ಗುಪ್ತರ ಕಾಲದ ಆಡಳಿತ
ಗುಪ್ತರ ಆಡಳಿತ : ಗುಪ್ತ ದೊರೆಗಳು ದೊಡ್ಡ ಸಾಮ್ರಾಜ್ಯದ ಅಧಿಪತಿಗಳಾಗಿದ್ದರು. ಪಾಟಲಿಪುತ್ರ ಅವರ ರಾಜಧಾನಿಯಾಗಿತ್ತು. ಎರಡನೆ ಚಂದ್ರಗುಪ್ತನ ಕಾಲದಲ್ಲಿ ಕೆಲವು ಕಾಲ ಉಜೈನಿ ರಾಜಧಾನಿಯಾಗಿದ್ದಿತಾದರೂ, ನಂತರ ಪಾಟಲಿಪುತ್ರವೇ ರಾಜಧಾನಿಯಾಗಿ ಮುಂದುವರೆಯಿತು. ಗುಪ್ತ ದೊರೆಗಳು ಹೆಚ್ಚಿನ ಸಂಖ್ಯೆಯ ಅಧಿಕಾರಿಗಳನ್ನು ನೇಮಿಸಿಕೊಂಡು ಸುಭದ್ರ ಆಡಳಿತವನ್ನು ನೀಡಿದರು.
ರಾಜ :
ರಾಜನೇ ರಾಜ್ಯದ ಮುಖ್ಯಸ್ಥನಾಗಿದ್ದನು. ಆತನ ಮಾತೆ ಅಂತಿಮವಾಗಿತ್ತು. ರಾಜನನ್ನು ದೈವಾಂಶ ಸಂಭೂತನೆಂದು ಪರಿಗಣಿಸಲಾಗಿತ್ತು. ರಾಜನನ್ನು ದೇವರ ಪ್ರತಿನಿಧಿಯೆಂದು ಸಹ ಕರೆಯಲಾಗುತ್ತಿತ್ತು. ರಾಜ್ಯದಲ್ಲಿ ಧರ್ಮವನ್ನು ಪಾಲಿಸುವುದು, ವಿದೇಶಿಯರ ದಾಳಿಯನ್ನು ಎದುರಿಸಿ ದೇಶದ ಜನರನ್ನು ರಕ್ಷಿಸುವುದು, ರಾಜನ ಆದ್ಯ ಕರ್ತವ್ಯವಾಗಿದ್ದಿತು. ನ್ಯಾಯ ನಿರ್ಣಯ ಮಾಡುವುದು, ಸೈನ್ಯದ ನಾಯಕತ್ವ ವಹಿಸುವುದು ಸಹ ಈತನ ಕರ್ತವ್ಯಗಳಾಗಿದ್ದವು. ಇಷ್ಟೆಲ್ಲ ಅಧಿಕಾರಗಳನ್ನು ಹೊಂದಿದ್ದರೂ ರಾಜನು ನಿರಂಕುಶಾಧಿಕಾರಿಯಾಗಿರಲು ಸಾಧ್ಯವಿರಲಿಲ್ಲ.
ದರ್ಪಿಷ್ಟ ಪ್ರಭುತ್ವವಾಗಿರಲಿಲ್ಲ : ಗುಪ್ತರ ಆಡಳಿತವು ದರ್ಪಿಷ್ಟ ಪ್ರಭುತ್ವವಾಗಿರಲಿಲ್ಲ. ಮಹಾರಾಜಾಧಿರಾಜ, ಪರಮೇಶ್ವರ, ಪೃಥ್ವಿಪಾಲ, ಪರಮಭಟ್ಟಾರಕ, ಪರಮದೇವತಾ, ಸಾರ್ವಬೌಮ, ಸಾಮ್ರಾಟ್ ಮೊದಲಾದ ಬಿರುದುಗಳನ್ನು ಧರಿಸಿದ್ದರೂ ನಿರಂಕುಶ ದೊರೆಗಳಾಗಿರಲಿಲ್ಲ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಆಡಳಿತಾಂಗದ ಅಧಿಪತಿಗಳಾಗಿದ್ದರಿಂದ ಎಲ್ಲಾ ಅಧಿಕಾರಗಳು ಕಟ್ಟಕಡೆಗೆ ಅವರಲ್ಲಿ ಕೇಂದ್ರೀಕೃತವಾಗಿತ್ತು. ಆದಾಗ್ಯೂ ಕೆಲವೊಂದು ಅಡೆತಡೆಗಳಿದ್ದವು. ನ್ಯಾಯ, ನೀತಿ, ಧರ್ಮವನ್ನು ಪಾಲಿಸಬೇಕಾಗಿತ್ತು. ಗುರುಹಿರಿಯರ, ಪಂಡಿತರ, ಮಂತ್ರಿಗಳ ಮತ್ತು ಸಲಹಾ ಸಮಿತಿಯ ಅಭಿಪ್ರಾಯವನ್ನು ಆಲಿಸಬೇಕಾಗಿತ್ತು. ಅಲ್ಲದೆ ಪರಂಪರಾಗತ ನಂಬಿಕೆ, ಆಚರಣೆ, ಧರ್ಮ-ಸಂಪ್ರದಾಯಗಳು ಅರಸರು ಸ್ವೇಚ್ಛಾಧಿಕಾರ ಚಲಾಯಿಸದಂತೆ ಅಡ್ಡಿಯಾಗಿದ್ದವು.
ಮಂತ್ರಾಲೋಚನ ಸಭೆ(ಮಂತ್ರಿಪರಿಷತ್ತು): ಆಡಳಿತ ನಿರ್ವಹಣೆಯಲ್ಲಿ ಅರಸರಿಗೆ ಸಲಹೆ ಸೂಚನೆಗಳನ್ನು ನೀಡಲು ಮಂತ್ರಾಲೋಚನ ಸಭೆ ಇರುತ್ತಿತ್ತು. ಇದು ಮುಖ್ಯಮಂತ್ರಿ, ಆರ್ಥಿಕ ಮಂತ್ರಿ, ನ್ಯಾಯಾಂಗ ಸಚಿವ, ಮುಖ್ಯ ದಂಡನಾಯಕ ಮತ್ತು ಯುವರಾಜನನ್ನು ಒಳಗೊಂಡಿತ್ತು. ಪ್ರಮುಖ ವಿಷಯಗಳನ್ನು ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿತ್ತು.
ವಿವಿಧ ಅಧಿಕಾರಿಗಳು : ಗುಪ್ತರ ಶಾಸನಗಳಲ್ಲಿ ಸೇನಾಪತಿ, ಮಹಾಸೇನಾಪತಿ, ಬಲಾದಿಕೃತ, ಸಂಧಿವಿಗ್ರಹಿ, ದಂಡಪಸಾಧಿಕರಣ, ವಿನಯಸ್ಥಿತಿ ಸ್ಥಾಪಕ ಮೊದಲಾದ ಹುದ್ದೆಗಳ ಪ್ರಸ್ತಾಪ ಬರುತ್ತದೆ. ಇದರಿಂದ ಈ ಅಧಿಕಾರಿಗಳು ಸಂಬಂಧಿತ ಆಡಳಿತದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೆಂಬುದು ತಿಳಿಯುತ್ತದೆ.
ಕಂದಾಯ ಆಡಳಿತ : ಗುಪ್ತರ ಕಾಲದಲ್ಲಿ ಭೂಕಂದಾಯವೇ ಆದಾಯದ ಪ್ರಮುಖ ಮೂಲವಾಗಿತ್ತು. ಆದ್ದರಿಂದ ಗುಪ್ತ ದೊರೆಗಳು ಕಂದಾಯ ಆಡಳಿತಕ್ಕೆ ಮಹತ್ವ ನೀಡಿದ್ದರು. ಭೂ ಉತ್ಪನ್ನದ 1/6 ಭಾಗ ಭೂ ಕಂದಾಯವೆಂದು ನಿಗಧಿಪಡಿಸಿದ್ದರು. ಅಲ್ಲದೆ 18 ವಿಧದ ವಿವಿಧ ತೆರಿಗೆಗಳನ್ನು ಹೇರಿದ್ದರು.
ಇದಲ್ಲದೆ ಅರಸನ ಸೈನ್ಯ ಹೋಗುವ ದಾರಿಯಲ್ಲಿರುವ ಜನ ಅದರ ನಿರ್ವಹಣೆಯ ಹೊಣೆಯನ್ನು ಹೊರಬೇಕಿತ್ತು. ‘ಭೋಗ’ ಎಂಬ ನಗರ ಪ್ರವೇಶ ತೆರಿಗೆಯಿಂದಲೂ ಆದಾಯ ಬರುತ್ತಿತ್ತು. ಇವುಗಳ ಜೊತೆಗೆ ಉತ್ಪನ್ನ ಹಾಗೂ ಉಪ್ಪಿನ ಗಣಿಗಳಿಂದಲೂ ತೆರಿಗೆ ಬರುತ್ತಿತ್ತು. ವಿಷ್ಠಿ ಎಂಬ ಕಡ್ಡಾಯ ಉಚಿತ ಶ್ರಮ ಪದ್ಧತಿಯೂ ಜಾರಿಯಲ್ಲಿದ್ದಿತು.
ನ್ಯಾಯಾಂಗ ಆಡಳಿತ : ಅರಸನು ನ್ಯಾಯಾಂಗದ ಅಧಿಪತಿಯಾಗಿದ್ದನು. ಆದಾಗ್ಯೂ ನ್ಯಾಯಾಧೀಶರನ್ನು ನೇಮಿಸಿಕೊಳ್ಳಲಾಗಿತ್ತು. ಮಹಾ ದಂಡನಾಯಕನು ನ್ಯಾಯಾಧಿಕಾರಿಯೂ ಆಗಿದ್ದನು. ವಿಷಯಪತಿಯು ಜಿಲ್ಲೆಯ ಅಧಿಪತಿಯಾಗಿದ್ದುದಲ್ಲದೆ ಜಿಲ್ಲಾಮಟ್ಟದಲ್ಲಿ ನ್ಯಾಯ ತೀರ್ಮಾನ ಮಾಡುತ್ತಿದ್ದನು.
ಸೈನ್ಯಾಡಳಿತ : ಗುಪ್ತರ ಇತಿಹಾಸದ ಬಗೆಗಿನ ಆಧಾರಗಳಲ್ಲಿ ಸೇನಾಪತಿ, ಮಹಾಸೇನಾಪತಿ, ಬಲಾಧಿಕೃತ ಎಂಬ ಹೆಸರುಗಳು ಕಂಡುಬರುತ್ತವೆ. ಇವುಗಳು ವಿವಿಧ ದರ್ಜೆಯ ಸೇನಾಧಿಕಾರಿಗಳ ಹುದ್ದೆಗಳೇ ಆಗಿವೆ.
ಸಾಮ್ರಾಜ್ಯದ ವಿಭಾಗ : ಗುಪ್ತರ ಸಾಮ್ರಾಜ್ಯವು ಬಹುವಿಶಾಲವಾದ ಸಾಮ್ರಾಜ್ಯವಾಗಿತ್ತು. ಆಡಳಿತವು ಕಷ್ಟಸಾಧ್ಯವಾಗಿತ್ತು. ಆದ್ದರಿಂದ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಪ್ರಾಂತಗಳಾಗಿ, ಪ್ರಾಂತಗಳನ್ನು ಜಿಲ್ಲೆಗಳಾಗಿ ವಿಂಗಡಿಸಿದ್ದು ಕಂಡುಬರುತ್ತದೆ.
ಪ್ರಾಂತಗಳ ಆಡಳಿತ : ಸಾಮ್ರಾಜ್ಯವನ್ನು ಪ್ರಾಂತಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರಾಂತಗಳನ್ನು ಭುಕ್ತಿ, ದೇಶ, ವಿಷಯ ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ಅದರ ಆಡಳಿತ ನಿರ್ವಹಣೆಗೆ ಸಾಮಾನ್ಯವಾಗಿ ರಾಜಕುಮಾರರನ್ನು ನೇಮಿಸುತ್ತಿದ್ದರು. ಪ್ರಾಂತದ ಅಧಿಪತಿಯನ್ನು ಬೋಗಪತಿ, ಉಪಾರಿಕ ಹಎಂದು ಕರೆಯುತ್ತಿದ್ದರು. ಇವನಿಗೆ ಸಹಾಯಕ್ಕಾಗಿ ಕೆಳಕಂಡವರು ಇರುತ್ತಿದ್ದರು. ದಂಡನಾಯಕನು ನ್ಯಾಯಾಧಿಕಾರಿಯೂ ಆಗಿದ್ದನು. ವಿಷಯಪತಿಯು ಜಿಲ್ಲೆಯ ಅಧಿಪತಿಯಾಗಿದ್ದುದಲ್ಲದೆ ಜಿಲ್ಲಾಮಟ್ಟದಲ್ಲಿ ನ್ಯಾಯ ತೀರ್ಮಾನ ಮಾಡುತ್ತಿದ್ದನು.
ಸೈನ್ಯಾಡಳಿತ : ಗುಪ್ತರ ಇತಿಹಾಸದ ಬಗೆಗಿನ ಆಧಾರಗಳಲ್ಲಿ ಸೇನಾಪತಿ, ಮಹಾಸೇನಾಪತಿ, ಬಲಾಧಿಕೃತ ಎಂಬ ಹೆಸರುಗಳು ಕಂಡುಬರುತ್ತವೆ. ಇವುಗಳು ವಿವಿಧ ದರ್ಜೆಯ ಸೇನಾಧಿಕಾರಿಗಳ ಹುದ್ದೆಗಳೇ ಆಗಿವೆ. ವಿಶಾಲ ಸಾಮ್ರಾಜ್ಯವನ್ನು ಹೊಂದಿದ್ದ ಗುಪ್ತರು ತಮ್ಮ ರಾಜ್ಯ ರಕ್ಷಣೆಗಾಗಿ ಬಲಿಷ್ಠ ಸೇನೆಯನ್ನು ಕಟ್ಟಿದ್ದರು. ಇವರ ಸೈನ್ಯದಲ್ಲಿ ಪದಾತಿ, ಅಶ್ವಪಡೆ ಹಾಗೂ ಗಜಪಡೆ ಇದ್ದಿತು. ಸೈನ್ಯದಲ್ಲಿ ರಥಗಳನ್ನು ಬಳಸುತ್ತಿರಲಿಲ್ಲ. ಮರಳುಗಾಡಿನಲ್ಲಿ ಮಾತ್ರ ಒಂಟೆಗಳನ್ನು ಬಳಸುತ್ತಿದ್ದರು. ಸೈನ್ಯದ ಮೇಲ್ವಿಚಾರಣೆಗಾಗಿ “ಮಹಾಸೇನಾಪತಿ” ನೇಮಕಗೊಂಡಿದ್ದನು. ಈತನ ಕೈಕೆಳಗೆ ಮಹಾದಂಡನಾಯಕ, ರಣಬಂಡಾರಿಕ ಭಟಶ್ವಪತಿ ಎಂಬ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಸೇವಾಡಳಿತದ ಪುಮುಖ ಮುಖ್ಯಸ್ಥರುಗಳನ್ನು ಈ ಕೆಳಗಿನಂತೆ ಅಭ್ಯಸಿಸಬಹುದು.
1) ಸೈನ್ಯದ ಮುಖ್ಯಸ್ಥ – ಮಹಾಸೇನಾಪತಿ
2) ಅಶ್ವಪಡೆ – ಮಹಾಅಶ್ವಪತಿ, ಅಶ್ವಪತಿ
3) ಗಜಪಡೆ- ಮಹಾಪಿಲುಪತಿ ಅಥವಾ ಕಟುಕ
4) ಪಿಲುಪಡೆ – ದಂಡನಾಯಕ
ಸೈನಿಕರಿಗೆ ಹಣದ ರೂಪದಲ್ಲಿ ಸಂಬಳ ವಿತರಣೆ ಮಾಡಲಾಗುತ್ತಿತ್ತು. ಯುದ್ದದಲ್ಲಿ ಬಿಲ್ಲು, ಬಾಣ, ಕತ್ತಿ, ಈಟಿ, ಕೈಗೊಡಲಿ, ಭರ್ಚಿ, ಭಲ್ಲೆ, ಶಿರಾಸ್ತ್ರಣ, ಕಬ್ಬಿಣದ ಕವಚ ಮೊದಲಾದ ಆಯುಧಗಳನ್ನು ಬಳಸಲಾಗುತ್ತಿತ್ತು. ಈ ಅವಧಿಯಲ್ಲಿ ಅಶ್ವಪಡೆ ತನ್ನ ಮಹತ್ವವನ್ನು ಹೆಚ್ಚಿಸಿಕೊಂಡಿತು.
ಸಾಮ್ರಾಜ್ಯದ ವಿಭಾಗ : ಗುಪ್ತರ ಸಾಮ್ರಾಜ್ಯವು ಬಹುವಿಶಾಲವಾದ ಸಾಮ್ರಾಜ್ಯವಾಗಿತ್ತು. ಆಡಳಿತವು ಕಷ್ಟಸಾಧ್ಯವಾಗಿತ್ತು. ಆದ್ದರಿಂದ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಪ್ರಾಂತಗಳಾಗಿ, ಪ್ರಾಂತಗಳನ್ನು ಜಿಲ್ಲೆಗಳಾಗಿ ವಿಂಗಡಿಸಿದ್ದು ಕಂಡುಬರುತ್ತದೆ.
ಪ್ರಾಂತಗಳ ಆಡಳಿತ : ಸಾಮ್ರಾಜ್ಯವನ್ನು ಪ್ರಾಂತಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರಾಂತಗಳನ್ನು ಭುಕ್ತಿ, ದೇಶ, ವಿಷಯ ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ಅದರ ಆಡಳಿತ ನಿರ್ವಹಣೆಗೆ ಸಾಮಾನ್ಯವಾಗಿ ರಾಜಕುಮಾರರನ್ನು ನೇಮಿಸುತ್ತಿದ್ದರು. ಪ್ರಾಂತದ ಅಧಿಪತಿಯನ್ನು ಬೋಗಪತಿ, ಉಪಾರಿಕ ಎಂದು ಕರೆಯುತ್ತಿದ್ದರು. ಇವನಿಗೆ ಸಹಾಯಕ್ಕಾಗಿ ಕೆಳಕಂಡವರು ಇರುತ್ತಿದ್ದರು.
ಬಲಾಧಿಕರಣಿಕ – ಸೈನ್ಯದ ಮುಖ್ಯಸ್ಥ
ದಂಡಪಸೌಧಿಕರಣಿಕ – ಪೋಲೀಸ್ ಅಧಿಕಾರಿ
ರಣಭಂಡಾರಿಕ – ಸೈನ್ಯದ ದಂಡಾಧಿಕಾರಿ
ವಿನಯಸ್ಥಿತಿಸ್ಥಾಪಕ – ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವಾತ
ಭಟಸ್ವಪತಿ – ಅಶ್ವದಳ ಮತ್ತು ಕಾಲ್ಗಳದ ದಂಡನಾಯಕ
ಮಹಾಪಿಲ್ಲುಪತ – ಗಜಸೈನ್ಯದ ಮುಖ್ಯಸ್ಥ
ಜಿಲ್ಲಾಡಳಿತ : ಪ್ರಾಂತಗಳನ್ನು ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿತ್ತು. ಅದನ್ನು ‘ವಿಷಯ’ ಎಂದು ಕರೆಯುತ್ತಿದ್ದರು. ಅದರ ಅಧಿಪತಿ ವಿಷಯಪತಿ. ಅವನು ಜಿಲ್ಲಾ ನ್ಯಾಯಾಧೀಶನಾಗಿಯೂ ಕೆಲಸಮಾಡುತ್ತಿದ್ದನು. ಅವನಿಗೆ ಸಲಹೆ ನೀಡಲು ಒಂದು ಸಲಹಾಸಮಿತಿ ಇತ್ತು. ಇದು ಕೆಳಕಂಡವರನ್ನು ಒಳಗೊಂಡಿತ್ತು.
ನಗರ ಶ್ರೇಷ್ಠಿ – ನಗರ ಸಭೆಯ ಅಧ್ಯಕ್ಷ ಪ್ರಥಮ ಕುಲಿಕ – ಉದ್ದಿಮೆಗಳ ಪ್ರತಿನಿಧಿ
ಸಾರ್ಥವಾಹ – ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿ ಪ್ರಥಮ ಕಾಯಸ್ಥ – ಕರಣಿಕರ ಮುಖ್ಯಸ್ಥ
ನಗರಾಡಳಿತ : ನಗರ ಮುಖ್ಯಸ್ಥ ಪುರಪಾಲ ಅಥವಾ ನಗರ ರಕ್ಷಕನಾಗಿದ್ದ. ನಗರಾಡಳಿತದ ಸಲಹೆಗೆ ಪರಿಷತ್ ಎಂಬ ಸಂಸ್ಥೆಯಿತ್ತು. ಇದು ನಗರಶ್ರೇಷ್ಠಿ ಎಂಬ ಅಧಿಕಾರಿಯನ್ನು ಒಳಗೊಂಡಿತ್ತು.
ಗ್ರಾಮಗಳ ಆಡಳಿತ : ಗ್ರಾಮವು ಆಡಳಿತದ ಕಟ್ಟಕಡೆಯ ಘಟಕವಾಗಿತ್ತು. ಗ್ರಾಮಾಧಿಕಾರಿಯು ಸರ್ಕಾರದಿಂದ ನೇಮಿಸಲ್ಪಡು ತ್ತಿದ್ದನು. ಗ್ರಾಮದ ಆಡಳಿತ ನಿರ್ವಹಣೆಯು ಪಂಚಾಯಿತಿಯ ಮೂಲಕ ನಡೆಯುತ್ತಿತ್ತು.
ನ್ಯಾಯಾಡಳಿತ :
ರಾಜನೇ ರಾಜ್ಯದ ಸರ್ವೋಚ್ಛ ನ್ಯಾಯಾಧೀಶನಾಗಿದ್ದನು. ವಿಶಾಲ ಸಾಮ್ರಾಜ್ಯದ ನ್ಯಾಯಾಡಳಿತವನ್ನು ನೋಡಿಕೊಳ್ಳಲು ಒಬ್ಬನಿಂದಲೇ ಸಾಧ್ಯವಿಲ್ಲದ ಕಾರಣ ಕೇಂದ್ರ ಹಾಗೂ ಪ್ರಾಂತ್ಯಗಳಲ್ಲಿ ಅನೇಕ ಹಿರಿಯ ಅಧಿಕಾರಿಗಳನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಜಿಲ್ಲಾ ಕೇಂದ್ರಗಳಲ್ಲಿ ನ್ಯಾಯಾಧೀಶರಿಗೆ ಶೇಶ್ ಮತ್ತು ಕಾಯಸ್ಥರು ನೆರವಾಗುತ್ತಿದ್ದರು. ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ನ್ಯಾಯ ತೀರ್ಮಾನ ಮಾಡುತ್ತಿತ್ತು. ಕಾಳಿದಾಸನು ರಾಜನ ರಾಜಧಾನಿಯ ನ್ಯಾಯಾಲಯವನ್ನು ಧರ್ಮಸ್ಥಾನ ಎಂದು ಕರೆದಿದ್ದಾನೆ. ಅಪರಾಧಿಗಳಿಗೆ ಶಿಕ್ಷೆಗಳು ಕಠಿಣವಾಗಿದ್ದವು.
ಮುಕ್ತಾಯ : ಗುಪ್ತರು ತಮ್ಮ ಹಿಂದಿನ ಮೌರ್ಯರ ಆಡಳಿತ ವ್ಯವಸ್ಥೆಯನ್ನು ಅನುಸರಿಸಿದ್ದರು. ಆದರೆ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಗಳನ್ನು ಮತ್ತು ಸುಧಾರಣೆಗಳನ್ನು ತಂದು ನಾವೀನ್ಯತೆಯನ್ನು ಸಾಧಿಸಿದ್ದು ಕಂಡು ಬರುತ್ತದೆ.





