ʻʻದೇಶದ ಸುವ್ಯವಸ್ಥಿತ ಹಾಗೂ ಶಾಂತಿಯುತ ಆಡಳಿತಕ್ಕೆ ಭಂಗ ಉಂಟಾಗುವ ಸನ್ನಿವೇಶವನ್ನು ತುರ್ತು ಪರಿಸ್ಥಿತಿ ಎಂದು ಕರೆಯಲಾಗಿದೆ.ʼʼ ಇಂತಹ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಿ ದೇಶವನ್ನು ಸುಸ್ಥಿರವಾಗಿಡಲು ರಾಷ್ಟ್ರಪತಿಗಳು ಮೂರು ಬಗೆಯ ತುರ್ತುಪರಿಸ್ಥಿತಿಗಳನ್ನು ಘೋಷಿಸುತ್ತಾರೆ. ಅವುಗಳು ಈ ಕೆಳಗಿನಂತಿವೆ:

ರಾಷ್ಟ್ರೀಯ ತುರ್ತು ಪರಿಸ್ಥಿತಿ: (National Emergency)

 ಸಂವಿಧಾನದ 352ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು, ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುವರು. ರಾಷ್ಟ್ರಪತಿಗಳು ದೇಶದ ಭದ್ರತೆಗೆ ಬಾಹ್ಯ ಆಕ್ರಮಣ ಅಥವಾ ಆಂತರಿಕ ದಂಗೆಗಳ ಕಾರಣಗಳಿಂದ ಭಯವಿದೆ ಎಂದುಕಂಡುಬಂದರೆ. ಅವರು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಾರೆ. ತುರ್ತು ಪರಿಸ್ಥಿತಿ ಘೋಷಣೆಯಾದ 30 ದಿನದೊಳಗೆ ಸಂಸತ್ತಿನ ಉಭಯ ಸದನಗಳ ೨/೩  ರಷ್ಟು ಸದಸ್ಯರು ಹಾಜರಿದ್ದು ಅದಕ್ಕೆ ಅಂಕಿತವನ್ನು ಹಾಕಬೇಕು. ಇಲ್ಲವಾದರೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿ ಸ್ಥಗಿತಗೊಳ್ಳುತ್ತದೆ. ಸಂಸತ್ತಿನ ಅನುಮೋದನೆಗೊಂಡ ತುರ್ತುಪರಿಸ್ಥಿತಿಯು ಜಾರಿಗೆ ಬಂದ ದಿನದಿಂದ ಆರು ತಿಂಗಳವರೆಗೆ ಜಾರಿಯಲ್ಲಿರುತ್ತದೆ. ಆರು ತಿಂಗಳ ನಂತರವೂ ತುರ್ತುಪರಿಸ್ಥಿತಿ ಮುಂದುವರಿಯಬೇಕಾದರೆ  ತುರ್ತು ಪರಿಸ್ಥಿತಿ ಘೋಷಣೆಯನ್ನು ಮರಳಿ ಅನುಮೋದಿಸಬೇಕಾಗುತ್ತದೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ರದ್ದುಗೊಳಿಸಲು ಲೋಕಸಭೆಯ ಒಟ್ಟು ೧/೧೦  ರಷ್ಟು ಸದಸ್ಯರು ಲಿಖಿತ ರೂಪದಲ್ಲಿ ನೋಟಿಸ್ ಅನ್ನು ಅಧಿವೇಶನದ ಸಮಯದಲ್ಲಿ ಸ್ಪೀಕರ್ ಅವರಿಗೆ ಅಥವಾ ಅಧಿವೇಶನ ಮುಂದೂಡಿದಾಗ ರಾಷ್ಟ್ರಪತಿಗೆ ಕೊಡಬಹುದು. ಈ ನೋಟಿಸ್ ತಲುಪಿಸಿದ 14 ದಿನಗಳೊಳಗೆ ಲೋಕಸಭೆಯ ವಿಶೇಷ ಅಧಿವೇಶನ ಕರೆಯಬಹುದು. ತುರ್ತುಪರಿಸ್ಥಿತಿಯನ್ನು ರದ್ದುಗೊಳಿಸಬಹುದೆಂದು ಅಲ್ಪ ಬಹುಮತದಿಂದ ಲೋಕಸಭೆ ಒಪ್ಪಿದರೆ ಅದು ರದ್ದಾಗುತ್ತದೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿರುವಾಗ ಕೇಂದ್ರ ಸರ್ಕಾರದ ಆಡಳಿತಾತ್ಮಕ ನಿರ್ಧಾರಗಳನ್ನು ರಾಜ್ಯ ಸರ್ಕಾರಗಳು ಪಾಲಿಸಬೇಕಾಗುತ್ತದೆ.

B.ರಾಜ್ಯ ತುರ್ತು ಪರಿಸ್ಥಿತಿ: (State Emergency)

ಭಾರತದ ಒಕ್ಕೂಟದ ಯಾವುದಾದರೂ ರಾಜ್ಯದಲ್ಲಿನ ಆಡಳಿತ ಯಂತ್ರ ಕುಸಿದು ಬಿದ್ದಾಗ ರಾಜ್ಯಪಾಲರ ವರದಿಯನ್ನು ಆಧರಿಸಿ ರಾಷ್ಟ್ರಪತಿಗಳು ಆ ರಾಜ್ಯದಲ್ಲಿ ಘೋಷಿಸುವ ತುರ್ತು ಪರಿಸ್ಥಿತಿಗೆ ರಾಜ್ಯ ತುರ್ತುಪರಿಸ್ಥಿತಿ ಎಂದು ಕರೆಯುತ್ತೇವೆ.ʼʼ ಈ ಬಗ್ಗೆ ತುರ್ತು ಪರಿಸ್ಥಿತಿಯನ್ನು ರಾಷ್ಟ್ರಪತಿ ಆಳ್ವಿಕೆ ಎಂದು ಹೇಳಲಾಗುತ್ತದೆ.ʼʼ ಸಂವಿಧಾನದ 356ನೇ ವಿಧಿಯಂತೆ ರಾಷ್ಟ್ರಪತಿಗಳು ರಾಜ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸುವರು

 C .ಆರ್ಥಿಕ ತುರ್ತು ಪರಿಸ್ಥಿತಿ: (Econamic Emergency)

ದೇಶದ ಆರ್ಥಿಕ ಪರಿಸ್ಥಿತಿ ದುಸ್ಥಿತಿಗೆ ಒಳಗಾದಾಗ ರಾಷ್ಟ್ರಪತಿಗಳು ಘೋಷಿಸುವ ತುರ್ತು ಪರಿಸ್ಥಿತಿಯನ್ನು ಆರ್ಥಿಕ ತುರ್ತು ಪರಿಸ್ಥಿತಿ ಎಂದು ಕರೆಯುವರು.

ಉಪಸಂಹಾರ

ತುರ್ತು ಪರಿಸ್ಥಿತಿ ಘೋಷಣೆ ದೇಶದ ಆಡಳಿತವನ್ನು ಸುಸ್ಥಿರಗೊಳಿಸುವ ಮಹತ್ವದ ಉಪಕರಣವಾಗಿದೆ. ಆದರೆ ಇದರ ದುರುಪಯೋಗವು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯನ್ನುಂಟುಮಾಡಬಹುದು. ಆದ್ದರಿಂದ ಸಂವಿಧಾನದಲ್ಲಿ ನಿಗದಿಪಡಿಸಿದ ನಿಯಮಗಳು ಮತ್ತು ಸಂಸತ್ತಿನ ಮೇಲ್ವಿಚಾರಣೆ ಅಗತ್ಯವಾಗಿದೆ. ತುರ್ತು ಪರಿಸ್ಥಿತಿಯ ಸರಿಯಾದ ಅರಿವು ಪ್ರಜೆಯಾಗಿ ನಮ್ಮ ಕರ್ತವ್ಯವನ್ನು ಬಲಪಡಿಸುತ್ತದೆ.