ಹುಮಾಯೂನನ ಅತ್ಯಂತ ಬದ್ಧ ವೈರಿಯಾದ ಶೇರ್ ಶಹನು ಈ ಮೊಗಲ್ ಚಕ್ರವರ್ತಿಯನ್ನು ಪರಾಭವ ಮತ್ತು ಪದಚ್ಯುತಗೊಳಿಸಿ, ಕ್ರಿ.ಶ. 1540ರಲ್ಲಿ ದೆಹಲಿ ಸಿಂಹಾಸನವನ್ನೇರಿದನು. ಅಫಘನ ಸೂರ್ ಮನೆತನಕ್ಕೆ ಸೇರಿದ ಶೇರ್‌ಶಹನು ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ಓರ್ವ ಪ್ರಮುಖ ವ್ಯಕ್ತಿಯಾಗಿದ್ದಾನೆ.

ಶೇರ್‌ಸಹನ ಮೂಲ ಹೆಸರು ಫರೀದ್, ಈತ ಜನಿಸಿದ್ದು ಕ್ರಿ.ಶ. 1472ರಲ್ಲಿ. ಫರೀದನು ಆರೇಬಿಕ್ ಮತ್ತು ಪರ್ಶಿಯನ್ ಭಾಷೆ ಮತ್ತು ಸಾಹಿತ್ಯಗಳ ಅಧ್ಯಯನಕ್ಕೆ ಹೆಚ್ಚು ಗಮನಕೊಟ್ಟಿದ್ದನು. ಫರೀದನ ತಂದೆಯ ಪೋಷಕನಾಗಿದ್ದ ಜಮಾಲ್‌ಖಾನ್ ನಿಂದಾಗಿ ಫರೀವನಿಗೆ ಸಹಾರಾಜನ ಜಹಗೀರಿನ ಆಡಳಿತದ ಮೇಲ್ವಿಚಾರಣೆ ಸಿಕ್ಕಿತು.

ಸಸ್ಸಾರಾಂನಲ್ಲಿ ಆಡಳಿತವನ್ನು ದಕ್ಷ ರೀತಿಯಿಂದ ನಿರ್ವಹಿಸಿದ ಫರೀದನನ್ನು ಕಂಡ ಅವನ ದಾಯಾದಿಗಳಿಗೆ ಮತ್ಸರ ಅತಿಯಾಯಿತು. ದಾಯಾದಿ ಸಹೋದರರ ದ್ವೇಷಾಸೂಯೆಗಳಿಗೆ ತುತ್ತಾದ ಫರೀದ್, ತತ್ಪರಿಣಾಮವಾಗಿ ಮತ್ತೊಮ್ಮೆ ಮನೆ ತ್ಯಜಿಸಿ, ದಕ್ಷಿಣ ಬಿಹಾರದ ಆರಸ ಬಹರ್ ಖಾನ್ ಆಸ್ನಾನ ಸೇರಿದನು. ಒಬ್ಬನೇ ಹುಲಿಯೊಂದನ್ನು ಸಂಹರಿಸಿದನು. ಫರೀದ್ ಬಹರ್‌ಖಾನನ ಮೆಚ್ಚುಗೆಗೆ ಪಾತ್ರನಾಗಿ ʻಶೇರ್ ಖಾನ್’ ಎಂಬ ಬಿರುದನ್ನು ಪಡೆದನು. ಮತ್ತೆ ಈ ಸಂದರ್ಭದಲ್ಲಿ ಶೇರ್ ಖಾನ್‌‌ ಬಗ್ಗೆ ದ್ವೇಷ, ಅಸೂಹೆ ಹೊಂದಿದ್ದ ಪಠಾಣ ಸರದಾರರು, ಬಹರ್ ಖಾನ್‌ನ ಎದುರು ಅವನ ಬಗ್ಗೆ ಚಾಡಿ ಹೇಳಿದಾಗ, ಬಹರ್ ಖಾನನು ಶೇರಖಾನ ಸಸಾರಂನ ಜಾಗೀರನ್ನು ಬಲಪ್ರಯೋಗದಿಂದ ಪಡೆದನು. ಉದ್ಯೋಗಕ್ಕೆ ಅಲೆದಾಡುತ್ತಿದ್ದ ಶೇರ್ ಖಾನನಿಗೆ ಮೊಗಲ್ ಸೇವೆಯಲ್ಲೂ ಒಂದು ಹುದ್ದೆ ಸಿಕ್ಕಿತು. ಆದರೆ ಅಲ್ಲಿಯೂ ಈತನನ್ನು ಸರಿಯಾಗಿ ಕಾಣದ್ದರಿಂದ ಶೇರ್ ಖಾನ್‌ನು ಕ್ರಿ.ಶ. 1528ರಲ್ಲಿ ಮೊಗಲ್ ಸೇವೆಯನ್ನು ಬಿಟ್ಟು ಬಿಹಾರಕ್ಕೆ ಮರಳಿದನು. ದಕ್ಷಿಣ ಬಿಹಾರದ ಸುಲ್ತಾನ ಮಹಮದನು ಈತನನ್ನು ತನ್ನ ಪುತ್ರ ಜಲಾಲ್ಖಾನನಿಗೆ ಶಿಕ್ಷಕನನ್ನಾಗಿ ನೇಮಿಸಿದನು. ಆದರೆ ಕೆಲವೇ ದಿನಗಳಲ್ಲಿ ಸುಲ್ತಾನನು ಮರಣಹೊಂದಿದನು. ಅವನ ಮಡದಿ ದುದುಬೀಬಿಯು ಜಲಾಲ್ ಖಾನ್ ಚಿಕ್ಕವಯಸ್ಸಿನವನಾಗಿದ್ದರಿಂದ ಹೊಸ ಸುಲ್ತಾನನ ಪರವಾಗಿ ತಾನೇ ರಾಜ್ಯಭಾರ ಮಾಡಲಾರಂಭಿಸಿದಳು. ಈಕೆ ಶೇರ್ ಖಾನ್‌ನನ್ನು ಉಪ ಪ್ರಾಂತ್ಯಾಧಿಕಾರಿಯನ್ನಾಗಿ ನೇಮಿಸಿದಳು. ಗೋಗ್ರಾ ಕಾಳಗದ ನಂತರ ಬಾಬರ್ ನು ಅಲಾಲ್ ಖಾನ್‌ನನ್ನು ವಕ್ಷಿಣ ಬಿಹಾರದ ಆರಸನನ್ನಾಗಿ ಮಾಡಿದನು. ಆಗ ಶೇರ್ ಖಾನನಿಗೆ ಸಸಾರಾಂದ ಜಾಗೀರು ಸಿಕ್ಕಿತು. ಜಲಾಲಖಾನನ ತಾಯಿ ದುದುಬೀಬಿ ಪುನಃ ಶೇ‌ರ್ ಖಾನ್‌ ನನ್ನು ಬಿಹಾರದ ಸಹಾಯಕ ಪ್ರಾಂತ್ಯಾಧಿಕಾರಿಯನ್ನಾಗಿ ನೇಮಿಸಿದಳು. ಅಲ್ಪಾವಧಿಯಲ್ಲಿಯೇ ದುದುಬೀಬಿ ಮರಣಹೊಂದಿದಳು. ನಂತರ ನಿಜವಾದ ಪ್ರಭುವೆನಿಸಿದನು, ಜಲಾಲ್ ಖಾನನು ಹೆಸರಿಗೆ ಮಾತ್ರ ಬಿಹಾರದ ಸುಲ್ತಾನನಾಗಿದ್ದನು.

ಶೇರ್ ಖಾನನು ಕ್ರಿ.ಶ. 1530ರಲ್ಲಿ ಚುನಾರ್ ಕೋಟೆಯ ಹಿಂದಿನ ಗೌವರ್ನರ್ ಆಗಿದ್ದ ತಾಜ್ ಖಾನನ ವಿಧವೆಯಾದ ಲಾಡ್ ಲ್ಲಿ ಕಳನ್ನು ವಿವಾಹವಾದನು. ತತ್ಪರಿಣಾಮವಾಗಿ ಶೇರ್ ಖಾನನಿಗೆ ಚುನಾರ್ ಒಡೆತನ ದೊರೆಯಿತು. ಚುನಾರ್‌ ಕೋಟೆಯಲ್ಲಿ ಅಪಾರ ಸಂಪತ್ತು ಸಿಕ್ಕಿದ್ದರಿಂದ ಸ್ವತಂತ್ರರಾಜ್ಯದ ನಿರ್ಮಾಣದ ಕನಸು ಕಾಣತೊಡಗಿದೆ. ಕ್ರಿ.ಶ. 1539ರಲ್ಲಿ ಹುಮಾಯೂನನನ್ನು ‘ಚೌಸಾಂ’ ಕಾಳಗದಲ್ಲಿ ಸೋಲಿಸಿದನು. ಈ ವಿಜಯದ ನಂತರ ಶೇರ್ ಖಾನನು ‘ಶೇರ್ಶಯ’ ಎಂಬ ಬಿರುದು ಪಡೆದನು. ಶೇರ್‌ಶಹ ಮತ್ತು ಹುಮಾಯೂನರ ನಡುವಣ ಅಂತಿಮ ಹೋರಾಟ ಕ್ರಿ.ಶ. 1540ರಲ್ಲಿ ನಡೆಯಿತು. ಇವರಿಬ್ಬರ ಸೈನ್ಯಗಳು ಕನೌಜ್‌ನ ಹತ್ತಿರ ಸಂಧಿಸಿದವು. ಕನೋಜ್ ಯುದ್ಧದಲ್ಲಿ ರ್ಶೇಶಹನು ಮತ್ತೊಮ್ಮೆ ಹುಮಾಯೂನನನ್ನು ಸಂಪೂರ್ಣವಾಗಿ ಸೋಲಿಸಿದನು. ಶೇರ್ಶಹನು ದೆಹಲಿಯ ಸಾರ್ವಭೌಮನಾದನು. ಅವನ ಬಹುದಿನದ ಕನಸು ನನಸಾಯಿತು.

ದೆಹಲಿಯ ಸಾರ್ವಭೌಮವಾದ ಶೇರ್‌ಶಹ ಕ್ರಿ.ಶ. 1540 ರಿಂದ ಕ್ರಿ.ಶ. 1545ರವರೆಗೆ ಐದು ವರ್ಷಗಳ ಕಾಲ ಆಳ್ವಿಕೆ ನಡೆಸಿದ. ತನ್ನ ಆಳ್ವಿಕೆಯ ಮೊದಲ ವರ್ಷದಲ್ಲಿ ಗ್ವಾಲಿಯರ್ ಮತ್ತು ಸಂಬಾಲ್‌ಗಳನ್ನು ಆಕ್ರಮಿಸಿದ. ತದನಂತರ ಪಂಜಾಬ್, ಸಿಂದ್ ಮತ್ತು ಬಲೂಚಿಸ್ತಾನಗಳೂ ಈತನ ವಶವಾದವು. ಕ್ರಿ.ಶ. 1543ರಲ್ಲಿ ಚಾಂದೇರಿ ಮತ್ತು ರೈಸಿನ್ ಕೋಟೆಗಳನ್ನು ಜಯಿಸಿದನು. ತದನಂತರ ರಾಜಾಸ್ಥಾನದ ಮಾರ್ವಾರದ ಮಾಲೈವ್‌ನಿಂದ ಮಾರ್ವಾರವನ್ನು ಜಯಿಸಿದ. ಕಾಲಿಂಜರ್ ಶೇರ್ ಶಹನ ಅಂತಿಮ ದಂಡಯಾತ್ರೆ, ಇದನ್ನು ಜಯಿಸಿದರೂ ಸಹ ಅಲ್ಲಿ ಆಕಸ್ಮಿಕವಾಗಿ ಉಂಟಾದ ಸಿಡಿಮದ್ದಿನ ಆಸ್ಪೋಟದಿಂದ ಶೇರ್‌ಶಹ ಮರಣ ಹೊಂದಿದೆ. ಈ ರೀತಿ ಶೇರ್ ಶಹನ ಜೀವನ ದುರಂತದಲ್ಲಿ ಕೊನೆಗೊಂಡಿತು.

1. ಶೇರ್‌ ಶಹನ ಆಡಳಿತ ಸುಧಾರಣೆಗಳು

ಆಫ್‌ಫಾನ್ ಸುಲ್ತಾನರಲ್ಲೆಲ್ಲಾ ಅತ್ಯಂತ ಪ್ರಸಿದ್ಧನಾದ ಶೇ‌ರ್ ಶಹನು ಮಹಾನ್ ದಿಗ್ವಿಜಯಿಯಾಗಿದ್ದಂತೆ, ಚತುರ ಆಡಳಿತಗಾರನೂ ಆಗಿದ್ದನು. ಕೇವಲ ತನ್ನ ಐದು ವರ್ಷದ ಅವಧಿಯಲ್ಲಿ ಅದೆಷ್ಟೋ ಮಂದಿ ಸುಲ್ತಾನರು ಹಲವು ವಶಕಗಳಿಂದಲೂ ಸಾಧಿಸಲಾಗದ ಮಹತ್ಸಾಧನೆಯನ್ನು ಸಾಧಿಸಿದನು. ಆಡಳಿತ ಕ್ಷೇತ್ರದಲ್ಲಿ ಈತ ತಂದ ಸುಧಾರಣೆಗಳು ಅಕ್ಬರನಿಂದ ಹಿಡಿದು ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಯಲ್ಲೂ ಪ್ರಾಮುಖ್ಯಗಳಿಸಿದವು. ʻಜನಸಮೂಹದ ಆಯ್ಕೆಗೆ ಅನುಗುಣವಾಗಿ ಸ್ಪಂದಿಸಿ ಆಡಳಿತವನ್ನು ನಿರ್ವಹಿಸಿದನೆಂದು’ ಡಬ್ಲ್ಯೂ ಕ್ರೂಕ್ ಅಭಿಪ್ರಾಯ ಪಟ್ಟಿದ್ದಾರೆ. “ಶೇರ್‌ಶಾನ ಆಡಳಿತ ನಿರಂಕುಶ ಪ್ರಭುತ್ವವಾದರೂ ರಚನಾತ್ಮಕವೂ ಹಾಗೂ ವಿವೇಕ ಪೂರ್ಣವೂ ಆಗಿತ್ತು” ಎಂದು ಡಾ. ಈಶ್ವರೀಪ್ರಸಾದರು ಹೇಳುತ್ತಾರೆ. ಅಕ್ಟರನ ಉದಾರ ನೀತಿಗೆ ಶೇರಶಹನ ಸುಧಾರಣೆಗಳು ಬಹುಮಟ್ಟಿಗೆ ಕಾರಣವಾಗಿವೆ. ಆದುದರಿಂದಲೇ ವಿದ್ವಾಂಸರು ಶೇರ್‌ಶಹನನ್ನು ʻಅಕ್ಬರನ ಮಾರ್ಗದರ್ಶಿ’ ಎಂದು ಕರೆದಿದ್ದಾರೆ.

ಶೇರ್‌ಶಹನ ಸಾಮ್ರಾಜ್ಯವು ಆಸ್ಲಾಂ, ಗುಜರಾತ್ ಮತ್ತು ಕಾಶ್ಮೀರಗಳನ್ನು ಬಿಟ್ಟು ಪೂರ್ಣ ಉತ್ತರ ಭಾರತವನ್ನೆಲ್ಲಾ ಒಳಗೊಂಡಿತ್ತು. ಅರ್ಥಾತ್ ಪೂರ್ವದಲ್ಲಿ ಸೋನಾರಗಾಂವ್‌ದಿಂದ (ಈಗಿನ ಪೂರ್ವ ಬಂಗಾಲ), ವಾಯುವ್ಯದಲ್ಲಿ ಗೋಬ್ಬರ್ ನಾಡಿನವರೆಗೆ, ಉತ್ತರದಲ್ಲಿ ಹಿಮಾಲಯದಿಂದ, ದಕ್ಷಿಣಕ್ಕೆ ವಿಂದ್ಯಾ ಪರ್ವತಾವಳಿಯವರೆಗೆ ಹರಡಿತ್ತು.

2. ಕೇಂದ್ರೀಯ ಆಡಳಿತ ವ್ಯವಸ್ಥೆ

ಆಡಳಿತದ ಕೇಂದ್ರ ಬಿಂದುವಾಗಿದ್ದ ಶೇ‌ರ್ ಶಹನು ಆ ಆಡಳಿತದ ಅತ್ಯಂತ ಚಿಕ್ಕ ಪುಟ್ಟ ವ್ಯವಹಾರಗಳನ್ನು ಸಹ ಪರಿಶೀಲಿಸುತ್ತಿದ್ದನು. ನಾಗರಿಕ ಮತ್ತು ಸೈನಿಕ ಆಡಳಿತದ ಎಲ್ಲಾ ಅಧಿಕಾರಗಳನ್ನು ಹೊಂದಿದ್ದ ಶೇರ್ ಶಹನು, ಇಸ್ಲಾಂ ಧರ್ಮಾಭಿಮಾನಿಗಳಾದ ಉಲೆಮಾಗಳ ಪ್ರಭಾದದಿಂದ ದೂರವಿದ್ದನು. ರಾಜ್ಯದ ಉದ್ದಗಲಕ್ಕೂ ನಿರಂತರವಾಗಿ ಸಂಚರಿಸಿ, ಜನರ ಕುಂದುಕೊರತೆಗಳನ್ನು ವಿಚಾರಿಸುತ್ತಿದ್ದನು. ಶೇರ್‌ ಶಹನ ಮಂತ್ರಿಗಳು ಪ್ರತಿನಿತ್ಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ನುರಿತ ಆಡಳಿತಗಾರನಾದ ಶೇರ್‌ಶಹನು ತನ್ನ ಮಂತ್ರಿಗಳಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ತರಬೇತಿ ನೀಡುವ ಹೊಣೆಯನ್ನು ಹೊತ್ತುಕೊಂಡಿದ್ದನು.

ಆಡಳಿತದ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದಲ್ಲಿ ಅನೇಕ ಇಲಾಖೆಗಳನ್ನು ಶೇರ್ ಶಹನು ಪ್ರಾರಂಭಿಸಿದನು. ಅವುಗಳೆಂದರೆ,

1. ದಿವಾನ್‌-ಇ-ವಜರತ್‌ 2. ದಿವಾನ್‌-ಇ-ಅರಿಜ್‌ 3. ದಿವಾನ್‌-ಇ-ರಸಲತ್‌ 4. ದಿವಾನ್‌-ಇ-ಇನ್ಷಾ

ಇದಲ್ಲದೆ ದಿವಾನ್-ಇ-ಖಾಜಾ ಮತ್ತು ದಿವಾನ್-ಇ-ಬರೀದ್ ಎಂಬ ಎರಡು ಮಹತ್ವದ ಇಲಾಖೆಗಳಿದ್ದವು.

ದಿವಾನ್-ಇ-ವಜರತ್ : ವಜೀರನು ಇದರ ಮುಖ್ಯಸ್ಥನಾಗಿದ್ದು. ಈತ ಸಾಮ್ರಾಜ್ಯದ ಕಂದಾಯ, ಹಣಕಾಸಿನ ಆಡಳಿತ ಮತ್ತು ಉಳಿದ ಮಂತ್ರಿಗಳ ಕಾರ್ಯಚಟುವಟಿಕೆಯ ಮೇಲ್ವಿಚಾರಣೆಗಳನ್ನು ನೋಡಿಕೊಳ್ಳುತ್ತಿದ್ದನು.

ದಿವಾನ್-ಇ-ಆರಿಜ್ : ಇದರ ಮುಖ್ಯಸ್ಥನಾಗಿದ್ದವನು ಆರಿಜ್-ಇ-ಮಮಲಿಕ್, ಇವನು ಸೇನೆಯ ಮುಖ್ಯಸ್ಥನಾಗಿದ್ದು, ಸೈನ್ಯಭರ್ತಿ, ಸಂಘಟನೆ, ಸೈನಿಕ ಶಿಸ್ತನ್ನು ನೋಡಿಕೊಳ್ಳುತ್ತಿದ್ದನು. ಆದರೆ ಈತ ಪ್ರಧಾನ ದಂಡನಾಯಕನಾಗಿರಲಿಲ್ಲ.

ದಿವಾನ್-ರಸಲತ್ : ಈ ಇಲಾಖೆಯು ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳುತ್ತಿತ್ತು. ಈ ಇಲಾಖೆಯ ಮಂತ್ರಿಯು ಹೊರನಾಡುಗಳಿಂದ ಬಂದ ಮತ್ತು ಹೊರನಾಡುಗಳಿಗೆ ಕಳಿಸಲಾದ ರಾಯಭಾರಿಗಳೊಂದಿಗೆ ಸಂಪರ್ಕವಿರಿಸಿಕೊಳ್ಳುತ್ತಿದ್ದನು.

ದಿವಾನ್-ಇ-ಇನ್ಷಾ : ಈ ಇಲಾಖೆಯ ಮಂತ್ರಿಯು ರಾಜಾಜ್ಞೆಗಳನ್ನು ಮತ್ತು ಸರಕಾರಿ ಪ್ರಪತ್ರಗಳನ್ನು ಬರೆಯಿಸುವ, ಅವುಗಳನ್ನು ರಾಜ್ಯಪಾಲರಿಗೆ ಮತ್ತು ಸ್ಥಾನಿಕ ಅಧಿಕಾರಿಗಳಿಗೆ ಕಳಿಸುವ ಮತ್ತು ಅವರೊಂದಿಗೆ ಪತ್ರ ವ್ಯವಹಾರ ನಡೆಸುವ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು. ಸರಕಾರಿ ದಾಖಲೆ ಪತ್ರಗಳು ಇವನ ಅಧೀನದಲ್ಲಿದ್ದವು.

ದಿವಾನ್-ಇ-ಖಾಜಾ : ಪ್ರಧಾನ ಖಾಜಿಯು ಇದರ ಮುಖ್ಯಸ್ಥನಾಗಿದ್ದು, ನ್ಯಾಯಾಡಳಿತದ ಮೇಲ್ವಿಚಾರಣೆ ನಡೆಸುತ್ತಿದ್ದನು. ಅಲ್ಲದೆ ಪ್ರಾಂತೀಯ ಖಾಜಿಗಳ ನ್ಯಾಯಾಲಯಗಳಿಂದ ಬಂದ ಅಪೀಲುಗಳನ್ನು ತೀರ್ಮಾನಿಸುತ್ತಿದ್ದನು.

ದಿವಾನ್-ಇ-ಬರೀದ್ : ಈತ ವಾರ್ತಾ ಇಲಾಖೆಯ ಮುಖ್ಯಸ್ಥನಾಗಿದ್ದು, ಸಾಮ್ರಾಜ್ಯದಲ್ಲಿ ಜರುಗಿದ ಮಹತ್ವದ ಘಟನೆಗಳನ್ನು ಕುರಿತು ವರದಿಯನ್ನು ಸುಲ್ತಾನನಿಗೆ ಒಪ್ಪಿಸುತ್ತಿದ್ದನು. ಈತನ ಕೈಕೆಳಗೆ ಅನೇಕ ಮಂದಿ ವರದಿಗಾರರು ಮತ್ತು ಗೂಢಾಚಾರರು ಇರುತ್ತಿದ್ದರು.

3. ಆಡಳಿತದ ವಿಭಾಗಗಳು

ಹಿಂದಿನ ಸುಲ್ತಾನರ ಕಾಲದಲ್ಲಿದ್ದ ಆಡಳಿತ ವಿಭಜನಾ ವ್ಯವಸ್ಥೆಯನ್ನು ಶೇರ್‌ಶಹ ಮುಂದುವರೆಸಿದ. ಈತ ಆಡಳಿತದ ಸಹಾಯಕ್ಕಾಗಿ ರಾಜ್ಯವನ್ನು 47 ಸರ್ಕಾರ (ಆಡಳಿತ ಘಟಕ) ಗಳನ್ನಾಗಿ ವಿಭಜಿಸಿದ್ದ. ಪ್ರತಿಯೊಂದು ಆಡಳಿತ ಘಟಕವನ್ನು ಹಲವಾರು ಪರಗಣಗಳನ್ನಾಗಿ ಪುನರ್ ವಿಭಜಿಸಿದ್ದ. ಪ್ರತಿಯೊಂದು ಪರಗಣವು ಹಲವು ಹಳ್ಳಿಗಳ ಸಮೂಹವಾಗಿತ್ತು. ಹಳ್ಳಿಗಳ ಆಡಳಿತ ನೋಡಿಕೊಳ್ಳಲು ಗ್ರಾಮ ಪಂಚಾಯಿತಿಗಳಿದ್ದವು. ಪಟ್ಟಾರಿ ಮತ್ತು ಚೌಕಿದಾರರು ಗ್ರಾಮಾಧಿಕಾರಿಗಳಾಗಿದ್ದರು. ಪರಗಣಗಳ ಆಡಳಿತವನ್ನು ನೋಡಿಕೊಳ್ಳಲು ಶೇಕ್‌ದಾರ ಮತ್ತು ಮುನ್ಸಿಫ್ (ಅಮೀಲ್) ರೆಂಬ ಅಧಿಕಾರಿಗಳಿದ್ದರು. ಶೇಕ್‌ ದಾರನು ಕಾನೂನು, ಸುವ್ಯವಸ್ಥೆ ಮತ್ತು ಆಡಳಿತಕ್ಕೆ ಹೊಣೆಗಾರನಾಗಿದ್ದನು. ಮುನ್ಸಿಫ್‌ನಲ್ಲಿ ಭೂಕಂದಾಯ ಸಂಗ್ರಹಣೆಯ ಅಧಿಕಾರವಿತ್ತು. ಪರ್ಶಿಯನ್ ಮತ್ತು ಸ್ಥಳೀಯ ಭಾಷೆಗಳಲ್ಲಿ ಲೆಕ್ಕಪತ್ರಗಳನ್ನು ಬರೆದಿಡಲಾಗುತ್ತಿತ್ತು. ಸರ್ಕಾರಗಳಲ್ಲಿ ಹಿರಿಯ ಅಧಿಕಾರಿಗಳಾದ ಶೇಕ್‌ದಾರ್-ಇ-ಶೇಕ್‌ದಾರನ್ ಮತ್ತು ಮುನ್ಸಿಫ್-ಮುನ್ಸಿಫ್‌ನ ಇದ್ದರು. ಶೇರ್‌ಶಾನ ಕಾಲದಲ್ಲಿ ಹೊಸದಾಗಿ ಈ ಅಧಿಕಾರಿಗಳನ್ನು ನೇಮಿಸಲಾಯಿತು.

4. ಶೇರ್‌ಶಹನ ಸೇನಾ ವ್ಯವಸ್ಥೆ

ಸೈನ್ಯ ಬಲದಿಂದಲೇ ಸಾಮ್ರಾಜ್ಯವನ್ನು ವಿಸ್ತರಿಸಿದ ಶೇರ್‌ಶಹನಿಗೆ ಸೈನ್ಯ ಸಂಘಟನೆಯ ಮಹತ್ವದ ಅರಿವಿತ್ತು. ಸೈನಿಕರ ನೇಮಕಾತಿಯನ್ನು ಸೇನಾನಾಯಕರ ವಶಕ್ಕೆ ಬಿಡದೆ, ಆರ್ಹತೆಯ ಆಧಾರದ ಮೇಲೆ ಸೈನಿಕರನ್ನು ನೇಮಕ ಮಾಡುತ್ತಿದ್ದ. ಪ್ರತಿಯೊಬ್ಬ ಸೈನಿಕನನ್ನು ಹಾಜರುಪಟ್ಟಿಯಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಅವನ ಕುದುರೆಗೆ ರಾಜಮುದ್ರೆ ಹಾಕಿಸಿ, ಕಳಪೆ ಕುದುರೆಗಳು ಸೈನ್ಯಕ್ಕೆ ಸೇರದಂತೆ ನೋಡಿಕೊಳ್ಳಲಾಗುತ್ತಿತ್ತು. ಸುಲ್ತಾನನು ತನ್ನ ಸೈನ್ಯವನ್ನು ಅನೇಕ ತುಕಡಿಗಳಾಗಿ ವಿಂಗಡಿಸಿ, ಪ್ರತಿ ತುಕಡಿಗೆ ಯುದ್ಧ ಪರಿಣಿತನಾದ ದಳಪತಿಯನ್ನು ನೇಮಿಸಿದ್ದನು. ಶೇರ್‌ಶಹನ ಸೈನ್ಯದಲ್ಲಿ 25,000 ಕಾಲಾಳುಗಳು, 1,50,000 ಕುದುರೆಗಳು, 5,000 ಆನೆಗಳು ಇದ್ದವು. ಕಾಲಾಳುಗಳು ಬಂದೂಕುದಾರಿಗಳಾಗಿದ್ದರು. ಅಲ್ಲದೆ ಇವನು ರಾಜ್ಯದ ವಿವಿಧ ಸ್ಥಳಗಳಲ್ಲಿ ಸೈನ್ಯ ಠಾಣೆಗಳನ್ನು ಸ್ಥಾಪಿಸಿ, ಅಲ್ಲೆಲ್ಲ ಪ್ರಬಲವಾದ ಸೇನೆಯನ್ನಿಟ್ಟಿದ್ದನು.

5. ನ್ಯಾಯಾಡಳಿತ

ಅಗಾಧವಾದ ನ್ಯಾಯಪ್ರಜ್ಞೆಯನ್ನು ರೂಢಿಸಿಕೊಂಡಿದ್ದ ಶೇರ್ಶಹ ನಿಷ್ಪಕ್ಷಪಾತವಾದ ನ್ಯಾಯಾಡಳಿತವನ್ನು ಜಾರಿಗೆ ತಂದನು. ತಪ್ಪಿತಸ್ಥರಾದವರು ಸಿರಿವಂತರಾಗಲಿ, ತನ್ನ ಧರ್ಮ ಅಥವಾ ಸಂಬಂಧಿಕರಾಗಲೀ ಎಲ್ಲರನ್ನೂ ಶಿಕ್ಷೆಗೆ ಗುರಿಪಡಿಸುತ್ತಿದ್ದ. ನಗರ ಮತ್ತು ಪಟ್ಟಣಗಳಲ್ಲಿ ಖಾಜಿಗಳನ್ನು ನ್ಯಾಯವಿತರಣೆಗಾಗಿ ನೇಮಿಸಿದ್ದ. ಸಾಮ್ರಾಜ್ಯದಲ್ಲಿ ತಾನೇ ಎಲ್ಲ ಪ್ರಮುಖ ಮೊಕದ್ದಮೆಗಳನ್ನು ತೀರ್ಮಾನಿಸುತ್ತಿದ್ದ. ಕಂದಾಯ ಅಧಿಕಾರಿಗಳಿಗೂ ಸಿವಿಲ್ ವ್ಯಾಜ್ಯಗಳ ಬಗ್ಗೆ ನ್ಯಾಯ ನೀಡುವ ಅಧಿಕಾರವಿದ್ದಿತು. ತಪಿತಸ್ಥರಿಗೆ ನೀಡುತ್ತಿದ್ದ ಶಿಕ್ಷೆಗಳು ಕಠಿಣವಾಗಿದ್ದವು. ಹಳ್ಳಿಗಳಲ್ಲಿ ಪಂಚಾಯಿತರು ಅಥವಾ ಜಮೀನುದಾರರಿಗೆ ನ್ಯಾಯದಾನದ ಅಧಿಕಾರ ಕೊಡಲಾಗಿತ್ತು.

6. ಪೊಲೀಸ್ ವ್ಯವಸ್ಥೆ

ಈತನ ಕಾಲದಲ್ಲಿ ಪ್ರತ್ಯೇಕವಾದ ಪೋಲೀಸ್ ಇಲಾಖೆಯಿರಲಿಲ್ಲ. ಸೈನ್ಯವೇ ಸಾಮ್ರಾಜ್ಯವನ್ನು ಒಳಗಿನ ಮತ್ತು ಹೊರಗಿನ ಶತ್ರುಗಳಿಂದ ರಕ್ಷಿಸುವ ಹೊಣೆ ಹೊತ್ತಿತ್ತು, ಆಡಳಿತದ ಅಧಿಕಾರಿಗಳೇ ಶಾಂತಿ ಮತ್ತು ಸುವ್ಯವಸ್ಥೆ ಏರ್ಪಡಿಸುವ ಜವಾಬ್ದಾರಿ ಹೊತ್ತಿದ್ದರು. ಸರ್ಕಾರಗಳಲ್ಲಿ ಶೇಕ್‌ದಾರರು ಈ ಜವಾಬ್ದಾರಿ ಹೊತ್ತಿದ್ದರು. ಪರಗಣಗಳಲ್ಲಿಯೂ ಇಂತಹುದೇ ವ್ಯವಸ್ಥೆ ಇತ್ತು. ಅಲ್ಲಿ ಅವರು ಕಳ್ಳಕಾಕರ, ದರೋಡೆಕೋರರ ಮತ್ತು ಸಮಾಜ ಘಾತಕ ವ್ಯಕ್ತಿಗಳ ಮೇಲೆ ಸದಾ ಗಮನ ಇಡಬೇಕಾಗಿದ್ದಿತು. ಗ್ರಾಮದಲ್ಲಿ ನಡೆಯುವ ಎಲ್ಲಾ ಅಪರಾಧಗಳಿಗೆ ಗ್ರಾಮದ ಮುಖಂಡರನ್ನು ಹೊಣೆ ಮಾಡುತ್ತಿದ್ದನು. ಗ್ರಾಮದ ಮುಖಂಡರಿಗೆ ಅಪರಾಧಿಯನ್ನು ಕಂಡುಹಿಡಿಯಲು ಅಥವಾ ದರೋಡೆಯಿಂದ ಆದ ನಷ್ಟವನ್ನು ತುಂಬಿಕೊಡಲು ಅವಕಾಶ ನೀಡಲಾಗಿತ್ತು. ಇಲ್ಲವಾದಲ್ಲಿ ಮರಣದಂಡನೆ ವಿಧಿಸಲಾಗುತ್ತಿತ್ತು. ಆಗಿನ ಕಾಲಕ್ಕೆ ಇದು ಒಳ್ಳೆ ವ್ಯವಸ್ಥೆ ಆಗಿತ್ತು. ತತ್ಪರಿಣಾಮವಾಗಿ ಕಳ್ಳತನ, ದರೋಡೆಗಳು ಸಂಭವಿಸುತ್ತಿರಲಿಲ್ಲ. ಇವನ ಕಾಲದಲ್ಲಿ ಪ್ರವಾಸಿಗರು ಮತ್ತು ವರ್ತಕರು ನಿರ್ಭಿತಿಯಿಂದ ಪ್ರಯಾಣಮಾಡುತ್ತಿದ್ದರಂತೆ.

7. ಭೂ ಕಂದಾಯ ವ್ಯವಸ್ಥೆ

ಶೇರ್‌ಶಹನ ಭೂ ಕಂದಾಯ ಸುಧಾರಣೆಗಳು ಭಾರತದ ಕೃಷಿರಂಗದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿವೆ. ಭೂ ಕಂದಾಯವೇ ರಾಜ್ಯದ ಆದಾಯದ ಬಹುಮುಖ್ಯ ಮೂಲವಾಗಿದ್ದರಿಂದ, ಅದರ ಕಡೆ ಹೆಚ್ಚಿಗೆ ಗಮನಹರಿಸಿದನು. ಇವನು ಜಾರಿಗೆ ತಂದ ಕಂದಾಯ ಸುಧಾರಣೆಯ ಪ್ರಮುಖ ಲಕ್ಷಣಗಳು:

  1. ತನ್ನ ಸಾಮ್ರಾಜ್ಯದ ಎಲ್ಲಾ ಭೂಮಿಯನ್ನು ಅಳತೆಮಾಡಿಸಿ ಅದರ ಉಳುಮೆ ಮತ್ತು ಉತ್ಪನ್ನದ ಆಧಾರದ ಮೇಲೆ ಕಂದಾಯವನ್ನು ನಿಗದಿಪಡಿಸಿದನು.
  2. ಭೂಮಿಯನ್ನು ಉತ್ತಮ, ಮಧ್ಯಮ ಮತ್ತು ಕನಿಷ್ಠ ಎಂದು ಮೂರು ಭಾಗಗಳಾಗಿ ಮಾಡಿ, ಹುಟ್ಟುವಳಿಯನ್ನು ನಿರ್ಧರಿಸುತ್ತಿದ್ದರು.
  3. ಬೇಸಾಯಗಾರರು ಭೂ ಉತ್ಪಾದನೆಯ ಸರಾಸರಿಯನ್ನು ಲೆಕ್ಕಹಾಕಿ ಅದರ 1/3 ಭಾಗವನ್ನು ಸರ್ಕಾರಕ್ಕೆ ಕಂದಾಯದ ರೂಪದಲ್ಲಿ ಸಲ್ಲಿಸಬೇಕಾಗಿತ್ತು.
  4. ಭೂ ಕಂದಾಯವನ್ನು ಹಣದ ರೂಪದಲ್ಲಿ ಇಲ್ಲವೆ ದವಸ ಧಾನ್ಯಗಳ ರೂಪದಲ್ಲಿ ಸಲ್ಲಿಸಬಹುದಾಗಿತ್ತು.
  5. ಸರಕಾರವು ಪ್ರತಿಯೊಬ್ಬ ಬೇಸಾಯಗಾರನಿಗೂ ಪಟ್ಟ ವನ್ನು ಕೊಡುತ್ತಿತ್ತು. ಅದರಲ್ಲಿ ಆತನು ಸರ್ಕಾರಕ್ಕೆ ನೀಡಬೇಕಾದ ಭೂ ಕಂದಾಯದ ಪ್ರಮಾಣವನ್ನು ನಮೂದಿಸಲಾಗುತ್ತಿತ್ತು.
  6. ಕಂದಾಯ ಅಧಿಕಾರಿಗಳಿಗೆ ಕಂದಾಯ ನಿಗಧಿ ಮಾಡುವಾಗ ಉದಾರವಾಗಿರಲು ಮತ್ತು ವಸೂಲಿಮಾಡುವಾಗ ಕಠಿಣವಾಗಿರಲು ನಿರ್ದೇಶನ ನೀಡಲಾಗಿತ್ತು.
  7. ಕ್ರಾಮ ಇಲ್ಲವೆ ಪ್ರಕೃತಿ ವಿಕೋಪದ ವೇಳೆಯಲ್ಲಿ ಸರ್ಕಾರಿ ಉಗ್ರಾಣಗಳಲ್ಲಿನ ಆಹಾರಧಾನ್ಯಗಳನ್ನು ಕಡಿಮೆ ದರದಲ್ಲಿ ಜನರಿಗೆ ಮಾರಾಟ ಮಾಡಲಾಗುತ್ತಿತ್ತು.
  8. ಯುದ್ಧ ಕಾಲದಲ್ಲಿ ಬೆಳೆಯನ್ನು ಹಾಳುಮಾಡದಂತೆ ಸೈನಿಕರಿಗೆ ಕಟ್ಟಪ್ಪಣೆ ಮಾಡಲಾಗಿತ್ತು. ಬೆಳೆ ಹಾಳಾದರೆ ರೈತರಿಗೆ ಪರಿಹಾರ ಹಣ ನೀಡಲಾಗುತ್ತಿತ್ತು.
  9. ಕಂದಾಯವನ್ನು ವಸೂಲಿ ಮಾಡಲು ಅಮೀರ್, ಮುಖದ್ದಂ, ಶೇಕ್‌ದಾರ್, ಕುನಂಗೊ ಮತ್ತು ಪಟ್ಟಾರಿಗಳ ಸೇವೆಯನ್ನು ಬಳಸಿಕೊಳ್ಳುತ್ತಿದ್ದರು.

ಶೇರ್‌ಶಹನಿಗೆ ರೈತ ಸಮುದಾಯದ ಕಲ್ಯಾಣದ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ʻʻಕೃಷಿಕರು ನಿರ್ದೋಷಿಗಳು, ಅವರನ್ನು ಪಮನಮಾಡಿದರೆ, ಅವರು ಊರುಗಳನ್ನು ಬಿಟ್ಟು ಗುಳೆ ಹೋಗುತ್ತಾರೆ. ಇದರಿಂದ ರಾಷ್ಟ್ರನಾಶವಾಗುತ್ತದೆ. ಪುನಃ ಅಂತಹ ಹಳ್ಳಿಗಳನ್ನು ಯಥಾಸ್ಥಿತಿಗೆ ತರಲು ಕಷ್ಟವಾಗುತ್ತದೆ ಹಾಗೂ ಬಹುಕಾಲ ತೆಗೆದುಕೊಳ್ಳುತ್ತದೆ” ಎಂದು ಹೇಳುತ್ತಿದ್ದನು. ಅಲ್ಲದೆ ರೈತರ ಶೋಷಣೆಯಿಂದ ಸುಲ್ತಾನರು ಪತನವಾಗುತ್ತಿದ್ದುದನ್ನು ಶೇ‌ರ್ ಷಾ ಆರಿತಿದ್ದನು.

8. ಇತರೆ ಆದಾಯಗಳು

ರೈತರಿಂದ ಬರುವ ಭೂ-ಕಂದಾಯವಲ್ಲದೆ, ವಾಣಿಜ್ಯ, ಟಂಕಸಾಲೆ, ಕಾಣಿಕೆಗಳು, ಜಿಜಿಯಾ ಸುಂಕ, ಉಪ್ಪಿನ ತೆರಿಗೆ, ವಾರಸುದಾರರಿಲ್ಲದ ಅಸ್ತಿ ಮುಂತಾದವುಗಳು ಕೇಂದ್ರ ವರಮಾನದ ಇತರೆ ಮೂಲಗಳಾಗಿದ್ದವು. ಸರ್ಕಾರವು ಕಚ್ಚಾವಸ್ತುಗಳ ಹಾಗೂ ಸಿದ್ಧ ವಸ್ತುಗಳ ಮೇಲೆ ಸಾಗಾಣಿಕ ತೆರಿಗೆ ವಿಧಿಸಿತ್ತು. ಸಾಮಂತರು, ಸರದಾರರು, ಅಧಿಕಾರಿಗಳು ಮತ್ತು ಸಂದರ್ಶಕರು ಅರಸಾಗೆ ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು.

9. ನಾಣ್ಯ ಸುಧಾರಣೆ :

ಶೇರ್‌ಶಹ ನಾಣ್ಯ ವ್ಯವಸ್ಥೆಯಲ್ಲೂ ಬದಲಾವಣೆಗಳನ್ನು ಜಾರಿಗೆ ತಂದನು, ನಾಣ್ಯಗಳಿಗೆ ಬಳಸುವ ಲೋಹಗಳಲ್ಲಿ, ಅವುಗಳ ಪ್ರಮಾಣದಲ್ಲಿ ಮತ್ತು ವಿನಿಮಯದಲ್ಲಿ ಕಂಡುಬಂದಿದ್ದ ಗೊಂದಲ ನಿವಾರಿಸಲು ಪ್ರಯತ್ನಿಸಿದನು. ಹಳೆಯ ನಾಣ್ಯಗಳ ಚಲಾವಣೆಯನ್ನು ನಿಲ್ಲಿಸಿ ಹೊಸ ನಾಣ್ಯ ಪದ್ಧತಿಯನ್ನು ಜಾರಿಗೆ ತಂದನು. ನಿರ್ದಿಷ್ಟ ತೂಕವನ್ನು ಹೊಂದಿದ್ದ ಬಂಗಾರ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದನು. ಶೇರ್‌ಶಹನ ಬೆಳ್ಳಿಯ ರೂಪಾಯಿ 180 ಡ್ರೈನ್ ತೂಕವಿದ್ದಿತ್ತು. ಈ ರೂಪಾಯಿ (ಅದರಲ್ಲಿದ್ದ ಬರಹ ಹೊರತಾಗಿ) ಪೂರ್ಣ ಮೊಗಲ್ ಕಾಲದಲ್ಲಿ ಜಾರಿಯಲ್ಲಿತ್ತು. ಅಲ್ಲದೆ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯು ಕ್ರಿ.ಶ. 1835ರವರೆಗೆ ಈ ನಾಣ್ಯವನ್ನು ಮುಂದುವರಿಸಿತು.

ಆಗ್ರಾ, ಗ್ವಾಲಿಯರ್, ಲಖ್‌ನೌ, ಸಸರಾಮ, ಉಜ್ಜಯಿನಿ ಮುಂತಾದ ಕಡೆ ಟಂಕಶಾಲೆಗಳಿದ್ದವು. ಈ ಟಂಕಶಾಲೆಗಳು ಶೇರ್‌ಶಹನ ಸಾಮ್ರಾಜ್ಯದ ಗಡಿಗಳನ್ನು ಸೂಚಿಸುತ್ತವೆ.

10. ಲೋಕೋಪಯೋಗಿ ಕಾರ್ಯಗಳು

ಶೇರ್‌ಸಹನು ರಾಜ್ಯದ ಸಂಪರ್ಕ ವ್ಯವಸ್ಥೆಯನ್ನು ಉತ್ತಮಗೊಳಿಸಲು ತೀವ್ರವಾದ ಆಸಕ್ತಿಯನ್ನು ಹೊಂದಿದ್ದನು. ಸಾಮ್ರಾಜ್ಯದ ಬೇರೆ ಬೇರೆ ಭಾಗಗಳು ರಾಜಧಾನಿಯೊಡನೆ ಸಂಪರ್ಕ ಹೊಂದುವಂತೆ ಹಲವು ಹೊಸ ಮಾರ್ಗಗಳನ್ನು ನಿರ್ಮಿಸಿದನು ಮತ್ತು ಹಳೆಯ ಮಾರ್ಗಗಳನ್ನು ದುರಸ್ತಿಗೊಳಿಸಿದನು. ತನ್ನ ರಾಜಧಾನಿಯನ್ನು ಸಂಪರ್ಕಿಸುವಂತೆ ನಾಲ್ಕು ಮುಖ್ಯ ಹೆದ್ದಾರಿಗಳನ್ನು ನಿರ್ಮಿಸಿದನು. ಅವುಗಳೆಂದರೆ,

|ಬಾಂಗ್ಲಾದೇಶದ ಸೋನಾ‌ರ್‌ಗಾಂವ್‌ನಿಂದ ಆಗ್ರಾ, ದೆಹಲಿಯ ಮುಖಾಂತರ ಲಾಹೋರನ್ನು ಸಂಪರ್ಕಿಸಿದ್ದಿತು. ಇದನ್ನು “ಸಡಕ್-ಇ-ಅಜಂ” ಎನ್ನಲಾಗಿತ್ತು.

  1. ಆಗ್ರಾದಿಂದ ಬರ್ಹಾನಪುರಕ್ಕೆ ಹೋಗುವ ಮಾರ್ಗ
  2. ಆಗ್ರಾದಿಂದ ಚಿತೋಡಕ್ಕೆ ಹೋಗುವ ಮಾರ್ಗ
  3. ಲಾಹೋರ್‌ನಿಂದ ಮುಲ್ತಾನಕ್ಕೆ ಹೋಗುವ ಮಾರ್ಗ.

ಈ ಮೇಲಿನ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಸಾಲು ಮರಗಳನ್ನು ನೆಡಿಸಿದನು. ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿ ಎಂಟು ಕಿಲೋಮೀಟರಿಗೆ ಸರಾಯ್ ಅಥವಾ ಅತಿಥಿಗೃಹಗಳನ್ನು ಕಟ್ಟಿಸಿದನು. ಸರಾಯ್‌ಗಳಲ್ಲಿ ಅನ್ನ ವಸತಿ ದೊರೆಯುತ್ತಿತ್ತು.

ಹಿಂದೂ ಮತ್ತು ಮುಸ್ಲಿಂ ಧರ್ಮಿಯರಿಗೆ ಪ್ರತ್ಯೇಕವಾಗಿ ವಸತಿ ಸೌಕರ್ಯವನ್ನು ಒದಗಿಸಲಾಗುತ್ತಿತ್ತು. ಶೇರ್ಶಹ ತನ್ನ ರಾಜ್ಯಾದ್ಯಂತ ಒಟ್ಟು 1700 ಸರಾಯ್ಗಳನ್ನು ಕಚ್ಚಿಸಿದ್ದ. ದಾಗಿ ಖನುಂಗೋ ರವರ ಪ್ರಕಾರ ಸಾನಾಯ್ಗಳು “ಸಾಮ್ರಾಜ್ಯದ ವಿಜವಾದ ರಕ್ತಪಾಡಿಗಳಾಗಿದ್ದವು”, ಸೈನ್ಯಗಳ ಚಲನವಲನಕ್ಕೆ ಮಾತ್ರವೇ ಅಲ್ಲದೆ ಅವುಗಳು ರಕ್ಷಣೆ ಮತ್ತು ಸುದ್ದಿ ವಿನಿಮಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದ್ದವು. ವ್ಯಾಪಾರ, ವಾಣಿಜ್ಯ ಮತ್ತು ಅಂಚೆ ವ್ಯವಸ್ಥೆಗೆ ಸಹಕಾರಿಯಾಗಿದ್ದವು.

ಶೇರ್‌ಶಹನ ವ್ಯಕ್ತಿತ್ವ :

ಮಧ್ಯಯುಗದ ಭಾರತೀಯ ಇತಿಹಾಸದಲ್ಲಿ ಶೇ‌ರ್ಷಹ ಆಕರ್ಷಕ ವ್ಯಕ್ತಿ. ಬದುಕಿನ ಎಲ್ಲಾ ಕ್ಷೇತ್ರಗಳ ಪೂರ್ಣ ಅರಿವಿದ್ದ ಇವನು ದೇಶಕ್ಕೆ ಅತ್ಯುತ್ತಮ ಅಡಳಿತ ನೀಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ದೈತ್ಯ ಶಕ್ತಿಯಾದ ಮೊಘಲರನ್ನು ಭಾರತದಿಂದ ಹೊರಹಾಕಿ, ಪ್ರಬಲ ಸಾಮ್ರಾಜ್ಯವನ್ನು ಸಂಘಟಿಸಿದ್ದು ಆತನ ಅದ್ಭುತವಾದ ಸಾಧನೆ, ಇವನ ಸುಧಾರಣೆಗಳು ಮೊಗಲ್ ದೊರೆ ಆಕ್ಟರನ ಸಾಧನೆಗಳಿಗೆ ದಾರಿದೀಪವಾಯಿತು. ಭ್ರಷ್ಟಾಚಾರ ಮುಕ್ತವಾದ, ಕಳ್ಳತನ ದರೋಡೆ ಮತ್ತು ಕೊಲೆಗಳಿಲ್ಲದ ಆದರ್ಶ ಸಮಾಜದ ನಿರ್ಮಾಪಕನೆಂಬುದನ್ನು ಮರೆಯುವಂತಿಲ್ಲ, ಸಸಾರಾಂನಲ್ಲಿ ಅವನೇ ಅವನಿಗಾಗಿ ಕಟ್ಟಿಸಿರುವ ಗೋರಿಯು ಅದ್ಭುತ ಕೌಶಲ್ಯದ ಪ್ರತೀಕವಾಗಿದೆ. ದೆಹಲಿ ಸುಲ್ತಾನರ ವಾಸ್ತುಶಿಲ್ಪದ ವೈಭವವನ್ನು ಈ ಗೋರಿಯಲ್ಲಿ ನೋಡಬಹುದು. ದೆಹಲಿಯಲ್ಲಿ ಯಮುನಾ ನದಿಯ ದಡದ ಮೇಲೆ ನವೀಸವಾದ ನಗರವನ್ನು ನಿರ್ಮಾಣ ಮಾಡಿದ. ಇದನ್ನು ʻಪುರಾನ ಕಿಲಾ’ ಎನ್ನುತ್ತಾರೆ. ಇವರಲ್ಲಿ ಸುಂದರವಾದ ಮಸೀದಿಯೊಂದಿದೆ.

ಶೇರ್ ಶಹ ಧಾರ್ಮಿಕವಾಗಿ ಉದಾರನೀತಿಯನ್ನು ಹೊಂದಿಲ್ಲದಿದ್ದರೂ ಆಸಹಿಷ್ಣುವಾಗಿರಲಿಲ್ಲ. ಶೇರ್ ಶಹನ ಮರಣಾನಂತರ ಅಧಿಕಾರಕ್ಕೆ ಬಂದ ಉತ್ತಾರಾಧಿಕಾರಿಗಳು ಅಸಮರ್ಥರಾಗಿದ್ದರು. ಅವರ ಅಧಿಕಾರ ಲಾಲಸೆ ಮೊಗಲ್ ದೊರೆ ಹುಮಾಯೂನ್ ಮರಳಿ ಅಧಿಕಾರಕ್ಕೆ ಬರಲು ಅವಕಾಶವಾಯಿತು. ಅಲ್ಲಿಗೆ ಸೂರ್ ವಂಶದ ಆಳ್ವಿಕೆ ಅಂತ್ಯಗೊಂಡಿತು.