ಶಂಕರಾಚಾರ್ಯರ ಜೀವನ ಮತ್ತು ಬೋಧನೆಗಳು

ಶಂಕರಾಚಾರ್ಯರ ಜೀವನ ಮತ್ತು ಬೋಧನೆಗಳು

ಬಾಲ್ಯ

ಅದ್ವೈತ ವೇದಾಂತದ ಪೂಜ್ಯ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರು 788 CE ವರ್ಷದಲ್ಲಿ ತಿರುವಾಂಕೂರಿನ (ಈಗ ಕೇರಳದ ಭಾಗ) ಒಂದು ಸಣ್ಣ ಹಳ್ಳಿಯಾದ ಕಾಲಡಿಯಲ್ಲಿ ಜನಿಸಿದರು. ಅವರ ತಂದೆ ಶಿವಗುರು ಮತ್ತು ತಾಯಿ ಆರ್ಯಾಂಭ ನಂಬೂದರಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು ಮತ್ತು ಶಂಕರಾಚಾರ್ಯರಿಗೆ ಶಿಕ್ಷಣದಲ್ಲಿ ಭದ್ರ ಬುನಾದಿಯನ್ನು ಒದಗಿಸಿದರು. ದುರಂತವೆಂದರೆ, ಅವನು ತನ್ನ ಐದನೇ ವಯಸ್ಸಿನಲ್ಲಿ ತನ್ನ ತಂದೆಯನ್ನು ಕಳೆದುಕೊಂಡನು, ಮತ್ತು ಅವನ ತಾಯಿ ಅವನ ಪ್ರಾಥಮಿಕ ಆರೈಕೆದಾರರಾದರು.

ಚಿಕ್ಕ ವಯಸ್ಸಿನಿಂದಲೂ ಶಂಕರಾಚಾರ್ಯರು ಅಸಾಧಾರಣ ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಅತೃಪ್ತ ಕುತೂಹಲವನ್ನು ಪ್ರದರ್ಶಿಸಿದರು. ಅವರ ಅಸಾಧಾರಣ ಪ್ರತಿಭೆ ಮತ್ತು ಆಧ್ಯಾತ್ಮಿಕ ಮಾರ್ಗದ ಕಡೆಗೆ ಒಲವು ಸ್ಪಷ್ಟವಾಗಿತ್ತು, ಅದು ಅವರ ತಾಯಿಗೆ ಸಂಬಂಧಿಸಿದೆ. ಆರ್ಯಾಂಭ ತನ್ನ ಮಗನಿಗೆ ಮದುವೆ ಸೇರಿದಂತೆ ಹೆಚ್ಚು ಸಾಂಪ್ರದಾಯಿಕ ಜೀವನವನ್ನು ಆಶಿಸಿದರು. ಮದುವೆಯನ್ನು ಏರ್ಪಡಿಸಲು ಆಕೆಯ ಪ್ರಯತ್ನಗಳ ಹೊರತಾಗಿಯೂ, ಶಂಕರಾಚಾರ್ಯರು ಸನ್ಯಾಸಿ ಜೀವನವನ್ನು ಮುಂದುವರಿಸುವ ತಮ್ಮ ಸಂಕಲ್ಪದಲ್ಲಿ ಅಚಲರಾಗಿದ್ದರು.

ಅಂತಿಮವಾಗಿ, ಅವರು ಮನೆ ಬಿಟ್ಟು ಆಧ್ಯಾತ್ಮಿಕ ಮಾರ್ಗದರ್ಶನ ಪಡೆಯಲು ಆಳವಾದ ನಿರ್ಧಾರವನ್ನು ಮಾಡಿದರು. ಅವರ ಪ್ರಯಾಣವು ಅವರನ್ನು ನರ್ಮದಾ ನದಿಯ ದಡಕ್ಕೆ ಕರೆದೊಯ್ಯಿತು, ಅಲ್ಲಿ ಅವರು ಪ್ರಸಿದ್ಧ ಧಾರ್ಮಿಕ ವಿದ್ವಾಂಸರಾದ ಗೋವಿಂದ ಭಗವತ್ಪಾದರನ್ನು ಎದುರಿಸಿದರು. ಅವರ ಮಾರ್ಗದರ್ಶನದಲ್ಲಿ, ಶಂಕರಾಚಾರ್ಯರು ಸನ್ಯಾಸಿಯಾಗಿ ದೀಕ್ಷೆಯನ್ನು ಪಡೆದರು ಮತ್ತು ಪರಿವರ್ತನೆಯ ಆಧ್ಯಾತ್ಮಿಕ ಪ್ರಯಾಣವನ್ನು ಪ್ರಾರಂಭಿಸಿದರು.

ಆಧ್ಯಾತ್ಮಿಕ ಪಯಣ ಮತ್ತು ಮಠಗಳ ಸ್ಥಾಪನೆ

ದೀಕ್ಷೆಯನ್ನು ಸ್ವೀಕರಿಸಿದ ನಂತರ, ಶಂಕರಾಚಾರ್ಯರು ಕಾಶಿಗೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು ವಿಷ್ಣುಶರ್ಮರನ್ನು ತಮ್ಮ ಶಿಷ್ಯನನ್ನಾಗಿ ತೆಗೆದುಕೊಂಡರು. ಅವರ ಪ್ರಯಾಣವು ಬದರಿಕ್ ಆಶ್ರಮಕ್ಕೆ ಮುಂದುವರೆಯಿತು, ಅಲ್ಲಿ ಅವರು ಪ್ರಸಿದ್ಧ ಮಹರ್ಷಿ ವ್ಯಾಸ ಮತ್ತು ಗೌಡಪಾದರನ್ನು ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದರು. ವರ್ಷಗಳಲ್ಲಿ, ಅವರು ನೇಪಾಳದಿಂದ ರಾಮೇಶ್ವರದವರೆಗೆ ಭಾರತದ ಉದ್ದವನ್ನು ಸಂಚರಿಸುತ್ತಾ ಕಾಲ್ನಡಿಗೆಯಲ್ಲಿ ವ್ಯಾಪಕವಾದ ತೀರ್ಥಯಾತ್ರೆಯನ್ನು ಕೈಗೊಂಡರು. ಅವರು ದ್ವಾರಕಾ, ಶ್ರೀ ಶೈಲ, ಪುರಿ, ಕಾಶಿ, ಕಂಚಿ ಮತ್ತು ಶೃಂಗೇರಿ ಮುಂತಾದ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದರು.

ಶಂಕರಾಚಾರ್ಯರು ಭಾರತದಾದ್ಯಂತ ನಾಲ್ಕು ಪ್ರಮುಖ ಮಠಗಳನ್ನು (ಸನ್ಯಾಸಿ ಸಂಸ್ಥೆಗಳು) ಸ್ಥಾಪಿಸಲು ಆಚರಿಸುತ್ತಾರೆ, ಪ್ರತಿಯೊಂದೂ ಆಧ್ಯಾತ್ಮಿಕ ಕಲಿಕೆ ಮತ್ತು ತತ್ತ್ವಶಾಸ್ತ್ರದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ:

  1. ಉತ್ತರ ಬದರಿ (ಉತ್ತರ ಪ್ರದೇಶ) – ಜ್ಯೋತಿರ್ಮಠ
  2. ದಕ್ಷಿಣ (ಕರ್ನಾಟಕ) – ಶೃಂಗೇರಿಯಲ್ಲಿ ಶಾರದಾಪೀಠ
  3. ಪೂರ್ವ (ಒರಿಸ್ಸಾ) – ಪುರಿಯಲ್ಲಿರುವ ಗೋವರ್ಧನ ಪೀಠ
  4. ಪಶ್ಚಿಮ (ಗುಜರಾತ್) – ದ್ವಾರಕಾದಲ್ಲಿ ಕಾಳಿಕಾ ಮಠ

ಈ ಸಂಸ್ಥೆಗಳ ಮೂಲಕ, ಶಂಕರಾಚಾರ್ಯರು ಅದ್ವೈತ ವೇದಾಂತದ ತತ್ವಗಳನ್ನು ಪ್ರಸಾರ ಮಾಡಲು ಮತ್ತು ಆಧ್ಯಾತ್ಮಿಕ ಬೋಧನೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಗುರಿಯನ್ನು ಹೊಂದಿದ್ದರು.

ಶಂಕರಾಚಾರ್ಯರ ಬೋಧನೆಗಳು

ಅದ್ವೈತ ವೇದಾಂತದ ಸಿದ್ಧಾಂತವನ್ನು ಹಿಂದೆ ಗೌಡಪಾದರು ಮತ್ತು ಗೋವಿಂದ ಭಗವತ್ಪಾದರು ಪ್ರತಿಪಾದಿಸಿದ್ದರೆ, ಶಂಕರಾಚಾರ್ಯರು ಈ ಆಳವಾದ ಬೋಧನೆಗಳನ್ನು ಜನಪ್ರಿಯಗೊಳಿಸಿದರು. ಅವರ ತತ್ವಶಾಸ್ತ್ರವು ಹಲವಾರು ಪ್ರಮುಖ ತತ್ವಗಳಿಂದ ನಿರೂಪಿಸಲ್ಪಟ್ಟಿದೆ:

1. ಅದ್ವೈತ (ಅದ್ವೈತ) : ಶಂಕರಾಚಾರ್ಯರ ತತ್ತ್ವಶಾಸ್ತ್ರದ ಕೇಂದ್ರ ತತ್ವವೆಂದರೆ ಅದ್ವೈತದ ಪರಿಕಲ್ಪನೆ, ಅಂದರೆ ಏಕತೆ ಅಥವಾ ದ್ವಂದ್ವತೆ. ಎಲ್ಲ ದ್ವಂದ್ವ ಗ್ರಹಿಕೆಗಳನ್ನು ಮೀರಿದ ಬ್ರಹ್ಮವೇ ಪರಮ ಸತ್ಯ ಎಂದು ಅವರು ಬೋಧಿಸಿದರು.

2. ಆತ್ಮ ಮತ್ತು ಪರಮಾತ್ಮನ ಏಕತೆ: ಶಂಕರಾಚಾರ್ಯರು ಆತ್ಮ (ವ್ಯಕ್ತಿ ಆತ್ಮ) ಮತ್ತು ಪರಮಾತ್ಮ (ಪರಮಾತ್ಮ) ಮೂಲಭೂತವಾಗಿ ಒಂದೇ ಮತ್ತು ಒಂದೇ ಎಂದು ಪ್ರತಿಪಾದಿಸಿದರು. ಅವರು ಪ್ರಸಿದ್ಧವಾಗಿ ಘೋಷಿಸಿದರು, “ಅಹಂ ಬ್ರಹ್ಮಾಸ್ಮಿ,” ಅಂದರೆ “ನಾನು ಬ್ರಹ್ಮ”, ಎಲ್ಲಾ ಅಸ್ತಿತ್ವದ ಅಂತರ್ಗತ ಏಕತೆಯನ್ನು ಒತ್ತಿಹೇಳುತ್ತದೆ.

3. ಬ್ರಹ್ಮನ ಸ್ವಭಾವ: ಶಂಕರಾಚಾರ್ಯರ ಪ್ರಕಾರ, ಬ್ರಹ್ಮನು ವಿವಿಧ ಗುಣಗಳನ್ನು ಹೊಂದಿದೆ-ಶಾಶ್ವತ, ಶುದ್ಧ, ನಿರ್ಕಲ್ಪ (ನಿರಾಕಾರ), ನಿರ್ಗುಣ (ಗುಣಲಕ್ಷಣಗಳಿಲ್ಲದೆ), ಮತ್ತು ಜ್ಯೋತಿಸ್ವರೂಪ (ಪ್ರಕಾಶಮಾನ). ಈ ದೈವಿಕ ಗುಣಗಳು ಜೀವಾತ್ಮದಲ್ಲಿ (ವೈಯಕ್ತಿಕ ಸ್ವಯಂ) ಅಸ್ತಿತ್ವದಲ್ಲಿದೆ ಎಂದು ಅವರು ನಂಬಿದ್ದರು, ಇದು ಎಲ್ಲಾ ಜೀವಿಗಳ ಪರಸ್ಪರ ಸಂಬಂಧವನ್ನು ಒತ್ತಿಹೇಳುತ್ತದೆ.

ಉಪಸಂಹಾರ

ಅವರ ಬೋಧನೆಗಳ ಮೂಲಕ, ಶಂಕರಾಚಾರ್ಯರು ಭಾರತೀಯ ತತ್ತ್ವಶಾಸ್ತ್ರದ ಮೇಲೆ ಗಾಢವಾಗಿ ಪ್ರಭಾವ ಬೀರಿದರು, ಅನ್ವೇಷಕರು ತಮ್ಮ ಅಸ್ತಿತ್ವದ ಆಳವನ್ನು ಪರಿಶೀಲಿಸಲು ಮತ್ತು ಎಲ್ಲಾ ಅಸ್ತಿತ್ವದ ಆಧಾರವಾಗಿರುವ ಏಕತೆಯನ್ನು ಗುರುತಿಸಲು ಪ್ರೋತ್ಸಾಹಿಸಿದರು. ಅವರ ಪರಂಪರೆಯು ಅಸಂಖ್ಯಾತ ವ್ಯಕ್ತಿಗಳಿಗೆ ಅವರ ಆಧ್ಯಾತ್ಮಿಕ ಪ್ರಯಾಣದಲ್ಲಿ ಸ್ಫೂರ್ತಿ ನೀಡುವುದನ್ನು ಮುಂದುವರೆಸಿದೆ, ದ್ವಂದ್ವತೆಯಲ್ಲದ ಸಮಯಾತೀತ ಬುದ್ಧಿವಂತಿಕೆಯನ್ನು ಅವರಿಗೆ ನೆನಪಿಸುತ್ತದೆ.

ಭಕ್ತಿ ಪಂಥದ ಪರಿಣಾಮಗಳು

ಭಕ್ತಿ ಪಂಥದ ಪರಿಣಾಮಗಳು

ಭಕ್ತಿ ಆಂದೋಲನವು ಮಧ್ಯಯುಗೀನ ಭಾರತದಲ್ಲಿ ಉದ್ಭವಿಸಿದ ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಚಳುವಳಿಯಾಗಿದೆ. ಈ ಚಳುವಳಿಯ ಮೂಲಕ ಸಂತರು ದೇವರ ಮೇಲಿನ ಭಕ್ತಿಯನ್ನು ಮುಖ್ಯವೆಂದು ಸಾರಿದರು. ಜಾತಿ ಭೇದ, ಅಸ್ಪೃಶ್ಯತೆ ಮತ್ತು ಮೂಢನಂಬಿಕೆಗಳನ್ನು ಖಂಡಿಸಿ ಸಮಾನತೆಯ ಸಂದೇಶವನ್ನು ನೀಡಿದರು. ಇದರಿಂದ ಸಮಾಜದಲ್ಲಿ ಹೊಸ ಚಿಂತನೆ ಮತ್ತು ನವೋದಯದ ವಾತಾವರಣ ನಿರ್ಮಾಣವಾಯಿತು.

1. ಹಿಂದೂ ಧರ್ಮ ಹಾಗೂ ಸಮಾಜದ ಪುನಶ್ಚೇತನ : ಇಸ್ಲಾಂ ಧರ್ಮದ ಪ್ರಸಾರ ಹಿಂದೂ ಧರ್ಮಕ್ಕೆ ದೊಡ್ಡ ಸವಾಲನ್ನು ಒಡ್ಡಿದ ಕಾಲದಲ್ಲಿ ಹಿಂದೂ ಸಂತರು ತಮ್ಮ ಧರ್ಮವನ್ನು ಸುಧಾರಿಸಿದರು. ಈ ಧರ್ಮ ಸುಧಾರಕರು ಹಿಂದೂ ಧರ್ಮ ಹಾಗೂ ಸಮಾಜದಲ್ಲಿ ನೆಲೆಗೊಂಡಿದ್ದ ಹಲವು ಅನಿಷ್ಠ ಪದ್ಧತಿಗಳನ್ನು ನಿವಾರಿಸಿ, ಹಿಂದೂ ಧರ್ಮವನ್ನು ಪುನಶ್ಚೇತನಗೊಳಿಸಿದರು. ಎಲ್ಲಾ ಸಂತರು ಜಾತಿ ಭೇದಗಳನ್ನು, ಅಸ್ಪೃಶ್ಯತೆಯನ್ನು, ಡಂಬಾಚಾರಗಳನ್ನು ಹಾಗೂ ಅಸಮಾನತೆಯನ್ನು ಖಂಡಿಸಿದರು. ಇವರ ಉದಾರ ದೃಷ್ಟಿಕೋನವು ಹಿಂದೂ ಸಮಾಜದಲ್ಲಿ ದೀನದಲಿತರಿಗೆ ನವೋದಯವನ್ನು ತಂದಿತು.

2. ಹಿಂದೂ-ಮುಸ್ಲಿಂ ಸಾಮರಸ್ಯ : ಕಬೀರ ಮತ್ತು ನಾನಕರು ಹಿಂದೂ ಮತ್ತು ಮುಸ್ಲಿಂ ಜನಾಂಗಗಳ ನಡುವಣ ಕಂದರವನ್ನು ನಿವಾರಿಸಿ, ಅವುಗಳ ನಡುವೆ ಸೌಹಾರ್ಧತೆಯನ್ನು ಮೂಡಿಸಲು ತುಂಬ ಶ್ರಮಿಸಿದರು. ಇವೆರಡೂ ಜನಾಂಗಗಳ ನಡುವಣ ದ್ವೇಷಾಸೂಯೆಗಳು ಕೆಲಮಟ್ಟಿಗೆ ಕಡಿಮೆಯಾದವು. “ದೇವನೊಬ್ಬ, ನಾಮ ಹಲವು”, “ರಾಮ ಅಲ್ಲಾ ಬೇರೆ ಅಲ್ಲ” ಎಂಬ ತತ್ತ್ವಗಳು ಪ್ರಚಾರ ಹೊಂದಿದವು. ಸಿಖ್ ಧರ್ಮವು ಹಿಂದೂ ಮುಸ್ಲಿಂ ಸಮನ್ವಯದ ಸಂಕೇತವಾಗಿದ್ದಿತು.

3. ಪ್ರಾದೇಶಿಕ ಭಾಷೆಗಳ ಸಾಹಿತ್ಯಾಭಿವೃದ್ಧಿ : ಭಕ್ತಿಪಂಥದ ಸುಧಾರಕರು ತಮ್ಮ ಪ್ರಾದೇಶಿಕ ಭಾಷೆಗಳ ಮೂಲಕ ಭೋಧನೆ ಹಾಗೂ ಬರವಣಿಗೆಯನ್ನು ಮಾಡಿದರು. ಜನ ಸಾಮಾನ್ಯರಿಗೆ ಅವರಾಡುವ ಭಾಷೆಯ ಮೂಲಕ ತಮ್ಮ ಸಂದೇಶವನ್ನು ಸಾರುವುದು ಅವರ ಗುರಿಯಾಗಿತ್ತು. ಇದರಿಂದಾಗಿ ಹಿಂದೆ ಕಡೆಗಣಿಸಲ್ಪಟ್ಟ ಭಾಷೆಗಳು ಅಭಿವೃದ್ಧಿ ಹೊಂದಿದ್ದಲ್ಲದೆ, ಮರಾಠಿ, ಗುಜರಾತಿ, ತೆಲುಗು, ಕನ್ನಡ, ಬಂಗಾಳಿ ಇನ್ನೂ ಮುಂತಾದ ದೇಶೀಯ ಭಾಷೆಗಳಲ್ಲಿ ಉನ್ನತವಾದ ಧಾರ್ಮಿಕ ಹಾಗೂ ದಾರ್ಶನಿಕ ಗ್ರಂಥಗಳನ್ನು ರಚಿಸಲಾಯಿತು.

4. ಸಮಾನತೆಯ ತತ್ವ : ಭಕ್ತಿಪಂಥದ ಸುಧಾರಕರು ಜಾತಿ ಮತ್ತು ಲಿಂಗ ಭೇದಗಳನ್ನು ಖಂಡಿಸಿ, ಸಮಾನತೆಯ ತತ್ವವನ್ನು ಪ್ರತಿಪಾದಿಸಿದ್ದರಿಂದ ಕೆಳವರ್ಗದ ಜನರ ಹಾಗೂ ಮಹಿಳೆಯರ ಸ್ಥಿತಿಗತಿ ಸ್ವಲ್ಪ ಮಟ್ಟಿಗೆ ಉತ್ತಮವಾದವು. ದೇವರ ದೃಷ್ಟಿಯಲ್ಲಿ ಎಲ್ಲ ಮಾನವರು ಸರಿಸಮಾನರೆಂಬ ಭಾವನೆಯನ್ನು ಜನರಲ್ಲಿ ಮೂಡಿಸಿದರು. ಜಾತಿಗಳನ್ನು ಆದರಿಸಿದ ಮೇಲು ಕೀಳೆಂಬ ಭಾವನೆ ಮತ್ತು ಧಾರ್ಮಿಕ ವಿಧಿ-ವಿಧಾನಗಳ ಬಿಗುವು ಶಿಥಿಲವಾಯಿತು.

5. ಮತಾಂತರ ಕಾರ್ಯದ ನಿಧಾನ : ಭಾರತಕ್ಕೆ ಇಸ್ಲಾಂ ಪ್ರವೇಶವಾದಂದಿನಿಂದ ಆಮಿಷಕ್ಕೆ, ಬಲಾತ್ಕಾರಕ್ಕೆ, ಆಕರ್ಷಣೆಗೆ ಅಥವಾ ಇನ್ಯಾವುದೋ ಕಾರಣದಿಂದ ಹಿಂದುಗಳು ಇಸ್ಲಾಂ ಧರ್ಮಕ್ಕೆ ಮತಾಂತರವಾಗ ತೊಡಗಿದರು. ಹಿಂದೂ ಧರ್ಮದ ಜಾತೀಯತೆಯ ಜಟಿಲತೆಯೂ ಇದಕ್ಕೆ ಕಾರಣವಾಗಿತ್ತು. ಇದಕ್ಕೆ ತಡೆಯೊಡ್ಡಲು ಹಿಂದೂ ಧರ್ಮವನ್ನು ಪರಿಷ್ಕರಿಸುವ ಸಂದರ್ಭದಲ್ಲೇ ಭಕ್ತಿಪಂಥಕ್ಕೆ ಮಹತ್ವ ದೊರೆಯಿತು. ಭಕ್ತಿಯ ಮೂಲಕವಾದರೂ ಮುಕ್ತಿಯ ಅವಕಾಶ ದೊರೆಯಿತು. ಭಕ್ತಿಪಂಥದ ಬಹುಜನಪ್ರಿಯತೆ ಇಸ್ಲಾಂ ಧರ್ಮಕ್ಕೆ ಆಕರ್ಷಣೆಗೆ ಒಳಗಾಗುವುದನ್ನು ಆದಷ್ಟು ತಪ್ಪಿಸಿತು. ಅಂದರೆ ಇಸ್ಲಾಂನ ಮತಾಂತರ ಕಾರ್ಯಕ್ಕೆ ತಡೆಯೊಡ್ಡಿದಂತಾಗಿ ನಿಧಾನಗತಿಯಲ್ಲಿ ಮುಂದುವರೆಯಿತಷ್ಟೆ.

6. ಬ್ರಾಹ್ಮಣರ ಪ್ರತಿಷ್ಠೆಗೆ ಪೆಟ್ಟು : ಭಕ್ತಿ ಪಂಥದಲ್ಲಿಯ ʻಭಕ್ತಿ’ಯ ಮಹತ್ವವು ಜಾತಿ, ಪಂಥ ಇತ್ಯಾದಿ ಪ್ರಭೇದಗಳನ್ನು ಮೀರಿದ್ದಿತು. ಇಲ್ಲಿಯವರೆಗೂ ಹಿಂದೂ ಧರ್ಮದ ಧಾರ್ಮಿಕ ನಾಯಕರಂತೆ ವರ್ತಿಸುತ್ತಿದ್ದ ಬ್ರಾಹ್ಮಣರನ್ನು ಮೀರಿ ಭಕ್ತಿ ಚಳುವಳಿಯು ಬೆಳೆಯಿತು. ಹಿಂದೂ ಧರ್ಮದ  ಮೂಢನಂಬಿಕೆಗಳನ್ನು, ಕೆಟ್ಟ ಸಂಪ್ರದಾಯಗಳನ್ನು ಭಕ್ತಿಪಂಥವು ಖಂಡಿಸಿದುದರಿಂದ ಅವುಗಳ ನೇತೃತ್ವ ವಹಿಸುತ್ತಿದ್ದ ಬ್ರಾಹ್ಮಣರನ್ನು ಮೂಲೆಗುಂಪು ಮಾಡಿತೆಂದು ಹೇಳಬೇಕು. ಅವಿದ್ಯಾವಂತನಾದರೂ, ವೇದಾದ್ಯಯನವನ್ನು ಮಾಡದೆ ಇದ್ದರೂ, “ಭಕ್ತಿಯ ಮೂಲಕ ಮುಕ್ತಿಯ ಸೋಪಾನ” ವು ಬ್ರಾಹ್ಮಣರ ಜ್ಞಾನ ಪ್ರತಿಷ್ಠೆಗೆ ಪೆಟ್ಟಾಗಿ ಪರಿಣಮಿಸಿತು.

ಉಪಸಂಹಾರ:

ಭಕ್ತಿ ಚಳುವಳಿಯು ಭಾರತೀಯ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ಇದು ಧಾರ್ಮಿಕ ಸುಧಾರಣೆ ಹಾಗೂ ಸಮಾಜದಲ್ಲಿ ಸೌಹಾರ್ದತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿತು. ಭಕ್ತಿ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಜನರಲ್ಲಿ ಬಿತ್ತಿತು. ಆದ್ದರಿಂದ ಭಕ್ತಿ ಆಂದೋಲನವು ಭಾರತದ ಸಾಂಸ್ಕೃತಿಕ ಪರಂಪರೆಯ ಮಹತ್ವದ ಅಧ್ಯಾಯವಾಗಿದೆ.

ಕನಕದಾಸರು (1465-1563)

ಕನಕದಾಸರು (1465-1563)

ಕನಕದಾಸರು ಕರ್ನಾಟಕದ ಹರಿಭಕ್ತ ದಾಸಶ್ರೇಷ್ಟರಲ್ಲಿ ಒಬ್ಬರಾಗಿದ್ದಾರೆ.ಇವರು ಧಾರವಾಡ ಜಿಲ್ಲೆಯ ಬ್ಯಾಡದಲ್ಲಿ ಬೀರಪ್ಪನಾಯಕ ಹಾಗು ಬಚ್ಚಮ್ಮ ಎಂಬ ದಂಪತಿಗಳ ಉದರದಲ್ಲಿ ಜನಿಸಿದರು.ಕನಕದಾಸರ ತಂದೆ ವಿಜಯನಗರ ಅರಸರ ಸೇನೆಯಲ್ಲಿ ಸೇನಾಪತಿಯಾಗಿದ್ದರು.ಕನಕದಾಸರು ಕನ್ನಡ ಹಾಗೂ ಸಂಸ್ಕೃತದಲ್ಲಿ ಸಾಕಷ್ಟು ಪಾಂಡಿತ್ಯವನ್ನು ಪಡೆದಿದ್ದರು. ಬಹುಕಾಲದ ನಂತರ ತಿರುಪತಿ ತಿಮ್ಮಪ್ಪನ ಕೃಪೆಯಿಂದ ಜನಿಸಿದ ಮಗನಿಗೆ ತಂದೆ-ತಾಯಿಗಳು ಮೊದಲು ಹೆಸರು ಇಟ್ಟಿದ್ದು ತಿಮ್ಮಪ್ಪ ಅಥವಾ ವೆಂಕಟೇಶ ಎಂದು. ಬೀರಪ್ಪನಾಯಕನ ಜಾತಿ ಯಾವುದೆಂದು ತಿಳಿದು ಬಂದಿಲ್ಲ, ಕುರುಬ ಜಾತಿಗೆ ಸೇರಿದವರಾಗಿದ್ದಾರೆ ಎಂದು ಊಹಿಸಲಾಗಿದೆ. ಮೂಲತಃ ಇವರು ಶೈವ ಧರ್ಮಕ್ಕೆ ಸೇರಿದವರಾಗಿದ್ದರು ಎಂದು ಹೇಳುವುದುಂಟು. ನಂತರ ರಾಮಾನುಜಾಚಾರ್ಯರ ಕಾಲದಲ್ಲಿ ವೈಷ್ಣವರಾಗಿದ್ದಂತೆ ಕಂಡುಬರುತ್ತದೆ. ಬೀರನಾಯಕ ಆ ಭಾಗದ ಕುರುಬ ಜನಾಂಗದ ಮುಖಂಡ ಅಥವಾ ನಾಯಕನಾಗಿದ್ದಿರಬೇಕು. ತಿಮ್ಮಪ್ಪ ಪ್ರಾಪ್ತವಯಸ್ಕನಾಗುವ ಮೊದಲೇ ಅವನ ತಂದೆತಾಯಿಗಳು ಕಾಲವಾದರು. ಪರಿಣಾಮವಾಗಿ ತಿಮ್ಮಪ್ಪ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಯಿತು. ಅವನ ಸಂಬಂಧಿಕರು ಅವನ ಎಲ್ಲಾ ಆಸ್ತಿಯನ್ನು ದೋಚಿದರು. ಇಂತಹ ಕಷ್ಟಕಾಲದಲ್ಲಿ ತಿಮ್ಮಪ್ಪನಿಗೆ ಮನೆಯನ್ನು ಕಟ್ಟುವಾಗ ನಿಧಿ(ಕನಕ)ದೊರಕಿತು.ಪ್ರಾಪ್ತವಾದ ನಿಧಿಯನ್ನು ದೀನದಲಿತರಿಗೆ ಹಂಚಿದ ತಿಮ್ಮಪ್ಪ ಮುಂದೆ ಕನಕನಾಯಕನೆಂದು ಹೆಸರಾದನು. ಸಂಪತ್ತು ದೊರಕಿದ ನಂತರ ಕನಕನಾಯಕನಾದ ತಿಮ್ಮಪ್ಪ ತನ್ನ ಪರೋಪಕಾರ ಹಾಗು ಪ್ರೀತಿ ವಾತ್ಸಲ್ಯಗಳಿಂದ ಹೆಚ್ಚು ಪ್ರಸಿದ್ಧನಾದನು. ಅತಿಯಾದ ಭಕ್ತಿಭಾವವುಳ್ಳ ಕನಕದಾಸರು ಒಮ್ಮೆ ಕನಸಿನಲ್ಲಿ ಕಂಡ ಆದಿಕೇಶವನ ಆದೇಶದಂತೆ ತನ್ನ ಊರಿನ ನಿರ್ಲಕ್ಷ್ಯ ಸ್ಥಳವೊಂದರಲ್ಲಿ ಮೂಲೆಗುಂಪಾಗಿ ಬಿದ್ದಿದ್ದ ಆದಿಕೇಶವನ ಮೂರ್ತಿಯನ್ನು ಕಾಗಿನೆಲೆ ಎಂಬಲ್ಲಿಗೆ ತಂದು ಪ್ರತಿಷ್ಠಾಪಿಸಿದರು. ಇದರಿಂದ ಕನಕನ ಕೀರ್ತಿ ಮತ್ತಷ್ಟು ಇಮ್ಮಡಿಸಿತು. ಈತನ ಭಕ್ತಿಗೆ ಮೆಚ್ಚಿದ ಅಂದಿನ ವಿಜಯನಗರದ ಆರಸ ಎರಡನೆಯ ನರಸಿಂಹ ಕನಕನನ್ನು ಬಂಕಾಪುರ ಪ್ರಾಂತಕ್ಕೆ ದಣ್ಣಾಯಕನನ್ನಾಗಿ ನೇಮಿಸಿದ ಕನಕದಾಸರು ವಾಸವಿದ್ದ ಅರಮನೆಯನ್ನು ಇತ್ತೀಚೆಗೆ ಡಾ.ಎಸ್.ಜಿ.ಸಾಮಕ್ ರವರು ಬಾಡದಲ್ಲಿ ಉತ್ಕನನ ಮಾಡಿದ್ದಾರೆ. ಇಲ್ಲಿ ದೊಡ್ಡ ಅಡುಗೆ ಮನೆ, ಸಭೆ ನಡೆಸುವ ಹಜಾರ, ಸ್ನಾನಗೃಹ, ಶೌಚಾಲಯ, ನಾಲ್ಕು ವಿಶ್ರಾಂತಿ ಕೋಣೆಗಳು ಪತ್ತೆಯಾಗಿವೆ.

ಕನಕದಾಸನಾಗುವ ಮೊದಲು ತಿಮ್ಮಪ್ಪ ದೊರೆಯಾಗಿದ್ದನೆಂದು ಆ ಕಾಲದ ಆದಿರಾಜ ಅವರ ಹಾಡಿನ ಮೂಲಕ ತಿಳಿಯಬಹುದು.

ದೊರೆತನವ ಬಿಡಿಸಿ ಸುಸ್ತಿರ ಮಾರ್ಗ

ತೋರಿಸಿದೆ.

ನರಮಾತ್ರದವನೆನೆದೆ ಹರಿಯೇ

ಪರಬಲವ ನೋಡಿದರೆ ಉರಿದುರಿದು ಬೀಳ್ವ ಮನ

ಸೆರೆಹಾಕಿ ನಿಲಿಸಿದೆಯೊ ಹರಿ

ವೀರಯೋಧನಾಗಿ ಶತೃಗಳನ್ನು ಮೆಟ್ಟಿದ ಈ ಕನಕನಾಯಕನು ಕನಕದಾಸನಾದ ಬಗೆಯನ್ನು ಈ ಮೇಲಿನ ಕೀರ್ತನೆಗಳನ್ನು ಬಿಟ್ಟರೆ ನಿಖರವಾದ ಬೇರಾವ ಆಧಾರಗಳೂ ನಮಗೆ ಸಿಕ್ಕಿಲ್ಲ. ಈ ಕುರಿತು ಹೇಳಿಕೆಯೊಂದು ಹೀಗಿದೆ.

ಕಾಗಿನೆಲೆಯಲ್ಲಿ ಪ್ರತಿಷ್ಟಾಪಿತವಾದ ಅದಿಕೇಶವ ಕನಕನ ಇಷ್ಟದೈವ. ತನ್ನ ಇಷ್ಟದೈವನ ಇಚ್ಚೆಯಂತೆ ಅವನು ದಾಸನಾಗಲು ಹಿಂಜರಿಯುತ್ತಿದ್ದ. ದಣ್ಣಾಯಕನಾದ ಕನಕ ಒಮ್ಮೆ ಕದನವೊಂದರಲ್ಲಿ ಶತೃವಿನ ಹೊಡೆತಕ್ಕೆ ಸಿಕ್ಕಿ ಪ್ರಜ್ಞಾವಸ್ಥೆಯಲ್ಲಿ ಬಿದ್ದದ್ದ. ಆ ಸಮಯದಲ್ಲಿ ಆದಿಕೇಶವನ ಆದೇಶವನ್ನು ಸ್ವೀಕರಿಸಿ ಅವನ ದಾಸನಾಗಲು ಸಮ್ಮತಿಸಿದನಂತೆ. ಈ ಹೇಳಿಕೆಯ ಸಮರ್ಥನೆಗೆ ಅವನ ಈ ಹಾಡೊಂದು ಪುಷ್ಟಿನೀಡುತ್ತದೆ.

“ರಣದೊಳಗೆ ದೇಹವ ಖಂಡತುಂಡವ ಮಾಡಿ

ರಣವನುತ್ತರಿಸಿ ಮರಣವ ತೋರಿದೆ

ಪ್ರಣವಗೋಚರವಾಗಿ ಲೀಲೆಯಿಂದಲ್ಲಿ ಬಂದು

ಹಣಕೆ ಪ್ರಾಣವನು ತಂದಿತ್ತ ಮಹಾತಮನೆ”

ದಾಸನಾಗಿ ರೂಪಗೊಂಡ ಕನಕನಾಯಕ ತಿರುಪತಿ, ಶ್ರೀರಂಗ, ಬೇಲೂರು, ಉಡುಪಿ, ಅಹೋಬಲ, ಕಂಚಿ, ಮೇಲುಕೋಟೆ ಮೊದಲಾದ ಸ್ಥಳಗಳಲ್ಲಿ ವ್ಯಾಪಕವಾಗಿ ಸಂಚರಿಸಿದನು. ವಿಜಯನಗರದಲ್ಲಿ ಕೃಷ್ಣದೇವರಾಯರ ಗುರುಗಳಾಗಿ ವಾಸ್ತವ್ಯಹೂಡಿದ್ದ ಶ್ರೀವ್ಯಾಸರಾಯರ ಮಹಿಮೆಯನ್ನು ಕೇಳಿದ್ದ ಕನಕದಾಸರು ಅವರಲ್ಲಿ ಹೋಗಿ ಶಿಷ್ಯತ್ವವನ್ನು ಪಡೆದು ಗುರುಮಂತ್ರ ಸ್ವೀಕರಿಸಿದರು. ವ್ಯಾಸರಾಯರು ಕನಕದಾಸರಿಗೆ ನೀಡುತ್ತಿದ್ದ ಮಹತ್ವವನ್ನು ಅವರ ಶಿಷ್ಯವೃಂದ ಯಾವ ರೀತಿ ಮನಸ್ಸಿನಲ್ಲಿ ಕರುಬುತ್ತಿದ್ದರು ಎಂಬುದು ಈ ಕೆಳಗಿನ ವಚನದಿಂದ ತಿಳಿಯಬಹುದು.

“ಕನಕದಾಸನ ಮೇಲೆ ದಯಮಾಡಲು

ವ್ಯಾಸಮುನಿ ಮಠದವರೆಲ್ಲಾ ದೂರಿಕೊಂಬರೋ”

ಕನಕನ ಕಿಂಡಿಯ ಪವಾಡ

ತಿರುಪತಿಯಿಂದ ಮರಳಿದ ಕನಕದಾಸರು ಉಡುಪಿಗೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನಕ್ಕೆ ಕಾದು ಕುಳಿತರಂತೆ. ಆದರೆ ಅವರು ಜಾತಿಯಿಂದ ಕುರುಬರಾಗಿದ್ದ (ಶೂದ್ರ) ರಿಂದ ಬ್ರಾಹ್ಮಣರು ದೇವಾಲಯದೊಳಗೆ ಅವರನ್ನು ಬಿಡಲಿಲ್ಲವಂತೆ. ಇದರಿಂದ ನೊಂದ ಕನಕದಾಸರು ದೇವಾಲಯದ ಹಿಂಭಾಗಕ್ಕೆ ಹೋಗಿ ಪ್ರಾರ್ಥಿನೆ ಸಲ್ಲಿಸಿದರಂತೆ. ಆಗ ಹಿಂಭಾಗದ ಗೋಡೆ ಬಿದ್ದು ಪೂರ್ವಾಭಿಮುಖವಾಗಿದ್ದ ಶ್ರೀಕೃಷ್ಣನ ವಿಗ್ರಹ ಪಶ್ಚಿಮಕ್ಕೆ ತಿರುಗಿತಂತೆ. ಇಂದಿಗೂ ದೇವಾಲಯದ ಈ ಕಿಂಡಿಯನ್ನು ʻಕನಕನ ಕಿಂಡಿ’ಯೆಂದೇ ಕರೆಯಲಾಗುತ್ತದೆ. ಆದರೆ ಇತಿಹಾಸದ ವಿದ್ಯಾರ್ಥಿಗಳಾದ ನಾವುಗಳು ವೈಚಾರಿಕವಾಗಿ ಯೋಚಿಸಬೇಕಾಗುತ್ತದೆ.

1. ವಿಗ್ರಹವೊಂದು ಮಾನವ ಪ್ರಯತ್ನವಿಲ್ಲದೆ ತಿರುಗಲು ಸಾಧ್ಯವೆ ?

2.ʻಕನಕನ ಕಿಂಡಿಯ ಪವಾಡವೆಂಬುದು ಮಹಾತ್ಮ ಕನಕನ ಶಕ್ತಿಗೆ ಹೆದರಿದ ಪುರೋಹಿತಶಾಹಿಗಳು ಕಟ್ಟಿದ ಕಥೆಯಾಗಿರಬಹುದೆ?

3. ಕನಕನ ಕಿಂಡಿಯ ಮೂಲಕ ಜಾತಿಯಿಂದ ಶೂದ್ರರಾಗಿದ್ದ ಮಹಾತ್ಮ ಕನಕರನ್ನು ದೇವಾಲಯದ ಒಳಗೆ ಸೇರಿಸದೆ ಹೊರಗೇ ಇಡಲಾಯಿತಲ್ಲವೆ ?

ಕನಕದಾಸರ ಬೋಧನೆಗಳು:

ಕನಕದಾಸರು ನೂರಾರು ಕೀರ್ತನೆಗಳನ್ನು ರಚಿಸಿದ್ದಾರೆ.ಆ ಎಲ್ಲಾ ಕೀರ್ತನೆಗಳು ತನ್ನ ಇಷ್ಟದೈವವಾಗಿದ್ದ ಆದಿಕೇಶವನ ಅಂಕಿತದಲ್ಲಿ ಮೂಡಿ ಬಂದಿವೆ. ರಾಮಧ್ಯಾನ ಚರಿತೆ.ಮೋಹನ ತರಂಗಿಣಿ,ನಳ ಚರಿತೆ ಮತ್ತು ಹರಿಭಕ್ತಿಸಾರ ಎಂಬ ಕಾವ್ಯಗಳನ್ನು ರಚಿಸಿದ್ದಾರೆ.ಈ ಕಾವ್ಯಗಳು ಹಾಗೂ ಕೀರ್ತನೆಗಳಲ್ಲಿ ಅವರು ಸಾಮಾಜಿಕ ಆಸಮಾನತೆಯನ್ನು ಹೋಗಲಾಡಿಸಲು ಯತ್ನಿಸಿದರಲ್ಲದೆ ಸಮಾಜದ ಅನ್ಯಾಯ,ಅಸಮಾನತೆ,ದಬ್ಬಾಳಿಕೆ,ಗುಲಾಮಗಿರಿ,ಆಸ್ಪೃಶ್ಯತೆ, ಬಹುಪತ್ನಿತ್ವ,ವೇಶ್ಯಾವೃತ್ತಿ.ಸೂಳೆಗಾರಿಕೆ,ಸತಿಪದ್ಧತಿ ಮುಂತಾದ ಪಿಡುಗುಗಳನ್ನು ಖಂಡಿಸಿದರು.ಜೊತೆಗೆ ಸಮಾಜದಲ್ಲಿನ ಏಕತೆಗೆ ದಾರಿ ತೋರಿಸಿಕೊಟ್ಟಿದ್ದಾರೆ. ಇವರು ಸಮಾಜದಲ್ಲಿನ ಮೇಲು-ಕೀಳು,ಸ್ಪೃಶ್ಯ-ಅಸ್ಪೃಶ್ಯವರ್ಣಧರ್ಮ ಮುಂತಾದವುಗಳ ವಿರುದ್ಧ ಸಿಡಿದೆದ್ದರು.

1.ಕನಕದಾಸರು ಕೀರ್ತನೆಯೊಂದರಲ್ಲಿ “ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮತ್ತು ಹಿಟ್ಟಿಗಾಗಿ” ಎಂದು ಹೇಳಿದರು. ವ್ಯಾಪಾರಿಗಳು, ಕೃಷಿಕರು,ಜೀತದಾಳುಗಳು,ಕಳ್ಳರು,ಕಟುಕರು,ವೇಶೈಯರು,ಸನ್ಯಾಸಿಗಳು ಹಾಗು ಮಠಾಧಿಪತಿಗಳು ಇನ್ನೂ ಮುಂತಾದ ವೇಷಗಳು ಹೊಟ್ಟೆಹೊರೆಯಲು ವಿನಹ ಬೇರೆ ಯಾವ ಕಾರಣಕ್ಕೂ ಅಲ್ಲ ಎಂದು ಹೇಳಿದರು. ಅದುದರಿಂದ ಯಾವ ವರ್ಗದವರು ಯಾರನ್ನೂ ಮೂದಲಿಸಬೇಕಿಲ್ಲ ಎಂದು ಬುದ್ದಿವಾದ ಹೇಳಿದರು.

2. ಕನಕದಾಸರು ತಾವು ರಚಿಸಿದ ರಾಮಧ್ಯಾನ ಚರಿತೆಯಲ್ಲಿ ಅಕ್ಕಿ ಮತ್ತು ರಾಗಿಯ ಮಧ್ಯೆ ಆದ ಘರ್ಷಣೆಯ ಕುರಿತು ಚರ್ಚಿಸಿದ್ದಾರೆ. ಈ ಘರ್ಷಣೆ ಉಂಟಾಗಲು ಕಾರಣ ಎರಡರಲ್ಲೂ ಬೇಧ-ಭಾವ ಹುಟ್ಟಿಕೊಂಡಿದ್ದು, ಸಮಾಜದಲ್ಲಿನ ಬೇಧ-ಭಾವದ ಹಿನ್ನೆಲೆಯಲ್ಲಿ ರಚಿತವಾಗಿರುವ ಈ ಕೃತಿ ಸಮಾಜದ ಅಂಕುಡೊಂಕುಗಳನ್ನು ಮಾರ್ಮಿಕವಾಗಿ ಚರ್ಚಿಸುತ್ತದೆ. ಅಂತಿಮವಾಗಿ ಪರಮಾತ್ಮನ ಮುಂದೆ ನಾವೆಲ್ಲಾ ಒಂದೇ, ಪರಮಾತ್ಮನ ವಿಚಾರದಲ್ಲಿ ಎಲ್ಲರೂ ಸರಿಸಮಾನರು ಎಂಬ ಅಂಶವನ್ನು ಮನವರಿಕೆ ಮಾಡಿಕೊಡಲು ಕನಕದಾಸರು ಯತ್ನಿಸಿದ್ದಾರೆ.

3. ಜಾತಿಪದ್ಧತಿಯನ್ನು ಖಂಡಿಸುತ್ತಾ ಕನಕದಾಸರು “ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ” ಎಂದು ಪ್ರಶ್ನಿಸಿದ್ದಾರೆ.

4. ಗ್ರಾಮದೇವತೆಗೆ ಬಲಿಕೊಡುವುದನ್ನು ಗಮನಿಸಿದ ಕನಕದಾಸರು `ಕಳ್ಳದೇವತೆಗಳನ್ನು ನಂಬಿ ಬೆತ್ತಲೆ ನಿಲ್ಲಬೇಡಿ,ಕೋಣ ಕುರಿಗಳನ್ನು ಬಲಿಕೊಡಬೇಡಿ,ಕೈಯಲ್ಲಿನ ಕಾಸನ್ನು ಕಳೆದುಕೊಂಡು ಮೂರ್ಖರಾಗದಿರಿ’ ಎಂದು ಮೂದಲಿಸಿದರು.

  1. ಡಂಬಾಚಾರ,ಆಡಂಬರ,ಸಿರಿವಂತಿಕೆ ಮುಂತಾದ ಮೋಹಗಳಿಗೆ ದಾಸರಾಗದೆ ದೇವರಲ್ಲಿ ನಂಬಿಕೆ ಇಟ್ಟು ಪರಿಶುದ್ಧ ಜೀವನವನ್ನು ನಡೆಸಬೇಕೆಂದು ಕನಕದಾಸರು ಹೇಳಿದರು.
  2. `ಜೀವಿ ಸಂಸಾರಸ್ಥನಾಗಿದ್ದರೂ ಅದಕ್ಕೆ ಅಂಟಿಕೊಳ್ಳಬಾರದು’.
  3. ಜಾತಿ,ಮತ,ಉಚ್ಛ-ನೀಚ,ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ,ಕರಿಯ-ಬಿಳಿಯ ಮುಂತಾದ ಬೇಧ ಭಾವ ಮಾಡದೇ ಎಲ್ಲರೂ ಒಂದಾಗಿ ಬಾಳಬೇಕು.
  4. `ಉತ್ತಮ ನಡತೆಯನ್ನು ಹೊಂದದವನು, ಪಡೆದ ಸಾಲವನ್ನು ಮರುಪಾವತಿ ಮಾಡದವನು, ಬೇರೊಬ್ಬರ ಮನೆಗೆ ಕೇಡನ್ನು ಬಯಸುವವನು,ಆಚಾರವನ್ನು ಮುರಿದವನು,ದಾನಧರ್ಮವನ್ನು ಮಾಡದವನು. ಮಾತಿನಂತೆ ನಡೆಯದವನು,ಪರಸತಿಯನ್ನು ಬಯಸುವವನು ಹೊಲೆಯನೇ ವಿನಹ ಹುಟ್ಟಿನಿಂದ ಯಾರೂ ಕೀಳಲ್ಲ’ ಎಂದು ಕನಕದಾಸರು ನುಡಿದರು.
  5. ʻಮನುಷ್ಯ ಪಾಪರಹಿತನಾಗಿರಬೇಕು, ಜ್ಞಾನದ ದೀವಿಗೆಯನ್ನು ಎಲ್ಲೆಡೆ ಹಚ್ಚಬೇಕು’ ಎಂದು ಹೇಳಿದ್ದಾರೆ.

ಕರ್ನಾಟಕದ ಸಮಾಜಸುಧಾರಣೆಯ ಇತಿಹಾಸದಲ್ಲಿ ಕನಕ-ಪುರಂದರರದು ಬಹಳ ದೊಡ್ಡ ಹೆಸರು.ಸಾಹಿತ್ಯದ ಮೂಲಕ ಜಟಿಲವಾಗಿದ್ದ ಸಮಾಜವನ್ನು ಸಡಿಲ ಮಾಡುವತ್ತ ಅವರು ನಡೆಸಿದ ಪ್ರಯತ್ನ ಅನನ್ಯವಾದುದು.ಸಂಪ್ರದಾಯಸ್ತ ಸಮಾಜದಲ್ಲಿ ತಮ್ಮ ಪ್ರಖರ ವೈಚಾರಿಕತೆಯಿಂದ ಬಿರುಗಾಳಿ ಎಬ್ಬಿಸಿದವರು ಅವರು. ದಾಸವರ್ಯರಲ್ಲಿ ಕನಕದಾಸರು ಹಾಗು ಪುರಂದರದಾಸರು ದಾಸ ಸಾಹಿತ್ಯದ `ಅಶ್ವಿನಿದೇವತೆಗಳು’ಎಂದು ಪ್ರೊ.ದೇ.ಜವರೇಗೌಡರು ಹೇಳಿದುದು ಅತ್ಯಂತ ಸೂಕ್ತವಾಗಿದೆ.

ಉಪಸಂಹಾರ

ಒಟ್ಟಿನಲ್ಲಿ ಕನಕದಾಸರು ಭಕ್ತಿ ಸಾಹಿತ್ಯದ ಜೊತೆಗೆ ಸಮಾಜ ಸುಧಾರಣೆಯಲ್ಲಿಯೂ ಮಹತ್ವದ ಪಾತ್ರ ವಹಿಸಿದ ಮಹಾನ್ ಸಂತರು. ಅವರು ತಮ್ಮ ಕೀರ್ತನೆಗಳ ಮೂಲಕ ಸಮಾನತೆ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಜನರಲ್ಲಿ ಬೆಳೆಸಲು ಪ್ರಯತ್ನಿಸಿದರು. ಅವರ ಸಂದೇಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿವೆ. ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ಸಂಸ್ಕೃತಿಯಲ್ಲಿ ಅವರ ಸ್ಥಾನ ಸದಾಕಾಲ ಅಜರಾಮರವಾಗಿದೆ.

ಪುರಂದರದಾಸರು(1484-1564)

ಪುರಂದರದಾಸರು(1484-1564)

ದಾಸಕೂಟದಲ್ಲಿ ಪ್ರಕಾಶಮಾನವಾಗಿ ಬೆಳಗಿದ ದೃವತಾರೆಯೆಂದರೆ ಪುರಂದರದಾಸರು. ಇವರು ಭಕ್ತಾಗ್ರೇಸರು ಹಾಗೂ ಉದ್ದಾಮ ಪಂಡಿತರಾಗಿದ್ದರು. ಇವರು ವ್ಯಾಸರಾಯರ ಪರಮಶಿಷ್ಯರು, ‘ದಾಸರೆಂದರೆ ಪುರಂದರದಾಸರಯ್ಯ’ ಎಂದು ಗುರುಗಳಿಂದಲೇ ಹೊಗಳಿಸಿಕೊಂಡ ದಾಸ ಶಿಖಾಮಣಿ ಇವರು.ಇವರು ವಿಜಯನಗರ ಸಾಮ್ರಾಜ್ಯದ ಕೊನೆಯ ನೂರು ವರ್ಷಗಳ ಕಾಲದಲ್ಲಿ ಬದುಕಿದ್ದರು. ವಿಜಯನಗರ ಸಾಮ್ರಾಜ್ಯದ ಉಚ್ಚಾಯ ಕಾಲವಷ್ಟೇ ಅಲ್ಲ, ದಾಸ ಸಾಹಿತ್ಯದ ಸುಗ್ಗಿಯಕಾಲವೂ ಹೌದು. ತೆಲುಗಿನ ಅನ್ನಮಾಚಾರ್ಯ ಅವರ ಮೊಮ್ಮಗ ಚನ್ನಯಸೂರಿ ಹಾಗೂ ಕನಕದಾಸರು ಇವರ ಸಮಕಾಲೀನರಾಗಿದ್ದರು. ಬಳ್ಳಾರಿ ಜಿಲ್ಲೆಯ ಕಮಲಾಪುರದ ತಾಮ್ರಪಟವು ಪುರಂದರದಾಸರ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ.ಕನ್ನಡದಲ್ಲಿ ಭಕ್ತಿ ಸಾಹಿತ್ಯವನ್ನು ಅತ್ಯಂತ ಶ್ರೀಮಂತಗೊಳಿಸಿದರು. ಸಂಗೀತಶಾಸ್ತ್ರಕ್ಕೆ ಅಪಾರವಾದ ಕೊಡುಗೆನೀಡಿದರು.ಆದುದರಿಂದ ಇವರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯಲಾಗಿದೆ.

ಬಾಲ್ಯ ಮತ್ತು ಏಳಿಗೆ

ಪುರಂದರದಾಸರ ಮೂಲಹೆಸರು ಶ್ರೀನಿವಾಸನಾಯಕ, ಇವರ ತಂದೆ ವರದಪ್ಪನಾಯಕ. ಪುರಂದರದಾಸರು ಮಹಾರಾಷ್ಟ್ರದ ಈಗಿನ ಪುರಂದರಗಡದಲ್ಲಿ ಜನಿಸಿದರು ಎಂದು ಹೇಳಲಾಗಿದೆ. ಆದರೆ ಈ ಕುರಿತು ಸಂಶೋಧನೆ ಮಾಡಿದ ಕಪಟರಾಳ ಕೃಷ್ಣರಾಯರು ಇವರ ಹುಟ್ಟೂರು ಮಹಾರಾಷ್ಟ್ರದ ʻಪುರಂದರ’ ಎಂಬ ಹಳ್ಳಿ ಎಂದು ಸೂಚಿಸಿದ್ದಾರೆ. ಈ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಬರುವುದಿಲ್ಲ.

ಪುರಂದರದಾಸರ ವೈಯಕ್ತಿಕ ಜೀವನದ ಬಗ್ಗೆ ನಮಗೆ ಸರಿಯಾಗಿ ಮಾಹಿತಿ ಇಲ್ಲವಾದರೂ ಇವರ ತಂದೆ ವರದಪ್ಪನಾಯಕ ಪುರಂದರಘಡದ ಆಗರ್ಭ ಶ್ರೀಮಂತ ವ್ಯಾಪಾರಿಯಾಗಿದ್ದರು. ಅವರ ಮಗ ಶ್ರೀನಿವಾಸನಾಯಕನೂ ಆಗರ್ಭ ಶ್ರೀಮಂತ ವ್ಯಾಪಾರದಿಂದ ಅನರ್ಘ್ಯ ರತ್ನಗಳನ್ನು ಹೊಂದಬೇಕೆಂಬುದು ಅವನ ಬಯಕೆಯಾಗಿತ್ತು. ಇವನು ಎಷ್ಟು ಶ್ರೀಮಂತನೋ ಅಷ್ಟೇ ಜಿಪುಣ ಕೂಡ. ವಜ್ರದ ವ್ಯಾಪಾರದಲ್ಲಿ ಇವನನ್ನು ಮೀರಿಸುವವರೇ ಇರಲಿಲ್ಲ. ಸುವರ್ಣ ವ್ಯಾಪಾರದ ರಹಸ್ಯಗಳನೆಲ್ಲಾ ಇವನು ಕರಗತ ಮಾಡಿಕೊಂಡಿದ್ದನು. ತಂದೆಯ ಸಾವಿನ ನಂತರ ಇವನ ವ್ಯಾಪಾರ ಮತ್ತಷ್ಟು ವಿಸ್ತಾರಗೊಂಡಿತು. ಸಂಪತ್ತು ಮನೆಯ ತುಂಬೆಲ್ಲಾ ಹುಳುಕಾಡತೊಡಗಿತು. ಸಂಪತ್ತು ಹೆಚ್ಚಿದಂತೆಲ್ಲಾ ಅವನ ಲೋಭ, ಮಧ, ಮತ್ಸರಗಳೆಲ್ಲಾ ಹೆಚ್ಚುತ್ತಾ ಹೋದವು. ಮನೆಯಲ್ಲಿ ಮಡದಿ ಲಕ್ಷ್ಮೀಬಾಯಿ ಓರ್ವ ಧರ್ಮನಿಷ್ಟಳಾಗಿದ್ದಳು. ಆದರೆ ಶ್ರೀನಿವಾಸ ನಾಯಕನಿಗೆ ದಾನಧರ್ಮದಲ್ಲಿ ನಂಬಿಕೆಯಾಗಲಿ, ನಿಷ್ಠೆಯಾಗಲಿ ಇರಲೇ ಇಲ್ಲ. ಪರೋಪಕಾರ ಎಂದರೆ ಅವನಿಗೆ ಆಗದ ಮಾತಾಗಿತ್ತು. ಈತನ ರೀತಿನೀತಿ ಇವನ ಪತ್ನಿಗೆ ಸರಿಬರಲಿಲ್ಲ. ಆದರೂ ಪತಿಯ ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸಬೇಕಾದ ಅನಿವಾರ್ಯತೆ ಇತ್ತು ಅಂತಹ ಪರಿಸ್ಥಿತಿಯಲ್ಲಿಯೂ ಮಡದಿ ದೈವಭಕ್ತಿ ಹಾಗೂ ಪರೋಪಕಾರಕ್ಕೆ ಹೆಸರುವಾಸಿಯಾಗಿದ್ದಳು. ಬಡವರನ್ನು ಕಂಡರೆ ಮಡುಗುತ್ತಿದ್ದಳು. ಶ್ರೀನಿವಾಸನಾಯಕ ಎಷ್ಟೊಂದು ಜಿಪುಣನೆಂದರೆ ತನ್ನ ಮನೆಗೆ ಬಂದು ಹೋಗುವವರನ್ನು ಉಪವಾಸದಿಂದಲೇ ಕಳುಹಿಸುತ್ತಿದ್ದನು. ಇಂತಹ ಜಿಪುಣನಾದ ಶ್ರೀನಿವಾಸನಾಯಕ ಪುರಂದರದಾಸನಾಗಿ ಪರಿವರ್ತನೆ ಹೊಂದಿದ ಕಥೆ ಅತ್ಯಂತ ಸ್ವಾರಸ್ಯಕರವಾಗಿದೆ.

ಒಂದು ದಿನ ಭಗವಂತ ಬ್ರಾಹ್ಮಣವೇಷದಲ್ಲಿ ನಾಯಕನ ಅಂಗಡಿಗೆ ಬಂದು ಮಗನ ಉಪನಯನಕ್ಕಾಗಿ ಧನಸಹಾಯ ಮಾಡಬೇಕೆಂದು ಕೇಳಿಕೊಂಡ. ಜಿಪುಣನಾದ ಶ್ರೀನಿವಾಸನಾಯಕ ಹಲವಾರು ಬಾರಿ ಎಡತಾಕಿಸಿ ಅಂತಿಮವಾಗಿ ಕಾಸೊಂದನ್ನು ಆತನ ಕಡೆಗೆ ಬಿಸಾಕಿದ, ಆದರೆ ಅದೇ ಬ್ರಾಹ್ಮಣ ನಾಯಕನ ಮನೆಗೆ ಹೋಗಿ ಹಣಕಾಸಿನ ನೆರವನ್ನು ಬೇಡಿದ. ಧರ್ಮಪಾರಾಯಣಿಯಾದ ಲಕ್ಷ್ಮೀಬಾಯಿ ತನ್ನಲ್ಲಿ ಹಣವಿಲ್ಲದಿದುದರಿಂದ ತನ್ನ ವಜ್ರದ ಮೂಗುತಿಯನ್ನೇ ದಾನವಾಗಿ ಕೊಟ್ಟು ಕಳುಹಿಸಿದಳು. ಬ್ರಾಹ್ಮಣ ಆ ಮೂಗುತಿಯನ್ನು ಮಾರಲು ನಾಯಕನ ಅಂಗಡಿಗೆ ಹೋದನು. ಅದನ್ನು ತನ್ನ ಹೆಂಡತಿಯ ವಜ್ರದ ಮೂಗುತಿಯೆಂದು ಗುರುತಿಸಿದ ನಾಯಕ ಅದನ್ನು ಸಂದೂಕಿನಲ್ಲಿ ಭದ್ರವಾಗಿ ಇಟ್ಟು ನಾಳೆ ಹಣವನ್ನು ನೀಡುವೆನೆಂದು ಬ್ರಾಹ್ಮಣನನ್ನು ಸಾಗು ಹಾಕಿದನು. ನಂತರ ಮನೆಗೆಹೋಗಿ ವಿಚಾರಿಸಲಾಗಿ ದಿಗ್ಧಮೆಗೊಂಡ ಲಕ್ಷ್ಮಿಬಾಯಿ ಉತ್ತರಿಸಲಾಗದೆ ವಿಷಸೇವನೆಗೆ ಪ್ರಯತ್ನಿಸಿದಳು. ವಿಷವನ್ನು ಕುಡಿಯಲು ಬಟ್ಟಲನ್ನು ಎತ್ತಿದಾಕ್ಷಣವೇ ಮೂಗುತಿಯು ಅವಳ ಬಟ್ಟಲೊಳಗೆ ಬಿದ್ದುಬಿಟ್ಟಿತು. ಅದನ್ನು ತೆಗೆದುಕೊಂಡು ತನ್ನ ಗಂಡನಿಗೆ ನೀಡಿದಳು. ಆಶ್ಚರ್ಯಚಕಿತನಾದ ಶ್ರೀನಿವಾಸನಾಯಕ ತನ್ನ ಅಂಗಡಿಗೆ ಬಂದು ಪರೀಕ್ಷಿಸಿದ. ಹಾಕಿದ ಬೀಗ ಹಾಗೆಯೇ ಇದೆ. ಆದರೆ ಒಳಗಡೆ ಮಾತ್ರ ಮೂಗುತಿ ಇಲ್ಲ. ಆಗ ಅವನಿಗೆ ಬ್ರಾಹ್ಮಣನಾಗಿ ಬಂದವನು ಭಗವಂತನೇ ಇರಬೇಕೆಂದು ಅರಿವಾಯಿತು. ಇದರಿಂದ ಅವನ ಕಣ್ಣು ತೆರೆಯಿತು. ಭಗವಂತನ ಇಂತಹ ಪವಾಡ ನೋಡಿ ನಾಚಿಕೊಂಡ ಶ್ರೀನಿವಾಸನಾಯಕ ತನ್ನ ಐಶ್ವರ್ಯವನ್ನೆಲ್ಲಾ ಗಾನಮಾಡಿ ʻಕೃಷ್ಣಾರ್ಪಣ’ಎಂದು ಸರ್ವತ್ಯಾಗಮಾಡಿ ದಾಸಶ್ರೇಷ್ಟ ನಾದನು. ಅಂದಿನಿಂದ ʻಪುರಂದರದಾಸ’ ಎಂದು ಪ್ರಖ್ಯಾತರಾದರು. ಹೀಗೆ ಎಲ್ಲವನ್ನೂ ತ್ಯಾಗಮಾಡಿದ ಪುರಂದರದಾಸ “ಈಸಬೇಕು ಇದ್ದು ಜೈಸಬೇಕು, ಹೇಸಿಗೆ ಸಂಸಾರದಲ್ಲಿ ಆಸೆ ಲೇಪವಿಲ್ಲದ ಹಾಗೆʼʼ ಎಂಬ ಕೀರ್ತನೆಯನ್ನು ಹಾಡುತ್ತಾ ಕುಣಿಯುತ್ತಾ ಊರ ಬೀದಿಬೀದಿ ತಿರುಗತೊಡಗಿದರು.ಈ ತೆರನಾದ ಶ್ರೀನಿವಾಸನ ವಿಚಿತ್ರವನ್ನು ಕಂಡು ಇವನಿಗೆಲ್ಲೊ ಹುಚ್ಚು ಹಿಡಿದಿದೆ ಎಂದು ಜನ ಮಾತನಾಡಿಕೊಂಡರು.

ಮುಂದೆ ಪುರಂದರದಾಸರು ವ್ಯಾಸರಿಂದ ದೀಕ್ಷೆಯನ್ನು ಪಡೆದರು. ಇವರಿಗೆ ಲಕ್ಷ್ಮಣದಾಸ ಹೇಚಣದಾಸ ಹಾಗು ಮಧ್ವಪತಿದಾಸರೆಂಬ ಮಕ್ಕಳಿದ್ದರು. ಇವರೂ ಸಹ ಕೀರ್ತನೆಗಳನ್ನು ರಚಿಸಿ ಪ್ರಸಿದ್ಧರಾದರು. ಪುರಂದರದಾಸರಿಗೆ ಮಗಳೊಬ್ಬಳಿದ್ದಳೆಂದು ಹೇಳಲಾಗಿದೆ. ಆದರೆ ಮಕ್ಕಳು ಇವರ ಕಾಲದಲ್ಲಿಯೇ ಕಾಲವಾದರು. “ಗಿಳಿಯು ಪಂಜರದೊಳಿಲ್ಲ” ಎಂಬ ಪುರಂದರದಾಸರ ಕೀರ್ತನೆಯಿಂದಲೇ ಅವರ ಪುತ್ರವಿಯೋಗದ ಬಗ್ಗೆ ತಿಳಿದುಕೊಳ್ಳಬಹುದು. ಪುರಂದರದಾಸರು ತಮ್ಮ ಕೀರ್ತನೆಗಳನ್ನು ಹಾಡುತ್ತ ಶ್ರೀರಂಗ, ಕಂಚಿ, ಕಾಳಹಸ್ತಿ, ಸಿಂಹಗಿರಿ, ಹಸ್ತಿಶೈಲಿ, ಆಹೋಬಲ, ಶ್ರೀಶೈಲ, ಉಡುಪಿ. ಭದ್ರಾಚಲ ಮುಂತಾದ ಕಡೆಗೆ ಪ್ರವಾಸಮಾಡಿ ಜನಪ್ರಿಯಗೊಳಿಸಿದರು. ಇವರು ಪಾಂಡುರಂಗನ ಪರಮಭಕ್ತರು. ಪುರಂದರದಾಸರು ತಮ್ಮ ಬದುಕಿನ ಬಹುಭಾಗವನ್ನು ಪಂಪಾಕ್ಷೇತ್ರದಲ್ಲಿ ಕಳೆದರು. ಇವರು ಪುರಂದರ ವಿಠ್ಠಲನ ಅಂಕಿತದಲ್ಲಿ ಗೀತೆಗಳು, ಪದಗಳು, ಸುಳಾದಿಗಳು, ಉಗಾಭೋಗಗಳನ್ನು ರಚಿಸಿದ್ದಾರೆ. ಇವರು ನಾಲ್ಕು ಲಕ್ಷ ಇಪ್ಪತ್ತೈದು ಸಾವಿರ ಕೃತಿಗಳನ್ನು ರಚಿಸಿದರು ಎಂದು ಹೇಳಲಾಗಿದೆ. ಆದರೆ ಈಗ ಉಳಿದಿರುವುದು ಸಾವಿರ ಮಾತ್ರ ಶ್ರೀನಿವಾಸ ಪುರಂದರದಾಸರಾದ ಬಗ್ಗೆ ಈ ಕೀರ್ತನೆಯಿಂದ ತಿಳಿಯಬಹುದಾಗಿದೆ.

“ದಂಡಿಗೆ ಬೆತ್ತ ಹಿಡಿಯುವುದಕ್ಕೆ ನಾಚುತ್ತಿದ್ದ

ಅವರನ್ನು ದಂಡಿಗೆ ಬೆತ್ತ ಹಿಡಿಯುವಂತೆ ಮಾಡಿದಳು

ಆ ಮಡದಿ

ಗೋಪಾಳ ಬುಟ್ಟಿ ಹಿಡಿಯುವುದಕ್ಕೆ ಗರ್ವಿಸುತ್ತಿದ್ದ

ಅವರಿಗೆ ಆ ಬಗ್ಗೆ ಅಭಿಮಾನವನ್ನುಂಟು ಮಾಡಿದಳು ಆ ಆರ್ಧಾಂಗಿ!”

ಪುರಂದರದಾಸರ ಬೋಧನೆಗಳು:          

ಪುರಂದರದಾಸರು ನಿಂತ ನೀರಿನಂತೆ ಜಡವಾಗಿದ್ದ ಸಮಾಜವನ್ನು ಚಲನಶೀಲ ಸಮಾಜವನ್ನಾಗಿ ಪರಿವರ್ತಿಸಲು ಯತ್ನಿಸಿದರು.ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ಸತಿಪದ್ಧತಿಯನ್ನು ಉಗ್ರವಾಗಿ ಖಂಡಿಸಿದರು.

1. ಸಮಾಜದಲ್ಲಿನ ಮೂಢನಂಬಿಕೆ ಹಾಗೂ ಜನರ ಆಡಂಬರವನ್ನು ಖಂಡಿಸುತ್ತಾ “ಉದರವೈರಾಗ್ಯವಿದ್ದು ನಮ್ಮ ಪದುಮನಾಮನಲಿ ಲೇಶಭಕುತಿಯಿಲ್ಲ” ಎಂದು ವರ್ಣಿಸುತ್ತ ಮನುಷ್ಯನ ಅಂತರಂಗದ ಕ್ರೋಧ, ಮದ, ಮತ್ಸರಗಳನ್ನು ಬಯಲಿಗೆಳೆದರು.

2.ಬದುಕಿನ ಡಾಂಭಿಕತೆಯನ್ನು, ಜ್ಞಾನರಹಿತವಾದ ವರ್ತನೆಯನ್ನು ಗೇಲಿ ಮಾಡಿದ ಪುರಂದರದಾಸರು “ಮಡಿಮಡಿಯೆಂದು ಅಡಿಗಡಿಗೆ ಹಾರುವೆ ಮಡಿ ಮಾಡುವ ಬಗೆ ಬೇರುಂಟೆ” ಎಂದು ನುಡಿದರು.

3. “ಇರಬೇಕು ಇರದಿರಬೇಕು ಆಶಾಲೇಷ ಮಾಡದಾಂಗ ಈಸಬೇಕು ಇದ್ದು ಜೈಸಬೇಕು” ನಿರರ್ಥಕವಾಗಿ ಬದುಕನ್ನು ಸಾಗಿಸುವ ಸ್ತ್ರೀಯರನ್ನು ಕೂಡಿಕೊಂಡು ಇಡೀ ಜೀವನವನ್ನು ಹಾಳುಮಾಡಿಕೊಳ್ಳುವ ಮೂಢರನ್ನು ಪುರಂದರದಾಸರು ಅತ್ಯಂತ ಸೊಗಸಾಗಿ ಚಿತ್ರಿಸಿದ್ದಾರೆ.

4. “ಕಲ್ಲಾಗಿರಬೇಕು ಕಠಿಣಭವತೊರೆಯೊಳಗೆ, ಬಿಲ್ಲಾಗಿರಬೇಕು ಬಲ್ಲವರೊಳಗೆ” ಎಂದು ಬದುಕಿನ ನಶ್ವರತೆಯನ್ನು ವ್ಯರ್ಥ ವರ್ತನೆಯ ಕುರಿತು “ಅಂಬಿಗ ನಾ ನಿನ್ನ ನಂಬಿದೆ” ಎಂಬ ಪದದಲ್ಲಿ ಸುಂದರವಾದ ರೂಪ ಕೊಟ್ಟಿದ್ದಾರೆ.

5. ʻಪಯಣಿಗನು ನದಿ ದಾಟಬೇಕಿದೆ ಅವನು ಕುಳಿತಿರುವ ದೋಣಿಯಲ್ಲಿ ಒಂಬತ್ತು ರಂಧ್ರಗಳಿವೆ. ಅದು ಆರು ತೆರೆಗಳನ್ನು ಹಾಯಬೇಕಿದೆ’ ಎಂತಹ ಸುಂದರವಾದ ರೂಪಕವನ್ನು ಪುರಂದರರು ನೀಡಿದ್ದಾರೆ. ಹೀಗೆ ಪುರಂದರ ದಾಸರು ಬದುಕಿನ ವಿವಿಧ ಸಮಸ್ಯೆಗಳನ್ನು ವಿವಿಧ ದೃಷ್ಟಿಕೋನದಿಂದ ನೋಡಿದ್ದಾರೆ. ಆದರೆ ಅದಕ್ಕೆ ಪರಿಹಾರ ಪುರಂದರ ವಿಠ್ಠಲನ ಸನ್ನಿಧಿ ಮಾತ್ರ ಎಂದು ಹೇಳಿದ್ದಾರೆ.

6. ಪರಿಶುದ್ಧ ಹರಿಧ್ಯಾನವನ್ನು ಸೂಚಿಸಲು ಪುರಂದರರು “ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕುʼʼ ಎಂದಿದ್ದಾರೆ.

ಪಂಡರಾಪುರದಿಂದ ಹಂಪೆಗೆ ಹೋದ ಪುರಂದರದಾಸರು ವಿರುಪಾಕ್ಷ ದೇವರ ದರ್ಶನವನ್ನು ಮಾಡಿ “ಕೈಲಾಸವಾಸ ಗೌರೀಶ ಈಶ” ಎಂಬ ಕೀರ್ತನೆಯನ್ನು ಹಾಡಿ ಆನಂದಪರವಶರಾದರು.ಹೀಗೆ ಹಂಪೆಯಲ್ಲಿ ಸಂಸಾರಸಮೇತರಾಗಿ ನೆಲಸಿದ ಪುರಂದರದಾಸರು ವಿರಕ್ತರಾಗಿ ಹರಿಭಕ್ತಿ ಸಾಧನೆಯೇ ಮುಕ್ತಿಗೆ ಮಾರ್ಗವೆಂದು ಸಾರಿದರು. ಬೇಲೂರು ಕೇಶವದಾಸರು ಹೇಳುವಂತೆ “ಪಂಚಮರ ಉದ್ಧಾರ, ಕೀರ್ತನ ಪದ್ಧತಿ ಉದ್ದಾರ, ಸಂಗೀತಶಾಸ್ತ್ರ ಉದ್ಧಾರ, ಕರ್ನಾಟಕ ಭಾಷೋಜ್ಜೀವನ,ಹರಿಕಥೆಯ ಮೂಲಕ ಭಕ್ತಿಯ ಪ್ರಸಾರ ಮಾಡಿದ ದಾಸ ಶ್ರೇಷ್ಠ” ಪುರಂದರದಾಸರು.

ಉಪಸಂಹಾರ

ಪುರಂದರದಾಸರು ತಮ್ಮ ಕೀರ್ತನೆಗಳ ಮೂಲಕ ಭಕ್ತಿ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಜನರಿಗೆ ಸಾರಿದ ಮಹಾನ್ ದಾಸರು. ಸಮಾಜದಲ್ಲಿದ್ದ ಮೂಢನಂಬಿಕೆ ಮತ್ತು ಅನ್ಯಾಯಗಳನ್ನು ವಿರೋಧಿಸಿ ಸಮಾನತೆ ಹಾಗೂ ಧಾರ್ಮಿಕ ಚಿಂತನೆಗಳನ್ನು ಉತ್ತೇಜಿಸಿದರು. ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅವರ ಕೊಡುಗೆ ಅಪಾರವಾಗಿದ್ದು ಅವರು ಶಾಶ್ವತವಾಗಿ ಸ್ಮರಣೀಯರಾಗಿದ್ದಾರೆ. ಆದ್ದರಿಂದ ಪುರಂದರದಾಸರು ಕನ್ನಡ ಸಂಸ್ಕೃತಿ ಮತ್ತು ಭಕ್ತಿ ಪರಂಪರೆಯಲ್ಲಿ ಅಜರಾಮರ ವ್ಯಕ್ತಿತ್ವವಾಗಿದ್ದಾರೆ.

ರಾಮಾನುಜಾಚಾರ್ಯರ ಜೀವನ ಮತ್ತು ಬೋಧನೆಗಳು

ರಾಮಾನುಜಾಚಾರ್ಯರ ಜೀವನ ಮತ್ತು ಬೋಧನೆಗಳು

ಪೀಠಿಕೆ

ವೈಷ್ಣವ ಧರ್ಮದ ಪ್ರಮುಖ ವಕೀಲರಾದ ಶ್ರೀ ರಾಮಾನುಜಾಚಾರ್ಯರು ತಮ್ಮ ಜೀವಿತಾವಧಿಯಲ್ಲಿ ಭಾರತೀಯ ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. 1017 ರಲ್ಲಿ ತಮಿಳುನಾಡಿನಲ್ಲಿ ಜನಿಸಿದ ಅವರ ಬೋಧನೆಗಳು ಮತ್ತು ಅಭ್ಯಾಸಗಳು ಭಾರತದ ಆಧ್ಯಾತ್ಮಿಕ ಭೂದೃಶ್ಯದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿವೆ. ಈ ಬ್ಲಾಗ್ ಅವರ ಜೀವನ, ಬೋಧನೆಗಳು ಮತ್ತು ಭವಿಷ್ಯದ ಪೀಳಿಗೆಗಾಗಿ ಅವರು ರಚಿಸಿದ ಪರಂಪರೆಯನ್ನು ಪರಿಶೋಧಿಸುತ್ತದೆ.

ಆರಂಭಿಕ ಜೀವನ

ಶ್ರೀ ರಾಮಾನುಜಾಚಾರ್ಯರು ಕೇಶವ ಸೋಮಯಾಜಿ ಮತ್ತು ಕಾಂತಿಮತಿ ದಂಪತಿಗಳಿಗೆ ಚೆನ್ನೈ (ಮದ್ರಾಸ್) ಬಳಿಯ ಪಟ್ಟಣದಲ್ಲಿ ಜನಿಸಿದರು. ಅವರ ಶೈಕ್ಷಣಿಕ ಪ್ರಯಾಣವು ಕಂಚಿಯಲ್ಲಿ ಪ್ರಾರಂಭವಾಯಿತು, ಅಲ್ಲಿ ಅವರು ಯಾದವ ಪ್ರಕಾಶರ ಅಡಿಯಲ್ಲಿ ಅಧ್ಯಯನ ಮಾಡಿದರು. ಈ ಅವಧಿಯಲ್ಲಿ ರಾಮಾನುಜರು ತಮ್ಮ ಅಸಾಧಾರಣ ಬುದ್ಧಿಶಕ್ತಿಯನ್ನು ಪ್ರದರ್ಶಿಸಿದರು, ಅಂತಿಮವಾಗಿ ತಮ್ಮ ಗುರುವನ್ನು ಚರ್ಚೆಯಲ್ಲಿ ಸೋಲಿಸಿದರು. ಆದಾಗ್ಯೂ, ಯಾದವರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತಗಳೊಂದಿಗಿನ ಅವರ ಭಿನ್ನಾಭಿಪ್ರಾಯಗಳು ಉದ್ವಿಗ್ನತೆಗೆ ಕಾರಣವಾಯಿತು, ಅವರು ಕಂಚಿಯನ್ನು ತೊರೆದು ಮನೆಗೆ ಮರಳಲು ಪ್ರೇರೇಪಿಸಿದರು.

16 ನೇ ವಯಸ್ಸಿನಲ್ಲಿ, ತನ್ನ ತಾಯಿಯ ಆಸೆಯನ್ನು ಪೂರೈಸಿದ ರಾಮಾನುಜರು ಲಕ್ಷ್ಮಿ ಎಂಬ ಮಹಿಳೆಯನ್ನು ವಿವಾಹವಾದರು. ಅವರ ಪಾಂಡಿತ್ಯದ ಪರಾಕ್ರಮವು ಶ್ರೀರಂಗಮಠದ ಪೂಜ್ಯ ಅರ್ಚಕರಾದ ಶ್ರೀ ಯಾಮುನಾಚಾರ್ಯರ ಗಮನವನ್ನು ಸೆಳೆಯಿತು, ಅವರು ಅವರನ್ನು ತಮ್ಮ ಶಿಷ್ಯರನ್ನಾಗಿ ಮಾಡಲು ಉದ್ದೇಶಿಸಿದರು. ದುರದೃಷ್ಟವಶಾತ್, ಅವರು ಭೇಟಿಯಾಗುವ ಮೊದಲೇ ಯಾಮುನಾಚಾರ್ಯರು ನಿಧನರಾದರು. ಅದೇನೇ ಇದ್ದರೂ, ಅವರ ಶಿಷ್ಯರಾದ ಮಹಾಪೂರ್ಣಾಚಾರ್ಯರು ರಾಮಾನುಜರ ಸಾಮರ್ಥ್ಯವನ್ನು ಗುರುತಿಸಿದರು ಮತ್ತು ಅವರ ಉತ್ತರಾಧಿಕಾರಿಯಾಗಿ ನೇಮಿಸಿದರು.

ಆಧ್ಯಾತ್ಮಿಕ ಪಯಣ

ಮಹಾಪೂರ್ಣಾಚಾರ್ಯರ ಶಿಷ್ಯರಾದ ನಂತರ, ರಾಮಾನುಜರು ತಮ್ಮ ಲೌಕಿಕ ಜೀವನವನ್ನು ತ್ಯಜಿಸಿದರು ಮತ್ತು ಆಧ್ಯಾತ್ಮಿಕತೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಅವರು ಭಾರತದಾದ್ಯಂತ ತೀರ್ಥಯಾತ್ರೆಯನ್ನು ಕೈಗೊಂಡರು, ಕಾಶ್ಮೀರ, ಬದರಿ, ಕಾಶಿ, ತಿರುಪತಿ, ದ್ವಾರಕಾ, ಪುರಿ, ಮಧುರೈ ಮತ್ತು ಕಂಚಿ ಮುಂತಾದ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದರು, ವೈಷ್ಣವ ಧರ್ಮದ ಬೋಧನೆಗಳನ್ನು ಹರಡಿದರು.

ಈ ಸಮಯದಲ್ಲಿ, ರಾಮಾನುಜರು ಚೋಳ ರಾಜ ಕುಲೋತ್ತುಂಗನಿಂದ ಕಿರುಕುಳವನ್ನು ಎದುರಿಸಿದರು, ಅವರು ವೈಷ್ಣವ ಪಂಥದ ಪ್ರಚಾರವನ್ನು ನಿರಾಕರಿಸಿದರು. ಹಗೆತನವನ್ನು ಸಹಿಸಲಾಗದೆ, ಅವರು ಕರ್ನಾಟಕದಲ್ಲಿ ಆಶ್ರಯ ಪಡೆದರು, ಅಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನ ಅವರಿಗೆ ರಕ್ಷಣೆ ನೀಡಿದರು. ಎರಡು ದಶಕಗಳ ಕಾಲ, ರಾಮಾನುಜರು ಅವರ ಆಶ್ರಯದಲ್ಲಿ ಪ್ರವರ್ಧಮಾನಕ್ಕೆ ಬಂದರು, ಮೇಲುಕೋಟೆಯಲ್ಲಿ ಯತಿರಾಜ ಮಠ ಮತ್ತು ಚಲುವನಾರಾಯಣ ದೇವಸ್ಥಾನವನ್ನು ಸ್ಥಾಪಿಸಿದರು ಮತ್ತು ವೈರಮುಡಿ ಉತ್ಸವವನ್ನು ಸ್ಥಾಪಿಸಿದರು, ಇದನ್ನು ಇಂದಿಗೂ ಆಚರಿಸಲಾಗುತ್ತದೆ.

ಸಾಮಾಜಿಕ ಸುಧಾರಣೆಗಳು  

ರಾಮಾನುಜಾಚಾರ್ಯರ ಅತ್ಯಂತ ಕ್ರಾಂತಿಕಾರಿ ನಿರ್ಧಾರವೆಂದರೆ ಹರಿಜನರ (ಈಗ ದಲಿತರು ಎಂದು ಕರೆಯುತ್ತಾರೆ) ಕಲ್ಯಾಣಕ್ಕಾಗಿ ಪ್ರತಿಪಾದಿಸುವುದು. ಅವರು ದೇವಾಲಯಗಳನ್ನು ಪ್ರವೇಶಿಸಲು ಅವರಿಗೆ ಅನುಮತಿ ನೀಡಿದರು, ಇದು ಅವರ ಕಾಲಕ್ಕೆ ಅಡಿಪಾಯ ಹಾಕುವ ಅಭ್ಯಾಸವಾಗಿದೆ ಮತ್ತು ಸಮಕಾಲೀನ ಸಮಾಜದಲ್ಲಿ ಗಮನಾರ್ಹವಾಗಿದೆ. ಈ ವಿಧಾನವು ಆಧ್ಯಾತ್ಮಿಕ ಆಚರಣೆಗಳಲ್ಲಿ ಸಮಾನತೆ ಮತ್ತು ಒಳಗೊಳ್ಳುವಿಕೆಗೆ ಅವರ ಬದ್ಧತೆಯನ್ನು ಪ್ರದರ್ಶಿಸಿತು.

ಅಂತಿಮ ವರ್ಷಗಳು ಮತ್ತು ಪರಂಪರೆ

ಕುಲೋತ್ತುಂಗನ ಮರಣದ ನಂತರ, ರಾಮಾನುಜಾಚಾರ್ಯರು ತಮ್ಮ ತಾಯ್ನಾಡಿಗೆ ಮರಳಿದರು, ಶ್ರೀ ರಂಗಂ ಮಠದಲ್ಲಿ ಅಧ್ಯಕ್ಷರ ಪಾತ್ರವನ್ನು ವಹಿಸಿಕೊಂಡರು. ಅವರು 1137 CE ನಲ್ಲಿ 120 ನೇ ವಯಸ್ಸಿನಲ್ಲಿ ಹಾದುಹೋಗುವವರೆಗೂ ಅವರ ತತ್ವಶಾಸ್ತ್ರವನ್ನು ಬೋಧಿಸುವುದನ್ನು ಮತ್ತು ಹರಡುವುದನ್ನು ಮುಂದುವರೆಸಿದರು. ಅವರ ಬೋಧನೆಗಳು ಅಸಂಖ್ಯಾತ ಅನುಯಾಯಿಗಳನ್ನು ಪ್ರೇರೇಪಿಸುವುದನ್ನು ಮುಂದುವರೆಸುತ್ತವೆ, ಅವರನ್ನು ಭಾರತೀಯ ಆಧ್ಯಾತ್ಮಿಕತೆಯಲ್ಲಿ ಪ್ರಮುಖ ವ್ಯಕ್ತಿಯಾಗಿಸಿದವು.

ರಾಮಾನುಜಾಚಾರ್ಯರ ಬೋಧನೆಗಳು

  1. ವಿಶಿಷ್ಟಾದ್ವೈತದ ತತ್ವಶಾಸ್ತ್ರ: ರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ಸಿದ್ಧಾಂತದ ಕಟ್ಟಾ ಪ್ರತಿಪಾದಕರಾಗಿದ್ದರು, ಇದು ಯಾಮುನಾಚಾರ್ಯರ ಬೋಧನೆಗಳಲ್ಲಿ ಬೇರೂರಿರುವ ತತ್ವಶಾಸ್ತ್ರವಾಗಿದೆ. ಈ ಸಿದ್ಧಾಂತವನ್ನು ಮೂರು ಮೂಲಭೂತ ಅಂಶಗಳ ಮೇಲೆ ನಿರ್ಮಿಸಲಾಗಿದೆ: ಚಿತ್ (ಆತ್ಮ), ಅಚಿತ್ (ಜಗತ್ತು), ಮತ್ತು ಬ್ರಹ್ಮ (ಸುಪ್ರೀಮ್). ಈ ಚೌಕಟ್ಟಿನಲ್ಲಿ, ಚಿತ್ ಮತ್ತು ಅಚಿತ್ ಬ್ರಹ್ಮಾಂಡದ ಅಂತಿಮ ಸೃಷ್ಟಿಕರ್ತ ಮತ್ತು ಪೋಷಕನಾದ ಬ್ರಹ್ಮನ ಗುಣಲಕ್ಷಣಗಳಾಗಿ ನೋಡಲಾಗುತ್ತದೆ.
  2. ಬ್ರಹ್ಮನ ಸ್ವರೂಪ: ರಾಮಾನುಜರ ಪ್ರಕಾರ, ಬ್ರಹ್ಮನು ಸರ್ವಶಕ್ತತೆ, ಸರ್ವಜ್ಞತೆ ಮತ್ತು ಸದ್ಗುಣಗಳಿಂದ ನಿರೂಪಿಸಲ್ಪಟ್ಟಿದ್ದಾನೆ. ಅವನು ನಿರಾಕಾರನಾಗಿದ್ದರೂ ಸರ್ವವ್ಯಾಪಿಯಾಗಿದ್ದಾನೆ, ಶಾಶ್ವತ ಆನಂದ ಮತ್ತು ಸಚ್ಚಿದಾನಂದ (ಸತ್ಯ, ಪ್ರಜ್ಞೆ ಮತ್ತು ಆನಂದ) ಸಾರವನ್ನು ನೀಡುವವನಾಗಿ ಸೇವೆ ಸಲ್ಲಿಸುತ್ತಾನೆ.
  3. ಮಾಯವಾದದ ಟೀಕೆ: ರಾಮಾನುಜಾಚಾರ್ಯರು ಶಂಕರಾಚಾರ್ಯರ ಜಗತ್ತನ್ನು ಭ್ರಮೆ (ಮಾಯಾ) ಎಂದು ನೋಡುವುದನ್ನು ಪ್ರಶ್ನಿಸಿದರು. ದೇವರು ನಿಜವಾಗಿಯೂ ಸೃಷ್ಟಿಕರ್ತನಾಗಿದ್ದರೆ, ಜಗತ್ತನ್ನು ಕೇವಲ ಭ್ರಮೆ ಎಂದು ತಳ್ಳಿಹಾಕಲಾಗುವುದಿಲ್ಲ ಎಂದು ಅವರು ವಾದಿಸಿದರು; ಇದು ಒಂದು ನಿರ್ದಿಷ್ಟ ವಾಸ್ತವತೆಯನ್ನು ಹೊಂದಿರಬೇಕು.
  4. ಜೀವಾತ್ಮ ಮತ್ತು ಪರಮಾತ್ಮನ ನಡುವಿನ ವ್ಯತ್ಯಾಸ: ಪ್ರತ್ಯೇಕ ಆತ್ಮ (ಜೀವಾತ್ಮ) ಮತ್ತು ಪರಮಾತ್ಮ (ಪರಮಾತ್ಮ) ಒಂದೇ ಎಂಬ ಶಂಕರಾಚಾರ್ಯರ ಪ್ರತಿಪಾದನೆಯನ್ನು ರಾಮಾನುಜರು ಒಪ್ಪಲಿಲ್ಲ. ವೈಯಕ್ತಿಕ ಆತ್ಮಗಳು ವಿಮೋಚನೆಯನ್ನು ಸಾಧಿಸಬಹುದು ಮತ್ತು ದೈವಿಕ ಉಪಸ್ಥಿತಿಯನ್ನು ಅನುಭವಿಸಬಹುದು, ಅವರು ಪರಮಾತ್ಮನಿಂದ ಭಿನ್ನವಾಗಿರುತ್ತಾರೆ ಎಂದು ಅವರು ಪ್ರತಿಪಾದಿಸಿದರು.

ಉಪಸಂಹಾರ

ಶ್ರೀ ರಾಮಾನುಜಾಚಾರ್ಯರ ಜೀವನ ಮತ್ತು ಬೋಧನೆಗಳು ಆಧ್ಯಾತ್ಮಿಕ ಸತ್ಯ ಮತ್ತು ಸಾಮಾಜಿಕ ನ್ಯಾಯದ ಅನ್ವೇಷಣೆಯಲ್ಲಿ ಭರವಸೆ ಮತ್ತು ಮಾರ್ಗದರ್ಶನದ ದಾರಿದೀಪವನ್ನು ಪ್ರತಿನಿಧಿಸುತ್ತವೆ. ಅವರ ತಾತ್ವಿಕ ಕೊಡುಗೆಗಳು ಮತ್ತು ಒಳಗೊಳ್ಳುವಿಕೆಗೆ ಬದ್ಧತೆಯು ಸಮಕಾಲೀನ ಸಮಾಜದಲ್ಲಿ ಪ್ರತಿಧ್ವನಿಸುತ್ತಲೇ ಇದೆ, ಅವರನ್ನು ವೈಷ್ಣವ ಸಂಪ್ರದಾಯದಲ್ಲಿ ಮತ್ತು ಅದರಾಚೆಗೆ ಗೌರವಾನ್ವಿತ ವ್ಯಕ್ತಿಯಾಗಿಸುತ್ತದೆ.

ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳು

ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳು

ಹಿಂದೂ ತತ್ತ್ವಶಾಸ್ತ್ರದಲ್ಲಿ ಅತ್ಯಂತ ಗೌರವಾನ್ವಿತ ಸಂತರಲ್ಲಿ ಒಬ್ಬರಾದ ಮಧ್ವಾಚಾರ್ಯರು 1238 CE ನಲ್ಲಿ ಉಡುಪಿ ಬಳಿಯ ಪಾಜಕ ಗ್ರಾಮದಲ್ಲಿ ಜನಿಸಿದರು. ಅವರ ತಂದೆ, ಮಧ್ಯಗೇಹ ನಾರಾಯಣ ಭಟ್ಟ ಮತ್ತು ತಾಯಿ, ವೇದಾವತಿ (ಮೊದಲ ಹೆಸರು ವಾಸುದೇವ), ಅವರ ಆಧ್ಯಾತ್ಮಿಕ ಬೆಳವಣಿಗೆಗೆ ಪೋಷಣೆಯ ವಾತಾವರಣವನ್ನು ಒದಗಿಸಿದರು. ಚಿಕ್ಕ ವಯಸ್ಸಿನಿಂದಲೂ, ಮಧ್ವಾಚಾರ್ಯರು ಅಸಾಧಾರಣ ಬುದ್ಧಿಶಕ್ತಿ ಮತ್ತು ಆಧ್ಯಾತ್ಮಿಕತೆಯ ಕಡೆಗೆ ಆಳವಾದ ಒಲವನ್ನು ಪ್ರದರ್ಶಿಸಿದರು. ಉಡುಪಿಯ ಅಚ್ಯುತ ಪ್ರೇಕ್ಷಕರಿಂದ ಸನ್ಯಾಸಿಯಾಗಿ ದೀಕ್ಷೆ ಪಡೆದ ಅವರು ನಂತರ ಅವರ ಬಳಿ ಅಧ್ಯಯನ ಮಾಡಿದರು, ವೇದಗಳು, ಉಪನಿಷತ್ತುಗಳು, ಪುರಾಣಗಳು ಮತ್ತು ಇತಿಹಾಸದ ಆಳವಾದ ಬೋಧನೆಗಳನ್ನು ಅಧ್ಯಯನ ಮಾಡಿದರು. ತಾತ್ವಿಕ ಚರ್ಚೆಗಳ ಸರಣಿಯಲ್ಲಿ ಅವರು ತಮ್ಮ ಗುರುವನ್ನು ಯಶಸ್ವಿಯಾಗಿ ಸೋಲಿಸಿದಾಗ ಅವರ ಬೌದ್ಧಿಕ ಪರಾಕ್ರಮವು ಶೀಘ್ರದಲ್ಲೇ ಸ್ಪಷ್ಟವಾಯಿತು, ಅವರು ಅಸಾಧಾರಣ ವಿದ್ವಾಂಸರು ಮತ್ತು ಶಿಕ್ಷಕರಾಗಿ ತಮ್ಮ ಸ್ಥಾನವನ್ನು ಸ್ಥಾಪಿಸಿದರು.

ಧರ್ಮ ಪ್ರಾಚಾರ್ಯ: ಬೋಧನೆಗಳನ್ನು ಹರಡುವುದು

ಮಧ್ವಾಚಾರ್ಯರು ತಮ್ಮ ತತ್ತ್ವಶಾಸ್ತ್ರದ ತತ್ವಗಳನ್ನು ಹರಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು, ದ್ವೈತ (ದ್ವೈತ) ಸಿದ್ಧಾಂತವನ್ನು ಪ್ರತಿಪಾದಿಸಿದರು. ಅವರು ಭಾರತದಾದ್ಯಂತ ವ್ಯಾಪಕ ಪ್ರವಾಸಗಳನ್ನು ಕೈಗೊಂಡರು, ಉತ್ತರದ ಬದರಿಯಿಂದ ದಕ್ಷಿಣದ ರಾಮೇಶ್ವರದವರೆಗೆ ಪ್ರಯಾಣಿಸಿದರು. ಅವರ ಪ್ರಯಾಣವು ಉತ್ತರದಲ್ಲಿ ಕಾಶಿ, ಹರಿದ್ವಾರ, ಕಳಿಂಗ, ದ್ವಾರಕಾ ಮತ್ತು ದಕ್ಷಿಣದಲ್ಲಿ ಮಹಾರಾಷ್ಟ್ರ, ಗೋವಾ, ಕಂಚಿ, ಶ್ರೀರಂಗಂ ಮತ್ತು ತಿರುವನಂತಪುರಕ್ಕೆ ಮಹತ್ವದ ಭೇಟಿಗಳನ್ನು ಒಳಗೊಂಡಿತ್ತು.

ಈ ಪ್ರಯಾಣದ ಸಮಯದಲ್ಲಿ, ಮಧ್ವಾಚಾರ್ಯರು ಹಲವಾರು ತಾತ್ವಿಕ ಚರ್ಚೆಗಳಲ್ಲಿ ತೊಡಗಿಸಿಕೊಂಡರು, ವಿಜಯಶಾಲಿಯಾದರು ಮತ್ತು ಅನೇಕ ಅನುಯಾಯಿಗಳನ್ನು ಗೆದ್ದರು. ನರಹರಿತೀರ್ಥ, ಮಧ್ವತೀರ್ಥ, ತ್ರಿವಿಕ್ರಮ ಪಂಡಿತ, ವಿಷ್ಣುತೀರ್ಥ ಮತ್ತು ಪದ್ಮನಾಭ ತೀರ್ಥ ಸೇರಿದಂತೆ ಪ್ರಮುಖ ಶಿಷ್ಯರು ಅವರ ಬೋಧನೆಗಳಿಂದ ಪ್ರಭಾವಿತರಾದರು. ಅವರು ದ್ವಾರಕೆಯಿಂದ ಶ್ರೀಕೃಷ್ಣ ಮತ್ತು ಬಲರಾಮನ ವಿಗ್ರಹಗಳನ್ನು ತಂದು ಉಡುಪಿ ಮತ್ತು ಮಲ್ಪೆಯಲ್ಲಿ ಪ್ರತಿಷ್ಠಾಪಿಸಿದಾಗ ಅವರ ಸಿದ್ಧಾಂತವನ್ನು ಪ್ರಚಾರ ಮಾಡುವಲ್ಲಿ ಅವರ ಬದ್ಧತೆ ಸ್ಪಷ್ಟವಾಗಿದೆ. ಭಗವಾನ್ ಕೃಷ್ಣನ ಎಂಟು ಪತ್ನಿಯರನ್ನು ಸ್ಮರಿಸಲು, ಅವರು ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು, ಇದು ಆರಾಧನೆ ಮತ್ತು ತತ್ವಶಾಸ್ತ್ರದ ಮಹತ್ವದ ಕೇಂದ್ರವಾಯಿತು.

ಅಷ್ಟಮಠಗಳು: ದ್ವೈತ ತತ್ವಶಾಸ್ತ್ರದ ಸ್ತಂಭಗಳು

ಮಧ್ವಾಚಾರ್ಯರು ಸ್ಥಾಪಿಸಿದ ಎಂಟು ಅಷ್ಟಮಠಗಳು:

  1. ಪೇಜಾವರ ಮಠ
  2. ಸೊದೆ ಮಠ
  3. ಕೃಷ್ಣಾಪುರ ಮಠ
  4. ಪುತ್ತಿಗೆ ಮಠ
  5. ಆದನೂರು ಮಠ
  6. ಕಾನೂರು ಮಠ
  7. ಪುಲಿಮಾರು ಮಠ
  8. ಶಿರೂರು ಮಠ

ಈ ಮಠಗಳು ದ್ವೈತ ತತ್ತ್ವಶಾಸ್ತ್ರದ ಪ್ರಚಾರಕ್ಕೆ ನಿರ್ಣಾಯಕ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದವು. ಮಧ್ವಾಚಾರ್ಯರಿಂದ ಪ್ರಭಾವಿತರಾದ ಅವರ ಶಿಷ್ಯರು ನಂತರ ಕರ್ನಾಟಕದಾದ್ಯಂತ ಹಲವಾರು ಇತರ ಮಠಗಳನ್ನು ಸ್ಥಾಪಿಸಿದರು, ಮುಳುಬಾಗಿಲು ಬಳಿಯ ನರಸಿಂಹ ತೀರ್ಥದಲ್ಲಿ ವಾದಿರಾಜ ಮಠ, ಸೋಸಲೆಯಲ್ಲಿ ವ್ಯಾಸರ ಮಠ ಮತ್ತು ಕುಂದಾಪುರ ಸೇರಿದಂತೆ. ಅವರ ಪ್ರಭಾವದಿಂದ ಸ್ಥಾಪಿಸಲಾದ ಇತರ ಗಮನಾರ್ಹ ಮಠಗಳೆಂದರೆ ಕೂಡಲಗಿ ಮಠ, ಮಜ್ಜಿಗೆಹಳ್ಳಿಮಠ, ಉತ್ತರಾಧಿ ಮಠ ಮತ್ತು ಛತ್ರಾಪುರ ಮಠ.

ಮಧ್ವಾಚಾರ್ಯರ ಬೋಧನೆಗಳು

ಮಧ್ವಾಚಾರ್ಯರ ಬೋಧನೆಗಳು ದ್ವೈತ ತತ್ತ್ವಶಾಸ್ತ್ರಕ್ಕೆ ಅಡಿಪಾಯವನ್ನು ಹಾಕಿದವು, ಇದು ವೈಯಕ್ತಿಕ ಆತ್ಮ (ಜೀವಾತ್ಮ) ಮತ್ತು ಪರಮಾತ್ಮ (ಪರಮಾತ್ಮ) ನಡುವಿನ ವ್ಯತ್ಯಾಸವನ್ನು ಒತ್ತಿಹೇಳುತ್ತದೆ. ಪ್ರಮುಖ ಬೋಧನೆಗಳು ಸೇರಿವೆ:

  1. ಜೀವಾತ್ಮ ಮತ್ತು ಪರಮಾತ್ಮನ ಭಿನ್ನತೆ: ವೈಯಕ್ತಿಕ ಆತ್ಮ ಮತ್ತು ಪರಮಾತ್ಮ ಮೂಲಭೂತವಾಗಿ ವಿಭಿನ್ನ ಘಟಕಗಳು ಎಂದು ಮಧ್ವಾಚಾರ್ಯರು ಒತ್ತಿ ಹೇಳಿದರು.
  2. ವಿಷ್ಣು ಆರಾಧನೆ: ಅವರು ವಿಷ್ಣುವಿನ ಆರಾಧನೆಯನ್ನು ಪ್ರತಿಪಾದಿಸಿದರು, ಅವರು ಭಕ್ತಿ ಮತ್ತು ಗೌರವಕ್ಕೆ ಅರ್ಹವಾದ ಪರಮ ದೇವತೆ ಎಂದು ಪ್ರತಿಪಾದಿಸಿದರು.
  3. ದ್ವೈತ ಸಿದ್ಧಾಂತದ ತ್ರಿರತ್ನ: ಮಧ್ವಾಚಾರ್ಯರು ಬ್ರಹ್ಮನ್ (ಅಂತಿಮ ವಾಸ್ತವ), ಜೀವಾತ್ಮ (ವೈಯಕ್ತಿಕ ಆತ್ಮ) ಮತ್ತು ಜಡ ಜಗತ್ತು (ಅಚಿತ್) ಒಳಗೊಂಡಿರುವ ತ್ರಿರತ್ನ ಪರಿಕಲ್ಪನೆಯನ್ನು ಪರಿಚಯಿಸಿದರು. ಬ್ರಹ್ಮವು ಸರ್ವವ್ಯಾಪಿಯಾಗಿದೆ ಮತ್ತು ಎಲ್ಲಾ ಮರ್ತ್ಯ ಜೀವಿಗಳು (ಚಿತ್ಗಳು) ಮತ್ತು ನಿರ್ಜೀವ ಘಟಕಗಳು (ಅಚಿತ್ಗಳು) ಬ್ರಹ್ಮನ ಸೃಷ್ಟಿ ಎಂದು ಅವರು ಕಲಿಸಿದರು.
  4. ಸಾರ್ವತ್ರಿಕ ಭಕ್ತಿ: ಎಲ್ಲಾ ಜೀವಿಗಳು ಪರಮಾತ್ಮನ ಅನುಯಾಯಿಗಳು ಎಂದು ಅವರು ಘೋಷಿಸಿದರು, ಆಧ್ಯಾತ್ಮಿಕ ಪ್ರಯಾಣದಲ್ಲಿ ಭಕ್ತಿಯ ಮಹತ್ವವನ್ನು ಒತ್ತಿಹೇಳಿದರು.
  5. ಪ್ರಪಂಚದ ರಿಯಾಲಿಟಿ: ಜಗತ್ತು ಒಂದು ಭ್ರಮೆ ಎಂದು ಶಂಕರರ ಪ್ರತಿಪಾದನೆಗೆ ವಿರುದ್ಧವಾಗಿ, ಮಧ್ವಾಚಾರ್ಯರು ಭೌತಿಕ ಪ್ರಪಂಚವು ನೈಜವಾಗಿದೆ ಎಂದು ದೃಢಪಡಿಸಿದರು, ಆಧ್ಯಾತ್ಮಿಕ ಸತ್ಯದ ಅನ್ವೇಷಣೆಯಲ್ಲಿ ಭೌತಿಕ ಕ್ಷೇತ್ರದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.

ಉಪಸಂಹಾರ

ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳು ಇಂದಿಗೂ ಅಸಂಖ್ಯಾತ ಅನುಯಾಯಿಗಳಿಗೆ ಸ್ಫೂರ್ತಿ ನೀಡುತ್ತಿವೆ. ಅವರ ದ್ವೈತ ತತ್ವವು ಹಿಂದೂ ಚಿಂತನೆಯನ್ನು ರೂಪಿಸಿತು ಆದರೆ ಭಾರತದಲ್ಲಿ ಪಾಂಡಿತ್ಯ, ಆರಾಧನೆ ಮತ್ತು ಭಕ್ತಿಯ ಶ್ರೀಮಂತ ಸಂಪ್ರದಾಯವನ್ನು ಬೆಳೆಸಿತು. ಮಧ್ವಾಚಾರ್ಯರ ಪರಂಪರೆಯು ಹಲವಾರು ಮಠಗಳು ಮತ್ತು ಬೋಧನೆಗಳ ಮೂಲಕ ಜೀವಿಸುತ್ತದೆ, ಅದು ಆಧ್ಯಾತ್ಮಿಕ ಅನ್ವೇಷಕರಿಗೆ ದೈವಿಕತೆಯನ್ನು ಅರ್ಥಮಾಡಿಕೊಳ್ಳುವ ಹಾದಿಯಲ್ಲಿ ಮಾರ್ಗದರ್ಶನ ನೀಡುತ್ತದೆ.