ಮಧ್ಯಯುಗದ ರಾಜಪುತ ರಾಜಸಭೆಗಳು ಕೇವಲ ಯುದ್ಧವೀರತೆಯ ಕೇಂದ್ರಗಳಾಗಿರಲಿಲ್ಲ; ಅವು ಬೌದ್ಧಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಚೈತನ್ಯಮಯ ಕೇಂದ್ರಗಳಾಗಿದ್ದವು. ರಾಜರು ಪಂಡಿತರು, ಕವಿಗಳು ಮತ್ತು ಇತಿಹಾಸಕಾರರಿಗೆ ಆಶ್ರಯ ನೀಡಿದ್ದು, ಜ್ಞಾನವನ್ನು ರಾಜ್ಯಾಡಳಿತ ಮತ್ತು ಸಾಂಸ್ಕೃತಿಕ ಗೌರವದ ಪ್ರಮುಖ ಅಂಶವೆಂದು ಪರಿಗಣಿಸಿದ್ದರು. ಅರಮನೆಯ ಸಭಾಂಗಣಗಳಲ್ಲಿ ಸಂಸ್ಕೃತ, ಡಿಂಗಲ್, ಬ್ರಜ್ ಮತ್ತು ಪರ್ಶಿಯನ್ ಭಾಷೆಗಳ ಸಾಹಿತ್ಯ ಅರಳಿತು. ವಂಶಗೌರವ ಮತ್ತು ವೀರತೆಯನ್ನು ಕೀರ್ತಿಸುವ ಕಾವ್ಯಗಳೊಂದಿಗೆ ತತ್ತ್ವಚಿಂತನೆ, ನೈತಿಕತೆ ಮತ್ತು ಇತಿಹಾಸದ ಬರವಣಿಗೆಗಳು ಬೆಳವಣಿಗೆಯಾಯಿತು. ಈ ಬೌದ್ಧಿಕ ವಾತಾವರಣವು ಪ್ರಾದೇಶಿಕ ಗುರುತನ್ನು ಉಳಿಸಿ ಭಾರತೀಯ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿತು.

ಶಿಕ್ಷಣ:

ರಜಪೂತರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ರಜಪೂತರ ಕಾಲದ ವಿದ್ಯಾರ್ಥಿಗಳು 14 ವಿಷಯಗಳನ್ನು ಅಧ್ಯಯನ ಮಾಡಬೇಕಿತ್ತು. ವಿದ್ಯಾರ್ಥಿಗಳಿಗೆ ಕೃಷಿ, ವಾಣಿಜ್ಯ, ಶಿಲ್ಪಕಲೆ ಹಾಗೂ ಅಪರಾಧಶಾಸ್ತ್ರಗಳ ಕುರಿತು ಶಿಕ್ಷಣ ನೀಡಲಾಗುತ್ತಿತ್ತು. ನಳಂದ, ಪಾಟಲಿಪುತ್ರ, ಉಜೈನಿ ಹಾಗೂ ಕಂಪಿಲಿ ಪ್ರಮುಖ ಶಿಕ್ಷಣ ಕೇಂದ್ರಗಳಾಗಿದ್ದವು.

ಸಾಹಿತ್ಯ :

ರಜಪೂತ ರಾಜರು ಸ್ವತಃ ಶ್ರೇಷ್ಠ ವಿದ್ವಾಂಸರು ಮತ್ತು ಬರಹಗಾರರಾಗಿದ್ದರು. ಅಲ್ಲದೆ ಸಾಹಿತ್ಯದ ಪೋಷಕರು, ಸಾಹಿತ್ಯಾಭಿಮಾನಿಗಳು ಸಹ ಆಗಿದ್ದರು. ರಜಪೂತರು ಸಾಹಿತ್ಯಕ್ಕೆ ನೀಡಿದ ಅಪಾರ ಪ್ರೋತ್ಸಾಹದಿಂದ ಹಲವಾರು ಪ್ರಮುಖ ಸಾಹಿತ್ಯಕ ಕೃತಿಗಳು ರಚನೆಗೊಂಡವು. ಖಗೋಳ ಶಾಸ್ತ್ರ, ವೈದ್ಯಕೀಯ, ವ್ಯಾಕರಣ, ಮತ್ತು ವಾಸ್ತುಶಿಲ್ಪ ವಿಷಯಗಳಲ್ಲಿಯು ಕೃತಿಗಳು ರಚಿಸಲ್ಪಟ್ಟವು. ರಜಪೂತರ ಕಾಲದಲ್ಲಿ ರಚನೆಗೊಂಡ ಪ್ರಮುಖ ಕೃತಿಗಳೆಂದರೆ;

ಭಟ್ಟಿ – ರಾವಣವಧ,

ಮಾಘ – ಶಿಶುಪಾಲವಧೆ,

ಶ್ರೀ ಹರ್ಷ – ನೈಷದ ಚರಿತ,

ಧಾಮೋದರಗುಪ್ತ – ಕಲ್ತನಿಮಾತಾ,

ಜಯದೇವ – ಗೀತ ಗೋವಿಂದ

ರಜಪೂತರ ಕಾಲದಲ್ಲಿ ರಚನೆಯಾದ ಗದ್ಯಕೃತಿಗಳು:-

ದಂಡಿ – ದಶಕುಮಾರ ಚರಿತ,

ದಮ್ಮಪಾಲ – ತಿಲಕಮಂಜರಿ,

ಯಶಸ್ತಿಲಕ – ವಾಸವದತ್ತ,

ಸುಬಂಧು – ಕಾದಂಬರಿ,

ರಜಪೂತರ ಕಾಲದಲ್ಲಿ ನಾಟಕ ರೂಪದಲ್ಲಿ ಕೆಲವು ಕೃತಿಗಳು ರಚಿಸಲ್ಪಟ್ಟವು. ಅಂತಹ ಕೃತಿಗಳೆಂದರೆ;

ಭವಭೂತಿ – ಮಾಲತಿ ಮಾಧವ,

– ಮಹಾವೀರಚರಿತ,

– ಉತ್ತರ ರಾಮಚರಿತ,

ಆನಂದ ವರ್ಧನ – ಪ್ರಭೋಧ ಚಂದ್ರ,

ರಾಜಶೇಖರ – ಕರ್ಪೂರ ಮಂಜರಿ,

ಭಟ್ಟನಾರಾಯಣ – ವೇಣಿಸಂಹಾರ,

ಮುರಾರಿ – ಅನರ್ಷರಾಘವ,

ರಜಪೂತರ ಕಾಲದಲ್ಲಿ ಕೆಲವು ಐತಿಹಾಸಿಕ ಕೃತಿಗಳು ಸಹ ರಚನೆಗೊಂಡವು, ಅಂತಹ ಪ್ರಮುಖ ಕೃತಿಗಳೆಂದರೆ:-

ಕಲ್ಹಣನ – ರಾಜತರಂಗಿಣಿ,

ಬಿಲ್ಹಣನ – ವಿಕ್ರಮಾಂಕ ದೇವಚರಿತ

ಸಂದ್ಯಾಕಾರಂದಿತನ – ರಾಮಚರಿತ,

ಈ ಕೃತಿಗಳಲ್ಲದೆ ವ್ಯಕ್ತಿಚರಿತ್ರೆಯನ್ನು ಆಧರಿಸಿ ಕೆಲವು ಕೃತಿಗಳು ರಚಿಸಲ್ಪಟ್ಟವು. ಅವುಗಳೆಂದರೆ

ಚಾಂದ್ಬರ್ದಾಯಿಯ – ಪೃಥ್ವಿರಾಜ ರಾಸೋ

ಹೇಮಚಂದ್ರನ – ಕುಮಾರಪಾಲ ಚರಿತ

ಸಾಹಿತ್ಯದ ಇತರೆ ಪ್ರಕಾರಗಳ ಆಧರಿಸಿ ಕೆಲವು ಕೃತಿಗಳು ರಚಿಸಲ್ಪಟ್ಟವು. ಅವುಗಳೆಂದರೆ:-

ಕ್ಷೇಮೇಂದ್ರನ-ಬೃಹತ್ ಕಥಾಮಂಜರಿ.

ಸೋಮದೇವಸಕ ಸಪ್ತಾತಿಯ – ಕಥಾಸರಿತ್ ಸಾಗರ

ವ್ಯಾಕರಣಕ್ಕೆ ಸಂಬಂಧಿಸಿದಂತೆ ಜಯಾದಿತ್ಯನು ಪಾತಂಜಲಿಯ ಮಹಾಭಾಷ್ಯದ ಮೇಲೆ ಭಾಷ್ಯಕೃತಿಯ ರಚಿಸಿದನು. ಸರ್ವವರ್ಮನ ಕಾತಂತ್ರ ಮತ್ತೊಂದು ವ್ಯಾಕರಣ ಕೃತಿಯಾಗಿದೆ.

ರಜಪೂತರ ಕಾಲದಲ್ಲಿ ವಾತ್ಸಾಯನನ ಕಾಮಸೂತ್ರಕ್ಕೆ ಹಲವು ಬಾಷ್ಯಗಳನ್ನು ಬರೆಯಲಾಯಿತು.

ಕೋಶಪಂಡಿತ – ಕೋಶಶಾಸ್ತ್ರ,

ಸಾರಂಗದೇವ –  ಸಂಗೀತ ರತ್ನಾಕರ,

ತತ್ವಶಾಸ್ತ್ರಕ್ಕೆ ಸಂಬಂಧಿಸಿದಂತೆ,

ಹೇಮಚಂದ್ರ – ಪ್ರಮಮ್ ಮೀಮಾಂಸೆ,

ಧರ್ಮಕೀರ್ತಿ – ನ್ಯಾಯಬಂಧು.

ವೈದ್ಯಕೀಯ ಮತ್ತು ಖಗೋಳಶಾಸ್ತ್ರದ ಕೃತಿಗಳಲ್ಲಿ

ವಿಜ್ಞಾನೇಶ್ವರ – ಮಿತಾಕ್ಷರ ಸಂಹಿತೆ,

ವಾಗ್ಟಟ – ಅಷ್ಟಾಂಗ ಸಂಗ್ರಹ,

ಭಾಸ್ಕರಾಚಾರ್ಯ – ಸಿದ್ಧಾಂತ ಶಿರೋಮಣಿ.

ರಜಪೂತರ ಕಾಲದಲ್ಲಿ ಸಾಹಿತ್ಯಕ ಕೃತಿಗಳಲ್ಲದೆ ವೈದ್ಯಕೀಯ, ಖಗೋಳ, ಮತ್ತು ವ್ಯಾಕರಣ ಹಾಗೂ ಚಾರಿತ್ರಿಕ ಕೃತಿಗಳು ರಚನೆಯಾದವು

ಉಪಸಂಹಾರ:

ರಾಜಪುತ ರಾಜಸಭೆಗಳ ಸಾಹಿತ್ಯಿಕ ಕೊಡುಗೆಗಳು ಭಾರತೀಯ ಬೌದ್ಧಿಕ ಇತಿಹಾಸದಲ್ಲಿ ಶಾಶ್ವತವಾದ ಗುರುತು ಮೂಡಿಸಿವೆ. ವಿವಿಧ ಭಾಷೆಗಳು ಮತ್ತು ಸಾಹಿತ್ಯ ಪ್ರಕಾರಗಳಿಗೆ ಆಶ್ರಯ ನೀಡುವ ಮೂಲಕ ವೀರಗಾಥೆಗಳು, ರಾಜಸಭಾ ವೃತ್ತಾಂತಗಳು, ಭಕ್ತಿ ಕಾವ್ಯಗಳು ಮತ್ತು ತತ್ತ್ವಚಿಂತನೆಯ ಕೃತಿಗಳು ಸಂರಕ್ಷಿಸಲ್ಪಟ್ಟವು. ಈ ಸಾಹಿತ್ಯವು ರಾಜಸತ್ತೆ ಮತ್ತು ವೀರತೆಯನ್ನು ಮಾತ್ರವಲ್ಲ, ಕಾಲಘಟ್ಟದ ಸಾಮಾಜಿಕ ಮೌಲ್ಯಗಳು ಮತ್ತು ಸಾಂಸ್ಕೃತಿಕ ಸಂವಹನಗಳನ್ನೂ ಪ್ರತಿಬಿಂಬಿಸಿತು. ಜ್ಞಾನ ಮತ್ತು ಸಾಹಿತ್ಯಕ್ಕೆ ನೀಡಿದ ಮಹತ್ವವು ಮುಂದಿನ ತಲೆಮಾರಿನ ಬರಹಗಾರರು ಮತ್ತು ಇತಿಹಾಸಕಾರರಿಗೆ ಪ್ರೇರಣೆಯಾಯಿತು. ಹೀಗಾಗಿ, ರಾಜಪುತ ಸಾಹಿತ್ಯ ಆಶ್ರಯವು ಯುದ್ಧವಿಜಯಗಳಷ್ಟೇ ಗೌರವಯುತ ಹಾಗೂ ಶಾಶ್ವತವೆಂಬ ಸಂದೇಶವನ್ನು ನೀಡುತ್ತದೆ.