ಮಾನವನಿಗೆ ಊಟ, ನಿದ್ರೆ, ಆಹಾರ ಹಾಗೂ ವಸತಿ ಹೇಗೆ ಅಗತ್ಯವಾಗಿದೆಯೋ ಹಾಗೇ ಗಾಳಿಯೂ ಅಗತ್ಯವಾಗಿ ಬೇಕು. ಉಸಿರಾಟಕ್ಕೆ ಶುದ್ಧವಾದ ಗಾಳಿ ಮನುಷ್ಯನಿಗೆ ಅವಶ್ಯಕವಾಗಿದೆ. ಆಹಾರವಿಲ್ಲದೆ, ನೀರಿಲ್ಲದೆ, ಮನುಷ್ಯ ಹಲವು ದಿನಗಳ ಕಾಲ ಬದುಕಬಲ್ಲ. ಆದರೆ ಗಾಳಿ ಇಲ್ಲದಿದ್ದರೆ ಮೂರು ನಿಮಿಷವೂ ಬದುಕಿರಲಾರ. ಒಂದು ವೇಳೆ ಆಮ್ಲಜನಕ  ಮಾನವನಿಗೆ ದೊರಕದೆ ಹೋದರೆ ಅವನ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ವಾಯು ಮಾಲಿನ್ಯ ಇಂದು ಎಲ್ಲಾ ಕಡೆಗಳಲ್ಲಿ ಹೆಚ್ಚು ಹೆಚ್ಚು ಕಂಡುಬರುತ್ತದೆ. ಅಂತಹ ಮಾಲಿನ್ಯದಿಂದ ಆಗುವ ಪರಿಣಾಮಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

1. ಇಂಗಾಲದ ಡೈ ಆಕ್ಸೈಡ್‌:

ಇಂಗಾಲದ ಡೈ ಆಕ್ಸೈಡ್‌ ವಾಯುಮಂಡಲದ ಅನಿಲಗಳಲ್ಲಿ ಅತ್ಯಂತ ಪ್ರಮುಖವಾದುದು. ಇದು ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿರಬೇಕು. ಆದರೆ ಇಂಧನಗಳು ಉರಿದಾಗ ಹಾಗೂ ಥರ್ಮಲ್‌ ವಿದ್ಯುತ್‌ ಸ್ಥಾವರ, ಕೈಗಾರಿಕೆಗಳು, ವಾಹನಗಳು ಹಾಗೂ ಜ್ವಾಲಾಮುಖಿ ಸ್ಫೋಟಗೊಂಡಾಗ ಹೊಗೆ ಉಸಿರಾಟದ ಮುಖಾಂತರ ದೇಹವನ್ನು ಸೇರುತ್ತದೆ. ಇದು ಹಿಮೊಗ್ಲೋಬಿನ್‌ ಜೊತೆ ಸೇರಿ ಕಾರ್ಬಾಕ್ಸಿ ಹಿಮೋಗ್ಲೋಬಿನ್‌ ಆಗಿ ಪರಿವರ್ತನೆ ಹೊಂದುತ್ತದೆ. ಆಗ ಇದು ರಕ್ತದಲ್ಲಿ ಆಮ್ಲಜನಕದ ಸರಬರಾಜನ್ನು ಕಡಿಮೆಗೊಳ್ಳುತ್ತದೆ. ಇದರಿಂದಾಗಿ ಮನಸ್ಸಿನ ಏಕಾಗ್ರತೆ ಕಡಿಮೆಯಾಗಿ ಮನುಷ್ಯ ಹುಚ್ಚನಂತೆ ವರ್ತಸುತ್ತಾನೆ. ಅತಿಯಾದ ಇಂಧನದ ಬಿಡುಗಡೆಯಿಂದಾಗಿ ಭೂಮಿಯ ತಾಪಮಾನ ಏರಿಕೆಯಾಗುತ್ತದೆ.

2. ಇಂಗಾಲದ ಮೊನಾಕ್ಸೈಡ್‌:

ಇಂಗಾಲದ ಮೊನಾಕ್ಸೈಡ್‌ ಸೌಧೆಗಳನ್ನು ಅರ್ಧಂಬರ್ಧ ಸುವುವುದರಿಂದ ಬಿಡುಗಡೆಯಾಗುತ್ತದೆ. ಇದರೊಂದಿಗೆ ಮನೆಯಲ್ಲಿನ ಸ್ಟೌವ್‌ಗಳು, ಗ್ರಾಮೀಣಭಾಗದ ಕುಲುಮೆ, ಕಾರ್ಖಾನೆ, ಹೊಗೆ ಹಾಗೂ ಧೂಮಪಾನ ಮಾಡುವುದರಿಂದಲೂ ಇಂಗಾಲದ ಮೊನಾಕ್ಸೈಡ್‌ ವಾತಾವರಣದಲ್ಲಿ ಸೇರಿಕೊಳ್ಳುತ್ತದೆ. ಇದು ಅತ್ಯಂತ ಅಪಾಯಕಾರಿಯಾದ ಅನಿಲವಾಗಿದ್ದು ಪ್ರಾಣಾಪಾಯಕ್ಕೂ ಕಾರಣವಾಗುತ್ತದೆ.

3. ಸಲ್ಫರ್‌ ಡೈ ಆಕ್ಸೈಡ್‌:

ಇದು ಥರ್ಮಲ್‌ ವಿದ್ಯುತ್‌ ಕೇಂದ್ರಗಳು, ತೈಲ ಶುದ್ಧೀಕರಣ ಕೇಂದ್ರಗಳು ಹಾಗೂ ಸ್ವಯಂಚಾಲಿತ ವಾಹನಗಳಿಂದ ಬಿಡುಗಡೆಯಾಗುತ್ತದೆ. ಇದು ಸಹ ಮಾನವನ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡುತ್ತದೆ.

4. ಕ್ಲೋರೋ ಪೋರೋಕಾರ್ಬನ್ಸ್‌:

ಶೈತ್ಯಾಗಾರ, ರೆಫ್ರಿರೇಟರ್‌, ಪೋಮ್‌ಪ್ಲಾಸ್ಟಿಕ್‌, ಸೌಂದರ್ಯವರ್ಧಕ ಮುಂತಾದ ಅಂಶಗಳು ಇದರಲ್ಲಿವೆ. ಇವುಗಳ ಸಾಂಧ್ರೀಕರಣವು ವಾಯುಮಾಲಿನ್ಯದ ಅಪಾಯಕಾರಿ ಅನಿಲವಾಗಿದೆ. ಇದು ಓಜೋನ್‌ ಪದರು ನಾಶವಾಗಲು ಕಾರವಾಗುತ್ತದೆ.

5. ರಸಾಯನಿಕ ಸ್ಮಾಗ್‌ : 

ಸ್ಮಾಗ್‌ ಮುಸುಕಾದ ಗಾಳಿಯಂತಿದ್ದು ಉಸಿರಾಟದ ತೊಂದರೆಯನ್ನುಂಟು ಮಾಡುತ್ತದೆ. ನೀರಾವಿ ಹಾಗೂ ದೂಳಿನ ಜೊತೆ ಸೇರಿ ಇದು ರಚನೆಗೊಳ್ಳುತ್ತದೆ. ಇದು ಆಮ್ಲಮಳೆಗೆ ಕಾರವಾಗುತ್ತದೆ. ಉಸಿರಾಟದ ತೊಂದರೆಗೆ ಕಾರಣವಾಗುವುದು. ಇದರಿಂದ ಶ್ವಾಸಕೋಶಗಳಿಗೆ ಹಾನಿಯಾಗುವ ಕಾರಣ ಸಾವು ಬರುತ್ತದೆ.

6. ವಾಯುಮಾಲಿನ್ಯದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳು : 

ಸಲ್ಫರ್‌ ಡೈ ಆಕ್ಸೈಡ್‌ ಮತ್ತು ಇಂಗಾಲದ ಮೊನಾಕ್ಸೈಡ್‌ಗಳಂತಹ ವಿಷಾನಿಲಗಳು ವಾಯುಮಂಡಲ ಸೇರಿಕೊಂಡರೆ ವಾತಾವರಣ ಮಲೀನವಾಗುತ್ತದೆ. ಆಗ ಮಾನವರು ಈ ವಿಷಾನಿಲವನ್ನು ಸೇವಿಸಿದರೆ ಹೃದಯ ಸಂಬಂಧಿ ಖಾಯಿಲೆಗಳು, ಶ್ವಾಸಕೋಶ ಸಂಬಂಧಿ ಕಾಯಿಲೆ, ಅರ್ಬುದ ರೋಗ, ಗಂಟಲು, ಕಿವಿ, ಬಾಯಿರೋಗ, ನಿಮೋನಿಯಾದಂತಹ ರೋಗಗಳು ಬರುತ್ತವೆ. ಕೆಲಮೊಮ್ಮೆ ಆಮ್ಲಜನಕದ ತೊಂದರೆಯನ್ನು ಅನುಭವಿಸಬಹುದು.

7. ಹೊಗೆಸೊಪ್ಪಿನ ಹೊಗೆ:

ಹೊಗೆಸೊಪ್ಪಿನಲ್ಲಿ ನಿಕೋಟಿನ್‌ ಎಂಬ ಮಾದಕ ವಸ್ತು ಇರುತ್ತದೆ. ಈ ಹೊಗೆಸೊಪ್ಪನ್ನು ಎಲೆ ಅಡಿಕೆಯ ಜೊತೆಗೆ ಜಗಿಯಲು ಸಿಗರೇಟ್‌ ಸೇದಲು, ಬೀಡಿ ಸೇದಲು ಬಳಸುತ್ತಾರೆ. ಇದರೊಳಗೆ ಬೆನ್ಸೊಪೈರಿಕ್‌ ಅಂಶ ಇದ್ದು ಕ್ಯಾನ್ಸರಿಗೆ ಕಾರಣವಾಗುತ್ತದೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್‌ ಖಾಯಿಲೆ ಹರಡುತ್ತದೆ. 

8. ಹಸಿರು ಮನೆ ಪರಿಣಾಮ:

ದಟ್ಟವಾದ ಇಂಗಾಲದ ಡೈಆಕ್ಸೈಡ್‌ ಸ್ತರವು ಹಸಿರುಮನೆ ಗಾಜಿನಂತೆ ವರ್ತಿಸುತ್ತದೆ. ಹೀಗೆ ಹಸಿರುಮನೆ ಅನಿಲಗಳು ಶಾಖವನ್ನು ನೆಲದ ಕಡೆಗೆ ಬಿಡುವಕಾರಣ ಭೂಮಂಡಲ ಅತೀ ಶಾಖದಿಂದಿರುವಂತೆ ಮಾಡುತ್ತದೆ. ಹಸಿರುಮನೆಯ ಪರಿಣಾಮವಾಗಿ ಮಳೆಯ ಪ್ರಮಾಣ ಕೆಡಿಮೆಯಾಗಿ ಮಣ್ಣಿನ ತೇವಾಂಶವು ಇಲ್ಲದಂತಾಗುತ್ತದೆ. ಸಾಗರೀಯ ಆಮ್ಲೀಯತೆಯು ಜಲಚರಗಳ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.  

9. ಭೂಮಿಯ ತಾಪಮಾನ : 

ಹಸಿರು ಮನೆ ಪರಿಣಾಮದಿಂದ ಭೂಮಿಯ ಕಾಯುವಿಕೆ ಹೆಚ್ಚಾಗುತ್ತದೆ. ಆಗ ಭೂಪ್ರದೇಶದ ಹಿಮ ಮತ್ತು ನಿರ್ಗಲ್ಲುಗಳು ಕರಗುತ್ತವೆ. ಇದರಿಂದ ನೀರಿನ  ಮಟ್ಟದಲ್ಲಿ ಏರಿಕೆಯಾಗಿ ಸಮುದ್ರ ತೀರಗಳು ಹಾಗೂ ನದಿ ಮುಖಜ ಭೂಮಿಗಳು ಮುಳುಗಡೆಯಾಗಬಹುದು.

10. ತೇಲಾಡುವ ದೂಳಿನ ಕಣಗಳು:

ತೇಲಾಡುವ ದೂಳಿನ ಕಣಗಳು ವಾಯುಮಂಡಲದೊಳಗೆ ಸೇರಿಕೊಂಡರೆ ಅದರಿಂದ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಇದರಿಂದ ಹೃದಯ ರೋಗ ಹಾಗೂ ಅತೀ ಹೆಚ್ಚು ಸಾವಿಗೂ ಸಂಬಂಧವಿದೆಯೆಂದು ಹೇಳಲಾಗಿದೆ. ಭಾರತದಲ್ಲಿ ಪ್ರತಿದಿನ ನಗರ ಪ್ರದೇಶಗಳಲ್ಲಿ 20 ರಿಂದ 25 ಟನ್‌ಗಳಷ್ಟು ಗಂಧಕದ ಡೈ ಆಕ್ಸೈಡ್‌, 80 ರಿಂದ 100 ಟನ್‌ ಇಂಗಾಲದ ಮೊನಾಕ್ಸೈಡ್‌, 60 ರಿಂದ 80 ಟನ್‌ಗಳಷ್ಟು ಹೈಡ್ರೋಕಾರ್ಬನ್‌ ಸಂಯುಕ್ತಗಳು ಹಾಗೂ 80 ಟನ್‌ಗಳಷ್ಟು ಸಾರಜನಕ ಆಕ್ಸೈಡ್‌ಗಳು ವಾಯು ಮಂಡಲವನ್ನು ಸೇರಿ ವಾಯುಮಾಲಿನ್ಯವನ್ನು ಉಂಟುಮಾಡುತ್ತವೆ. 

11. ಓಜೋನ್‌ ಪದರು ನಾಶ:

ವಾಯುಮಾಲಿನ್ಯದಿಂದ ಓಜೋನ್‌ ಪದರು ತೆಳುವಾಗಿ ಭೂಮಿಯ ತಾಪಮಾನ ಈಗಿರುವುದಕ್ಕಿಂತ ಎರಡರಷ್ಟಾಗಬಹುದು. ಆಗ ಭೂಮಿಯ ಮೇಲೆ ಒಂದು ಜೀವಿಯೂ ಉಳಿಯಲು ಸಾಧ್ಯವಿಲ್ಲ. 

12. ಸಾಕು ಪ್ರಾಣಿಗಳ ನಾಶ:

ಮಾನವನ ಹಾಗೆಯೇ ಸಸ್ಯಗಳು ಮತ್ತು ಪ್ರಾಣಿಗಳೂ ಸಹ ವಾಯುಮಾಲಿನ್ಯದಿಂದ ಸರ್ವನಾಶವಾಗುತ್ತವೆ. ಅವುಗಳ ಹಾಲು ಮತ್ತು ಅವುಗಳಿಂದ ಜನಿಸುವ ಕರುಗಳಿಗೂ ಈ ವಿಷಕಾರಕ ಅಂಶಗಳು ಅಂಟಿಕೊಂಡಿರುತ್ತವೆ. 

13. ವಸ್ತುಗಳ ನಾಶ:

ವಾಯು ಮಾಲಿನ್ಯದ ಪರಿಣಾಮವಾಗಿ ನಾವು ದಿನನಿತ್ಯ ಉಪಯೋಗಿಸುವ ವಸ್ತುಗಳಾದ ರಬ್ಬರ್‌, ಕಾಗದ, ಬಟ್ಟೆ, ಗಾಜಿನ ಮೇಲ್ಮೈಗಳು ಹಾಳಾಗುವ ಸಾಧ್ಯತೆ ಹೆಚ್ಚು.

ಉಪಸಂಹಾರ 

ವಾಯುಮಾಲಿನ್ಯವು ಕೇವಲ ಮಾನವನ ಆರೋಗ್ಯಕ್ಕೆ ಮಾತ್ರವಲ್ಲದೆ ಸಸ್ಯ, ಪ್ರಾಣಿ ಹಾಗೂ ಸಂಪೂರ್ಣ ಪರಿಸರ ವ್ಯವಸ್ಥೆಯನ್ನೇ ಹಾನಿಗೊಳಿಸುತ್ತಿದೆ. ಹಸಿರುಮನೆ ಪರಿಣಾಮ, ಭೂಮಿಯ ತಾಪಮಾನ ಏರಿಕೆ ಹಾಗೂ ಓಜೋನ್‌ ಪದರದ ನಾಶವು ಭವಿಷ್ಯದಲ್ಲಿ ಭೂಮಿಯ ಜೀವಿತವನ್ನೇ ಅಪಾಯಕ್ಕೆ ಒಳಪಡಿಸುತ್ತದೆ. ಆದ್ದರಿಂದ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಮರ ನೆಡುವುದು, ಸ್ವಚ್ಛ ಇಂಧನ ಬಳಕೆ ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅತ್ಯಾವಶ್ಯಕ. ಇಂದೇ ಜಾಗೃತರಾಗದಿದ್ದರೆ ನಾಳೆಯ ಭವಿಷ್ಯ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ