದವು ಇದು ಗ್ರೀಕ್ ಪ್ರತಿಮೆಯಲ್ಲಿ ಸಾಮಾನ್ಯವಾಗಿ ತೂಕವನ್ನು ಒಂದು ಕಾಲಿನ ಮೇಲೆ ವರ್ಗಾಯಿಸುವ ವಾಸ್ತವಿಕ ನಿಂತಿರುವ ಭಂಗಿಯಾಗಿದೆ.
    1. ಕೂದಲು ಮತ್ತು ಪ್ರತಿಮಾಶಾಸ್ತ್ರದ ಗುಣಲಕ್ಷಣಗಳು
    • ಮೆಡಿಟರೇನಿಯನ್ ಕೇಶವಿನ್ಯಾಸ: ಪ್ರತಿಮೆಗಳು ಶೈಲೀಕೃತ ಮೆಡಿಟರೇನಿಯನ್ ಸುರುಳಿಯಾಕಾರದ ಕೂದಲು ಮತ್ತು ಮೇಲ್ಭಾಗದ ಗಂಟು (ಉಷ್ನಿಶಾ) ಅನ್ನು ಒಳಗೊಂಡಿತ್ತು, ಇದು ಸ್ಪಷ್ಟವಾಗಿ ಬೆಲ್ವೆಡೆರೆ ಅಪೊಲೊ(Belvedere Apollo)ಎಂಬ ಗ್ರೀಕಿನ ಸುಮಾರು ಕ್ರಿ.ಪೂ. 330ರ ಅಮೃತ ಶಿಲೆಯ ವಿಗ್ರಹದಿಂದ ಪ್ರಭಾವಿತವಾಗಿದೆ.
    • ಪ್ರಭಾವಲಯ: ಬುದ್ಧನ ತಲೆಯ ಸುತ್ತಲಿನ ಪ್ರಭಾವಲಯವು ದೈವತ್ವವನ್ನು ಸೂಚಿಸುತ್ತದೆ, ಇದನ್ನು ಗ್ರೀಕ್ ಪ್ರಭಾವದ ಅಂಶವೆಂದು ಪರಿಗಣಿಸಲಾಗುತ್ತದೆ.
    1. ಗ್ರೀಕ್ ದೇವತೆಗಳು ಮತ್ತು ಲಕ್ಷಣಗಳ ಸಂಯೋಜನೆ

    ಇತರ ದೇವತೆಗಳು: ಅಟ್ಲಾಸ್‌ನಂತಹ ಗ್ರೀಕ್ ದೇವತೆಗಳನ್ನು ಬೌದ್ಧ ಸ್ಮಾರಕಗಳಿಗೆ ರಕ್ಷಕಭಟರಾಗಿ ಚಿತ್ರಿಸಲಾಗಿದೆ ಮತ್ತು ಗ್ರೀಕ್ ಗಾಳಿ ದೇವರು “ಬೋರಿಯಾಸ್” ಗಾಳಿ ದೇವತೆಗಳ ಆರಂಭಿಕ ಬೌದ್ಧ ಪ್ರಾತಿನಿಧ್ಯಗಳ ಮೇಲೆ ಪ್ರಭಾವ ಬೀರಿದೆ. ವಿಶೇಷವಾಗಿ ಬುದ್ಧನನ್ನು ಗ್ರೀಕಿನ ಪ್ರಸಿದ್ಧ ದೇವರಾದ ಅಪೋಲೊ ರೀತಿಯಲ್ಲಿ  ಚಿತ್ರಿಸಿರುವುದನ್ನು ಕಾಣಬಹುದು.

    ಈ ಪ್ರಭಾವಗಳು ಕ್ರಿಸ್ತಪೂರ್ವ 1 ನೇ ಶತಮಾನ ಮತ್ತು ಕ್ರಿಸ್ತಶಕ 1 ನೇ ಶತಮಾನದ ನಡುವೆ, ವಿಶೇಷವಾಗಿ ಕುಶಾನ ಸಾಮ್ರಾಜ್ಯದ ಅವಧಿಯಲ್ಲಿ, ಗಾಂಧಾರ ಶೈಲಿಯು ಶಿಲ್ಪಕಲೆಯ ಅತ್ಯಾಧುನಿಕತೆಯ ಉನ್ನತ ಮಟ್ಟವನ್ನು ತಲುಪಿತು.

    ವಿಭಿನ್ನ ನಂಬಿಕೆಗಳಲ್ಲಿ ಅಭಯಮುದ್ರೆಯ ಪರಿಕಲ್ಪನೆ

    ಅಭಯಮುದ್ರೆ (ಸಂಸ್ಕೃತದಲ್ಲಿ “ನಿರ್ಭಯತೆಯ ಸನ್ನೆ”) ಎಂಬುದು ವಿವಿಧ ಭಾರತೀಯ ಧರ್ಮಗಳಲ್ಲಿ ರಕ್ಷಣೆ, ಭರವಸೆ, ಸುರಕ್ಷತೆ ಮತ್ತು ಭಯವನ್ನು ಹೋಗಲಾಡಿಸುವಿಕೆಯನ್ನು ಪ್ರತಿನಿಧಿಸಲು ಬಳಸಲಾಗುವ ಪವಿತ್ರ ಹಸ್ತ ಸನ್ನೆಯಾಗಿದೆ. ದೈಹಿಕವಾಗಿ, ಇದನ್ನು ಬಲಗೈಯನ್ನು ಭುಜದ ಎತ್ತರಕ್ಕೆ ಎತ್ತಿ, ಮೊಣಕೈಯನ್ನು ಬಗ್ಗಿಸಿ, ಅಂಗೈಯನ್ನು ಹೊರಮುಖವಾಗಿ ಬೆರಳುಗಳನ್ನು ಚಾಚಿರುವಂತೆ ಚಿತ್ರಿಸಲಾಗಿರುತ್ತದೆ.

    ಮುದ್ರೆಯು ವಿವಿಧ ನಂಬಿಕೆಗಳಲ್ಲಿ ರಕ್ಷಣೆಯನ್ನು ಈ ಕೆಳಗಿನ ವಿಧಾನಗಳಲ್ಲಿ ಪ್ರತಿನಿಧಿಸುತ್ತದೆ:

    ಹಿಂದೂ ಧರ್ಮ

    ಶಿವ ನಟರಾಜ: ನೃತ್ಯಭಂಗಿಯಲ್ಲಿ ಶಿವನ ಪ್ರತಿಮಾರೂಪವನ್ನು ಕಾಣುತ್ತೇವೆ. ಅವನ ಎರಡನೇ ಬಲಗೈ ಅಭಯಮುದ್ರೆಯನ್ನು ಮಾಡುತ್ತದೆ. ಈ ಸನ್ನೆಯು ಆರಾಧಕನಿಗೆ ಯಾವುದೇ ಭಯವಿಲ್ಲ ಎಂದು ಸೂಚಿಸುತ್ತದೆ ಮತ್ತು ನೀತಿಯ ಮಾರ್ಗವನ್ನು (ಧರ್ಮ) ಅನುಸರಿಸುವವರಿಗೆ ದುಷ್ಟ ಮತ್ತು ಅಜ್ಞಾನ ಎರಡರಿಂದಲೂ ದೈವಿಕ ರಕ್ಷಣೆಯನ್ನು ನೀಡುವ ಭಂಗಿಯಾಗಿರುತ್ತದೆ.

    • ಸೂರ್ಯ: ಸೂರ್ಯ ದೇವರ ನಾಲ್ಕು ಕೈಗಳ ಚಿತ್ರಗಳನ್ನು ಕೆಲವೊಮ್ಮೆ ಅಭಯ ಭಂಗಿಯಲ್ಲಿ ಚಿತ್ರಿಸಲಾಗುತ್ತದೆ, ಇದು ರಕ್ಷಣಾತ್ಮಕ ದೇವತೆಯಾಗಿ ಅವನ ಪಾತ್ರವನ್ನು ಒತ್ತಿಹೇಳುತ್ತದೆ.
    • ದೈವಿಕ ಗುಣಲಕ್ಷಣಗಳು: ಹಿಂದೂ ಪ್ರತಿಮಾಶಾಸ್ತ್ರದಲ್ಲಿ, ಮುದ್ರೆಯನ್ನು ಹೆಚ್ಚಾಗಿ ದೇವತೆಯ ಸ್ವರೂಪ ಮತ್ತು ಶಕ್ತಿಯನ್ನು ಸೂಚಿಸಲು ನಿರ್ದಿಷ್ಟ ಸಾಂಕೇತಿಕ ಆಯುಧಗಳೊಂದಿಗೆ (ಆಯುಧಗಳು) ಜೋಡಿಸಲಾಗುತ್ತದೆ.

    ಬೌದ್ಧಧರ್ಮ

    • ಆನೆಯ ದಂತಕಥೆ: ಸಂಪ್ರದಾಯದ ಪ್ರಕಾರ, ಗೌತಮ ಬುದ್ಧನು ತನ್ನ ಅಸೂಯೆ ಪಟ್ಟ ಸೋದರಸಂಬಂಧಿ ದೇವದತ್ತನು ಅವನನ್ನು ಕೊಲ್ಲಲು ಕಳುಹಿಸಿದ್ದ ಉಗ್ರಗಾಮಿ ಆನೆಯನ್ನು ನಿಗ್ರಹಿಸಲು ಈ ಸನ್ನೆಯನ್ನು ಬಳಸಿದನು. ಆನೆ ಸಮೀಪಿಸುತ್ತಿದ್ದಂತೆ, ಬುದ್ಧನು ಅಭಯಮುದ್ರೆಯನ್ನು ಪ್ರದರ್ಶಿಸಿದನು, ಅದು ಪ್ರಾಣಿಯನ್ನು ತಕ್ಷಣವೇ ಶಾಂತಗೊಳಿಸಿತು. ಇದು ಶಾಂತಿಯ ಶಕ್ತಿ ಮತ್ತು ಭಯದ ಅನುಪಸ್ಥಿತಿಯನ್ನು ಸಂಕೇತಿಸುತ್ತದೆ.
    • ಅಮೋಘಸಿದ್ಧಿ: ಈ ಮುದ್ರೆಯು ಐದನೇ ಧ್ಯಾನಿ ಬುದ್ಧ ಮತ್ತು ಕರ್ಮದ ಪ್ರಭು ಅಮೋಘಸಿದ್ಧಿಯ ನಿರ್ದಿಷ್ಟ ಲಕ್ಷಣವಾಗಿದೆ. ಈ ಸಂದರ್ಭದಲ್ಲಿ, ಇದು ಅಸೂಯೆಯ ಭ್ರಮೆಯನ್ನು ಸಾಧನೆಯ ಬುದ್ಧಿವಂತಿಕೆಯಾಗಿ ಪರಿವರ್ತಿಸುವುದನ್ನು ಪ್ರತಿನಿಧಿಸುತ್ತದೆ.
    • ಪ್ರಾದೇಶಿಕ ವ್ಯತ್ಯಾಸಗಳು:
    • ಗಾಂಧಾರ ಕಲೆಯಲ್ಲಿ, ಧರ್ಮೋಪದೇಶದ ಕ್ರಿಯೆಯನ್ನು ಸೂಚಿಸಲು ಈ ಸನ್ನೆಯನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು.
    • ಥೈಲ್ಯಾಂಡ್ ಮತ್ತು ಲಾವೋಸ್‌ನಲ್ಲಿ, ಇದು ʼನಡೆಯುವ ಬುದ್ಧʼನೊಂದಿಗೆ ಸಂಬಂಧಿಸಿದೆ. ಅವರನ್ನು ಕೆಲವೊಮ್ಮೆ ಎರಡೂ ಕೈಗಳಿಂದ ಎರಡು ಅಭಯಮುದ್ರೆಯಲ್ಲಿ ತೋರಿಸಲಾಗುತ್ತದೆ.
    • ತೇರವಾದ ​​ಬೌದ್ಧಧರ್ಮದಲ್ಲಿ, ಇದನ್ನು ಸಾಮಾನ್ಯವಾಗಿ ಬಲಗೈಯನ್ನು ಮೇಲಕ್ಕೆತ್ತಿ ಎಡಗೈಯನ್ನು ನೈಸರ್ಗಿಕವಾಗಿ ಪಕ್ಕಕ್ಕೆ ನೇತಾಡುವಂತೆ ತೋರಿಸಲಾಗುತ್ತದೆ.

    ಜೈನ ಧರ್ಮ ಮತ್ತು ಸಿಖ್ ಧರ್ಮ

    ಜೈನ ಧರ್ಮ ಮತ್ತು ಸಿಖ್ ಧರ್ಮ ಎರಡರ ಧಾರ್ಮಿಕ ಚಿತ್ರಣಗಳಲ್ಲಿ ಚಿತ್ರಿಸಲಾದ ಆರಂಭಿಕ ಮುದ್ರೆಗಳಲ್ಲಿ ಅಭಯಮುದ್ರೆಯೂ ಒಂದು ಎಂದು ಗುರುತಿಸಲಾಗಿದೆ. ಜೈನ ಧರ್ಮದಲ್ಲಿ, ವಿಗ್ರಹಗಳನ್ನು ಹೆಚ್ಚಾಗಿ ಅವುಗಳ ಸರಳತೆ ಮತ್ತು ಧ್ಯಾನಸ್ಥ ಭಂಗಿಗಳಿಂದ (ಪದ್ಮಾಸನ ಅಥವಾ ಕಾಯೋತ್ಸರ್ಗ) ನಿರೂಪಿಸಲಾಗಿದ್ದರೂ, ಅಭಯಮುದ್ರೆಯು ಆಧ್ಯಾತ್ಮಿಕ ಶಕ್ತಿ ನೀಡುವ ದೈವಿಕ ಭರವಸೆಯ ಗುರುತಿಸಲ್ಪಟ್ಟ ಸಂಕೇತವಾಗಿ ಉಳಿದಿದೆ.

    ಐತಿಹಾಸಿಕ ಮತ್ತು ಜಾತ್ಯತೀತ ಬೇರುಗಳು

    ನಿರ್ದಿಷ್ಟ ಧಾರ್ಮಿಕ ಸಿದ್ಧಾಂತಗಳನ್ನು ಮೀರಿ, ಈ ಸನ್ನೆಯು ಇತಿಹಾಸಪೂರ್ವ ಕಾಲದಲ್ಲಿ ಸ್ನೇಹ ಮತ್ತು ಒಳ್ಳೆಯ ಉದ್ದೇಶಗಳ ಸಂಕೇತವಾಗಿ ಹುಟ್ಟಿಕೊಂಡಿರಬಹುದು. ಅಪರಿಚಿತನ ಕಡೆಗೆ ನಿರಾಯುಧ ಕೈಯನ್ನು ಎತ್ತುವುದು ಒಬ್ಬ ವ್ಯಕ್ತಿಯು ಯಾವುದೇ ಶಸ್ತ್ರಾಸ್ತ್ರಗಳನ್ನು ಹೊಂದಿರುವುದಿಲ್ಲ ಮತ್ತು ಶಾಂತಿಯನ್ನು ಪ್ರಸ್ತಾಪಿಸುತ್ತಾನೆ ಎಂಬುದರ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ.

    ಪ್ರತಿಮಾಶಾಸ್ತ್ರ

    ಪ್ರತಿಮಾಶಾಸ್ತ್ರ

    1. ಅರ್ಥ

    ಇಂಗ್ಲೀಷಿನಲ್ಲಿ ಪ್ರತಿಮಾಶಾಸ್ತ್ರವನ್ನು ʼಐಕನೋಗ್ರಫಿʼ ಎಂದು ಕರೆಯಲಾಗುತ್ತದೆ. ʼಐಕಾನ್ʼ ಎಂಬ ಪದವು ಗ್ರೀಕ್ ‘ಐಕಾನ್’ ನಿಂದ ಬಂದಿದೆ.  ʼಐಕಾನ್ʼ ಎಂಬ ಪದವು ಚಿತ್ರಕಲೆ, ಶಿಲ್ಪಕಲೆ ಅಥವಾ ಮೊಸಾಯಿಕ್‌ನಲ್ಲಿ ದೇವತೆ ಅಥವಾ ಸಂತನನ್ನು ಪ್ರತಿನಿಧಿಸುವ ಆಕೃತಿಯನ್ನು ಸೂಚಿಸುತ್ತದೆ.

    ಭಾರತೀಯ ಸಂಪ್ರದಾಯದಲ್ಲಿ, ಐಕಾನ್‌ಗಳನ್ನು ಅರ್ಕಾ, ಬೇರಾ, ವಿಗ್ರಹ, ಪ್ರತಿಮಾ ಮತ್ತು ವಿಂಬಾ ಮುಂತಾದ ಪದಗಳಿಂದ ಸೂಚಿಸಲಾಗುತ್ತದೆ.

    ಪ್ರತಿಮಾಶಾಸ್ತ್ರವು ಈ ಧಾರ್ಮಿಕ ಚಿತ್ರಗಳ ವ್ಯಾಖ್ಯಾನ ಮತ್ತು ಗುಣಲಕ್ಷಣಗಳನ್ನು ನಿರ್ವಹಿಸುವ ಅಧ್ಯಯನದ ಶಾಖೆಯಾಗಿದೆ. ವಿಶಾಲ ಅರ್ಥದಲ್ಲಿ, ಇದು ಧಾರ್ಮಿಕ ಕಲೆಯ ವ್ಯಾಖ್ಯಾನಾತ್ಮಕ ಅಂಶವನ್ನು ಸೂಚಿಸುತ್ತದೆ. ಇದು ಸಂಸ್ಕೃತಿಯ ಧಾರ್ಮಿಕ ಜೀವನ ಮತ್ತು ಆಧ್ಯಾತ್ಮಿಕ ವಿಕಾಸವನ್ನು ಪ್ರತಿಬಿಂಬಿಸುತ್ತದೆ.

    2. ಪರಿಚಯ

    ಭಾರತೀಯ ಪ್ರತಿಮಾಶಾಸ್ತ್ರವು ಭಾರತೀಯ ಉಪಖಂಡದ ಧಾರ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಆಳವಾಗಿ ಬೇರೂರಿದೆ. ಇದು ಧಾರ್ಮಿಕ ಪಂಥಗಳ ಮೂಲ ಮತ್ತು ವಿಕಾಸದ ಹಿಂದಿನ ಕಲಾತ್ಮಕ ಸಾಧನೆಗಳು ಮತ್ತು ಮಾನಸಿಕ ಅಂಶಗಳ ಸ್ಪಷ್ಟವಾದ ಸೂಚಿಯನ್ನು ಒದಗಿಸುತ್ತದೆ. ಪ್ರತಿಮಾಶಾಸ್ತ್ರದ ಅಧ್ಯಯನವು ಸಂಶೋಧಕರಿಗೆ ಧಾರ್ಮಿಕ ಆಚರಣೆಗಳು, ಪುರಾಣಗಳಲ್ಲಿನ ಕ್ರಮೇಣ ಬದಲಾವಣೆಗಳು ಮತ್ತು ಪ್ರತಿಸ್ಪರ್ಧಿ ಪಂಥಗಳ ನಡುವಿನ ಸಮನ್ವಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ, ಉದಾಹರಣೆಗೆ ಶಿವ ಮತ್ತು ವಿಷ್ಣು (ಹರಿ-ಹರ) ಅವರ ವೈಶಿಷ್ಟ್ಯಗಳನ್ನು ಸಂಯೋಜಿಸುವ ಚಿತ್ರಗಳು.

    3. ಭಾರತೀಯ ಪ್ರತಿಮಾಶಾಸ್ತ್ರದ ಮೂಲ

    • ಆರಂಭಿಕ ಅವಧಿ: ಆರಂಭಿಕ ಬೇರುಗಳು ಸಿಂಧೂ ಕಣಿವೆ ನಾಗರಿಕತೆಯಲ್ಲಿ ಕಂಡುಬರುತ್ತವೆ, ಅಲ್ಲಿ ಮುದ್ರೆಗಳು ಮಾನವ ಮತ್ತು ಪ್ರಾಣಿಗಳ ಆಕೃತಿಗಳನ್ನು ಚಿತ್ರಿಸುತ್ತವೆ. ಇದರಲ್ಲಿ ಯೋಗ ಭಂಗಿಯಲ್ಲಿ ಕುಳಿತಿರುವ ಮೂರು ಮುಖದ ಕೊಂಬಿನ ದೇವತೆಯೂ ಸೇರಿದೆ. ಪಶುಪತಿ ಎಂದು ಕರೆಯಲ್ಪಡುವ ಇದನ್ನು ಹೆಚ್ಚಾಗಿ ಶಿವನ ಮೂಲ ಮಾದರಿ ಎಂದು ಅರ್ಥೈಸಲಾಗುತ್ತದೆ.
    • ವೈದಿಕ ಕಾಲದಲ್ಲಿ: ಆರಂಭಿಕ ವೈದಿಕ ಯುಗದ ಚಿತ್ರ-ಪೂಜೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಕೆಲವು ವಿದ್ವಾಂಸರು ಧರ್ಮವು ಮೂಲತಃ ಅನಿಕೋನಿಕ್(Aniconic-ಸಾಂಕೇತಿಕ) ಆಗಿತ್ತು. ಅಂದರೆ ಮಾನವ ರೂಪಗಳಿಗಿಂತ ಚಿಹ್ನೆಗಳನ್ನು ಬಳಸುತ್ತಿದ್ದರು. ಆದರೆ ಋಗ್ವೇದದಲ್ಲಿ ಇಂದ್ರ, ರುದ್ರ ಮತ್ತು ವರುಣನಂತಹ ದೇವತೆಗಳ ಮಾನವರೂಪದ ವಿವರಣೆಗಳನ್ನು ಆರಂಭಿಕ ಪ್ರತಿಮಾಶಾಸ್ತ್ರೀಯ ಸಂಪ್ರದಾಯದ ಪುರಾವೆಯಾಗಿ ಉಲ್ಲೇಖಿಸುತ್ತಾರೆ.
    • ಭಕ್ತಿ ಯುಗದಲ್ಲಿ: ನಂತರದ ವೈದಿಕ ಮತ್ತು ಮಹಾಕಾವ್ಯ ಅವಧಿಗಳಲ್ಲಿ ಭಕ್ತಿ ಚಳುವಳಿಯ ಬೆಳವಣಿಗೆಯು ಧ್ಯಾನ ಮತ್ತು ಪೂಜೆಗೆ ವೈಯಕ್ತಿಕ ಪ್ರತಿಮೆಗಳ ಅಗತ್ಯವನ್ನು ಉಂಟುಮಾಡಿತು. ಈ ಬದಲಾವಣೆಯು ಅಮೂರ್ತ ಪರಿಕಲ್ಪನೆಗಳಿಂದ ಧಾರ್ಮಿಕ ಮೂರ್ತ ಚಿತ್ರಗಳ ಪರಿವರ್ತನೆಗೆ ಕಾರಣವಾಯಿತು.

    ಗ್ರೀಕ್ ಪ್ರತಿಮಾಶಾಸ್ತ್ರದಲ್ಲಿ (Greek iconography), ದೃಶ್ಯ ಚಿಹ್ನೆಗಳು ದೇವರುಗಳ ಸಂಕೀರ್ಣ ವ್ಯಕ್ತಿತ್ವ ಮತ್ತು ಅವರ ಆಳ್ವಿಕೆಯ ಕ್ಷೇತ್ರಗಳನ್ನು ಗುರುತಿಸಲು ಸಂಕ್ಷಿಪ್ತ ಮಾರ್ಗಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಪ್ರೇಕ್ಷಕರಿಗೆ ದೈವಿಕ ವ್ಯಕ್ತಿಗಳನ್ನು ತಕ್ಷಣವೇ ಗುರುತಿಸಲು ಸಹಾಯ ಮಾಡುತ್ತದೆ. ಈ ಸಂಪ್ರದಾಯವು ಇಲ್ಲಿರುವ ಚಿತ್ರದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ; ಕೇಂದ್ರದಲ್ಲಿ ಜ಼್ಯೂಸ್ (Zeus) ಮತ್ತು ಹೆರಾ (Hera) ತಮ್ಮ ಚಿನ್ನದ ಸಿಂಹಾಸನದ ಮೇಲೆ ಕುಳಿತಿದ್ದಾರೆ. ಜ಼್ಯೂಸ್ ತನ್ನ ರಾಜಗಾಂಭೀರ್ಯದ ಹದ್ದು ಇರುವ ರಾಜದಂಡದಿಂದ ಗುರುತಿಸಲ್ಪಟ್ಟರೆ, ಹೆರಾ ತನ್ನ ಪಾದದ ಬಳಿ ಇರುವ ನವಿಲಿನಿಂದ ಗುರುತಿಸಲ್ಪಡುತ್ತಾಳೆ. ಅವರ ಸುತ್ತಲೂ ಇರುವ ಇತರ ಒಲಿಂಪಿಯನ್ ದೇವರುಗಳು ತಮ್ಮದೇ ಆದ ವಿಶಿಷ್ಟ “ಲಕ್ಷಣಗಳ” ಮೂಲಕ ಗುರುತಿಸಲ್ಪಡುತ್ತಾರೆ: ಪೊಸೈಡನ್ (Poseidon) ತನ್ನ ತ್ರಿಶೂಲವನ್ನು ಹಿಡಿದಿದ್ದಾನೆ, ಅಥೇನಾ (Athena) ತನ್ನ ವಿಶಿಷ್ಟವಾದ ಕೊರಿಂಥಿಯನ್ ಶಿರಸ್ತ್ರಾಣವನ್ನು ಧರಿಸಿದ್ದಾಳೆ ಮತ್ತು ಹರ್ಮ್ಸ್ (Hermes) ತನ್ನ ರೆಕ್ಕೆಗಳಿರುವ ಪಾದರಕ್ಷೆಗಳು ಹಾಗೂ ಕ್ಯಾಡುಸಿಯಸ್ (caduceus) ದಂಡದಿಂದ ಗುರುತಿಸಲ್ಪಡುತ್ತಾನೆ.

    4. ಪ್ರತಿಮಾಶಾಸ್ತ್ರದ ಬೆಳವಣಿಗೆ

    • ಸಾಹಿತ್ಯ ನಿಯಮಗಳು: ಪ್ರತಿಮಾಶಾಸ್ತ್ರದ ಬೆಳವಣಿಗೆಯು ವಾಸ್ತುಶಾಸ್ತ್ರಗಳು, ಆಗಮಗಳು ಮತ್ತು ತಂತ್ರಗಳು ಸೇರಿದಂತೆ ಅಪಾರ ಸಾಹಿತ್ಯದಿಂದ ಮಾರ್ಗದರ್ಶಿಸಲ್ಪಟ್ಟಿತು. ಇದು ಶಿಲ್ಪಗಳ ಅಥವಾ ವಿಗ್ರಹಗಳ ನಿರ್ಮಾಣಕ್ಕೆ ವಿಭಿನ್ನ ನಿಯಮಗಳನ್ನು ನಿಗದಿಪಡಿಸಿತು.
    • ಪುರಾತತ್ತ್ವ ಶಾಸ್ತ್ರ ಮೂಲಗಳು: ಆರಂಭಿಕ ಸ್ಥಳೀಯ ನಾಣ್ಯಗಳು (ಸುಮಾರು ಕ್ರಿ.ಪೂ. 600) ಚಿಹ್ನೆಗಳನ್ನು ಒಳಗೊಂಡಿದ್ದವು. ಅದು ಅಂತಿಮವಾಗಿ ಸ್ಪಷ್ಟ ಪ್ರತಿಮಾಶಾಸ್ತ್ರವಾಗಿ ವಿಕಸನಗೊಂಡಿತು.
    • ಪಂಥೀಯ ಬೆಳವಣಿಗೆ: ವೈಷ್ಣವ ಧರ್ಮ ಮತ್ತು ಶೈವ ಧರ್ಮದಂತಹ ಧಾರ್ಮಿಕ ಪಂಥಗಳು ವಿಸ್ತರಿಸಿದಂತೆ, ಪ್ರತಿಮಾಶಾಸ್ತ್ರವು ಹೆಚ್ಚು ಸಂಕೀರ್ಣವಾಯಿತು. ದೈವಿಕ ಶಕ್ತಿ ಮತ್ತು ವಿವಿಧ ಪೌರಾಣಿಕ ಕಥೆಗಳನ್ನು ಹಾಗೂ ಗುಣಲಕ್ಷಣಗಳನ್ನು ಪ್ರತಿನಿಧಿಸಲು ವಿಗ್ರಹಗಳಿಗೆ ಅನೇಕ ಕೈ ಮತ್ತು ತಲೆಗಳನ್ನು ಅಳವಡಿಸಲಾಯಿತು.

    5.  ಹೊರದೇಶದ ಪ್ರಭಾವ

    ಭಾರತೀಯ ಶಿಲ್ಪಗಳ ಮೇಲೆ ಹೊರದೇಶದ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ. ಭಾರತದ ಮೇಲೆ ದಾಳಿ ಮಾಡಿದ ಅಲೆಗ್ಸಾಂಡರ್‌ ಜೊತೆಗೆ ಅನೇಕ ಶಿಲ್ಪಿಗಳು ಸಹ ಬಂದಿರಬಹುದಾದ ಸಾಧ್ಯತೆಗಳಿದ್ದು, ಅವರುಗಳು ಇಲ್ಲಿಯೇ ನೆಲಸಿ ತಮ್ಮ ರಚನೆಗಳ ಮೂಲಕ ಹೊಸದಾದ ಪರಂಪರೆಯನ್ನು ಹುಟ್ಟು ಹಾಕಿದರು. ಅದೇ ಗಾಂಧಾರ ಕಲೆ ಎಂದು ಖ್ಯಾತವಾಗಿದೆ. ವಿದೇಶಿ ಶಿಲ್ಪಿಗಳು ವಾಯುವ್ಯ ಭಾರತದಲ್ಲಿ  ನೆಲಸಿ(ಈಗಿನ ಅಪ್ಘಾನಿಸ್ತಾನ- ಗಾಂಧಾರ ನಾಡು) ಭಾರತೀಯ ಬುದ್ಧನನ್ನು ಹಾಗೂ ಇನ್ನಿತರೇ ಶಿಲ್ಪಗಳನ್ನು ಕೆತ್ತುವಾಗ ತಮ್ಮ ಗ್ರೀಕ್‌ ಶೈಲಿಯನ್ನು ಅನುಸರಿಸಿದರು. ಟೋಗ ರೀತಿಯ ನಿಲುವಂಗಿ, ಸುರುಳಿಯಾಕಾರದ ಕೂದಲು, ವಾಸ್ತವಿಕತೆಗೆ ಹೆಚ್ಚು ಹತ್ತಿರವಾದ ಮುಖಭಾವಗಳು  ಗ್ರೀಕ್‌ ಪ್ರಭಾವವನ್ನು ಪ್ರತಿನಿಧಿಸುತ್ತವೆ. ಆದರೆ ಕುಶಾನರ ಆಳ್ವಿಕೆಯ ನಂತರ ಗಾಂಧಾರ ಕಲೆಯು ಮುಂದುವರೆಯಲಿಲ್ಲ.

    6. ಹಿಂದೂ ಧರ್ಮ, ಬೌದ್ಧಧರ್ಮ ಮತ್ತು ಜೈನ ಧರ್ಮದಲ್ಲಿ ಪ್ರತಿಮಾಶಾಸ್ತ್ರ

    ಹಿಂದೂ ಧರ್ಮ

    • ಬಹು ಗುಣಲಕ್ಷಣಗಳು: ದೇವತೆಗಳನ್ನು ಹೆಚ್ಚಾಗಿ ಬಹು ಅಂಗಗಳೊಂದಿಗೆ ಸಾಂಕೇತಿಕ ಆಯುಧಗಳನ್ನು ಹಿಡಿದುಕೊಳ್ಳುವಂತೆ ಅಥವಾ ನಿರ್ದಿಷ್ಟ ಕೈ ಸನ್ನೆಗಳನ್ನು (ಮುದ್ರೆಗಳು) ರೂಪಿಸುವುದು ಎಂದು ತೋರಿಸಲಾಗುತ್ತದೆ.
    • ಸಾಂಕೇತಿಕ ಸನ್ನೆಗಳು: ಅಭಯಮುದ್ರೆ (ನಿರ್ಭಯತೆಯ ಸನ್ನೆ) ಆರಂಭಿಕ ಮುದ್ರೆಗಳಲ್ಲಿ ಒಂದಾಗಿದೆ, ಇದು ರಕ್ಷಣೆ ಮತ್ತು ಭರವಸೆಯನ್ನು ಸೂಚಿಸುತ್ತದೆ.
    • ಅವತಾರಗಳು ಮತ್ತು ವಾಹನಗಳು: ಹಿಂದೂ ಪ್ರತಿಮಾಶಾಸ್ತ್ರವು ದೇವರುಗಳಿಗೆ ಪ್ರಾಣಿಗಳ ಮೂಲಕವೂ ಪ್ರತಿನಿಧಿಸುವುದನ್ನು ಕಾಣುತ್ತೇವೆ. ವಿವಿಧ ಅವತಾರಗಳ ಮೂಲಕ ವಿಷ್ಣುವನ್ನು ಪ್ರತಿನಿಧಿಸಲಾಗಿದ್ದು “ದಶಾವತಾರ”ದ ಹುಟ್ಟಿಗೆ ಕಾರಣವಾಗಿದೆ.
    • ನಟರಾಜ: ಸೃಷ್ಟಿ ಮತ್ತು ವಿನಾಶದ ಕಾಸ್ಮಿಕ್ ಚಕ್ರವನ್ನು ಪ್ರತಿನಿಧಿಸುವ ನೃತ್ಯದ ಪ್ರಭುವಾಗಿ ಶಿವ ನನ್ನು ಚಿತ್ರಿಸಲಾಗಿದೆ.
    • ಪವಿತ್ರ ರೇಖಾಗಣಿತ: ದೈವಿಕ ಮತ್ತು ಬ್ರಹ್ಮಾಂಡದ ಜ್ಯಾಮಿತೀಯ ಪ್ರಾತಿನಿಧ್ಯಗಳಾಗಿ ಮಂಡಲಗಳು ಮತ್ತು ಯಂತ್ರಗಳ ಬಳಕೆ (ಉದಾ. ಶ್ರೀ ಯಂತ್ರ).

    ಬೌದ್ಧಧರ್ಮ

    • ಸಾಂಕೇತಿಕ ಹಂತ: ಆರಂಭಿಕ ಬೌದ್ಧ ಕಲೆ ಕಟ್ಟುನಿಟ್ಟಾಗಿ ಅನಿಕೋನಿಕ್(Aniconic-ಸಾಂಕೇತಿಕ) ಆಗಿತ್ತು, ಬೋಧಿ ವೃಕ್ಷ, ಧರ್ಮಚಕ್ರ ಮತ್ತು ಪಾದದ ಗುರುತುಗಳಂತಹ ಚಿಹ್ನೆಗಳ ಮೂಲಕ ಬುದ್ಧನನ್ನು ಪ್ರತಿನಿಧಿಸುವುದನ್ನು ಕಾಣುತ್ತೇವೆ.
    • ಮಾನವರೂಪದ ಹಂತ: ಬುದ್ಧನ ಮಾನವ ರೂಪವು ಕ್ರಿಸ್ತಪೂರ್ವ 2 ನೇ ಶತಮಾನ ಮತ್ತು ಕ್ರಿ.ಶ. 1 ನೇ ಶತಮಾನದ ನಡುವೆ ಹೊರಹೊಮ್ಮಿತು. ಇದು ಗಾಂಧಾರ ಮತ್ತು ಮಥುರಾ ಶೈಲಿಗಳಿಂದ ಹೆಚ್ಚು ಪ್ರಭಾವಿತವಾಗಿದೆ.
    • ಮುದ್ರೆಗಳು: ಪ್ರಮುಖ ಮುದ್ರೆಗಳಲ್ಲಿ ಧರ್ಮಚಕ್ರ ಮುದ್ರೆ (ಉಪದೇಶ) ಮತ್ತು ಅಭಯ ಮುದ್ರೆ ಸೇರಿವೆ.
    • ಸ್ತೂಪ: ಸ್ತೂಪವನ್ನು ಬುದ್ಧನ ಅತೀಂದ್ರಿಯ ದೇಹದ ಸ್ಮಾರಕ ಪ್ರಾತಿನಿಧ್ಯವಾಗಿ ನೋಡಲಾಗುತ್ತದೆ.

    ಜೈನ ಧರ್ಮ

    ತೀರ್ಥಂಕರ ವ್ಯಕ್ತಿಗಳು: ಪ್ರತಿಮೆಗಳು ಎರಡು ನಿರ್ದಿಷ್ಟ ಭಂಗಿಗಳಲ್ಲಿ ಆಧ್ಯಾತ್ಮಿಕತೆಯನ್ನು  ಪ್ರತಿನಿಧಿಸುತ್ತವೆ: ಪದ್ಮಾಸನ (ಕುಳಿತುಕೊಂಡಿರುವುದು) ಮತ್ತು ಕಾಯೋತ್ಸರ್ಗ (ನಿಂತಿರುವ ಧ್ಯಾನ).

    ಸರಳತೆ: ಜೈನ ವಿಗ್ರಹಗಳು ಸಾಮಾನ್ಯವಾಗಿ ಸರಳ ಮತ್ತು ಅಲಂಕಾರರಹಿತವಾಗಿರುತ್ತವೆ. ಇದು ತ್ಯಾಗ ಮತ್ತು ಆಧ್ಯಾತ್ಮಿಕ ಶುದ್ಧತೆಯನ್ನು ಒತ್ತಿಹೇಳುತ್ತವೆ.

    ಲಾಂಛನಗಳು: ಪ್ರತಿಯೊಂದು ಜಿನನನ್ನು ತಳದಲ್ಲಿ ಒಂದು ಸಣ್ಣ ಚಿಹ್ನೆ ಮೂಲಕ ಗುರುತಿಸಲಾಗುತ್ತದೆ. ಉದಾಹರಣೆಗೆ ಮಹಾವೀರನಿಗೆ ಸಿಂಹ ಅಥವಾ ಋಷಭನಾಥನಿಗೆ ವೃಷಭ.

    ನವದೇವತಾ ಚಕ್ರ: ಜೈನ ಧರ್ಮದಲ್ಲಿ ಪೂಜೆಗಾಗಿ ಬಳಸಲಾಗುವ ವಿಶಿಷ್ಟ ಪವಿತ್ರ ಜ್ಯಾಮಿತಿ ರೇಖಾಚಿತ್ರವು ಪವಿತ್ರ ಆತ್ಮಗಳು ಮತ್ತು ಧರ್ಮ ಚಕ್ರವನ್ನು ಚಿತ್ರಿಸುತ್ತದೆ.

    7. ಉಪಸಂಹಾರ

    ಭಾರತೀಯ ಪ್ರತಿಮಾಶಾಸ್ತ್ರವು ಕೇವಲ ಅಲಂಕಾರಿಕವಲ್ಲ. ಆದರೆ ಮಾನವ ಅನುಭವವನ್ನು ವಿಶ್ವ ಕ್ರಮದೊಂದಿಗೆ ಸಂಪರ್ಕಿಸುವ ಆಳವಾದ ಆಧ್ಯಾತ್ಮಿಕ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ. ಆರಂಭಿಕ ವೇದದ ಚಿಹ್ನೆಗಳಿಂದ ಅತ್ಯಾಧುನಿಕ ಹೆಲೆನಿಸ್ಟಿಕ್-ಪ್ರಭಾವಿತ ಶಿಲ್ಪಗಳವರೆಗೆ, ಇದು ಧಾರ್ಮಿಕ ತತ್ವಶಾಸ್ತ್ರಗಳು ಮತ್ತು ಧ್ಯಾನ ಪದ್ಧತಿಗಳನ್ನು ವ್ಯಕ್ತಪಡಿಸಲು ಅನಿವಾರ್ಯ ಮಾಧ್ಯಮವಾಗಿ ಉಳಿದಿದೆ. ಶತಮಾನಗಳ ಸಂಪ್ರದಾಯದಲ್ಲಿ ಬೇರೂರಿರುವ ಈ ಪ್ರತಿಮಾಶಾಸ್ತ್ರೀಯ ರೂಪಗಳು ಪ್ರಾದೇಶಿಕ ಜಾನಪದ ಕಲೆಗಳ ಮೂಲಕ ವಿಕಸನಗೊಳ್ಳುತ್ತಲೇ ಇರುತ್ತವೆ. ಇವುಗಳು ಆಧುನಿಕ ಭಾರತೀಯ ಜೀವನದಲ್ಲಿಯೂ ಅವುಗಳ ಪ್ರಸ್ತುತತೆಯನ್ನು ಕಾಯ್ದುಕೊಳ್ಳುತ್ತಿವೆ.

    ನಾಣ್ಯಶಾಸ್ತ್ರ

    ನಾಣ್ಯಶಾಸ್ತ್ರ

    ಮೂಲ- ಅರ್ಥ,

    “Numismatics” ಎಂಬ ಪದದ ಮೂಲವು ಆಸಕ್ತಿದಾಯಕವಾಗಿದೆ. ಇದು ಲ್ಯಾಟಿನ್ ಪದ numisma (ಅರ್ಥ: ನಾಣ್ಯ) ಯಿಂದ ಬಂದಿದ್ದು, ಅದು ಗ್ರೀಕ್ ಪದ nomisma ಯಿಂದ ಉತ್ಪನ್ನವಾಗಿದೆ. Nomisma ಎಂದರೆ “ಸಮಾಜದಲ್ಲಿ ರೂಢಿಯಾದ ವಿನಿಮಯದ ಮಾಧ್ಯಮ.” Nomisma ದ ಮೂಲ nomos ಎಂಬ ಗ್ರೀಕ್ ಪದವಾಗಿದ್ದು, ಅದರ ಅರ್ಥ “ಕಾನೂನು” ಅಥವಾ “ಸಂಪ್ರದಾಯ.” ಇದರಿಂದ ನಮಗೆ ತಿಳಿಯುವುದು ಏನೆಂದರೆ ಹಣವೆಂದರೆ ಕೇವಲ ಲೋಹ ಅಥವಾ ಕಾಗದವಲ್ಲ; ಅದು ಸಮಾಜ ಮತ್ತು ರಾಜ್ಯದಿಂದ ಮಾನ್ಯತೆ ಪಡೆದ ವಿನಿಮಯದ ಸಾಧನವಾಗಿದೆ. ಹೀಗಾಗಿ ನಾಣ್ಯಶಾಸ್ತ್ರವೆಂದರೆ ಕಾನೂನುಬದ್ಧ ಹಾಗೂ ಸಮಾಜದಿಂದ ಅಂಗೀಕೃತ ಹಣದ ಅಧ್ಯಯನವಾಗಿದೆ.

    ನಾವು  ಇತಿಹಾಸವನ್ನು ಕಲ್ಪಿಸಿಕೊಂಡಾಗ ಸಾಮಾನ್ಯವಾಗಿ ಪುರಾತನ ಗ್ರಂಥಗಳು, ಸ್ಮಾರಕಗಳು, ಶಾಸನಗಳು ಅಥವಾ ಪುರಾತತ್ವ ಉತ್ಕನನಗಳನ್ನು ನೆನಪಿಗೆ ತರುತ್ತೇವೆ. ಆದರೆ ನಮ್ಮ ಕೈಯಲ್ಲಿ ಹಿಡಿಯಬಹುದಾದ ಒಂದು ಅತ್ಯಂತ ಮಹತ್ವದ ಮತ್ತು ಆಸಕ್ತಿದಾಯಕ ಇತಿಹಾಸದ ಮೂಲವೂ ಇದೆ ನಾಣ್ಯವಾಗಿದೆ. ನಾಣ್ಯಗಳು ಮತ್ತು ಇತರೆ ಹಣಕಾಸು ವಸ್ತುಗಳ ವೈಜ್ಞಾನಿಕ ಅಧ್ಯಯನವನ್ನು ನಾಣ್ಯಶಾಸ್ತ್ರ (Numismatics) ಎಂದು ಕರೆಯಲಾಗುತ್ತದೆ. ಇದು ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ಇತಿಹಾಸವನ್ನು ಪುನರ್‌ನಿರ್ಮಿಸಲು ಮಹತ್ವದ ಪಾತ್ರ ವಹಿಸುತ್ತದೆ.

    ನಾಣ್ಯಶಾಸ್ತ್ರ ಎಂದರೆ ಕೇವಲ ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಲ್ಲ. ನಾಣ್ಯ ಸಂಗ್ರಹ ಒಂದು ಆಸಕ್ತಿದಾಯಕ ಹವ್ಯಾಸವಾಗಿರಬಹುದು, ಆದರೆ ನಿಜವಾದ ನಾಣ್ಯಶಾಸ್ತ್ರವು ಅದಕ್ಕಿಂತ ಬಹಳ ದೂರ ಹೋಗುತ್ತದೆ. ಇದು ವಿವಿಧ ಕಾಲಘಟ್ಟಗಳಲ್ಲಿ ಬಳಸಲಾದ ನಾಣ್ಯಗಳು, ಕಾಗದದ ನೋಟುಗಳು, ಪದಕಗಳು, ಟೋಕನ್‌ಗಳು ಹಾಗೂ ಇತರೆ ಹಣಕಾಸು ಸಾಧನಗಳ ವೈಜ್ಞಾನಿಕ ಮತ್ತು ವ್ಯವಸ್ಥಿತ ಅಧ್ಯಯನವಾಗಿದೆ. ನಾಣ್ಯಶಾಸ್ತ್ರಜ್ಞನು ನಾಣ್ಯದ ಲೋಹ ಸಂಯೋಜನೆ, ತೂಕ, ಗಾತ್ರ, ಆಕಾರ, ಲಿಪಿ, ಚಿಹ್ನೆಗಳು, ಭಾಷೆ, ಮುದ್ರಣ ಗುರುತುಗಳು ಹಾಗೂ ಕಲಾತ್ಮಕ ಲಕ್ಷಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾನೆ. ಈ ಪ್ರತಿಯೊಂದು ಅಂಶವೂ ಆ ನಾಣ್ಯ ಹೊರಬಂದ ಸಮಾಜದ ಕುರಿತು ಅಮೂಲ್ಯ ಮಾಹಿತಿಯನ್ನು ನೀಡುತ್ತದೆ.

    ನಾಣ್ಯಗಳನ್ನು “ಇತಿಹಾಸದ ಸಣ್ಣ ದಾಖಲೆಗಳು” ಎಂದು ಕರೆಯಲಾಗುತ್ತದೆ. ಇದು ಅತಿಶಯೋಕ್ತಿಯಲ್ಲ. ಸಾಹಿತ್ಯ ಗ್ರಂಥಗಳು ಕೆಲವೊಮ್ಮೆ ಅತಿರಂಜಿತವಾಗಿರಬಹುದು ಅಥವಾ ನಂತರದಲ್ಲಿ ಬರೆಯಲ್ಪಟ್ಟಿರಬಹುದು. ಆದರೆ ನಾಣ್ಯಗಳು ಸಾಮಾನ್ಯವಾಗಿ ಆಳಿದ ರಾಜನ ಕಾಲದಲ್ಲೇ ಹೊರಬರುತ್ತವೆ. ಅವು ರಾಜ್ಯದ ಅಧಿಕೃತ ಉತ್ಪನ್ನವಾಗಿವೆ. ಆದ್ದರಿಂದ ನಾಣ್ಯಗಳಲ್ಲಿರುವ ಮಾಹಿತಿ ನೇರ ಮತ್ತು ವಿಶ್ವಾಸಾರ್ಹವಾಗಿರುತ್ತದೆ. ಒಂದೇ ನಾಣ್ಯದಲ್ಲಿ ರಾಜನ ಹೆಸರು,  ಧಾರ್ಮಿಕ ಚಿಹ್ನೆಗಳು, ದಿನಾಂಕ, ಪ್ರತಿಮೆ ಮತ್ತು ಮುದ್ರಣ ಗುರುತುಗಳು ಇರಬಹುದು.

    ನಾಣ್ಯಶಾಸ್ತ್ರಜ್ಞರ ಅಧ್ಯಯನಗಳು:

    • ಬಳಸಿದ ಲೋಹ (ಚಿನ್ನ, ಬೆಳ್ಳಿ, ತಾಮ್ರ, ಕಂಚು, ಮಿಶ್ರಲೋಹ)
    • ತೂಕದ ಮಾನದಂಡ
    • ಆಕಾರ ಮತ್ತು ಗಾತ್ರ
    • ಶಾಸನಗಳು ಮತ್ತು ಭಾಷೆ
    • ಚಿಹ್ನೆಗಳು ಮತ್ತು ಚಿತ್ರಗಳು
    • ಟಂಕಿಸುವ ತಂತ್ರ

    ಹೀಗಾಗಿ, ನಾಣ್ಯಶಾಸ್ತ್ರವು ಐತಿಹಾಸಿಕ ವಿಜ್ಞಾನ ಮತ್ತು ವಿಶ್ಲೇಷಣಾತ್ಮಕ ವಿಭಾಗವಾಗಿದೆ.

    ನಾಣ್ಯಶಾಸ್ತ್ರದ ರಾಜಕೀಯ ಅಧ್ಯಯನ

    ರಾಜಕೀಯ ಇತಿಹಾಸದ ದೃಷ್ಟಿಯಿಂದ ನಾಣ್ಯಗಳು ಅತ್ಯಂತ ಮುಖ್ಯ. ಸಾಹಿತ್ಯದಲ್ಲಿ ಹೆಸರು ಕಾಣಿಸದ ಕೆಲವು ರಾಜರ ಮಾಹಿತಿಯನ್ನು ನಾಣ್ಯಗಳಿಂದಲೇ ತಿಳಿದುಕೊಳ್ಳಬಹುದು. “ಮಹಾರಾಜಾಧಿರಾಜ” ಅಥವಾ “ರಾಜಾಧಿರಾಜ” ಮುಂತಾದ ಪದವಿಗಳು ರಾಜನ ಅಧಿಕಾರ ಮತ್ತು ಮಹತ್ವಾಕಾಂಕ್ಷೆಯನ್ನು ತೋರಿಸುತ್ತವೆ. ಕೆಲವು ನಾಣ್ಯಗಳಲ್ಲಿ ರಾಜನ ಮುಖಚಿತ್ರವೂ ಇರುತ್ತದೆ. ಇದು ರಾಜಕೀಯ ಪ್ರಚಾರದ ಒಂದು ರೂಪವಾಗಿರಬಹುದು. ಹೀಗಾಗಿ ನಾಣ್ಯಗಳು ವಂಶಾವಳಿ ಮತ್ತು ಕಾಲಕ್ರಮವನ್ನು ನಿರ್ಧರಿಸಲು ಸಹಾಯ ಮಾಡುತ್ತವೆ.

    ನಾಣ್ಯಶಾಸ್ತ್ರದ ಆರ್ಥಿಕ ಅಧ್ಯಯನ

    ಆರ್ಥಿಕ ಇತಿಹಾಸದ ಅಧ್ಯಯನದಲ್ಲಿಯೂ ನಾಣ್ಯಗಳು ಬಹುಮುಖ್ಯ. ನಾಣ್ಯಗಳಲ್ಲಿ ಬಳಸಿದ ಲೋಹ — ಬಂಗಾರ, ಬೆಳ್ಳಿ, ತಾಮ್ರ ಅಥವಾ ಮಿಶ್ರಲೋಹ — ರಾಜ್ಯದ ಆರ್ಥಿಕ ಸ್ಥಿತಿಯನ್ನು ತೋರಿಸುತ್ತದೆ. ಹೆಚ್ಚಿನ ಬಂಗಾರದ ನಾಣ್ಯಗಳು ಸಮೃದ್ಧಿಯನ್ನು ಸೂಚಿಸಬಹುದು. ಕಡಿಮೆ ಗುಣಮಟ್ಟದ ಅಥವಾ ಮಿಶ್ರಿತ ನಾಣ್ಯಗಳು ಆರ್ಥಿಕ ಸಂಕಷ್ಟವನ್ನು ಸೂಚಿಸಬಹುದು. ಒಂದು ಪ್ರದೇಶದಲ್ಲಿ ಬೇರೆ ದೇಶಗಳ ನಾಣ್ಯಗಳು ದೊರೆತರೆ, ಅದು ವ್ಯಾಪಾರ ಸಂಬಂಧಗಳ ಸಾಕ್ಷಿಯಾಗಿದೆ. ಉದಾಹರಣೆಗೆ, ದಕ್ಷಿಣ ಭಾರತದಲ್ಲಿ ರೋಮನ್ ನಾಣ್ಯಗಳ ಪತ್ತೆ ಇಂಡೋ-ರೋಮನ್ ವ್ಯಾಪಾರದ ಸಾಕ್ಷಿಯಾಗಿದೆ.

    ನಾಣ್ಯಶಾಸ್ತ್ರದ ಧರ್ಮ ಮತ್ತು ಸಾಂಸ್ಕೃತಿಕ ಅಧ್ಯಯನ

    ಧರ್ಮ ಮತ್ತು ಸಂಸ್ಕೃತಿಯು ಸಹ  ನಾಣ್ಯಗಳಲ್ಲಿ ಸ್ಪಷ್ಟವಾಗಿರುತ್ತದೆ. ಅನೇಕ ನಾಣ್ಯಗಳಲ್ಲಿ ದೇವರು-ದೇವತೆಗಳ ಚಿತ್ರಗಳು, ಪವಿತ್ರ ಚಿಹ್ನೆಗಳು ಅಥವಾ ಧಾರ್ಮಿಕ ವಾಕ್ಯಗಳು ಕಾಣಿಸುತ್ತವೆ. ಇದರಿಂದ ಆ ಕಾಲದ ಧಾರ್ಮಿಕ ನಂಬಿಕೆಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆ ತಿಳಿಯುತ್ತದೆ. ಕೆಲವು ರಾಜರು ವಿವಿಧ ಧರ್ಮಗಳ ಚಿಹ್ನೆಗಳನ್ನು ಬಳಸಿರುವುದು ಧಾರ್ಮಿಕ ಸಹಿಷ್ಣುತೆಯನ್ನು ಸೂಚಿಸುತ್ತದೆ.

    ನಾಣ್ಯಶಾಸ್ತ್ರದ ಕಲಾ ಅಧ್ಯಯನ

    ಕಲೆ ಮತ್ತು ಚಿಹ್ನಾಶಾಸ್ತ್ರದ ದೃಷ್ಟಿಯಿಂದಲೂ ನಾಣ್ಯಗಳು ಅಮೂಲ್ಯ. ಅವು ಸಣ್ಣ ಗಾತ್ರದಿದ್ದರೂ ಕಲಾಕೃತಿಗಳಂತಿವೆ. ಉಡುಪು, ಆಭರಣ, ಆಯುಧ, ಸಂಗೀತ ವಾದ್ಯಗಳು, ಪ್ರಾಣಿಗಳು ಮತ್ತು ಕಟ್ಟಡಗಳ ಚಿತ್ರಣಗಳು ನಾಣ್ಯಗಳಲ್ಲಿ ಕಾಣಬಹುದು. ಇದರಿಂದ ಆ ಕಾಲದ ಜೀವನಶೈಲಿ ಮತ್ತು ಕಲಾತ್ಮಕ ರುಚಿ ತಿಳಿಯುತ್ತದೆ.

    ನಾಣ್ಯಶಾಸ್ತ್ರದಿಂದ ಕಾಲಗಣನೆಯ ಅಧ್ಯಯನ

    ಇತಿಹಾಸದ ಕಾಲಕ್ರಮವನ್ನು ನಿಖರವಾಗಿ ನಿರ್ಧರಿಸಲು ನಾಣ್ಯಗಳು ಬಹಳ ಸಹಾಯಕ. ಕೆಲವು ನಾಣ್ಯಗಳಲ್ಲಿ ಆಳ್ವಿಕೆಯ ವರ್ಷಗಳು ಅಥವಾ ದಿನಾಂಕಗಳು ಉಲ್ಲೇಖವಾಗಿರುತ್ತವೆ. ಪುರಾತತ್ವ ಉತ್ಕನನಗಳಲ್ಲಿ ದೊರೆಯುವ ನಾಣ್ಯಗಳು ಆ ಪದರದ ಕಾಲವನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. ಹೀಗಾಗಿ ನಾಣ್ಯಗಳು ಇತಿಹಾಸದ ದಿನಾಂಕ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

    ಆಧುನಿಕ ನಾಣ್ಯಶಾಸ್ತ್ರವು ವೈಜ್ಞಾನಿಕ ವಿಧಾನಗಳನ್ನು ಬಳಸುತ್ತದೆ. ಲೋಹ ಸಂಯೋಜನೆಯ ಪರೀಕ್ಷೆ, ಡಿಜಿಟಲ್ ಚಿತ್ರ ವಿಶ್ಲೇಷಣೆ, ಮತ್ತು ವರ್ಗೀಕರಣ ವಿಧಾನಗಳು ಇತ್ಯಾದಿ ಬಳಕೆಯಲ್ಲಿವೆ. ಇದು ಇತಿಹಾಸ, ಪುರಾತತ್ವ, ಆರ್ಥಿಕಶಾಸ್ತ್ರ ಮತ್ತು ಕಲಾ ಅಧ್ಯಯನಗಳೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ.

    ಒಟ್ಟಿನಲ್ಲಿ, ನಾಣ್ಯಶಾಸ್ತ್ರವೆಂದರೆ ಹಣದ ಮೂಲಕ ಇತಿಹಾಸವನ್ನು ತಿಳಿಯುವ ಅಧ್ಯಯನ. ನಾಣ್ಯಗಳು ಸಣ್ಣವಾಗಿದ್ದರೂ ಅವುಗಳಲ್ಲಿ ರಾಜಕೀಯ ಶಕ್ತಿ, ಆರ್ಥಿಕ ಪರಿಸ್ಥಿತಿ, ಧಾರ್ಮಿಕ ನಂಬಿಕೆ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಕಥೆಗಳು ಅಡಗಿವೆ. ಇತಿಹಾಸ ಮತ್ತು ಪುರಾತತ್ವ ವಿದ್ಯಾರ್ಥಿಗಳಿಗೆ ನಾಣ್ಯಶಾಸ್ತ್ರ ಅತ್ಯಗತ್ಯವಾದ ಸಹಾಯಕ ಶಾಸ್ತ್ರವಾಗಿದೆ. ಸಣ್ಣ ನಾಣ್ಯಗಳಲ್ಲಿಯೇ ದೊಡ್ಡ ಇತಿಹಾಸದ ಕಥೆಗಳು ಅಡಗಿವೆ ಎಂಬುದು ನಿಜ.

    ಭಾರತೀಯ ನಾಣ್ಯ ಪರಂಪರೆ

    ನಾಣ್ಯಗಳು ಮಾನವನ ವ್ಯಾಪಾರ, ವಾಣಿಜ್ಯದ ಅತೀ ಮುಖ್ಯ ಸಂಕೇತ, ಹಣವಿಲ್ಲದೇ ಯಾವುದೇ ತೆರನಾದ ಆರ್ಥಿಕ ವ್ಯವಹಾರವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಾರತೀಯ ಇತಿಹಾಸದಲ್ಲಿ ನಾಣ್ಯಶಾಸ್ತ್ರಕ್ಕೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಆರ್ಥಿಕ ಸ್ಥಿತಿಗತಿ, ಸಾಂಸ್ಕೃತಿಕ ಬಂಧುತ್ವ, ಇತಿಹಾಸ ಭವ್ಯತೆಯನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಡುವ ಕೆಲಸವನ್ನು ನಾಣ್ಯಶಾಸ್ತ್ರ ಮಾಡುತ್ತಾ ಬಂದಿದೆ. ಅಷ್ಟೇ ಅಲ್ಲ ಮರೆತು ಹೋದ ಸಾಮ್ರಾಜ್ಯಗಳನ್ನು ಬೆಳಕಿಗೆ ತಂದ ಕೀರ್ತಿ ನಾಣ್ಯ ಶಾಸ್ತ್ರಕ್ಕೆ ಸಲ್ಲುತ್ತದೆ. ಮೇಲ್ನೋಟಕ್ಕೆ ನಾಣ್ಯ ಲೋಹದ ಚೂರಾಗಿ ಕಾಣುತ್ತದೆ. ಆದರೆ ಅದು ಲೋಹದ ಚೂರಲ್ಲ, ಜೀವಂತ ಸಮಾಜದ ಆರ್ಥಿಕ ವ್ಯವಸ್ಥೆಯ ಅವಿನಾಭಾವ ಸಂಬಂಧದ ಉಸಿರು. ಸಿರಿಸಂಪತ್ತಿನ ಸಾಕ್ಷಿ, ರಾಜಪ್ರಭುತ್ವದ ದಾಖಲೆ, ಧರ್ಮ, ಸಾಹಿತ್ಯ, ಕಲೆ, ಮತ್ತು ನಮ್ಮ ಬದುಕಿನ ನೈಜಾಂಶಗಳ ಪ್ರತಿಬಿಂಬ, ಇತಿಹಾಸಕಾರನ ಮೌಖಿಕ ಆಕಾರ, ನಾಡಿನ ಅಭಿವೃದ್ಧಿಯ ಸಂಕೇತ, ಆರ್ಥಿಕ ವಲಯದ ಸಮಷ್ಟಿ ಚಾಲಿತ ಚಿಹ್ನೆ.

    ನಾಣ್ಯಗಳ ತಯಾರಿಕಾ ತಂತ್ರಗಾರಿಕೆ, ಆಕಾರ, ಸೂಕ್ಷ್ಮತೆ, ತೂಕ ಹಾಗೂ ಗಾತ್ರದ ನಿರ್ಧಿಷ್ಟತೆ, ವಿಧಾನ ವೈವಿದ್ಯತೆ ಇತ್ಯಾದಿ ಭಾರತೀಯ ನಾಣ್ಯಗಳಲ್ಲಿ ಕಂಡುಬರುತ್ತದೆ. ಭಾರತೀಯ ನಾಣ್ಯ ಪರಂಪರೆಯ ಮಾಹಿತಿಗಳು ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಆಯಾ ಸಮಾಜದ ಹಾಗೂ ಪ್ರಭುಗಳ ವ್ಯವಹಾರ ಮನೋಭಾವವನ್ನು ಬಿಂಬಿಸುತ್ತಾ ಬಂದಿವೆ. ಇತಿಹಾಸದ ಮಾಹಿತಿಗಳ ಕಣಜ ಎಂದೇ ಖ್ಯಾತವಾಗಿರುವ ನಾಣ್ಯಗಳು ಪ್ರಾಚೀನ ಕಾಲದಿಂದಲೂ ರಾಜಕೀಯ, ಆರ್ಥಿಕ, ಧಾರ್ಮಿಕ ಮಾಹಿತಿಗಳ ಸ್ಪಷ್ಟಿಕರಣದೊಂದಿಗೆ ಕಾಲಗಣನೆ, ಭಾಷೆ, ಕಲಾಕೌಶಲ್ಯತೆಯ ವಿವಿಧ ಆಯಾಮಗಳು, ಕಡಲಾಚೆ ನಾಡುಗಳೊಂದಿಗೆ ಭಾರತ ಹೊಂದಿದ್ದ ವಾಣಿಜ್ಯ ಸಂಬಂಧಗಳು, ಭಾರತದ ಮೇಲೆ ವಿದೇಶೀ ದಾಳಿಗಳು ಇನ್ನು ಮುಂತಾದ ವಿಷಯಗಳನ್ನು ಇತಿಹಾಸದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ ಸಾಂಸ್ಕೃತಿಕ ಬೃಹತ್ ಭಾರತದ ಹೆಜ್ಜೆ ಗುರುತುಗಳನ್ನು ನಮ್ಮ ಮುಂದೆ ಮೂಡಿಸುವಲ್ಲಿ ನಾಣ್ಯಶಾಸ್ತ್ರವು ಬಹುಪಾಲು ಸ್ಥಾನವನ್ನು ಪಡೆದುಕೊಂಡಿದೆ.

    ಭಾರತೀಯ ನಾಣ್ಯಗಳ ಉಗಮ:

    ಭಾರತದಲ್ಲಿ ನಾಣ್ಯದ ಉಗಮದ ಬಗ್ಗೆ ಸ್ಪಷ್ಟ ಮಾಹಿತಿಗಳು ಇಂದಿನವರೆಗೂ ಲಭ್ಯವಿಲ್ಲ. ಸಿಂಧೂ ನದಿ ನಾಗರೀಕತೆಯಲ್ಲಿ ನಡೆದಿರುವ ಉಲ್ಲೇಖಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಹರಪ್ಪ, ಮಹೇಂಜೋದಾರೋ, ಲೋಥಾಲ್‌ಗಳಲ್ಲಿ ನಾಣ್ಯಕ್ಕೆ ಸರಿಹೊಂದುವ ಅಥವಾ ನಾಣ್ಯ ಎಂದೇ ಗುರುತಿಸುವ ಲೋಹದ ವಸ್ತುಗಳು ಇದುವರೆಗೂ ದೊರೆತಿಲ್ಲ. ಅನೇಕ ವಿದ್ವಾಂಸರು ತೂಕದ ಭಟ್ಟುಗಳನ್ನು ಗುರುತಿಸಿದ್ದಾರೆ. ಆದರೆ ನಾಣ್ಯಗಳನ್ನು ಗುರುತಿಸಿಲ್ಲ. ಆದರೆ ಮಹೇಂಜೋದಾರೋದಲ್ಲಿ ದೊರಕಿದ ಕೆಲವು ಬೆಳ್ಳಿ ಚೂರುಗಳು ನಾಣ್ಯಗಳೆಂದು ಕೆಲವು ಇತಿಹಾಸಕಾರರ ಅಭಿಪ್ರಾಯ. ಈ ಚೂರುಗಳು ಚೌಕ, ಆಯತಾಕಾರ ಮತ್ತು ವೃತ್ತಾಕಾರದಲ್ಲಿ ಇದ್ದವು. ಇದನ್ನು ಆಳವಾಗಿ ಅಧ್ಯಯನವನ್ನು ಮಾಡಿದ ವಿಖ್ಯಾತ ಗಣಿತ ಶಾಸ್ತ್ರಜ್ಞ ಡಿ.ಡಿ. ಕೌಶಾಂಬಿಯವರು ಇವುಗಳು ನಾಣ್ಯಗಳೆಂದು ಪ್ರತಿಪಾದಿಸಿದರು. ಸಿಂಧೂ ನದಿ ನಾಗರೀಕತೆ ನಾಶವಾಗುವುದಕ್ಕೆ ಮುಂಚಿತವಾಗಿ ಅಂತಿಮ ಕಾಲದಲ್ಲಿ ಈ ನಾಣ್ಯಗಳು ತಯಾರಿಸಲಾಗಿದೆ ಎಂದು ತಿಳಿಯಬಹುದು. ಕಾರಣ ಈ ನಾಣ್ಯಗಳು ಅನಂತರದ ಕಾಲದಲ್ಲಿ ಬಳಕೆಯಲ್ಲಿ ಇದ್ದ ಪಂಚ್ ಚಿಹ್ನೆಯ ನಾಣ್ಯಗಳಿಗೆ ಮಾದರಿಯನ್ನು ಒದಗಿಸಿದವು. ಆದುದರಿಂದ ಅತ್ಯಂತ ಪ್ರಾಥಮಿಕ ಹಂತದ ನಾಣ್ಯಗಳು ಸಿಂಧೂ ಸಂಸ್ಕೃತಿ ಕಾಲದಲ್ಲಿ ಚಲಾವಣೆಯಲ್ಲಿ ಇದ್ದವು ಎಂಬುದು ಕೇವಲ ಸಿದ್ಧಾಂತವಾಗಿ ಉಳಿಯುತ್ತದೆ.

    ವೇದಗಳ ಕಾಲದಲ್ಲಿ ನಾಣ್ಯಗಳು

    ಋಗ್ವೇದದ ಕಾಲದಲ್ಲಿ (ಕ್ರಿ.ಪೂ: 1500) ಹಸುಗಳನ್ನು ವಸ್ತು ವಿನಿಮಯಕ್ಕಾಗಿ ಬಳಸುತ್ತಿದ್ದರು. ಜನರ ಅಂತಸ್ತನ್ನು ಅಳೆಯುವಾಗ ಸಾವಿರ ಗೋವುಗಳ ಒಡೆಯ, ಐದು ನೂರು ಗೋವುಗಳ ಒಡೆಯ ಮುಂತಾದ ಪದಗುಚ್ಚಗಳನ್ನು ಕಾಣುತ್ತೇವೆ. ಇದರ ಜೊತೆಗೆ ನಿಷ್ಕ  ಎಂಬ ಪದಗಳ ಬಳಕೆಯನ್ನು ಕಾಣುತ್ತೇವೆ. ಇದನ್ನು ಆರ್ಯರು ನಾಣ್ಯದ ಅರ್ಥದಲ್ಲಿ ಬಳಸಿದ್ದಾರೆ. ಉದಾಹರಣೆಗೆ ಎರಡು ನಿಷ್ಕ ದಾನವಾಗಿ ನೀಡಿದರು ಎನ್ನುವ ಪದ ಪ್ರಯೋಗ ನಿಷ್ಕ ಎಂಬುದು ನಾಣ್ಯ ಎಂದೇ ಅರ್ಥವನ್ನು ಕೊಡುತ್ತದೆ. ಕೆಲವು ವಿದ್ವಾಂಸರು ಹಾರ ಎಂಬುದಾಗಿಯೂ ವಾದಿಸಿದ್ದಾರೆ.

    ಮುನಿ ಕಕ್ಷೀವಾತನಿಗೆ ಭವ್ಯ ಎಂಬ ದೊರೆಯು ಹತ್ತು ನಿಷ್ಕಗಳನ್ನು ಕೊಟ್ಟನು. ಒಬ್ಬ ಕವಿಗೆ ನೂರು ನಿಷ್ಕಗಳನ್ನು ನೀಡಲಾಯಿತು. ಆನಂತರದ ಕಾಲದ ಸಾಹಿತ್ಯಿಕ ಆಧಾರಗಳಲ್ಲಿ ನಿಷ್ಕ  ಎಂಬ ಪದ ಚಿನ್ನದ ನಾಣ್ಯ ಎಂದು ಕರೆದಿರುವ ಅಂಶ ಗಮನಾರ್ಹವಾದದು. ಆದುದರಿಂದ ಭಾರತೀಯ ನಾಣ್ಯ ಶಾಸ್ತ್ರದ ಉಗಮ ಋಗ್ವೇದ ಕಾಲದಲ್ಲಿ ಆಗಿತ್ತು ಎಂಬುದು ಇವುಗಳಿಂದ ವ್ಯಕ್ತವಾಗುತ್ತದೆ. ಆನಂತರದ ವೇದಗಳಲ್ಲಿ ನಾಣ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರಕುತ್ತವೆ. ನಿಷ್ಕ  ಎನ್ನುವ ಪದದ ಜೊತೆಗೆ ಸ್ವರ್ಣ, ಶತಮಾನ, ಪಾದ ಎಂಬ ಪದಗಳು ನಾಣ್ಯದ ಅರ್ಥದಲ್ಲಿ ಬಳಕೆಯಾಗಿರುವುದು ಕಂಡು ಬರುತ್ತದೆ. ಶತಮಾನ, ಸ್ವರ್ಣ ಮತ್ತು ನಿಷ್ಕ ನಾಣ್ಯಗಳ ನಾಲ್ಕನೆಯ ಒಂದು ಭಾಗಕ್ಕೆ ಪಾದ ಎಂದು ಹೆಸರಿದ್ದಿತು.

    ವೇದಗಳ ನಂತರದ ಕಾಲದಲ್ಲಿ ಕ್ರಿ.ಪೂ. 5,4ನೇಯ ಶತಮಾನಗಳಲ್ಲಿ ನಾಣ್ಯಗಳು ಖಚಿತವಾಗಿ ಬಳಕೆಯಲ್ಲಿ ಇದ್ದವು ಎಂದು ಬೌದ್ಧ ಜಾತಕ ಕಥೆಗಳು, ಪಾಣಿನಿಯ ವ್ಯಾಕರಣ ಗ್ರಂಥ, ಅಷ್ಟಧ್ಯಾಯಿಗಳು ಉಲ್ಲೇಖಿಸುತ್ತದೆ.

    ಕ್ರಿಸ್ತ ಪೂರ್ವ ೮ನೇ ಶತಮಾನದಲ್ಲಿ ಪಾಣಿನಿ ನಾಣ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾನೆ. ಚಿನ್ನ, ಬೆಳ್ಳಿ, ಮತ್ತು ತಾಮ್ರದ ನಾಣ್ಯಗಳನ್ನು ಉಲ್ಲೇಖಿಸಿದ್ದಾನೆ. ಪ್ರಾಚೀನ ಕಾಲದಲ್ಲಿ ನಾಣ್ಯಗಳ ಬಗ್ಗೆ ಅತೀ ಹೆಚ್ಚಿನ ಮಾಹಿತಿ ನೀಡಿದ ಗ್ರಂಥ ಅಷ್ಟದ್ಯಾಯಿ, ನೂರು ನಿಷ್ಕಗಳನ್ನು ಹೊಂದಿದ್ದವನನ್ನು ʻನೈಷ್ಕ ಕತಿಕ’ ಎಂದು ಕರೆಯಲಾಗಿದೆ. ಇವುಗಳ ಜೊತೆಗೆ ಶತಮಾನ ಕತಿಕ, ಎನ್ನುವ ನಾಣ್ಯ ಸೂಚಕ ಪದಗಳನ್ನು ಕಾಣಬಹುದು. ಸಾಣ ಎನ್ನುವುದು ಮತ್ತೊಂದು ನಾಣ್ಯ ಇದು ಶತಮಾನ ನಾಣ್ಯದ ಎಂಟನೆಯ ಒಂದು ಭಾಗದ ನಾಣ್ಯ. ಒಂದು, ಒಂದೂವರೆ, ಎರಡು ಸಾಣ ನಾಣ್ಯಗಳ ಉಲ್ಲೇಖವು ಅಷ್ಟದ್ಯಾಯಿ ಗ್ರಂಥದಲ್ಲಿ ಕಾಣಬಹುದು. ಪಾಣಿನಿ ಹೆಸರಿಸಿರುವ ಇನ್ನೆರೆಡು ನಾಣ್ಯಗಳೆಂದರೆ ಮಾಷ, ಮತ್ತು ಕಾರ್ಷಾಪಣ ಎಂಬ ನಾಣ್ಯಗಳು ಜನಾನುರಾಗಿಯಾಗಿದ್ದವು.

    ಭಾರತೀಯ ನಾಣ್ಯಗಳ ವಿಕಾಸದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವು ಹೆಚ್ಚಿನ ಮಾಹಿತಿ ನೀಡುತ್ತವೆ. ಕ್ರಿಸ್ತ ಪೂರ್ವ ನಾಲ್ಕನೇ ಶತಮಾನದ ಈ ಗ್ರಂಥದಲ್ಲಿ ಒಂದು ಇಡೀ ಅದ್ಯಾಯ ಟಂಕಶಾಲೆಯ ಬಗ್ಗೆ ಮಾಹಿತಿ ನೀಡುತ್ತದೆ. ಲಕ್ಷಣಾಧ್ಯಕ್ಷ ಎಂಬುವವನ ನೇತ್ರತ್ವದಲ್ಲಿ ಟಂಕಶಾಲೆಯ ಕಾರ್ಯಗಳು ನಡೆಯುತ್ತಿತ್ತು. ಬೆಳ್ಳಿ, ತಾಮ್ರದ ನಾಣ್ಯಗಳ ಉಲ್ಲೇಖ ರೂಪ್ಯ, ರೂಪ, ತಾಮ್ರ  ಮುಂತಾದ ಪದಗಳ ಉಲ್ಲೇಖವಿದೆ. ಪಣ, ಅರ್ದಪಣ, ಪಾದ ಮತ್ತು ಅಷ್ಟ ಭಾಗ, ಎನ್ನುವುದು ಬೆಳ್ಳಿಯ ನಾಣ್ಯಗಳು. ಮಾಷಕ. ಅರ್ಧಮಾಷಕ, ಕಾಣಿಕೆ, ಎನ್ನುವುದು ತಾಮ್ರದ ನಾಣ್ಯಗಳು.

    ನಾಣ್ಯಗಳನ್ನು ಟಂಕಿಸುವುದು ಸರ್ಕಾರದ ಕೆಲಸ, ನಾಣ್ಯ ನಿಯಂತ್ರಣ ಸರ್ಕಾರದ ಪೂರ್ಣ ವಶದಲ್ಲಿ ಇತ್ತು ಎಂಬುದು ತಿಳಿಯುತ್ತದೆ.

    ಆದರೆ ಕೆಲವು. ಪಾಶ್ಚಿಮಾತ್ಯ ವಿದ್ವಾಂಸರು ಅದರಲ್ಲಿಯೂ ಮುಖ್ಯವಾಗಿ ಹೆಚ್.ಹೆಚ್.ವಿಲ್ಸನ್ ಎಂಬುವವನು ಪ್ರಾಚೀನ ಭಾರತೀಯರು ಬ್ಯಾಕ್ಟ್ರಿಯನ್ ಜನಗಳಿಂದ ನಾಣ್ಯ ಕಲೆಯನ್ನು ಕಲಿತರು ಎಂದು ಅಭಿಪ್ರಾಯಪಟ್ಟಿದ್ದಾರೆ. ರೋಮಿನೊಡನೆ ಹೊಂದಿದ್ದ ವ್ಯಾಪಾರ ಸಂಬಂಧದಿಂದ ನಾಣ್ಯಗಳ ವಿಷಯದಲ್ಲಿ ಹೆಚ್ಚಿನ ಮಾಹಿತಿಯನ್ನು ಭಾರತೀಯರು ಪಡೆದರು ಎಂದಿದ್ದಾರೆ.

    ಜೇಮ್ಸ್ ಪ್ರಿಸೈಟ್ ಎಂಬುವವನ ಪ್ರಕಾರ ಪ್ರಾಚೀನ ಭಾರತೀಯರು ಗ್ರೀಕರಿಂದ ನಾಣ್ಯಗಳನ್ನು ಟಂಕಿಸುವ ವಿಧಾನ ಕಲಿತರು ಎಂದಿದ್ದಾನೆ. ಆದರೆ ಗ್ರೀಕರಿಗಿಂತ ಮುಂಚೆಯೇ ಭಾರತೀಯರು ನಾಣ್ಯಗಳನ್ನು ಟಂಕಿಸುವ ವಿಧಾನ ಕಲಿತಿದ್ದರು ಎನ್ನುವುದಕ್ಕೆ ಪಂಚ್ ಚಿಹ್ನೆಯ ನಾಣ್ಯಗಳೇ ಸಾಕ್ಷಿ. ಕಟ್ಟೀಸ್, ಎಂಬ ಗ್ರೀಕ್ ಇತಿಹಾಸಕಾರ ನೀಡಿರುವ ಮಾಹಿತಿಯ ಪ್ರಕಾರ ತಕ್ಷಶಿಲೆಯ ದೊರೆಯು ಅಲೆಗ್ಸಾಂಡರನಿಗೆ ಉಡುಗೊರೆಯಾಗಿ ಟ್ಯಾಲೆಂಟ್ ಬೆಳ್ಳಿಯ ನಾಣ್ಯಗಳನ್ನು ನೀಡಿದ್ದನು ಎಂಬ ಉಲ್ಲೇಖವನ್ನು ಗಮನಿಸಿದಾಗ ಗ್ರೀಕ್ ನಾಣ್ಯಗಳು ಭಾರತೀಯ ನಾಣ್ಯಗಳ ಮೇಲೆ ತಮ್ಮ ಪ್ರಭಾವ ಬೀರಿರಬಹುದೇ ಹೊರತು ಅವುಗಳ ಉಗಮಕ್ಕೆ ಕಾರಣವಲ್ಲ. ಗ್ರೀಕರ ದಂಡಯಾತ್ರೆಗೆ ಮೊದಲೇ ಭಾರತೀಯರು ನಾಣ್ಯಗಳನ್ನು ಬಳಸುತ್ತಿದ್ದರು. ಇದಕ್ಕೆ ಸಾಕ್ಷಿ ಕ್ರಿ.ಪೂ. 4ನೇ ಶತಮಾನಕ್ಕೆ ಸೇರಿದ ಅವಶೇಷಗಳನ್ನು ತಕ್ಷಶಿಲೆಯಲ್ಲಿ ಉತ್ಕನನ ಮಾಡಿದಾಗ 1055 ಬೆಳ್ಳಿಯ ಪಂಚ್ ಚಿಹ್ನೆಯ ನಾಣ್ಯಗಳು ದೊರೆತಿವೆ. ಈ ಎಲ್ಲಾ ದಾಖಲೆಗಳಿಂದ ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಭಾರತದಲ್ಲಿ ನಾಣ್ಯ ಚಲಾವಣೆ ಇದ್ದಿತೆಂದು ಖಚಿತಪಡಿಸಬಹುದು.

    ನಾಣ್ಯ ದೊರೆತ ವಿಧಾನ

    ಭಾರತದಲ್ಲಿ ಮೂರು ವಿಧಗಳಲ್ಲಿ ಪ್ರಾಚೀನ ನಾಣ್ಯಗಳು ದೊರಕುತ್ತವೆ.

    1) ಪುರಾತತ್ವ ಉತ್ಖನನಗಳಲ್ಲಿ

    2) ನಿರ್ಮಾಣ ಚಟುವಟಿಕೆಗಳಲ್ಲಿ

    3) ನಾಣ್ಯ ಸಂಗ್ರಹಕರ ಮೂಲಕ

    1) ಪುರಾತತ್ವ ಉತ್ಖನನಗಳಲ್ಲಿ:

     ಪುರಾತತ್ವ ಉತ್ಖನನಗಳಲ್ಲಿ ಪ್ರಾಚೀನ ನಾಣ್ಯಗಳು ಹೇರಳವಾಗಿ ದೊರೆತಿವೆ. ಚಂದ್ರವಳ್ಳಿಯಲ್ಲಿ ರೋಮನ್, ಶಾತವಾಹನ, ಚುಟು, ಮರಾಠಿ, ನಾಣ್ಯಗಳು ಲಭ್ಯವಾಗಿವೆ. ಬನವಾಸಿ, ಸನ್ನತಿ, ವಡ್ಡಗಾಂ, ಮಾಧವಪುರ, ತಲಕಾಡು, ಉಜ್ಜಯಿನಿ, ಪೆದ್ದವಗಿ, ವಡ್ಡಮಾನುಗಳಲ್ಲಿ ತಾಮ್ರದ ನಾಣ್ಯಗಳು ದೊರಕಿವೆ.

    2) ನಿರ್ಮಾಣ ಚಟುವಟಿಕೆಗಳಲ್ಲಿ:

    1965 ರಲ್ಲಿ ಬೆಂಗಳೂರಿನ ಹೆಚ್.ಎ.ಎಲ್. ವಿಮಾನ ನಿಲ್ದಾಣಕ್ಕಾಗಿ ಭೂಮಿ ಅಗೆಯುವಾಗ 250 ರೋಮನ್ ಬೆಳ್ಳಿಯ ನಾಣ್ಯಗಳು ದೊರಕಿವೆ. 1891 ರಲ್ಲಿ ಬೆಂಗಳೂರಿನ ಯಶವಂತಪುರದಲ್ಲಿ  ರೈಲ್ವೆ ಹಳಿಯನ್ನು ಹಾಕುವ ಸಲುವಾಗಿ ಭೂಮಿಯನ್ನು ಅಗೆಯುವಾಗ 63 ರೋಮನ್ ಬೆಳ್ಳಿಯ ನಾಣ್ಯಗಳು ದೊರಕಿವೆ. ರಾಯಚೂರು ಜಿಲ್ಲೆಯ ಚಿಕ್ಕ ಸಿಂಧಗಿಯಲ್ಲಿ ತಾಮ್ರದ ಪಾತ್ರೆಯೊಂದರಲ್ಲಿ 5534 ಪಂಚ್ ಚಿಹ್ನೆಯ ನಾಣ್ಯಗಳು ದೊರಕಿದ್ದು, ಈ ನಾಣ್ಯಗಳ ಮೇಲೆ ಚಿಂತರಸ ಎಂಬ ಬ್ರಾಹ್ಮಿ ಲಿಪಿಯ ಬರಹವಿದೆ. ಕರ್ನಾಟಕದಲ್ಲಿ ಇದುವರೆಗೆ ದೊರೆತಿರುವ ಅತೀ ಹೆಚ್ಚಿನ ನಾಣ್ಯಗಳ ರಾಶಿ ಇದು. 1913 ರಲ್ಲಿ ಆಂಧ್ರಪ್ರದೇಶದ ನಲ್ಲೂರು ಜಿಲ್ಲೆಯ ಕಡೂರು ಎಂಬಲ್ಲಿ 15462 ನಾಣ್ಯಗಳ ರಾಶಿ ದೊರೆಯಿತು. ಇವುಗಳು ಚಿನ್ನದ ನಾಣ್ಯಗಳಾಗಿದ್ದು, ನಮ್ಮ ದೇಶದಲ್ಲಿ ದೊರೆತಿರುವ ಅತೀ ಹೆಚ್ಚು ಚಿನ್ನದ ನಾಣ್ಯಗಳ ರಾಶಿ ಎಂಬ ದಾಖಲೆ ಇದಾಗಿತ್ತು. ಆಂಧ್ರ ಪ್ರದೇಶದ ಅಮರಾವತಿಯಲ್ಲಿ 7668 ಪಂಚ್ ಮಾರ್ಕಿನ ತಾಮ್ರದ ನಾಣ್ಯಗಳು, ಭಾರತದ ಬಯಾನ ಎಂಬಲ್ಲಿ 1821 ಚಿನ್ನದ ಗುಪ್ತರ ಕಾಲದ ನಾಣ್ಯಗಳು ಲಭ್ಯವಾಯಿತು.

    3) ನಾಣ್ಯ ಸಂಗ್ರಹಕರ ಮೂಲಕ :

     ಕೆಲವು ಆಸಕ್ತ ಸಂಗ್ರಹಕಾರರು ನಾಣ್ಯಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡುತ್ತಾರೆ. ಈ ರೀತಿಯಲ್ಲಿ ಸಾವಿರಾರು ನಾಣ್ಯಗಳು ಸಂಗ್ರಹಿಸಲ್ಪಟ್ಟಿತು. ನಮ್ಮ ದೇಶದ ಪ್ರಾಚೀನ ಬೇವಾಲಯಗಳಾದ ತಿರುಮಲೈ, ಕಾಂಚಿ, ಮದುರೈ, ಗುರುವಾಯೂರು ಸೋಮನಾಥ ಇತ್ತೀಚೆಗೆ ಕೇರಳದ ತಿರುವನಂತಪುರದ ಪದ್ಮನಾಭ ದೇವಾಲಯದಲ್ಲಿ ಪ್ರಾಚೀನ ನಾಣ್ಯಗಳ ರಾಶಿ ದೊರೆತಿರುವುದು ಕಾಣಬಹುದು. ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂ, ದೆಹಲಿಯ ನ್ಯಾಷನಲ್ ಮ್ಯೂಸಿಯಂ, ಕಲ್ಕತ್ತ, ಚೆನ್ನೈ, ಬೆಂಗಳೂರು ಹೈದರಾಬಾದ್ ಲಕ್ನೋ, ಭೂಪಾಲ್, ತಿರುವನಂತಪುರಂ, ಪೂನ, ಮುಂಬೈ ಮುಂತಾದ ನಗರಗಳಲ್ಲಿ ಇರುವ ಮ್ಯೂಸಿಯಂಗಳಲ್ಲಿ ನಾಣ್ಯ ಸಂಗ್ರಹಣೆಯನ್ನು ಕಾಣಬಹುದು.

    1910 ರಲ್ಲಿ ನ್ಯೂಮಿಸ್ ಮ್ಯಾಟಕ್ ಸೊಸೈಟಿ ಆಫ್ ಇಂಡಿಯಾ (ಭಾರತೀಯ ನಾಣ್ಯ ಶಾಸ್ತ್ರ ಸಂಸ್ಥೆ) ಸ್ಥಾಪಿಸಲಾಯಿತು. ನಮ್ಮ ಪ್ರಾಚೀನ ನಾಣ್ಯಗಳ ಅಧ್ಯಯನಕ್ಕೆ ಇದೂ ಒಂದು ಮೈಲಿಗಲ್ಲು, ರಿಚರ್ಡ್ ಬರ್ನ್, ಹೆಚ್.ಆರ್.ನೆವಿಲ್, ಆರ್.ಬಿ.ವೈಟ್ ಹೆಡ್, ಹೆಚ್.ಎನ್. ಲೈಟ್ ಮುಂತಾದ ಐ.ಎ.ಎಸ್. ಅಧಿಕಾರಿಗಳು ನಾಣ್ಯ ಶಾಸ್ತ್ರ ಅಧ್ಯಯನಕ್ಕೆ ಭದ್ರ ಬುನಾದಿ ಹಾಕಿದರು.

    ಭಾರತೀಯ ವಿದ್ವಾಂಸರಾದ ವಿ.ಎಸ್.ಅಗರವಾಲ್, ಎಸ್.ಆಲ್ಟೇಕರ್. ಎ.ಕೆ.ನಾರಾಯಣ್. ಪಿ.ಎಲ್.ಗುಪ್ತ, ಎಂ.ಹೆಚ್.ಕೃಷ್ಣ, ಬಿ.ಸಿ.ಸರ್ಕಾರ್, ಡಿ.ಡಿ.ಕೋಸಂಬಿ ಮುಂತಾದವರು ಮಧ್ಯಕಾಲೀನ ಭಾರತದ ನಾಣ್ಯಗಳನ್ನು ಅಧ್ಯಯನ ಮಾಡಿ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇದುವರೆಗೆ 56 ಸಂಪುಟಗಳ ನಿಯತಕಾಲಿಕೆಯನ್ನು “ಜರ್ನಲ್ ಆಫ್ ದಿ ನ್ಯೂಮಿಸ್ ಮ್ಯಾಟಿಕ್ ಸೊಸೈಟಿ ಆಫ್ ಇಂಡಿಯಾ” ದಲ್ಲಿ ಬರೆದು ಪ್ರಕಟಿಸಿದ್ದಾರೆ.

    ದಕ್ಷಿಣ ಭಾರತದಲ್ಲಿ 1990 ರಲ್ಲಿ ಸೌತ್ ಇಂಡಿಯನ್ ನ್ಯೂಮಿಸ್ ಮ್ಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿ “ಸ್ಟಡೀಸ್ ಇನ್ ಸೌತ್ ಇಂಡಿಯನ್ ಕಾಯಿನ್ಸ್” ಎಂಬ 17 ಸಂಪುಟಗಳನ್ನು ಈವರೆಗೆ ಪ್ರಕಟಿಸಿದೆ. ಐ.ಕೆ.ಶರ್ಮ, ಆರ್.ಕೃಷ್ಣಮೂರ್ತಿ, ಡಾ: ಎ.ವಿ.ನರಸಿಂಹಮೂರ್ತಿ, ಮುಕುಂದ ಪ್ರಭು, ಡಾ:ಗಿರಿಜಾಪತಿ, ಗಣೇಶ್, ಡಾ: ಗೋಪಾಲ್, ಸತ್ಯಮೂರ್ತಿ, ನಿತ್ಯಾನಂದ ಪೈ. ಬೀನಾ ನರಸನ್ ಮುಂತಾದವರು ಸಂಗಂ, ಪಲ್ಲವ, ಶಾತವಾಹನ, ವಿಜಯನಗರ, ಸೇವುಣ ರಾಜವಂಶಗಳ ನಾಣ್ಯಗಳ ಬಗ್ಗೆ ಹೆಚ್ಚಿನ ಅಧ್ಯಯನವನ್ನು ನಡೆಸಿ, ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದ್ದಾರೆ.

    ನಾಣ್ಯಗಳಲ್ಲಿ ಧಾರ್ಮಿಕ ಚಿಹ್ನೆಗಳ ಅಧ್ಯಯನ

    ಪ್ರಾಚೀನ ರಾಜಮನೆತನಗಳ ಧಾರ್ಮಿಕ ಸ್ಥಿತಿಗಳ ಅಧ್ಯಯನದ ದೃಷ್ಟಿಯಿಂದ ನಾಣ್ಯಗಳು ಮಹತ್ವದ ಅಂಶಗಳನ್ನು ತಿಳಿಯಪಡಿಸುತ್ತವೆ.

    ನಾಣ್ಯಗಳು ಪ್ರಾಚೀನ ರಾಜವಂಶಗಳ ಆಧ್ಯಾತ್ಮಿಕ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ ಎಂದರೆ ತಪ್ಪಾಗಲಾರದು. ಸಾಹಿತ್ಯಾಧಾರಗಳಲ್ಲಿ ಉಲ್ಲೇಖವಾಗಿರುವ ಧಾರ್ಮಿಕ ವಿಚಾರವನ್ನು ನಾಣ್ಯಗಳು ದೃಢೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೇವರು ಮತ್ತು ದೇವತೆಗಳ ಚಿತ್ರಗಳನ್ನು ನಾಣ್ಯಗಳಲ್ಲಿ ಅಳವಡಿಸುವ ಪರಂಪರೆಗೆ ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವಿದೆ. ಕುಶಾನರ ನಾಣ್ಯಗಳಲ್ಲಿ ಮೊಟ್ಟ ಮೊದಲ ಭಾರಿಗೆ ಶಿವ ಲಕ್ಷ್ಮಿ, ಬುದ್ಧ, ನಂದಿ ಮುಂತಾದ ದೇವತೆಗಳ ಚಿತ್ರಗಳನ್ನು ಕಾಣುತ್ತೇವೆ. ಕುಶಾನರ ದೊರೆ ಕಾನಿಷ್ಕನ ನಾಣ್ಯಗಳಲ್ಲಿ ಇರಾನಿಯನ್(ಪರ್ಶಿಯನ್)‌, ಗ್ರೀಕ್ ಮತ್ತು ಹಿಂದೂ ದೇವತೆಗಳ ಚಿತ್ರವಿರುವುದು ಗಮನಾರ್ಹ. ಅಂತೆಯೇ ಇದು ಕಾನಿಷ್ಕನ ಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಿದೆ. ಈ ರೀತಿ ನಾಣ್ಯಗಳ ಮೇಲೆ ದೇವತೆಗಳ ಚಿತ್ರವನ್ನು ಅಳವಡಿಸುವುದು ಒಂದು ಪದ್ಧತಿಯಾಗಿ ಬೆಳೆದು, ಮುಂದೆ ಬಂದ ಎಲ್ಲಾ ರಾಜವಂಶಗಳು ಇದರಿಂದ ಪ್ರಭಾವಿತವಾದವು.

    ಗುಪ್ತರ ಕಾಲದಲ್ಲಿ ರಾಜ ರಾಣಿಯರ ಚಿತ್ರಗಳು, ದೇವ, ದೇವತೆಯರ ಚಿತ್ರಗಳನ್ನು ಅತ್ಯಂತ ಕಲಾತ್ಮಕ ಶೈಲಿಯಲ್ಲಿ ನಾಣ್ಯಗಳ ಮೇಲೆ ಅಳವಡಿಸಲಾಯಿತು. ಕುಶಾನರ ಪ್ರಭಾವ ಗುಪ್ತರ ನಾಣ್ಯಗಳಲ್ಲಿ ಕಾಣಬಹುದು. ಚಿನ್ನ ಮತ್ತು ಬೆಳ್ಳಿಯ ಕಲಾತ್ಮಕವಾದ ನಾಣ್ಯಗಳಿಂದಲೇ ಗುಪ್ತರ ಯುಗ ʼಸುವರ್ಣಯುಗʼ ಎನ್ನುವಷ್ಟರ ಮಟ್ಟಿಗೆ ಖ್ಯಾತಿಗಳಿಸಿತ್ತು. ಸಮುದ್ರಗುಪ್ತನ ಚಿನ್ನದ ನಾಣ್ಯಗಳಲ್ಲಿ ಅಶ್ವಮೇಧ ಯಾಗದ ಕುದುರೆ, ಮತ್ತೊಂದರಲ್ಲಿ ಲಕ್ಷ್ಮಿಯ ಸುಂದರ ಚಿತ್ರ, ಪರುಶುವಿನ ಚಿತ್ರವಿರುವ ಚಿನ್ನದ ನಾಣ್ಯ, ವೀಣೆಯನ್ನು ನುಡಿಸುತ್ತಿರುವ ಸಮುದ್ರಗುಪ್ತನ ನಾಣ್ಯಗಳು ಕಲಾವೈವಿಧ್ಯಕ್ಕೆ ಸಾಕ್ಷಿಯಾಗಿವೆ. ಇಮ್ಮಡಿ ಚಂದ್ರಗುಪ್ತನ ಒಂದು ನಾಣ್ಯದಲ್ಲಿ ಕಾರ್ತಿಕೇಯನ ಚಿತ್ರವಿದೆ. ಕುಮಾರಗುಪ್ತನ ನಾಣ್ಯಗಳಲ್ಲಿ ದೇವತೆ ಕಾರ್ತಿಕೇಯನು ನವಿಲಿನ ಮೇಲೆ ಕುಳಿತಿದ್ದಾನೆ. ಮತ್ತೊಂದರಲ್ಲಿ ಗಂಗೆಯು ಮೊಸಳೆಯ ಮೇಲೆ ನಿಂತಿದ್ದಾಳೆ. ಗುಪ್ತ ದೊರೆಗಳ ಕಾಲವನ್ನು ವೈಷ್ಣವ ಪಂಥದ ಪುನರುಜ್ಜಿವನ ಕಾಲವೆಂದೇ ಕರೆಯಲು ಈ ನಾಣ್ಯಗಳು ಸಹಕಾರಿಯಾಗಿವೆ.

    ಕೆಲವು ಗಣರಾಜ್ಯಗಳ ನಾಣ್ಯಗಳ ಮೇಲೆ ಧಾರ್ಮಿಕ ಚಿಹ್ನೆಗಳಾದ ಚಕ್ರ, ಸ್ವಸ್ತಿಕ, ಚೈತ್ಯ ನಂದಿ, ಮುಂತಾದ ಚಿಹ್ನೆಗಳನ್ನು ಕಾಣಬಹುದು. ವರ್ದನರ ಕಾಲದ ಹರ್ಷನ ನಾಣ್ಯಗಳಲ್ಲಿ ಶಿವ, ಪಾರ್ವತಿಯರ ಚಿತ್ರಗಳನ್ನು ಕಾಣಬಹುದು.

    ದಕ್ಷಿಣ ಭಾರತದ ಪ್ರಸಿದ್ಧ ರಾಜಮನೆತನಗಳಾದ ಸೇವುಣ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯ ಮತ್ತು ಪಲ್ಲವರಾಜ್ಯದ ನಾಣ್ಯಗಳಲ್ಲಿ ದೇವ ದೇವಿಯಿರುವ ಚಿತ್ರಗಳನ್ನು ಕಾಣಬಹುದು. ವಿಜಯನಗರದ ನಾಣ್ಯಗಳು ಈ ದೃಷ್ಟಿಯಿಂದ ಗಮನಾರ್ಹವಾಗಿವೆ. ಹಾಗೆ ನೋಡಿದರೆ ದೇವ-ದೇವತೆಯರ ಚಿತ್ರ ಅಥವಾ ಚಿಹ್ನೆಗಳು ಇಲ್ಲದ ಒಂದು ನಾಣ್ಯವೂ ವಿಜಯನಗರದ ಅರಸರ ಕಾಲದಲ್ಲಿ ಮುದ್ರಿತವಾಗಲೇ ಇಲ್ಲ. ಈ ಕಾಲದಲ್ಲಿ ಶೈವ, ವೈಷ್ಣವ, ದೇವ ದೇವತೆಗಳ ನಾಣ್ಯಗಳು ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಬ್ರಹ್ಮ ವಿಷ್ಣು, ಶಿವ, ಸರಸ್ವತಿ, ಪಾರ್ವತಿ, ಲಕ್ಷ್ಮಿ, ಗರುಡ, ನಂದಿ, ಗಣೇಶ, ವೆಂಕಟೇಶ್ವರ, ಶ್ರೀರಾಮ ಚಿಹ್ನೆಗಳನ್ನು ಒಳಗೊಂಡ ಈ ನಾಣ್ಯಗಳು ಧಾರ್ಮಿಕ ಇತಿಹಾಸದಲ್ಲಿ ಪ್ರತ್ಯೇಕವಾದ ಸ್ಥಾನವನ್ನು ಪಡೆದುಕೊಂಡಿವೆ. ಶ್ರೀ ಕೃಷ್ಣದೇವರಾಯನು ತಿರುಪತಿ ವೆಂಕಟೇಶ್ವರನಿಗೆ ಕನಕಾಭಿಷೇಕವನ್ನು ಮಾಡುವ ಸಲುವಾಗಿ 120 ಗ್ರೇನ್ ತೂಕದ ಚಿನ್ನದ ನಾಣ್ಯವನ್ನು ಟಂಕಿಸಿದನು. ಇದನ್ನು ಜನರು ತಿರುಪತಿಯ ಹಣ ಎಂದೇ ಕರೆಯತ್ತಿದ್ದರು. ಇದರಲ್ಲಿ ತಿರುಪತಿ ವೆಂಕಟೇಶ್ವರನ ಚಿತ್ರವಿದೆ.

    ಮುಸ್ಲಿಂ ದೊರೆಗಳ ನಾಣ್ಯಗಳಲ್ಲಿ ದೇವ ದೇವತೆಗಳ ಚಿತ್ರಗಳನ್ನು ಅಳವಡಿಸುವುದಕ್ಕೆ ಅವಕಾಶವಿಲ್ಲ, ಮುಸ್ಲಿಂ ದೊರೆಗಳ ನಾಣ್ಯಗಳಲ್ಲಿ ಧಾರ್ಮಿಕ ಚಿಹ್ನೆಗಳು ಕಾಣಸಿಗುವುದಿಲ್ಲ. ಇದಕ್ಕೆ ಕೆಲವು ಅಪವಾದಗಳಿವೆ. ಅವುಗಳನ್ನು ಇಲ್ಲಿ ಉದಾಹರಣೆ ಸಮೇತ ವಿವರಿಸಬಹುದು. ಮಹಮದ್ ಘೋರಿಯ ನಾಣ್ಯದ ಮುಮ್ಮುಖದಲ್ಲಿ ಲಕ್ಷ್ಮಿಯ ಚಿತ್ರವಿದೆ. ಮೊಗಲ್ ಚಕ್ರವರ್ತಿ ಅಕ್ಬರನ ಬೆಳ್ಳಿಯ ನಾಣ್ಯಗಳಲ್ಲಿ ಶ್ರೀರಾಮ, ಸೀತೆಯರ ಚಿತ್ರ ಹಾಗೂ ರಾಮ, ಸಿಯಾ ಎಂಬ ನಾಗರಿ ಬರಹ ಇರುವುದು ಗಮನಾರ್ಹವಾದುದು. ಜಹಾಂಗೀರನು ತನ್ನ ಬೆಳ್ಳಿಯ ನಾಣ್ಯಗಳ ಮೇಲೆ ಹಿಂದೂ ದ್ವಾದಷ ರಾಶಿ (ಮೇಷದಿಂದ ಮೀನದವರೆಗೆ) ಚಿಹ್ನೆಗಳನ್ನು ಅಚ್ಚು ಹಾಕಿಸಿದನು. ಹೈದರಾಲಿಯ ಚಿನ್ನದ ನಾಣ್ಯಗಳ ಮೇಲೆ ಶಿವ, ಪಾರ್ವತಿಯರ ಚಿತ್ರಗಳು ಕಂಡು ಬರುತ್ತವೆ.

    ಸೇವುಣರ ನಾಣ್ಯಗಳು, ಆಳುಪರ ನಾಣ್ಯಗಳು, ಇಕ್ಷಾಕು ಪೂರ್ವ ಚಾಲುಕ್ಯರು, ಸಾಮಂತ ರಾಜರು ಮತ್ತು ನಾಯಕರುಗಳ ನಾಣ್ಯಗಳಲ್ಲಿ ಒಂದಲ್ಲ ಒಂದು ಧಾರ್ಮಿಕ ಚಿಹ್ನೆಯನ್ನು ಕಾಣಬಹುದು.

    ವಿಜಯನಗರ ಸಾಮ್ರಾಜ್ಯದ ನಾಣ್ಯ ಪದ್ಧತಿ ವಿಜಯನಗರದ ನಂತರದ ಅರಸು ಮನೆತನಗಳಿಗೆ ಮಾರ್ಗಸೂಚಿಯಾಗಿತ್ತು, ದೇವ ದೇವತೆಗಳ ಚಿಹ್ನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಮೈಸೂರು ಒಡೆಯರ ನಾಣ್ಯಗಳು ವಿಜಯನಗರದ ನಾಣ್ಯ ಪದ್ದತಿಯನ್ನೇ ಅನುಸರಿಸಿ, ಚಿನ್ನ, ಬೆಳ್ಳಿ ಮತ್ತು ತಾಮ್ರಗಳಲ್ಲಿ ನಾಣ್ಯಗಳನ್ನು ಟಂಕಿಸಿದರು. ಒಡೆಯರ್ ಮನೆತನದಲ್ಲಿ ಮೊಟ್ಟಮೊದಲನೇ ಬಾರಿಗೆ ಟಂಕಶಾಲೆಯನ್ನು ಸ್ಥಾಪಿಸಿದವರು ಕಂಠೀರವ ನರಸರಾಜ ಒಡೆಯರ್, ಶ್ರೀ ರಂಗಪಟ್ಟಣದಲ್ಲಿ ಟಂಕಶಾಲೆಯನ್ನು ಆರಂಭಿಸಿ ತಮ್ಮದೇ ಆದ ನಾಣ್ಯಗಳನ್ನು ಟಂಕಿಸಲು ಆರಂಭಿಸಿದರು. ಇವರ ವರಹ ಮತ್ತು ಅರ್ಧವರಹ ಚಿನ್ನದ ನಾಣ್ಯದ ಮುಮ್ಮುಖದಲ್ಲಿ ಲಕ್ಷ್ಮಿಯೊಡನೆ ಕುಳಿತಿರುವ ಶಂಕ, ಚಕ್ರಧಾರಿಯಾದ ನರಸಿಂಹನ ಚಿತ್ರವಿದೆ. ಹಿಮ್ಮುಖದಲ್ಲಿ ಶ್ರೀ ಕಂಠೀರವ ನರಸರಾಜ ಎಂಬ ಬರಹವಿದೆ.

    ತಾಮ್ರದ ನಾಣ್ಯಗಳಲ್ಲಿ ಶಿವಲಿಂಗ, ನವಿಲು, ಮೀನು, ಕುಳಿತಿರುವ ಗಣಪತಿ, ಕಾರ್ತಿಕೇಯ, ವೈಷ್ಣವ ನಾಮದ ಚಿಹ್ನೆಯೊಡನೆ ಶಂಖ, ಚಕ್ರ. ವೃಷಭ ಮತ್ತು ಸೂರ್ಯ, ಚಂದ್ರ ಆನೆಯ ಮೇಲಿನ ಸವಾರ ಮುಂತಾದ ಚಿತ್ರಗಳಿವೆ. ಈ ನಾಣ್ಯಗಳು ಕಂಠಿರಾಯ ಹಣ ಎಂದೇ ಖ್ಯಾತಿಗೊಂಡಿದ್ದವು.

    ಚಿಕ್ಕ ದೇವರಾಜ ಒಡೆಯರ್ (ಕ್ರಿ.ಶ. 1673-1704)

    ಇವರ ಕಾಲದ ಚಿನ್ನದ ನಾಣ್ಯಗಳಲ್ಲಿ ಅಲಂಕೃತ ಕಮಾನಿನ ಮಂಟಪದೊಳಗೆ ನಾಟ್ಯ ಮಾಡುತ್ತಿರುವ ಅಲಂಕೃತ ಬಾಲಕೃಷ್ಣ, ಬಲಗೈಯುಲ್ಲಿ ಬೆಣ್ಣೆಯ ಮುದ್ದೆ ಕೆಳಭಾಗದಲ್ಲಿ ಸರ್ಪವಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಚಿನ್ನ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಟಂಕಿಸಿದರು. ಇವರು ಟಂಕಿಸಿದ ಚಿನ್ನದ ವರಹದ ನಾಣ್ಯ ಇಕ್ಕೇರಿ ವರಹದ ಮಾದರಿಯಲ್ಲಿದ್ದುದರಿಂದ ಅದಕ್ಕೆ ʼಹೊಸ ಇಕ್ಕೇರಿ ವರಹʼ ಎಂದು ಹೆಸರು ಬಂತು. ನಾಣ್ಯದ ಮುಮ್ಮಖದಲ್ಲಿ ಶಿವ ಪಾರ್ವತಿಯರಿದ್ದಾರೆ. ಶಿವನ ಕೈಯಲ್ಲಿ ತ್ರಿಶೂಲವಿದೆ. ಹಿಮ್ಮುಖದಲ್ಲಿ ʼಶ್ರೀʼ ಎನ್ನುವ ಕನ್ನಡ ಅಕ್ಷರವಿದೆ. ಶಿವ ಪಾರ್ವತಿ ನಮೂನೆಯ ನಾಣ್ಯಗಳು ತುಂಬಾ ಜನಾನುರಾಗಿಯಾಗಿದ್ದವು. ಮೊದಲಿಗೆ ಶಿವ-ಪಾರ್ವತಿ ನಮೂನೆಯ ನಾಣ್ಯಗಳನ್ನು ಜನಪ್ರಿಯಗೊಳಿಸಿದವರು ವಿಜಯನಗರದ ಅರಸರು. ಇಮ್ಮಡಿ ಹರಿಹರ, ಮೊಟ್ಟಮೊದಲು ಶಿವ ಪಾರ್ವತಿಯರ ನಾಣ್ಯವನ್ನು ಅಚ್ಚು ಮಾಡಿಸಿದ್ದು ಈತ ಶೈವ ಧರ್ಮೀಯನಾಗಿದ್ದನು. ಇಮ್ಮಡಿ ದೇವರಾಯ ಮತ್ತು ಕೃಷ್ಣದೇವರಾಯರು ಶಿವ ಪಾರ್ವತಿಯರ ನಾಣ್ಯಗಳನ್ನು ಅಚ್ಚು ಹಾಕಿಸಿದರು. ಕೃಷ್ಣದೇವರಾಯನ ಶಿವ ಪಾರ್ವತಿಯರ ಚಿನ್ನದ ನಾಣ್ಯ ಎಷ್ಟು ಜನ ಪ್ರಿಯವಾಯಿತೆಂದರೆ ಆ ನಾಣ್ಯದ ಮಾದರಿಯನ್ನು ಕೆಳದಿಯ ಶಿವಪ್ಪ ನಾಯಕನು ಮುಂದುವರೆಸಿದನು. ಸದಾಶಿವರಾಯ ಮತ್ತು ಶಿವಪ್ಪ ನಾಯಕನ ಶಿವ ಪಾರ್ವತಿ ನಾಣ್ಯಗಳಲ್ಲಿ ವಿಶೇಷ ಸ್ವಾಮ್ಯತೆ ಇರುತ್ತದೆ. ಪ್ರತಾಪ ಎನ್ನುವ ಬಿರುದು ಇಲ್ಲದೇ ಹೋಗಿದ್ದರೆ ಇವರೀರ್ವರ ನಾಣ್ಯಗಳನ್ನು ಗುರುತಿಸುವುದೇ ಕಷ್ಟವಾಗಿತ್ತು. ಕೆಳದಿಯ ವೆಂಕಟಪ್ಪ ನಾಯಕನ ನಾಣ್ಯಗಳ ಮೇಲೂ ಶಿವ ಪಾರ್ವತಿಯರ ವಿನ್ಯಾಸ ಕಾಣಬಹುದು. ಕೆಳದಿಯ ಈ ನಾಣ್ಯಗಳು ಇಕ್ಕೇರಿ ವರಹ ಎಂದೇ ಜನಪ್ರಿಯವಾಗಿತ್ತು. ಹೈದರಾಲಿ ಸಹ ಶಿವಪಾರ್ವತಿಯರ ನಾಣ್ಯಗಳನ್ನು ಅಚ್ಚು ಹಾಕಿಸಿದ್ದು. ಒಂದು ವಿಶೇಷ. ಇದು ಬಹದ್ದೂರಿ, ಪಗೋಡ ಎಂಬ ಹೆಸರಿನಿಂದ ಪ್ರಸಿದ್ದಿ ಪಡೆದಿತ್ತು.

    ವಿಷ್ಣು ಲಕ್ಷ್ಮಿ ಚಿಹ್ನೆಯ ನಾಣ್ಯಗಳು:

    ಈ ರೀತಿಯ ಚಿಹ್ನೆಯ ನಾಣ್ಯಗಳನ್ನು ವಿಜಯನಗರದ ದೊರೆ ಮೊದಲನೇ ದೇವರಾಯನ ಕಾಲದಲ್ಲಿ ಕಾಣಬಹುದು. ಈ ದೊರೆಯು ವಿಷ್ಣು ಲಕ್ಷ್ಮಿಯ ಅರ್ಧ ವರಹ ಮೌಲ್ಯದ ನಾಣ್ಯಗಳನ್ನು ಅಚ್ಚು ಹಾಕಿಸಿದ್ದನು. ಇಮ್ಮಡಿ, ಹರಿಹರ, ಈ ಮಾದರಿಯನ್ನು ಅನುಸರಿಸಿದನು. ಸದಾಶಿವರಾಯ, ಮೈಸೂರು ಒಡೆಯರು. ವಿಷ್ಣು ಮತ್ತು ಲಕ್ಷ್ಮಿಯ ಚಿಹ್ನೆ ಉಳ್ಳ ನಾಣ್ಯಗಳನ್ನು ಅಚ್ಚು ಹಾಕಿಸಿದ್ದರು. ಲಕ್ಷ್ಮಿಯ ಚಿಹ್ನೆಯುಳ್ಳ ನಾಣ್ಯಗಳನ್ನು ಮೊದಲು ಟಂಕಿಸಿದವರು ಕುಶಾನರು. ದೆಹಲಿ ಸುಲ್ತಾನರು, ಘೋರಿ ಮಹಮ್ಮದ್, ಇಂಡೋ ಬ್ಯಾಕ್ಟ್ರಿಯನ್ ದೊರೆ ಮೊದಲನೇ ಏಜಸ್ ತನ್ನ ಚಿನ್ನದ ನಾಣ್ಯದಲ್ಲಿ ಲಕ್ಷ್ಮಿಯ ವಿಶೇಷ ವಿನ್ಯಾಸದ ನಾಣ್ಯವನ್ನು ಹೊರಡಿಸಿದ್ದನು. ಇದರಲ್ಲಿ ಎರಡು ಆನೆಗಳು, ಲಕ್ಷ್ಮಿಗೆ ನೀರಿನಿಂದ ಅಭಿಷೇಕ ಮಾಡುತ್ತಿರುವಂತೆ ತೋರಿಸಲಾಗಿದೆ. ವಸ್ಯ ರಾಜ್ಯದ ರಾಜಧಾನಿ ಕೌಶಾಂಬಿಯಲ್ಲಿ ದೊರಕಿರುವ ಅನೇಕ ತಾಮ್ರದ ನಾಣ್ಯಗಳಲ್ಲಿ ಅಭಿಷೇಕ ಲಕ್ಷ್ಮಿಯ ಚಿತ್ರವಿರುವುದು ಗಮನಾರ್ಹವಾದುದು. ಹೂಣರ ದೊರೆ ಮಿಹಿರಗುಲನ ನಾಣ್ಯಗಳಲ್ಲಿ ಲಕ್ಷ್ಮಿಯ ಚಿತ್ರವಿದೆ. ತ್ರಿಪುರಿಯಲ್ಲಿ ಆಳಿದ ಕಲಚೂರಿ ದೊರೆ ಗಂಗೇಯ ದೇವನು ಲಕ್ಷ್ಮಿಯ ನಮೂನೆಯ ನಾಣ್ಯಗಳನ್ನು ಚಿನ್ನ, ಬೆಳ್ಳಿ ಮತ್ತು ತಾಮ್ರಗಳಲ್ಲಿ ಟಂಕಿಸಿದನು. ಇವುಗಳಲ್ಲಿ ನಾಲ್ಕು ಕೈಗಳುಳ್ಳ ಲಕ್ಷ್ಮಿಯ ಚಿತ್ರವಿದೆ. ಮಾಳ್ವದ ಪಾರಮಾರ ದೊರೆಗಳು, ಜಾಂದೇಲರು, ಗಹಡವಾಲರು, ಗೋವಿಂದ, ಚಂದ್ರ, ಕುಮಾರಪಾಲ ಮುಂತಾದ ರಾಜಮನೆತನಗಳು  ಲಕ್ಷ್ಮಿಯ ಚಿತ್ರವಿರುವ ನಾಣ್ಯಗಳನ್ನು ಹೊರಡಿಸಿದ್ದರು. ಇವುಗಳು ತುಂಬಾ ಜನಾನುರಾಗಿಯಾಗಿ ಕಂಡು ಬಂದವು.

    ಲಕ್ಷ್ಮಿ ನರಸಿಂಹ:

    ಮೊದಲ ಬಾರಿಗೆ ಲಕ್ಷ್ಮಿನರಸಿಂಹ ಚಿತ್ರವನ್ನು ಕಾಣುವುದು ಹೊಯ್ಸಳ ದೊರೆ ಇಮ್ಮಡಿ ನರಸಿಂಹನ ಕಾಲದ ನಾಣ್ಯಗಳಲ್ಲಿ. ನಂತರ ವಿಜಯನಗರದ ಕಾಲದಲ್ಲೂ ಲಕ್ಷ್ಮಿನರಸಿಂಹ ಚಿತ್ರವನ್ನು ಕಾಣಬಹುದು.

    ಶ್ರೀರಾಮ:

    ವಿಜಯನಗರದ ದೊರೆ ತಿರುಮಲರಾಯರು ಶ್ರೀರಾಮನ ನಾಣ್ಯಗಳನ್ನು ಅತ್ಯಂತ ಹೆಚ್ಚಾಗಿ ಅಚ್ಚು ಹಾಕಿಸಿದ. ನಂತರ ಮೊಗಲ್ ಚಕ್ರವರ್ತಿ ಅಕ್ಬರ್‌ ನು  ಶ್ರೀ ರಾಮ ಸೀತೆಯ ಚಿಹ್ನೆಯುಳ್ಳ ಚಿತ್ರಗಳನ್ನು ಟಂಕಿಸಿದ. ದಕ್ಷಿಣ ಭಾರತದ ದೇವಾಲಯಗಳಲ್ಲಿ ಪೂಜಾ ಗೃಹಗಳಲ್ಲಿ ರಾಮಟಂಕಾ ನಾಣ್ಯಗಳು ಅಧಿಕವಾಗಿ ಕಂಡು ಬರುತ್ತವೆ.

    ದುರ್ಗಾದೇವಿ

    ಕುಶಾನರು, ಹೊಯ್ಸಳರು ಮತ್ತು ಚಿತ್ರದುರ್ಗದ ಪಾಳೇಗಾರರ ನಾಣ್ಯಗಳಲ್ಲಿ ದುರ್ಗಾ ದೇವಿಯ ಚಿತ್ರಗಳನ್ನು ಕಾಣಬಹುದು. ಮೈಸೂರಿನ ಚಿಕ್ಕದೇವರಾಜ ಒಡೆಯರ್‌ರವರು “ಶ್ರೀ ಚಾಮುಂಡಿ” ಎಂಬ ನಾಣ್ಯಗಳನ್ನು ಹೊರಡಿಸಿದ್ದು ನಾಣ್ಯಗಳ ಮೇಲೆ ದುರ್ಗಾದೇವಿಯ ಚಿಹ್ನೆಗಳನ್ನು ಕಾಣಬಹುದು.

    ಹನುಮಂತ:

    ಕ್ರಿ.ಶ. 12ನೇ ಶತಮಾನದಲ್ಲಿ ಕಲಚೂರಿಗಳು ಹನುಮಂತ ಹಾರುತ್ತಿರುವ ಅನೇಕ ನಮೂನೆಯ ನಾಣ್ಯಗಳನ್ನು ಟಂಕಿಸಿದ್ದರು. ಕೆಲವು ಚಾಂದೇಲ ದೊರೆಗಳು, ಕಲ್ಯಾಣಿ ಚಾಲುಕ್ಯರು ಮತ್ತು ಹಾನಗಲ್ ಕದಂಬರ ನಾಣ್ಯಗಳಲ್ಲಿ ಹನುಮಂತನ ಚಿತ್ರವಿದೆ. ವಿಜಯನಗರದ ದೊರೆ ಹರಿಹರನು ಹನುಮಂತನ ಚಿತ್ರವುಳ್ಳ ನಾಣ್ಯಗಳನ್ನು ಮೊದಲು ಬಳಕೆಗೆ ತಂದರು. ಬುಕ್ಕರಾಯನು ಇದೇ ರೀತಿ ಹನುಮಂತನ ನಾಣ್ಯಗಳನ್ನು ಟಂಕಿಸಿದನು.

    ಕಾರ್ತಿಕೇಯ:

    ಚಾಲುಕ್ಯ ದೊರೆ ವಿಕ್ರಮಾಧಿತ್ಯನು ಚಿನ್ನ ಮತ್ತು ಬೆಳ್ಳಿಯ ಮಿಶ್ರ ಲೋಹದ ನಾಣ್ಯಗಳನ್ನು ಟಂಕಿಸಿದನು. ಇದರಲ್ಲಿ ನಿಂತಿರುವ ದೇವತೆ ಸರ್ಪ ಮತ್ತು ನವಿಲು ಕಾಣಬರುತ್ತದೆ. ಆದುದರಿಂದ ನಿಂತಿರುವ ಈ ದೇವತೆಯನ್ನು ಕಾರ್ತಿಕೇಯ ಎಂದು ಗುರುತಿಸಲಾಗಿದೆ.

    ಗರುಡ:

    ಕರ್ನಾಟಕದಲ್ಲಿ ವಿಜಯನಗರದ ದೊರೆಗಳು ಉತ್ತರ ಭಾರತದಲ್ಲಿ ಗುಪ್ತರ ನಾಣ್ಯಗಳಲ್ಲಿ ಗರುಡನ ಚಿಹ್ನೆಯ ನಾಣ್ಯಗಳು ಸಿಕ್ಕಿವೆ. ಗರುಡ ಚಿಹ್ನೆಯ ನಾಣ್ಯಗಳನ್ನು ಅಚ್ಚು ಹಾಕಿಸಿದ ಮೊಟ್ಟ ಮೊದಲನೆಯ ದೊರೆ ಹರಿಹರ. ನಂತರ ಶ್ರೀ ಕೃಷ್ಣದೇವರಾಯನ ತಾಮ್ರದ ನಾಣ್ಯಗಳು ಗರುಡ ಚಿಹ್ನೆಗಳನ್ನು ಒಳಗೊಂಡಿದೆ.

    ವೆಂಕಟೇಶ್ವರ:

    ಶ್ರೀ ಕೃಷ್ಣದೇವರಾಯನು ತಿರುಪತಿ ವೆಂಕಟೇಶ್ವರ ಸ್ವಾಮಿಯ ಭಕ್ತನಾಗಿದ್ದನು. ಇವನು ವೆಂಕಟೇಶ್ವರ ಸ್ವಾಮಿಗೆ ಕನಕಾಭಿಷೇಕವನ್ನು ಮಾಡುವುದಕ್ಕೋಸ್ಕರ ವೆಂಕಟೇಶ್ವರನ ಚಿತ್ರವಿರುವ 117 ಗ್ರೈನ್ ತೂಕದ ಚಿನ್ನದ ನಾಣ್ಯವನ್ನು ಅಚ್ಚು ಹಾಕಿಸಿದನು. ವಿಜಯನಗರದ ದೊರೆ ಶ್ರೀ ರಂಗರಾಯನು ಈ ಪರಂಪರೆಯನ್ನು ಮುಂದುವರೆಸಿದನು. ಇವನು 52 ಗ್ರೈನ್ ತೂಕವಿರುವ ವೆಂಕಟೇಶ್ವರ ಚಿತ್ರವಿರುವ ನಾಣ್ಯವನ್ನು ಅಚ್ಚು ಮಾಡಿಸಿದನು. ಇದರಲ್ಲಿ ಶ್ರೀ “ವೆಂಕೆಟೇಶ್ವರಾಯ ನಮಃ” ಎಂಬ ಬರಹವೂ ಇದೆ.

    ಕೃಷ್ಣ

    ವಿಜಯನಗರದ ಕೃಷ್ಣದೇವರಾಯನ ಒಂದು ನಾಣ್ಯದಲ್ಲಿ ಬಾಲಕೃಷ್ಣ ಚಿಹ್ನೆ ಇರುವ ನಾಣ್ಯಗಳು ಇವೆ. ಇನ್ನು ಕೃಷ್ಣ ಮುದ್ರೆಯ ನಾಣ್ಯಗಳನ್ನು ಅತೀ ಹೆಚ್ಚು ಅಚ್ಚು ಹಾಕಿಸಿದವರೆಂದರೆ ಮೈಸೂರಿನ ಒಡೆಯರು.

    ಬ್ರಹ್ಮ ಸರಸ್ವತಿ:

    ವಿಜಯನಗರದ ದೊರೆ ಇಮ್ಮಡಿ ಹರಿಹರನು ತನ್ನ ಚಿನ್ನದ ವರಹ, ಅರ್ಧ ವರಹ ನಾಣ್ಯದಲ್ಲಿ ಬ್ರಹ್ಮ ಸರಸ್ವತಿಯ ಚಿತ್ರಗಳನ್ನು ಅಳವಡಿಸಿದನು. ಗುಪ್ತರ ನಾಣ್ಯಗಳಲ್ಲೂ ಬ್ರಹ್ಮ ಸರಸ್ವತಿಯರ ಚಿತ್ರಗಳನ್ನು ಕಾಣಬಹುದು.

    ಒಟ್ಟಿನಲ್ಲಿ ಭಾರತೀಯ ನಾಣ್ಯಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಕಾಣಬಹುದು. ಭಾರತೀಯ ನಾಣ್ಯಗಳಲ್ಲಿ ಕಾಣಬರುವಷ್ಟು ದೇವ ದೇವತೆ ಮತ್ತು ಧಾರ್ಮಿಕ ಚಿಹ್ನೆಗಳನ್ನು ಇತರೆ ದೇಶಗಳ ನಾಣ್ಯಗಳಲ್ಲಿ ಕಾಣಬರುವುದಿಲ್ಲ.

    ನಾಣ್ಯಗಳು ಲಕ್ಷ್ಮಿಯ ಒಂದು ಅಂಶ ಎಂದು ನಂಬಿದ್ದ ಭಾರತೀಯರಿಗೆ ಈ ಧಾರ್ಮಿಕ ಭಾವನೆ ಸಹಜವಾಗಿಯೇ ತೋರಿದುದರಲ್ಲಿ ಆಶ್ಚರ್ಯವೇನಿಲ್ಲ. ನಮ್ಮ ಭಾರತೀಯ ಸಮಾಜದಲ್ಲಿ ಧಾರ್ಮಿಕತೆಗೆ ಎಷ್ಟೊಂದು ಮಹತ್ವವಿದ್ದಿತು ಎನ್ನುವುದನ್ನು ನೆನೆಸಿಕೊಂಡಾಗ ನಾಣ್ಯಗಳು ಈ ಪರಿದಿಯ ಒಳಗೆ ಇದ್ದುದು ಅರ್ಥಪೂರ್ಣವೆನಿಸುತ್ತವೆ.

    ನಾಣ್ಯಗಳ ಅಧ್ಯಯನದಿಂದ ತಿಳಿದು ಬರುವ ಸಂಗತಿಗಳು

    1) ರಾಜ ಮಹಾರಾಜರ ಧಾರ್ಮಿಕ ಒಲವು ತಿಳಿಯುವಲ್ಲಿ ನಾಣ್ಯ ಶಾಸ್ತ್ರ ಪ್ರಮುಖವಾದದ್ದು. ಇದು ಸಾಹಿತ್ಯಾಧಾರದ ಲೋಪದೋಷಗಳನ್ನು ಸರಿಪಡಿಸುತ್ತದೆ.

    2) ಶೈವ, ವೈಷ್ಣವ, ಬೌದ್ಧ ಇತರ ಧಾರ್ಮಿಕ ಚಿಹ್ನೆಗಳನ್ನು ಹೊಂದಿದ್ದ ನಾಣ್ಯ ಒಂದೇ ಕಾಲದಲ್ಲಿ ಒಂದೇ ಸ್ಥಳದಲ್ಲಿ ಚಲಾವಣೆಯಲ್ಲಿ ಇದ್ದುದರಿಂದ ಆ ಕಾಲದಲ್ಲಿ ಧಾರ್ಮಿಕ ಪಂಥಗಳ ಸಹಬಾಳ್ವೆಗೆ ಸಾಕ್ಷಿಯಾಗಿದೆ.

    3) ಸ್ಥಳೀಯ ಜನರ ವಿಶ್ವಾಸವನ್ನು ಸಂಪಾದಿಸುವ ದೃಷ್ಟಿಯಿಂದ ಅನೇಕ ಮುಸ್ಲಿಂ ಸುಲ್ತಾನರು ಕೊನೆಗೆ ಬ್ರಿಟಿಷರೂ ಕೂಡಾ ಈ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದರು. ಕುಶಾನರು ಶೈವ, ಬೌದ್ಧ ಸಂಬಂಧದ ಚಿಹ್ನೆಗಳನ್ನು ಮುದ್ರಿಸಿದ್ದರು. ಹೈದರಾಲಿ, ಅಕ್ಬರ್, ಜಹಾಂಗೀರ್, ಅಷ್ಟೇ ಏಕೆ ಘೋರಿ ಮಹಮದ್,  ಕೂಡ ಹಿಂದೂ ದೇವತೆಗಳ ಚಿಹ್ನೆಗಳನ್ನು ನಾಣ್ಯಗಳಲ್ಲಿ ಬಳಸಿದ್ದನು.

    4) ಒಂದೇ ರಾಜಮನೆತನದ ವಿವಿಧ ರಾಜರು ಶೈವ ಮತ್ತು ವೈಷ್ಣವ ಚಿಹ್ನೆಯನ್ನು ಹೊಂದಿದ್ದ ನಾಣ್ಯಗಳನ್ನು ಅಚ್ಚು ಮಾಡಿಸಿದ್ದು ಇನ್ನೊಂದು ವೈಶಿಷ್ಟವೆನ್ನಬಹುದು. ಚುಟುಕಲಾಂದ. ಶಿವಲಾನಂದರ ನಾಣ್ಯಗಳಲ್ಲಿ ಹಾಗೂ ಮರಾಠಿ ನಾಣ್ಯಗಳ ಕಟಾಂಜನದಲ್ಲಿ ಇರುವ ವೃಕ್ಷ ಪ್ರಮುಖ ಚಿಹ್ನೆಯಾಗಿ ಕಾಣಿಸಿಕೊಳ್ಳುತ್ತದೆ. ಕ್ರಿಸ್ತಶಕದ ಮೊದಲ ಶತಮಾನಗಳಲ್ಲಿ ಬೌದ್ಧ ಧರ್ಮಕ್ಕೆ ಸೇರಿದ ಚಿಹ್ನೆಗಳನ್ನು ರಾಜರು ವಿಶೇಷವಾಗಿ ಬಳಸುತ್ತಿದ್ದರು.

    5) ಹೊರದೇಶದಿಂದ ಭಾರತಕ್ಕೆ ಬಂದು ಇಲ್ಲಿ ರಾಜ್ಯ ಸ್ಥಾಪನೆ ಮಾಡಿದ ಕುಶಾನರು ಭಾರತೀಕರಣಕ್ಕೆ ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು. ಕಾನಿಷ್ಕ, ಗ್ರೀಕ್, ಸುಮೇರಿಯನ್ ಎಲಾಮೈಟ್, ಪರ್ಶಿಯನ್ ಹಿಂದೂ ದೇವತೆಗಳನ್ನು ನಾಣ್ಯಗಳಲ್ಲಿ ಅಳವಡಿಸಿರುವುದು ಕಾನಿಷ್ಕನ ಧರ್ಮಸಮನ್ವಯತೆಯ ದೃಷ್ಟಿಕೋನಕ್ಕೆ ಒಂದು ಸಾಕ್ಷಿ ಎಂದೇ ಹೇಳಬಹುದು. ಕುಶಾನರ ನಾಣ್ಯಗಳಲ್ಲಿ ಶಿವನ ವಿವಿಧ ರೂಪಗಳನ್ನು ಅಳವಡಿಸುವ ಪರಂಪರೆಗೆ ಚಾಲನೆ ಲಭ್ಯವಾಯಿತು.

    6) ಕುಶಾನರ ನಾಣ್ಯಗಳಲ್ಲಿ ಕಂಡು ಬರುವ ಮತ್ತೊಬ್ಬ ದೇವತೆ, ದೇವಿ ಅರ್ಧೋಕ್ಷು ಭಾರತೀಯ ಲಕ್ಷ್ಮಿ, ಮೊಟ್ಟಮೊದಲ ಬಾರಿಗೆ ಕುಶಾನರ ನಾಣ್ಯಗಳಲ್ಲಿ ಕಂಡು ಬರುತ್ತಾಳೆ. ಕುಶಾನರ ಈ ಧಾರ್ಮಿಕ ದೃಷ್ಟಿಕೋನ ಮುಂದಿನ ಭಾರತೀಯ ರಾಜವಂಶೀಯರಿಗೆ ಮಾದರಿಯಾದದ್ದು ಒಂದು ವಿಶೇಷವೇ ಸರಿ.

    ಉಪಸಂಹಾರ

    ನಾಣ್ಯಶಾಸ್ತ್ರವು ಕೇವಲ ಹಳೆಯ ನಾಣ್ಯಗಳನ್ನು ಸಂಗ್ರಹಿಸುವುದರ ಬಗ್ಗೆ ಅಲ್ಲ; ಇದು ಐತಿಹಾಸಿಕ ಪುರಾವೆಯಾಗಿ ಹಣವನ್ನು ಅಧ್ಯಯನ ಮಾಡುವ ವೈಜ್ಞಾನಿಕ ಶಾಸ್ತ್ರವಾಗಿದೆ.

    ನಾಣ್ಯಗಳ ಮೂಲಕ   ರಾಜಕೀಯ ಶಕ್ತಿ, ಆರ್ಥಿಕ ಪರಿಸ್ಥಿತಿ, ಧಾರ್ಮಿಕ ಆಚರಣೆಗಳು, ಕಲಾತ್ಮಕ ಸಾಧನೆಗಳು ಮತ್ತು ಐತಿಹಾಸಿಕ ಕಾಲಮಾನ ಮುಂತಾದ ಸಂಗತಿಗಳನ್ನು ನಾವು  ಅರ್ಥಮಾಡಿಕೊಳ್ಳುತ್ತೇವೆ.