ಭಾರತದಲ್ಲಿನ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯ ಮೂಲಾಂಶಗಳು

ಭಾರತದಲ್ಲಿನ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯ ಮೂಲಾಂಶಗಳು

ಬ್ರಿಟಿಷ್ ಭಾರತದ ಅವಧಿಯಲ್ಲಿ ಸಹಕಾರಾತ್ಮಕ ಆಡಳಿತದ ಬೇರುಗಳು ಮೊಳಕೆಯೊಡೆಯಲು ಆರಂಭಿಸಿದವು. ಇದಕ್ಕೆ ಪುಷ್ಟಿ ಎಂಬಂತೆ 1919ರ ಭಾರತ ಸರ್ಕಾರದ ಕಾಯ್ದೆಯಲ್ಲಿ ದ್ವಿ ಸರ್ಕಾರದ ವ್ಯವಸ್ಥೆಯನ್ನು ಜಾರಿಗೆ ತಂದಿರುವುದನ್ನು ಕಾಣಬಹುದಾಗಿದೆ. ಮುಂದುವರೆದು ನೆಹರು ವರದಿಯಲ್ಲಿ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೆ ತರಬೇಕೆಂಬ ಹೋರಾಟ ಜೋರಾಗಿತ್ತು. ಅದರ ಪ್ರತಿಫಲವೆಂಬಂತೆ ದೇಶ ಸ್ವಾತಂತ್ರಗೊಂಡ ನಂತರ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯನ್ನು ಸಂವಿಧಾನ ರಚನಾಕಾರರು ಸಂವಿಧಾನದಲ್ಲಿ ಅಳವಡಿಸಿಕೊಂಡರು. ವಿಶಾಲವಾದ ಮತ್ತು ವೈವಿಧ್ಯತೆಯಿಂದ ಕೂಡಿದ ನಾಡಿಗೆ ಇದು ಅಗತ್ಯವಾಗಿತ್ತು.

1. ಅಧಿಕಾರ ಹಂಚಿಕೆ:        (Distribution of Power)

ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಹಕಾರಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸಲು ಸಂವಿಧಾನದ ರಚನಾಕಾರರು ಅವುಗಳ ನಡುವೆ ಶಾಸನೀಯ ಅಧಿಕಾರಗಳನ್ನು ಹಂಚಿಕೆ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯಗಳು ಸ್ವತಂತ್ರವಾದ ತೀರ್ಮಾನಗಳನ್ನು ಕೈಗೊಂಡು ಪರಸ್ಪರ ಸಹಕಾರದಿಂದ ವರ್ತಿಸಲು ಆಸ್ಪದವಿರುವಂತಹ ಸಮವರ್ತಿ ಪಟ್ಟಿಯನ್ನು ರಚಿಸಿದರು.

2.  ಅಖಿಲ ಭಾರತೀಯ ಸೇವೆಗಳು: (All Indian Services)

ಸಂವಿಧಾನದ 312ನೇ ವಿಧಿಯ ಪ್ರಕಾರ ಸಂವಿಧಾನ ರಚನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತಹ ಅಖಿಲ ಭಾರತೀಯ ಸೇವಾ ವರ್ಗದ ರಚನೆಯನ್ನು ಮಾಡಿದರು. ಈ ಅಧಿಕಾರಿಗಳು ಕೇಂದ್ರದಿಂದ ನೇಮಕಗೊಂಡು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇದರಿಂದ ಎರಡು ಬಗೆಯ ಸರ್ಕಾರಗಳು ಆಡಳಿತಾತ್ಮಕವಾಗಿ ಸಹಕಾರಕ್ಕೆ ಮುಂದಾಗಲು ಸುಲಭವಾಗುತ್ತದೆ.

3.  ಅಂತರಾಜ್ಯ ಮಂಡಳಿ: (Interstate Cooperation)

ಸಂವಿಧಾನದ 263 ನೇ ವಿಧಿಯ ಪ್ರಕಾರ ಅಂತರ ರಾಜ್ಯ ಮಂಡಳಿ ರಚನೆಗೆ ಅವಕಾಶ ಕಲ್ಪಿಸಲಾಗಿದೆ. ದೇಶದ ವಿವಿಧ ರಾಜ್ಯಗಳು ತಮ್ಮ ನಡುವಿನ ವಿವಾದಗಳನ್ನು ಪರಸ್ಪರ ಸಹಕಾರದಿಂದ ಪರಿಹರಿಸಿಕೊಳ್ಳಲು ಈ ಮಂಡಳಿಯು ಸೂಕ್ತ ವೇದಿಕೆಯನ್ನು ನಿರ್ಮಿಸಿದೆ. ಇದರಿಂದ ಪರಸ್ಪರ ಗೊಂದಲಗಳು ದೂರವಾಗಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆ ಬಲಗೊಳ್ಳುತ್ತದೆ.

4. ವಲಯ ಸಮಿತಿಗಳು: (Reginal Committees)

1956ರಲ್ಲಿ ಉತ್ತರ ದಕ್ಷಿಣ ಪೂರ್ವ ಹಾಗೂ ಪಶ್ಚಿಮ ಮತ್ತು ಕೇಂದ್ರ ವಲಯ ಸಮಿತಿಗಳನ್ನು ರಚಿಸಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಂಯೋಜನೆ ತರಲು ಪ್ರಯತ್ನಿಸಲಾಯಿತು. ಈ ಸಂಯೋಜನೆಯ ಮೂಲ ಉದ್ದೇಶವೆಂದರೆ ವಲಯ ರಾಜ್ಯಗಳು ಮತ್ತು ಕೇಂದ್ರ ಹಾಗೂ ನಿರ್ದಿಷ್ಟ ವಲಯ ರಾಜ್ಯಗಳ ನಡುವೆ ಸಹಕಾರವನ್ನು ಏರ್ಪಡಿಸುವುದಾಗಿದೆ.

5. ಸರಕು ಸೇವಾ ತೆರಿಗೆ: (Transportation Service Tax)

 ಭಾರತದಲ್ಲಿ  2016ರಲ್ಲಿ ಸಂವಿಧಾನದ 101ನೇ ತಿದ್ದುಪಡಿ ಮಾಡಿ ಸರಕು ಹಾಗೂ ಸೇವಾ ತೆರಿಗೆಗಳನ್ನು ಜಾರಿಗೆ ತರಲಾಯಿತು. ಒಂದೇ ದೇಶ ಒಂದೇ ತೆರಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾದ ಈ ಸೇವೆ ಅಧಿಕ ಉದ್ಯೋಗವಕಾಶಗಳನ್ನು ನೀಡಿ ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸುವ ಗುರಿಯನ್ನು ಹೊಂದಿತ್ತು.

6.  ಭಾರತದ ಪರಿವರ್ತನಾ ರಾಷ್ಟ್ರೀಯ ಸಂಸ್ಥೆ: ( Indian Diversion National Institution)

ಭಾರತದಲ್ಲಿ ಜಾರಿಯಲ್ಲಿದ್ದ ಪಂಚವಾರ್ಷಿಕ ಯೋಜನೆಗಳನ್ನು ರದ್ದುಗೊಳಿಸಿ ಅದರ ಬದಲಾಗಿ ಪರಿವರ್ತನಾ ರಾಷ್ಟ್ರೀಯ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ರಚಿಸಿದೆ. ಎಲ್ಲಾ ರಾಜ್ಯಗಳೊಂದಿಗೆ ಮತ್ತು ವಿದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವ ಗುರಿಯನ್ನಿಟ್ಟುಕೊಂಡಿದೆ.ಅ

ಉಪಸಂಹಾರ

ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆ ಭಾರತದ ಆಡಳಿತದ ಮೂಲಸ್ತಂಭವಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯ ಮತ್ತು ಪರಸ್ಪರ ಗೌರವದಿಂದಲೇ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಅಂತರಾಜ್ಯ ಮಂಡಳಿ, ಜಿಎಸ್ಟಿ ಹಾಗೂ ನೀತಿ ಆಯೋಗ ಮುಂತಾದ ವ್ಯವಸ್ಥೆಗಳು ಈ ತತ್ವವನ್ನು ಮತ್ತಷ್ಟು ಬಲಪಡಿಸಿವೆ. ಹೀಗಾಗಿ, ಭಾರತದ ಏಕತೆ ಮತ್ತು ಅಭಿವೃದ್ಧಿಗೆ ಸಹಕಾರಾತ್ಮಕ ಸಂಯುಕ್ತತತ್ವ ಅನಿವಾರ್ಯವಾಗಿದೆ.

ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧ

ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧ

 ʻʻ ಭಾರತದಲ್ಲಿ ನಿಜವಾದ ಫೆಡರಲ್ ಮಾದರಿಯ ಸರ್ಕಾರವಿಲ್ಲ ರಾಜ್ಯಗಳ ಅಳಿವು ಉಳಿವು ಕೇಂದ್ರ ಸರ್ಕಾರದ ಕೃಪೆಗೆ ಒಳಗಾಗಿದೆ. ರಾಜ್ಯಗಳಿಗೆ ನೀಡಿದ ಅಲ್ಪ ಸ್ವಾಯತ್ತತೆಯೂ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಗಾಗಿದೆ.ʼʼ ಕಾರ್ಲ್‌ ಜೆ ಪ್ರೆಡರಿಚ್.

ಭಾರತವು ಪ್ರಬಲ ಕೇಂದ್ರ ಸರ್ಕಾರ ಮತ್ತು ದುರ್ಬಲ ವಿವಿಧ ರಾಜ್ಯಗಳಿಂದ ಕೂಡಿರುವ ಒಂದು ಒಕ್ಕೂಟ ವ್ಯವಸ್ಥೆಯಾಗಿದೆ. ಈ ಕಾರಣಗಳಿಂದ ನಮ್ಮ ಸಂವಿಧಾನ ರಚನಾಕಾರರು ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಧಿಕಾರ ಹಂಚಿಕೆಯ ಪಟ್ಟಿಗಳನ್ನು ಸಂವಿಧಾನದಲ್ಲಿ ಅಳವಡಿಸಿ ಭವಿಷ್ಯದಲ್ಲಿ ಈ ಎರಡೂ ಸರ್ಕಾರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ತಡೆಯಲು ಯತ್ನಿಸಿದರು ಸಂವಿಧಾನದ 11 ಮತ್ತು 12ನೇ ಭಾಗದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಶಾಸನೀಯ, ಆಡಳಿತಾತ್ಮಕ ಹಾಗೂ ಆರ್ಥಿಕ ಸಂಬಂಧಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದು.

A)  ಶಾಸನೀಯ ಸಂಬಂಧಗಳು: (Legislative Relations)

ಸಂವಿಧಾನದ 11ನೇ ಭಾಗದ ಮೊದಲ ಅಧ್ಯಾಯದಲ್ಲಿ 245 ರಿಂದ 256 ರವರೆಗಿನ ವಿಧಿಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವಿನ ಶಾಸನೀಯ ಸಂಬಂಧಗಳನ್ನು ವಿವರಿಸಲಾಗಿದೆ. ನಮ್ಮ ಸಂವಿಧಾನ ರಚನಾಕಾರರು ಅಮೇರಿಕಾದ ಸಂವಿಧಾನದ ಬದಲು ಕೆನಡಾ ಸಂವಿಧಾನದಿಂದ ಪ್ರಭಾವಿತರಾಗಿ ಕೆನಡಾ ಸಂವಿಧಾನದ ಅಂಶಗಳನ್ನು ಭಾರತ ಸಂವಿಧಾನದಲ್ಲಿ ಅಳವಡಿಸಿಕೊಂಡ ಕಾರಣ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗಿಂತ ಶಾಸನೀಯ ಸಂಬಂಧದಲ್ಲಿ ಕೇಂದ್ರ ಪ್ರಭಾವಶಾಲಿಯಾಯಿತು. ಅವುಗಳನ್ನು ಕೆಳಕಂಡಂತೆ ವಿಶ್ಲೇಷಿಸಬಹುದು.

1)  ಸಂವಿಧಾನದ 245 ನೇ ವಿಧಿಯಲ್ಲಿರುವ (೨)ನೇ ಉಪವಿಧಿಯ ಪ್ರಕಾರ ಸಂಸತ್ತು ಮಾಡಿದ ಕಾನೂನು ತನ್ನ ಎಲ್ಲೆ ಮೀರಿ ಜಾರಿಯಲ್ಲಿದೆ ಎಂಬ ಕಾರಣಕ್ಕಾಗಿ ಅದನ್ನು ಅನೂರ್ಜಿತ ಎಂದು ಭಾವಿಸಕೂಡದು.

2)  ಸಂವಿಧಾನದ 246ನೇ ವಿಧಿಯಲ್ಲಿ (೪)ನೇ ಉಪವಿಧಿ ಅನ್ವಯ ಕೇಂದ್ರ ಸಂಸತ್ತು ಅಧಿಕಾರ ಹಂಚಿಕೆಯ ಮೂರು ಪಟ್ಟಿಗಳಾದ ಕೇಂದ್ರ, ರಾಜ್ಯ ಹಾಗೂ ಸಮವರ್ತಿ ಪಟ್ಟಿಯಲ್ಲಿನ ವಿಷಯಗಳ ಮೇಲೆ ಶಾಸನವನ್ನು ರಚಿಸಲು ಅಧಿಕಾರ ಪಡೆದಿದೆ. ಆದರೆ ರಾಜ್ಯ ಶಾಸಕಾಂಗಗಳು ಉಳಿಕೆ ಪಟ್ಟಿಯ ವಿಷಯಗಳಲ್ಲಿ ಮಾತ್ರ ಶಾಸನ ರಚಿಸಲು ಅವಕಾಶವನ್ನು ಪಡೆದಿರುತ್ತವೆ.

3)  ಸಂವಿಧಾನದ 247ನೇ ವಿಧಿಯು ಹೇಳುವ ಪ್ರಕಾರ ಕೇಂದ್ರ ಕಾನೂನಿಗೆ ಸಂಬಂಧಿಸಿದಂತೆ ಸಂಸತ್ತು ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಬಹುದು.

4) ಸಂವಿಧಾನದ 248ನೇ ವಿಧಿಯ ಅನ್ವಯ ಸಂವಿಧಾನದಲ್ಲಿ ನಮೂದಿಸದೇ ಇರುವ ಅಧಿಕಾರಗಳನ್ನು (Residuary Powers) ರಾಜ್ಯಗಳಿಗೆ ನೀಡಲಾಗಿದೆ. 

5) ಸಂವಿಧಾನದ 249ನೇ ವಿಧಿಯಂತೆ ರಾಷ್ಟ್ರದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯಸಭೆಯು ೨/೩  ಬಹುಮತದೊಂದಿಗೆ ರಾಜ್ಯ ಪಟ್ಟಿಯಲ್ಲಿರುವ ಯಾವುದಾದರೂ ಒಂದು ವಿಷಯದ ಬಗ್ಗೆ ಸಂಸತ್ತು ಕಾನೂನು ಮಾಡುವಂತೆ ಅಧಿಕಾರ ನೀಡಬಹುದು. ಆಗ ಕೇಂದ್ರ ಹಾಗೂ ಸಮವರ್ತಿ ಪಟ್ಟಿಯೊಡನೆ ಸಂಸತ್ತು ರಾಜ್ಯ ಪಟ್ಟಿಯ ವಿಷಯಗಳ ಮೇಲೆಯೂ ಶಾಸನ ರಚಿಸುವ ಅಧಿಕಾರ ಪಡೆಯುತ್ತದೆ. ರಾಜ್ಯಸಭೆಯು ಅಂಗೀಕರಿಸಿದ ಈ ನಿರ್ಣಯ ಒಂದು ವರ್ಷ ಜಾರಿಯಲ್ಲಿರುತ್ತದೆ. ಈ ವಿಧಿಯ ಮುಂದುವರಿಕೆಗೆ ಪ್ರತಿವರ್ಷ ರಾಜ್ಯಸಭೆಯು ತನ್ನ ಒಪ್ಪಿಗೆಯನ್ನು ನೀಡಬೇಕು.

6)  ಸಂವಿಧಾನದ 250ನೇ ವಿಧಿಯ ಪ್ರಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ಕೇಂದ್ರವು ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನುಗಳನ್ನು ಮಾಡಬಹುದಾಗಿದೆ.

7)  249 ಮತ್ತು 250ನೇ ವಿಧಿಗಳ ಪ್ರಕಾರ ಕೇಂದ್ರ ಹಾಗೂ ರಾಜ್ಯಗಳು ರಚಿಸುವ ಕಾನೂನುಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಆಗ ಕೇಂದ್ರ ರಚಿಸಿದ ಕಾನೂನುಗಳೇ ಊರ್ಜಿತವಾಗುತ್ತವೆ. (251ನೇ ವಿಧಿ.)

8)  ಸಂವಿಧಾನದ 252ನೇ ವಿಧಿಯಂತೆ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ರಾಜ್ಯಗಳು ರಾಜ್ಯಪಟ್ಟಿಯಲ್ಲಿರುವ ವಿಷಯಗಳ ಮೇಲೆ ಶಾಸನವನ್ನು ಮಾಡುವಂತೆ ಕೇಂದ್ರವನ್ನು ಕೇಳಿಕೊಂಡಾಗ ಕೇಂದ್ರವು ರಾಜ್ಯಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನನ್ನು ಮಾಡಬಹುದು. ಇತರ ರಾಜ್ಯಗಳ ಶಾಸನವನ್ನು ತಮ್ಮ ರಾಜ್ಯಗಳಿಗೂ ಅನ್ವಯವಾಗುವಂತೆ ಮಾಡಲು ಕೇಂದ್ರ ಸರ್ಕಾರವನ್ನು ಕೇಳಿಕೊಂಡಾಗ ಕೇಂದ್ರವು ಆ ರಾಜ್ಯಗಳಿಗೆ ತಾನು ರಚಿಸಿದ ಕಾನೂನನ್ನು ಅಳವಡಿಸಬಹುದು.

9)  ಸಂವಿಧಾನದ 253ನೇ ವಿಧಿಯ ಪ್ರಕಾರ ವಿಶ್ವ ಒಪ್ಪಂದ. ಅಂತರಾಷ್ಟ್ರೀಯ ಸಮ್ಮೇಳನ ಮತ್ತು ಜಾಗತಿಕ ಮಟ್ಟದ ತೀರ್ಮಾನಗಳನ್ನು ಭಾರತದಲ್ಲಿ ಅನುಷ್ಠಾನಗೊಳಿಸಲು ಅಥವಾ ದೇಶದ ಯಾವುದಾದರೂ ಒಂದು ಭಾಗದಲ್ಲಿ ಅನ್ವಯವಾಗುವಂತೆ ಕಾನೂನು ಮಾಡಲು ಕೇಂದ್ರ ಸಂಸತ್ತು ಅಧಿಕಾರವನ್ನು ಪಡೆದಿದೆ.

10) ಸಂವಿಧಾನದ 254ನೇ ವಿಧಿಯ ಅನ್ವಯ ಸಮವರ್ತಿ ಪಟ್ಟಿಯ ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು ಏಕಕಾಲದಲ್ಲಿ ರಚಿಸಿದ ಕಾನೂನುಗಳು ಪರಸ್ಪರ ವಿರುದ್ಧವಾಗಿದ್ದರೆ ರಾಜ್ಯ ಶಾಸಕಾಂಗದ ಕಾನೂನುಗಳು ರದ್ದುಗೊಂಡು ಕೇಂದ್ರದ ಕಾನೂನು ಗಳೇ ಊರ್ಜಿತಗೊಳ್ಳುತ್ತವೆ.

11) ಸಂವಿಧಾನದ 255ನೇ ವಿಧಿಯ ಪ್ರಕಾರ ರಾಜ್ಯ ಶಾಸಕಾಂಗಗಳು ರಚಿಸಿದ ಕೆಲವು ಮಸೂದೆಗಳು ಅಗತ್ಯವಾಗಿವೆ ಎಂದು ಅನಿಸಿದರೆ ಅವುಗಳನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ರಾಜ್ಯಪಾಲರು 200ನೇ ವಿಧಿಯ ಅನ್ವಯ ಕಾಯ್ದಿರಿಸಬಹುದು. 2೦1ನೇ ವಿಧಿಯ ಅನ್ವಯ ರಾಷ್ಟ್ರಪತಿಗಳು ಈ ಮಸೂದೆಗೆ ಒಪ್ಪಿಗೆಯನ್ನು ನೀಡಬಹುದು ಅಥವಾ ತಡೆಹಿಡಿಯಬಹುದು ಅಥವಾ ಸಂಬಂಧಿಸಿದ ಶಾಸಕಾಂಗದ ಪುನರ್ ಪರಿಶೀಲನೆಗೆ ವಾಪಸ್ಸು ಕಳಿಸಬಹುದು. ಆರು ತಿಂಗಳೊಳಗೆ ಈ ಮಸೂದೆಯನ್ನು ಮತ್ತೆ ರಾಜ್ಯ ಶಾಸಕಾಂಗವು ಪರಿಶೀಲಿಸಿ ರಾಷ್ಟ್ರಪತಿ ಅಂಗೀಕಾರಕ್ಕೆ ಕಳುಹಿಸಿದಾಗ ಅವರು ತಮ್ಮ ಒಪ್ಪಿಗೆಯನ್ನು ಕೊಡಬಹುದು ಅಥವಾ ನಿರಾಕರಿಸಬಹುದು.

B) ಆಡಳಿತಾತ್ಮಕ ಸಂಬಂಧಗಳು: (Administrative Relations)

ಭಾರತದ ಸಂವಿಧಾನದ 11ನೇ ಭಾಗದಲ್ಲಿ ಎರಡನೇ ಅಧ್ಯಾಯದಲ್ಲಿನ 256 ರಿಂದ 263 ರವರೆಗಿನ ವಿಧಿಗಳು ಕೇಂದ್ರ ಹಾಗೂ ರಾಜ್ಯಗಳ ಆಡಳಿತಾತ್ಮಕ ಸಂಬಂಧಗಳನ್ನು ಮತ್ತು ಆಡಳಿತಾಧಿಕಾರಿ ವಿಷಯಗಳ ಕುರಿತು ವಿವರಿಸಲಾಗಿದೆ. ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ರಕ್ಷಿಸುವ ಸಂಯುಕ್ತ ರಚನೆಯ ಆಶಯಗಳನ್ನು ಬಲಪಡಿಸುವುದು ಅದರ ಉದ್ದೇಶವಾಗಿದೆ.

1)  ಭಾರತದ ರಾಷ್ಟ್ರಪತಿಗಳು ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯಪಾಲರು ಮತ್ತು ಉಪರಾಜ್ಯಪಾಲರು ಮತ್ತು ಆಡಳಿತ ಅಧಿಕಾರಗಳನ್ನು ನೇಮಿಸುವ ಅಧಿಕಾರ ಹೊಂದಿದ್ದಾರೆ. ಕೇಂದ್ರ ಮಂತ್ರಿಮಂಡಲದ ಆಶಯದಂತೆ ರಾಜ್ಯಪಾಲರು ನೇಮಕಗೊಂಡು ಕೇಂದ್ರದ ಪ್ರತಿನಿಧಿಯಂತೆ ರಾಜ್ಯಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ.

2) ಸಂವಿಧಾನದ 256ನೇ ವಿಧಿಯ ಪ್ರಕಾರ ಪ್ರತಿಯೊಂದು ರಾಜ್ಯವು ತನ್ನ ಕಾರ್ಯಾಂಗಾಧಿಕಾರವನ್ನು ಚಲಾಯಿಸುವಾಗ ಸಂಸತ್ತಿನ ಕಾನೂನುಗಳನ್ನು ಅನುಸರಿಸಬೇಕು. ಈ ವಿಷಯವಾಗಿ ಕೇಂದ್ರವು ರಾಜ್ಯಗಳಿಗೆ ನಿರ್ದೇಶನ ಕೊಡಬಹುದು.

3)  ಸಂವಿಧಾನದ 257ನೇ ವಿಧಿಯ ಪ್ರಕಾರ ಅಗತ್ಯವೆನಿಸಿದರೆ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ರಾಷ್ಟ್ರೀಯ ಏಕತೆ, ರಕ್ಷಣೆ, ಸಾರಿಗೆ, ಸಂಪರ್ಕ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮುಂತಾದವುಗಳ ಕುರಿತಾಗಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ಸೂಕ್ತ ಮಾರ್ಗದರ್ಶನ ನೀಡುವ ಅಧಿಕಾರ ಹೊಂದಿದೆ.

4)  ಸಂವಿಧಾನದ 258ನೇ ವಿಧಿಯ ಪ್ರಕಾರ ಕೇಂದ್ರ ಸರ್ಕಾರವು ಒಂದು ಕಾಯ್ದೆಯನ್ನು ಅಂಗೀಕರಿಸುವ ಮೂಲಕ ರಾಜ್ಯಗಳ ಅನುಮತಿ ಪಡೆದು ಅಥವಾ ಪಡೆಯದೆ ತನ್ನ ಅಧಿಕಾರವನ್ನು ರಾಜ್ಯಗಳಿಗೆ ನಿಯೋಜನೆ ಮಾಡುವ ಅಧಿಕಾರವನ್ನು ಹೊಂದಿದೆ.

5) ಸಂವಿಧಾನದ 262ನೇ ವಿಧಿಯ ಪ್ರಕಾರ ಅಂತರರಾಜ್ಯಗಳ ಜಲವಿವಾದಗಳನ್ನು ಬಗೆಹರಿಸಲು ಕಾನೂನು ರಚಿಸುವ ಅಧಿಕಾರವನ್ನು ಕೇಂದ್ರ ಸಂಸತ್ತು ಹೊಂದಿದೆ.

6)  ಸಂವಿಧಾನದ 263 ನೇ ವಿಧಿಯನ್ವಯ ರಾಷ್ಟ್ರಪತಿಗಳು ಭಾರತ ಒಕ್ಕೂಟದ ಕೇಂದ್ರ ಮತ್ತು ವಿವಿಧ ರಾಜ್ಯಗಳ ನಡುವಿನ ಸಾಮಾನ್ಯ ವಿಷಯಗಳನ್ನು ಚರ್ಚಿಸಲು ಅಗತ್ಯವೆನಿಸಿದರೆ ಅಂತರ ರಾಜ್ಯ ಮಂಡಳಿಯನ್ನು ರಚಿಸಬಹುದಾಗಿದೆ.

7)  ಸಂವಿಧಾನದ 3೦1 ರಿಂದ 3೦5 ರವರೆಗಿನ ವಿಧಿಗಳ ಪ್ರಕಾರ ಒಕ್ಕೂಟದ ರಾಜ್ಯಗಳ ನಡುವಿನ ಸೌಹಾರ್ಧಯುತ ಸಂಬಂಧಗಳನ್ನು ಕಾಯ್ದುಕೊಳ್ಳುವ ಅಂತರರಾಜ್ಯ ವಾಣಿಜ್ಯ ಆಯೋಗವನ್ನು ರಚಿಸುವ ಅಧಿಕಾರ ಕೇಂದ್ರ ಸಂಸತ್ತಿಗೆ ಇದೆ.

8)  ಅಖಿಲ ಭಾರತ ಸೇವೆಗಳಾದ ಐ.ಎ.ಎಸ್ ಐ.ಪಿ.ಎಸ್ ಮತ್ತು ಐ.ಎಫ್.ಎಸ್ ಗಳನ್ನು ಕೇಂದ್ರ ಲೋಕಸೇವಾ ಆಯೋಗದಿಂದ ಆಯ್ಕೆ ಮಾಡಿ ಕೇಂದ್ರ ಹಾಗೂ ರಾಜ್ಯಗಳಿಗೆ ನೇಮಕ ಮಾಡಲಾಗುತ್ತದೆ. ಇವರ ವೇತನ ಹಾಗೂ ಭತ್ಯೆಗಳನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಈ ಸೇವೆಗಳಿಗೆ ಸೇರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುವುದರಿಂದ ರಾಜ್ಯ ಸರ್ಕಾರಗಳು ಅವರ ಮೇಲೆ ಹೆಚ್ಚು ನಿಯಂತ್ರಣ ಹೊಂದಿರುವುದಿಲ್ಲ.

9)  ರಾಷ್ಟ್ರೀಯ ಐಕ್ಯತಾ ಸಮಿತಿಯನ್ನು 1961 ರಲ್ಲಿ ಸ್ಥಾಪಿಸಲಾಯಿತು. ಕೋಮುವಾದ, ಜಾತಿವಾದ ಹಾಗೂ ಪ್ರಾದೇಶಿಕತೆ ಮತ್ತು ಭಾಷಾಭಿಮಾನ ಮುಂತಾದವುಗಳನ್ನಾಧರಿಸಿ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವುದು ಈ ಸಮಿತಿಯ ಕಾರ್ಯವಾಗಿದೆ.

10)  ಕೇಂದ್ರ ಲೋಕಸೇವಾ ಆಯೋಗವನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಜೊತೆಗೆ ಆಯೋಗದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡುವ ಮತ್ತು ಅವರನ್ನು ಪದಚ್ಯುತಗೊಳಿಸುವ ಅಧಿಕಾರವನ್ನು ರಾಷ್ಟ್ರಪತಿಗಳೇ ಹೊಂದಿದ್ದಾರೆ.

11) ದೇಶದ ಸರ್ವೋಚ್ಚ ನ್ಯಾಯಾಲಯ ಮತ್ತು ರಾಜ್ಯಗಳ ಉಚ್ಛನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರುಗಳನ್ನು ನೇಮಕ ಮಾಡುವ ಅಧಿಕಾರ ರಾಷ್ಟ್ರಪತಿಯವರಿಗಿದ್ದು ಇಡೀ ದೇಶದಲ್ಲಿ ಸ್ವತಂತ್ರ ಏಕೀಕೃತ ನ್ಯಾಯಾಂಗ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ.

C)  ಹಣಕಾಸಿನ ಸಂಬಂಧಗಳು: (Financial Relations)

ಸಂವಿಧಾನದ ೨೬೪ ರಿಂದ ೨೬೭ ವರೆಗಿನ ವಿಧಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಉತ್ತಮ ಆರ್ಥಿಕ ಸಂಬಂಧವನ್ನು ಹೊಂದುವ ಸಂವಿಧಾನಾತ್ಮಕ ಅವಕಾಶಗಳನ್ನು ನೀಡಲಾಗಿದೆ ಅವುಗಳೆಂದರೆ

1)  ಸಂವಿಧಾನದ 268ನೇ ವಿಧಿಯಂತೆ ಕೇಂದ್ರವು ತೆರಿಗೆಯನ್ನು ವಿಧಿಸಿದಾಗ ರಾಜ್ಯಗಳು ಆ ತೆರಿಗೆಯನ್ನು ವಸೂಲಿ ಮಾಡಿಕೊಂಡು ತಾವೇ ಉಪಯೋಗಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

2)  ಸಂವಿಧಾನದ 269 ನೇ ವಿಧಿಯ ಪ್ರಕಾರ ಕೆಲವು ತೆರಿಗೆಗಳನ್ನು ಕೇಂದ್ರ ಸರ್ಕಾರವೇ ವಿಧಿಸಿ ಸಂಗ್ರಹಿಸಿ ಕೆಲವು ನಿರ್ದಿಷ್ಟ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ಉದಾಹರಣೆ ರೈಲು ದರ, ಸರಕುಗಳ ಮೇಲೆ ವಿಧಿಸುವ ತೆರಿಗೆ, ವಿಮಾನ ಪ್ರಯಾಣ ತೆರಿಗೆ, ಆಸ್ತಿಯ ಸುಂಕ, ವೃತ್ತ ಪತ್ರಿಕೆಗಳ ಮಾರಾಟ ತೆರಿಗೆ ಮುಂತಾದವುಗಳು.

3)  ಸಂವಿಧಾನದ 270ನೇ ವಿಧಿಯ ಪ್ರಕಾರ ಆದಾಯ ತೆರಿಗೆಯನ್ನು ಕೇಂದ್ರ ಸರ್ಕಾರವೇ ವಿಧಿಸಿ ಸಂಗ್ರಹಿಸಿ ಅದನ್ನು ತನಗೆ ಹಾಗೂ ಇತರ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ಆದಾಯ ತೆರಿಗೆಯ ಶೇಕಡ 85% ರಷ್ಟು ಭಾಗ ರಾಜ್ಯ ಸರ್ಕಾರಗಳಿಗೆ ಹೋಗಬೇಕು.

4)  ಸಂವಿಧಾನದ 271ನೇ ವಿಧಿಯ ಪ್ರಕಾರ ರಾಜ್ಯಗಳ 18 ವಿಷಯಗಳ ಮೇಲೆ ತೆರಿಗೆಯನ್ನು ವಿಧಿಸಿ, ಸಂಗ್ರಹಿಸಿ ತಾವೇ ಬಳಕೆ ಮಾಡಿಕೊಳ್ಳಬಹುದಾಗಿದೆ.

5)  ಸಂವಿಧಾನದ 275 ನೇ ವಿಧಿ ಅನ್ವಯ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರ ಅಭಿವೃದ್ಧಿಗಾಗಿ ರಾಜ್ಯಗಳು ಕೇಂದ್ರದಿಂದ ಅನುದಾನವನ್ನು ಕೇಳಿದರೆ ಕೇಂದ್ರ ರಾಜ್ಯಗಳಿಗೆ ಅನುದಾನವನ್ನು ನೀಡಬಹುದು.

6)  ಸಂವಿಧಾನದ 282ನೇ ವಿಧಿಯ ಪ್ರಕಾರ ಸಾರ್ವಜನಿಕ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ರಾಜ್ಯಗಳಿಗೆ ಅನುದಾನವನ್ನು ನೀಡಬಹುದು ಉದಾಹರಣೆ ಬರಗಾಲ ಮತ್ತು ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಕೇಂದ್ರ ಹಣಕಾಸಿನ ನೆರವನ್ನು ಅಂತಹ ರಾಜ್ಯಗಳಿಗೆ ನೀಡಬಹುದು.

7)  ಕೇಂದ್ರ ಸರ್ಕಾರ ಹಣಕಾಸು ಆಯೋಗವನ್ನು ರಚಿಸುವುದು.

8) ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿದ್ದಾಗ ರಾಜ್ಯದ ಹಣಕಾಸು ವ್ಯವಸ್ಥೆಯನ್ನು ಕೇಂದ್ರ ಸರ್ಕಾರವೇ ನಿರ್ವಹಣೆ ಮಾಡುತ್ತದೆ.

9)  ರಾಜ್ಯಗಳು ದೇಶದ ಹೊರಗಿನಿಂದ ಸಾಲವನ್ನು ಪಡೆಯುವಂತಿಲ್ಲ. ಆದರೆ ಕೇಂದ್ರ ಸರ್ಕಾರವೇ ಸಾಲದ ರೂಪದಲ್ಲಿ ರಾಜ್ಯಗಳಿಗೆ ಹಣಕಾಸಿ ನೆರವನ್ನು ನೀಡುತ್ತದೆ.

ಉಪಸಂಹಾರ

ಭಾರತೀಯ ಸಂವಿಧಾನವು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯಾತ್ಮಕ ಸಂಬಂಧವನ್ನು ನಿರ್ಮಿಸಲು ವಿಶೇಷ ವಿಧಿಗಳನ್ನು ಹೊಂದಿದೆ. ತುರ್ತು ಪರಿಸ್ಥಿತಿ, ರಾಷ್ಟ್ರ ಹಿತ ಮತ್ತು ಆರ್ಥಿಕ ಸಮತೋಲನದ ದೃಷ್ಟಿಯಿಂದ ಕೇಂದ್ರಕ್ಕೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಆದರೂ ರಾಜ್ಯಗಳ ಅಭಿವೃದ್ಧಿ ಮತ್ತು ಸ್ವಾಯತ್ತತೆಯನ್ನು ಸಂರಕ್ಷಿಸುವ ಪ್ರಯತ್ನವೂ ಕಂಡುಬರುತ್ತದೆ. ಈ ಸಂಬಂಧಗಳ ಸಮತೋಲನವೇ ಭಾರತದ ಏಕತೆ ಮತ್ತು ಪ್ರಗತಿಗೆ ಆಧಾರವಾಗಿದೆ.

ಜಿಲ್ಲಾ ಪಂಚಾಯಿತಿ

ಜಿಲ್ಲಾ ಪಂಚಾಯಿತಿ

1993ರ ಪಂಚಾಯತ್ ಅಧಿನಿಯಮದ ಪ್ರಕಾರ ಗ್ರಾಮೀಣ ಮಟ್ಟದಲ್ಲಿ ಜಾರಿಗೊಳಿಸಲಾಗಿರುವ ಮೂರು ಹಂತದ ಪಂಚಾಯಿತಿಗಳಲ್ಲಿ ಜಿಲ್ಲಾ ಪಂಚಾಯತಿಯು ಒಂದು. ಇದು ಮೂರು ಪಂಚಾಯಿತಿಗಳಲ್ಲಿ ಮೂರನೇ ಅಥವಾ ಅತ್ಯುನ್ನತ ಪಂಚಾಯಿತಿ ಸಂಸ್ಥೆಯಾಗಿದೆ. ಒಂದು ಜಿಲ್ಲೆಯಲ್ಲಿನ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಅಥವಾ ಮಹಾನಗರ ಪಾಲಿಕೆಗಳ ವ್ಯಾಪ್ತಿಗಳಪಡುವ ಪ್ರದೇಶವನ್ನು ಹೊರತುಪಡಿಸಿ ಉಳಿದೆಲ್ಲ ಗ್ರಾಮೀಣ ಪ್ರದೇಶಗಳು ಜಿಲ್ಲಾ ಪಂಚಾಯತ ವ್ಯಾಪ್ತಿಗೆ ಬರುತ್ತವೆ. 

ರಚನೆ: (Structure)

ಪ್ರತಿಯೊಂದು ಜಿಲ್ಲಾ ಪಂಚಾಯಿತಿಯು ಚುನಾಯಿತ ಸದಸ್ಯರನ್ನು ಒಳಗೊಂಡಿದ್ದು, ತಾಲೂಕು ಪಂಚಾಯತ್‌ಗೆ ಮತದಾರರಿಂದ ಚುನಾಯಿತರಾದ ಸದಸ್ಯರು ಲೋಕಸಭೆ ಸದಸ್ಯರು, ರಾಜ್ಯಸಭೆ ಹಾಗೂ ವಿಧಾನಪರಿಷತ್‌ನ ಸದಸ್ಯರು ವಿಧಾನ  ಸಭಾಸದಸ್ಯರು ಹಾಗೂ ಜಿಲ್ಲೆಯ ಪಂಚಾಯತ್ ಸದಸ್ಯರು ಇದ್ದು ಇವರೆಲ್ಲರೂ ಮತದಾನ ಮಾಡುವ ಹಕ್ಕನ್ನು ಹೊಂದಿದ್ದಾರೆ. ಸಾಮಾನ್ಯವಾಗಿ 40,000 ಮತದಾರರಿಗೊಬ್ಬರು  ಜಿಲ್ಲಾ ಪಂಚಾಯತ್ ಸದಸ್ಯರು ಆಯ್ಕೆಯಾಗುತ್ತಾರೆ. ಆದರೆ ಕಡಿಮೆ ಜನಸಾಂದ್ರತೆ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ 30,000 ಮತದಾರರಿಗೊಬ್ಬ  ಮತ್ತು ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಪ್ರತಿ 18,000 ಮತದಾರರಿಗೊಬ್ಬ ಪ್ರತಿನಿಧಿ ಆಯ್ಕೆಯಾಗುತ್ತಾನೆ.

ಚುನಾವಣೆ: (Election)

ಆಯಾ ಜಿಲ್ಲೆಯ ಜನಸಾಂದ್ರತೆಯ ಆಧಾರದ ಮೇಲೆ ಜಿಲ್ಲಾ ಪಂಚಾಯತಿಗೆ ನಿಗದಿಪಡಿಸಿದಷ್ಟು ಮತದಾರರ ಆಧಾರವನ್ನಿಟ್ಟುಕೊಂಡು ಮತಕ್ಷೇತ್ರಗಳನ್ನು ರಚಿಸಲಾಗುತ್ತದೆ. ಆಯಾ ಮತಕ್ಷೇತ್ರದ ಮತದಾರರು ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ತಮ್ಮ ಪ್ರತಿನಿಧಿಯನ್ನು ಜಿಲ್ಲಾ ಪಂಚಾಯತ್‌ಗೆ ಆಯ್ಕೆ ಮಾಡುತ್ತಾರೆ. ಈ ಚುನಾವಣೆಯು ಏಕವ್ಯಕ್ತಿ ಏಕ ಮತ ಹಾಗೂ ರಹಸ್ಯ ಮತದಾನ ತತ್ವವನ್ನು ಆಧರಿಸುತ್ತದೆ.

ಮೀಸಲಾತಿ: (Reservation)

ಜಿಲ್ಲಾ ಪಂಚಾಯಿತಿಯ ಒಟ್ಟು ಸ್ಥಾನಗಳಲ್ಲಿ ಶೇಕಡಾ 15% ರಷ್ಟು ಪರಿಶಿಷ್ಟಜಾತಿಗೆ, ಶೇಕಡ ೩%ರಷ್ಟು ಪರಿಶಿಷ್ಟ ಪಂಗಡದವರಿಗೆ ೧/೩  ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗದವರಿಗೆ ಹಾಗೂ ಉಳಿದ ಮೀಸಲಾತಿಗಳನ್ನು ಒಳಗೊಂಡಂತೆ ಶೇಕಡ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ.

ಅರ್ಹತೆಗಳು ಮತ್ತು ಅನರ್ಹತೆಗಳು: (Qualification and Disqualification)

ಜಿಲ್ಲಾ ಪಂಚಾಯಿತಿ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಹಾಗೂ 21 ವರ್ಷ ತುಂಬಿದವರು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. 21 ವರ್ಷ ಪೂರ್ಣಗೊಳ್ಳದವರು ಕ್ರಿಮಿನಲ್ ಮೊಕದ್ದಮೆಗಾಗಿ ಶಿಕ್ಷೆಗೆ ಒಳಪಟ್ಟವರು ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹತೆಯನ್ನು ಹೊಂದಿರುತ್ತಾರೆ.

ಅಧಿಕಾರವಧಿ: (Term of Office)

ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಪಂಚಾಯತ್ ಸದಸ್ಯರ ಅಧಿಕಾರಾವಧಿ ೫ ವರ್ಷಗಳು ಸದಸ್ಯರು ಪಕ್ಷಾಂತರ ಮಾಡಿದರೆ, ರಾಜೀನಾಮೆ ಕೊಟ್ಟರೆ ಅಥವಾ ದುರ್ನಡತೆಯಿಂದಾಗಿ ಸದಸ್ಯರನ್ನು ಪದಚ್ಯುತಿಗೊಳಿಸಿದರೆ ಖಾಲಿ ಸ್ಥಾನಕ್ಕೆ ಮರು ಚುನಾವಣೆಗೆ ಅವಕಾಶವಿದೆ.

ಅಧ್ಯಕ್ಷರು ಮತ್ತು ಉಪಾಧ್ಯಕ್ಷರು:  (President and Vice President)

ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರು ತಮ್ಮಲ್ಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿಯೂ ಮೀಸಲಾತಿಯನ್ನು ಅನುಸರಿಸಲಾಗುತ್ತದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರು 30 ತಿಂಗಳು ಕಾಲ ಅಧಿಕಾರದಲ್ಲಿ ಇರುತ್ತಾರೆ. ಜಿಲ್ಲಾ ಪಂಚಾಯಿತಿಯ ಒಟ್ಟು ಸದಸ್ಯರಲ್ಲಿ ಬಹುಮತದಿಂದ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಪದಚ್ಯುತಗೊಳಿಸಬಹುದು. ʻʻಅಧ್ಯಕ್ಷರು ತಮ್ಮ ರಾಜೀನಾಮೆ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಹಾಗೂ ಉಪಾಧ್ಯಕ್ಷರು ಅಧ್ಯಕ್ಷರಿಗೆ ನೀಡಿ  ಪದತ್ಯಾಗ ಮಾಡಬೇಕು.ʼʼ

ಜಿಲ್ಲಾ ಪಂಚಾಯತ್ ಕಾರ್ಯಗಳು: (Functions of Zilla Panchayat)

ಜಿಲ್ಲಾ ಪಂಚಾಯಿತಿ ಕಾರ್ಯಗಳು ಈ ಕೆಳಗಿನಂತಿವೆ

1)   ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವುದು ಪ್ರಕೃತಿ ವಿಕೋಪಗಳಿಗೆ ಪರಿಹಾರ ಒದಗಿಸುವುದು ಹಾಗೂ ಗ್ರಾಮಗಳ ಅಂಕಿ ಅಂಶಗಳನ್ನು ಶೇಖರಿಸುವುದು.

2) ಕೃಷಿ ಹಾಗೂ ತೋಟಗಾರಿಕೆ ಫಾರಂ ಗಳನ್ನು ತೆರೆಯುವುದು ಹಾಗೂ ಅವುಗಳ ನಿರ್ವಹಣೆ ಮಾಡುವುದು ದಾಸ್ತಾನು ಮಳೆಗೆಗಳ ಸ್ಥಾಪನೆ ಮತ್ತು ನಿರ್ವಹಣೆ ಹಾಗೂ ವಸ್ತು ಪ್ರದರ್ಶನಗಳನ್ನು ಏರ್ಪಡಿಸುವುದು.

3)  ಜಲಾನಯನ ಅಭಿವೃದ್ಧಿ ಅಂತರ್ಜಲ ಮೂಲಗಳ ಅಭಿವೃದ್ಧಿ ಹಾಗೂ ಸಣ್ಣ ನೀರಾವರಿ ಕಾಮಗಾರಿ ನಿರ್ಮಾಣ.

4)  ಹಂದಿ ಸಾಗಾಣಿಕೆ ಕೋಳಿ ಹೈನು ಹಾಗೂ ಪಶುಸಾಗಾಣಿಕೆ ಪ್ರೋತ್ಸಾಹ ಪಶು ಆಸ್ಪತ್ರೆಗಳ ನಿರ್ಮಾಣ ಮತ್ತು ಪಶುಗಳಿಗೆ ತಗಲುವ ಅಂಟು ರೋಗಗಳ ನಿವಾರಣೆ.

5) ಮೀನು ಸಾಗಾಣಿಕೆ ಹಾಗೂ ಮೀನು ಸಾಗಾಣಿಕೆ ಅಭಿವೃದ್ಧಿ ಮತ್ತು ಮೀನುಗಾರರ ಕಲ್ಯಾಣ ಕಾರ್ಯಗಳು.

6)  ಗ್ರಾಮೀಣ ಗುಡಿ ಕೈಗಾರಿಕೆ ಪ್ರೋತ್ಸಾಹ ನೀಡುವುದು ಮತ್ತು ಅವುಗಳಿಗೆ ಮಾರುಕಟ್ಟೆಗಳನ್ನು ಒದಗಿಸುವುದು.

7) ಸಣ್ಣ ಕೈಗಾರಿಕೆಗಳ ಪ್ರೋತ್ಸಾಹ.

8)  ಗ್ರಾಮೀಣ ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಡುವುದು.

9)  ಶುದ್ಧವಾದ ಕುಡಿಯುವ ನೀರಿನ ಸರಬರಾಜು ಮಾಡುವುದು ಹಾಗೂ ಗ್ರಾಮ ನೈರ್ಮಲ್ಯವನ್ನು ಕಾಪಾಡುವುದು.

10)  ಸಾಮಾಜಿಕ ಅರಣ್ಯ ನಿರ್ಮಾಣ ಮತ್ತು ಮೇವು ಅಭಿವೃದ್ಧಿಗೆ ಒತ್ತು ನೀಡುವುದು ಬಂಜರು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುವುದು.

11) ಗ್ರಾಮೀಣ ರಸ್ತೆಗಳು ಕಾಲುದಾರಿ ಅಣೆಕಟ್ಟುಗಳ ನಿರ್ಮಾಣ ಮತ್ತು ನಿರ್ವಹಣೆ.

12)  ಅಸಂಪ್ರದಾಯಕ ಇಂಧನ ಮೂಲಗಳ ಅಭಿವೃದ್ಧಿ ಹಾಗೂ ಪ್ರೋತ್ಸಾಹ.

13)  ಗ್ರಾಮೀಣ ಭಾಗದ ಜನರ ಬಡತನವನ್ನು ಹೋಗಲಾಡಿಸಲು ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದು.

14)  ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸ್ಥಾಪನೆ ಹಾಗೂ ಅವುಗಳ ನಿರ್ವಹಣೆ ಆಶ್ರಮ ಶಾಲೆಗಳು ಹಾಗೂ ಅನಾಥಾಶ್ರಮಗಳ ಸ್ಥಾಪನೆ.

15)  ಗ್ರಾಮೀಣ ಕರಕುಶಲ ಮತ್ತು ವೃತ್ತಿ ತರಬೇತಿ ಕೇಂದ್ರಗಳ ಸ್ಥಾಪನೆ ಹಾಗೂ ನಿರ್ವಹಣೆ.

16)  ಅನೌಪಚಾರಿಕ ಶಿಕ್ಷಣವನ್ನು ಆರಂಭಿಸುವುದು ಮತ್ತು ವಯಸ್ಕ ಸಾಕ್ಷರತಾ ಕಾರ್ಯಗಳನ್ನು ಹಮ್ಮಿಕೊಳ್ಳುವುದು.

17)  ಗ್ರಾಮೀಣ ಭಾಗದಲ್ಲಿ ಜಾತ್ರೆ ಹಾಗೂ ಮಾರುಕಟ್ಟೆಗಳನ್ನು ನಿಯಂತ್ರಿಸುವುದು.

18)  ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗಳು, ಚಿಕಿತ್ಸಾಲಯಗಳು ನಿರ್ಮಾಣ ಹಾಗೂ ನಿರ್ವಹಣೆ ಗರ್ಭಿಣಿಯರ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳು ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ರೋಗ ನಿರೋಧಕ ಹಾಗೂ ಲಸಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

19)  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸುವುದು.

20) ಅಂಗವಿಕಲರು ನಿರಾಶ್ರಿತರು ಹಾಗೂ ಮಾನಸಿಕ ಅಸ್ವಸ್ಥರ ಕಲ್ಯಾಣ ಕಾರ್ಯಕ್ರಮಗಳನ್ನು ಆರಂಭಿಸುವುದು.

21)  ದುರ್ಬಲ ವರ್ಗಗಳು ಹಾಗೂ ಪರಿಶಿಷ್ಟ ಜಾತಿ ಅಥವಾ ಜನಾಂಗಗಳ ಶೈಕ್ಷಣಿಕ ಆರ್ಥಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿತಾಸಕ್ತಿಗಳನ್ನು ಕಾಪಾಡುವುದು.

22)  ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು  ನೋಡಿಕೊಳ್ಳುವುದು.

23)  ಗ್ರಾಮೀಣ ವಿದ್ಯುದ್ಧೀಕರಣ

24)  ಸಹಕಾರ ಚಟುವಟಿಕೆಗಳಿಗೆ ಪ್ರೋತ್ಸಾಹ.

25)  ಸಂತೆಗಳನ್ನು ಏರ್ಪಡಿಸುವುದು ಮತ್ತು ನಿಯಂತ್ರಿಸುವುದು.

26)  ಗ್ರಂಥಾಲಯಗಳ ಹಾಗೂ ವಾಚನಾಲಯ ಕೊಠಡಿಗಳ ನಿರ್ಮಾಣ ಹಾಗೂ ನಿರ್ವಹಣೆ.

27)  ಸಾರ್ವಜನಿಕ ಉದ್ಯಾನವನಗಳ ಹಾಗೂ  ಕ್ರೀಡಾಂಗಣಗಳ ಸಂರಕ್ಷಣೆ.

28)  ರುದ್ರ ಭೂಮಿ ಸಂರಕ್ಷಣೆ.

ಉಪಸಂಹಾರ

ಒಟ್ಟಿನಲ್ಲಿ, ಜಿಲ್ಲಾ ಪಂಚಾಯಿತಿ ಗ್ರಾಮೀಣ ಅಭಿವೃದ್ಧಿಯ ಬೆನ್ನೆಲುಬಾಗಿದೆ. ಜನಸಹಭಾಗಿತ್ವ ಮತ್ತು ಸ್ಥಳೀಯ ಆಡಳಿತದ ಮೂಲಕ ಸಮಗ್ರ ಅಭಿವೃದ್ಧಿಯನ್ನು ಸಾಧಿಸಲು ಇದು ನೆರವಾಗುತ್ತದೆ. ಸಾಮಾಜಿಕ ನ್ಯಾಯ, ಆರ್ಥಿಕ ಪ್ರಗತಿ ಮತ್ತು ಮೂಲಭೂತ ಸೌಲಭ್ಯಗಳ ಒದಗಿಕೆಯಲ್ಲಿ ಇದರ ಪಾತ್ರ ಮಹತ್ವದ್ದಾಗಿದೆ. ಪರಿಣಾಮಕಾರಿಯಾದ ಆಡಳಿತದ ಮೂಲಕ ಗ್ರಾಮೀಣ ಭಾರತವನ್ನು ಶಕ್ತಿಶಾಲಿಯಾಗಿ ರೂಪಿಸುವುದು ಜಿಲ್ಲಾ ಪಂಚಾಯಿತಿಯ ಗುರಿಯಾಗಿದೆ.

ತಾಲೂಕು ಪಂಚಾಯತ್

ತಾಲೂಕು ಪಂಚಾಯತ್

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕಾರ ರಾಜ್ಯದ ಪ್ರತಿಯೊಂದು ತಾಲೂಕಿನಲ್ಲಿ ತಾಲೂಕು ಪಂಚಾಯತನ್ನು ರಚಿಸಲು ಅವಕಾಶ ಕಲ್ಪಿಸಲಾಗಿದೆ. ತಾಲೂಕು ಪಂಚಾಯಿತಿಯು ಇಡೀ ತಾಲೂಕಿನ ಮೇಲೆ ಅಧಿಕಾರವನ್ನು ಹೊಂದಿರುತ್ತದೆ. ಮೂರು ಹಂತದ ಪಂಚಾಯಿತಿಗಳಲ್ಲಿ ತಾಲೂಕು ಪಂಚಾಯಿತಿಯೂ ಒಂದಾಗಿದೆ. ಇದು ಗ್ರಾಮ ಪಂಚಾಯಿತಿಯ ಮೇಲಿನ ಹಾಗೂ ಜಿಲ್ಲಾ ಪಂಚಾಯಿತಿಯ ಕೆಳಗಿನ ಮಾಧ್ಯಮಿಕ ಸ್ಥರದಲ್ಲಿ ಕೆಲಸ ನಿರ್ವಹಿಸುವ ಸಂಸ್ಥೆಯಾಗಿದೆ.

ರಚನೆ: (Structure)

ಪ್ರತಿಯೊಂದು ತಾಲೂಕು ಪಂಚಾಯತ್ ಚುನಾಯಿತ ಸದಸ್ಯರನ್ನು ಹೊಂದಿದೆ. ಸಾರ್ವತ್ರಿಕ ಮತದಾನ ಪದ್ಧತಿಯ ಮೂಲಕ ಅಂದರೆ 18 ವರ್ಷ ತುಂಬಿದ ಪ್ರತಿಯೊಬ್ಬ ಸ್ತ್ರೀ ಪುರುಷರು ಮತದಾನ ಮಾಡುವ ಮೂಲಕ ತಾಲೂಕು ಪಂಚಾಯತ್ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಇವರೊಂದಿಗೆ ತಾಲೂಕನ್ನು ಪ್ರತಿನಿಧಿಸುವ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ತಾಲೂಕಿನ ಮತದಾರರ ಪಟ್ಟಿಯಲ್ಲಿರುವ ರಾಜ್ಯ ವಿಧಾನಸಭಾ ಮತ್ತು ವಿಧಾನಪರಿಷತ್ತಿನ ಸದಸ್ಯರು ಮತದಾನ ಮಾಡುವ  ಹಕ್ಕನ್ನು ಹೊಂದಿರುತ್ತಾರೆ. ತಾಲೂಕು ಪಂಚಾಯಿತಿಗೆ 10,000 ಜನಸಂಖ್ಯೆಗೆ  ಒಬ್ಬರಂತೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.

ಚುನಾವಣೆ: (Election) 

ಈಗಾಗಲೇ ಮೇಲೆ ತಿಳಿಸಿರುವಂತೆ ಪ್ರತಿ 10೦೦೦ ಜನಸಂಖ್ಯೆಗೆ ಒಬ್ಬ ಸದಸ್ಯರಂತೆ ತಾಲೂಕು ಪಂಚಾಯಿತಿಗೆ ಆಯ್ಕೆಯಾಗುತ್ತಾರೆ. ಈ ಚುನಾವಣೆಯು ಏಕವ್ಯಕ್ತಿ ಏಕಮತ ಹಾಗೂ ರಹಸ್ಯ ಮತದಾನ ತತ್ವವನ್ನು ಆಧರಿಸುತ್ತದೆ.

ಮೀಸಲಾತಿ :  (Reservation)

ತಾಲೂಕು ಪಂಚಾಯಿತಿಯ ಒಟ್ಟು ಸ್ಥಾನಗಳಲ್ಲಿ ಶೇಕಡ 15 ರಷ್ಟು ಪರಿಶಿಷ್ಟ ಜಾತಿಯವರಿಗೆ, ಶೇಕಡ ೩% ರಷ್ಟು ಪರಿಶಿಷ್ಟ ಪಂಗಡದವರಿಗೆ ಹಾಗೂ ಮೂರನೇ ಒಂದರಷ್ಟು ಸ್ಥಾನಗಳನ್ನು ಇತರೆ  ಹಿಂದುಳಿದವರಿಗೆ ಮೀಸಲಾಗಿರಿಸಲಾಗುತ್ತದೆ. ಇಲ್ಲಿ ಮಹಿಳಾ ಮೀಸಲಾತಿಯನ್ನು ಸಹ ನೀಡಲಾಗುತ್ತದೆ.

ಅರ್ಹತೆಗಳು ಮತ್ತು ಅನರ್ಹತೆಗಳು: (Qualification and UnQualification)

ತಾಲೂಕು ಪಂಚಾಯಿತಿಯ ಮತದಾರರ ಪಟ್ಟಿಯಲ್ಲಿ  ಹೆಸರಿರುವವರು ಹಾಗೂ 21 ವರ್ಷ ತುಂಬಿದವರು ತಾಲೂಕು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಕಾನೂನಿನ ಅನ್ವಯ ಅನರ್ಹರಾಗಿದ್ದರೆ, ಕ್ರಿಮಿನಲ್ ಮೊಕದ್ದಮೆಗಾಗಿ ಶಿಕ್ಷೆಗೆ ಒಳಪಟ್ಟಿದ್ದರೆ ಹಾಗೂ 21 ವರ್ಷ ವಯಸ್ಸಾಗದೆ ಇದ್ದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

ಅಧಿಕಾರಾವಧಿ: (Term of Office)

ತಾಲೂಕು ಪಂಚಾಯತ ಸದಸ್ಯರ ಅಧಿಕಾರಾವಧಿಯು ಐದು ವರ್ಷಗಳು. ಸದಸ್ಯರು ರಾಜೀನಾಮೆ ನೀಡಿದರೆ, ಪಕ್ಷಾಂತರ ಮಾಡಿದರೆ ಹಾಗೂ ದುರ್ನಡತೆಗಾಗಿ ಅವರನ್ನು ತೆಗೆದು ಹಾಕಿದರೆ ಅವರ ಸ್ಥಾನಖಾಲಿಯಾದಾಗ ಮರುಚುನಾವಣೆ ಮಾಡಬೇಕು. ಸದಸ್ಯರು ಒಂದು ವೇಳೆ ರಾಜೀನಾಮೆ ನೀಡುವ ಸಂದರ್ಭ ಒದಗಿ ಬಂದರೆ ʻʻಅವರು ರಾಜೀನಾಮೆ ಪತ್ರವನ್ನು ಅಧ್ಯಕ್ಷರಿಗೆ ನೀಡಿ ಪದತ್ಯಾಗ ಮಾಡಬೇಕು.ʼʼ

ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು: (President and Vice President)

ತಾಲೂಕು ಪಂಚಾಯತ್ ಅದಿನಿಯಮದ ಪ್ರಕಾರ ತಾಲೂಕು ಪಂಚಾಯಿತಿಯ ಸದಸ್ಯರು ಒಬ್ಬ ಅಧ್ಯಕ್ಷ ಹಾಗೂ ಉಪಾಧ್ಯಕ್ಷನನ್ನು ತಮ್ಮೊಳಗೆ ಆಯ್ಕೆ ಮಾಡಿಕೊಳ್ಳುತ್ತಾರೆ̤ ಅಧ್ಯಕ್ಷರು ತಾಲೂಕು ಕಾರ್ಯಾಂಗದ ಮುಖ್ಯಸ್ಥರಾಗಿರುತ್ತಾರೆ̤ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಆಯ್ಕೆಯಲ್ಲಿಯೂ ಪರಿಶಿಷ್ಟ ಜಾತಿ ಅಥವಾ ವರ್ಗ, ಹಿಂದುಳಿದ ಜಾತಿ ಅಥವಾ ವರ್ಗ ಹಾಗೂ ಮಹಿಳೆಯರಿಗೂ ಮೀಸಲಾತಿಯನ್ನು ಅನುಸರಿಸಲಾಗುತ್ತದೆ.

ಸಭೆ: (Meeting)

ತಾಲೂಕು ಪಂಚಾಯತಿಯು ಎರಡು ತಿಂಗಳಿಗೆ ಒಮ್ಮೆಯಾದರೂ ಸಭೆಯನ್ನು ನಡೆಸಬೇಕು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷರೇ ನಿರ್ವಹಿಸುತ್ತಾರೆ. ಅಧ್ಯಕ್ಷರ ಗೈರುಹಾಜರಿಯಲ್ಲಿ ಉಪಾಧ್ಯಕ್ಷರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ತಾಲೂಕು ಪಂಚಾಯಿತಿಯ ಒಟ್ಟು ಸದಸ್ಯರಲ್ಲಿ ೧/೩ ಸದಸ್ಯರು ಹಾಜರಿದ್ದು ತೀರ್ಮಾನಗಳನ್ನು ಕೈಗೊಳ್ಳುತ್ತಾರೆ.

ಕಾರ್ಯನಿರ್ವಾಹಕ ಅಧಿಕಾರಿ: (Excutive Officer)

ತಾಲೂಕು ಪಂಚಾಯಿತಿಗೆ ಸರ್ಕಾರದಿಂದ ಕಾರ್ಯನಿರ್ವಾಹಕ ಅಧಿಕಾರಿ ನೇಮಕವಾಗುತ್ತಾನೆ. ಈತ ಇಡೀ ತಾಲೂಕು ಪಂಚಾಯಿತಿಯ ಕಾರ್ಯಾಂಗದ ಮೇಲೆ ಹತೋಟಿಯನ್ನು ಹೊಂದಿರುತ್ತಾನೆ. ಇವರೊಂದಿಗೆ ಒಬ್ಬ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಜವಾನರು ಕಾರ್ಯನಿರ್ವಹಿಸುತ್ತಾರೆ.

ತಾಲೂಕು ಪಂಚಾಯಿತಿಯ ಕಾರ್ಯಗಳು: (Functions of Taluk Panchayat)

1)  ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿಗಳಿಂದ ನಿರ್ವಹಿಸಿದ ಕಾರ್ಯಗಳನ್ನು ವಾರ್ಷಿಕ ಯೋಜನೆಯನ್ನು ಸಿದ್ಧಪಡಿಸುವುದು.

2)  ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವಾರ್ಷಿಕ ಯೋಜನೆಗಳನ್ನು ಕ್ರೋಢೀಕರಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸುವುದು.

3) ತಾಲೂಕಿನ ಮುಂಗಡಪತ್ರವನ್ನು ತಯಾರಿಸಿ ಜಿಲ್ಲಾ ಪಂಚಾಯಿತಿಗೆ ಕಳುಹಿಸುವುದು.

4) ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿ ಆದೇಶಿಸಿದ ಕಾರ್ಯಗಳನ್ನು ನೆರವೇರಿಸುವುದು.

5) ಮೀನು ಸಾಗಾಣಿಕೆ ಹಾಗೂ ಮೀನು ಸಾಗಾಣಿಕೆ ಅಭಿವೃದ್ಧಿ ಮತ್ತು ಮೀನುಗಾರರ ಕಲ್ಯಾಣ ಕಾರ್ಯಗಳು.

6)  ಗ್ರಾಮೀಣ ಗುಡಿ ಕೈಗಾರಿಕೆ ಪ್ರೋತ್ಸಾಹ ನೀಡುವುದು ಮತ್ತು ಅವುಗಳಿಗೆ ಮಾರುಕಟ್ಟೆಗಳನ್ನು ಒದಗಿಸುವುದು.

7) ಸಣ್ಣ ಕೈಗಾರಿಕೆಗಳ ಪ್ರೋತ್ಸಾಹ.   

8) ಗ್ರಾಮೀಣ ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಡುವುದು

ಉಪಸಂಹಾರ

ಒಟ್ಟಾರೆ ತಾಲೂಕು ಪಂಚಾಯಿತಿಯು ಸ್ಥಳೀಯ ಸ್ವಾಯತ್ತ ಆಡಳಿತ ವ್ಯವಸ್ಥೆಯ ಪ್ರಮುಖ ಅಂಗವಾಗಿದೆ. ಅಭಿವೃದ್ಧಿ, ಕಲ್ಯಾಣ ಮತ್ತು ಆಡಳಿತ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಇದು ಗ್ರಾಮೀಣ ಸಮಾಜದ ಉನ್ನತಿಗೆ ಸಹಕಾರ ನೀಡುತ್ತದೆ. ಜನಪ್ರತಿನಿಧಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಉತ್ತಮ ಆಡಳಿತ ಸಾಧ್ಯವಾಗುತ್ತದೆ. ಹೀಗಾಗಿ, ತಾಲೂಕು ಪಂಚಾಯಿತಿ ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಶಕ್ತಿಯಾಗಿಯೇ ಉಳಿದಿದೆ.

ನಗರ ಪಾಲಿಕೆಯ ಕಾರ್ಯಗಳು

ನಗರ ಪಾಲಿಕೆಯ ಕಾರ್ಯಗಳು

ಮಹಾನಗರ ಪಾಲಿಕೆಯು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅತಿ ದೊಡ್ಡ ಸಂಸ್ಥೆಯಾಗಿದೆ. ಮೂರು ಲಕ್ಷ ಅಧಿಕ ಸಂಖ್ಯೆಯುಳ್ಳ ನಗರಗಳಲ್ಲಿ ಮಹಾನಗರ ಪಾಲಿಕೆಯನ್ನು ರಚಿಸಲಾಗುತ್ತದೆ. ಆಯಾ ನಗರ ಪಾಲಿಕೆಯ ಜನಸಂಖ್ಯೆಯ ಆಧಾರದ ಮೇಲೆ ಸದಸ್ಯರ ಆಯ್ಕೆಯಾಗುತ್ತದೆ. ಮಹಾನಗರ ಪಾಲಿಕೆಯು 30 ರಿಂದ 100 ಜನ ಸದಸ್ಯರನ್ನು ಹೊಂದಿದೆ. ʻʻಮಹಾನಗರ ಪಾಲಿಕೆ ಸದಸ್ಯರನ್ನು ಕೌನ್ಸಿಲರ್ ಎಂದು ಕರೆಯಲಾಗುತ್ತದೆ.ʼʼ ನಗರ ಪಾಲಿಕೆಯ ವಾರ್ಡಗಳ ಜನರಿಂದ ಚುನಾಯಿತಗೊಳ್ಳುವ ಸದಸ್ಯರ ಜೊತೆಗೆ ಆ ನಗರವನ್ನು ಪ್ರತಿನಿಧಿಸುವ ವಿಧಾನಸಭಾ, ವಿಧಾನಪರಿಷತ್ತು, ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಮಹಾನಗರ ಪಾಲಿಕೆಯಲ್ಲಿ ಭಾಗವಹಿಸಿ ಮತ ಚಲಾಯಿಸುತ್ತಾರೆ. ಇವರೊಂದಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡ ಕ್ಷೇತ್ರ ತಜ್ಞರು ಇರುತ್ತಾರೆ.

ನಗರ ಪಾಲಿಕೆಯ ಕಾರ್ಯಗಳು: (Functions of Corporation)

 ಮಹಾನಗರ ಪಾಲಿಕೆಯ ಕಾರ್ಯಗಳು ಈ ಕೆಳಗಿನಂತಿವೆ.

1) ಕಟ್ಟಡಗಳ ನಿರ್ಮಾಣ ಮತ್ತು ಭೂ-ಉಪಯೋಗ ನಿಯಂತ್ರಣ

2)  ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಯೋಜನೆ.

3)  ಸಾರ್ವಜನಿಕರ ರಸ್ತೆ ಸೇತುವೆಗಳ ನಿರ್ಮಾಣ ಹಾಗೂ ದುರಸ್ತಿ.

4)  ಗೃಹ ಕೈಗಾರಿಕೆ ಹಾಗೂ ವ್ಯಾಪಾರದ ಉದ್ದೇಶಗಳಿಗೆ ನೀರು ಸರಬರಾಜು.

5)  ಸಾರ್ವಜನಿಕ ಆರೋಗ್ಯ ಒಳ ಚರಂಡಿ ವ್ಯವಸ್ಥೆ ಕೊಳಚೆ ನೀರನ್ನು ಸಂಗ್ರಹಿಸಿ ಸಮರ್ಥ ರೀತಿಯಲ್ಲಿ ಬಳಕೆ ಮಾಡುವುದು.

6)  ಸಾರ್ವಜನಿಕ ರಸ್ತೆ ಬೀದಿ ಹಾಗೂ ಮಾರುಕಟ್ಟೆಗಳಿಗೆ ವಿದ್ಯುತ್ ದೀಪದ ವ್ಯವಸ್ಥೆ.

7)  ನಗರ ಅರಣ್ಯ ಹಾಗೂ ಪರಿಸರ ಸಂರಕ್ಷಣೆ.

8) ಸಾಮಾಜಿಕವಾಗಿ ಹಿಂದುಳಿದವರು ಸೇರಿದಂತೆ ಅಂಗವಿಕಲರು ಹಾಗೂ ಮಾನಸಿಕ ಅಸ್ವಸ್ಥರನ್ನು ರಕ್ಷಿಸುವುದು.

9)  ನಗರ ಪ್ರದೇಶದ ಬಡತನವನ್ನು ನಿರ್ಮೂಲನೆಗೊಳಿಸುವುದು.

10)  ರಸ್ತೆಗಳ ನಾಮಕರಣ ಹಾಗೂ ಮನೆ ನಂಬರ್ ಗಳನ್ನು ಹಾಕುವುದು.

11)  ಸಾರ್ವಜನಿಕ ಮಾರುಕಟ್ಟೆಗಳ ನಿರ್ಮಾಣ ಮತ್ತು ಸಂರಕ್ಷಣೆ.

12)  ಸಾಂಕ್ರಾಮಿಕ ರೋಗಗಳು ಬರದಂತೆ ಕ್ರಮ ಕೈಗೊಳ್ಳುವುದು.

13)  ಆಹಾರ ಪದಾರ್ಥ, ಹಾಲು ಮತ್ತು ಔಷಧಿಗಳ ಕಲಬೆರಕೆಯನ್ನು ತಡೆಯುವುದು.

14)  ಜನನ ಮತ್ತು ಮರಣಗಳ ದಾಖಲೆ ಇಡುವುದು.

15)  ಪ್ರಾಥಮಿಕ ಶಾಲೆಗಳ ಸ್ಥಾಪನೆ ಮತ್ತು ಸಂರಕ್ಷಣೆ.

16)  ಪಾರ್ಕುಗಳು ಉದ್ಯಾನವನಗಳು ಹಾಗೂ ಆಟದ ಮೈದಾನಗಳ ನಿರ್ಮಾಣ ಮತ್ತು ಸಂರಕ್ಷಣೆ.

17)  ಸ್ಮಶಾನಗಳು ಮತ್ತು ಸ್ಮಶಾನ ಸ್ಥಳಗಳು ಹಾಗೂ ವಿದ್ಯುತ್ ಶವಗಾರಿಗಳನ್ನು ನೋಡಿಕೊಳ್ಳುವುದು.

18)  ಗೋಶಾಲೆಗಳ ನಿರ್ವಹಣೆ.

19)  ಸಸಿಗಳನ್ನು ನೆಡುವುದು ಮತ್ತು ಅವುಗಳ ರಕ್ಷಣೆ.

20)  ಶಿಶು ಕೇಂದ್ರಗಳ ಸ್ಥಾಪನೆ ಮತ್ತು ನಿರ್ವಹಣೆ.

21)  ಈಜುಕೊಳ ಹಾಗೂ ಸ್ನಾನ ಘಟ್ಟಗಳ ನಿರ್ಮಾಣ ಹಾಗೂ ನಿರ್ವಹಣೆ.

22)  ಪ್ರಾಣಿಗಳ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ.

23)  ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿಗಳ ಸ್ಥಾಪನೆ ಮತ್ತು ಸಂರಕ್ಷಣೆ

24)  ಪ್ರಕೃತಿ ವಿಕೋಪಗಳ ಸಮಯದಲ್ಲಿ ಪರಿಹಾರ ಕಾರ್ಯ ಮಾಡುವುದು.

25)  ಪ್ರಾಣಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ಸ್ಥಾಪನೆ.

26)  ಕಸಾಯಿ ಖಾನೆ ಮತ್ತು ಚರ್ಮ ಹದ ಮಾಡುವ ಕಸಾಯಿ  ಖಾನೆಗಳನ್ನು ನಿರ್ವಹಿಸುವುದು

ಕರ್ನಾಟಕದಲ್ಲಿ ಸದ್ಯ ಹುಬ್ಬಳ್ಳಿ, ಧಾರವಾಡ, ಮೈಸೂರು, ಗುಲ್ಬರ್ಗ, ಶಿವಮೊಗ್ಗ ಹಾಗೂ ದಾವಣಗೆರೆ ನಗರಗಳಲ್ಲಿ ಮಹಾನಗರ ಪಾಲಿಕೆಗಳು ಕಾರ್ಯ ನಿರ್ವಹಿಸುತ್ತವೆ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವದಲ್ಲಿ ಇದೆ.

ಉಪಸಂಹಾರ

ಒಟ್ಟಿನಲ್ಲಿ ಮಹಾನಗರ ಪಾಲಿಕೆ ನಗರಗಳ ಸಮಗ್ರ ಅಭಿವೃದ್ಧಿಗೆ ಆಧಾರಸ್ತಂಭವಾಗಿದೆ. ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೂ ಸಹಕಾರಿಯಾಗಿದೆ. ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಇದರ ಪಾತ್ರ ಅತ್ಯಂತ ಮಹತ್ವದ್ದು. ಉತ್ತಮ ನಗರ ಜೀವನಕ್ಕಾಗಿ ಮಹಾನಗರ ಪಾಲಿಕೆಯ ಕಾರ್ಯಗಳು ಅನಿವಾರ್ಯವಾಗಿವೆ.

ಗ್ರಾಮ ಪಂಚಾಯಿತಿಯ ಕಾರ್ಯಗಳು

ಗ್ರಾಮ ಪಂಚಾಯಿತಿಯ ಕಾರ್ಯಗಳು

ಕರ್ನಾಟಕ ಪಂಚಾಯತ್ ಅದಿನಿಯಮ 1993ರ ಪ್ರಕರಣ ೪ರ ಅನ್ವಯ ಸರ್ಕಾರದ ಸಾಮಾನ್ಯ ಅಥವಾ ವಿಶೇಷ ಆದೇಶಗಳಿಗೆ ಒಳಪಟ್ಟು ಜಿಲ್ಲಾಧಿಕಾರಿಗಳು 5,000 ಕ್ಕಿಂತ ಕಡಿಮೆ ಇಲ್ಲದ ಹಾಗೂ 7,000 ಕ್ಕಿಂತ ಹೆಚ್ಚಿಲ್ಲದ ಜನಸಂಖ್ಯೆಯನ್ನು ಹೊಂದಿರುವ ಒಂದು ಗ್ರಾಮವನ್ನು ಅಥವಾ ಗ್ರಾಮಗಳ ಗುಂಪನ್ನು ಒಳಗೊಂಡಿರುವ ಯಾವುದೇ ಪ್ರದೇಶವನ್ನು ಗ್ರಾಮ ಪಂಚಾಯಿತಿ ಎಂದು ಘೋಷಿಸಬಹುದು. ಆದರೆ ಮಲೆನಾಡು ಪ್ರದೇಶಗಳಾದ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 25೦೦ ಕ್ಕಿಂತ ಕಡಿಮೆಯಿಲ್ಲದ ಜನಸಂಖ್ಯೆಯುಳ್ಳ ಪ್ರದೇಶವನ್ನು ಗ್ರಾಮ ಪಂಚಾಯತ್‌ ಎಂದು ಘೋಷಿಸಬಹುದು.

ಗ್ರಾಮ ಪಂಚಾಯಿತಿಯ ಕಾರ್ಯಗಳು: (Functions of Grama Panchayat)        

 ಗ್ರಾಮ ಪಂಚಾಯಿತಿ ಕಾರ್ಯಗಳು ಈ ಕೆಳಗಿನಂತಿವೆ

1)  ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವುದು, ಪ್ರಕೃತಿ ವಿಕೋಪಗಳಿಗೆ ಪರಿಹಾರ ಒದಗಿಸುವುದು, ಹಾಗೂ ಗ್ರಾಮಗಳ ಅಂಕಿ ಅಂಶಗಳನ್ನು ಶೇಖರಿಸುವುದು.

2) ಕೃಷಿ ಹಾಗೂ ತೋಟಗಾರಿಕೆ ಫಾರಂಗಳನ್ನು ತೆರೆಯುವುದು ಹಾಗೂ ಅವುಗಳ ನಿರ್ವಹಣೆ ಮಾಡುವುದು ದಾಸ್ತಾನು ಮಳೆಗೆಗಳ ಸ್ಥಾಪನೆ ಮತ್ತು ನಿರ್ವಹಣೆ ಹಾಗೂ ವಸ್ತುಪ್ರದರ್ಶನಗಳನ್ನು ಏರ್ಪಡಿಸುವುದು.

3)  ಜಲಾನಯನ ಅಭಿವೃದ್ಧಿ, ಅಂತರ್ಜಲ ಮೂಲಗಳ ಅಭಿವೃದ್ಧಿ ಹಾಗೂ ಸಣ್ಣ ನೀರಾವರಿ ಕಾಮಗಾರಿ ನಿರ್ಮಾಣ.

4)  ಹಂದಿ ಸಾಗಾಣಿಕೆ, ಕೋಳಿ, ಹೈನು ಹಾಗೂ ಪಶುಸಾಗಾಣಿಕೆ ಪ್ರೋತ್ಸಾಹ, ಪಶು ಆಸ್ಪತ್ರೆಗಳ ನಿರ್ಮಾಣ ಮತ್ತು ಪಶುಗಳಿಗೆ ತಗಲುವ ಅಂಟುರೋಗಗಳ ನಿವಾರಣೆ.

5) ಮೀನು ಸಾಗಾಣಿಕೆ ಹಾಗೂ ಮೀನು ಸಾಗಾಣಿಕೆ ಅಭಿವೃದ್ಧಿ ಮತ್ತು ಮೀನುಗಾರರ ಕಲ್ಯಾಣ ಕಾರ್ಯಗಳು.

6)  ಗ್ರಾಮೀಣ ಗುಡಿ ಕೈಗಾರಿಕೆಗೆ, ಪ್ರೋತ್ಸಾಹ ನೀಡುವುದು ಮತ್ತು ಅವುಗಳಿಗೆ ಮಾರುಕಟ್ಟೆಗಳನ್ನು ಒದಗಿಸುವುದು.

7) ಸಣ್ಣ ಕೈಗಾರಿಕೆಗಳ ಪ್ರೋತ್ಸಾಹ.   

8) ಗ್ರಾಮೀಣ ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಡುವುದು.

9)  ಶುದ್ಧವಾದ ಕುಡಿಯುವ ನೀರಿನ ಸರಬರಾಜು ಮಾಡುವುದು ಹಾಗೂ ಗ್ರಾಮ ನೈರ್ಮಲ್ಯವನ್ನು ಕಾಪಾಡುವುದು.

1೦) ಸಾಮಾಜಿಕ ಅರಣ್ಯ ನಿರ್ಮಾಣ ಮತ್ತು ಮೇವು ಅಭಿವೃದ್ಧಿಗೆ ಒತ್ತು ನೀಡುವುದು. ಬಂಜರು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುವುದು.

11) ಗ್ರಾಮೀಣ ರಸ್ತೆಗಳು, ಕಾಲುದಾರಿ, ಅಣೆಕಟ್ಟುಗಳ ನಿರ್ಮಾಣ ಮತ್ತು ನಿರ್ವಹಣೆ.

12)  ಅಸಂಪ್ರದಾಯಕ ಇಂಧನ ಮೂಲಗಳ ಅಭಿವೃದ್ಧಿ ಹಾಗೂ ಪ್ರೋತ್ಸಾಹ.

13)  ಗ್ರಾಮೀಣ ಭಾಗದ ಜನರ ಬಡತನವನ್ನು ಹೋಗಲಾಡಿಸಲು ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದು.

14)  ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸ್ಥಾಪನೆ ಹಾಗೂ ಅವುಗಳ ನಿರ್ವಹಣೆ. ಆಶ್ರಮ ಶಾಲೆಗಳು ಹಾಗೂ ಅನಾಥಾಶ್ರಮಗಳ ಸ್ಥಾಪನೆ.

15)  ಗ್ರಾಮೀಣ ಕರಕುಶಲ ಮತ್ತು ವೃತ್ತಿ ತರಬೇತಿ ಕೇಂದ್ರಗಳ ಸ್ಥಾಪನೆ ಹಾಗೂ ನಿರ್ವಹಣೆ.

16)  ಅನೌಪಚಾರಿಕ ಶಿಕ್ಷಣವನ್ನು ಆರಂಭಿಸುವುದು ಮತ್ತು ವಯಸ್ಕ ಸಾಕ್ಷರತಾ ಕಾರ್ಯಗಳನ್ನು ಹಮ್ಮಿಕೊಳ್ಳುವುದು.

17)  ಗ್ರಾಮೀಣ ಭಾಗದಲ್ಲಿ ಜಾತ್ರೆ ಹಾಗೂ ಮಾರುಕಟ್ಟೆಗಳನ್ನು ನಿಯಂತ್ರಿಸುವುದು.

18)  ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗಳು, ಚಿಕಿತ್ಸಾಲಯಗಳು ನಿರ್ಮಾಣ ಹಾಗೂ ನಿರ್ವಹಣೆ. ಗರ್ಭಿಣಿಯರ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳು ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ. ರೋಗನಿರೋಧಕ ಹಾಗೂ ಲಸಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

19)  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸುವುದು.

20) ಅಂಗವಿಕಲರು, ನಿರಾಶ್ರಿತರು ಹಾಗೂ ಮಾನಸಿಕ ಅಸ್ವಸ್ಥರ ಕಲ್ಯಾಣ ಕಾರ್ಯಕ್ರಮಗಳನ್ನು ಆರಂಭಿಸುವುದು.

21)  ದುರ್ಬಲ ವರ್ಗಗಳು ಹಾಗೂ ಪರಿಶಿಷ್ಟಜಾತಿ/ಜನಾಂಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿತಾಸಕ್ತಿಗಳನ್ನು ಕಾಪಾಡುವುದು.

22)  ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು  ನೋಡಿಕೊಳ್ಳುವುದು.

23)  ಗ್ರಾಮೀಣ ವಿದ್ಯುದ್ಧೀಕರಣ

24)  ಸಹಕಾರ ಚಟುವಟಿಕೆಗಳಿಗೆ ಪ್ರೋತ್ಸಾಹ.

25)  ಸಂತೆಗಳನ್ನು ಏರ್ಪಡಿಸುವುದು ಮತ್ತು ನಿಯಂತ್ರಿಸುವುದು.

26)  ಗ್ರಂಥಾಲಯಗಳ ಹಾಗೂ ವಾಚನಾಲಯ ಕೊಠಡಿಗಳ ನಿರ್ಮಾಣ ಹಾಗೂ ನಿರ್ವಹಣೆ.

27)  ಸಾರ್ವಜನಿಕ ಉದ್ಯಾನವನಗಳ ಹಾಗೂ  ಕ್ರೀಡಾಂಗಣಗಳ ಸಂರಕ್ಷಣೆ.

28)  ರುದ್ರ ಭೂಮಿ ಸಂರಕ್ಷಣೆ.

ಉಪಸಂಹಾರ

ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಅಸ್ತಿವಾರವಾಗಿದೆ. ಜನರ ಭಾಗವಹಿಸುವಿಕೆಯಿಂದ ಇದು ಸಮಗ್ರ ಅಭಿವೃದ್ಧಿ ಸಾಧಿಸಲು ನೆರವಾಗುತ್ತದೆ. ಸ್ಥಳೀಯ ಸ್ವರಾಜ್ಯದ ತತ್ವವನ್ನು ಕಾರ್ಯರೂಪಕ್ಕೆ ತಂದು ಗ್ರಾಮಗಳ ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ. ಪ್ರಜಾಪ್ರಭುತ್ವದ ನಿಜವಾದ ಶಕ್ತಿಯನ್ನು ಗ್ರಾಮ ಮಟ್ಟದಲ್ಲಿ ಪ್ರತಿಬಿಂಬಿಸುವ ಸಂಸ್ಥೆಯಾಗಿದೆ.