ವಿಶ್ವದಲ್ಲಿ ಸುಮಾರು 12 ಮಹಾಜೈವಿಕ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರಗಳು ಉಂಟು. ಅದರಲ್ಲಿ ಭಾರತವು ಸಹ ಒಂದು ಎಂದು ಪರಿಗಣಿತವಾಗಿದೆ. ಏಷ್ಯಾದ ಜೈವಿಕ ವೈವಿಧ್ಯ ದೇಶಗಳಲ್ಲಿ ನಾಲ್ಕನೇ ಸಾಧನೆ ಮಾಡಿದ ದೇಶ ಭಾರತವಾಗಿದೆ. ಹಾಗೆ ವಿಶ್ವದ ಸಸ್ಯ ವೈವಿಧ್ಯತೆ ಹೊಂದಿದ ದೇಶಗಳಲ್ಲಿ 10ನೇ ಸ್ಥಾನದಲ್ಲಿದೆ. ಪ್ರಪಂಚದ ದೇಶಿಯ ಕಸೇರುಕಗಳ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದೆ.
ಭಾರತದಲ್ಲಿ ತೀವ್ರ ಅಪಾಯದ ಅಂಚಿನಲ್ಲಿರುವ ಪ್ರಬಂಧಗಳೆಂದರೆ.
1 ಸಸ್ತನಿಗಳು:
- ಚಿಕ್ಕದಾದ ಕಾಡು ಹಂದಿ: ಈ ಪ್ರಾಣಿಯ ನಾಶದಿಂದಾಗಿ ಇದನ್ನೇ ಅವಲಂಬಿಸಿ ಬದುಕು ಕಂಡುಕೊಂಡಿದ್ದ ಹಾಗ್ ಎಂಬ ಜೀವಿಯು ಅಳಿವಿನ ಅಂಚಿನಲ್ಲಿದೆ.
- ಕೊಂಡಾನ ಇಲಿ: ಭಾರತದಲ್ಲಿ ಮಾತ್ರ ಕಾಣಸಿಗುವ ಜಲವಾಸಿಯಾಗಿದ್ದು ಇದರ ಆವಾಸಸ್ಥಾನ ನಾಶವಾಗುತ್ತಿದೆ. ಹುಲ್ಲುಗಾವಲು ಮೇಯುವಿಕೆ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಂದ ಇಲಿ ವಿನಾಶದ ಅಂಚಿಗೆ ಬಂದು ತಲುಪಿದೆ.
- ಮಲಬಾರ್ ಕಿರುಬ: ಇದು ಪಶ್ಚಿಮ ಘಟ್ಟದಲ್ಲಿ ಕಂಡುಬರುತ್ತದೆ. ಕಾಡುಗಳ ನಾಶದಿಂದಾಗಿ ಈ ಪ್ರಾಣಿ ಅಪಾಯವನ್ನು ಎದುರಿಸುತ್ತಿದೆ.
- ಜಾವಾದ ಘೇಂಡಾಮೃಗ: ಘೇಂಡಾಮೃಗದ 5 ಪ್ರಭೇದಗಳ ಪೈಕಿ ಇದು ಚಿಕ್ಕ ಪ್ರಭೇದವಾಗಿದೆ. ಹಿಮಾಲಯದ ಹಾಗೂ ಈಶಾನ್ಯ ಭಾರತದಲ್ಲಿ ಇದು ಕಂಡುಬರುತ್ತದೆ. ಇಂದು ಭಾರತದಲ್ಲಿ ಈ ಪ್ರಾಣಿ ಇಲ್ಲವಾಗಿದೆ.
2. ಸರಿಸೃಪಗಳು:
- ಉದ್ದ ಮುಖದ ಮೊಸಳೆ: ಮೀನುಗಳನ್ನು ತಿಂದು ಬದುಕುವ ಇದು ಚಂಬಲ್ ರಾಷ್ಟ್ರೀಯ ಅಭಯಾರಣ್ಯ, ರಾಜಸ್ಥಾನ್ ಹಾಗೂ ಮಧ್ಯ ಪ್ರದೇಶದಲ್ಲಿ ಕಂಡುಬರುತ್ತದೆ. ಅಣೆಕಟ್ಟು ನಿರ್ಮಾಣ ಹಾಗೂ ಕೃತಕ ಹಡಗುದಾಣ ನಿರ್ಮಾಣ ಮತ್ತು ಮರಳು ಗಣಿಗಾರಿಕೆಯಿಂದ ನಾಶವಾಗಿದೆ.
- ಗಿಡುಗ ಮೂಗಿನ ಆಮೆ: ಅತೀ ದುರ್ಬಲವಾದ ಸರಿಸೃಪವಾಗಿದೆ. ಮರುಳು ತೀರ ಬುಡದಲ್ಲಿ ಇದರ ವಾಸ. 25 ರಿಂದ 45 ವರ್ಷ ಬದುಕುತ್ತದೆ. ಆಮೆ ಚಿಪ್ಪು ಮಾರಾಟ, ಮಾಂಸಕ್ಕಾಗಿ ಹಾಗೂ ತೈಲಕ್ಕಾಗಿ ಇದನ್ನು ಕೊಲೆ ಮಾಡಲಾಗುತ್ತದೆ.
- ಸಿಸ್ಟಾರ ಹಗಲಿನ ಹಲ್ಲಿ: ಕಾಡಿನಲ್ಲಿ ವಾಸಿಸುವ ದೊಡ್ಡ ಹಲ್ಲಿ ಇದಾಗಿದೆ. ಪ್ರಮುಖವಾಗಿ ಕೀಟಗಳನ್ನು ತಿಂದು ಬದುಕುತ್ತದೆ. ರಾತ್ರಿ ವೇಳೆ ಇದರ ಓಡಾಟ ಹೆಚ್ಚು. ಪಶ್ಚಿಮ ಘಟ್ಟಗಳು, ನೀಲಗಿರಿ ಬೆಟ್ಟಗಳು ಇವುಗಳ ಆವಾಸ ಸ್ಥಾನ. ಕಾಡುಗಳ ನಾಶ ಹಾಗೂ ಅವುಗಳ ವಾಸಸ್ಥಾನಗಳ ನಾಶದಿಂದಾಗಿ ಹಲ್ಲಿಗಳು ಅಳಿವಿನ ಅಂಚಿಗೆ ಬಂದು ತಲುಪಿವೆ.
- ಕಾಡು ಗೂಬೆ: ಇದು ಒಣಎಲೆ ಉದುರುವ ಕಾಡುಗಳಲ್ಲಿ ಕಂಡುಬರುತ್ತದೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ದಕ್ಷಿಣ ಭಾಗದಲ್ಲಿ ಇದರ ವಾಸ. ಮರಗಳ ಸಾಗಾಣಿಕೆ ಮತ್ತು ಮರಗಳ ಕಟಾವುಗಳಿಂದ ಗೂಬೆಗಳು ಕಣ್ಮರೆಯಾಗುತ್ತಿವೆ.
3. ಪಕ್ಷಿಗಳು:
- ಬಿಳಿ ಹೊಟ್ಟೆಯ ಕೊಕ್ಕರೆ: ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನಲ್ಲಿ ಅತಿ ವಿರಳವಾಗಿ ಕಂಡುಬರುವ ಈ ಪಕ್ಷಿಗಳು ಎತ್ತರದ ಹುಲ್ಲುಗಾವಲುಗಳನ್ನು ಆಶ್ರಯಿಸಿರುತ್ತವೆ. ಬೆಟ್ಟದ ಕಡಿದಾದ ಪ್ರದೇಶಗಳು ಇವುಗಳಿಗೆ ಇಷ್ಟ. ಅತಿಯಾದ ಬೇಟೆಯ ಕಾರಣದಿಂದಾಗಿ ಈ ಪಕ್ಷಿಗಳು ವಿನಾಶದ ಅಂಚಿನಲ್ಲಿದೆ.
- ಗುಲಾಬಿ ಬಣ್ಣ ತಲೆಯ ಬಾತುಕೋಳಿ: ನಿಂತ ನೀರಿನ ಕೊಳಗಳು ಹಾಗೂ ಎತ್ತರದ ಹುಲ್ಲುಗಾವಲನ್ನು ಆಶ್ರಯಿಸಿ ಬದುಕುತ್ತಿರುವ ಈ ಬಾತುಕೋಳಿಯ ತಲೆಯು ಕಡುಗೆಂಪು ಗುಲಾಬಿ ಬಣ್ಣವನ್ನು ಹೊಂದಿದೆ. ಇವು ಭಾರತ, ಬಾಂಗ್ಲಾದೇಶ ಹಾಗೂ ಮಯನ್ಮಾರಗಳಲ್ಲಿ ಕಂಡುಬಂದಿದೆ. ಜೌಗು ಪ್ರದೇಶಗಳ ಸವಕಳಿ, ಬೇಟೆಗಾರಿಕೆ ಹಾಗೂ ಅವುಗಳ ವಾಸಸ್ಥಾನಗಳ ನಾಶದಿಂದಾಗಿ ಬಾತುಕೋಳಿಗಳ ಸಂತತಿ ಅಳಿವಿನಂಚಿನಲ್ಲಿದೆ.
- ಗೊರವ ಹಕ್ಕಿ: ಈ ಹಕ್ಕಿಗಳ ಸಂಖ್ಯೆ ಹಠಾತ್ತಾಗಿ ಕಡಿಮೆಯಾಗಿದೆ. ಪಾಳು ಬಿದ್ದ ಭೂಮಿ ಹಾಗೂ ಪೊದೆಗಳಲ್ಲಿ ಇವುಗಳ ವಾಸ. ಸೌದಿ ಅರೇಬಿಯಾ, ಸಿರಿಯಾ, ಈಜಿಪ್ಟ್, ಇರಾಕ್, ಭಾರತ ಹಾಗೂ ರಷ್ಯಾದಲ್ಲಿ ಈ ಬಗೆಯ ಪಕ್ಷಿಗಳು ಕಂಡುಬರುತ್ತವೆ. ತಗ್ಗು ಪ್ರದೇಶಗಳ ಸವಕಳಿ ಮತ್ತು ಅವುಗಳ ಆವಾಸಸ್ಥಾನಗಳಲ್ಲಿನ ಕಾಡು ನಾಶದಿಂದಾಗಿ ಗೊರವ ಹಕ್ಕಿಗಳ ಸಂತತಿ ಕಡಿಮೆಯಾಗುತ್ತಿದೆ.
- ಹಿಮಾಲಯದ ಕೌಜುಗ: ಇದು ಹಾರಲು ಬಾರದ ಮತ್ತು ಹುಲ್ಲುಗಾವಲಿನಲ್ಲಿ ವಾಸಿಸುವ ಹಕ್ಕಿ. 1876ರಲ್ಲಿ ಕಂಡುಬಂದ ಈ ಹಕ್ಕಿ ಇಂದು ಆಗೊಮ್ಮೆ ಈಗೊಮ್ಮೆ ಕಂಡುಬರುತ್ತದೆ.
- ಸೈಬೀರಿಯನ್ ಕೊಕ್ಕರೆ: ದೊಡ್ಡ ಗಾತ್ರದ ಸುಂದರ ಪಕ್ಷಿ ಇದಾಗಿದೆ. 2002 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಚೌಗು ಪ್ರದೇಶಗಳಲ್ಲಿ ಇವುಗಳ ವಾಸ. ಕೀಟನಾಶಕಗಳಿಂದ ಈ ಕೊಕ್ಕರೆಗಳು ನಾಶಗೊಳ್ಳುತ್ತವೆ. ಬೇಟೆಗಾರಿಕೆ ಹಾಗೂ ಕೃಷಿ ಭೂಮಿಯ ಪರಿವರ್ತನೆಯು ಸಹ ಇವುಗಳ ಅಳಿವಿಗೆ ಕಾರಣವಾಗಿದೆ.
4. ಉಭಯವಾಸಿಗಳು:
- ಭಾರತದ ಗುಂಡ್ಯ ಕಪ್ಪೆ: ಸಮುದ್ರಮಟ್ಟಕ್ಕಿಂತ 200 ಮೀಟರ್ ಎತ್ತರದಲ್ಲಿ ಇವುಗಳ ವಾಸ. ದನ-ಕರುಗಳ ಅತಿಯಾದ ಮೇಯುವಿಕೆ, ಮರ ಸಾಗಾಣಿಕೆ ಹಾಗೂ ರಸ್ತೆ ನಿರ್ಮಾಣದಂತಹ ಕಾರ್ಯಗಳಿಂದ ಈ ಕಪ್ಪೆಗಳ ಸಂತತಿ ನಾಶವಾಗುತ್ತಿದೆ.
- ಹುಲಿ ಕಪ್ಪೆ: ಇದನ್ನು ಮಹಾರಾಷ್ಟ್ರದಲ್ಲಿ ಪತ್ತೆಹಚ್ಚಲಾಗಿದೆ. ಸಮುದ್ರ ಮಟ್ಟದಿಂದ 720 ಮೀಟರ್ ಎತ್ತರದಲ್ಲಿ ವಾಸಿಸುತ್ತದೆ. ಕಾಡುಗಳ ನಾಶ ಹಾಗೂ ಅವುಗಳ ವಾಸಸ್ಥಾನಗಳ ನಾಶದಿಂದ ಈ ಕಪ್ಪೆಗಳ ಸಂತತಿ ಕಡಿಮೆಯಾಗುತ್ತಿದೆ.
- ಚಾರ್ಲ್ಸ್ ಡಾರ್ವಿನ್ ಕಪ್ಪೆ: ಇದು ಸಮುದ್ರ ಮಟ್ಟದಿಂದ 200 ಮೀಟರ್ ಎತ್ತರದಲ್ಲಿ ಕಂಡು ಬರುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇವುಗಳ ವಾಸ. ಕಾಡುಗಳ ನಾಶದಿಂದ ಈ ಕಪ್ಪೆಗಳು ವಿನಾಶದ ಅಂಚಿಗೆ ಬಂದು ತಲುಪಿವೆ.
- ಬಣ್ಣದ ಹೊಳೆಯುವ ಪೊದೆ ಕಪ್ಪೆ: ಇದೊಂದು ಅಪರೂಪದ ಬಣ್ಣದ ಕಪ್ಪೆ. ಸಮುದ್ರ ಮಟ್ಟದಿಂದ 269 ಮೀಟರ್ ಎತ್ತರದಲ್ಲಿ ವಾಸಿಸುತ್ತದೆ. ಎರಾವಿಕುಲಂ ಅಭಯಾರಣ್ಯ ಇವುಗಳ ವಾಸ. ಕಾಡುಗಳ ನಾಶ ಹಾಗೂ ಇವುಗಳ ಆವಾಸಸ್ಥಾನಗಳ ನಾಶದಿಂದಾಗಿ ಈ ಕಪ್ಪೆಗಳು ಸಾವಕಾಶವಾಗಿ ಕಣ್ಮರೆಯಾಗುತ್ತಿವೆ.
5. ಮೀನುಗಳು:
- ಪಾಂಡಿಚೇರಿ ಸಾರ್ಕ್: ಇದು ಸಮುದ್ರ ಕಡಲ ತೀರದಲ್ಲಿ ಕಂಡುಬರುತ್ತದೆ. ಪಾಕಿಸ್ತಾನದವರೆಗೂ ಈ ಮೀನುಗಳು ಕಂಡುಬರುತ್ತವೆ. ಅನಿಯಂತ್ರಿತ ವಾಣಿಜ್ಯ ಮೀನುಗಾರಿಕೆಯ ಪರಿಣಾಮವಾಗಿ ಇವುಗಳ ಸಂಖ್ಯೆ ಕಡಿಮೆಯಾಗಿದೆ.
- ಗಂಗಾ ನದಿ ಸಾರ್ಕ್: ಅಪರೂಪದಿಂದ ಕೂಡಿದ ಈ ಮೀನುಗಳು ಗಂಗಾ ನದಿಯ ಕೆಸರು ನೀರು ಹಾಗೂ ಬಂಗಾಳಕೊಲ್ಲಿಯಲ್ಲಿ ಕಂಡುಬರುತ್ತವೆ.
- ದೊಡ್ಡ ಗಾತ್ರದ ಗರಗಸ ಮೀನು: ದೊಡ್ಡ ಗಾತ್ರದ ಮೀನು ಗರಗಸ ಹಲ್ಲುಗಳನ್ನು ಹೊಂದಿದೆ. ಇದು ಮೂರು ಮೀಟರ್ ಉದ್ದ ಬೆಳೆಯುವುದರಿಂದ ಇದಕ್ಕೆ ಗೂಳಿ ಶಾರ್ಕ್ ಎಂದು ಕರೆಯುತ್ತಾರೆ. ಹೂಳು ತುಂಬುವುದು, ನೀರಿನ ಮಲೀನತೆ, ಅಣೆಕಟ್ಟು ನಿರ್ಮಾಣ ಹಾಗೂ ಆವಾಸಸ್ಥಾನಗಳ ನಾಶ ಈ ಮೀನುಗಳ ಸಂತತಿಯ ಅವನತಿಗೆ ಕಾರಣವಾಗಿದೆ.
- ಚಾಕು ಹಲ್ಲಿನ ಮೀನು: ಈ ಮೀನು ಬ್ಲೇಡ್ ರೀತಿಯ ಹಲ್ಲುಗಳನ್ನು ಹೊಂದಿದೆ. ಇದು ಸಾಗರದ ಆಳದಲ್ಲಿ ಇರುತ್ತದೆ. ಹಿಂದೂ ಮಹಾಸಾಗರ ಹಾಗೂ ಪೆಸಿಫಿಕ್ ಮಹಾಸಾಗರಗಳಲ್ಲಿ ಇವುಗಳ ವಾಸ. ಹೆಚ್ಚು ಬೇಡಿಕೆ ಇರುವ ಮೀನು ಇದಾಗಿದೆ.
ಉಪಸಂಹಾರ
ಭಾರತದಲ್ಲಿನ ಅಳಿವಿನಂಚಿನಲ್ಲಿರುವ ಹಾಗೂ ಸ್ಥಳೀಯ ಪ್ರಭೇದಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಾಡು ನಾಶ, ಅಕ್ರಮ ಬೇಟೆ, ಮಾಲಿನ್ಯ ಮತ್ತು ಆವಾಸಸ್ಥಾನಗಳ ವಿನಾಶವನ್ನು ತಡೆಗಟ್ಟಿದಾಗ ಮಾತ್ರ ಜೀವ ವೈವಿಧ್ಯ ಉಳಿಯಲು ಸಾಧ್ಯ. ಸರ್ಕಾರದ ಕ್ರಮಗಳ ಜೊತೆಗೆ ಜನಜಾಗೃತಿ ಮತ್ತು ಸಮುದಾಯದ ಸಹಭಾಗಿತ್ವ ಅತ್ಯಂತ ಅಗತ್ಯ. ಇಂದೇ ನಾವು ಕೈಗೊಳ್ಳುವ ಸಂರಕ್ಷಣಾ ಪ್ರಯತ್ನಗಳು ನಾಳೆಯ ಪರಿಸರ ಸಮತೋಲನವನ್ನು ನಿರ್ಧರಿಸುತ್ತವೆ. ಪ್ರಕೃತಿಯನ್ನು ಉಳಿಸುವುದೇ ಭವಿಷ್ಯವನ್ನು ಉಳಿಸುವ ಮಾರ್ಗವಾಗಿದೆ