ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಮಂತ್ರಿಮಂಡಲವು ಕಾರ್ಯಾಂಗದ ಹೃದಯವಾಗಿದೆ. ಇದು ವಿಧಾನಸಭೆಯೊಂದಿಗೆ ಸಮನ್ವಯ ಸಾಧಿಸಿ ಶಾಸನಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತದೆ. ರಾಜ್ಯದ ಹಣಕಾಸು ವ್ಯವಸ್ಥೆ, ನೇಮಕಾತಿ ಪ್ರಕ್ರಿಯೆಗಳು ಮತ್ತು ವಿವಿಧ ಇಲಾಖೆಗಳ ಮೇಲ್ವಿಚಾರಣೆಯ ಮೂಲಕ ಸುಸೂತ್ರ ಆಡಳಿತವನ್ನು ಒದಗಿಸುತ್ತದೆ.
ರಾಜ್ಯ ಮಂತ್ರಿ ಮಂಡಲದ ಕಾರ್ಯಗಳು ಈ ಕೆಳಗಿನಂತಿವೆ;
1. ಶಾಸನೀಯ ಕಾರ್ಯಗಳು: (Legislative Powers)
ವಿಧಾನಸಭೆಯಲ್ಲಿ ಮಸೂದೆಗಳನ್ನು ಮಂಡಿಸುವ, ವಿವರಿಸುವ ಹಾಗೂ ಸಮರ್ಥಿಸುವ ಕಾರ್ಯವನ್ನು ಮಂತ್ರಿ ಮಂಡಲದ ಮಂತ್ರಿಗಳು ಮಾಡಬೇಕಾಗುತ್ತದೆ. ವಿಧಾನಸಭೆಯ ಅಧಿವೇಶನದ ಕಾಲಾವಧಿ ಮತ್ತು ಕಲಾಪಗಳನ್ನು ಕ್ಯಾಬಿನೆಟ್ ನಿರ್ಧರಿಸುತ್ತದೆ. ಹೀಗಾಗಿ ಮಂತ್ರಿ ಮಂಡಲ ಕಾರ್ಯಾಂಗದ ಭಾಗವಾಗಿದ್ದರೂ ಶಾಸನಾತ್ಮಕ ಕಾರ್ಯಗಳನ್ನು ಸಹ ನಿರ್ವಹಿಸಬೇಕು.
2. ನೀತಿ ನಿರೂಪಣಾ ಕಾರ್ಯಗಳು:
ರಾಜ್ಯದ ಆಂತರಿಕ ಭದ್ರತೆ ಮತ್ತು ಅಂತರಾಜ್ಯ ನೀತಿಗಳನ್ನು ನಿರ್ಧರಿಸುವ ಕಾರ್ಯವನ್ನು ರಾಜ್ಯ ಮಂತ್ರಿ ಮಂಡಲ ಮಾಡುತ್ತದೆ. ಜೊತೆಗೆ ಜನರ ಜೀವನವನ್ನು ನಿರೂಪಿಸುವ ಶಿಕ್ಷಣ, ಅರಣ್ಯ, ಕೈಗಾರಿಕೆ ಹಾಗೂ ಸಾರಿಗೆ ಮುಂತಾದ ರಂಗಗಳ ನೀತಿಗಳನ್ನು ನಿರ್ಧರಿಸುತ್ತದೆ. ಇದರ ಜೊತೆಗೆ ರಾಜ್ಯದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತದೆ.
3. ಕಾರ್ಯಾಂಗ ನಿಯಂತ್ರಣ ಕಾರ್ಯಗಳು:
ರಾಜ್ಯಪಾಲರು ಕಾರ್ಯಾಂಗದ ಅಧಿಕಾರಗಳನ್ನು ಚಲಾಯಿಸುವ ಮಂತ್ರಿ ಮಂಡಲ ರಾಜ್ಯಪಾಲರಿಗೆ ಸಹಾಯ ಸಹಕಾರ ನೀಡುತ್ತದೆ. ಕಾರ್ಯಾಂಗದ ಪ್ರತಿಯೊಬ್ಬ ಸಚಿವ ಸಹ ತನ್ನ ಖಾತೆಯ ಮೇಲೆ ನಿಯಂತ್ರಣಾಧಿಕಾರವನ್ನು ಹೊಂದಿರುತ್ತಾನೆ.
4. ನೇಮಕಾತಿ ಕಾರ್ಯಗಳು: (Appointment Powers)
ನ್ಯಾಯವಾದಿ, ಲೆಕ್ಕ ಪರಿಶೋಧಕರು ಮುಂತಾದ ನೇಮಕಾತಿ ಸಂದರ್ಭಗಳಲ್ಲಿ ಮಂತ್ರಿಮಂಡಲವು ರಾಜ್ಯಪಾಲರಿಗೆ ಸಹಕಾರ ನೀಡುತ್ತದೆ. ಹಾಗೆಯೇ ರಾಜ್ಯ ಲೋಕಸೇವಾ ಆಯೋಗ ಮತ್ತು ಹಣಕಾಸು ಆಯೋಗಗಳ ನೇಮಕಾತಿಯಲ್ಲಿಯೂ ಸಚಿವ ಸಂಪುಟ ಭಾಗಿಯಾಗುತ್ತದೆ.
5. ಹಣಕಾಸಿನ ಕಾರ್ಯಗಳು: (Finanacial Powers)
ರಾಜ್ಯ ಹಣಕಾಸಿನ ಮೇಲೆ ಮಂತ್ರಿಮಂಡಲದ ನಿಯಂತ್ರಣವನ್ನು ಹೊಂದಿದೆ. ಪ್ರತಿಯೊಬ್ಬ ಸಚಿವನು ತನ್ನ ಖಾತೆಗೆ ನಿಗದಿಪಡಿಸಲಾದ ಮೊತ್ತಕ್ಕೆ ವಿಧಾನಸಭೆಯಿಂದ ಅಂಗೀಕಾರ ಪಡೆದುಕೊಳ್ಳುತ್ತಾನೆ.
ಉಪಸಂಹಾರ
ಒಟ್ಟಾರೆ, ರಾಜ್ಯ ಮಂತ್ರಿಮಂಡಲವು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಶಾಸನೀಯ, ಕಾರ್ಯಾಂಗ, ಹಣಕಾಸು ಹಾಗೂ ನೇಮಕಾತಿ ಕಾರ್ಯಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ದಿಕ್ಕು ನೀಡುತ್ತದೆ. ಜನಪರ ನೀತಿಗಳನ್ನು ರೂಪಿಸಿ ಜಾರಿಗೆ ತರುವ ಮೂಲಕ ಜನರ ಕಲ್ಯಾಣವನ್ನು ಸಾಧಿಸುವುದು ಮಂತ್ರಿಮಂಡಲದ ಮುಖ್ಯ ಉದ್ದೇಶವಾಗಿದೆ.