ಸಂವಿಧಾನದಲ್ಲಿ ಪ್ರಜೆಗಳಿಗೆ ಆರು ಮೂಲಭೂತ ಹಕ್ಕುಗಳನ್ನು ನೀಡಿದೆ. ಅವುಗಳಿಗೆ ಶಾಸಕಾಂಗ, ಕಾರ್ಯಾಂಗ ಹಾಗೂ ಪ್ರಜೆಗಳಿಂದ ಚ್ಯುತಿ ಬರದಂತೆ ಕಾಪಾಡುವುದು ಉಚ್ಛ ನ್ಯಾಯಾಲಯದ ಕರ್ತವ್ಯವಾಗಿದೆ. ಸರ್ವೋಚ್ಛ ನ್ಯಾಯಾಲಯದ ಹಾಗೆಯೇ ಉಚ್ಛ ನ್ಯಾಯಾಲಯವು ಸಂವಿಧಾನಿಕ ರಿಟ್‌ಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಹೊಂದಿದೆ ಅವುಗಳೆಂದರೆ.

1. ಹೇಬಿಯಸ್ಕಾರ್ಪಸ್ (ಬಂಧಿ ಪ್ರತ್ಯಕ್ಷಿಕರಣ) : ಹೇಬಿಯಸ್ ಕಾರ್ಪಸ್ ಎಂದರೆ ʻʻದೇಹ ಸಮೇತ ಹಾಜರುಪಡಿಸುವುದು ಎಂದರ್ಥ. ಬಂಧನಕ್ಕೆ ಒಳಗಾದ ವ್ಯಕ್ತಿಯು ವ್ಯಕ್ತಿಯ ಸಂಬಂಧಿಕರು ಅಥವಾ ಸ್ನೇಹಿತರು ಆತಂಕದಿಂದ ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬಹುದು.  ಬಂಧಿತ ವ್ಯಕ್ತಿಯನ್ನು 24 ಗಂಟೆಗಳೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕೆಂದು ನ್ಯಾಯಾಲಯಗಳು ಆಜ್ಞೆ ಮಾಡುತ್ತವೆ. ಬಂಧನಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಲು ಸರ್ಕಾರಿ ಅಧಿಕಾರಿಗಳು ಅಥವಾ ಖಾಸಗಿ ಅಧಿಕಾರಿಗಳ ವಿರುದ್ಧ ಹೊರಡಿಸುವ ರಿಟ್‌ ಇದಾಗಿದೆ.

2. ಮ್ಯಾಂಡಮಸ್(ಪರಮಾದೇಶ): ಮ್ಯಾಂಡಮಸ್ ಎಂದರೆ ʻʻಆದೇಶ ಎಂದರ್ಥʼʼ ಈ ರಿಟ್‌ ಮೂಲಕ ವ್ಯಕ್ತಿಯೊಬ್ಬನು ತನ್ನ ಕರ್ತವ್ಯದ ಕುರಿತು ಉದಾಸೀನತೆ ತೋರಿದರೆ ಇದರಿಂದ ತೊಂದರೆಗೊಳಗಾದ ವ್ಯಕ್ತಿಗಳು. ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯಗಳಲ್ಲಿ ತಮ್ಮ ಹಕ್ಕುಗಳ ರಕ್ಷಣೆಗಾಗಿ ಮನವಿಯನ್ನು ಸಲ್ಲಿಸುತ್ತಾರೆ. ಆಗ ಸಾರ್ವಜನಿಕ ಉದ್ಯೋಗಿಗೆ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯವು ಆಜ್ಞೆ ಮಾಡುತ್ತದೆ. ಈ ರೀತಿಯ ರಿಟ್‌ನ್ನು ಸರ್ಕಾರಿ ಉದ್ಯೋಗಿಯ ವಿರುದ್ಧ ಹೊರಡಿಸಬಹುದೇ ಹೊರತು ಖಾಸಗಿ ವ್ಯಕ್ತಿಗಳ ವಿರುದ್ಧ ಅಲ್ಲ.

3. ಪ್ರೋಹಿಬಿಷನ್‌ (ಪ್ರತಿಬಂಧಕ) ಪ್ರೋಹಿಬಿಷನ್ ಎಂದರೆ ʻʻತಡೆʼʼ ಎಂದರ್ಥ. ಅದೀನ ನ್ಯಾಯಾಲಯಗಳಿಗೆ ತಮ್ಮ ತೀರ್ಪಿನ ದಾಖಲೆಗಳನ್ನು ಪರಿಶೀಲಿಸಲು ತನಗೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯ ಅಥವಾ ಉಚ್ಛ ನ್ಯಾಯಾಲಯವು ಹೊರಡಿಸುವ ಆಜ್ಞೆಯನ್ನು ಪ್ರೋಹಿಬಿಷನ್ ಎಂದು ಕರೆಯುತ್ತೇವೆ. ಕೆಳ ನ್ಯಾಯಾಲಯಗಳು ತನಗೆ ಇಲ್ಲದ ಅಧಿಕಾರವನ್ನು ಚಲಾಯಿಸಿದರೆ. ಅದನ್ನು ಚಲಾಯಿಸದಂತೆ ತಡೆಯುವ ಅಧಿಕಾರವನ್ನು ಉಚ್ಛ ನ್ಯಾಯಾಲಯ ಹೊಂದಿದೆ.

4. ಸರ್ಕಿಯೋರರಿ(ಉತ್ಪ್ರೇಕ್ಷಣಾ) : ಇದರ ಪ್ರಕಾರ ಕೆಳಗಿನ ನ್ಯಾಯಾಲಯಗಳ ತೀರ್ಪುಗಳಿಂದ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದರೆ ಅಂತಹ ಮೊಕದ್ದಮೆಗಳನ್ನು ಕೆಳಗಿನ ನ್ಯಾಯಾಲಯಗಳು ಮೇಲಿನ ನ್ಯಾಯಾಲಗಳಿಗೆ ವರ್ಗಾಯಿಸಬೇಕೆಂದು ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯವು ಆದೇಶ ಹೊರಡಿಸುತ್ತದೆ.  ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿ ತೀರ್ಪು ನೀಡಿದ ಅಧೀನ ನ್ಯಾಯಾಲಯಗಳ ಕ್ರಮವನ್ನು ಪ್ರೋಹಿಬಿಷನ್ ತಡೆದರೆ ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿ ನಡೆಯುತ್ತಿರುವ  ವಿಚಾರಣೆಯನ್ನು  ಸರ್ಶಿರೋರರಿ ತಡೆಯುತ್ತದೆ.

5. ಕೋವಾರಂಟೊ(ಅಧಿಕಾರ ವೆಚ್ಚ) : ʻʻಸಾರ್ವಜನಿಕ ಹುದ್ದೆಯನ್ನು ಅಕ್ರಮವಾಗಿ ಪಡೆದುಕೊಂಡವರ ವಿರುದ್ಧ ಮತ್ತು ಆ ಹುದ್ದೆಯನ್ನು ತೆರೆವುಗೊಳಿಸುವಂತೆ ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯವು ಹೊರಡಿಸುವ ಆಜ್ಞೆ ಇದಾಗಿದೆ. ಜೇಷ್ಠತೆಯನ್ನು ಉಲ್ಲಂಘಿಸಿ ಅಕ್ರಮವಾಗಿ ಒಂದು ಹುದ್ದೆಯನ್ನು ಒಬ್ಬಾತ ಪಡೆದಿದ್ದರೆ ಜೇಷ್ಠತೆಯಿಂದ ವಂಚಿತನಾದ ವ್ಯಕ್ತಿಯು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರೆ ಆಗ ನ್ಯಾಯಾಲಯವು  ಕೋವಾರಂಟೋ ಹೊರಡಿಸುತ್ತದೆ. ಇದರಿಂದ ವ್ಯಕ್ತಿಗೆ ಸಲ್ಲಬೇಕಾದ ನ್ಯಾಯ ಸಲ್ಲಿಸಿದಂತಾಗುತ್ತದೆ.

ಉಪಸಂಹಾರ

ಮೂಲಭೂತ ಹಕ್ಕುಗಳ ಸಮರ್ಥನೆ ಪ್ರಜಾಪ್ರಭುತ್ವದ ಹೃದಯವಾಗಿದೆ. ರಿಟ್‌ಗಳ ಮೂಲಕ ನ್ಯಾಯಾಲಯಗಳು ಪ್ರಜೆಗಳ ಹಕ್ಕುಗಳನ್ನು ಕಾಪಾಡಿ ನ್ಯಾಯವನ್ನು ಸ್ಥಾಪಿಸುತ್ತವೆ. ಇದು ಸಂವಿಧಾನದ ಮಹತ್ವವನ್ನು ಹಾಗೂ ನ್ಯಾಯಾಂಗದ ಸ್ವಾತಂತ್ರ್ಯವನ್ನು ತೋರಿಸುತ್ತದೆ. ಹೀಗಾಗಿ ರಿಟ್‌ಗಳು ನಾಗರಿಕರ ಹಕ್ಕುಗಳ ರಕ್ಷಣೆಗೆ ಬಲವಾದ ಸಾಧನಗಳಾಗಿವೆ.