ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಹಾಯಕ ಸೇವೆಗಳ ಪಾತ್ರ

ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಹಾಯಕ ಸೇವೆಗಳ ಪಾತ್ರ

ಸಹಾಯಕ ಸೇವೆಗಳು (Supportive Services)

ಪ್ರವಾಸೋದ್ಯಮ ಇಲಾಖೆಯು ಇಂದು ಅಭಿವೃದ್ಧಿಯ ಪಥದತ್ತ ಸಾಗಿದೆ. ಇದಕ್ಕೆ ಮೂಲ ಕಾರಣವೆಂದರೆ ಸಾರಿಗೆ, ವಸತಿ ವ್ಯವಸ್ಥೆ, ಆಹಾರ ಸೌಲಭ್ಯ ಹಾಗೂ ಮೂಲ ಸೌಕರ್ಯಗಳು ದೊರಕುವಿಕೆ. ಆದುದರಿಂದ ಇವುಗಳನ್ನು ಅಗತ್ಯ ಸೇವೆಗಳು ಎಂದು ಕರೆಯಲಾಗುತ್ತದೆ. ಇದರ ಹೊರತಾಗಿ ವಿದೇಶಿ ವಿನಿಮಯ ವಿಮಾ ಸೌಲಭ್ಯಗಳು, ಖರೀದಿ, ಸುರಕ್ಷತೆ ಪ್ರವಾಸಿ ದಾಖಲೆಗಳು, ಸ್ಥಳೀಯ ಸಹಾಯ, ಪ್ರವಾಸಿ ಮಾಹಿತಿ ಸೇವೆ ಹಾಗೂ ಮಾರ್ಗದರ್ಶಿಗಳ ಸೇವೆ ಮೊದಲಾದವುಗಳನ್ನು ಸಹಾಯಕ ಸೇವೆಗಳು ಎಂದು ಕರೆಯಲಾಗಿದೆ. ಪ್ರವಾಸೋದ್ಯಮವನ್ನು ಮೇಲ್ದರ್ಜೆಗೆ ಕೊಂಡೊಯ್ಯುವ ಕಾರಣಕ್ಕಾಗಿ ಇವುಗಳನ್ನು ಸಹಾಯಕ ಸೇವಗಳೆಂದು ಹೆಸರಿಸಲಾಗಿದೆ. ಇವುಗಳನ್ನು ಸಂಕ್ಷಿಪ್ತವಾಗಿ ನೋಡೋಣ.

1. ಮಾರ್ಗದರ್ಶಿಗಳ ಸೇವೆ (Guides Service) :

 ಪ್ರವಾಸೋದ್ಯಮವು ಅಭಿವೃದ್ಧಿಯಾಗಲು ಕೇವಲ ವಸತಿ, ಊಟ ಹಾಗೂ ಸುರಕ್ಷತೆಯಂತಹ ಸೌಲಭ್ಯಗಳಿದ್ದರೆ ಸಾಲದು ಮುಖ್ಯವಾಗಿ ಪ್ರವಾಸೋದ್ಯಮದಲ್ಲಿ ಮಾರ್ಗದರ್ಶಿಗಳ ಸೇವೆ ಬಹಳ ಅಗತ್ಯ. ಪ್ರವಾಸಿಗರು ತಾವು ಪ್ರವಾಸ ಬಯಸುವ ಸ್ಥಳಗಳಿಗೆ ತಾವಾಗಿಯೇ ಹೋಗಲಾರರು, ಬದಲಾಗಿ ಅವರಿಗೆ ಪ್ರವಾಸಿ ಮಾರ್ಗದರ್ಶಿಗಳು ಪ್ರವಾಸದ ಗಮ್ಯ ಸ್ಥಾನಗಳ ಮಹತ್ವ, ಅಲ್ಲಿರುವ ಸೌಲಭ್ಯಗಳು ಮತ್ತು ಅಲ್ಲಿನ ಸುರಕ್ಷತೆಯ ಕುರಿತು ಮಾಹಿತಿಯನ್ನು ನೀಡುವ ಮೂಲಕ ಅವರನ್ನು ಗಮ್ಯ ಸ್ಥಾನಕ್ಕೆ ಕರೆದೊಯ್ಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಮಾರ್ಗದರ್ಶಿಗಳು ಪ್ರವಾಸಕ್ಕೆ ಬರುವ ತಂಡಗಳ ನಾಯಕನಾಗಿ, ನಿರ್ವಾಹಕನಾಗಿ ಹಾಗೂ ಏಜೆಂಟಾಗಿ ಸೇವೆ ಸಲ್ಲಿಸುವ ಮೂಲಕ ಅವರಿಂದ ಇಂತಿಷ್ಟು ಅಂತ ಸೇವಾ ಶುಲ್ಕ ಪಡೆಯುತ್ತಾನೆ.

ಇದರ ಜೊತೆಗೆ ಮಾರ್ಗದರ್ಶಿಯು ಪ್ರವಾಸಿಗರಿಗೆ ಟಿಕೇಟ್ ಖರೀದಿ, ಹಣಕಾಸಿನ ಸೌಲಭ್ಯ, ವಸತಿ ವ್ಯವಸ್ಥೆ, ವಿಮಾನ ಹಾಗೂ ಬಸ್ ಟಿಕೇಟುಗಳ ಖರೀದಿ ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಈ ರೀತಿ ಮಾಡುವ ಕಾರ್ಯವನ್ನು ಮಾರ್ಗದರ್ಶಿ ಸೇವೆಗಳು ಎಂದು ಕರೆಯುತ್ತಾರೆ. ಇಂತಹ ಮಾರ್ಗದರ್ಶಿ ಸೇವೆಯನ್ನು ಒದಗಿಸುವಲ್ಲಿ ಇಂಗ್ಲೆಂಡಿನ ಥಾಮಸ್ ಕುಕ್‌ ಕಂಪನಿ ಹಾಗೂ ಅಮೆರಿಕಾದ ಎಕ್ಸ್‌ಪ್ರೆಸ್ ಕಂಪನಿಗಳು ಜಗತ್ತಿನಲ್ಲಿ ಹೆಚ್ಚು ಹೆಸರನ್ನು ಪಡೆದಿವೆ. ಥಾಮಸ್ ಕುಕ್‌ ಕಂಪನಿಯು ವಿಶ್ವದಲ್ಲಿಯೇ ಪ್ರಸಿದ್ಧ ಏಜೆನ್ಸಿಯಾಗಿದ್ದು 145 ದೇಶಗಳಲ್ಲಿ ತನ್ನ ಶಾಖೆಗಳನ್ನು ತೆರೆದಿದೆ. ತನ್ಮೂಲಕ ಪ್ರವಾಸಿಗರಿಗೆ ಅಗತ್ಯ ಸೇವೆಗಳನ್ನು ನೀಡುತ್ತಿದೆ. ಅಂದಾಜಿನ ಪ್ರಕಾರ ಸುಮಾರು 13 ಸಾವಿರಕ್ಕೂ ಹೆಚ್ಚು ನೌಕರರನ್ನು ಈ ಕಂಪನಿ ಹೊಂದಿದೆ.

2. ಮಾಹಿತಿ ಸೇವೆ (Information Service) :

ಪ್ರವಾಸಿಗರು ನಿಸರ್ಗ ಪ್ರೇಮಿಗಳು. ನಿಸರ್ಗದ ಸವಿಯನ್ನು ಸವಿಯಲು, ವನ್ಯಪ್ರಾಣಿ ಹಾಗೂ ಪಕ್ಷಿ ಸಂಕುಲಗಳನ್ನು ವೀಕ್ಷಿಸಲು ಕೆರೆ ತೊರೆಗಳನ್ನು ನೋಡಲು, ಜಲಪಾತದ ಬೋರ್ಗರೆತವನ್ನು ನೋಡಲು ಬರುತ್ತಾರೆ. ಆದರೆ ಅವರಿಗೆ ತಾವು ಹೋಗುವ ಪ್ರದೇಶಗಳ ಮಹತ್ವ, ಅಲ್ಲಿ ದೊರೆಯುವ ಸಾರಿಗೆ, ವಸತಿ ಸೌಲಭ್ಯ, ಊಟ-ಉಪಹಾರದ ಬಗ್ಗೆ ಮಾಹಿತಿ ನೀಡಿ ಗಮ್ಯ ಸ್ಥಾನಕ್ಕೆ ಪ್ರವಾಸಿಗರನ್ನು ಸೆಳೆಯಲು ಪ್ರವಾಸಿ ಸೇವೆ ಅತ್ಯಂತ ಮಹತ್ವದಾಗಿದೆ. ಈ ಕೆಲಸವನ್ನು ಪ್ರಯಾಣ ಏಜೆಂಟರು ಇಲ್ಲವೇ ಪ್ರವಾಸಿ ಆಪರೇಟರ್‌ಗಳು ಅಲ್ಲಿ ಸಿಗುವ ಕಾರು ಬಾಡಿಗೆ. ಆ ಪ್ರದೇಶದಲ್ಲಿ ಸಿಗುವ ವಸ್ತುಗಳ ಮಾಹಿತಿ, ಪ್ರವಾಸಿ ಮಾರ್ಗದರ್ಶಿಗಳು ದೊರಕುವಿಕೆ. ಮಾಹಿತಿ ಪುಸ್ತಕ, ಬಿತ್ತಿ ಚಿತ್ರಗಳು, ಕಿರು ಹೊತ್ತಿಗೆ ಹಾಗೂ ಕರಪತ್ರಗಳನ್ನು ಹಂಚುವ ಮೂಲಕ ಮಾಹಿತಿಯನ್ನು ನೀಡುತ್ತಾರೆ. ಇದು ಪ್ರವಾಸ ಕೈಗೊಳ್ಳುವವರಿಗೆ ತುಂಬಾ ಅನುಕೂಲವಾಗುತ್ತದೆ.

3. ವಿದೇಶಿ ವಿನಿಮಯ ಸೇವೆ (Foreign Exchange Service) :

ಪ್ರವಾಸಿಗರು ತಾವು ತಲುಪಬೇಕಾದ ಪ್ರದೇಶದ ನಿಲ್ದಾಣದಲ್ಲಿ ಇಳಿದಾಗ ತಕ್ಷಣವೇ ತಮ್ಮ ದೇಶದ ಕರೆನ್ಸಿಗಳನ್ನು ಈ ದೇಶದ ಕರೆನ್ಸಿಗೆ ಬದಲಾಯಿಸಿಕೊಳ್ಳುವ ವ್ಯವಸ್ಥೆಯನ್ನು ಇಂದು ಮಾಡಲಾಗಿದೆ. ಕೆಲವು ಪ್ರಮುಖ ನಗರಗಳಲ್ಲಿ ವಿದೇಶಿ ಬ್ಯಾಂಕುಗಳು ಇದ್ದು ಅವುಗಳು ವಿದೇಶಿ ವಿನಿಮಯ ಸೌಲಭ್ಯಗಳನ್ನು ಹೊಂದಿವೆ. ಕೆಲವು ಸಂದರ್ಭಗಳಲ್ಲಿ ಪ್ರವಾಸಿ ಏಜೆಂಟರುಗಳು ವಿದೇಶಿ ವಿನಿಮಯದ ಅನುಕೂಲತೆಗಳನ್ನು ಪ್ರವಾಸಿಗರಿಗೆ ಒದಗಿಸಿಕೊಡುತ್ತಾರೆ. ಕೆಲವು ಏಜೆಂಟರುಗಳು ಪ್ರವಾಸಿ ಚೆಕ್ಕುಗಳನ್ನು ನೀಡುತ್ತಾರೆ. ಬಹಳ ವರ್ಷಗಳ ಹಿಂದಿನ ಮಾತು ಜನರು ಪ್ರವಾಸವನ್ನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಕೈಗೊಂಡರೆ ಅಗತ್ಯವಾದಷ್ಟು ಹಣವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಯಾವುದೇ ರಾಷ್ಟ್ರ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. ಈ ಕಾರಣದಿಂದಾಗಿ ವಿದೇಶಿ ಪ್ರವಾಸಿಗರು ಹಣದ ಬದಲಾಗಿ ಪ್ರವಾಸಿ ಚೆಕ್, ಕ್ರೆಡಿಟ್ ಕಾರ್ಡ್ ಹಾಗೂ ಮಾಸ್ಟರ್ ಕಾರ್ಡ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಇವುಗಳು ಅಂತರಾಷ್ಟ್ರೀಯ ಮಾನ್ಯತೆಯನ್ನು ಗಳಿಸಿದ್ದು ಒಂದು ನಿಗದಿತ ವಿದೇಶಿ ಬ್ಯಾಂಕುಗಳಿಂದ ಹಣವನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಈ ವಿದೇಶಿ ವಿನಿಮಯ ಪದ್ಧತಿಯನ್ನು ಬಳಕೆಯಲ್ಲಿ ತಂದ ಕೀರ್ತಿ ಥಾಮಸ್ ಕುಕ್‌ ಕಂಪನಿಗೆ ಸೇರಬೇಕಾಗಿದೆ.

4. ವಿಮಾ ಸೌಲಭ್ಯ: (Insurance Service) :

ಯಾವುದೇ ಒಬ್ಬ ಪ್ರವಾಸಿಯು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗುವಾಗ ಅಥವಾ ಅನ್ಯ ದೇಶದಿಂದ ನಮ್ಮ ದೇಶಕ್ಕೆ ಬರುವಾಗ ಅವನ ಪ್ರಾಣ ಬಹಳ ಮುಖ್ಯ. ಜೊತೆಗೆ ಆತ ತೆಗೆದುಕೊಂಡು ಹೋಗುವ ವಸ್ತುಗಳು ಅಷ್ಟೇ ಮೌಲ್ಯವುಳ್ಳವುಗಳು ಆಗಿರುತ್ತವೆ. ಪ್ರಯಾಣಿಕ ಪ್ರವಾಸದ ಸಂದರ್ಭದಲ್ಲಿ ಸಾಯಬಹುದು ಅಥವಾ ಅಪಘಾತಕ್ಕೀಡಾಗಬಹುದು. ಹಾಗಾದಾಗ ಅವನ ಜೀವ ರಕ್ಷಣೆಗಾಗಿ ವೈದ್ಯಕೀಯ ವಿಮೆ ಸೌಲಭ್ಯಗಳು ಇರಬೇಕು. ಜೊತೆಗೆ ಅವನಿಗೆ ನಷ್ಟ ಸಂಭವಿಸಬಹುದು. ಅವರ ಬ್ಯಾಗುಗಳು ಕಳೆದು ಹೋಗಬಹುದು. ವಿಮಾನಗಳು ತಡವಾಗಿ ಬರುವುದು ಹಾಗೂ ನಿರ್ಗಮಿಸಬಹುದು. ಪ್ರವಾಸಿಗನಿಗೆ ಅನಾರೋಗ್ಯ ಕಾಡಬಹುದು. ಇವೆಲ್ಲ ಕಾರಣಗಳಿಂದಾಗಿ ಅವನ ನಷ್ಟವನ್ನು ತುಂಬಿಕೊಡಲು ವಿಮಾ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಪ್ರವಾಸಿಗರಿಂದ ಹಣ ವಸೂಲಿ ಮಾಡಿ ವಿಮೆಮಾಡಿಸಿರುತ್ತಾರೆ. ಒಂದು ವೇಳೆ ಪ್ರವಾಸಿಗರು ದಿವಾಳಿಯಾದರೆ ವಿಮಾ ಕಂಪನಿಯೇ ಅವರ ನಷ್ಟವನ್ನು ತುಂಬಿ ಕೊಡುತ್ತದೆ.

5. ಮಾರುಕಟ್ಟೆ ಸೇವೆ (Market Service) :

ಪ್ರವಾಸೋದ್ಯಮ ಕಂಪನಿಗಳು ಪ್ರತಿನಿಧಿಗಳನ್ನು ನೇಮಕ ಮಾಡಿಕೊಂಡು ಆ ಮೂಲಕ ವಿವಿಧ ಮಾರುಕಟ್ಟೆಗಳು ಅಲ್ಲಿ ಸಿಗಬಹುದಾದ ವಸ್ತುಗಳು ಆ ವಸ್ತುಗಳ ಕುರಿತು ಪ್ರಚಾರ, ವ್ಯವಹಾರ ಸಲಹೆ, ಜಾಹೀರಾತು, ಮುದ್ರಣ, ವಿತರಣೆ ಮತ್ತು ವಸ್ತುಗಳು ಸಕಾಲದಲ್ಲಿ ಪ್ರವಾಸಿಗರಿಗೆ ತಲುಪುವಂತೆ ಕ್ರಮ ಕೈಗೊಳ್ಳುತ್ತವೆ. ಇದರಿಂದ ಪ್ರವಾಸಿಗರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವುದು, ಉಪಯೋಗಿಸುವುದು ಮೊದಲಾದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುವುದನ್ನು ಪ್ರವಾಸೋದ್ಯಮ ಮಾರುಕಟ್ಟೆ ಮಾಡುತ್ತದೆ.

6. ಮನರಂಜನೆ ಸೇವೆಗಳು (Amusment Service) :

ಪ್ರವಾಸಿಗರು ನೆಮ್ಮದಿ, ಶಾಂತಿ, ನಿಸರ್ಗ ವೀಕ್ಷಣೆ, ಸಮುದ್ರದಲ್ಲಿ ಈಜಲು, ವನ್ಯಧಾಮ ವೀಕ್ಷಣೆ ಹಾಗೂ ಪಕ್ಷಿಧಾಮಗಳನ್ನು ನೋಡಲೆಂದೇ ಪ್ರವಾಸವನ್ನು ಕೈಗೊಳ್ಳುತ್ತಾರೆ. ಪ್ರವಾಸಿಗರ ಪ್ರವಾಸದ ಅತಿ ಮುಖ್ಯವಾದ ಗುರಿ ಎಂದರೆ ಮನರಂಜನೆಯನ್ನು ಪಡೆಯುವುದಾಗಿರುತ್ತದೆ. ಹೀಗಾಗಿ ಪ್ರವಾಸೋದ್ಯಮವು ಪ್ರವಾಸಿಗರಿಗೆ ಪ್ರವಾಸಿ ತಾಣಗಳಲ್ಲಿ ಸಂಗೀತ, ನೃತ್ಯ, ವಸ್ತು ಪ್ರದರ್ಶನ, ಚಲನಚಿತ್ರ ತೋರಿಸುವುದು, ಹಬ್ಬಗಳ ಆಚರಣೆ, ಬೆಳಕು ಕಾರ್ಯಕ್ರಮ ಮೊದಲಾದ ಮನರಂಜನ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯಬೇಕು. ಇಂತಹ ಮನರಂಜನಾ ಸಾಧನಗಳು ಎಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತವೆಯೋ ಅಲ್ಲಿ ಮಾತ್ರ ಪ್ರವಾಸಿಗರು ಲಗ್ಗೆ ಇಡುತ್ತಾರೆ. ಅಂತಹ ಪ್ರದೇಶಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತವೆ. ಈ ಕಾರಣದಿಂದ ಪ್ರವಾಸಿ ತಾಣಗಳಲ್ಲಿ ಪಾರ್ಕ್‌ಗಳು, ಮನರಂಜನೆ ನೀಡುವ ಚಿತ್ರಮಂದಿರಗಳು ಹಾಗೂ ಹೋಟೆಲ್ ಮತ್ತು ಕಲಾಮಂದಿರಗಳನ್ನು ಆರಂಭಿಸಬೇಕು.

7. ಆರೋಗ್ಯ ಸೇವೆಗಳು (Health Service) :

ದೂರ ದೂರದ ಊರು ಮತ್ತು ನಗರಗಳಿಂದ ಪ್ರವಾಸಿ ತಾಣಗಳಿಗೆ ತಾಯಂದಿರು ತಮ್ಮ ಮಕ್ಕಳೊಂದಿಗೆ, ಗಂಡಂದಿರು ತಮ್ಮ ಹೆಂಡತಿಯರೊಂದಿಗೆ ಪ್ರವಾಸವನ್ನು ಕೈಗೊಳ್ಳುತ್ತಾರೆ. ಚಿಕ್ಕವರಿಂದ ಹಿಡಿದು ವಯೋವೃದ್ಧರವರೆಗೆ ಮತ್ತು ಆರೋಗ್ಯವಂತರಿಂದ ಹಿಡಿದು ಅನಾರೋಗ್ಯ ಪೀಡಿತರಾದವರು ಎಲ್ಲಾ ವಯೋಮಾನದ ಜನರು ಭೇಟಿ ನೀಡುತ್ತಾರೆ. ಪ್ರವಾಸದ ಸಂದರ್ಭಗಳಲ್ಲಿ ಪ್ರವಾಸಿಗರು ಕಾಯಿಲೆಗೆ ತುತ್ತಾಗಬಹುದು ಅಥವಾ ಅಪಘಾತಕ್ಕೆ ಈಡಾಗಬಹುದು. ಅಂತಹ ಸಂದರ್ಭಗಳಲ್ಲಿ ಪ್ರವಾಸಿ ಕೇಂದ್ರಗಳಲ್ಲಿ ತುರ್ತು ಚಿಕಿತ್ಸೆಯನ್ನು ನೀಡುವಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಕಳುಹಿಸಿದರೆ ಪ್ರವಾಸವನ್ನು ಆನಂದದಿಂದ ಅನುಭವಿಸುತ್ತಾರೆ. ಪ್ರವಾಸಿ ತಾಣಗಳಿಗೆ ಹೋಗುವ ಹೆದ್ದಾರಿಗಳ ಎಡಬಲಗಳಲ್ಲಿ ಇಂತಹ ಸೌಲಭ್ಯಗಳನ್ನು ಒದಗಿಸಬೇಕು.

8. ಮೋಟಾರ್ ಹೋಟೆಲ್ (Motar Hotels) :

ಪ್ರವಾಸಿಗರು ಪ್ರವಾಸದ ವೇಳೆಯಲ್ಲಿ ರಸ್ತೆಯಲ್ಲಿ ಸಂಚರಿಸುವಾಗ ರಸ್ತೆ ಬದಿಯಲ್ಲಿ ಉಪಹಾರವನ್ನು ಒದಗಿಸಲು ಹೋಟೆಲ್‌ಗಳನ್ನು ಸ್ಥಾಪಿಸಲಾಗುತ್ತದೆ. ಇಂತಹ ಹೋಟೆಲ್‌ಗಳನ್ನು ಮೋಟಾರ್ ಹೋಟೆಲ್‌ಗಳು ಎಂದು ಕರೆಯಲಾಗುವುದು. ಇವುಗಳು ಪ್ರವಾಸಿಗರು ತಮ್ಮ ವಾಹನಗಳನ್ನು ನಿಲ್ಲಿಸುವುದು, ನಿಲ್ಲಿಸುವುದಕ್ಕಾಗಿ ಸ್ಥಳಗಳನ್ನು ದೊರಕಿಸಿಕೊಡುವುದು ಒಂದು ವೇಳೆ ಅವರ ವಾಹನಗಳು ಕೆಟ್ಟು ನಿಂತರೆ ಅವುಗಳನ್ನು ದುರಸ್ತಿ ಮಾಡಿಕೊಡುವುದು, ಪ್ರವಾಸಿಗರಿಗೆ ಶೌಚಾಲಯದ ಸೌಲಭ್ಯ ನೀಡುವುದು, ವನಭೋಜನ ಹಾಗೂ ತಾತ್ಕಾಲಿಕವಾಗಿ ವಸತಿ ವ್ಯವಸ್ಥೆಯನ್ನು ದೊರಕಿಸಿಕೊಡುವುದು ಮೊದಲಾದ ಸವಲತ್ತುಗಳನ್ನು ನೀಡುತ್ತವೆ.

9. ಹೆದ್ದಾರಿ ಸೂಚನಾ ಫಲಕಗಳು (Highways Boards ) :

ಪ್ರವಾಸಿಗರು ತಮ್ಮ ಪ್ರವಾಸದ ಗಮ್ಯ ಸ್ಥಾನವನ್ನು ತಲುಪಲು ಪ್ರಯಾಣಿಸುವಾಗ ಹೆದ್ದಾರಿಯ ಪಕ್ಕದಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲೆಂದು ಅವರು ತಲುಪಬೇಕಾದ ಸ್ಥಳದ ದೂರ, ಮುಂದೆ ಸಿಗಬಹುದಾದ ಹೋಟೆಲ್‌ಗಳು, ಭೋಜನ ಶಾಲೆಗಳು, ದವಾಖಾನೆಗಳು, ಇಂಧನ, ವಾಹನಗಳು ಕೆಟ್ಟು ನಿಂತಾಗ ಅವರು ಮೊಬೈಲ್ ಕರೆಮಾಡಲು ದೂರವಾಣಿ ಸಂಖ್ಯೆ ಮೊದಲಾದವುಗಳು. ಇಂತಹವುಗಳ ಮಾಹಿತಿಯನ್ನು ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳನ್ನೊಳಗೊಂಡ ಸೂಚನಾ ಫಲಕಗಳ ಮೇಲೆ ಬರೆದು ರಸ್ತೆ ಬದಿಯಲ್ಲಿ ಹಾಕಿದರೆ ಪ್ರವಾಸಿಗರಿಗೆ ಬಹಳ ಅನುಕೂಲವಾಗುತ್ತದೆ.

    10. ರಸ್ತೆ ಪಕ್ಕ ಹೂದೋಟಗಳು (Road Side Parks) :

    ಪ್ರವಾಸಿಗರು ಪ್ರವಾಸ ಕೈಗೊಂಡಾಗ ಅಲ್ಲಲ್ಲಿ ಉದ್ಯಾನವನಗಳನ್ನು ನಿರ್ಮಿಸಿದರೆ ಅವರು ವಿಶ್ರಾಂತಿ ಪಡೆದು ಮುಂದೆ ಹೋಗಲು ಅನುಕೂಲವಾಗುತ್ತದೆ ಮತ್ತು ಪ್ರವಾಸಿಗರು ಅಂತಹ ಪ್ರದೇಶಗಳಲ್ಲಿ ಸಂಚರಿಸಲು ಬಹಳ ಸಂತೋಷ ಪಡುತ್ತಾರೆ. ಮಧ್ಯಾಹ್ನದ ಊಟ, ವಿಶ್ರಾಂತಿ, ಆಸನ ವ್ಯವಸ್ಥೆ, ಈಜುಕೊಳ, ಗ್ರಂಥಾಲಯ, ವಾಹನ ನಿಲ್ದಾಣ, ಸುತ್ತಮುತ್ತಲೂ ನೋಡಬಹುದು. ರಮಣೀಯ ತಾಣಗಳ ಬಗ್ಗೆ ಮಾಹಿತಿ ಇದ್ದರೆ ಪ್ರವಾಸಿಗರಿಗೆ ಹಬ್ಬವೋ ಹಬ್ಬ.

    11. ಇಂಧನ ಸೇವೆ (Fuel Service) :

    ಇಂದಿನ ಯುಗದಲ್ಲಿ ಪ್ರವಾಸಿಗರು ತಮ್ಮ ಪ್ರವಾಸಕ್ಕಾಗಿ ಸ್ವಂತ ವಾಹನಗಳನ್ನೇ ಬಳಸುತ್ತಿದ್ದಾರೆ. ಹೀಗಾಗಿ ರಸ್ತೆಗಳಲ್ಲಿ ವಾಹನಗಳಲ್ಲಿ ಸಂಚರಿಸುವಾಗ ಒಂದು ವೇಳೆ ಇಂಧನ ಖಾಲಿಯಾದರೆ ಇಂಧನವನ್ನು ಪೂರೈಸುವಂತಹ ಕೇಂದ್ರಗಳನ್ನು ರಸ್ತೆ ಬದಿಗಳಲ್ಲಿ ನಿರ್ಮಿಸಬೇಕು. ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಮುಂತಾದ ಇಂಧನಗಳ ಸೌಲಭ್ಯವನ್ನು ಪ್ರವಾಸಿಗರಿಗೆ ಒದಗಿಸಿದರೆ ಅವರು ಸಂತೋಷದಿಂದ ಪ್ರವಾಸವನ್ನು ಕೈಗೊಳ್ಳುತ್ತಾರೆ. ಎಲ್ಲೆಲ್ಲಿ ಇಂಧನ ಸಿಗುತ್ತದೆ, ಗಮ್ಯಸ್ಥಾನ ಮತ್ತು ಇಂಧನ ಕೇಂದ್ರಗಳ ನಡುವೆ ಎಷ್ಟು ದೂರವಿದೆ ಎಂಬುದನ್ನು ಸೂಚನಾ ಫಲಕಗಳ ಮೂಲಕ ಮಾಹಿತಿಯನ್ನು ನೀಡಬೇಕು. ಇಂಧನ ಕೇಂದ್ರಗಳು 24*7 ಎಂಬ ಬರಹಗಳನ್ನು ಒಳಗೊಂಡ ಸೂಚನಾ ಫಲಕಗಳನ್ನು ತೂಗುಹಾಕಿರಬೇಕು.

    12. ಭದ್ರತಾ ವ್ಯವಸ್ಥೆ (Security) :

    ಇತ್ತೀಚಿನ ವರ್ಷಗಳಲ್ಲಿ ಹೆದ್ದಾರಿ ದರೋಡೆ, ಅಪಹರಣ ಹಾಗೂ ಭಯೋತ್ಪಾದನೆಗಳು ಹೆಚ್ಚುತ್ತಿವೆ. ಇದರಿಂದ ಪ್ರವಾಸಿಗರಲ್ಲಿ ಆತಂಕ ಮನೆಮಾಡಿದೆ. ಜೊತೆಗೆ ವಾಹನಗಳ ಕಳ್ಳತನ ಮತ್ತು ವಾಹನಗಳ ಅಪಘಾತಗಳು ಹೆಚ್ಚು ಹೆಚ್ಚು ಸಂಭವಿಸುತ್ತಿವೆ. ಪ್ರವಾಸಿ ತಾಣಗಳು ಮತ್ತು ಆಸುಪಾಸಿನಲ್ಲಿ ಕೊಲೆಗಳು ಆಗುತ್ತಿವೆ. ಇವೆಲ್ಲವುಗಳಿಗೆ ಕಡಿವಾಣ ಹಾಕಲು ಪ್ರವಾಸಿ ತಾಣಗಳು ಮತ್ತು ಹೆದ್ದಾರಿಗಳ ಪಕ್ಕದಲ್ಲಿ ಅಲ್ಲಲ್ಲಿ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿ ಪ್ರವಾಸಿಗರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು. ಇದು ಅಲ್ಲದೆ ಪ್ರವಾಸಿ ಕೇಂದ್ರಗಳಲ್ಲಿ ಗಲಭೆ, ಗದ್ದಲ, ಕಳ್ಳತನ, ಕೊಲೆ, ಅಪಹರಣ ಹಾಗೂ ಬೆದರಿಕೆಗಳು ಸಾಮಾನ್ಯವಾಗಿವೆ. ಇಂತಹ ಘಟನೆಗಳಿಂದ ಪ್ರವಾಸಿ ಕೇಂದ್ರಗಳನ್ನು ಮುಕ್ತಗೊಳಿಸಬೇಕು.

    13. ತೆರಿಗೆ ರಹಿತ ವ್ಯಾಪಾರ (Free Duty shop) :

    ಪ್ರವಾಸಿಗರು ಪ್ರಯಾಣ ಮಾಡುವಾಗ ವಿಮಾನ ನಿಲ್ದಾಣ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳು ಮತ್ತು ತಾವು ಇಳಿದುಕೊಂಡು ಹೋಟೆಲ್‌ಗಳಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ತೆರಿಗೆ ರಹಿತ ವ್ಯಾಪಾರಿ ಮಳಿಗೆಗಳನ್ನು ತೆರೆಯಬೇಕು. ಪ್ರವಾಸಿಗರನ್ನು ಆಕರ್ಷಿಸುವ ಒಂದು ಸೇವೆ ಇದಾಗಿದೆ.

    14. ಸಾರ್ವಜನಿಕ ಉಪಯುಕ್ತ ಸೇವೆಗಳು (Public useful Service) :

    ದೂರ ದೂರದ ಪ್ರದೇಶಗಳಿಂದ ಪ್ರವಾಸಕ್ಕೆ ಬರುವ ಪ್ರಯಾಣಿಕರಿಗೆ ಪ್ರವಾಸಿ ಕೇಂದ್ರಗಳಲ್ಲಿ ಶುದ್ಧವಾದ ಕುಡಿಯುವ ನೀರಿನ ಸೌಲಭ್ಯ, ಸ್ವಚ್ಛವಾದ ಶೌಚಾಲಯಗಳು, ಪ್ರವಾಸಿ ಕೇಂದ್ರದ ಸುತ್ತಲೂ ಇರುವ ಚರಂಡಿಗಳನ್ನು ಶುದ್ಧೀಕರಿಸುವುದು. ಉತ್ತಮವಾದ ವೈದ್ಯಕೀಯ ಸೇವೆಗಳು ಸಾರಿಗೆ ಸಂಪರ್ಕ ವಾಹನ ನಿಲುಗಡೆ ವ್ಯವಸ್ಥೆ. ಘನ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಮುಂತಾದ ಸಾರ್ವಜನಿಕ ಉಪಯುಕ್ತ ಸೇವೆಗಳನ್ನು ಪ್ರವಾಸೋದ್ಯಮವು ಒದಗಿಸಿದರೆ ಪ್ರವಾಸಿಗರು ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಾರೆ.

    15. ಕಾರು ಬಾಡಿಗೆ (Car Rental) :

    ಪ್ರವಾಸೋದ್ಯಮ ಇಂದು ಬೃಹದಾಕಾರವಾಗಿ ಬೆಳೆದಿದೆ. ದೇಶವಿದೇಶಗಳಿಂದ ಪ್ರವಾಸಿಗರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರಿಗೆ ಅನಾನುಕೂಲಗಳು ಆಗದಿರಲೆಂದು ಪ್ರವಾಸೋದ್ಯಮವು ಕಾರುಗಳನ್ನು ಬಾಡಿಗೆಗೆ ಒದಗಿಸುತ್ತದೆ. ಮುಂಚಿತವಾಗಿ ಹೋಟೆಲ್‌ಗಳಲ್ಲಿ ಸೀಟುಗಳನ್ನು ಕಾಯ್ದಿರಿಸುತ್ತದೆ. ವಿಮಾನ ಹಾಗೂ ರೈಲು ಟಿಕೆಟ್‌ಗಳನ್ನು ಖರೀದಿ ಮಾಡಿ ನೀಡುತ್ತದೆ. ಪ್ರವಾಸಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸಿಕೊಡುತ್ತದೆ. ಇದಕ್ಕೆ ಪ್ರತಿಯಾಗಿ ಟ್ರಾವೆಲ್ ಏಜೆನ್ಸಿಗಳು ಪ್ರವಾಸಿಗರಿಂದ 10 ರಿಂದ 15% ರಷ್ಟು ಕಮಿಷನ್ ಪಡೆಯುತ್ತವೆ.

    16. ಪ್ರಯಾಣ ದಾಖಲೆಗಳು (Travel Documents)  :

    ಭಾರತಕ್ಕೆ ಬರುವ ಮತ್ತು ಭಾರತದಿಂದ ಹೊರ ಹೋಗುವ ವಿದೇಶಿ ಪ್ರವಾಸಿಗರು ಪ್ರವಾಸಕ್ಕೆ ಸಂಬಂಧಿಸಿದ ಕೆಲವು ಪ್ರಮುಖವಾದ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಅವುಗಳೆಂದರೆ

    1. ಪರವಾನಗಿ ಪತ್ರ ಅಥವಾ ಪಾಸ್‌ಪೋರ್ಟ್‌
    2. ಪ್ರವಾಸಿ ಕಾರ್ಡ್ (Tourist card)
    3. ವೀಸಾ (Visitors Intended Stay Abroad) 
    4. ಆರೋಗ್ಯ ಪ್ರಮಾಣ ಪತ್ರ (Health Certificate)
    5. ಪೊಲೀಸ್ ಪ್ರಮಾಣ ಪತ್ರ (Police Certificate)

    ಈ ದಾಖಲೆಗಳನ್ನು ಪ್ರವಾಸಿಗರಿಗೆ ಪ್ರಯಾಣ ಏಜೆನ್ಸಿಗಳು ಒದಗಿಸುತ್ತಾರೆ.

    ಪಾಸ್‌ಪೋರ್ಟ್‌ 

    ಭಾರತಕ್ಕೆ ಬರುವ ಮತ್ತು ಭಾರತದಿಂದ ಹೊರ ಹೋಗುವ ವಿದೇಶಿ ಪ್ರವಾಸಿಗರು ಕಡ್ಡಾಯವಾಗಿ ಪರವಾನಗಿ ಪತ್ರ ಅಥವಾ ಪಾಸ್‌ಪೋರ್ಟ್‌ನ್ನು ಹೊಂದಿರಲೇಬೇಕು. ಪಾಸ್‌ಪೋರ್ಟ್‌ ಎಂದರೆ ದೇಶ ಒಂದರಲ್ಲಿ ವಿದೇಶಿ ಪ್ರವಾಸಿಗನು ಸಂಚರಿಸಲು ಅವನ ದೇಶದ ಸರ್ಕಾರ ನೀಡಿದ ಪರವಾನಿಗೆ ಪತ್ರ. ಪಾಸ್‌ಪೋರ್ಟ್‌ ಎಂದರೆ ಪ್ರವಾಸಿಗರಿಗೆ ಒಂದು ದೇಶ ನೀಡಿದ ಸಿಂಧುತ್ವ ಪ್ರಮಾಣ ಪತ್ರ ಅಥವಾ ಪರಿಚಯದ ಪತ್ರ ಅಥವಾ ಅಪ್ಪಣೆ ಪತ್ರ ಎಂದರ್ಥ. ಈ ಪರವಾನಿಗೆ ಪತ್ರವು ವ್ಯಕ್ತಿಯ ಜನ್ಮ ದಿನಾಂಕ, ರಾಷ್ಟ್ರೀಯತೆ, ಪೌರತ್ವ ಹಾಗೂ ಗುರುತನ್ನು ಪ್ರಮಾಣಿಕರಿಸುತ್ತದೆ. ೧೯೧೫ರ ನಂತರ ಭಾರತಕ್ಕೆ ಆಗಮಿಸುವ ಪ್ರವಾಸಿಗರಿಗೆ ಪರವಾನಿಗೆ ಪತ್ರವನ್ನು ಕಡ್ಡಾಯಗೊಳಿಸಲಾಯಿತು. ಈ ಪರವಾನಿಗೆ ಪತ್ರವನ್ನು ಭಾರತದಲ್ಲಿ ʻʻPassport Authority of Indiaʼʼ ಎನ್ನುವ ಕೇಂದ್ರ ಸರ್ಕಾರದ ಶಾಸನಬದ್ಧ ಇಲಾಖೆ ನೀಡುತ್ತದೆ.

      ಪಾಸ್‌ಪೋರ್ಟ್‌ ಪಡೆಯಲು ಬೇಕಾದ ಕಾರಣಗಳು

    1. ಅಂತರಾಷ್ಟ್ರೀಯ ಪ್ರಯಾಣ ಮಾಡಲು
    2.  ವೀಸಾ ಪಡೆಯಲು
    3.  ಭದ್ರತೆಯ ಗುರುತು
    4.  ಅಂತರಾಷ್ಟ್ರೀಯ ಸೇವೆಗಳಿಗಾಗಿ

     ಪಾಸ್‌ಪೋರ್ಟ್‌ ವಿಧಗಳು: (Types of Passport)

    ಭಾರತದಲ್ಲಿ 4 ವಿಧದ ಪಾಸ್‌ಪೋರ್ಟ್‌ಗಳಿವೆ ಅವುಗಳೆಂದರೆ

    1.  ಸಾಮಾನ್ಯ ಪಾಸ್‌ಪೋರ್ಟ್‌ (ನೀಲಿ) – ಸಾಮಾನ್ಯ ನಾಗರಿಕ ಪ್ರಯಾಣಕ್ಕಾಗಿ
    2.  ಸೇವಾ ಪಾಸ್‌ಪೋರ್ಟ್‌ (ಕಿತ್ತಳೆ) – ಸರ್ಕಾರಿ ಉದ್ಯೋಗಿಗಳ ಸೇವಾ ಪ್ರಯಾಣಕ್ಕಾಗಿ
    3.  ಅಧಿಕಾರಿ ಪಾಸ್‌ಪೋರ್ಟ್‌ (ಬಿಳಿ) – ಕೆಲವು ಸರ್ಕಾರಿ ಅಧಿಕೃತ ಅಧಿಕಾರಿಗಳಿಗೆ
    4.  ರಾಜ್ಯ ತಾಂತ್ರಿಕ ಪಾಸ್‌ಪೋರ್ಟ್‌ (ಕೆಂಪು)- ರಾಜತಾಂತ್ರಿಕರು, ರಾಯಭಾರ ಅಧಿಕಾರಿಗಳಿಗೆ ಮಾತ್ರ.

     ಪಾಸ್‌ಪೋರ್ಟ್ ಪಡೆಯಲು ದಾಖಲೆಗಳು

    1.  ವಿಳಾಸಪುರಾವೆ: ಆಧಾರ್ ಕಾರ್ಡ್, ಮತದಾರರ ಐ.ಡಿ, ಪಾನ್ ಕಾರ್ಡ್.
    2.  ಗುರುತಿನ ಪ್ರಮಾಣ ಪತ್ರ
    3.  ಪ್ರವಾಸಿಯ 8 ಫೋಟೋಗಳು
    4.  ಪೌರತ್ವ ದೃಢೀಕರಣ ಪತ್ರ
    5.  ಜನ್ಮ ಪ್ರಮಾಣ ಪತ್ರ (SSLC  ಸರ್ಟಿಫಿಕೇಟ್)
    6.  ಪಾಸ್‌ಪೋರ್ಟ್‌ ಶುಲ್ಕ
    7.  ಪಾಸ್‌ಪೋರ್ಟ್‌ ಅರ್ಜಿ

      ವೀಸಾ (Visitors Intended Stay Abroad) 

      ವೀಸಾ ಎಂದರೆ ವಿದೇಶಿ ಪ್ರವಾಸ ಶಿಕ್ಷಣ, ಉದ್ಯೋಗ ಮುಂತಾದ ಉದ್ದೇಶಗಳಿಗಾಗಿ ಬೇರೆ ದೇಶಕ್ಕೆ ಭೇಟಿ ನೀಡಲು ಆ ದೇಶದ ಸರ್ಕಾರವು ನೀಡುವ ಅಧಿಕೃತ ಅನುಮತಿ ಪತ್ರ ಅಥವಾ ವಿದೇಶ ಪ್ರಮಾಣ ಅನುಮತಿ ಪತ್ರ ಎಂದು ಕರೆಯಲಾಗುತ್ತದೆ. ಇದು ಪಾಸ್‌ಪೋರ್ಟ್‌ ಮೇಲೆ ನಿರ್ದಿಷ್ಟ ಪ್ರವಾಸಕ್ಕೆ ನೀಡಿದ ಅನುಮತಿ ಪತ್ರವಾಗಿದೆ. 3 ರಿಂದ 180 ದಿನಗಳು. ಆನಂತರ ಅದನ್ನು ನವೀಕರಿಸಬಹುದು. ದೆಹಲಿ, ಕಲ್ಕತ್ತಾ ಹಾಗೂ ಮುಂಬೈ, ಬೆಂಗಳೂರು ನಗರಗಳಲ್ಲಿ ನವೀಕರಣ ಕೇಂದ್ರಗಳಿವೆ. ವೀಸಾ ಪಡೆಯಲು ಪ್ರವಾಸಿಯ ಹೆಸರು, ಪಾಸ್‌ಪೋರ್ಟ್‌ ಸಂಖ್ಯೆ, ಪ್ರವಾಸದ ಉದ್ದೇಶ, ಪ್ರವಾಸದ ದಿನಾಂಕ ಹಾಗೂ ಪ್ರವಾಸದ ವೇಳೆ ಮುಂತಾದ ವಿವರಗಳನ್ನು ಸಲ್ಲಿಸಬೇಕು.

       ವೀಸಾ ಬಗೆಗಳು (Types of Visa)

      1. ಪ್ರವಾಸಿ ವೀಸಾ
      2. ವ್ಯಾಪಾರ ಅಥವಾ ಉದ್ಯೋಗ ವೀಸಾ
      3.  ಬದಲಾವಣೆಯ ವೀಸಾ
      4.  ವಿದ್ಯಾರ್ಥಿ ವೀಸಾ
      5.  ವಲಸೆ ಗಾರರ ವೇಸ
      6.  ಏಕ ಪ್ರವೇಶದ ವೀಸಾ
      7.  ಡಬಲ್ ಎಂಟ್ರಿ ವೀಸಾ
      8.  ಬಹು ಪ್ರವೇಶದ ವೀಸಾ
      9.  ದೀರ್ಘಾವಧಿ ವೀಸಾ
      10.  ಸಮೂಹ  ವೀಸಾ  ವೀಸಾ ಪಡೆಯಲು ವೀಸಾ ಶುಲ್ಕವನ್ನು ಬರಿಸಬೇಕು

       

      3. ಆರೋಗ್ಯ ಪ್ರಮಾಣ ಪತ್ರ (Health Certificate)

      ವೀಸಾ ಪಡೆದ ನಂತರ ಪ್ರವಾಸಿಗರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಪಡೆಯಬೇಕು. ವೀಸಾ ಪಡೆಯುವಾಗ ಆತ ಕಾಲರಾ, ಸಿಡುಬು, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳಿಂದ ಮುಕ್ತನಾದ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ತೋರಿಸಬೇಕು. ಒಂದು ವೇಳೆ ಅಂತಹ ಯಾವುದಾದರೂ ಕಾಯಿಲೆಗಳು ಇದ್ದರೆ ಅವನು 10 ದಿನಗಳ ಮುಂಚಿತವಾಗಿ ಅದಕ್ಕೆ ಸಂಬಂಧಿಸಿದ ಚುಚ್ಚುಮದ್ದನ್ನು ಪಡೆದಿರಬೇಕು. ಇಲ್ಲವಾದರೆ ವೀಸಾ ರದ್ದಾಗುತ್ತದೆ.

      4. ಪೊಲೀಸ್ ಪ್ರಮಾಣ ಪತ್ರ (Police Certificate)

      ಪ್ರವಾಸಿಗನು ವೀಸಾ ಪಡೆಯುವಾಗ ಉತ್ತಮ ನಡುವಳಿಕೆಯನ್ನು ಹೊಂದಿದ್ದಾನೆ ಎಂಬುದರ ಕುರಿತು ಪೊಲೀಸ್ ಪ್ರಮಾಣ ಪತ್ರವನ್ನು ಪಡೆದಿರಬೇಕು. ಏಕೆಂದರೆ “ಪ್ರವಾಸಿಗರ ಒಳಿತೇ ಪ್ರವಾಸೋದ್ಯಮದ ಒಳಿತಾಗಿದೆ.”

      5. ಪ್ರವಾಸಿ ಕಾರ್ಡ್ (Tourist card) 

      ಪ್ರವಾಸ ಕೈಗೊಳ್ಳುವ ಪ್ರವಾಸಿಗನು ಪಾಸ್‌ಪೋರ್ಟ್‌ ಜೊತೆಗೆ ಪ್ರವಾಸಿ ಕಾರ್ಡನ್ನು ಹೊಂದಿರಬೇಕಾದುದು ಅಗತ್ಯ. ಈ ಕಾರ್ಡನ್ನು ಪ್ರವಾಸಿಗನು ಒಂದು ದೇಶಕ್ಕೆ ಬರುವಾಗ ಮತ್ತು ದೇಶದಿಂದ ಹಿಂತಿರುಗುವಾಗ ಪ್ರವಾಸಿ ಕಾರ್ಡನ್ನು ತೋರಿಸಬೇಕಾಗುತ್ತದೆ.

      ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ  ವಸತಿ ಮೂಲ ಸೌಕರ್ಯಗಳ ಪಾತ್ರ

      ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ವಸತಿ ಮೂಲ ಸೌಕರ್ಯಗಳ ಪಾತ್ರ

      ವಸತಿ ಅಥವಾ ಹೋಟೆಲ್ ಗಳು ಪ್ರವಾಸೋದ್ಯಮದ ನರನಾಡಿಗಳಿದ್ದಂತೆ ಹೋಟೆಲ್‌ಗಳು ಅಥವಾ ವಸತಿ ವ್ಯವಸ್ಥೆಗಳು ಸರಿಯಾಗಿ ಇಲ್ಲದಿದ್ದರೆ ಪ್ರವಾಸಿಗರು ಪ್ರವಾಸವನ್ನು ಕೈಗೊಳ್ಳಲು ಇಷ್ಟಪಡುವುದಿಲ್ಲ. ಏಕೆಂದರೆ ಪ್ರವಾಸಿಗರು ದೂರ ದೂರ ಹೋಗಬೇಕಾಗಿರುವುದರಿಂದ ಅವರಿಗೆ ಸೂಕ್ತವಾದ ವಸತಿ ಹಾಗೂ ಆಹಾರದ ವ್ಯವಸ್ಥೆಗಳು ಬೇಕೇ ಬೇಕು. ಹಾಗಾಗಿ ಇಂದು ಪ್ರವಾಸೋದ್ಯಮವು ಸುಸಜ್ಜಿತವಾದ ಹೋಟೆಲ್‌ಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ಅನುಕೂಲತೆಗಳನ್ನು ಒದಗಿಸಿಕೊಡುತ್ತದೆ. ಇದರಿಂದ ದೂರ ದೂರದ ಪ್ರದೇಶಗಳಿಂದ ಬರುವ ಪ್ರವಾಸಿಗರಿಗೆ ಸಾಕಷ್ಟು ಅನುಕೂಲತೆಗಳು ಆಗುತ್ತವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದ ಎಲ್ಲಾ ಮಾದರಿಯ ಹೋಟೆಲ್ ಗಳು ಪ್ರವಾಸಿಗರ ಅನುಕೂಲಕ್ಕೆ ಮೂಲಸೌಕರ್ಯಗಳಾದ ಶುಚಿತ್ವ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ಗಾಳಿ ಬೆಳಕಿನ ಸೌಲಭ್ಯ, ಒಳಚರಂಡಿ, ವಾಹನ ನಿಲುಗಡೆಗೆ, ಪಾರ್ಕಿಂಗ್ ವ್ಯವಸ್ಥೆ, ಟಿ.ವಿ, ಕಲಾಮಂದಿರ, ಸಾರಿಗೆ ಸಂಪರ್ಕ ವ್ಯವಸ್ಥೆ, ವೃತ್ತ ಪತ್ರಿಕೆ, ಮನರಂಜನೆ ಹಾಗೂ ಬಹುಭಾಷ ಕೆಲಸಗಾರರಂತಹ ಬಹುಮುಖ್ಯವಾದ ಸೌಕರ್ಯಗಳನ್ನು ಪ್ರವಾಸಿಗರಿಗೆ ದೊರಕಿಸಿ ಕೊಡಬೇಕು. ಪ್ರವಾಸಿಗರನ್ನು ಆಕರ್ಷಿಸಲು ವಸತಿ ನಿಲಯಗಳಲ್ಲಿ ಮೆದುವಾದ ಬೆಡ್‌ಗಳು, ಹವಾ ನಿಯಂತ್ರಿತ ಕೊಠಡಿಗಳು, ಅಲ್ಲಿ ಬಿಸಿ ನೀರಿನ ಸೌಲಭ್ಯಗಳು ಸಿಗುವಂತಿರಬೇಕು. ಭಾರತೀಯ ಹೋಟೆಲ್‌ಗಳನ್ನು ಪ್ರವಾಸಿಗರ ಪಾವತಿ ಅನುಸಾರ ಮೊದಲಸ್ಟಾರ್‌ನಿಂದ 7 ಸ್ಟಾರ್ ಹೋಟೆಲ್‌ಗಳಾಗಿ ವಿಂಗಡಿಸಲಾಗಿದೆ. 

      ಹೋಟೆಲ್‌ಗಳ ವರ್ಗೀಕರಣ:

      1. ಅಂತರಾಷ್ಟೀಯ ಹೋಟೆಲ್‌ಗಳು
      2. ವಾಣಿಜ್ಯ ಹೋಟೆಲ್‌ಗಳು
      3. ರೆಸಾರ್ಟ್‌ ಹೋಟೆಲ್‌ಗಳು
      4. ನಿವಾಸ ಹೋಟೆಲ್‌ಗಳು
      5. ತೇಲುವ ಹೋಟೆಲ್‌ಗಳು
      6. ಸಂಯುಕ್ತ ಹೋಟೆಲ್‌ಗಳು
      7. ಏರ್‌ಪೋರ್ಟ್‌ ಹೋಟೆಲ್‌ಗಳು

      ಭಾರತದ ಪ್ರಮುಖ ಹೋಟೆಲ್‌ಗಳು: ಭಾರತದ ಪ್ರಮುಖ ಹೋಟೆಲ್‌ಗಳು ಈ ಕೆಳಗಿನಂತಿವೆ.

      1. ಹೆರಿಟೇಜ್‌ ಹೋಟೆಲ್‌ಗಳು: ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ದೇಶಿಯ ರಾಜರುಗಳು ತಮ್ಮ ಅಧಿಕಾರವನ್ನು ಕಳೆದುಕೊಂಡರು. ರಾಜರುಗಳು ಬಳಕೆ ಮಾಡುತ್ತಿದ್ದ ಅರಮನೆಗಳು ವ್ಯರ್ಥವಾಗಿ ಉಳಿದವು. ಆಗ 1966 ರಲ್ಲಿ ಭಾರತದ ಪ್ರವಾಸೋದ್ಯಮ ಇಲಾಖೆಯು ಹೀಗೆ ವ್ಯರ್ಥವಾಗಿ ಉಳಿದ ಅರಮನೆಗಳನ್ನು ಹೆರಿಟೇಜ್‌ ಹೋಟೆಲ್‌ಗಳಾಗಿ ಪರಿವರ್ತಿಸಿತು. ಮತ್ತು ಪ್ರವಾಸಿಗರ ಅನುಕೂಲಕ್ಕೆ ತಕ್ಕ ಹಾಗೆ ಅವುಗಳಲ್ಲಿ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಿತು. ಅನೇಕ ಅರಮನೆಗಳು ಮಹಲುಗಳು, ಕೋಟೆಗಳು ಮತ್ತು ರಾಜ-ರಾಣಿಯರ ವಾಸಸ್ಥಾನಗಳನ್ನು ಹೆರಿಟೇಜ್‌ ಹೊಟೇಲ್‌ಗಳಾಗಿ ಪರಿವರ್ತನೆಯಾದವು. ಐತಿಹಾಸಿಕ ದೃಶ್ಯಗಳನ್ನು ಈ ಹೊಟೇಲ್‌ಗಳಲ್ಲಿ ಬಿಂಬಿಸಲಾಯಿತು. ಈ ಹೊಟೇಲ್‌ಗಳಲ್ಲಿ ಕನಿಷ್ಟ, ಉತ್ಕೃಷ್ಟ ಹಾಗೂ ವೈಭವ ಪರಂಪರೆಗಳೆಂಬ 3 ವಿಧಗಳಲ್ಲಿ ವಿಂಗಡಿಸಲಾಗಿದೆ. ಅಂತಹ ಹೋಟೆಲುಗಳು ಭಾರತದಲ್ಲಿ ಒಟ್ಟು 100 ಇವೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ನೀಡಲಾಗಿದೆ.

      1. ಶಿವ ವಿಲಾಸ ಅರಮನೆ, ಹಂಪಿ
      2. ಜೀರಾಬಾಗ ಅರಮನೆ ಹೋಟೆಲ್, ಮಾಂಡು
      3. ಜಗತ್‌ ನಿವಾಸ್ ಅರಮನೆ ಮತ್ತು ಅಮಿತ್ ಹವೇಲಿ ಅರಮನೆ ಹೋಟೆಲ್, ಉದಯಪುರ.
      4. ಟೀ ಬಂಗಲೋ, ಕೊಚ್ಚಿನ್
      5. ಉಷಾ ಕಿರಣ ಅರಮನೆ ಹೋಟೆಲ್, ಗ್ವಾಲಿಯರ್
      6. ಹೌಸ್ ಆಫ್ ಎಂ ಜಿ, ಅಹಮದಾಬಾದ್
      7. ಹೋಟೆಲ್ ಗಂಗಾಸ್‌, ವಾರಣಾಸಿ.
      8. ರಣಜಿತ್ ಸ್ವಾಸ, ಅಮೃತಸರ್
      9. ಸ್ವಾತ್ಮ ಹೋಟೆಲ್, ತಂಜಾವೂರ್
      1. ಅಶೋಕ ಹೋಟೆಲ್‌ಗಳು: ಈ ಅಶೋಕ ಹೋಟೆಲ್‌ಗಳಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ ಎಲೈಟ್‌, ಕಂಫರ್ಟ್ ಹಾಗೂ ಕ್ಲಾಸಿಕ್. ಈ ಹೋಟೆಲ್‌ಗಳನ್ನು ITDC ನಿರ್ವಹಣೆ ಮಾಡುತ್ತಿದೆ. ಇವು ಗಾಳಿ ಬೆಳಕಿನ ಸೌಲಭ್ಯ, ವಾಹನ ನಿಲುಗಡೆ, ಟಿವಿ, ಕಲಾಮಂದಿರ, ಮನರಂಜನೆ ಹಾಗೂ ದಿನಪತ್ರಿಕೆಗಳನ್ನು ಒಳಗೊಂಡಿರುತ್ತವೆ. ಅಗರ್ಭ ಶ್ರೀಮಂತರ ಹೋಟೆಲ್‌ಗಳಾಗಿವೆ.
      1. ಅಶೋಕ ಹೋಟೆಲ್ ದಾವಣಗೆರೆ.
      2. ಅಶೋಕ ಹೋಟೆಲ್ ಗಂಗಾವತಿ
      3. ಅಶೋಕ ಹೋಟೆಲ್, ಚನ್ನಪಟ್ಟಣ
      4. ಅಶೋಕ ಹೋಟೆಲ್ ಮೈಸೂರು
      5. ಅಶೋಕ ಹೋಟೆಲ್ ನರಸೀಪುರ
      6. ದಿ ಅಶೋಕ-ಚಾಣಕ್ಯಪುರಿ ನವ ದೆಹಲಿ
      7. ದಿ ಅಶೋಕ ಹೋಟೆಲ್ ವಿಜಯಪುರ
      1. ಅಂತರಾಷ್ಟ್ರೀಯ ಹೋಟೆಲ್‌ಗಳು: ಈ ಹೋಟೆಲ್‌ಗಳು ತ್ರಿತಾರಾ, ಪಂಚತಾರಾ, ಪಂಚತಾರಾ ಡೀಲಕ್ಸ್ ಹೋಟೆಲ್ ಗಳಾಗಿವೆ. ಇವುಗಳು ಸಹ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು ಅಂತರಾಷ್ಟ್ರೀಯ ಮನ್ನಣೆಯನ್ನು ಗಳಿಸಿವೆ. ಈ ಹೋಟೆಲ್‌ಗಳು ದೆಹಲಿ, ಮುಂಬೈ ಹಾಗೂ ಕಲ್ಕತ್ತಾಗಳಲ್ಲಿ ಇವೆ.
      1. ವಿಹಾರ ವಿಶ್ರಾಂತಿ ಧಾಮಗಳು: ಈ ಹೋಟೆಲ್‌ಗಳು ಪ್ರಕೃತಿ ವಿಶ್ರಾಂತಿ ಧಾಮಗಳಾಗಿವೆ. ಈ ಹೋಟೆಲ್‌ಗಳಲ್ಲಿ ಸ್ಪಾ, ಸ್ನಾನದ ವ್ಯವಸ್ಥೆ, ಅಧ್ಯಯನ, ವ್ಯಾಯಾಮ, ಗ್ರಂಥಾಲಯ, ಸಿನೆಮಾ ಹಾಗೂ ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈ ಹೋಟೆಲ್‌ಗಳು ಸಾಮಾನ್ಯವಾಗಿ ಗುಡ್ಡ, ಬೆಟ್ಟ, ಗಿರಿಧಾಮ ಹಾಗೂ ಕಡಲ ತೀರ ಪ್ರದೇಶಗಳಲ್ಲಿ ವಸತಿ ವ್ಯವಸ್ಥೆಗಳನ್ನು ಕಲ್ಪಿಸುತ್ತವೆ.
      1. ನೌಕಾ ವಿಹಾರ ಧಾಮ: ಈ ರೀತಿಯ ಹೋಟೆಲ್‌ಗಳು ಸಮುದ್ರ ತೀರಗಳಲ್ಲಿ ಸಂಚರಿಸುವ ಹಡಗುಗಳಲ್ಲಿ ಇರುತ್ತವೆ. ಈ ಹೋಟೆಲ್‌ಗಳಲ್ಲಿ ವಿಶ್ರಾಂತಿ, ಉಪಹಾರ, ಊಟ, ಕ್ರೀಡೆ, ಗ್ರಂಥಾಲಯ ಹಾಗೂ ಸಿನಿಮಾ ಸೌಲಭ್ಯಗಳನ್ನು ನೀಡಲಾಗುತ್ತದೆ.
      1. ವಾಣಿಜ್ಯ ಹೋಟೆಲ್‌ಗಳು: ಈ ಹೋಟೆಲ್‌ಗಳು ಬಡವರು ಹಾಗೂ ಮದ್ಯಮವರ್ಗದವರನ್ನು ಗಮನದಲ್ಲಿಟ್ಟುಕೊಂಡು ಸ್ಥಾಪಿತವಾದವುಗಳಾಗಿವೆ. ಕಡಿಮೆ ಖರ್ಚಿನಲ್ಲಿ ವಸತಿ ಸೌಲಭ್ಯ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸುತ್ತವೆ.
      1. ನಿವಾಸ ಹೋಟೆಲ್‌ಗಳು: ಪ್ರವಾಸಿಗರು ಅತಿ ಹೆಚ್ಚು ಕಾಲದವರೆಗೆ ಒಂದೇ ಕಡೆ ನೆಲೆಸಿದರೆ ಅವರಿಗೆ ತಿಂಗಳಿಗೆ ಹಣವನ್ನು ಪಾವತಿ ಮಾಡುವ ರೀತಿಯಲ್ಲಿ ವಸತಿಯನ್ನು ಕಲ್ಪಿಸುವ ಹೋಟೆಲಿಗಳಿಗೆ ನಿವಾಸಿ ಹೋಟೆಲ್‌ಗಳು ಎಂದು ಕರೆಯುತ್ತಾರೆ. ಈ ಹೋಟೆಲ್‌ಗಳು ಸಾಮಾನ್ಯವಾಗಿ ನಗರಗಳಲ್ಲಿದ್ದು ಪ್ರವಾಸಿಗರಿಗೆ ಸಾಮಾನ್ಯ ಸೌಲಭ್ಯಗಳನ್ನು ನೀಡುತ್ತವೆ.

      1. ತೇಲು ಹೋಟೆಲ್‌ಗಳು: ಈ ರೀತಿಯ ಹೋಟೆಲ್‌ಗಳನ್ನು ನಾವು ಕಾಶ್ಮೀರದಲ್ಲಿ ನೋಡಬಹುದು. ನದಿ, ಸರೋವರಗಳ ಮೇಲೆ ತೇಲುವ ತೆಪ್ಪಗಳಲ್ಲಿ ಅಂದರೆ ವಿಶಾಲವಾದ ದೋಣಿಗಳಲ್ಲಿ ಇಂತಹ ಹೋಟೆಲ್‌ಗಳನ್ನ ನಡೆಸುತ್ತಾರೆ. ಬಂದ ಪ್ರವಾಸಿಗರಿಗೆ ವಸತಿ ಹಾಗೂ ಊಟದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
      1. ಜಂಗಲ್ ಲಾಡ್ಜ್: ಪರಿಸರ ವೀಕ್ಷಣೆ, ವನ್ಯ ಪ್ರಾಣಿಧಾಮ ನೋಡಲು ಬರುವ ಪ್ರವಾಸಿಗರಿಗಾಗಿ ವಸತಿ ಸೌಲಭ್ಯಗಳನ್ನು ನೀಡುವ ಸಲುವಾಗಿ ಹುಟ್ಟಿಕೊಂಡ ಹೋಟೆಲ್‌ಗಳಿವು. ಇಲ್ಲಿ ಊಟ ಹಾಗೂ ವಸತಿ ವ್ಯವಸ್ಥೆಗಳಿರುತ್ತವೆ. ಉದಾ: ಕಾರಾವಾರ, ದೇವಬಾಗ್‌, ಬಂಡಿಪುರ ಹಾಗೂ ಕಬನಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಂಗಲ್ ಲಾಡ್ಜ್‌ಗಳನ್ನು ಸ್ಥಾಪಿಸಲಾಗಿದೆ. ಇದು ಅಲ್ಲದೆ ಕಾಟೇಜ್‌ ಹೋಟೆಲ್‌ಗಳು ಹಾಗೂ ಪ್ರವಾಸಿ ಮಂದಿರಗಳು ಸಹ ಇಲ್ಲಿ ಲಭ್ಯವಿರುತ್ತದೆ.
      1. ರಸ್ತೆ ಬದಿಯ ಉಪಹಾರ ಗೃಹಗಳು: ಪ್ರವಾಸಿಗಳು ತಮ್ಮ ಸ್ವಂತ ವಾಹನಗಳ ಮೂಲಕ ಪ್ರಯಾಣ ಮಾಡುವಾಗ ಉಪಹಾರ ಮತ್ತು ಊಟವನ್ನು ನೀಡಲೆಂದೇ ರಸ್ತೆ ಬದಿಗಳಲ್ಲಿ ಸ್ಥಾಪಿಸಲ್ಪಟ್ಟ ಹೋಟೆಲ್‌ಗಳು ಇವುಗಳಾಗಿವೆ. ಪ್ರವಾಸಕ್ಕೆ ಬಂದ ಪ್ರವಾಸಿಗರ ವಾಹನಗಳು ನಿಲ್ಲುವುದಕ್ಕಾಗಿ ವಾಹನ ನಿಲ್ದಾಣಗಳು, ವಸತಿ, ಆಹಾರ, ಮನರಂಜನೆ ಮೊದಲಾದ ಸೌಕರ್ಯಗಳನ್ನು ಒದಗಿಸುತ್ತವೆ. ಇದರ ಜೊತೆಗೆ ಪ್ರವಾಸಿಗರ ವಾಹನಗಳು ಕೆಟ್ಟು ನಿಂತರೆ ಅವುಗಳನ್ನು ದುರಸ್ತಿ ಮಾಡುವ ವ್ಯವಸ್ಥೆಗಳನ್ನು ಸಹ ಇಲ್ಲಿ ಮಾಡಲಾಗುತ್ತದೆ. ಈ ಹೋಟೆಲ್‌ಗಳು ನಗರಗಳ ಹೊರಗೆ ಹೆದ್ದಾರಿ ಪಕ್ಕದ ರಸ್ತೆಗಳು ಸೇರುವ ಕಡೆಗಳಲ್ಲಿ ಇರುತ್ತವೆ.
      1. ಯೂಥ್ ಹಾಸ್ಟೆಲುಗಳು: ಯುವಕರು ಮತ್ತು ಯುವತಿಯರು ಕ್ರೀಡೆ, ಚಾರಣ, ಸ್ಕಿಯಿಂಗ್ ಹಾಗೂ ಜಾರುವಿಕೆ ಮೊದಲಾದ ಕಾರಣಗಳಿಗಾಗಿ ಪ್ರವಾಸ ಕೈಗೊಂಡರೆ ಅವರಿಗಾಗಿ ಕಡಿಮೆ ದರದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದಕ್ಕಾಗಿ ಈ ಹಾಸ್ಟೇಲುಗಳನ್ನು ನಿರ್ಮಿಸಲಾಗಿರುತ್ತದೆ. ಈ ಯೂತ್‌ ಹಾಸ್ಟೆಲ್‌ ಪರಿಕಲ್ಪನೆಯು 1900 ರಲ್ಲಿ ಜರ್ಮನಿಯಲ್ಲಿ ಬೆಳೆದು ಬಂದಿತು.
      1. ಕ್ಯಾರವಾನ್ ಟೆಂಟ್ ಹೌಸ್‌ಗಳು: ಇಂತಹ ಟೆಂಟ್ ಹೌಸ್‌ಗಳು ಸಾಮಾನ್ಯವಾಗಿ ಮರುಭೂಮಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಮರುಭೂಮಿಯಲ್ಲಿ ಸಂಚರಿಸುವ ಪ್ರವಾಸಿಗರಿಗೆ ವಸತಿ ಸೌಲಭ್ಯವನ್ನು ಒದಗಿಸುವ ಸಲುವಾಗಿ ಸ್ಥಾಪನೆಯಾದ ಟೆಂಟುಗಳು ಇವುಗಳಾಗಿವೆ. ಉದಾ: ರಾಜಸ್ಥಾನದ ಮರುಭೂಮಿ ಹಾಗೂ ಆಫ್ರಿಕಾದ ಸಹರಾ ಮತ್ತು ಥಾರ್ ಮರುಭೂಮಿಗಳಲ್ಲಿ ಒಂಟೆಯ ಮೇಲೆ ಪ್ರಯಾಣಿಸುವ ಪ್ರವಾಸಿಗರಿಗಾಗಿ ಈ ಟೆಂಟುಗಳನ್ನು ಸ್ಥಾಪಿಸಲಾಗಿರುತ್ತದೆ.

      ಡಾರ್ಮೆಟರಿಗಳು: ಪ್ರವಾಸಿಗರು ಒಂದು ದಿನದ ಮಟ್ಟಿಗೆ ವಸತಿಯನ್ನು ಪಡೆಯಲು ಈ ಡಾರ್ಮೆಂಟರಿಗಳಿಗೆ ಬರುತ್ತಾರೆ. ಆದರೆ ಇಲ್ಲಿ ಪ್ರತ್ಯೇಕವಾದ ಆಸನ ವ್ಯವಸ್ಥೆ ಇರುವುದಿಲ್ಲ. ಬದಲಾಗಿ ಸಾಮೂಹಿಕವಾಗಿ ಮಲಗಬೇಕಾಗುತ್ತದೆ.

      1963 ರಲ್ಲಿ ರೋಂ ಪ್ರವಾಸೋದ್ಯಮ ಸಮ್ಮೇಳನದಲ್ಲಿ ಹೋಟೆಲ್‌ಗಳು ನೀಡುವ ವಿವಿಧ ರೀತಿಯ ಸೌಕರ್ಯಗಳನ್ನು ಆಧರಿಸಿ ಏಕತಾರಾ, ದ್ವಿತಾರಾ, ತ್ರಿತಾರಾ, ಚತುರ್‌ತಾರ ಹಾಗೂ ಪಂಚತಾರಾ ಹೋಟೆಲ್‌ಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಪಂಚತಾರಾ ಹೋಟೆಲ್‌ಗಳು ಅತ್ಯಂತ ಆಡಂಬರದಿಂದ ಕೂಡಿದ್ದು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಅಂತರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದು ಅತ್ಯಂತ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತವೆ.

      2025ರಲ್ಲಿನ ಅಂದಾಜಿನಂತೆ ಭಾರತದಲ್ಲಿ ಸುಮಾರು 3,00,000 ಹೋಟೆಲ್ ಕೊರಡಿಗಳು ಇದ್ದು, 2029ರ ವೇಳೆಗೆ ಹೊಸದಾಗಿ 1,00,000 ಕೊಠಡಿಗಳು ಸೇರ್ಪಡೆಗೊಳ್ಳುವ ಅಂದಾಜು ಇದೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ಒಂದರಲ್ಲಿಯೇ ನಮ್ಮ ದೇಶದ ಕೊಠಡಿಗಳಿಗಿಂತ ಹೆಚ್ಚಿಗೆ ಇವೆ. ಆಸ್ಟ್ರೇಲಿಯಾದ ಕ್ರಿನ್ಸ್‌ಲ್ಯಾಂಡ್ ಎಂಬ ಕಡಲ ತೀರದಲ್ಲಿ ಸುಮಾರು 20,000 ಎಕರೆ ಭೂಪ್ರದೇಶದಲ್ಲಿ ಅಂತರಾಷ್ಟ್ರೀಯ ರೆಸಾರ್ಟ್ ಒಂದು ತಲೆ ಎತ್ತಿದೆ. ಇಲ್ಲಿ ಆಧುನಿಕ ಎಲ್ಲಾ ಸೌಲಭ್ಯಗಳು ಸಿಗುತ್ತವೆ.

      ಆಹಾರ ವ್ಯವಸ್ಥೆ

      ಭಾರತೀಯ ಹೋಟೆಲ್‌ಗಳಲ್ಲಿ ವಿದೇಶಿ ಪ್ರವಾಸಿಗರು ಬಯಸುವ ಬಗೆ ಬಗೆಯ ತಿಂಡಿ ಹಾಗೂ ಊಟಗಳನ್ನು ಒದಗಿಸಬೇಕು. ಸಸ್ಯಾಹಾರಿಯಾದ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಊಟವನ್ನು ನೀಡಬೇಕು. ಇದರೊಂದಿಗೆ ಇಂದಿನ ಹೋಟೆಲ್‌ಗಳು ಪಾನಿಪುರಿ, ಗೋಬಿಮಂಚೂರಿ, ಪಿಜ್ಜಾ ಹಾಗೂ ಬರ್ಗರ್‌ಗಳನ್ನು ಸಹ ಸರಬರಾಜು ಮಾಡುತ್ತಿವೆ. ಅನೇಕ ಹೋಟೆಲ್‌ಗಳಲ್ಲಿ ಬಗೆ ಬಗೆಯ ಮಾಂಸಹಾರ ಊಟವನ್ನು ಒದಗಿಸುತ್ತವೆ. ರುಚಿಕರವಾದ ಮಾಂಸಹಾರ ಹಾಗೂ ಸಸ್ಯಹಾರ ಪದಾರ್ಥಗಳನ್ನು ಹೋಟೆಲ್‌ಗಳು ಒದಗಿಸಿದರೆ ಪ್ರವಾಸಿಗರು ಆಕರ್ಷಿತರಾಗುತ್ತಾರೆ. ರೆಸ್ಟೋರೆಂಟ್‌ಗಳಲ್ಲಿ ಬಗೆ ಬಗೆಯ ಊಟ ಉಪಹಾರದ ಪಟ್ಟಿಯನ್ನು ತಯಾರಿಸಿ ಪ್ರವಾಸಿಗರಿಗೆ ನೀಡುತ್ತಾರೆ. ಆಗ ಪ್ರವಾಸಿಗರು ತಮಗೆ ಬೇಕಾದ ಭಕ್ಷ್ಯ ಭೋಜನಗಳನ್ನು ತರಿಸಿ ಊಟ ಮಾಡಲು ಸಹಕಾರಿಯಾಗುತ್ತದೆ. ಇಂತಹ ರೆಸ್ಟೋರೆಂಟ್‌ಗಳಲ್ಲಿ ವಿವಿಧ ಭಾಷೆಗಳನ್ನು ಬಲ್ಲ ಸಿಬ್ಬಂದಿಗಳು ಇರಬೇಕು. ಅವರು ಅತಿಥಿ ಸತ್ಕಾರಕ್ಕೆ ಹೆಸರಾಗಿರಬೇಕು. ಪ್ರವಾಸೋದ್ಯಮದ ಅಭಿವೃದ್ಧಿ ಮೂಲ ಸೌಕರ್ಯಗಳನ್ನು ಅವಲಂಬಿಸಿದೆ ಎಂಬುದನ್ನು ಎಲ್ಲಾ ದೇಶಗಳು ಮನವರಿಕೆ ಮಾಡಿಕೊಂಡಿವೆ.

      ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಸಾರಿಗೆ ಸೌಕರ್ಯದ ಪಾತ್ರ

      ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಸಾರಿಗೆ ಸೌಕರ್ಯದ ಪಾತ್ರ

      ಸಾರಿಗೆ ವ್ಯವಸ್ಥೆ (Transport)

      ಪ್ರವಾಸಿಗನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಸಾರಿಗೆ ವ್ಯವಸ್ಥೆ ಇರಬೇಕು. ಸಾರಿಗೆ ವ್ಯವಸ್ಥೆ ಇಲ್ಲದೆ ಹೋದರೆ ಪ್ರವಾಸೋದ್ಯಮ ನಡೆಯುವುದೇ ಇಲ್ಲ. ಒಂದು ಪ್ರವಾಸೋದ್ಯಮದ ಸ್ಥಳವು ದೇಶ, ವಿದೇಶ ಪ್ರವಾಸಿಗರನ್ನು ಆಕರ್ಷಿಸಲು ಆ ಸ್ಥಳಕ್ಕೆ ಸೂಕ್ತವಾದ ಸಾರಿಗೆ ಸಂಪರ್ಕ ವ್ಯವಸ್ಥೆ ಇರಬೇಕು. ಬಂದ ಪ್ರವಾಸಿಗರಿಗೆ ಉಳಿದುಕೊಳ್ಳಲು ಉತ್ತಮ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಆಗ ಮಾತ್ರ ಪ್ರವಾಸಿಗರು ಆ ಪ್ರದೇಶಗಳನ್ನು ಇಷ್ಟಪಡುತ್ತಾರೆ. ಸಾರಿಗೆ ವ್ಯವಸ್ಥೆಯನ್ನು 4 ಭಾಗಗಳಾಗಿ ವಿಂಗಡಿಸಲಾಗಿದೆ.

      ಅವುಗಳೆಂದರೆ        1. ರಸ್ತೆಗಳು        2. ವಿಮಾನಯಾನ      3.ರೈಲುಮಾರ್ಗ      4. ಜಲಮಾರ್ಗ

      1. ರಸ್ತೆಗಳು: ಮಾನವ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಮಾಡಬೇಕೆಂದರೆ ರಸ್ತೆ ಸಾರಿಗೆ ಅತಿ ಮುಖ್ಯವಾಗಿದೆ. ಇಂದು ರಸ್ತೆ ಸಾರಿಗೆ ಅತ್ಯಂತ ಜನಪ್ರಿಯ ಸಾರಿಗೆಗಳಲ್ಲಿ ಒಂದು ರಸ್ತೆ ಸಾರಿಗೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ ಹಾಗೂ ತಾಲೂಕು ಹೆದ್ದಾರಿಗಳೆಂದು ವಿಭಜಿಸಲಾಗಿದೆ. ಈ ಹೆದ್ದಾರಿಗಳು ಸುರಕ್ಷಿತ ಮತ್ತು ಸುವ್ಯವಸ್ಥಿತವಾಗಿದ್ದರೆ ಮಾತ್ರ ಪ್ರವಾಸಿಗರು ತಮಗೆ ಇಚ್ಛಿಸಿದ ಪ್ರವಾಸಿ ತಾಣಗಳಿಗೆ ಹೋಗಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯು ಅತ್ಯಂತ ಸುಭದ್ರವಾದ ರಸ್ತೆ ಮಾರ್ಗಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು. ರಸ್ತೆಗಳ ಬದಿಗಳಲ್ಲಿ ಉತ್ತಮವಾದ ಮಾರ್ಗಸೂಚಿ ಫಲಕಗಳು ಇರಬೇಕು. ಪ್ರವಾಸಿಗರು ಸಂಚರಿಸುವ ರಸ್ತೆಗಳ ಎಡಬಲ ಬದಿಗಳಲ್ಲಿ ಸುಸಜ್ಜಿತವಾದ ಹೋಟೆಲ್‌ಗಳನ್ನು ನಿರ್ಮಿಸಬೇಕು. ರಸ್ತೆ ಸುರಕ್ಷತೆಗೆ ಹೆಚ್ಚು ಗಮನ ಹರಿಸಬೇಕು. ಇದರೊಂದಿಗೆ ಭದ್ರತೆಯು ಅಷ್ಟೇ ಪ್ರಮುಖವಾಗಿರುತ್ತದೆ. ರಸ್ತೆ ಬದಿಗಳಲ್ಲಿ ಅಲ್ಲಲ್ಲಿ ಇಂಧನ ಪೂರೈಸುವ ವ್ಯವಸ್ಥೆಯನ್ನು ಕಲ್ಪಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉತ್ತಮವಾದ ರಸ್ತೆಗಳನ್ನು ನಿರ್ಮಿಸಿ ಪ್ರವಾಸಿಗರನ್ನು ಪ್ರವಾಸ ತಾಣಗಳಿಗೆ ಆಕರ್ಷಿಸಬೇಕು, ನಂತರ ಪ್ರವಾಸಿ ಗಮ್ಯ ಸ್ಥಾನಗಳಿಗೆ ತಲುಪಲು ಮೋಟಾರ್‌ ಕೋಚುಗಳನ್ನು ಒದಗಿಸಬೇಕು. ಈ ಮೋಟಾರು ಕೋಚ್‌ಗಳಲ್ಲಿ ಸುಸ್ತಜಿತವಾದ ಆಸನ, ಕಿಟಕಿ, ಹವಾನಿಯಂತ್ರಕ ಸೌಲಭ್ಯಗಳನ್ನು ಒದಗಿಸಬೇಕು. ಬಂದ ಅತಿಥಿಗಳನ್ನು ಸತ್ಕರಿಸಲು ವಿವಿಧ ಭಾಷಾ ಕೌಶಲ್ಯವುಳ್ಳ ಚಾಲಕರನ್ನು ಮೋಟರು ಕೋಚ್‌ಗಳು ಹೊಂದಿರಬೇಕು. ಪ್ರವಾಸಿಗರ ತಂಗುದಾಣಗಳಲ್ಲಿ ಉತ್ತಮ ಸಾರಿಗೆ ಟ್ಯಾಕ್ಸಿಗಳು ಹಾಗೂ ಬಾಡಿಗೆ ಕಾರುಗಳನ್ನು ಒದಗಿಸಬೇಕು. ಟ್ಯಾಕ್ಸಿ ನಿರ್ವಾಹಕರು ಬಹು ಭಾಷೆಗಳನ್ನು ಬಲ್ಲವರಾಗಿರಬೇಕು.

      ಪ್ರವಾಸೋದ್ಯಮ ಅಭಿವೃದ್ಧಿಗೆ ಹೆದ್ದಾರಿಗಳು ಎಷ್ಟು ಮಹತ್ವದ್ದಾಗಿವೆ ಎಂಬುದನ್ನು ಅರಿತ ಅಮೆರಿಕ ಹಾಗೂ ಇಂಗ್ಲೆಂಡ್‌ಗಳು ವೇಗದ ಹಾಗೂ ಮತ್ತು ಅತಿ ವೇಗದ ಹೆದ್ದಾರಿಗಳನ್ನು ನಿರ್ಮಿಸಿದವು.  ಜಾಗತಿಕವಾಗಿ ಹೆಚ್ಚು ಪ್ರಖ್ಯಾತವಾದ ಇಂದಿನ ಹೆದ್ದಾರಿಗಳೆಂದರೆ ಅಮೆರಿಕದ, ಪಾನ್‌ ಅಮೆರಿಕ ಹೆದ್ದಾರಿಯು ಸುಮಾರು 23000 ಮೈಲಿ ಉದ್ದವಾಗಿದೆ. ಇದು ಅಲ್ಲದೆ ಟ್ರಾನ್ಸ್ ಯುರೋಪ್‌ ನಾರ್ತ್‌ ಸೌತ್‌ ಹೈವೇ. ಇದು ಸಿರಿಯಾದಿಂದ ಗ್ರೀಸ್ ವರೆಗೆ ವಿಸ್ತರಿಸಿದೆ. ಟ್ರಾನ್ಸ್‌-ಆಫ್ರಿಕನ್ ಹೆದ್ದಾರಿ ಈ ಹೆದ್ದಾರಿಯು ಕೀನ್ಯಾ ಉಗಾಂಡ ಹಾಗೂ ನೈಜೀರಿಯಾಗಳನ್ನು ಒಂದುಗೂಡಿಸುತ್ತದೆ. ಟ್ರಾನ್ಸ್ ವೆಸ್ಟ್ ಆಫ್ರಿಕನ್ ಹೆದ್ದಾರಿ. ಟ್ರಾನ್ಸ್ ಈಸ್ಟ್ ಆಫ್ರಿಕನ್ ಹೈವೇ ಫ್ಯಾನ್ ಅಮೆರಿಕನ್ ಹೈವೇ ಹಾಗೂ ಏಷ್ಯನ್ ಹೈವೇ ಪ್ರಮುಖವಾದವುಗಳಾಗಿವೆ. ಹೆದ್ದಾರಿಗಳನ್ನು  ನಿರ್ಮಿಸುವಾಗ ಗಟ್ಟಿಮುಟ್ಟಾದ ಅತಿ ಹೆಚ್ಚು ವರ್ಷಗಳವರೆಗೆ ಬಾಳಿಕೆ ಬರುವಂತಹ ಮತ್ತು ಸರ್ವ ಋತುಗಳಿಗೆ ಹೊಂದಿಕೆಯಾಗುವಂತಹ ಅಂತರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುವಂತೆ ಗಮನಹರಿಸಬೇಕು. ರಸ್ತೆಗಳ ಪಕ್ಕದಲ್ಲಿ ಹೋಟೆಲ್‌ಗಳು, ಶೌಚಾಲಯಗಳು, ಪಾರ್ಕ್‌ಗಳು, ತಿಂಡಿ ತಿನಿಸುಗಳು ದೊರಕುವಂತಿರಬೇಕು. ಅವುಗಳ ಕುರಿತು ರಸ್ತೆ ಫಲಕಗಳ ಮೂಲಕ ಸೂಚಿಸಬೇಕು. ಇದರಿಂದ ಪ್ರವಾಸಿಗರು ಸುಲಭವಾಗಿ ತಮ್ಮ ಪ್ರವಾಸಿ ತಾಣಗಳನ್ನು ತಲುಪಲು ಸಾಧ್ಯವಾಗುತ್ತದೆ.

      ಭಾರತದಲ್ಲಿನ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳೆಂದರೆ ಪಶ್ಚಿಮ ವೇಗದೂತ ಹೆದ್ದಾರಿ, ಪೂರ್ವ ವೇಗದ ಹೆದ್ದಾರಿ, ಕಲ್ಕತ್ತಾ ಹಾಗೂ  ಡಂಡಂ ನಡುವಿನ ರಾಷ್ಟ್ರೀಯ ಹೆದ್ದಾರಿ, ಗ್ರ್ಯಾಂಡ್ ಟ್ರಂಕ್ ಹೆದ್ದಾರಿ ಹಾಗೂ ಕಲ್ಕತ್ತಾ ಹಾಗೂ ದುರ್ಗಾಪುರ ನಡುವಿನ ಹೆದ್ದಾರಿ.

      1. ವಿಮಾನಯಾನ: ವಿಮಾನಯಾನ ಸಾರಿಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖವಾದ ಸಾರಿಗೆ ವ್ಯವಸ್ಥೆಯಾಗಿದೆ. ದೀರ್ಘಾವಧಿ ಪ್ರಯಾಣಕ್ಕೆ ವಾಯು ಸಾರಿಗೆಯು ಹೆಚ್ಚು ಫಲಪ್ರದವಾಗಿದೆ. ವಿಮಾನಯಾನ ಸಾರಿಗೆಯು ವಿದೇಶಿಯರನ್ನು ಬಹುಬೇಗನೆ ಸೆಳೆಯುತ್ತದೆ. ವಿಮಾನಯಾನ ಸಾರಿಗೆಯು ಪ್ರವಾಸಿಗರ ಕೈಗೆಟಕುವ ದರಗಳು ಅದರಲ್ಲಿನ ಶುಚಿತ್ವ ಕಾಲಕಾಲಕ್ಕೆ ದೊರಕುವ ಊಟ ತಿಂಡಿಗಳು ಹಾಗೂ ಅತ್ಯಂತ ಭದ್ರತೆಯಿಂದ ಕೂಡಿದ್ದರೆ ಪ್ರವಾಸಿಗರು ಹೆಚ್ಚು ಹೆಚ್ಚು ವಿಮಾನಯಾನವನ್ನು ಬಯಸುತ್ತಾರೆ. 1958ರ ವೇಳೆಗೆ ಅತಿ ವೇಗದ ಜಟ್ ವಿಮಾನ ಸಂಚಾರ ಜಾರಿಗೆ ಬಂದ ನಂತರ ರೈಲು ಹಾಗೂ ರಸ್ತೆ ಮತ್ತು ಹಡಗು ಸಂಚಾರದಲ್ಲಿ ಸ್ವಲ್ಪಮಟ್ಟಿಗೆ ಇಳಿತವನ್ನು ಕಾಣಲಾಯಿತು. ನ್ಯೂಯಾರ್ಕ್‌ ಹಾಗೂ ಪ್ಯಾರಿಸ್ ನಡುವೆ ಅಮೆರಿಕ ಬೋರಿಂಗ್ 707 ಎಂಬ ವಿಮಾನವು 1958 ರಲ್ಲಿ ಪ್ರಥಮ ಬಾರಿಗೆ ತನ್ನ ಹಾರಾಟವನ್ನು ಆರಂಭಿಸಿತು. ಇದರ ಹಿಂದೆಯೇ 1968ರಲ್ಲಿ ಎಲ್ಲಾ ಯುರೋಪಿನ ಏರ್‌ಲೈನ್‌ಗಳು ಜೆಟ್ ವಿಮಾನ ಸಾರಿಗೆ ವ್ಯವಸ್ಥೆಯನ್ನು ಆರಂಭಮಾಡಿದವು. ಅದರಂತೆ 1970ರಲ್ಲಿ ಜಂಬೋಜೆಟ್‌ ವಿಮಾನದ ಹಾರಾಟ ಆರಂಭವಾಯಿತು. ಇಲ್ಲಿಂದ ಅಂತರಾಷ್ಟ್ರೀಯ ಪ್ರವಾಸೋದ್ಯಮ ವಿಶಾಲವಾಗಿ ಹರಡಿತು. ವಿಮಾನ ಹಾರಾಟದ ಪರಿಣಾಮವಾಗಿ ವಿಶ್ವ ಇಂದು ಬಹಳ ಚಿಕ್ಕದಾಗಿ ಪರಿಣಮಿಸಿದೆ. ನಮ್ಮ ದೇಶದಲ್ಲಿಯೂ ಸಹ ಇಂಡಿಯನ್ ಏರ್‌ಲೈನ್ ಮತ್ತು ಖಾಸಗಿ ಒಡೆತನದಲ್ಲಿನ ಸಹರಾ, ಕಿಂಗ್‌ಫಿಷರ್, ಡೆಕ್ಕನ್ ಜೆಟ್, ಏರ್‌ಲೈನ್‌ಗಳು ಅತ್ಯುತ್ತಮವಾದ ಸಾರಿಗೆಯನ್ನು ಒದಗಿಸುತ್ತಿವೆ.

      ವಿಮಾನ ಸಂಸ್ಥೆಗಳು ಗಮ್ಯಸ್ಥಾನಗಳಿಗೆ ಹತ್ತಿರವಾಗಿರುವಂತೆ ರನ್‌ವೇಗಳನ್ನು ನಿರ್ಮಿಸಬೇಕು. ಪ್ರವಾಸಿಗರು ವಿಮಾನ ನಿಲ್ದಾಣಗಳಲ್ಲಿ ಇಳಿದ ನಂತರ ಅವರಿಗೆ ವಿಶ್ರಾಂತಿಗಾಗಿ ವಿಶ್ರಾಂತಿ ಕೊಠಡಿಗಳು, ಪೊಲೀಸ್ ಭದ್ರತೆ, ಆರೋಗ್ಯ ಸೇವೆಗಳು ತೆರಿಗೆ ಇಲ್ಲದೆ ವಸ್ತುಗಳ ಖರೀದಿ, ಉಪಹಾರ ವ್ಯವಸ್ಥೆ, ಮಧ್ಯದಂಗಡಿ, ವಿದೇಶಿ ವಿನಿಮಯ, ಸೀಟು ಖರೀದಿಯ ಅನುಕೂಲತೆ, ಬಾಡಿಗೆ ಕಾರುಗಳು, ಪ್ರವಾಸಿ ಏಜೆನ್ಸಿಗಳು ಮತ್ತು ತರಬೇತಿ ಹೊಂದಿದ ಸಿಬ್ಬಂದಿಗಳ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು. ಇತ್ತೀಚಿಗೆ ವಿಮಾನಗಳ ಪತನ, ಅಪಹರಣ ಹಾಗೂ ಭಯೋತ್ಪಾದನೆಗಳು ಹೆಚ್ಚುತ್ತಿದ್ದು ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ. ನಿಲ್ದಾಣಗಳು ಉತ್ತಮ ಗುಣಮಟ್ಟವನ್ನು ಹೊಂದಿರಬೇಕು. ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ವಿಮಾನಗಳು ರನ್‌ವೇಗಳಿಂದ ಜಾರಿ ಅಪಘಾತಕ್ಕೆ ಈಡಾಗಿ ನೂರಾರು ಜನ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುವ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತೇವೆ ಹಾಗೂ ಸೂಕ್ತ ಭದ್ರತೆ ಇದ್ದಷ್ಟು ಒಳ್ಳೆಯದು.

      1. ರೈಲು ಮಾರ್ಗಗಳು: ಪ್ರವಾಸಿಗರಿಗೆ ರೈಲು ಸಂಚಾರ ಅತ್ಯಂತ ಕಡಿಮೆ ವೆಚ್ಚದ್ದಾಗಿದ್ದು ಮತ್ತು ದೀರ್ಘಾವಧಿ ಪ್ರವಾಸಕ್ಕೆ ಯೋಗ್ಯಕರವಾಗಿದೆ. ಭಾರತೀಯ ರೈಲುಗಳು ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕಾಗಿದೆ. ರೈಲುಗಳು ಚೊಕ್ಕಟವಾಗಿದ್ದು ಉತ್ತಮವಾದ ಆಸನಗಳನ್ನು ಹೊಂದಿರಬೇಕು.  ರೈಲುಗಳಲ್ಲಿ ಹವಾನಿಯಂತ್ರಕಗಳಿದ್ದು ಶೌಚಾಲಯ, ಗಾಳಿ, ಬೆಳಕು, ನೀರಿನ ಪೂರೈಕೆ, ಉಪಹಾರ ಸೌಲಭ್ಯಗಳನ್ನು ರೈಲ್ವೆ ಇಲಾಖೆ ಪ್ರವಾಸಿಗರಿಗೆ ಒದಗಿಸಬೇಕು. ರೈಲು ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆ ಇರಬೇಕು. ಆರೋಗ್ಯ ಸೇವೆಯನ್ನು ಒದಗಿಸಬೇಕು ರೈಲುಗಳನ್ನು ಕಾಲಕಾಲಕ್ಕೆ ಆಧುನಿಕರಣಗೊಳಿಸಬೇಕು. ಋತುಮಾನಕ್ಕೆ ಅನುಗುಣವಾಗಿ ರೈಲುಗಳನ್ನು ಓಡಿಸುವ ವ್ಯವಸ್ಥೆ ಮಾಡಬೇಕು. ಟಿಕೆಟ್ ಬುಕಿಂಗ್‌ನಲ್ಲಿ ಆಗುತ್ತಿರುವ ಅನಾನುಕೂಲತೆಯನ್ನು ನಿವಾರಿಸಬೇಕು. ಇತ್ತೀಚಿಗೆ ದೇಶದಲ್ಲೆಲ್ಲಡೆ “ವಂದೇ ಭಾರತ್‌” ರೈಲುಗಳ ಸಂಚಾರವನ್ನು ಆರಂಭಿಸಲಾಗಿದೆ. ಪ್ರವಾಸಿಗರಿಗೆ ಉತ್ತಮವಾದ ಆಸನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಊಟದ ವ್ಯವಸ್ಥೆ ಹಾಗೂ ಪ್ರಯಾಣಿಕರಿಗೆ ಸಾಕಷ್ಟು ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹೀಗಾಗಿ ಪ್ರವಾಸೋದ್ಯಮ ಅಭಿವೃದ್ಧಿಯತ್ತ  ಸಾಗುತ್ತಿದೆ ಎಂದು ಹೇಳಬಹುದಾಗಿದೆ. ವಿದೇಶಿ ರೈಲುಗಳಿಗೆ ಹೋಲಿಸಿದರೆ ಭಾರತೀಯ ರೈಲುಗಳ ಗುಣಮಟ್ಟ ಬಹಳ ಕಳಪೆಯಾಗಿದೆ. ಆಧುನಿಕ ಜನರ ಗಾದೆ ಮಾತೊಂದಿದೆ “ವಿದೇಶಿ ರೈಲಿನಲ್ಲಿ ಕಾಲು ತೊಳೆದುಕೊಂಡು ಕಾಲಿಡಬೇಕು, ಆದರೆ ಭಾರತೀಯ ರೈಲಿನಲ್ಲಿ ತಿರುಗಾಡಿಕೊಂಡು ಬಂದು ಕಾಲು ತೊಳೆದುಕೊಳ್ಳಬೇಕು”.  ಚೀನಾ, ಜಪಾನ್, ಫ್ರಾನ್ಸ್‌ಗಳು ಗಂಟೆಗೆ 700 ರಿಂದ 1000 ಕಿ.ಮಿ ವೇಗವಾಗಿ ಚಲಿಸುವ ಬುಲೆಟ್ ಟ್ರೈನ್‌ಗಳನ್ನು ಓಡಿಸುತ್ತಿವೆ. ಆದರೆ ಭಾರತೀಯ ರೈಲುಗಳ ವೇಗ ಮಾತ್ರ ವೃದ್ಧಿಯಾಗಲೇ ಇಲ್ಲ. ಅವುಗಳು ಗಂಟೆಗೆ 150 ಕಿ.ಮೀ ಓಡಿದರೆ ಅದೇ ಹೆಚ್ಚುಗಾರಿಕೆ. ರೈಲುಗಳಲ್ಲಿನ ಶುಚಿತ್ವದ ಕೊರತೆಯಿಂದ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿಲ್ಲ. ಶುಚಿತ್ವ ಇದ್ದರೆ ಮಾತ್ರ ಪ್ರಯಾಣಿಕರು ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ. ರೈಲು ನಿಲ್ದಾಣದಿಂದ ಪ್ರವಾಸಿಗರು ತಮ್ಮ ತಂಗುದಾಣಗಳಿಗೆ ಹೋಗಲು ಸೂಕ್ತ ವಾಹನಗಳ ಸೌಲಭ್ಯಗಳನ್ನು ಕಲ್ಪಿಸಬೇಕು. ರೈಲು ಹಾಗೂ ವಿಮಾನಗಳ ವೇಳಾಪಟ್ಟಿಯಲ್ಲಿ ಸಮನ್ವಯತೆ ಇರುವಂತೆ ನೋಡಿಕೊಂಡರೆ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಪ್ರವಾಸಿಗರು ಬರುವ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಹೋಟೆಲ್, ಆರೋಗ್ಯ ಕೇಂದ್ರಗಳು, ನೈರ್ಮಲ್ಯ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಬೇಕು.

      ಗಾಲಿಗಳ ಮೇಲೆ ಅರಮನೆ:

      ಭಾರತದ ಅತ್ಯಂತ ಐಷಾರಾಮಿ ರೈಲು ಇದಾಗಿದೆ. ಇದು ಚಕ್ರ ಅಥವಾ ಗಾಲಿಗಳ ಮೇಲೆ ಚಲಿಸುತ್ತದೆ. ಅರಮನೆಯಲ್ಲಿ ಸಿಗಬಹುದಾದ ಎಲ್ಲಾ ಮೂಲಭೂತ ಸೌಕರ್ಯಗಳು ಈ ರೈಲಿನಲ್ಲಿ ಲಭ್ಯ. ಅಂದರೆ ಸುಖಾಸನ ಹವಾನಿಯಂತ್ರಕ, ಬಿಸಿನೀರು, ಬಾರ್ ಅಂಡ್ ರೆಸ್ಟೋರೆಂಟ್, ಉಪಹಾರ, ಗ್ರಂಥಾಲಯ ಶೌಚಾಲಯ ಹಾಗೂ ವಿಶ್ರಾಂತಿ ಗೃಹಗಳು ಮುಂತಾದ ಸೌಲಭ್ಯಗಳು ದೊರಕುತ್ತಿವೆ. ಈ ರೈಲನ್ನು ಅರಮನೆಯ ಹಾಗೆ ಶೃಂಗಾರ ಮಾಡಲಾಗಿರುತ್ತವೆ.  ಈ ರೈಲು ದೆಹಲಿಯಿಂದ ಆರಂಭವಾಗಿ ಜೋದಪುರ ಚಿತ್ತೂರ್ಗರ್‌, ಉದಯಪುರ, ಜೈಸಲ್ಮೇಲ್‌, ಭರತಪುರ ಹಾಗೂ ಆಗ್ರಾಗಳನ್ನು ಸಂದರ್ಶಿಸಿ ಮತ್ತೆ ದೆಹಲಿಯನ್ನು ಬಂದು ಸೇರುತ್ತದೆ. ಪ್ರಯಾಣದ ಸಮಯ 7 ರಾತ್ರಿ 8 ದಿನಗಳು. ಈ ರೈಲು ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ರೈಲಿನಲ್ಲಿ ಪ್ರಯಾಣ ಮಾಡಿದರೆ ದೇಶದ ಗತವೈಭವ ನೆನಪಾಗುತ್ತದೆ.  ಈ ರೈಲಿನಲ್ಲಿ ಪ್ರಯಾಣಿಸುವುದೇ ಒಂದು ಅದ್ಭುತವಾದ ಅನುಭವ. ಇದೇ ರೀತಿಯ ರೈಲು ವ್ಯವಸ್ಥೆ ರಾಜಸ್ಥಾನ್ ಹಾಗೂ ಕರ್ನಾಟಕದಲ್ಲಿ ಪರಿಚಯಿಸಲಾಗಿದೆ.

      ಸುವರ್ಣ ರಥ

      ಭಾರತದ ಪ್ರಮುಖ ಐಷಾರಾಮಿ ಪ್ರವಾಸಿ ರೈಲುಗಳಲ್ಲಿ ಒಂದಾಗಿದ್ದು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಇದನ್ನು ನಿರ್ವಹಿಸುತ್ತಿದೆ. ಕರ್ನಾಟಕ, ಗೋವಾ, ಕೇರಳ ಹಾಗೂ ತಮಿಳುನಾಡಿನ ಪ್ರಸಿದ್ಧ ವಿಶ್ವ ಪರಂಪರೆಯ ತಾಣಗಳು ಹಾಗೂ ಪ್ರವಾಸಿ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತದೆ. ಈ ರೈಲು ದಕ್ಷಿಣ ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ಇತಿಹಾಸವನ್ನು ಅನುಭವಿಸಲು ಉತ್ತಮ ಅವಕಾಶ ಕಲ್ಪಿಸುತ್ತದೆ.

      ಈ ರೈಲನ್ನು 2008ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲರು ಉದ್ಘಾಟಿಸಿದ್ದರು. ಈ ರೈಲಿನಲ್ಲಿ 11 ಬೋಗಿಗಳಿದ್ದು ಪ್ರತಿಯೊಂದು ಬೋಗಿಯಲ್ಲಿ ಟಿ.ವಿ, ವೈ ಪೈ ಪರಿಸರ, ವಿದೇಶಿಯ ಪ್ರವಾಸಿಗರು ಬಯಸುವ ಉತ್ತಮ ಗುಣಮಟ್ಟದ ಪೀಠೋಪಕರಣಗಳು, ಸ್ಪಾ ಹಾಗೂ ವ್ಯಾಯಾಮ ಶಾಲೆಗಳು ಇವೆ. ರೈಲುಭೋಗಿಗಳನ್ನು ಮೈಸೂರು. ಹಳೆಬೀಡುಗಳ ವಾಸ್ತುಶಿಲ್ಪದಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ಭೋಗಿಗಳಿಗೆ ಕನ್ನಡನಾಡಿನ ಆಳರಸರ ಹೆಸರನ್ನು ಇಡಲಾಗಿದೆ. ರೈಲಿನಲ್ಲಿ ರುಚಿಕರವಾದ ಆಹಾರವನ್ನು ಒದಗಿಸುವ ಎರಡು ರೆಸ್ಟೋರೆಂಟ್‌ಗಳು ಇವೆ. ಇಲ್ಲಿ ರುಚಿ ರುಚಿಯಾದ ಪಾಕಗಳನ್ನು ಸಿದ್ಧಪಡಿಸಿಕೊಡಲಾಗುತ್ತದೆ.

      ಈ ರೈಲು ಬೆಂಗಳೂರು ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ಹಂಪಿ ಬಾದಾಮಿ, ಗೋವಾ, ಕಬಿನಿ, ಮೈಸೂರು, ಬೃಂದಾವನ, ಹಳೇಬೀಡು, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಹಂಪಿ, ಪಟ್ಟದಕಲ್ಲು ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಪುನ ಬೆಂಗಳೂರಿಗೆ ಬಂದು ಸೇರುತ್ತದೆ. ಒಟ್ಟು 7 ದಿನಗಳ ಪ್ರವಾಸವಿದ್ದು 30 ಜನ ಪ್ರವಾಸಿಗರು ಕುಳಿತುಕೊಳ್ಳಬಹುದಾದಷ್ಟು ಆಸನಗಳು ಇವೆ. ಒಂದು ವಾರದಲ್ಲಿ 500 ಕಿ ಮೀ ದೂರವನ್ನು ಸಂಚರಿಸಿ 1500 ವರ್ಷಗಳ ಇತಿಹಾಸದ ಅನುಭವ ನೀಡುತ್ತದೆ. ವಿವಿಧ ಪ್ಯಾಕೇಜ್‌ಗಳಲ್ಲಿ ಇದು ಸಂಚರಿಸುತ್ತದೆ.

      ಇದು ಅತ್ಯಂತ ದುಬಾರಿಯಾಗಿದ್ದು ಒಬ್ಬರಿಗೆ ಕನಿಷ್ಠ 4 ಲಕ್ಷ ರೂಗಳಷ್ಟು ಖರ್ಚಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ ʻಗರಿಬೀ ರಥʼ ಎನ್ನುವ ಮತ್ತೊಂದು ರೈಲು ಬಡವರಿಗಾಗಿ ಉದ್ಘಾಟನೆಯಾಗಿದೆ.

      1. ಜಲ ಸಾರಿಗೆ: ದ್ವೀಪಗಳನ್ನು ಸಂದರ್ಶಿಸುವ ಪ್ರವಾಸಿಗರಿಗೆ ಹಡಗು, ಹರಿಗೋಲು ಹಾಗೂ ವಸತಿ ದೋಣಿಗಳನ್ನು ಪ್ರವಾಸೋದ್ಯಮ ಇಲಾಖೆ ಒದಗಿಸಬೇಕು. ಪ್ರವಾಸಿ ಹಡುಗುಗಳಲ್ಲಿ ಈಜುಕೊಳ, ವ್ಯಾಯಾಮಶಾಲೆ, ಜೂಜುಕಟ್ಟೆ, ಹೋಟೆಲ್, ಚಲನಚಿತ್ರ, ಕ್ರೀಡೆ, ಗ್ರಂಥಾಲಯ ಸೌಲಭ್ಯಗಳನ್ನು ಒದಗಿಸಬೇಕು. ಉದಾ: ಗ್ರೀಸ್, ಪ್ಲಾರಿಡಾ, ಹವಾಯ್‌, ಮೆಕ್ಸಿಕೋ, ಕೆರೆಬಿಯನ್ ಹಾಗೂ ಆಸ್ಟ್ರೇಲಿಯಾ ಸಮುದ್ರಯಾನಿಗಳಿಗೆ ಈ ರೀತಿಯಾದ ಹಡಗುಗಳ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ.

      ಕರ್ನಾಟಕ ಪ್ರವಾಸೋದ್ಯಮವು ನದಿ, ಸರೋವರ, ಕರಾವಳಿ ತೀರಗಳಲ್ಲಿ ಪ್ರವಾಸಿಗರಿಗೆ ದೋಣಿ ವಿಹಾರ ಮತ್ತು ಕ್ರೂಸ್ ಅನುಭವಗಳನ್ನು ಒದಗಿಸುವ ಮೂಲಕ ಆಲಮಟ್ಟಿ ಬಾಗಲಕೋಟೆ, ಕರಾವಳಿ ಭಾಗಗಳಲ್ಲಿ ದೋಣಿ ಹಾಗೂ ಫೈಬರ್ ದೋಣಿ ಸೇವೆಗಳನ್ನು ಒಳನಾಡಿನ ಸಾರಿಗೆ ಇಲಾಖೆಯು ಪ್ರೋತ್ಸಾಹಿಸುತ್ತಿದೆ. ಇದು ಪ್ರವಾಸೋದ್ಯಮದ ಮೂಲಕ ಆದಾಯ ಮತ್ತು ಮನರಂಜನೆ ಹೆಚ್ಚಿಸುವ ಸುಸ್ಥಿರ ಮಾರ್ಗವಾಗಿದೆ.

      ದೋಣಿ ವಿಹಾರ:  ಕೆರೆ ನದಿ ಹಿನ್ನಿರು ಪ್ರದೇಶಗಳಲ್ಲಿ ಜನಪ್ರಿಯ.

      ಹೌಸ್ ಬೋಟ್ ಮತ್ತು ಕ್ರೂಸ್:  ಕರಾವಳಿ ಹಾಗೂ ಪ್ರಮುಖ ಜಲಾಶಯಗಳಲ್ಲಿ ವಸತಿ ಹಾಗೂ ವಿಹಾರದ ಅನುಭವ ನೀಡುತ್ತವೆ.

      ಪರಿಸರ ಪ್ರವಾಸೋದ್ಯಮ:  ನದಿ ದಂಡೆಗಳ ಸೌಂದರ್ಯವನ್ನು ಸವಿಯಲು ಜನಸಾರಿಗೆ ಸಹಾಯಮಾಡುತ್ತದೆ.

      ಜಲಸಾರಿಗೆ ವಾಹನ  ವಿಧಗಳು:  ಹಡಗುಗಳು, ದೋಣಿಗಳು ಮತ್ತು ಬೋಟುಗಳು, ಪೆರ್ರಿಗಳು, ರೋ-ರೋ,  ಸ್ಟೀಮರ್‌ಗಳು ಟ್ಯಾಂಕರ್‌ಗಳು ಮೊದಲಾದವುಗಳು.

      ಸಾರಿಗೆಯಲ್ಲಿ ಹೊಸ ಮೈಲುಗಲ್ಲುಗಳು 

      1. ರೈಟ್ ಸಹೋದರರು ಪ್ರಪ್ರಥಮ ಬಾರಿಗೆ ವಿಮಾನವನ್ನು ಕಂಡುಹಿಡಿದರು.
      2. 1975ರಲ್ಲಿ ಪ್ರಪ್ರಥಮವಾಗಿ ಫ್ರಾನ್ಸ್‌ನ ಪೆರ್ರಿಯರಿನಿಂದ ಉಗಿ ಹಡಗು ಶೋಧನೆಯಾಯಿತು.
      3. 1939ರಲ್ಲಿ ರಷ್ಯಾದ ಇಗೋರ್‌ ಸಿಕೋರಸ್ಕಿಯಿಂದ ಹೆಲಿಕ್ಯಾಪ್ಟರ್ ಸಂಶೋಧನೆಯಾಯಿತು.
      4. 1927ರಲ್ಲಿ ಪ್ರಥಮ ಬಾರಿಗೆ ದೆಹಲಿಯಿಂದ ಕೈರೋಗೆ ಮೊದಲ ಇಂಡಿಯನ್ ವಿಮಾನವನ್ನು ಹಾರಿಸಲಾಯಿತು.
      5. 1927ರಲ್ಲಿ ದೆಹಲಿಯಲ್ಲಿ ಮೊದಲ ವಿಮಾನ ನಿಲ್ದಾಣವನ್ನು ಸ್ಥಾಪಿಸಲಾಯಿತು.
      6. 1919 ರಲ್ಲಿ ಪ್ರಥಮ ಫ್ರಾನ್ಸ್ ಅಟ್ಲಾಂಟ್ ಏರ್ಲೈನ್ ನ್ಯೂಪೌಂಡ್‌ಲ್ಯಾಂಡಿನಿಂದ ಐರ್ಲ್ಯಾಂಡ್‌ಗೆ ಹಾರಾಟ.
      7. 1981 ರಲ್ಲಿ ಜೂಲಿಯನ್ ನಾಟಿ ಎಂಬುವವನು ಪ್ರಥಮ ಸೋಲಾರ್ ಚಾಲಿತ ಪ್ಯಾರಾಚ್ಯೂಟ್ ಕಂಡು ಹಿಡಿದನು.
      8. 1984ರ ವೇಳೆಗೆ ರಾಕೇಶ್ ಶರ್ಮ ರಷ್ಯಾದ ಸಹಾಯದಿಂದ ಪ್ರಥಮ ಬಾರಿಗೆ ಗಗನ ನೌಕಯಾತ್ರೆ ಮಾಡಿದನು.
      9. ಕಲ್ಪನಾ ಚಾವ್ಲಾ ಪ್ರಥಮ ಗಗನಯಾತ್ರಿ ಎಂಬ ಕೀರ್ತಿಗೆ ಪಾತ್ರಳಾದಳು.
      10. 2002 ರಲ್ಲಿ ಪ್ರಥಮ ಆಧುನಿಕ ಸಬಮರಿನ್ ಸಂಶೋಧನೆಯಾಯಿತು.
      ಪ್ರವಾಸೋದ್ಯಮದ ಸಾಮಾಜಿಕ-ಆರ್ಥಿಕ ಪರಿಣಾಮ

      ಪ್ರವಾಸೋದ್ಯಮದ ಸಾಮಾಜಿಕ-ಆರ್ಥಿಕ ಪರಿಣಾಮ

      ಆಧುನಿಕ ಜಗತ್ತಿನಲ್ಲಿ ಪ್ರವಾಸೋದ್ಯಮವು ಅತ್ಯಂತ ಕ್ರಿಯಾತ್ಮಕ ಮತ್ತು ಪ್ರಭಾವಶಾಲಿ ವಲಯಗಳಲ್ಲಿ ಒಂದಾಗಿದೆ. ವಿರಾಮ ಮತ್ತು ಪ್ರಯಾಣವನ್ನು ಮೀರಿ, ಇದು ಸಮಾಜಗಳನ್ನು ರೂಪಿಸುವಲ್ಲಿ ಮತ್ತು ಆರ್ಥಿಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಸಾಮಾಜಿಕ ಮತ್ತು ಆರ್ಥಿಕ ಕೊಡುಗೆಗಳ ಮೂಲಕ ಇದರ ಪ್ರಭಾವವನ್ನು ವಿಶಾಲವಾಗಿ ಅರ್ಥಮಾಡಿಕೊಳ್ಳಬಹುದು, ಇವೆರಡೂ ಅವಕಾಶಗಳು ಮತ್ತು ಸವಾಲುಗಳನ್ನು ತರುತ್ತವೆ.

      1.  ಪ್ರವಾಸೋದ್ಯಮದ ಸಾಮಾಜಿಕ ಪರಿಣಾಮ:

      ಪ್ರವಾಸೋದ್ಯಮವು ಗಮ್ಯಸ್ಥಾನಗಳ ಸಾಮಾಜಿಕ ರಚನೆ ಮತ್ತು ಸಾಂಸ್ಕೃತಿಕ ರಚನೆಯ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರುತ್ತದೆ.

      *   ಪ್ರವಾಸೋದ್ಯಮವು ವಿಭಿನ್ನ ಹಿನ್ನೆಲೆಯ ಜನರನ್ನು ಒಟ್ಟಿಗೆ ತರುವ ಮೂಲಕ ಮತ್ತು ಶಾಂತಿಯುತ ಸಂವಹನಗಳನ್ನು ಪ್ರೋತ್ಸಾಹಿಸುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ.

      *   ಇದು ದೇಶಗಳ ನಡುವೆ ಪರಸ್ಪರ ತಿಳುವಳಿಕೆ ಮತ್ತು ಸಹಕಾರವನ್ನು ಬೆಳೆಸುತ್ತದೆ, ಬಲವಾದ ಅಂತರರಾಷ್ಟ್ರೀಯ ಸಂಬಂಧಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

      *   ಪ್ರವಾಸೋದ್ಯಮವು ವಿದೇಶಿಯರಿಗೆ ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಜೀವನ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಶಂಸಿಸಲು ಅನುವು ಮಾಡಿಕೊಡುತ್ತದೆ.

      *   ಇದು ಕರಕುಶಲ ವಸ್ತುಗಳು ಮತ್ತು ಸ್ಥಳೀಯ ಕಲೆಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಸಾಂಪ್ರದಾಯಿಕ ಕೌಶಲ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುತ್ತದೆ.

      *   ಪ್ರವಾಸೋದ್ಯಮವು ಶೈಕ್ಷಣಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಜೀವನಶೈಲಿ, ಪದ್ಧತಿಗಳು, ಸಂಪ್ರದಾಯಗಳು, ಭಾಷೆ ಮತ್ತು ಉಡುಗೆ ತೊಡುಗೆಗಳ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ.

      *   ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ, ಪ್ರವಾಸಿಗರು ಆಧ್ಯಾತ್ಮಿಕ ಮೌಲ್ಯಗಳು ಮತ್ತು ಅಭ್ಯಾಸಗಳನ್ನು ಅನುಭವಿಸಬಹುದು ಮತ್ತು ಕೆಲವೊಮ್ಮೆ ಅಳವಡಿಸಿಕೊಳ್ಳಬಹುದು.

      *   ಪ್ರವಾಸೋದ್ಯಮವು ಜಾತಿ, ಧರ್ಮ ಮತ್ತು ಬಡತನಕ್ಕೆ ಸಂಬಂಧಿಸಿದ ಸಾಮಾಜಿಕ ಅಡೆತಡೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಹಂಚಿಕೊಂಡ ಅನುಭವಗಳನ್ನು ಪ್ರೋತ್ಸಾಹಿಸುತ್ತದೆ.

      ಆದಾಗ್ಯೂ, ಪ್ರವಾಸೋದ್ಯಮವು ಕೆಲವು ನಕಾರಾತ್ಮಕ ಸಾಮಾಜಿಕ ಪರಿಣಾಮಗಳನ್ನು ಬೀರಬಹುದು:

      *   ಕೆಲವು ಸಂದರ್ಭಗಳಲ್ಲಿ, ಪ್ರಾಚೀನ ಕಟ್ಟಡಗಳು ಮತ್ತು ಪರಂಪರೆಯ ರಚನೆಗಳನ್ನು ಆಧುನಿಕ ಮೂಲಸೌಕರ್ಯ ಮತ್ತು ಪ್ರವಾಸಿ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ಕೆಡವಬಹುದು ಅಥವಾ ಬದಲಾಯಿಸಬಹುದು.

      * ಅತಿಯಾದ ಪ್ರವಾಸೋದ್ಯಮವು ಸಾಂಸ್ಕೃತಿಕ ದುರ್ಬಲತೆಗೆ ಕಾರಣವಾಗಬಹುದು, ಅಲ್ಲಿ ಸ್ಥಳೀಯ ಸಂಪ್ರದಾಯಗಳನ್ನು ಪ್ರವಾಸಿಗರ ನಿರೀಕ್ಷೆಗಳಿಗೆ ತಕ್ಕಂತೆ ಮಾರ್ಪಡಿಸಲಾಗುತ್ತದೆ.

      * ಜನಪ್ರಿಯ ತಾಣಗಳಲ್ಲಿ ಜನದಟ್ಟಣೆ ಸ್ಥಳೀಯ ಜೀವನಶೈಲಿಯನ್ನು ಅಡ್ಡಿಪಡಿಸಬಹುದು ಮತ್ತು ನಿವಾಸಿಗಳ ಜೀವನದ ಗುಣಮಟ್ಟವನ್ನು ಕಡಿಮೆ ಮಾಡಬಹುದು.

      2.  ಪ್ರವಾಸೋದ್ಯಮದ ಆರ್ಥಿಕ ಪರಿಣಾಮ

      ಪ್ರವಾಸೋದ್ಯಮವು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಪ್ರಬಲ ಚಾಲಕವಾಗಿದೆ.

      *   ಇದು ಪ್ರಯಾಣ, ವಸತಿ, ಆಹಾರ ಮತ್ತು ಮನರಂಜನೆಗಾಗಿ ಖರ್ಚು ಮಾಡುವ ಮೂಲಕ ದೇಶಕ್ಕೆ ಆದಾಯವನ್ನು ಗಳಿಸುತ್ತದೆ.

      *   ಪ್ರವಾಸೋದ್ಯಮವು ವಿದೇಶಿ ವಿನಿಮಯ ಗಳಿಕೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ, ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುತ್ತದೆ.

      *   ಇದು ನೇರ (ಹೋಟೆಲ್‌ಗಳು, ಮಾರ್ಗದರ್ಶಿಗಳು, ಸಾರಿಗೆ) ಮತ್ತು ಪರೋಕ್ಷ (ಕರಕುಶಲ ವಸ್ತುಗಳು, ಕೃಷಿ, ಸೇವೆಗಳು) ಎರಡರಲ್ಲೂ ವ್ಯಾಪಕ ಶ್ರೇಣಿಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

      *   ಪ್ರವಾಸೋದ್ಯಮವು ಸಾರಿಗೆ, ಆತಿಥ್ಯ ಮತ್ತು ಸ್ಥಳೀಯ ಕರಕುಶಲ ವಸ್ತುಗಳಂತಹ ಸಂಬಂಧಿತ ಸೇವೆ ಮತ್ತು ಕೈಗಾರಿಕೆಗಳ ಬೆಳವಣಿಗೆಯನ್ನು ಬೆಂಬಲಿಸುತ್ತದೆ.

      *   ಇದು ಗ್ರಾಮೀಣ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

      *   ಪ್ರವಾಸೋದ್ಯಮವು ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ, ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಬಲೀಕರಣವನ್ನು ಉತ್ತೇಜಿಸುತ್ತದೆ.

      *   ಇದು ರಸ್ತೆಗಳು, ವಿಮಾನ ನಿಲ್ದಾಣಗಳು, ಹೋಟೆಲ್‌ಗಳು ಮತ್ತು ಮನರಂಜನಾ ಸೌಲಭ್ಯಗಳು ಸೇರಿದಂತೆ ಮೂಲಸೌಕರ್ಯದಲ್ಲಿ ದೇಶೀಯ ಮತ್ತು ವಿದೇಶಿ ಹೂಡಿಕೆಯನ್ನು ಪ್ರೋತ್ಸಾಹಿಸುತ್ತದೆ.

      ಹೆಚ್ಚುವರಿ ಆರ್ಥಿಕ ಪ್ರಯೋಜನಗಳು ಸೇರಿವೆ:

      *   ಸ್ಥಳೀಯ ವ್ಯವಹಾರಗಳು ಮತ್ತು ಸಣ್ಣ-ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿ.

      * ನೈರ್ಮಲ್ಯ, ಸಂವಹನ ಮತ್ತು ಸಂಪರ್ಕದಂತಹ ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ಸುಧಾರಣೆ.

      *   ತೆರಿಗೆಗಳು ಮತ್ತು ಪ್ರವಾಸೋದ್ಯಮ ಸಂಬಂಧಿತ ಶುಲ್ಕಗಳ ಮೂಲಕ ಸರ್ಕಾರಿ ಆದಾಯವನ್ನು ಉತ್ಪಾದಿಸುವುದು.

      ಅದೇ ಸಮಯದಲ್ಲಿ, ಕೆಲವು ಆರ್ಥಿಕ ಸವಾಲುಗಳಿವೆ:

      *    ಪ್ರವಾಸೋದ್ಯಮದ ಮೇಲಿನ ಅತಿಯಾದ ಅವಲಂಬನೆಯು ಆರ್ಥಿಕತೆಯನ್ನು ಕಾಲೋಚಿತ ಏರಿಳಿತಗಳು ಮತ್ತು ಜಾಗತಿಕ ಬಿಕ್ಕಟ್ಟುಗಳಿಗೆ ಗುರಿಯಾಗಿಸಬಹುದು.

      *   ಪ್ರವಾಸಿ ಪ್ರದೇಶಗಳಲ್ಲಿನ ಹಣದುಬ್ಬರವು ಸ್ಥಳೀಯ ನಿವಾಸಿಗಳ ಜೀವನ ವೆಚ್ಚವನ್ನು ಹೆಚ್ಚಿಸಬಹುದು.

      *   ಪ್ರವಾಸೋದ್ಯಮ ಆದಾಯದ ಅಸಮಾನ ಹಂಚಿಕೆಯು ಆರ್ಥಿಕ ಅಸಮಾನತೆಗಳಿಗೆ ಕಾರಣವಾಗಬಹುದು.

      ಉಪಸಂಹಾರ

      ಪ್ರವಾಸೋದ್ಯಮವು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಪ್ರಬಲ ಸಾಧನವಾಗಿದೆ. ಇದು ಸಾಂಸ್ಕೃತಿಕ ವಿನಿಮಯವನ್ನು ಹೆಚ್ಚಿಸುತ್ತದೆ, ಏಕತೆಯನ್ನು ಉತ್ತೇಜಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಪ್ರವಾಸೋದ್ಯಮವು ಸುಸ್ಥಿರವಾಗಿ ಉಳಿಯಲು, ಸಂಸ್ಕೃತಿ, ಪರಿಸರ ಮತ್ತು ಸ್ಥಳೀಯ ಸಮುದಾಯಗಳ ಸಂರಕ್ಷಣೆಯೊಂದಿಗೆ ಅಭಿವೃದ್ಧಿಯನ್ನು ಸಮತೋಲನಗೊಳಿಸಲು ಅದನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಪ್ರವಾಸೋದ್ಯಮವು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಪ್ರಯೋಜನವನ್ನು ನೀಡುವುದನ್ನು ಜವಾಬ್ದಾರಿಯುತ ವಿಧಾನವು ಖಾತರಿಪಡಿಸಬೇಕು..

      ಪ್ರವಾಸೋದ್ಯಮದ ಅನುಕೂಲ ಮತ್ತು ಅನಾನುಕೂಲಗಳು

      ಪ್ರವಾಸೋದ್ಯಮದ ಅನುಕೂಲ ಮತ್ತು ಅನಾನುಕೂಲಗಳು

      ಪ್ರವಾಸೋದ್ಯಮದಿಂದ ಎಷ್ಟು ಒಳಿತಾಗುವುದೋ ಅಷ್ಟೇ ಕೆಡಕುಗಳೂ ಆಗುತ್ತವೆ. ಹೀಗಾಗಿ ಅದು ರಾಜಕೀಯ, ಆರ್ಥಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗಗಳ ಮೇಲೂ ತನ್ನ ಪ್ರಭಾವವನ್ನು ಬೀರಿದೆ ಅವುಗಳು ಹೀಗಿವೆ.

       ಪ್ರವಾಸೋದ್ಯಮದ ಅನುಕೂಲತೆಗಳು (Positive Impacts of Tourism)

      ಪ್ರವಾಸೋದ್ಯಮವು ಲಕ್ಷಾಂತರ ಪ್ರವಾಸಿಗರನ್ನು ದಿನನಿತ್ಯ ಆಕರ್ಷಿಸುವುದರಿಂದ ಅದು ಆರ್ಥಿಕವಾಗಿ ತುಂಬಾ ಪ್ರಭಾವಶಾಲಿಯಾಗಿದೆ. ಇದರಿಂದ ಪ್ರವಾಸ ಉದ್ಯಮವು ದೊಡ್ಡ ಉದ್ದಿಮೆಯಾಗಿ ಬೆಳೆದು ನಿಂತಿದೆ.

       1. ಆರ್ಥಿಕ ಏರುಪೇರು ನಿವಾರಣೆ : (Solve the Econamic up and down)

      ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ರಾಷ್ಟ್ರಗಳ ನಡುವಿನ ಆರ್ಥಿಕ ಏರುಪೇರು ನಿವಾರಣೆಗೆ ಪ್ರವಾಸೋದ್ಯಮ ನೆರವಾಗುತ್ತದೆ. ಅಭಿವೃದ್ಧಿಶೀಲ ದೇಶಗಳು ಬಂಡವಾಳ ರಹಿತವಾಗಿ ಹಣವನ್ನು ಗಳಿಸುತ್ತವೆ. ಹಾಗಾಗಿ ಅಲ್ಲಿ ಹೋಟೆಲ್, ಸಾರಿಗೆ ಉದ್ಯಮಗಳು ಬೆಳೆಯುತ್ತವೆ. ಉದ್ಯೋಗಾವಕಾಶ ಹೆಚ್ಚುತ್ತದೆ 1967ನೇ ವರ್ಷವನ್ನು ವಿಶ್ವಸಂಸ್ಥೆ ಅಂತರಾಷ್ಟ್ರೀಯ ಪ್ರವಾಸಿ ವರ್ಷ ಎಂದು ಘೋಷಿಸಿತು.

      2. ರಾಷ್ಟ್ರೀಯ ಆದಾಯದ ಮೂಲ (Source of National Income)

      ಪ್ರವಾಸೋದ್ಯಮವು ರಾಷ್ಟ್ರೀಯ ಆದಾಯದ ಮೂಲವಾಗಿದೆ. ಹೇಗಂದರೆ ಪ್ರವಾಸಿಗನು ಖರ್ಚು ಮಾಡುವ ಹಣವೇ ದೇಶದ ಆದಾಯವಾಗಿದೆ. ಈ ಪ್ರವಾಸೋದ್ಯಮವನ್ನು ಅವಲಂಬಿಸಿ ಬದುಕುವ ಸಾರಿಗೆ, ವಸತಿ, ಕರಕುಶಲ ಉದ್ದಿಮೆಗಳಿಂದಲೂ ದೇಶಕ್ಕೆ ವರಮಾನ ಬರುತ್ತದೆ. ಪ್ರವಾಸೋದ್ಯಮದಿಂದ ದೇಶಕ್ಕೆ 1980-85 ರಲ್ಲಿ, 1874-6 ಮಿಲಿಯನ್‌, 1990 ರಲ್ಲಿ  24,560 ಮಿಲಿಯನ್‌, 1993 ರಲ್ಲಿ 372.6 ಬಿಲಿಯನ್‌, 1999 ರಲ್ಲಿ 13041 ಕೋಟಿ, 2000 ರಲ್ಲಿ 14408 ಕೋಟಿ, 2008 ರಲ್ಲಿ 1170 ಕೋಟಿ ಹಾಗೂ 2025 ರಲ್ಲಿ 43.7 ಬಿಲಿಯನ್‌ ಆದಾಯ ಬಂದಿದೆ.

      3. ಉದ್ಯೋಗಾವಕಾಶಗಳು (Job Opportunities)

      ಪ್ರವಾಸೋದ್ಯಮವು ಒಂದು ಹೊಗೆ ರಹಿತ ಉದ್ದಿಮೆ. ಇಲ್ಲಿ ಅಸಂಖ್ಯಾತ ಉದ್ಯೋಗಾವಕಾಶಗಳಿವೆ ಸಾರಿಗೆ ಹೋಟೆಲ್ ಪ್ರವಾಸಿ ನಿರ್ವಾಹಕ ಏಜೆನ್ಸಿ, ಪ್ರವಾಸಿ ಏಜೆನ್ಸಿ, ಶಾಪಿಂ,ಗ್ ಕರ ಕುಶಲ ಕೈಗಾರಿಕೆ, ಮಾರುಕಟ್ಟೆಗಳಲ್ಲಿ ನಿರತರಾದ ಅಸಂಖ್ಯಾತ ಜನರಿಗೆ ಪ್ರವಾಸೋದ್ಯಮ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವಾರು ಉದ್ಯೋಗಗಳನ್ನು ನೀಡಿದೆ 1975ರಲ್ಲಿ 9,33,000 ಜನ ಉದ್ಯೋಗ ಪಡೆದಿದ್ದಾರೆ 1977ಕ್ಕೆ ಅದು 1.08 ಮಿಲಿಯನ್ ಗೆ ಏರಿತು. 1980ರಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯೋಗಿಗಳ ಸಂಖ್ಯೆ 1.3 ಮಿಲಿಯನ್ ಇದ್ದಿತು. 1965 ರಿಂದ 66ರಲ್ಲಿ 3,89,341  1968-69 ರಲ್ಲಿ 518871,  1972 ರಿಂದ 73 9,33,766, 2002 ರಲ್ಲಿಯೇ ಶೇಕಡಾ 9.24 ರಷ್ಟು ಹಾಗೂ 2025ರ ವೇಳೆಗೆ ಅದು 48 ಮಿಲಿಯನ್ ಗಳಷ್ಟು ಆಗಿದೆ.

      4. ವಿದೇಶಿ ವಿನಿಮಯ ಗಳಿಕೆ : (Earning of Foreign Exchange)

      ಭಾರತವು ಪ್ರವಾಸೋದ್ಯಮದಿಂದ 1981 ರಲ್ಲಿ ಜಗತ್ತಿನಲ್ಲಿ ಮೂರನೇ ಸ್ಥಾನ ಗಳಿಸಿತ್ತು. 2008 ರಲ್ಲಿ 11.7 ಶತಕೋಟಿ ಡಾಲರ್ 2002ರಲ್ಲಿ 3.1 ಶತ ಕೋಟಿ ಡಾಲರ್, 2003 ರಲ್ಲಿ 13,000 ಶತಕೋಟಿ ಹಾಗೂ 2022 ರಲ್ಲಿ 2.3 ಲಕ್ಷ ಕೋಟಿ ವಿದೇಶಿ ವಿನಿಮಯ ಗಳಿಸಿದೆ.

      5. ಸಂದಾಯ ಬಾಕಿ ಪಾವತಿ (Balance of Payment)

      ಪ್ರವಾಸಿಗರಿಂದ ಬರುವ ವಿದೇಶಿ ವಿನಿಮಯವನ್ನು ಸಂದಾಯ ಬಾಕಿ ಪಾವತಿಸಲು ಒಂದು ದೇಶಕ್ಕೆ ಪ್ರವಾಸೋದ್ಯಮ ನೆರವಾಗುತ್ತದೆ.

      6. ಸಾಂಸ್ಕೃತಿಕ ಪ್ರಭಾವ (Cultural Impact)

      ವಿವಿಧ ಸಂಸ್ಕೃತಿಯ ಹಿನ್ನೆಲೆಯುಳ್ಳ ಪ್ರವಾಸಿಗರು ಒಂದು ಕಡೆ ಸೇರುವುದರಿಂದ ಅವರ ಆಹಾರ ವಿಹಾರ, ಜೀವನ ಶೈಲಿ, ವಿಚಾರಗಳು, ಶಿಕ್ಷಣ ವಿಧಾನ, ಸಾಂಸ್ಕೃತಿಕ ಪದ್ಧತಿ, ಕಲೆ ಹಾಗೂ ವಾಸ್ತುಶಿಲ್ಪ, ಸಂಗೀತ ವೇಷಭೂಷಣ ಮುಂತಾದವುಗಳಿಂದ ಪರಸ್ಪರರು ಆಕರ್ಷಿತರಾಗುತ್ತಾರೆ ಅವರ ನಡುವೆ ಸಾಂಸ್ಕೃತಿಕ ಅರಿವು ಮೂಡುತ್ತದೆ. ಪರಸ್ಪರ ಸಾಮಾಜಿಕ ಜೀವನವನ್ನು ಅರಿತುಕೊಳ್ಳಲು ಸಹಾಯಕವಾಗುತ್ತದೆ.

      7. ನೈಸರ್ಗಿಕ ಸಂಪನ್ಮೂಲ ರಕ್ಷಣೆ (Conservation of Natural Resources)

      ಪ್ರವಾಸೋದ್ಯಮ ನಿಂತಿರುವುದೇ ನೈಸರ್ಗಿಕ ಪರಿಸರದ ಮೇಲೆ. ಪ್ರಾಕೃತಿಕ ಪರಿಸರ ಇದ್ದರೆ ಮಾತ್ರ ಪ್ರವಾಸೋದ್ಯಮ ನಡೆಯುತ್ತದೆ. ಹಾಗಾಗಿ ನಾವುಗಳು ವನ್ಯಪ್ರಾಣಿ ಧಾಮ,  ಪಕ್ಷಿಧಾಮ,  ಗಿರಿಗಳು, ಕಡಲ ದಂಡೆಗಳು,  ನದಿ,  ಸರೋವರಗಳು, ಜಲಪಾತಗಳು, ಕಣಿವೆಗಳು, ಪರ್ವತಗಳನ್ನು ರಕ್ಷಿಸಿ ಸುಸ್ಥಿರವಾಗಿ ಅಭಿವೃದ್ಧಿಪಡಿಸಬೇಕು. ಇಲ್ಲದೆ ಹೋದರೆ ಪ್ರವಾಸೋದ್ಯಮ ಅವನತಿಗೊಳ್ಳುತ್ತದೆ.

      8. ಸಾಂಸ್ಕೃತಿಕ ಪರಂಪರೆಯ ರಕ್ಷಣೆ (Preservation of Cultural Heritage)

      ಭಾರತದ ಸಾಂಸ್ಕೃತಿಕ ಪರಂಪರೆಗಳಾದ ದೇವಾಲಯಗಳು, ಅರಮನೆಗಳು, ಕೋಟೆ ಕೊತ್ತಲಗಳು, ಗೋಪುರಗಳು, ಚೈತ್ಯಗಳು, ಸ್ತೂಪಗಳು, ಮಸೀದಿಗಳು, ಚರ್ಚುಗಳು, ವಸ್ತು ಸಂಗ್ರಹಾಲಯಗಳು, ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರಗಳಾಗಿವೆ. ಅವುಗಳನ್ನು ಸಂರಕ್ಷಿಸಿ ಮುಂದಿನವರಿಗೆ ನೀಡಬೇಕಾದದ್ದು ಮುಖ್ಯವಾಗಿದೆ ಎಂಬುದನ್ನು ಪ್ರವಾಸೋದ್ಯಮವು ಜನರಿಗೆ ಮನವರಿಕೆ ಮಾಡಿಕೊಡಬೇಕು.

      9. ಪ್ರವಾಸೋದ್ಯಮದಿಂದ ಹೋಟೆಲ್‌ಗಳು, ಸಾರಿಗೆ, ವಸತಿ ಹಾಗೂ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತವೆ. ಅವುಗಳಿಂದ ದೇಶಕ್ಕೆ ಆದಾಯ ಬರುತ್ತದೆ.

      10. ಪ್ರವಾಸೋದ್ಯಮ ವಿವಿಧ ಸಂಸ್ಕೃತಿ, ಆಚಾರ ವಿಚಾರ, ಸಂಶೋಧನೆ ಹಾಗೂ ಶಿಕ್ಷಣದ ಕುರಿತು ಅರಿವನ್ನುಂಟು ಮಾಡುತ್ತದೆ.

      11. ಪ್ರವಾಸೋದ್ಯಮವು ದೇಶೀಯ ಹಾಗೂ ವಿದೇಶಿ ಆಮದು ರಫ್ತುಗಳನ್ನು ಮಾಡಲು ಪ್ರೋತ್ಸಾಹ ನೀಡುತ್ತದೆ.

      12. ಜನರು ಹಾಗೂ ಸಮಾಜಗಳ ನಡುವೆ ಪರಸ್ಪರ ಸಹಕಾರವನ್ನು ಉಂಟುಮಾಡುವ ಜವಾಬ್ದಾರಿಯನ್ನು ಪ್ರವಾಸೋದ್ಯಮ ನಿರ್ವಹಿಸುತ್ತದೆ.

      13.  ಬಡತನ ನಿವಾರಣೆಯಾಗಿ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ.

      14. ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು.

      15.ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಹೊಣೆಗಾರಿಕೆ ಪ್ರವಾಸೋದ್ಯಮದಾಗಿದೆ.

      ಪ್ರವಾಸೋದ್ಯಮದ ಅನಾನುಕೂಲಗಳು (Negative Impacts)

      1. ಪ್ರವಾಸೋದ್ಯಮವು ಜಲ ಮಾಲಿನ್ಯ, ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಪ್ರವಾಸಿಗರು ಬರುವ ನೂರಾರು ವಾಹನಗಳಿಂದ ಬಿಡುಗಡೆಯಾಗುವ ಹೊಗೆಯಿಂದ ಇಡೀ ವಾತಾವರಣವೇ ಕಲುಷಿತಗೊಳ್ಳುತ್ತದೆ. ಜೊತೆಗೆ ಪ್ರವಾಸಿಗರು ಎಸೆಯುವ ಕಸ ಕಡ್ಡಿ, ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಕಪ್ಪುಗಳು, ಐಸ್ ಕ್ರೀಮ್ ಕವರುಗಳು, ಚಾಕೋಲೇಟ್ ಕವರುಗಳು ವಾತಾವರಣವನ್ನು ಹದಗೆಡಿಸುತ್ತವೆ. ಪ್ರವಾಸಿ ಕೇಂದ್ರಗಳ ಹೋಟೆಲುಗಳು ಬಿಡುವ ಕಲ್ಮಶನೀರು, ನೀರಿನಲ್ಲಿ ಸಂಚರಿಸುವ ದೋಣಿಯಿಂದ ಬಿಡುವ ಕಾರ್ಬನ್‌ಗಳಿಂದ ಜಲ ಮಾಲಿನ್ಯ ಉಂಟಾಗುತ್ತದೆ. ಅನುಪಯುಕ್ತ ವಸ್ತುಗಳು ಕೊಳೆತು ಹೋಗುವುದರಿಂದ ಸುತ್ತಲೂ ದುರ್ನಾತ ಹರಡುತ್ತದೆ.

       2. ಪ್ರವಾಸೋದ್ಯಮವು ಹೋಟೆಲ್ ನಿರ್ಮಿಸಲು ಭೂಮಿಯನ್ನು ಬಳಸುವುದರಿಂದ ಸಾಗುವಳಿಗೆ ಯೋಗ್ಯವಾದ ಭೂಮಿಯ ಪ್ರಮಾಣ ಕಡಿಮೆಯಾಗುತ್ತದೆ. ಇದಕ್ಕಾಗಿ ಸಾಕಷ್ಟು ಅರಣ್ಯ ಭೂಮಿಯನ್ನು ಬಳಸಿಕೊಳ್ಳುವುದರಿಂದ ಕಾಡು ನಾಶವಾಗುತ್ತದೆ. ಮುಂದೆ ಆಹಾರ ಉತ್ಪಾದನೆ ಕಷ್ಟವಾಗಿ ತಿನ್ನಲು ಆಹಾರದ ಕೊರತೆ ಕಂಡು ಬರಬಹುದು.

       3. ಪ್ರವಾಸಿ ಕೇಂದ್ರಗಳಲ್ಲಿ ಎಲ್ಲೆಂದರಲ್ಲಿ ಕಟ್ಟಡಗಳು ತಲೆ ಎತ್ತುವುದರಿಂದ ನೈಸರ್ಗಿಕ ಸೌಂದರ್ಯ ಹಾಳಾಗುತ್ತದೆ.

       4. ಪ್ರವಾಸೋದ್ಯಮಕ್ಕಾಗಿ ಕಟ್ಟಡಗಳನ್ನು ನಿರ್ಮಿಸುವುದರಿಂದ ಕಾಡು ನಾಶ ಹೊಂದಿ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳ ಸಂತತಿ ಹಾಳಾಗುತ್ತದೆ.

       5. ಪ್ರವಾಸಿಗರ ಬೇಡಿಕೆಗಳನ್ನು ಈಡೇರಿಸುವ ಬರದಲ್ಲಿ ಪ್ರವಾಸೋದ್ಯಮ ಇಲಾಖೆ ಪರಿಸರವನ್ನು ಹಾಳುಮಾಡುತ್ತಿದೆ. ಉದಾ: ಕಾಶ್ಮೀರಿನ ದಾಲ್ ಸರೋವರ ವಿಪರೀತ ಹಾಳಾಗಿದೆ.

       6. ಪ್ರವಾಸಕ್ಕೆಂದು ಬಂದವರು ಐತಿಹಾಸಿಕ ಸ್ಮಾರಕಗಳ ಮೇಲೆ ಗಿರುವುದು, ಕಲ್ಲಿನಿಂದ ಹೊಡೆಯುವುದು ಮತ್ತು ಅವುಗಳ ಮೇಲೆ ತಮ್ಮ ಹೆಸರುಗಳನ್ನು ಬರೆಯುವುದನ್ನು ಮಾಡುವುದರಿಂದ ಅವುಗಳು ವಿರೂಪಗೊಳ್ಳುತ್ತವೆ.

       7. ವಿದೇಶಿ ಪ್ರವಾಸಿಗರು ಭಾರತಕ್ಕೆ ಬರುವುದರಿಂದ ಅವರಿಂದ ಕಾಲರಾ, ಮಲೇರಿಯಾ ಹರಡಿ ಸ್ಥಳೀಯ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. 2021 ರಲ್ಲಿ ವಿದೇಶಿ ಪ್ರವಾಸಿಗರಿಂದ ಕರೋನ ಕಾಯಿಲೆ ಬಂದು ಲಕ್ಷಾಂತರ ಜನರ ಸಾವಿಗೆ ಕಾರಣವಾಯಿತು.

       8. ಪ್ರವಾಸೋದ್ಯಮವು ವೇಶ್ಯಾವೃತ್ತಿ, ಅತ್ಯಾಚಾರ, ಕಳ್ಳತನ, ಸುಲಿಗೆ, ಕೊಲೆ, ಜೂಜು, ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಹಾಗೂ ಭಯೋತ್ಪಾದನೆಯಂತಹ ಅನಿಷ್ಟಗಳಿಗೆ ಕಾರಣವಾಗುತ್ತದೆ.

       9. ಭೂಮಿಯ ಬೆಲೆ ಏರಿಕೆ, ಸೇವೆಗಳ ಬೆಲೆ ಏರುವಿಕೆ, ಹೋಟೆಲ್ ವಸತಿಗಳ ಬೆಲೆಗಳು ಸಹ ಏರಿಕೆಯಾಗಿ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತದೆ.

       10. ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬರುವುದರಿಂದ ಸಾವು ನೋವುಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ