ಶೇರ್ ಶಹ ಮತ್ತು ಈತನ ಆಡಳಿತ (ಸೂರ್ ಸಂತತಿ – ಮೊಗಲ್ ಆಳ್ವಿಕೆಗೆ ಸ್ವಲ್ಪ ವಿಶ್ರಾಂತಿ)

ಶೇರ್ ಶಹ ಮತ್ತು ಈತನ ಆಡಳಿತ (ಸೂರ್ ಸಂತತಿ – ಮೊಗಲ್ ಆಳ್ವಿಕೆಗೆ ಸ್ವಲ್ಪ ವಿಶ್ರಾಂತಿ)

ಹುಮಾಯೂನನ ಅತ್ಯಂತ ಬದ್ಧ ವೈರಿಯಾದ ಶೇರ್ ಶಹನು ಈ ಮೊಗಲ್ ಚಕ್ರವರ್ತಿಯನ್ನು ಪರಾಭವ ಮತ್ತು ಪದಚ್ಯುತಗೊಳಿಸಿ, ಕ್ರಿ.ಶ. 1540ರಲ್ಲಿ ದೆಹಲಿ ಸಿಂಹಾಸನವನ್ನೇರಿದನು. ಅಫಘನ ಸೂರ್ ಮನೆತನಕ್ಕೆ ಸೇರಿದ ಶೇರ್‌ಶಹನು ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ಓರ್ವ ಪ್ರಮುಖ ವ್ಯಕ್ತಿಯಾಗಿದ್ದಾನೆ.

ಶೇರ್‌ಸಹನ ಮೂಲ ಹೆಸರು ಫರೀದ್, ಈತ ಜನಿಸಿದ್ದು ಕ್ರಿ.ಶ. 1472ರಲ್ಲಿ. ಫರೀದನು ಆರೇಬಿಕ್ ಮತ್ತು ಪರ್ಶಿಯನ್ ಭಾಷೆ ಮತ್ತು ಸಾಹಿತ್ಯಗಳ ಅಧ್ಯಯನಕ್ಕೆ ಹೆಚ್ಚು ಗಮನಕೊಟ್ಟಿದ್ದನು. ಫರೀದನ ತಂದೆಯ ಪೋಷಕನಾಗಿದ್ದ ಜಮಾಲ್‌ಖಾನ್ ನಿಂದಾಗಿ ಫರೀವನಿಗೆ ಸಹಾರಾಜನ ಜಹಗೀರಿನ ಆಡಳಿತದ ಮೇಲ್ವಿಚಾರಣೆ ಸಿಕ್ಕಿತು.

ಸಸ್ಸಾರಾಂನಲ್ಲಿ ಆಡಳಿತವನ್ನು ದಕ್ಷ ರೀತಿಯಿಂದ ನಿರ್ವಹಿಸಿದ ಫರೀದನನ್ನು ಕಂಡ ಅವನ ದಾಯಾದಿಗಳಿಗೆ ಮತ್ಸರ ಅತಿಯಾಯಿತು. ದಾಯಾದಿ ಸಹೋದರರ ದ್ವೇಷಾಸೂಯೆಗಳಿಗೆ ತುತ್ತಾದ ಫರೀದ್, ತತ್ಪರಿಣಾಮವಾಗಿ ಮತ್ತೊಮ್ಮೆ ಮನೆ ತ್ಯಜಿಸಿ, ದಕ್ಷಿಣ ಬಿಹಾರದ ಆರಸ ಬಹರ್ ಖಾನ್ ಆಸ್ನಾನ ಸೇರಿದನು. ಒಬ್ಬನೇ ಹುಲಿಯೊಂದನ್ನು ಸಂಹರಿಸಿದನು. ಫರೀದ್ ಬಹರ್‌ಖಾನನ ಮೆಚ್ಚುಗೆಗೆ ಪಾತ್ರನಾಗಿ ʻಶೇರ್ ಖಾನ್’ ಎಂಬ ಬಿರುದನ್ನು ಪಡೆದನು. ಮತ್ತೆ ಈ ಸಂದರ್ಭದಲ್ಲಿ ಶೇರ್ ಖಾನ್‌‌ ಬಗ್ಗೆ ದ್ವೇಷ, ಅಸೂಹೆ ಹೊಂದಿದ್ದ ಪಠಾಣ ಸರದಾರರು, ಬಹರ್ ಖಾನ್‌ನ ಎದುರು ಅವನ ಬಗ್ಗೆ ಚಾಡಿ ಹೇಳಿದಾಗ, ಬಹರ್ ಖಾನನು ಶೇರಖಾನ ಸಸಾರಂನ ಜಾಗೀರನ್ನು ಬಲಪ್ರಯೋಗದಿಂದ ಪಡೆದನು. ಉದ್ಯೋಗಕ್ಕೆ ಅಲೆದಾಡುತ್ತಿದ್ದ ಶೇರ್ ಖಾನನಿಗೆ ಮೊಗಲ್ ಸೇವೆಯಲ್ಲೂ ಒಂದು ಹುದ್ದೆ ಸಿಕ್ಕಿತು. ಆದರೆ ಅಲ್ಲಿಯೂ ಈತನನ್ನು ಸರಿಯಾಗಿ ಕಾಣದ್ದರಿಂದ ಶೇರ್ ಖಾನ್‌ನು ಕ್ರಿ.ಶ. 1528ರಲ್ಲಿ ಮೊಗಲ್ ಸೇವೆಯನ್ನು ಬಿಟ್ಟು ಬಿಹಾರಕ್ಕೆ ಮರಳಿದನು. ದಕ್ಷಿಣ ಬಿಹಾರದ ಸುಲ್ತಾನ ಮಹಮದನು ಈತನನ್ನು ತನ್ನ ಪುತ್ರ ಜಲಾಲ್ಖಾನನಿಗೆ ಶಿಕ್ಷಕನನ್ನಾಗಿ ನೇಮಿಸಿದನು. ಆದರೆ ಕೆಲವೇ ದಿನಗಳಲ್ಲಿ ಸುಲ್ತಾನನು ಮರಣಹೊಂದಿದನು. ಅವನ ಮಡದಿ ದುದುಬೀಬಿಯು ಜಲಾಲ್ ಖಾನ್ ಚಿಕ್ಕವಯಸ್ಸಿನವನಾಗಿದ್ದರಿಂದ ಹೊಸ ಸುಲ್ತಾನನ ಪರವಾಗಿ ತಾನೇ ರಾಜ್ಯಭಾರ ಮಾಡಲಾರಂಭಿಸಿದಳು. ಈಕೆ ಶೇರ್ ಖಾನ್‌ನನ್ನು ಉಪ ಪ್ರಾಂತ್ಯಾಧಿಕಾರಿಯನ್ನಾಗಿ ನೇಮಿಸಿದಳು. ಗೋಗ್ರಾ ಕಾಳಗದ ನಂತರ ಬಾಬರ್ ನು ಅಲಾಲ್ ಖಾನ್‌ನನ್ನು ವಕ್ಷಿಣ ಬಿಹಾರದ ಆರಸನನ್ನಾಗಿ ಮಾಡಿದನು. ಆಗ ಶೇರ್ ಖಾನನಿಗೆ ಸಸಾರಾಂದ ಜಾಗೀರು ಸಿಕ್ಕಿತು. ಜಲಾಲಖಾನನ ತಾಯಿ ದುದುಬೀಬಿ ಪುನಃ ಶೇ‌ರ್ ಖಾನ್‌ ನನ್ನು ಬಿಹಾರದ ಸಹಾಯಕ ಪ್ರಾಂತ್ಯಾಧಿಕಾರಿಯನ್ನಾಗಿ ನೇಮಿಸಿದಳು. ಅಲ್ಪಾವಧಿಯಲ್ಲಿಯೇ ದುದುಬೀಬಿ ಮರಣಹೊಂದಿದಳು. ನಂತರ ನಿಜವಾದ ಪ್ರಭುವೆನಿಸಿದನು, ಜಲಾಲ್ ಖಾನನು ಹೆಸರಿಗೆ ಮಾತ್ರ ಬಿಹಾರದ ಸುಲ್ತಾನನಾಗಿದ್ದನು.

ಶೇರ್ ಖಾನನು ಕ್ರಿ.ಶ. 1530ರಲ್ಲಿ ಚುನಾರ್ ಕೋಟೆಯ ಹಿಂದಿನ ಗೌವರ್ನರ್ ಆಗಿದ್ದ ತಾಜ್ ಖಾನನ ವಿಧವೆಯಾದ ಲಾಡ್ ಲ್ಲಿ ಕಳನ್ನು ವಿವಾಹವಾದನು. ತತ್ಪರಿಣಾಮವಾಗಿ ಶೇರ್ ಖಾನನಿಗೆ ಚುನಾರ್ ಒಡೆತನ ದೊರೆಯಿತು. ಚುನಾರ್‌ ಕೋಟೆಯಲ್ಲಿ ಅಪಾರ ಸಂಪತ್ತು ಸಿಕ್ಕಿದ್ದರಿಂದ ಸ್ವತಂತ್ರರಾಜ್ಯದ ನಿರ್ಮಾಣದ ಕನಸು ಕಾಣತೊಡಗಿದೆ. ಕ್ರಿ.ಶ. 1539ರಲ್ಲಿ ಹುಮಾಯೂನನನ್ನು ‘ಚೌಸಾಂ’ ಕಾಳಗದಲ್ಲಿ ಸೋಲಿಸಿದನು. ಈ ವಿಜಯದ ನಂತರ ಶೇರ್ ಖಾನನು ‘ಶೇರ್ಶಯ’ ಎಂಬ ಬಿರುದು ಪಡೆದನು. ಶೇರ್‌ಶಹ ಮತ್ತು ಹುಮಾಯೂನರ ನಡುವಣ ಅಂತಿಮ ಹೋರಾಟ ಕ್ರಿ.ಶ. 1540ರಲ್ಲಿ ನಡೆಯಿತು. ಇವರಿಬ್ಬರ ಸೈನ್ಯಗಳು ಕನೌಜ್‌ನ ಹತ್ತಿರ ಸಂಧಿಸಿದವು. ಕನೋಜ್ ಯುದ್ಧದಲ್ಲಿ ರ್ಶೇಶಹನು ಮತ್ತೊಮ್ಮೆ ಹುಮಾಯೂನನನ್ನು ಸಂಪೂರ್ಣವಾಗಿ ಸೋಲಿಸಿದನು. ಶೇರ್ಶಹನು ದೆಹಲಿಯ ಸಾರ್ವಭೌಮನಾದನು. ಅವನ ಬಹುದಿನದ ಕನಸು ನನಸಾಯಿತು.

ದೆಹಲಿಯ ಸಾರ್ವಭೌಮವಾದ ಶೇರ್‌ಶಹ ಕ್ರಿ.ಶ. 1540 ರಿಂದ ಕ್ರಿ.ಶ. 1545ರವರೆಗೆ ಐದು ವರ್ಷಗಳ ಕಾಲ ಆಳ್ವಿಕೆ ನಡೆಸಿದ. ತನ್ನ ಆಳ್ವಿಕೆಯ ಮೊದಲ ವರ್ಷದಲ್ಲಿ ಗ್ವಾಲಿಯರ್ ಮತ್ತು ಸಂಬಾಲ್‌ಗಳನ್ನು ಆಕ್ರಮಿಸಿದ. ತದನಂತರ ಪಂಜಾಬ್, ಸಿಂದ್ ಮತ್ತು ಬಲೂಚಿಸ್ತಾನಗಳೂ ಈತನ ವಶವಾದವು. ಕ್ರಿ.ಶ. 1543ರಲ್ಲಿ ಚಾಂದೇರಿ ಮತ್ತು ರೈಸಿನ್ ಕೋಟೆಗಳನ್ನು ಜಯಿಸಿದನು. ತದನಂತರ ರಾಜಾಸ್ಥಾನದ ಮಾರ್ವಾರದ ಮಾಲೈವ್‌ನಿಂದ ಮಾರ್ವಾರವನ್ನು ಜಯಿಸಿದ. ಕಾಲಿಂಜರ್ ಶೇರ್ ಶಹನ ಅಂತಿಮ ದಂಡಯಾತ್ರೆ, ಇದನ್ನು ಜಯಿಸಿದರೂ ಸಹ ಅಲ್ಲಿ ಆಕಸ್ಮಿಕವಾಗಿ ಉಂಟಾದ ಸಿಡಿಮದ್ದಿನ ಆಸ್ಪೋಟದಿಂದ ಶೇರ್‌ಶಹ ಮರಣ ಹೊಂದಿದೆ. ಈ ರೀತಿ ಶೇರ್ ಶಹನ ಜೀವನ ದುರಂತದಲ್ಲಿ ಕೊನೆಗೊಂಡಿತು.

1. ಶೇರ್‌ ಶಹನ ಆಡಳಿತ ಸುಧಾರಣೆಗಳು

ಆಫ್‌ಫಾನ್ ಸುಲ್ತಾನರಲ್ಲೆಲ್ಲಾ ಅತ್ಯಂತ ಪ್ರಸಿದ್ಧನಾದ ಶೇ‌ರ್ ಶಹನು ಮಹಾನ್ ದಿಗ್ವಿಜಯಿಯಾಗಿದ್ದಂತೆ, ಚತುರ ಆಡಳಿತಗಾರನೂ ಆಗಿದ್ದನು. ಕೇವಲ ತನ್ನ ಐದು ವರ್ಷದ ಅವಧಿಯಲ್ಲಿ ಅದೆಷ್ಟೋ ಮಂದಿ ಸುಲ್ತಾನರು ಹಲವು ವಶಕಗಳಿಂದಲೂ ಸಾಧಿಸಲಾಗದ ಮಹತ್ಸಾಧನೆಯನ್ನು ಸಾಧಿಸಿದನು. ಆಡಳಿತ ಕ್ಷೇತ್ರದಲ್ಲಿ ಈತ ತಂದ ಸುಧಾರಣೆಗಳು ಅಕ್ಬರನಿಂದ ಹಿಡಿದು ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಯಲ್ಲೂ ಪ್ರಾಮುಖ್ಯಗಳಿಸಿದವು. ʻಜನಸಮೂಹದ ಆಯ್ಕೆಗೆ ಅನುಗುಣವಾಗಿ ಸ್ಪಂದಿಸಿ ಆಡಳಿತವನ್ನು ನಿರ್ವಹಿಸಿದನೆಂದು’ ಡಬ್ಲ್ಯೂ ಕ್ರೂಕ್ ಅಭಿಪ್ರಾಯ ಪಟ್ಟಿದ್ದಾರೆ. “ಶೇರ್‌ಶಾನ ಆಡಳಿತ ನಿರಂಕುಶ ಪ್ರಭುತ್ವವಾದರೂ ರಚನಾತ್ಮಕವೂ ಹಾಗೂ ವಿವೇಕ ಪೂರ್ಣವೂ ಆಗಿತ್ತು” ಎಂದು ಡಾ. ಈಶ್ವರೀಪ್ರಸಾದರು ಹೇಳುತ್ತಾರೆ. ಅಕ್ಟರನ ಉದಾರ ನೀತಿಗೆ ಶೇರಶಹನ ಸುಧಾರಣೆಗಳು ಬಹುಮಟ್ಟಿಗೆ ಕಾರಣವಾಗಿವೆ. ಆದುದರಿಂದಲೇ ವಿದ್ವಾಂಸರು ಶೇರ್‌ಶಹನನ್ನು ʻಅಕ್ಬರನ ಮಾರ್ಗದರ್ಶಿ’ ಎಂದು ಕರೆದಿದ್ದಾರೆ.

ಶೇರ್‌ಶಹನ ಸಾಮ್ರಾಜ್ಯವು ಆಸ್ಲಾಂ, ಗುಜರಾತ್ ಮತ್ತು ಕಾಶ್ಮೀರಗಳನ್ನು ಬಿಟ್ಟು ಪೂರ್ಣ ಉತ್ತರ ಭಾರತವನ್ನೆಲ್ಲಾ ಒಳಗೊಂಡಿತ್ತು. ಅರ್ಥಾತ್ ಪೂರ್ವದಲ್ಲಿ ಸೋನಾರಗಾಂವ್‌ದಿಂದ (ಈಗಿನ ಪೂರ್ವ ಬಂಗಾಲ), ವಾಯುವ್ಯದಲ್ಲಿ ಗೋಬ್ಬರ್ ನಾಡಿನವರೆಗೆ, ಉತ್ತರದಲ್ಲಿ ಹಿಮಾಲಯದಿಂದ, ದಕ್ಷಿಣಕ್ಕೆ ವಿಂದ್ಯಾ ಪರ್ವತಾವಳಿಯವರೆಗೆ ಹರಡಿತ್ತು.

2. ಕೇಂದ್ರೀಯ ಆಡಳಿತ ವ್ಯವಸ್ಥೆ

ಆಡಳಿತದ ಕೇಂದ್ರ ಬಿಂದುವಾಗಿದ್ದ ಶೇ‌ರ್ ಶಹನು ಆ ಆಡಳಿತದ ಅತ್ಯಂತ ಚಿಕ್ಕ ಪುಟ್ಟ ವ್ಯವಹಾರಗಳನ್ನು ಸಹ ಪರಿಶೀಲಿಸುತ್ತಿದ್ದನು. ನಾಗರಿಕ ಮತ್ತು ಸೈನಿಕ ಆಡಳಿತದ ಎಲ್ಲಾ ಅಧಿಕಾರಗಳನ್ನು ಹೊಂದಿದ್ದ ಶೇರ್ ಶಹನು, ಇಸ್ಲಾಂ ಧರ್ಮಾಭಿಮಾನಿಗಳಾದ ಉಲೆಮಾಗಳ ಪ್ರಭಾದದಿಂದ ದೂರವಿದ್ದನು. ರಾಜ್ಯದ ಉದ್ದಗಲಕ್ಕೂ ನಿರಂತರವಾಗಿ ಸಂಚರಿಸಿ, ಜನರ ಕುಂದುಕೊರತೆಗಳನ್ನು ವಿಚಾರಿಸುತ್ತಿದ್ದನು. ಶೇರ್‌ ಶಹನ ಮಂತ್ರಿಗಳು ಪ್ರತಿನಿತ್ಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ನುರಿತ ಆಡಳಿತಗಾರನಾದ ಶೇರ್‌ಶಹನು ತನ್ನ ಮಂತ್ರಿಗಳಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ತರಬೇತಿ ನೀಡುವ ಹೊಣೆಯನ್ನು ಹೊತ್ತುಕೊಂಡಿದ್ದನು.

ಆಡಳಿತದ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದಲ್ಲಿ ಅನೇಕ ಇಲಾಖೆಗಳನ್ನು ಶೇರ್ ಶಹನು ಪ್ರಾರಂಭಿಸಿದನು. ಅವುಗಳೆಂದರೆ,

1. ದಿವಾನ್‌-ಇ-ವಜರತ್‌ 2. ದಿವಾನ್‌-ಇ-ಅರಿಜ್‌ 3. ದಿವಾನ್‌-ಇ-ರಸಲತ್‌ 4. ದಿವಾನ್‌-ಇ-ಇನ್ಷಾ

ಇದಲ್ಲದೆ ದಿವಾನ್-ಇ-ಖಾಜಾ ಮತ್ತು ದಿವಾನ್-ಇ-ಬರೀದ್ ಎಂಬ ಎರಡು ಮಹತ್ವದ ಇಲಾಖೆಗಳಿದ್ದವು.

ದಿವಾನ್-ಇ-ವಜರತ್ : ವಜೀರನು ಇದರ ಮುಖ್ಯಸ್ಥನಾಗಿದ್ದು. ಈತ ಸಾಮ್ರಾಜ್ಯದ ಕಂದಾಯ, ಹಣಕಾಸಿನ ಆಡಳಿತ ಮತ್ತು ಉಳಿದ ಮಂತ್ರಿಗಳ ಕಾರ್ಯಚಟುವಟಿಕೆಯ ಮೇಲ್ವಿಚಾರಣೆಗಳನ್ನು ನೋಡಿಕೊಳ್ಳುತ್ತಿದ್ದನು.

ದಿವಾನ್-ಇ-ಆರಿಜ್ : ಇದರ ಮುಖ್ಯಸ್ಥನಾಗಿದ್ದವನು ಆರಿಜ್-ಇ-ಮಮಲಿಕ್, ಇವನು ಸೇನೆಯ ಮುಖ್ಯಸ್ಥನಾಗಿದ್ದು, ಸೈನ್ಯಭರ್ತಿ, ಸಂಘಟನೆ, ಸೈನಿಕ ಶಿಸ್ತನ್ನು ನೋಡಿಕೊಳ್ಳುತ್ತಿದ್ದನು. ಆದರೆ ಈತ ಪ್ರಧಾನ ದಂಡನಾಯಕನಾಗಿರಲಿಲ್ಲ.

ದಿವಾನ್-ರಸಲತ್ : ಈ ಇಲಾಖೆಯು ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳುತ್ತಿತ್ತು. ಈ ಇಲಾಖೆಯ ಮಂತ್ರಿಯು ಹೊರನಾಡುಗಳಿಂದ ಬಂದ ಮತ್ತು ಹೊರನಾಡುಗಳಿಗೆ ಕಳಿಸಲಾದ ರಾಯಭಾರಿಗಳೊಂದಿಗೆ ಸಂಪರ್ಕವಿರಿಸಿಕೊಳ್ಳುತ್ತಿದ್ದನು.

ದಿವಾನ್-ಇ-ಇನ್ಷಾ : ಈ ಇಲಾಖೆಯ ಮಂತ್ರಿಯು ರಾಜಾಜ್ಞೆಗಳನ್ನು ಮತ್ತು ಸರಕಾರಿ ಪ್ರಪತ್ರಗಳನ್ನು ಬರೆಯಿಸುವ, ಅವುಗಳನ್ನು ರಾಜ್ಯಪಾಲರಿಗೆ ಮತ್ತು ಸ್ಥಾನಿಕ ಅಧಿಕಾರಿಗಳಿಗೆ ಕಳಿಸುವ ಮತ್ತು ಅವರೊಂದಿಗೆ ಪತ್ರ ವ್ಯವಹಾರ ನಡೆಸುವ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು. ಸರಕಾರಿ ದಾಖಲೆ ಪತ್ರಗಳು ಇವನ ಅಧೀನದಲ್ಲಿದ್ದವು.

ದಿವಾನ್-ಇ-ಖಾಜಾ : ಪ್ರಧಾನ ಖಾಜಿಯು ಇದರ ಮುಖ್ಯಸ್ಥನಾಗಿದ್ದು, ನ್ಯಾಯಾಡಳಿತದ ಮೇಲ್ವಿಚಾರಣೆ ನಡೆಸುತ್ತಿದ್ದನು. ಅಲ್ಲದೆ ಪ್ರಾಂತೀಯ ಖಾಜಿಗಳ ನ್ಯಾಯಾಲಯಗಳಿಂದ ಬಂದ ಅಪೀಲುಗಳನ್ನು ತೀರ್ಮಾನಿಸುತ್ತಿದ್ದನು.

ದಿವಾನ್-ಇ-ಬರೀದ್ : ಈತ ವಾರ್ತಾ ಇಲಾಖೆಯ ಮುಖ್ಯಸ್ಥನಾಗಿದ್ದು, ಸಾಮ್ರಾಜ್ಯದಲ್ಲಿ ಜರುಗಿದ ಮಹತ್ವದ ಘಟನೆಗಳನ್ನು ಕುರಿತು ವರದಿಯನ್ನು ಸುಲ್ತಾನನಿಗೆ ಒಪ್ಪಿಸುತ್ತಿದ್ದನು. ಈತನ ಕೈಕೆಳಗೆ ಅನೇಕ ಮಂದಿ ವರದಿಗಾರರು ಮತ್ತು ಗೂಢಾಚಾರರು ಇರುತ್ತಿದ್ದರು.

3. ಆಡಳಿತದ ವಿಭಾಗಗಳು

ಹಿಂದಿನ ಸುಲ್ತಾನರ ಕಾಲದಲ್ಲಿದ್ದ ಆಡಳಿತ ವಿಭಜನಾ ವ್ಯವಸ್ಥೆಯನ್ನು ಶೇರ್‌ಶಹ ಮುಂದುವರೆಸಿದ. ಈತ ಆಡಳಿತದ ಸಹಾಯಕ್ಕಾಗಿ ರಾಜ್ಯವನ್ನು 47 ಸರ್ಕಾರ (ಆಡಳಿತ ಘಟಕ) ಗಳನ್ನಾಗಿ ವಿಭಜಿಸಿದ್ದ. ಪ್ರತಿಯೊಂದು ಆಡಳಿತ ಘಟಕವನ್ನು ಹಲವಾರು ಪರಗಣಗಳನ್ನಾಗಿ ಪುನರ್ ವಿಭಜಿಸಿದ್ದ. ಪ್ರತಿಯೊಂದು ಪರಗಣವು ಹಲವು ಹಳ್ಳಿಗಳ ಸಮೂಹವಾಗಿತ್ತು. ಹಳ್ಳಿಗಳ ಆಡಳಿತ ನೋಡಿಕೊಳ್ಳಲು ಗ್ರಾಮ ಪಂಚಾಯಿತಿಗಳಿದ್ದವು. ಪಟ್ಟಾರಿ ಮತ್ತು ಚೌಕಿದಾರರು ಗ್ರಾಮಾಧಿಕಾರಿಗಳಾಗಿದ್ದರು. ಪರಗಣಗಳ ಆಡಳಿತವನ್ನು ನೋಡಿಕೊಳ್ಳಲು ಶೇಕ್‌ದಾರ ಮತ್ತು ಮುನ್ಸಿಫ್ (ಅಮೀಲ್) ರೆಂಬ ಅಧಿಕಾರಿಗಳಿದ್ದರು. ಶೇಕ್‌ ದಾರನು ಕಾನೂನು, ಸುವ್ಯವಸ್ಥೆ ಮತ್ತು ಆಡಳಿತಕ್ಕೆ ಹೊಣೆಗಾರನಾಗಿದ್ದನು. ಮುನ್ಸಿಫ್‌ನಲ್ಲಿ ಭೂಕಂದಾಯ ಸಂಗ್ರಹಣೆಯ ಅಧಿಕಾರವಿತ್ತು. ಪರ್ಶಿಯನ್ ಮತ್ತು ಸ್ಥಳೀಯ ಭಾಷೆಗಳಲ್ಲಿ ಲೆಕ್ಕಪತ್ರಗಳನ್ನು ಬರೆದಿಡಲಾಗುತ್ತಿತ್ತು. ಸರ್ಕಾರಗಳಲ್ಲಿ ಹಿರಿಯ ಅಧಿಕಾರಿಗಳಾದ ಶೇಕ್‌ದಾರ್-ಇ-ಶೇಕ್‌ದಾರನ್ ಮತ್ತು ಮುನ್ಸಿಫ್-ಮುನ್ಸಿಫ್‌ನ ಇದ್ದರು. ಶೇರ್‌ಶಾನ ಕಾಲದಲ್ಲಿ ಹೊಸದಾಗಿ ಈ ಅಧಿಕಾರಿಗಳನ್ನು ನೇಮಿಸಲಾಯಿತು.

4. ಶೇರ್‌ಶಹನ ಸೇನಾ ವ್ಯವಸ್ಥೆ

ಸೈನ್ಯ ಬಲದಿಂದಲೇ ಸಾಮ್ರಾಜ್ಯವನ್ನು ವಿಸ್ತರಿಸಿದ ಶೇರ್‌ಶಹನಿಗೆ ಸೈನ್ಯ ಸಂಘಟನೆಯ ಮಹತ್ವದ ಅರಿವಿತ್ತು. ಸೈನಿಕರ ನೇಮಕಾತಿಯನ್ನು ಸೇನಾನಾಯಕರ ವಶಕ್ಕೆ ಬಿಡದೆ, ಆರ್ಹತೆಯ ಆಧಾರದ ಮೇಲೆ ಸೈನಿಕರನ್ನು ನೇಮಕ ಮಾಡುತ್ತಿದ್ದ. ಪ್ರತಿಯೊಬ್ಬ ಸೈನಿಕನನ್ನು ಹಾಜರುಪಟ್ಟಿಯಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಅವನ ಕುದುರೆಗೆ ರಾಜಮುದ್ರೆ ಹಾಕಿಸಿ, ಕಳಪೆ ಕುದುರೆಗಳು ಸೈನ್ಯಕ್ಕೆ ಸೇರದಂತೆ ನೋಡಿಕೊಳ್ಳಲಾಗುತ್ತಿತ್ತು. ಸುಲ್ತಾನನು ತನ್ನ ಸೈನ್ಯವನ್ನು ಅನೇಕ ತುಕಡಿಗಳಾಗಿ ವಿಂಗಡಿಸಿ, ಪ್ರತಿ ತುಕಡಿಗೆ ಯುದ್ಧ ಪರಿಣಿತನಾದ ದಳಪತಿಯನ್ನು ನೇಮಿಸಿದ್ದನು. ಶೇರ್‌ಶಹನ ಸೈನ್ಯದಲ್ಲಿ 25,000 ಕಾಲಾಳುಗಳು, 1,50,000 ಕುದುರೆಗಳು, 5,000 ಆನೆಗಳು ಇದ್ದವು. ಕಾಲಾಳುಗಳು ಬಂದೂಕುದಾರಿಗಳಾಗಿದ್ದರು. ಅಲ್ಲದೆ ಇವನು ರಾಜ್ಯದ ವಿವಿಧ ಸ್ಥಳಗಳಲ್ಲಿ ಸೈನ್ಯ ಠಾಣೆಗಳನ್ನು ಸ್ಥಾಪಿಸಿ, ಅಲ್ಲೆಲ್ಲ ಪ್ರಬಲವಾದ ಸೇನೆಯನ್ನಿಟ್ಟಿದ್ದನು.

5. ನ್ಯಾಯಾಡಳಿತ

ಅಗಾಧವಾದ ನ್ಯಾಯಪ್ರಜ್ಞೆಯನ್ನು ರೂಢಿಸಿಕೊಂಡಿದ್ದ ಶೇರ್ಶಹ ನಿಷ್ಪಕ್ಷಪಾತವಾದ ನ್ಯಾಯಾಡಳಿತವನ್ನು ಜಾರಿಗೆ ತಂದನು. ತಪ್ಪಿತಸ್ಥರಾದವರು ಸಿರಿವಂತರಾಗಲಿ, ತನ್ನ ಧರ್ಮ ಅಥವಾ ಸಂಬಂಧಿಕರಾಗಲೀ ಎಲ್ಲರನ್ನೂ ಶಿಕ್ಷೆಗೆ ಗುರಿಪಡಿಸುತ್ತಿದ್ದ. ನಗರ ಮತ್ತು ಪಟ್ಟಣಗಳಲ್ಲಿ ಖಾಜಿಗಳನ್ನು ನ್ಯಾಯವಿತರಣೆಗಾಗಿ ನೇಮಿಸಿದ್ದ. ಸಾಮ್ರಾಜ್ಯದಲ್ಲಿ ತಾನೇ ಎಲ್ಲ ಪ್ರಮುಖ ಮೊಕದ್ದಮೆಗಳನ್ನು ತೀರ್ಮಾನಿಸುತ್ತಿದ್ದ. ಕಂದಾಯ ಅಧಿಕಾರಿಗಳಿಗೂ ಸಿವಿಲ್ ವ್ಯಾಜ್ಯಗಳ ಬಗ್ಗೆ ನ್ಯಾಯ ನೀಡುವ ಅಧಿಕಾರವಿದ್ದಿತು. ತಪಿತಸ್ಥರಿಗೆ ನೀಡುತ್ತಿದ್ದ ಶಿಕ್ಷೆಗಳು ಕಠಿಣವಾಗಿದ್ದವು. ಹಳ್ಳಿಗಳಲ್ಲಿ ಪಂಚಾಯಿತರು ಅಥವಾ ಜಮೀನುದಾರರಿಗೆ ನ್ಯಾಯದಾನದ ಅಧಿಕಾರ ಕೊಡಲಾಗಿತ್ತು.

6. ಪೊಲೀಸ್ ವ್ಯವಸ್ಥೆ

ಈತನ ಕಾಲದಲ್ಲಿ ಪ್ರತ್ಯೇಕವಾದ ಪೋಲೀಸ್ ಇಲಾಖೆಯಿರಲಿಲ್ಲ. ಸೈನ್ಯವೇ ಸಾಮ್ರಾಜ್ಯವನ್ನು ಒಳಗಿನ ಮತ್ತು ಹೊರಗಿನ ಶತ್ರುಗಳಿಂದ ರಕ್ಷಿಸುವ ಹೊಣೆ ಹೊತ್ತಿತ್ತು, ಆಡಳಿತದ ಅಧಿಕಾರಿಗಳೇ ಶಾಂತಿ ಮತ್ತು ಸುವ್ಯವಸ್ಥೆ ಏರ್ಪಡಿಸುವ ಜವಾಬ್ದಾರಿ ಹೊತ್ತಿದ್ದರು. ಸರ್ಕಾರಗಳಲ್ಲಿ ಶೇಕ್‌ದಾರರು ಈ ಜವಾಬ್ದಾರಿ ಹೊತ್ತಿದ್ದರು. ಪರಗಣಗಳಲ್ಲಿಯೂ ಇಂತಹುದೇ ವ್ಯವಸ್ಥೆ ಇತ್ತು. ಅಲ್ಲಿ ಅವರು ಕಳ್ಳಕಾಕರ, ದರೋಡೆಕೋರರ ಮತ್ತು ಸಮಾಜ ಘಾತಕ ವ್ಯಕ್ತಿಗಳ ಮೇಲೆ ಸದಾ ಗಮನ ಇಡಬೇಕಾಗಿದ್ದಿತು. ಗ್ರಾಮದಲ್ಲಿ ನಡೆಯುವ ಎಲ್ಲಾ ಅಪರಾಧಗಳಿಗೆ ಗ್ರಾಮದ ಮುಖಂಡರನ್ನು ಹೊಣೆ ಮಾಡುತ್ತಿದ್ದನು. ಗ್ರಾಮದ ಮುಖಂಡರಿಗೆ ಅಪರಾಧಿಯನ್ನು ಕಂಡುಹಿಡಿಯಲು ಅಥವಾ ದರೋಡೆಯಿಂದ ಆದ ನಷ್ಟವನ್ನು ತುಂಬಿಕೊಡಲು ಅವಕಾಶ ನೀಡಲಾಗಿತ್ತು. ಇಲ್ಲವಾದಲ್ಲಿ ಮರಣದಂಡನೆ ವಿಧಿಸಲಾಗುತ್ತಿತ್ತು. ಆಗಿನ ಕಾಲಕ್ಕೆ ಇದು ಒಳ್ಳೆ ವ್ಯವಸ್ಥೆ ಆಗಿತ್ತು. ತತ್ಪರಿಣಾಮವಾಗಿ ಕಳ್ಳತನ, ದರೋಡೆಗಳು ಸಂಭವಿಸುತ್ತಿರಲಿಲ್ಲ. ಇವನ ಕಾಲದಲ್ಲಿ ಪ್ರವಾಸಿಗರು ಮತ್ತು ವರ್ತಕರು ನಿರ್ಭಿತಿಯಿಂದ ಪ್ರಯಾಣಮಾಡುತ್ತಿದ್ದರಂತೆ.

7. ಭೂ ಕಂದಾಯ ವ್ಯವಸ್ಥೆ

ಶೇರ್‌ಶಹನ ಭೂ ಕಂದಾಯ ಸುಧಾರಣೆಗಳು ಭಾರತದ ಕೃಷಿರಂಗದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿವೆ. ಭೂ ಕಂದಾಯವೇ ರಾಜ್ಯದ ಆದಾಯದ ಬಹುಮುಖ್ಯ ಮೂಲವಾಗಿದ್ದರಿಂದ, ಅದರ ಕಡೆ ಹೆಚ್ಚಿಗೆ ಗಮನಹರಿಸಿದನು. ಇವನು ಜಾರಿಗೆ ತಂದ ಕಂದಾಯ ಸುಧಾರಣೆಯ ಪ್ರಮುಖ ಲಕ್ಷಣಗಳು:

  1. ತನ್ನ ಸಾಮ್ರಾಜ್ಯದ ಎಲ್ಲಾ ಭೂಮಿಯನ್ನು ಅಳತೆಮಾಡಿಸಿ ಅದರ ಉಳುಮೆ ಮತ್ತು ಉತ್ಪನ್ನದ ಆಧಾರದ ಮೇಲೆ ಕಂದಾಯವನ್ನು ನಿಗದಿಪಡಿಸಿದನು.
  2. ಭೂಮಿಯನ್ನು ಉತ್ತಮ, ಮಧ್ಯಮ ಮತ್ತು ಕನಿಷ್ಠ ಎಂದು ಮೂರು ಭಾಗಗಳಾಗಿ ಮಾಡಿ, ಹುಟ್ಟುವಳಿಯನ್ನು ನಿರ್ಧರಿಸುತ್ತಿದ್ದರು.
  3. ಬೇಸಾಯಗಾರರು ಭೂ ಉತ್ಪಾದನೆಯ ಸರಾಸರಿಯನ್ನು ಲೆಕ್ಕಹಾಕಿ ಅದರ 1/3 ಭಾಗವನ್ನು ಸರ್ಕಾರಕ್ಕೆ ಕಂದಾಯದ ರೂಪದಲ್ಲಿ ಸಲ್ಲಿಸಬೇಕಾಗಿತ್ತು.
  4. ಭೂ ಕಂದಾಯವನ್ನು ಹಣದ ರೂಪದಲ್ಲಿ ಇಲ್ಲವೆ ದವಸ ಧಾನ್ಯಗಳ ರೂಪದಲ್ಲಿ ಸಲ್ಲಿಸಬಹುದಾಗಿತ್ತು.
  5. ಸರಕಾರವು ಪ್ರತಿಯೊಬ್ಬ ಬೇಸಾಯಗಾರನಿಗೂ ಪಟ್ಟ ವನ್ನು ಕೊಡುತ್ತಿತ್ತು. ಅದರಲ್ಲಿ ಆತನು ಸರ್ಕಾರಕ್ಕೆ ನೀಡಬೇಕಾದ ಭೂ ಕಂದಾಯದ ಪ್ರಮಾಣವನ್ನು ನಮೂದಿಸಲಾಗುತ್ತಿತ್ತು.
  6. ಕಂದಾಯ ಅಧಿಕಾರಿಗಳಿಗೆ ಕಂದಾಯ ನಿಗಧಿ ಮಾಡುವಾಗ ಉದಾರವಾಗಿರಲು ಮತ್ತು ವಸೂಲಿಮಾಡುವಾಗ ಕಠಿಣವಾಗಿರಲು ನಿರ್ದೇಶನ ನೀಡಲಾಗಿತ್ತು.
  7. ಕ್ರಾಮ ಇಲ್ಲವೆ ಪ್ರಕೃತಿ ವಿಕೋಪದ ವೇಳೆಯಲ್ಲಿ ಸರ್ಕಾರಿ ಉಗ್ರಾಣಗಳಲ್ಲಿನ ಆಹಾರಧಾನ್ಯಗಳನ್ನು ಕಡಿಮೆ ದರದಲ್ಲಿ ಜನರಿಗೆ ಮಾರಾಟ ಮಾಡಲಾಗುತ್ತಿತ್ತು.
  8. ಯುದ್ಧ ಕಾಲದಲ್ಲಿ ಬೆಳೆಯನ್ನು ಹಾಳುಮಾಡದಂತೆ ಸೈನಿಕರಿಗೆ ಕಟ್ಟಪ್ಪಣೆ ಮಾಡಲಾಗಿತ್ತು. ಬೆಳೆ ಹಾಳಾದರೆ ರೈತರಿಗೆ ಪರಿಹಾರ ಹಣ ನೀಡಲಾಗುತ್ತಿತ್ತು.
  9. ಕಂದಾಯವನ್ನು ವಸೂಲಿ ಮಾಡಲು ಅಮೀರ್, ಮುಖದ್ದಂ, ಶೇಕ್‌ದಾರ್, ಕುನಂಗೊ ಮತ್ತು ಪಟ್ಟಾರಿಗಳ ಸೇವೆಯನ್ನು ಬಳಸಿಕೊಳ್ಳುತ್ತಿದ್ದರು.

ಶೇರ್‌ಶಹನಿಗೆ ರೈತ ಸಮುದಾಯದ ಕಲ್ಯಾಣದ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ʻʻಕೃಷಿಕರು ನಿರ್ದೋಷಿಗಳು, ಅವರನ್ನು ಪಮನಮಾಡಿದರೆ, ಅವರು ಊರುಗಳನ್ನು ಬಿಟ್ಟು ಗುಳೆ ಹೋಗುತ್ತಾರೆ. ಇದರಿಂದ ರಾಷ್ಟ್ರನಾಶವಾಗುತ್ತದೆ. ಪುನಃ ಅಂತಹ ಹಳ್ಳಿಗಳನ್ನು ಯಥಾಸ್ಥಿತಿಗೆ ತರಲು ಕಷ್ಟವಾಗುತ್ತದೆ ಹಾಗೂ ಬಹುಕಾಲ ತೆಗೆದುಕೊಳ್ಳುತ್ತದೆ” ಎಂದು ಹೇಳುತ್ತಿದ್ದನು. ಅಲ್ಲದೆ ರೈತರ ಶೋಷಣೆಯಿಂದ ಸುಲ್ತಾನರು ಪತನವಾಗುತ್ತಿದ್ದುದನ್ನು ಶೇ‌ರ್ ಷಾ ಆರಿತಿದ್ದನು.

8. ಇತರೆ ಆದಾಯಗಳು

ರೈತರಿಂದ ಬರುವ ಭೂ-ಕಂದಾಯವಲ್ಲದೆ, ವಾಣಿಜ್ಯ, ಟಂಕಸಾಲೆ, ಕಾಣಿಕೆಗಳು, ಜಿಜಿಯಾ ಸುಂಕ, ಉಪ್ಪಿನ ತೆರಿಗೆ, ವಾರಸುದಾರರಿಲ್ಲದ ಅಸ್ತಿ ಮುಂತಾದವುಗಳು ಕೇಂದ್ರ ವರಮಾನದ ಇತರೆ ಮೂಲಗಳಾಗಿದ್ದವು. ಸರ್ಕಾರವು ಕಚ್ಚಾವಸ್ತುಗಳ ಹಾಗೂ ಸಿದ್ಧ ವಸ್ತುಗಳ ಮೇಲೆ ಸಾಗಾಣಿಕ ತೆರಿಗೆ ವಿಧಿಸಿತ್ತು. ಸಾಮಂತರು, ಸರದಾರರು, ಅಧಿಕಾರಿಗಳು ಮತ್ತು ಸಂದರ್ಶಕರು ಅರಸಾಗೆ ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು.

9. ನಾಣ್ಯ ಸುಧಾರಣೆ :

ಶೇರ್‌ಶಹ ನಾಣ್ಯ ವ್ಯವಸ್ಥೆಯಲ್ಲೂ ಬದಲಾವಣೆಗಳನ್ನು ಜಾರಿಗೆ ತಂದನು, ನಾಣ್ಯಗಳಿಗೆ ಬಳಸುವ ಲೋಹಗಳಲ್ಲಿ, ಅವುಗಳ ಪ್ರಮಾಣದಲ್ಲಿ ಮತ್ತು ವಿನಿಮಯದಲ್ಲಿ ಕಂಡುಬಂದಿದ್ದ ಗೊಂದಲ ನಿವಾರಿಸಲು ಪ್ರಯತ್ನಿಸಿದನು. ಹಳೆಯ ನಾಣ್ಯಗಳ ಚಲಾವಣೆಯನ್ನು ನಿಲ್ಲಿಸಿ ಹೊಸ ನಾಣ್ಯ ಪದ್ಧತಿಯನ್ನು ಜಾರಿಗೆ ತಂದನು. ನಿರ್ದಿಷ್ಟ ತೂಕವನ್ನು ಹೊಂದಿದ್ದ ಬಂಗಾರ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದನು. ಶೇರ್‌ಶಹನ ಬೆಳ್ಳಿಯ ರೂಪಾಯಿ 180 ಡ್ರೈನ್ ತೂಕವಿದ್ದಿತ್ತು. ಈ ರೂಪಾಯಿ (ಅದರಲ್ಲಿದ್ದ ಬರಹ ಹೊರತಾಗಿ) ಪೂರ್ಣ ಮೊಗಲ್ ಕಾಲದಲ್ಲಿ ಜಾರಿಯಲ್ಲಿತ್ತು. ಅಲ್ಲದೆ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯು ಕ್ರಿ.ಶ. 1835ರವರೆಗೆ ಈ ನಾಣ್ಯವನ್ನು ಮುಂದುವರಿಸಿತು.

ಆಗ್ರಾ, ಗ್ವಾಲಿಯರ್, ಲಖ್‌ನೌ, ಸಸರಾಮ, ಉಜ್ಜಯಿನಿ ಮುಂತಾದ ಕಡೆ ಟಂಕಶಾಲೆಗಳಿದ್ದವು. ಈ ಟಂಕಶಾಲೆಗಳು ಶೇರ್‌ಶಹನ ಸಾಮ್ರಾಜ್ಯದ ಗಡಿಗಳನ್ನು ಸೂಚಿಸುತ್ತವೆ.

10. ಲೋಕೋಪಯೋಗಿ ಕಾರ್ಯಗಳು

ಶೇರ್‌ಸಹನು ರಾಜ್ಯದ ಸಂಪರ್ಕ ವ್ಯವಸ್ಥೆಯನ್ನು ಉತ್ತಮಗೊಳಿಸಲು ತೀವ್ರವಾದ ಆಸಕ್ತಿಯನ್ನು ಹೊಂದಿದ್ದನು. ಸಾಮ್ರಾಜ್ಯದ ಬೇರೆ ಬೇರೆ ಭಾಗಗಳು ರಾಜಧಾನಿಯೊಡನೆ ಸಂಪರ್ಕ ಹೊಂದುವಂತೆ ಹಲವು ಹೊಸ ಮಾರ್ಗಗಳನ್ನು ನಿರ್ಮಿಸಿದನು ಮತ್ತು ಹಳೆಯ ಮಾರ್ಗಗಳನ್ನು ದುರಸ್ತಿಗೊಳಿಸಿದನು. ತನ್ನ ರಾಜಧಾನಿಯನ್ನು ಸಂಪರ್ಕಿಸುವಂತೆ ನಾಲ್ಕು ಮುಖ್ಯ ಹೆದ್ದಾರಿಗಳನ್ನು ನಿರ್ಮಿಸಿದನು. ಅವುಗಳೆಂದರೆ,

|ಬಾಂಗ್ಲಾದೇಶದ ಸೋನಾ‌ರ್‌ಗಾಂವ್‌ನಿಂದ ಆಗ್ರಾ, ದೆಹಲಿಯ ಮುಖಾಂತರ ಲಾಹೋರನ್ನು ಸಂಪರ್ಕಿಸಿದ್ದಿತು. ಇದನ್ನು “ಸಡಕ್-ಇ-ಅಜಂ” ಎನ್ನಲಾಗಿತ್ತು.

  1. ಆಗ್ರಾದಿಂದ ಬರ್ಹಾನಪುರಕ್ಕೆ ಹೋಗುವ ಮಾರ್ಗ
  2. ಆಗ್ರಾದಿಂದ ಚಿತೋಡಕ್ಕೆ ಹೋಗುವ ಮಾರ್ಗ
  3. ಲಾಹೋರ್‌ನಿಂದ ಮುಲ್ತಾನಕ್ಕೆ ಹೋಗುವ ಮಾರ್ಗ.

ಈ ಮೇಲಿನ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಸಾಲು ಮರಗಳನ್ನು ನೆಡಿಸಿದನು. ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿ ಎಂಟು ಕಿಲೋಮೀಟರಿಗೆ ಸರಾಯ್ ಅಥವಾ ಅತಿಥಿಗೃಹಗಳನ್ನು ಕಟ್ಟಿಸಿದನು. ಸರಾಯ್‌ಗಳಲ್ಲಿ ಅನ್ನ ವಸತಿ ದೊರೆಯುತ್ತಿತ್ತು.

ಹಿಂದೂ ಮತ್ತು ಮುಸ್ಲಿಂ ಧರ್ಮಿಯರಿಗೆ ಪ್ರತ್ಯೇಕವಾಗಿ ವಸತಿ ಸೌಕರ್ಯವನ್ನು ಒದಗಿಸಲಾಗುತ್ತಿತ್ತು. ಶೇರ್ಶಹ ತನ್ನ ರಾಜ್ಯಾದ್ಯಂತ ಒಟ್ಟು 1700 ಸರಾಯ್ಗಳನ್ನು ಕಚ್ಚಿಸಿದ್ದ. ದಾಗಿ ಖನುಂಗೋ ರವರ ಪ್ರಕಾರ ಸಾನಾಯ್ಗಳು “ಸಾಮ್ರಾಜ್ಯದ ವಿಜವಾದ ರಕ್ತಪಾಡಿಗಳಾಗಿದ್ದವು”, ಸೈನ್ಯಗಳ ಚಲನವಲನಕ್ಕೆ ಮಾತ್ರವೇ ಅಲ್ಲದೆ ಅವುಗಳು ರಕ್ಷಣೆ ಮತ್ತು ಸುದ್ದಿ ವಿನಿಮಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದ್ದವು. ವ್ಯಾಪಾರ, ವಾಣಿಜ್ಯ ಮತ್ತು ಅಂಚೆ ವ್ಯವಸ್ಥೆಗೆ ಸಹಕಾರಿಯಾಗಿದ್ದವು.

ಶೇರ್‌ಶಹನ ವ್ಯಕ್ತಿತ್ವ :

ಮಧ್ಯಯುಗದ ಭಾರತೀಯ ಇತಿಹಾಸದಲ್ಲಿ ಶೇ‌ರ್ಷಹ ಆಕರ್ಷಕ ವ್ಯಕ್ತಿ. ಬದುಕಿನ ಎಲ್ಲಾ ಕ್ಷೇತ್ರಗಳ ಪೂರ್ಣ ಅರಿವಿದ್ದ ಇವನು ದೇಶಕ್ಕೆ ಅತ್ಯುತ್ತಮ ಅಡಳಿತ ನೀಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ದೈತ್ಯ ಶಕ್ತಿಯಾದ ಮೊಘಲರನ್ನು ಭಾರತದಿಂದ ಹೊರಹಾಕಿ, ಪ್ರಬಲ ಸಾಮ್ರಾಜ್ಯವನ್ನು ಸಂಘಟಿಸಿದ್ದು ಆತನ ಅದ್ಭುತವಾದ ಸಾಧನೆ, ಇವನ ಸುಧಾರಣೆಗಳು ಮೊಗಲ್ ದೊರೆ ಆಕ್ಟರನ ಸಾಧನೆಗಳಿಗೆ ದಾರಿದೀಪವಾಯಿತು. ಭ್ರಷ್ಟಾಚಾರ ಮುಕ್ತವಾದ, ಕಳ್ಳತನ ದರೋಡೆ ಮತ್ತು ಕೊಲೆಗಳಿಲ್ಲದ ಆದರ್ಶ ಸಮಾಜದ ನಿರ್ಮಾಪಕನೆಂಬುದನ್ನು ಮರೆಯುವಂತಿಲ್ಲ, ಸಸಾರಾಂನಲ್ಲಿ ಅವನೇ ಅವನಿಗಾಗಿ ಕಟ್ಟಿಸಿರುವ ಗೋರಿಯು ಅದ್ಭುತ ಕೌಶಲ್ಯದ ಪ್ರತೀಕವಾಗಿದೆ. ದೆಹಲಿ ಸುಲ್ತಾನರ ವಾಸ್ತುಶಿಲ್ಪದ ವೈಭವವನ್ನು ಈ ಗೋರಿಯಲ್ಲಿ ನೋಡಬಹುದು. ದೆಹಲಿಯಲ್ಲಿ ಯಮುನಾ ನದಿಯ ದಡದ ಮೇಲೆ ನವೀಸವಾದ ನಗರವನ್ನು ನಿರ್ಮಾಣ ಮಾಡಿದ. ಇದನ್ನು ʻಪುರಾನ ಕಿಲಾ’ ಎನ್ನುತ್ತಾರೆ. ಇವರಲ್ಲಿ ಸುಂದರವಾದ ಮಸೀದಿಯೊಂದಿದೆ.

ಶೇರ್ ಶಹ ಧಾರ್ಮಿಕವಾಗಿ ಉದಾರನೀತಿಯನ್ನು ಹೊಂದಿಲ್ಲದಿದ್ದರೂ ಆಸಹಿಷ್ಣುವಾಗಿರಲಿಲ್ಲ. ಶೇರ್ ಶಹನ ಮರಣಾನಂತರ ಅಧಿಕಾರಕ್ಕೆ ಬಂದ ಉತ್ತಾರಾಧಿಕಾರಿಗಳು ಅಸಮರ್ಥರಾಗಿದ್ದರು. ಅವರ ಅಧಿಕಾರ ಲಾಲಸೆ ಮೊಗಲ್ ದೊರೆ ಹುಮಾಯೂನ್ ಮರಳಿ ಅಧಿಕಾರಕ್ಕೆ ಬರಲು ಅವಕಾಶವಾಯಿತು. ಅಲ್ಲಿಗೆ ಸೂರ್ ವಂಶದ ಆಳ್ವಿಕೆ ಅಂತ್ಯಗೊಂಡಿತು.

ಮೊಗಲ್ ಸಾಮ್ರಾಜ್ಯದ ಸ್ಥಾಪನೆ ಮತ್ತು ಬಾಬರ್ (ಕ್ರಿ.ಶ. 1526-1530)

ಮೊಗಲ್ ಸಾಮ್ರಾಜ್ಯದ ಸ್ಥಾಪನೆ ಮತ್ತು ಬಾಬರ್ (ಕ್ರಿ.ಶ. 1526-1530)

ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಸ್ಥಾಪಕನಾದ ಬಾಬ‌ರ್ ಆ ಮೊಗಲ್ ಸಾಮ್ರಾಜ್ಯಕ್ಕೆ ಭದ್ರವಾದ ಮತ್ತು ಶಾಶ್ವತವಾದ ಬುನಾದಿಯನ್ನು ಹಾಕಿದ ಕೀರ್ತಿಗೆ ಪಾತ್ರನಾಗಿದ್ದಾನೆ. ಅವನು ಮಾಗಲ್ ಸಾಮ್ರಾಜ್ಯದ ಸ್ಥಾಪನೆಗೆ ಮಾಡಿದ ಮಹತ್ ಸಾಧನೆಗಳು ಚಿರಸ್ಮರಣೀಯವಾಗಿವೆ.

ಬಾಬರನು ತಂದೆಯ ಕಡೆಯಿಂದ ಭಾರತದ ಮೇಲೆ ಕ್ರೂರ ಧಾಳಿಯನ್ನು ನಡೆಸಿದ ಕೈಮೂರನ ಐದನೆಯ ತಲೆಮಾರಿನವನು, ತಾಯಿ ಕಡೆಯಿಂದ ಮಹಾನ್ ಸಾಮ್ರಾಜ್ಯ ಸ್ಥಾಪಕವಾದ ಚಂಗೀಸ್ ಖಾನನ ಐದನೇ ವಂಶಸ್ಥ, ಈ ಎರಡೂ ವಂಶಸ್ಥರ ಗುಣಗಳು ಬಾಬರನಲ್ಲಿದ್ದವು.

ಬಾಬರನ ಪ್ರಾರಂಭದ ಜೀವನ : ಬಾಬರ್ ಕ್ರಿ.ಶ. 1483 ಫೆಬ್ರವರಿ 14ರಂದು ಫರಘಾನದಲ್ಲಿ ಜನಿಸಿದನು. ಈತನ ತಂದೆ ಉಮರ್‌ಶೇಖ್ ಮಿರ್ಜಾ, ತಾಯಿ ಕುತ್ಲುಗ್ ನಿಗ್ ಖನುಂ, ಬಾಬರ್‌ನ ತಂದೆಯು ಟ್ರಾಸ್ಸ್‌-ಅಕ್ಸಿಯಾನದಲ್ಲಿನ ಫ‌ರ್‌ಘಾನ ಎಂಬ ಸಣ್ಣ ರಾಜ್ಯದ ಅರಸನಾಗಿದ್ದನು. ಕ್ರಿ.ಶ. 1494ರಲ್ಲಿ ಬಾಬರ್‌ನ ತಂದೆ ಮರಣ ಹೊಂದಿದಾಗ, ಆಗ ಇನ್ನೂ ಹನ್ನೊಂದು ವರ್ಷದ ಬಾಲಕನಾಗಿದ್ದ ಬಾಬರ್ ಫರ್ಫಾನದ ಸಿಂಹಾಸನವನ್ನೇರಿದನು. ತದನಂತರ ಸಮ‌ರ್‌ಖಂಡವನ್ನು ಪ್ರಬಲ ಹೋರಾಟ ನಡೆಸಿ ವಶಪಡಿಸಿಕೊಂಡನು.

ಆದರೆ ಈ ಮಧ್ಯೆ ಅನಾರೋಗ್ಯದಿಂದ ಹಾಸಿಗೆ ಹಿಡಿದ ಬಾಬರ್‌ನು ಸತ್ತನೆಂದು ಸುಳ್ಳುಸುದ್ದಿಯನ್ನು ಬಾಬರನ ಸಂಬಂಧಿಕರು ಹಾಗೂ ಮಂತ್ರಿಗಳು ಫರ್ಘಾನದಲ್ಲಿ ಹರಡಿ, ಬಾಬರನ ಸಹೋದರನಾದ ಜಹಾಂಗೀರವನ್ನು ಅಧಿಕಾರಕ್ಕೆ ತಂದರು. ಕಾಯಿಲೆಯಿಂದ ಚೇತರಿಸಿಕೊಂಡು ಬಾಬರ್‌ನು ಫರ್‌ಘಾನವನ್ನು ಪುನ: ವಶಪಡಿಸಿಕೊಳ್ಳಲು ಮಾಡಿದ ಯತ್ನ ವಿಫಲವಾಯಿತು. ಬಾಬರ್‌ನು ಮರಳಿ ಸಮರ್ ಖಂಡಕ್ಕೆ ತೆರಳುವಷ್ಟರಲ್ಲಿ ಆ ನಗರವೂ ಸಹ ಆತನ ಹತೋಟಿಯಿಂದ ತಪ್ಪಿಹೋಗಿತ್ತು.

ಫರಘಾನ ಮತ್ತು ಸಮರ್ ಖಂಡಗಳನ್ನು ಕಳೆದುಕೊಂಡು ರಾಜಭ್ರಷ್ಟನಾದ ಬಾಬರ್‌ನು ಅಲೆಮಾರಿ ಜೀವನದ ಕಷ್ಟನಷ್ಟಗಳನ್ನು ಅನುಭವಿಸಿ, ಆ ಕಷ್ಟನಷ್ಟಗಳ ಶಾಲೆಯಲ್ಲಿ ತರಬೇತಿ ಹೊಂದಿ, ತನ್ನ ಮುಂದಿನ ಜೀವನವನ್ನು ಉಜ್ವಲಗೊಳಿಸುವಲ್ಲಿ ಯಶಸ್ವಿಯಾದನು. ಕ್ರಿ.ಶ. 1504 ರಲ್ಲಿ ಬಾಬರನು ಕಾಬೂಲನ್ನು ಜಯಿಸಿಕೊಂಡ ಪರಿಣಾಮವಾಗಿ ಈತನ ಅಲೆಮಾರಿ ಜೀವನ ಅಂತ್ಯಗೊಂಡಿತು. ಕ್ರಿ.ಶ. 1507ರಲ್ಲಿ ಪಾದಶಹ (ಸಾಮ್ರಾಟ) ಎಂಬ ಬಿರುದನ್ನು ಧರಿಸಿದನು. ಕ್ರಿ.ಶ. 1508ರಲ್ಲಿ ಬಾಬರ್‌ನ ಹಿರಿಯ ಪುತ್ರ ಹುಮಾಯೂನ್ ಜನಿಸಿದನು.

ಭಾರತದಲ್ಲಿ ಬಾಬರನ ಆಕ್ರಮಣ : ಭಾರತದಲ್ಲಿನ ಆಗಾಧ ಸಂಪತ್ತು ಬಾಬರನ ಧಾಳಿಯ ಆಸೆಯನ್ನು ಕೆರಳಿಸಿತು. ಕ್ರಿ.ಶ. 1505 ರಲ್ಲಿ ಬಾಬರನು ಸಿಂಧೂ ನದಿಯವರೆಗಿನ ಭಾರತದ ಗಡಿ ಪ್ರದೇಶದಲ್ಲಿ ಆಕ್ರಮಣವೆಸಗಿದನು. ಕ್ರಿ.ಶ.1519 ರಲ್ಲಿ ಸಿಂಧೂನದಿಯನ್ನು ದಾಟಿ, ಪಂಜಾಬಿನ ವಾಯುವ್ಯ ಭಾಗವನ್ನು ಆಕ್ರಮಿಸಿದನು.

ಕ್ರಿ.ಶ. 1524 ರಲ್ಲಿ ಬಾಬರನಿಗೆ ಒಂದು ಒಳ್ಳೆಯ ಅವಕಾಶ ಒದಗಿತು. ಪಂಜಾಬಿನ ದೌಲತ್ ಖಾನ್ ಮತ್ತು ಇಬ್ರಾಹಿಂಲೋದಿಯ ಚಿಕ್ಕಪ್ಪನಾದ ಅಲಂಖಾನ್ ಇವರು ಭಾರತದ ಮೇಲೆ ದಾಳಿಯಿಡುವಂತೆ ಬಾಬರನನ್ನು ಆಮಂತ್ರಿಸಿದರು. ಬಾಬರನು ಕ್ರಿ.ಶ. 1524 ರಲ್ಲಿ ಪಂಜಾಬನ್ನು ಪ್ರವೇಶಿಸಿ ಲಾಹೋರನ್ನು ಆಕ್ರಮಿಸಿದನು. ಹಿಂದೂಸ್ಥಾನದಲ್ಲಿ ಶಾಶ್ವತ ರಾಜ್ಯ ಸ್ಥಾಪನೆಯ ಗುರಿಹೊಂದಿರುವುದನ್ನು ಕಂಡು ದೌಲತ್ ಖಾನ್ ಮತ್ತು ಆಲಂಖಾನರು ಬಾಬರ್‌ನ ವಿರೋಧಿಗಳಾದರು. ಬಾಬರನು ಕಾಬೂಲಿಗೆ ಹಿಂತಿರುಗಿ ತನ್ನ ಸೈನಿಕ ಬಲವನ್ನು ಹೆಚ್ಚಿಸಿಕೊಂಡನು. ಕ್ರಿ.ಶ. 1525 ರಲ್ಲಿ ಬಾಬರನು ಪಂಜಾಬನ್ನು ಆಕ್ರಮಿಸಿ ದೌಲತ್ ಖಾನನ ಶರಣಾಗತಿಯನ್ನು ಪಡೆದನು. ಅನಂತರ ಇಬ್ರಾಹಿಂಲೋದಿಯನ್ನು ಎದುರಿಸಲು ಪಂಜಾಬಿನಿಂದ ಪಾಣೀಪತ್ ರಣಾಂಗಣಕ್ಕೆ ಸೈನ್ಯಸಮೇತ ಸಾಗಿದನು.

ಪಾಣಿಪತ್‌ ಕದನ (ಕ್ರಿ.ಶ. 1526 ಎಪ್ರೀಲ್‌ 21): ಕ್ರಿ.ಶ. 1526 ಎಪ್ರೀಲ್‌ 21 ರಂದು ಬಾಬರ್‌ ಮತ್ತು ದೆಹಲಿಯ ಇಬ್ರಾಹಿಂಲೋದಿ ನಡುವೆ ನಡೆದ ಮೊದಲನೇ ಪಾಣೀಪತ್ ಕದನಕ್ಕೆ ಕೆಳಗಿನ ಕಾರಣಗಳಿವೆ.

  1. ಬಾಬರನು ಯುದ್ಧಪ್ರಿಯ ಮತ್ತು ಮಹಾಪರಾಕ್ರಮಿಯಾಗಿದ್ದನು. ಕಾಬೂಲಿನ ದೊರೆಯಾಗಿ ಹಲವು ವರ್ಷಗಳ ಕಾಲ ಆಡಳಿತ ನಡೆಸಿದರು, ಅವನ ಮಹತ್ವಾಕಾಂಕ್ಷೆ ಭಾರತದಲ್ಲಿ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸುವುದಾಗಿತ್ತು.
  2. ಭಾರತದ ಪ್ರಸಿದ್ದಿ ಮತ್ತು ಉತ್ಕೃಷ್ಟತೆ ಬಾಬರನಿಗೆ ಮೊಘಲ್ ಸಾಮ್ರಾಜ್ಯ ಸ್ಥಾಪಿಸಲು ಪೋಷಕವಾದವು. ಇವುಗಳು ಅವನ ಹೆಬ್ಬಯಕೆಗೆ ಪ್ರೇರಕ ಶಕ್ತಿಗಳಾಗಿ ಪರಿಣಮಿಸಿದವು.
  3. ಕ್ರಿ.ಶ. 1526ರ ಮೊದಲನೇ ಪಾಣಿಪತ್ ಕದನಕ್ಕಿಂತ ಪೂರ್ವದಲ್ಲಿ ಬಾಬರನು ಮಾಡಿದ ಕ್ರಿ.ಶ. 1519, ಕ್ರಿ.ಶ. 1520, ಕ್ರಿ.ಶ. 1524ರ ದಂಡಯಾತ್ರೆಗಳು ಭಾರತದ ಕಡೆ ಸಾಗಲು ದಾರಿಯನ್ನು ಸುಗಮಗೊಳಿಸಿದವು.
  4. ಬಾಬರನ ಕಾಲಕ್ಕೆ ಉತ್ತರ ಭಾರತದ ರಾಜಕೀಯ ಪರಿಸ್ಥಿತಿಯು ತುಂಬಾ ಹದಗೆಟ್ಟಿತ್ತು. ಮಾಳವ, ಗುಜರಾತ್, ರಜಪೂತ ಮೊದಲಾದ ರಾಜರುಗಳಲ್ಲಿ ಆಗಾಗ್ಗೆ ಯುದ್ಧಗಳಾಗುತ್ತಿದ್ದವು. ಉತ್ತರ ಭಾರತದಲ್ಲಿ ರಾಜಕೀಯ ಐಕ್ಯಮತ್ಯವಿಲ್ಲದ್ದು ಭಾರತದ ಮೇಲೆ ದಾಳಿ ಮಾಡಲು ಮತ್ತು ಭಾರತದಲ್ಲಿ ಶಾಶ್ವತವಾದ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸಲು ಅವಕಾಶ ಒದಗಿದಂತಾಯಿತು.
  5. ಕ್ರಿ.ಶ. 1526ರ ಹೊತ್ತಿಗೆ ದೆಹಲಿ ಸಾಮ್ರಾಜ್ಯದ ರಾಜಕೀಯ ಪರಿಸ್ಥಿತಿಯು ಇನ್ನಷ್ಟು ಹದಗೆಟ್ಟಿತ್ತು. ಇಬ್ರಾಹಿಂಲೋದಿಯ ಅಸಮರ್ಪಕ ಆಳ್ವಿಕೆಯಿಂದ ಹೆಚ್ಚಾದ ವಿರೋಧಿಗಳು ಅವನ ವಿರುದ್ಧ ಬಂಡಾಯವೇಳುವಷ್ಟು ಪ್ರಬಲರಾದರು. ಈ ಪರಿಸ್ಥಿತಿಯನ್ನೆಲ್ಲ ವೀಕ್ಷಿಸಿ, ನಿರೀಕ್ಷಿಸಿ, ವಿವೇಚಿಸಿದ ಬಾಬರ್ ಭಾರತದ ಮೇಲೆ ದಂಡೆತ್ತಿ ಬರುವ ನಿರ್ಧಾರವನ್ನು ತೆಗೆದುಕೊಂಡನು.
  6. ಕ್ರಿ.ಶ.1524 ರಲ್ಲಿ ಪಂಜಾಬಿನ ದೌಲತ್ ಖಾನ್ ಮತ್ತು ದೆಹಲಿಯ ಇಬ್ರಾಹಿಂಬೋದಿಯ ಚಿಕ್ಕಪ್ಪನಾದ ಆಲಂಖಾನ್-ಇವರು ಭಾರತದ ಮೇಲೆ ದಾಳಿಮಾಡುವಂತೆ ಬಾಬರ್‌ನಿಗೆ ಆಹ್ವಾನ ನೀಡಿದರು. ಈ ನಂತರ ಪಂಜಾಬನ್ನೇ ಆಕ್ರಮಿಸಿ ದೌಲತ್ ಖಾನನ ಶರಣಾಗತಿಯನ್ನು ಪಡೆದನು. ಅನಂತರ ಇಬ್ರಾಹಿಂಲೋದಿಯನ್ನು ಎದುರಿಸಲು ಪಂಜಾಬಿನಿಂದ ಪಾಣಿಪತ್ ರಣಾಂಗಣಕ್ಕೆ ಸೈನ್ಯಸಮೇತ ಹೊರಟನು.

ಪ್ರಧಾನ ಘಟನೆಗಳು : ಬಾಬರನ ಸೈನ್ಯವು ದೆಹಲಿಯತ್ತ ಮುನ್ನುಗ್ಗಿದಂತೆ, ಇಬ್ರಾಹಿಂಲೂದಿಯು ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡು ಮುನ್ನಡೆದನು. ಬಾಬರನು ತನ್ನ ಜೀವನವೃತ್ತಾಂತದಲ್ಲಿ ತಾನು 12000 ಸೈನಿಕರಿಂದ ಪಾಣಿಪತ್ ಯುದ್ಧರಂಗದಲ್ಲಿ ಇಬ್ರಾಹಿಂಲೂದಿಯ ಒಂದು ಲಕ್ಷ ಸೈನಿಕರಿಂದ ಮತ್ತು ಒಂದು ಸಾವಿರ ಆನೆಗಳಿಂದ ಕೂಡಿದ್ದ ಸೈನ್ಯವನ್ನು ಸೋಲಿಸಿದನೆಂದು ಹೇಳಿಕೊಂಡಿದ್ದಾನೆ. ಡಾ.ಎಲ್. ಶ್ರೀವಾಸ್ತವ ಅವರು ಬಾಬರನ ಸೈನ್ಯ ಸುಮಾರು 25000, ಇದ್ದಿರಬಹುದೆಂದು ಊಹಿಸಿದ್ದಾರೆ. ಬಾಬರನ ಮತ್ತು ಇಬ್ರಾಹಿಂಬೂದಿಯ ಸೈನ್ಯಗಳು ಐತಿಹಾಸಿಕ ಯುದ್ಧಭೂಮಿಯಾದ ಪಾಣಿಪತ್‌ ನಲ್ಲಿ ಕ್ರಿ.ಶ. 1526ರ ಏ. 21 ರಂದು ಸಂಧಿಸಿದವು. ಈ ಎರಡು ಸೇನೆಗಳ ನಡುವೆ ನಡೆದ ಕದನವೇ ಮೊದಲನೇ ಪಾಣಿಪತ್ ಕದನ. ಇದೊಂದು ಭಾರತದ ಇತಿಹಾಸದ ಐತಿಹಾಸಿಕ ಮತ್ತು ನಿರ್ಣಾಯಕ ಕದನ.

ಈ ಕದನ ಬೆಳಗಿನ 9 ರಿಂದ ಮಧ್ಯಾಹ್ನದವರೆಗೆ ನಡೆಯಿತು. ಬಾಬರನು ತನ್ನ ಅಪ್ರತಿಮ ಧೈರ್ಯ, ಶೌರ್ಯ, ಯುದ್ಧ ನೈಪುಣ್ಯ, ಉತ್ತಮ ದಂಡನಾಯಕತ್ವ, ಫಿರಂಗಿದಳದ ಚಾಣಾಕ್ಷ ಬಳಕೆಯಿಂದಾಗಿ ಲೂದಿಸುಲ್ತಾನನ ವಿರುದ್ಧ ನಿರ್ಣಾಯಕ ವಿಜಯ ಪಡೆದನು. ಇಬ್ರಾಹಿಂಲೋದಿಯು ವೀರಾವೇಶದಿಂದ ಹೋರಾಡಿ ಯುದ್ಧರಂಗದಲ್ಲಿಯೇ ಮಡಿದನು. ಈತನೊಂದಿಗೆ 15 ರಿಂದ 16 ಸಾವಿರ ಸೈನಿಕರು ಸಾವನ್ನಪ್ಪಿದರು. ಬಾಬರನಿಗೆ ವಿಜಯಲಕ್ಷ್ಮಿ ಒಲಿದಳು. ಅಸಂಖ್ಯಾತ ಆನೆಗಳು ಮತ್ತು ಅಪಾರ ಸಂಪತ್ತಿನ ಜೊತೆಗೆ ದೆಹಲಿ ಮತ್ತು ಆಗ್ರಾ ನಗರಗಳು ಬಾಬರನ ವಶವಾದವು. ಈ ಕದನ ಭಾರತದ ಇತಿಹಾಸದಲ್ಲಿ ನಿರ್ಣಾಯಕ ಘಟನೆಯಾಯಿತು.

ಪರಿಣಾಮಗಳು : ಪ್ರಥಮ ಪಾಣೀಪತ್ ಕದನವು ಭಾರತದ ಇತಿಹಾಸದಲ್ಲಿ ಸಂಭವಿಸಿದ ಕದನಗಳಲ್ಲೇ ಅತ್ಯಂತ ಪ್ರಮುಖವಾದುದು. ಇದರ ಪರಿಣಾಮಗಳು ಈ ಕೆಳಗಿನಂತಿವೆ.

  1. ಇಬ್ರಾಹಿಲೋದಿ ಮತ್ತು ಬಾಬರನ ನಿರ್ಣಯಕ ಯುದ್ಧವಾದ ಈ ಕದನದಲ್ಲಿ ಲೋದಿ ಸೈನಿಕ ಶಕ್ತಿಯು ಸಂಪೂರ್ಣವಾಗಿ ನಾಶವಾಯಿತಲ್ಲದೆ ದೆಹಲಿ ಸಾಮ್ರಾಜ್ಯ ಹೇಳ ಹೆಸರಿಲ್ಲದಂತೆ ನಾಶವಾಯಿತು.
  2. ಬೆಹಲಿ ದೊರೆ ಇಬ್ರಾಹಿಂದೋಡಿ ರಣರಂಗದಲ್ಲಿ ಸಾವನ್ನಪ್ಪಿದನು.

3.ದೆಹಲಿ ಸಾಮ್ರಾಜ್ಯವು ಮೊಗಲ್ ದೊರೆ ಬಾಬರನ ವಶವಾಯಿತು.

  1. ಯುದ್ಧಾನಂತರ ಬಾಬರನ ಕೈಗೆ ಅಪಾರ ಸಂಪತ್ತು ದೊರಕಿತು. ಈ ಬಹುದೊಡ್ಡ ಪ್ರಮಾಣದ ಸಂಪತ್ತನ್ನು ಬಾಬರನು ತನ್ನ ಸಂಬಂಧಿಕರಿಗೆ ಮತ್ತು ಅಧಿಕಾರಿಗಳಿಗೆ ಹಂಚಿದನು.
  2. ಬಾಬರನು ಪವಿತ್ರ ಸ್ಥಳಗಳಾದ ಮೆಕ್ಕಾ ಮತ್ತು ಮದೀನಾಗಳಿಗೂ ಕಾಣಿಕೆ ಸಲ್ಲಿಸಿದನು.
  3. ಒಟ್ಟಿನಲ್ಲಿ ಈ ಕದನ ದೆಹಲಿ ಸುಲ್ತಾನರ ಸಾಮ್ರಾಜ್ಯವನ್ನು ನಾಶಗೊಳಿಸಿ, ಮೊಗಲ್ ಸಾಮ್ರಾಜ್ಯದ ಅಡಿಗಲ್ಲನ್ನು ಹಾಕಿತು.

ಬಾಬರನ ವಿಜಯಕ್ಕೆ ಕಾರಣಗಳು

  1. ಉನ್ನತ ಮಟ್ಟದ ಸೇನಾಧಿಪತ್ಯ ಮತ್ತು ಹೆಚ್ಚಿನ ಯುದ್ಧ ತಂತ್ರ,
  2. ತರಬೇತಿ ಹೊಂದಿದ ಮತ್ತು ಶಿಸ್ತಿನ ಮೊಗಲ್ ಸೈತ್ಯ.
  3. ಬಲಾಡ್ಯವಾದ ಫಿರಂಗಿ ಪಡೆ
  4. ಭಾರತೀಯರಲ್ಲಿದ್ದ ಅನೈಕ್ಯತೆ
  5. ಇಬ್ರಾಹಿಂ ಲೂದಿಯ ಅಸಾಮರ್ಥ್ಯತೆ ಮತ್ತು ಆತನ ಸೈನ್ಯದಲ್ಲಿದ್ದ ಅನೈಕ್ಯತೆ.

ಕಣ್ವ ಕಾಳಗ (1527 ಮಾರ್ಚ್ 16)

ಪಾಣಿಪತ್ ಕದನದ ವಿಜಯದಿಂದ ಬಾಬರ್ ಉತ್ತರ ಭಾರತದಲ್ಲಿ ಸಂಪೂರ್ಣವಾಗಿ ತನ್ನ ಯಜಮಾನಿಕೆಯನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಈ ಕದನಕ್ಕಿಂತಲೂ ಭೀಕರವಾದ ಮತ್ತೊಂದು ಕದನದಲ್ಲಿ ಅವನು ತೊಡಗಬೇಕಾಯಿತು. ಇದೇ ಕಣ್ವ ಕದನ.

ಬಾಬರ್ ಭಾರತದಲ್ಲಿ ಇಬ್ರಾಹಿಂ ಲೂದಿಗಿಂತ ಪ್ರಬಲ ಶತ್ರುಗಳನ್ನು ಎದುರಿಸಬೇಕಾಯಿತು. ಇಂತಹ ಶತ್ರುಗಳಲ್ಲಿ ಮೇವಾಡದ ರಾಣಾ ಸಂಗ್ರಾಮ ಸಿಂಹ ಅಥವಾ ರಾಣಾ ಸಂಗ ಪ್ರಮುಖವಾಗಿದ್ದನು. ರಾಣಾ ಸಂಗನನ್ನು ರಜಪೂತ ಮುಖಂಡರೆಲ್ಲಾ ಒಪ್ಪಿಕೊಂಡಿದ್ದರು. ಈತ ಮಹತ್ವಾಕಾಂಕ್ಷಿಯಾಗಿದ್ದು, ದೆಹಲಿಯ ಸಿಂಹಾಸನದ ಮೇಲೆ ಕಣ್ಣಿಟ್ಟಿದ್ದನು.

ತೈಮೂರನಂತೆ ಬಾಬರನೂ ಸಹ ಭಾರತದ ಸಂಪತ್ತನ್ನು ಲೂಟಿ ಮಾಡಿ ಹಿಂದಿರುಗುವನೆಂದು ಭಾವಿಸಿದ್ದ. ಆದರೆ ಬಾಬರನು ದೆಹಲಿಯಲ್ಲಿ ನೆಲೆಸಲು ನಿರ್ಧರಿಸಿದ್ದರಿಂದ ರಾಣಾನು ಆತನ ವಿರುದ್ಧ ಹೋರಾಟಕ್ಕೆ ನಿಂತ. ಮೊಗಲರ ವಿರುದ್ಧ ಹೋರಾಡಲು ಹಲವು ರಜಪೂತ ನಾಯಕರು ರಾಣಾ ಸಂಗನ ನೇತೃತ್ವದಲ್ಲಿ ಒಂದಾದರು. ಇಬ್ರಾಹಿಂ ಲೂದಿಯ ಸಹೋದರ ಮಹಮದ್ ಲೂದಿ ಮತ್ತು ಹಸನ್ ಖಾನ್ ಮೇವಾತಿಯೂ ಸಹ ರಾಣಾನೊಂದಿಗೆ ಕೈಜೋಡಿಸಿದ. ರಾಣಾನು ಬಾಬರನಂತಹ ಬಲಿಷ್ಠನನ್ನು ಹೊರ ಹಾಕಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ. ರಾಣಾನ ಸೈನಿಕರು ಯುದ್ಧರಂಗದಲ್ಲಿ ಎಂತಹ ಪ್ರಬಲ ಶತ್ರುಗಳನ್ನಾದರು ಎದುರಿಸಿ ಹೋರಾಡಿ ದೇಶದ ಗೌರವ ಮತ್ತು ಆತ್ಮಗೌರವಗಳನ್ನು ಕಾಪಾಡಿಕೊಳ್ಳುವ ಧೃಡ ನಿರ್ಧಾರದಿಂದ ಬಾಬರನ ವಿರುದ್ಧ ದಂಡೆತ್ತಿ ನಡೆದರು. ರಾಣಾಸಂಗನು ಅಜೇಯನೆಂಬ ಖ್ಯಾತಿಯನ್ನು ಗಳಿಸಿದ್ದನು. ತತ್ಪರಿಣಾಮವಾಗಿ ಬಾಬರನ ಸೈನಿಕರು ಭಯಭೀತರಾದರು. ಕಾಬೂಲ್‌ನಿಂದ ಬಂದ ಹೆಚ್ಚಿನ ಸೇನೆಯಿಂದ ಬಾಬರನ ಸೈನಿಕರಲ್ಲಿ ಉತ್ಸಾಹ ಉಂಟಾಯಿತು. ಆದರೆ ಜ್ಯೋತಿಷ್ಯಕಾರರ ಮಾತಿನಂತೆ ಬಾಬರನಿಗೆ ಸೋಲುಂಟಾಗುವುದೆಂಬ ವಾರ್ತೆ ಹಬ್ಬಿತು. ತತ್ಪರಿಣಾಮವಾಗಿ ಬಾಬರನ ಸೈನಿಕರು ಮತ್ತಷ್ಟು ಭಯಭ್ರಾಂತಿಗೆ ಗುರಿಯಾದರು. ಬಾಬರ್ ಮಾತ್ರ ಗಾಬರಿಯಾಗದೆ ಸನ್ನಿವೇಶವನ್ನು ಅಸಾಧಾರಣ ಮಾನಸಿಕ ತಾಳ್ಮೆಯಿಂದ ಎದುರಿಸಿದ. ʻಅಲ್ಲಾ’ ನ ಹೆಸರಿನಲ್ಲಿ ತನ್ನ ಸೈನಿಕರಲ್ಲಿ ಮಾನಸಿಕ ಸ್ಥೆರ್ಯವನ್ನು ತುಂಬಿದ.

ನಾಟಕೀಯವಾಗಿ ಪಾನಪಾತ್ರೆಗಳನ್ನು ಒಡೆದು ಹಾಕಿ, ತನ್ನಲ್ಲಿದ್ದ ಮದ್ಯವನ್ನೆಲ್ಲಾ ಚಲ್ಲಿದನು. ತನ್ನ ಹಿಂದಿನ ತಪ್ಪುಗಳಿಗೆಲ್ಲಾ ಪಶ್ಚಾತ್ತಾಪ ವ್ಯಕ್ತಪಡಿಸಿ ತಾನು ಮುಂದೆಂದೂ ಮದ್ಯಪಾನ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು. ಕುಡಿಯುವ ಚಿನ್ನದ ಮತ್ತು ಬೆಳ್ಳಿಯ ಪಾತ್ರೆಗಳನ್ನು ಚೂರುಮಾಡಿ ಬಡವರಿಗೆ ಮತ್ತು ಮುಸ್ಲಿಂ ಸಂತರಿಗೆ ಹಂಚಿದನು. ರಾಣಾ ಮತ್ತು ರಜಪೂತರ ಮೇಲೆ ಜಿಹಾನ್ ಅಥವಾ ಧರ್ಮಯುದ್ಧ ಹಾಡುವುದಾಗಿ ತಿಳಿಸಿದ.

ಮೊಗಲರು ಮತ್ತು ರಜಪೂತರ ನಡುವೆ ಭೀಕರ ಹೋರಾಟ

ಕ್ರಿ.ಶ. 1527ರ ಮಾ. 16 ರಂದು ಕಣ್ವ ಎಂಬಲ್ಲಿ ಸಂಭವಿಸಿತು. ಬಾಬರನು ಪಾಣಿಪತ್ ಕದನದಲ್ಲಿ ಉಪಯೋಗಿಸಿದ ʻಯುದ್ಧತಂತ್ರಗಳನ್ನೇ ಈ ಕದನದಲ್ಲಿಯೂ ಅನುಸರಿಸಿದನು. ರಜಪೂತರು ರಾಣಾಸಂಗನ ನಾಯಕತ್ವದಲ್ಲಿ ಜೀವದ ಹಂಗನ್ನು ತೊರೆದು ವೀರಾವೇಶದಿಂದ ಹೋರಾಡಿದರು. ಆದರೆ ಬಾಬರನು ತನ್ನ ಉತ್ತಮ ದಂಡನಾಯಕತ್ವ, ಸೈನಿಕ ಚಾಕಚಕ್ಯತೆ ಮತ್ತು ಪ್ರಬಲ ಫಿರಂಗಿ ಪಡೆಯ ನೆರವಿನಿಂದ ಜಯಗಳಿಸುವಲ್ಲಿ ಯಶಸ್ವಿಯಾದನು. ರಜಪೂತರಿಗೆ ಸಂಪೂರ್ಣ ಸೋಲುಂಟಾಯಿತು. ತೀವ್ರವಾಗಿ ಗಾಯಗೊಂಡಿದ್ದ ರಾಣಾಸಂಗನನ್ನು ಯುದ್ಧ ರಂಗದಿಂದ, ಆತನ ಸೈನಿಕರು ಸಾಗಿಸಿದರು. ಹತ್ತು ಗಂಟೆಗಳ ಕಾಲ ಜರುಗಿದ ಕಣ್ವ ಕದನದಲ್ಲಿ ಜಯಶೀಲನಾದ ಬಾಬರ್ ರಾಣಾನ ಶಿಬಿರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡನು.

ಬಾಬರನ ಇತರ ಆಕ್ರಮಣಗಳು

ಚಾಂದೇರಿ ಪತನ : ಕ್ರಿ.ಶ. 1528ರ ಜನವರಿ ತಿಂಗಳಲ್ಲಿ ಬಾಬರನು ಚಾಂದೇರಿ ಕೋಟೆಯನ್ನು ಮುತ್ತಿದನು. ಚಾವೇರಿ ರಾಜ್ಯ ಮೇದಿನರಾಯ್ ಎಂಬ ಸುಪ್ರಸಿದ್ದ ರಜಪೂತ ದೊರೆಯ ಅಧಿಪತ್ಯಕ್ಕೆ ಒಳಪಟ್ಟಿತ್ತು. ಬಾಬರನು ಚಾಂದೇರಿ ಕೋಟೆಯನ್ನು ಮುತ್ತಿಗೆ ಹಾಕಿದ್ದನ್ನು ಕಂಡು, ಸೋಲಿನಿಂದ ಪಾರಾಗುವುದು ಅಸಾಧ್ಯವೆಂದು ಅರಿತ ರಜಪೂತ ಮಹಿಳೆಯರು ಜೌಹಾರ್ ಪದ್ಧತಿಯನ್ನು ಅನುಸರಿಸಿ ಅಗ್ನಿಗೆ ಆಹುತಿಯಾದರು. ಕೋಟೆಯಲ್ಲಿದ್ದ ಎಲ್ಲ ಸೈನಿಕರು ಹತರಾದರು. ಕ್ರಿ.ಶ. 1528ರ ಜನವರಿ 29ರಂದು ಬಾಬರನು ಚಾಂದೇರಿ ಕೋಟೆಯನ್ನು ತನ್ನ ಹಿಡಿತಕ್ಕೆ ಒಳಪಡಿಸಿಕೊಂಡನು. ಅಲ್ಲದೆ ಬಾಬರನಿಗೆ ಇಲ್ಲಿ ಅಗಾಧ ಪ್ರಮಾಣದ ಸಂಪತ್ತು ಕೈಸೇರಿತು.

ಗೋಗ್ರ ಕದನ ಇಬ್ರಾಹಿಂ ಬೋದಿಯ ಸಹೋದರನಾದ ಮಹಮದ್ ಲೋದಿ ಬಿಹಾರದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ್ದಲ್ಲದೆ ಒಂದು ಲಕ್ಷ ಸೈನ್ಯವನ್ನು ಸಂಘಟಿಸಿದ್ದನು. ಬಂಗಾಳ ಮತ್ತು ಬಿಹಾರದ ಅಫ್‌ಘಾನರ ತೊಂದರೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅವರ ಮೇಲೆ ಯುದ್ಧಮಾಡುವುದೊಂದೇ ಉತ್ತಮದಾರಿಯೆಂದು ಬಾಬರ್ ನಿರ್ಧರಿಸಿದ. ಬಾಬರ್ ಕ್ರಿ.ಶ. 1529ರಲ್ಲಿ ಆಗ್ರಾವನ್ನು ಬಿಟ್ಟು ಆಫ್‌ಘನ್ನರನ್ನು ಎದುರಿಸಲು ಹೊರಟ ಕ್ರಿ.ಶ. 1529 ಮೇ 6ರಂದು ಗಂಗಾ ಮತ್ತು ಅದರ ಉಪನದಿಯಾದ ಗೋಗ್ರಾ ಇವುಗಳ ಸಂಗಮ ಸ್ಥಳದಲ್ಲಿ (ಪಾಟ್ನಾದ ಮೇಲ್ಗಡೆ) ಬಾಬರ್ ಮತ್ತು ಅಫಘಾನರ ನಡುವೆ ಕಾಳಿಗೆ ಸಂಭವಿಸಿತು. ಇದರಲ್ಲಿ ಅಫಘಾನ್ನರು ಸಂಪೂರ್ಣವಾಗಿ ಅಪಜಯ ಹೊಂದಿದರು. ಲೋದಿಗಳ ಆಸೆ ಕನಸಾಯಿತು. ಹಲವು ಪ್ರಮುಖ ಅಫಘಾನ ಸರದಾರರು ಬಾಬರನಿಗೆ ಶರಣಾದರು. ಈ ವಿಜಯದ ನಂತರ ಬಾಬು ಬಿಹಾರದ ಮೇಲೆ ತನ್ನ ಪ್ರಭುತ್ವ ಸ್ಥಾಪಿಸಿದನು. ಈ ರೀತಿ ಬಾಬರನು ಪಡೆದ ಎಲ್ಲಾ ವಿಜಯಗಳು ಆತನು ಭಾರತದಲ್ಲಿ ಮೊಗಲ್ ಸಂತತಿ ಮತ್ತು ಸಾಮ್ರಾಜ್ಯಗಳ ಸ್ಥಾಪನೆಗೆ ಅಡಿಪಾಯ ಹಾಕಿದವು.

ಬಾಬರನ ಅಂತಿಮ ದಿನಗಳು : ಬಾಬರ್ ತಾನು ಶ್ರಮಪಟ್ಟು ಸಾಧಿಸಿದ್ದ ವಿಜಯಗಳ ಪ್ರತಿಫಲವನ್ನು ಅನುಭವಿಸಲು ಬಹಳ ಕಾಲ ಜೀವಿಸಲಿಲ್ಲ. ಕ್ರಿ.ಶ. 1530 ಡಿ. 26 ರಂದು ಆಗ್ರಾದಲ್ಲಿ ಬಾಬರನು ಮರಣಹೊಂದಿದನು. ಈತನ ಮರಣದ ಬಗ್ಗೆ ಹಲವು ಅಭಿಪ್ರಾಯಗಳಿವೆ. ಆದರೆ ಪ್ರೊ. ಶ್ರೀರಾಮ ಶರ್ಮರು ಬಾಬರನ ಮರಣದ ಬಗ್ಗೆ ಅಬುಲ್ ಭಜಲ್ ಕಟ್ಟಿರುವ ಕಾಲ್ಪನಿಕ ಕಥೆಯನ್ನು ನಂಬಲು ಯಾವುದೇ ಆಧಾರವಿಲ್ಲವೆಂದು ತಿಳಿಸಿದ್ದಾರೆ. ಬಾಬರನ ಮೃತದೇಹವನ್ನು ಪ್ರಾರಂಭದಲ್ಲಿ ಆಗ್ರಾದ ಆರಾಮಬಾಗ್‌ನಲ್ಲಿ ಸಮಾಧಿ ಮಾಡಿದರು. ತದನಂತರ ಅದನ್ನು ಕಾಬೂಲಿಗೆ ತರಲಾಯಿತು.

ಬಾಬರ್‌ನ ವ್ಯಕ್ತಿತ್ವ : ಬಾಬರ್‌ನು ಮಧ್ಯಕಾಲೀನ ಏಷಿಯಾದ ಸರ್ವಶ್ರೇಷ್ಠ ದೊರೆಗಳಲ್ಲೊಬ್ಬನೆಂದು ಸಮಕಾಲೀನ ಹಾಗೂ ಆಧುನಿಕ ಇತಿಹಾಸಕಾರರೆಲ್ಲರೂ ಒಪ್ಪಿಕೊಂಡಿದ್ದಾರೆ. ಈತನ ಸಹೋದರ ಮಿರ್ಜಹೈದರನು ವಿವರಿಸುವಂತೆ “ಶೌರ್ಯ ಮತ್ತು ಮಾನವೀಯತೆಯೂ ಸೇರಿದಂತೆ ಹಲವಾರು ಸದ್ಗುಣಗಳು ಮತ್ತು ಶ್ರೇಷ್ಠತೆಗಳು ಇವನಲ್ಲಿದ್ದವು”. ಗುಲ್‌ಬದನ್ ಬೇಗಂ ತನ್ನ “ಹುಮಾಯೂನ್‌ನಾಮ” ದಲ್ಲಿ ಇಂತಹ ಭಾವನೆಗಳನ್ನೆ ವ್ಯಕ್ತಪಡಿಸಿದ್ದಾಳೆ. ಡಾ।। ವಿ.ಎ. ಸ್ಮಿತ್ ಬಾಬರ್‌ ನನ್ನು ಆ ಯುಗದ ಅತ್ಯಂತ ಶ್ರೇಷ್ಠ ರಾಜಕುಮಾರನಾಗಿದ್ದ ಎಂದಿದ್ದಾರೆ. ಹಾವೆಲ್ಲರ ಪ್ರಕಾರ ಈತ ಇಸ್ಲಾಮಿನ ಇತಿಹಾಸದ ಅತ್ಯಂತ ಆಕರ್ಷಕ ವ್ಯಕ್ತಿಗಳಲ್ಲಿ ಒಬ್ಬನು.

ಅಕ್ಬರನ ಸಾಧನೆಗಳು

ಅಕ್ಬರನ ಸಾಧನೆಗಳು

ಮೊಘಲ್ ಸಾಮ್ರಾಜ್ಯದ ಬಲಿಷ್ಠ ಚಕ್ರವರ್ತಿಯಾದ ಅಕ್ಬರ್ ಭಾರತದಲ್ಲಿ ಶಕ್ತಿಶಾಲಿ ಮತ್ತು ಸ್ಥಿರ ಆಡಳಿತವನ್ನು ನಿರ್ಮಿಸಿದನು. ಯುದ್ಧಗಳಲ್ಲಿ ಜಯಗಳಿಸುವ ಮೂಲಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಜೊತೆಗೆ ಆಡಳಿತ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ಮಾಡಿ ಪ್ರಜಾಪ್ರಿಯ ಆಡಳಿತಗಾರನಾಗಿದ್ದನು. ಧಾರ್ಮಿಕ ಸಹಿಷ್ಣುತೆ ಮತ್ತು ಸಾಂಸ್ಕೃತಿಕ ಪ್ರೋತ್ಸಾಹದ ಮೂಲಕ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದನು.

ಅಕ್ಬರನ ದಂಡಯಾತ್ರೆಗಳು: ಮೊಘಲ್ ಸಾಮ್ರಾಜ್ಯವನ್ನು ವಿಸ್ತರಿಸುವುದು

1. ಪಾಣಿಪತ್ ಕದನ (1556): ಹುಮಾಯೂನ್‌ನ ಮರಣದ ನಂತರ, ಆದಿಲ್ ಷಾ ಸೂರಿಯ ಸೇನಾಪತಿಯಾದ ಹೇಮು ಆಗ್ರಾ ಮತ್ತು ದೆಹಲಿಯ ನಿಯಂತ್ರಣವನ್ನು ವಶಪಡಿಸಿಕೊಂಡನು, ʻವಿಕ್ರಮಾದಿತ್ಯ’ ಎಂಬ ಶೀರ್ಷಿಕೆಯಡಿಯಲ್ಲಿ ತನ್ನನ್ನು ತಾನು ಆಡಳಿತಗಾರನೆಂದು ಘೋಷಿಸಿಕೊಂಡನು. ಬೈರಾಮ್ ಖಾನ್ ಅವರ ಮಾರ್ಗದರ್ಶನದಲ್ಲಿ, ಅಕ್ಬರ್ ಸೈನ್ಯವನ್ನು ಮುನ್ನಡೆಸಿದರು ಮತ್ತು ಎರಡನೇ ಪಾಣಿಪತ್ ಕದನದಲ್ಲಿ ಹೇಮುವನ್ನು ನಿರ್ಣಾಯಕವಾಗಿ ಸೋಲಿಸಿದರು, ದೆಹಲಿ ಮತ್ತು ಆಗ್ರಾವನ್ನು ಮರಳಿ ಪಡೆದರು.

2. ಚುನರಕೋಟೆ ವಿಜಯ (1561): ಚುನರಕೋಟೆಯನ್ನು ವಶಪಡಿಸಿಕೊಳ್ಳಲು ಅಕ್ಬರ್ ತನ್ನ ಸೇನಾಪತಿ ಅಸಫ್ ಖಾನ್‌ನನ್ನು ಕಳುಹಿಸಿದನು. ಅಸಫ್ ಖಾನ್ ಜಮಾನನನ್ನು ಸೋಲಿಸಿದನು, ಮೊಘಲ್ ಸಾಮ್ರಾಜ್ಯಕ್ಕೆ ಕೋಟೆಯನ್ನು ಭದ್ರಪಡಿಸಿದನು.

3. ಗೊಂಡ್ವಾನ ಅಭಿಯಾನ (1564): ಅಕ್ಬರ್ ಗೊಂಡ್ವಾನದ ಮೇಲೆ ದಾಳಿ ಮಾಡಿದನು ಮತ್ತು ಅದರ ರಾಣಿ ದುರ್ಗಾವತಿಯನ್ನು ಸೋಲಿಸಿದನು, ಈ ಪ್ರದೇಶವನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು.

4. ರಜಪೂತ ಮೈತ್ರಿಗಳು (1562): ಅಕ್ಬರ್ ತನ್ನ ಅಜ್ಜಿಯ ಸಮಾಧಿಯ ತೀರ್ಥಯಾತ್ರೆಯಲ್ಲಿ ಅಂಬರ್ ನ ರಜಪೂತ ರಾಜ ಬಿಹಾರಿಮಲ್ ನನ್ನು ಭೇಟಿಯಾದನು. ಬಿಹಾರಿಮಲ್ ಮೊಘಲ್ ಅಧಿಕಾರಕ್ಕೆ ಒಪ್ಪಿಸಿದರು ಮತ್ತು ಅವರ ಮಗಳು ಜೋಧಾಬಾಯಿ ಅಕ್ಬರ್‌ನನ್ನು ವಿವಾಹವಾದರು, ನಂತರ ಜಹಾಂಗೀರ್‌ಗೆ ಜನ್ಮ ನೀಡಿದರು, ಹೀಗೆ ರಜಪೂತರೊಂದಿಗೆ ಪ್ರಮುಖ ಮೈತ್ರಿಯನ್ನು ಭದ್ರಪಡಿಸಿದರು.

5. ಮೇವಾರ್ ಅಭಿಯಾನ (1567-1576): ಹಲ್ದಿಘಾಟಿ ಕದನದಲ್ಲಿ (1576) ರಾಣಾ ಪ್ರತಾಪ್ ಸೇರಿದಂತೆ ಉದಯ್ ಸಿಂಗ್ ಮತ್ತು ಅವನ ಉತ್ತರಾಧಿಕಾರಿಗಳನ್ನು ಸೋಲಿಸಿದ ಅಕ್ಬರ್ ಮೇವಾರ್ ವಿರುದ್ಧ ದಂಡಯಾತ್ರೆಯನ್ನು ಪ್ರಾರಂಭಿಸಿದನು.

6. ರಣಥಂಬೋರ್ ಮುತ್ತಿಗೆ (1569): ಅಕ್ಬರ್ ರಣಥಂಬೋರ್ ಮೇಲೆ ದಾಳಿ ಮಾಡಿ, ಅದರ ರಾಜ ಸುರ್ಜನ್ ರಾಯನನ್ನು ಸೋಲಿಸಿದನು, ಅವನು ಅಂತಿಮವಾಗಿ ಮೊಘಲ್ ಪ್ರಾಬಲ್ಯವನ್ನು ಒಪ್ಪಿಕೊಂಡನು.

7. ಕಾಬೂಲ್ ಅಭಿಯಾನ (1581): ಅಕ್ಬರ್ ಕಾಬೂಲ್ ಅನ್ನು ಆಕ್ರಮಿಸಿದನು ಮತ್ತು ಮಿರ್ಜಾ ಮುಹಮ್ಮದ್ ಹಕೀಮ್ ಅನ್ನು ಸೋಲಿಸಿದನು, ಈ ಪ್ರದೇಶದ ಮೇಲೆ ತನ್ನ ನಿಯಂತ್ರಣವನ್ನು ಬಲಪಡಿಸಿದನು.

8. ಕಾಶ್ಮೀರದ ವಿಜಯ (1586): ಭಗವಾನ್ ದಾಸರ ನೇತೃತ್ವದಲ್ಲಿ ಮೊಘಲ್ ಪಡೆಗಳು ಯೂಸುಪ್ ಖಾನ್ ಅವರನ್ನು ಸೋಲಿಸಿದರು, ಕಾಶ್ಮೀರವನ್ನು ಮೊಘಲ್ ಆಳ್ವಿಕೆಗೆ ತಂದರು.

9. ಸಿಂಧ್ ಅಭಿಯಾನ (1591): ಸಿಂಧ್‌ನ ರಾಜ ಮಿರ್ಜಾಜಾನಿಬೇಗ್ ಮೊಘಲ್ ಪಡೆಗಳಿಂದ ಸೋಲಿಸಲ್ಪಟ್ಟನು ಮತ್ತು ಅಕ್ಬರನ ಆಳ್ವಿಕೆಯನ್ನು ಒಪ್ಪಿಕೊಂಡನು.

10. ಒರಿಸ್ಸಾ ಅಭಿಯಾನ (1592): ಮೊಘಲ್ ಜನರಲ್ ರಾಜಮಾನಸಿಂಗ್ ಒರಿಸ್ಸಾದ ದೊರೆ ನಾಸಿರ್ ಖಾನ್ ಅವರನ್ನು ಸೋಲಿಸಿ, ಪ್ರದೇಶವನ್ನು ಸಾಮ್ರಾಜ್ಯಕ್ಕೆ ಸೇರಿಸಿದರು.

11. ಕಂದಹಾರ್ ಸೇರ್ಪಡೆ: ಅಕ್ಬರ್ ಕಂದಹಾರ್ ಮೇಲೆ ಯುದ್ಧ ಘೋಷಿಸಿದನು, ಸ್ಥಳೀಯ ಆಡಳಿತಗಾರರನ್ನು ಸೋಲಿಸಿದನು ಮತ್ತು ಪ್ರದೇಶವನ್ನು ಮೊಘಲ್ ಸಾಮ್ರಾಜ್ಯಕ್ಕೆ ಸೇರಿಸಿದನು.

12. ಅಹ್ಮದ್‌ನಗರದ ಸ್ವಾಧೀನ: ಅಕ್ಬರ್‌ನ ಶಕ್ತಿಗೆ ಹೆದರಿ ಅಹ್ಮದ್‌ನಗರದ ರಾಣಿ ಚಾಂದಬೀಬಿ ಮೊಘಲ್ ಆಳ್ವಿಕೆಯನ್ನು ಒಪ್ಪಿಕೊಂಡಳು, ಸಾಮ್ರಾಜ್ಯದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದಳು.

ಅಕ್ಬರನ ಆಡಳಿತ ಸುಧಾರಣೆಗಳು

1. ಕೇಂದ್ರ ಸರ್ಕಾರ: ಅಕ್ಬರ್ ಪ್ರಬಲ ಮತ್ತು ದಕ್ಷ ಆಡಳಿತಗಾರರಾಗಿದ್ದರು, ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿದರು. ಸರ್ವಾಧಿಕಾರಿಯಾಗಿದ್ದಾಗ, ಅವರು ರಾಜಕೀಯ, ನ್ಯಾಯ ಮತ್ತು ಕಲ್ಯಾಣದ ಮೇಲೆ ಕೇಂದ್ರೀಕರಿಸಿದ ನ್ಯಾಯಯುತ ನಾಯಕರಾಗಿದ್ದರು. ವಜೀರ್ (ಪ್ರಧಾನಿ), ದಿವಾನ್-ಇ-ಆಲಂ (ಖಜಾಂಚಿ), ಮಿರ್ಬಕ್ಷಿ (ಪೇಮಾಸ್ಟರ್ ಜನರಲ್), ಮತ್ತು ಖಾಜಿ-ಉಲ್-ಖಾಜತ್ (ಮುಖ್ಯ ನ್ಯಾಯಾಧೀಶರು) ಸೇರಿದಂತೆ ಮಂತ್ರಿಗಳ ಮಂಡಳಿಯು ಅಕ್ಬರ್ ಅವರನ್ನು ಬೆಂಬಲಿಸಿತು.

2. ಪ್ರಾಂತೀಯ ಆಡಳಿತ: ಆಡಳಿತಾತ್ಮಕ ಸುಲಭಕ್ಕಾಗಿ, ಅಕ್ಬರ್ ತನ್ನ ಸಾಮ್ರಾಜ್ಯವನ್ನು 12 ಪ್ರಾಂತ್ಯಗಳಾಗಿ ವಿಂಗಡಿಸಿದನು, ಪ್ರತಿಯೊಂದೂ ʻಸುಬೇದಾರ’ನಿಂದ ಆಡಳಿತ ನಡೆಸಲ್ಪಡುತ್ತದೆ. ಪ್ರಾಂತ್ಯಗಳನ್ನು ಸರ್ಕಾರಗಳು ಮತ್ತು ಪರಗಣಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದನ್ನು ʻಫೌಜದಾರರು’ ಮತ್ತು ʻಶಿಕ್ದಾರರು’ ನಿರ್ವಹಿಸುತ್ತಾರೆ. ನಗರದ ಆಡಳಿತವನ್ನು ʻಕೊತ್ವಾಲಾ’ ನೋಡಿಕೊಳ್ಳುತ್ತಿದ್ದರು.

3. ಭೂಕಂದಾಯ ನೀತಿ: ಶೇರ್ ಷಾ ನೀತಿಯನ್ನು ಮುಂದುವರೆಸುತ್ತಾ, ಅಕ್ಬರನ ಹಣಕಾಸು ಮಂತ್ರಿ ತೋಡರ್ಮಲ್ ʻಬಂದೋಬಸ್ತ್’ ವ್ಯವಸ್ಥೆಯನ್ನು ಪರಿಚಯಿಸಿದರು. ಫಲವತ್ತತೆ ಮತ್ತು ಉತ್ಪನ್ನಗಳ ಆಧಾರದ ಮೇಲೆ ಭೂಮಿಯನ್ನು ಅಳೆಯಲಾಗುತ್ತದೆ, ವರ್ಗೀಕರಿಸಲಾಯಿತು ಮತ್ತು ತೆರಿಗೆ ವಿಧಿಸಲಾಯಿತು. ರೈತರು ಧಾನ್ಯ ಅಥವಾ ನಗದು ರೂಪದಲ್ಲಿ ತೆರಿಗೆಯನ್ನು ಪಾವತಿಸಿದರು, ಸ್ಥಿರ ಮತ್ತು ಪರಿಣಾಮಕಾರಿ ಆದಾಯ ವ್ಯವಸ್ಥೆಯನ್ನು ಖಾತ್ರಿಪಡಿಸಿಕೊಳ್ಳುತ್ತಾರೆ.

5. ಭೂಮಿ ವರ್ಗೀಕರಣ: ʻಎಲಾಹಿ ಗಜ’ ಅಥವಾ ದೈವಿಕ ಗಜ (33 ಇಂಚು) ಬಳಸಿ ಭೂಮಿಯನ್ನು ಸಮೀಕ್ಷೆ ಮಾಡಲಾಗಿದೆ. ಜಮೀನುಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ: ಪೋಲಾಜ್ (ವಾರ್ಷಿಕವಾಗಿ ಸಾಗುವಳಿ), ಪರೌತಿ (ತಾತ್ಕಾಲಿಕವಾಗಿ ಸಾಗುವಳಿ), ಚಾಚಾರ್ (ಪ್ರತಿ 3-4 ವರ್ಷಗಳಿಗೊಮ್ಮೆ ಸಾಗುವಳಿ), ಮತ್ತು ಬಂಜರು (5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬಳಕೆಯಾಗಿಲ್ಲ).

6. ಮಾನಸಬ್ದಾರಿ ವ್ಯವಸ್ಥೆ: ಅಕ್ಬರ್ ಅವರು ‘ಮಾನಸಬ್ದಾರಿ’ ವ್ಯವಸ್ಥೆಯನ್ನು ಪರಿಚಯಿಸಿದರು, ಅಲ್ಲಿ ಅಧಿಕಾರಿಗಳು ಅವರ ಮಿಲಿಟರಿ ಜವಾಬ್ದಾರಿಗಳ ಆಧಾರದ ಮೇಲೆ ಶ್ರೇಯಾಂಕ ನೀಡಲಾಯಿತು. ಮನ್ಸಬ್ದಾರರು ಸೈನ್ಯ ಮತ್ತು ಕುದುರೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಉನ್ನತ ಶ್ರೇಣಿಯ ಮನ್ಸಬ್ದಾರರು ದೊಡ್ಡ ಪಡೆಗಳಿಗೆ ಆದೇಶಿಸಿದರು ಮತ್ತು ಹೆಚ್ಚಿನ ಸಂಬಳವನ್ನು ಪಡೆದರು.

ಸಾಮಾಜಿಕ ಸುಧಾರಣೆಗಳು: ಪ್ರಗತಿಶೀಲ ಚಕ್ರವರ್ತಿ

1. ಧಾರ್ಮಿಕ ಸಹಿಷ್ಣುತೆ: ಅಕ್ಬರ್ ಅವರು ಹಿಂದೂಗಳ ಬಗೆಗಿನ ತನ್ನ ಅಂತರ್ಗತ ನೀತಿಗಳಿಗೆ ಹೆಸರುವಾಸಿಯಾಗಿದ್ದರು, ಮುಸ್ಲಿಮೇತರರ ಮೇಲಿನ ಜಿಜ್ಯಾ ತೆರಿಗೆಯನ್ನು ರದ್ದುಗೊಳಿಸಿದರು ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಉತ್ತೇಜಿಸಿದರು. ಅವರು ಗೋಹತ್ಯೆಯನ್ನು ನಿಷೇಧಿಸಿದರು, ಸತಿ ಪದ್ಧತಿಯನ್ನು ಖಂಡಿಸಿದರು ಮತ್ತು ಬಾಲ್ಯ ವಿವಾಹವನ್ನು ರದ್ದುಗೊಳಿಸಿದರು.

2. ಸಾಂಸ್ಕೃತಿಕ ಪ್ರೋತ್ಸಾಹ: ಸ್ವತಃ ಅನಕ್ಷರಸ್ಥರಾಗಿದ್ದರೂ, ಅಕ್ಬರ್ ಸಾಹಿತ್ಯವನ್ನು ಹೆಚ್ಚು ಬೆಂಬಲಿಸಿದರು. ಅಬುಲ್ ಫಜಲ್, ತುಳಸಿದಾಸ್ ಮತ್ತು ಬೀರಬಲ್ ಮುಂತಾದ ಕವಿಗಳು ಮತ್ತು ವಿದ್ವಾಂಸರಿಗೆ ಅವರ ಆಸ್ಥಾನವಾಗಿತ್ತು. ಮೊಘಲ್ ಸಾಮ್ರಾಜ್ಯದ ಇತಿಹಾಸವನ್ನು ವಿವರಿಸುವ ʻಅಕ್ಬರ್ ನಾಮಾ’ ಮತ್ತು ʻಐನ್-ಇ-ಅಕ್ಬರಿ’ ನಂತಹ ಕೃತಿಗಳನ್ನು ಅವರ ಆಳ್ವಿಕೆಯಲ್ಲಿ ಬರೆಯಲಾಗಿದೆ.

ಕಲೆ, ವಾಸ್ತುಶಿಲ್ಪ ಮತ್ತು ಸಂಗೀತ: ಒಂದು ಸಾಂಸ್ಕೃತಿಕ ಪುನರುಜ್ಜೀವನ

1. ವಾಸ್ತುಶಿಲ್ಪ: ಅಕ್ಬರ್ ಕಲೆಯ, ವಿಶೇಷವಾಗಿ ವಾಸ್ತುಶಿಲ್ಪದ ಉತ್ಸಾಹಿ ಪೋಷಕರಾಗಿದ್ದರು. ಅವರು ಭವ್ಯವಾದ ಫತೇಪುರ್ ಸಿಕ್ರಿ, ದಿವಾನ್-ಇ-ಆಮ್, ದಿವಾನ್-ಇ-ಖಾಸ್, ಪಂಚಮಹಲ್ ಮತ್ತು ಬುಲಂದ್ ದರ್ವಾಜಾ (ಭಾರತದ ಅತಿ ಎತ್ತರದ ಗೇಟ್‌ವೇ) ಅನ್ನು ನಿರ್ಮಿಸಿದರು.

2. ಸಂಗೀತ: ʻಹಿಂದೂಸ್ತಾನಿ ಸಂಗೀತದ ಪಿತಾಮಹ’ ಎಂದು ಕರೆಯಲ್ಪಡುವ ಪೌರಾಣಿಕ ತಾನ್ಸೇನ್ ಸೇರಿದಂತೆ 36 ಸಂಗೀತಗಾರರಿಂದ ಅಕ್ಬರನ ಆಸ್ಥಾನವನ್ನು ಅಲಂಕರಿಸಲಾಗಿತ್ತು. ಇತರ ಗಮನಾರ್ಹ ಸಂಗೀತಗಾರರಲ್ಲಿ ರಾಮದಾಸ್ ಮತ್ತು ಸೂರ್ ದಾಸ್ ಸೇರಿದ್ದಾರೆ.

ಅಕ್ಬರನ ಆಳ್ವಿಕೆಯು ಮೊಘಲ್ ಇತಿಹಾಸದ ಪರಾಕಾಷ್ಠೆಯಾಗಿದೆ, ಇದು ಮಿಲಿಟರಿ ವಿಜಯಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಭಾರತೀಯ ಉಪಖಂಡದಲ್ಲಿ ಶಾಶ್ವತ ಪರಂಪರೆಯನ್ನು ಬಿಟ್ಟ ಸಾಂಸ್ಕೃತಿಕ ಪ್ರೋತ್ಸಾಹದಿಂದ ಗುರುತಿಸಲ್ಪಟ್ಟಿದೆ. ಅವರ ಒಳಗೊಳ್ಳುವಿಕೆ, ಸಹಿಷ್ಣುತೆ ಮತ್ತು ನಾವೀನ್ಯತೆಯ ನೀತಿಗಳು ವೈವಿಧ್ಯಮಯ ಮತ್ತು ಏಕೀಕೃತ ಸಾಮ್ರಾಜ್ಯವನ್ನು ಬೆಳೆಸಿದವು, ಆಳವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಭಾವವನ್ನು ಬಿಟ್ಟವು.

ಉಪಸಂಹಾರ

ಅಕ್ಬರ್ ಅವರ ಆಳ್ವಿಕೆ ಮೊಘಲ್ ಸಾಮ್ರಾಜ್ಯದ ಅತ್ಯುನ್ನತ ಕಾಲವೆಂದು ಪರಿಗಣಿಸಲಾಗುತ್ತದೆ. ಅವರ ಯುದ್ಧ ವಿಜಯಗಳು, ಆಡಳಿತ ಸುಧಾರಣೆಗಳು ಮತ್ತು ಧಾರ್ಮಿಕ ಸಹಿಷ್ಣುತೆಯ ನೀತಿಗಳು ಸಾಮ್ರಾಜ್ಯವನ್ನು ಬಲಿಷ್ಠಗೊಳಿಸಿತು. ಕಲೆ, ಸಾಹಿತ್ಯ ಮತ್ತು ಸಂಗೀತಕ್ಕೆ ನೀಡಿದ ಪ್ರೋತ್ಸಾಹವು ಭಾರತೀಯ ಸಂಸ್ಕೃತಿಯ ಅಭಿವೃದ್ಧಿಗೆ ಸಹಾಯ ಮಾಡಿತು. ಆದ್ದರಿಂದ ಅಕ್ಬರ್ ಭಾರತೀಯ ಇತಿಹಾಸದಲ್ಲಿ ಮಹಾನ್ ಆಡಳಿತಗಾರನಾಗಿ ನೆನಪಾಗುತ್ತಾರೆ.

ಮೊಗಲ್ ಸಾಮ್ರಾಜ್ಯದ ಸ್ಥಾಪನೆ ಮತ್ತು ಬಾಬರ್

ಮೊಗಲ್ ಸಾಮ್ರಾಜ್ಯದ ಸ್ಥಾಪನೆ ಮತ್ತು ಬಾಬರ್

ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಸ್ಥಾಪಕನಾದ ಬಾಬರ್‌ನು ಆ ಮೊಗಲ್ ಸಾಮ್ರಾಜ್ಯಕ್ಕೆ ಭದ್ರವಾದ ಮತ್ತು ಶಾಶ್ವತವಾದ ಬುನಾದಿಯನ್ನು ಹಾಕಿದ ಕೀರ್ತಿಗೆ ಪಾತ್ರನಾಗಿದ್ದಾನೆ. ಅವನು ಮೊಗಲ್ ಸಾಮ್ರಾಜ್ಯದ ಸ್ಥಾಪನೆಗೆ ಮಾಡಿದ ಮಹತ್ ಸಾಧನೆಗಳು ಚಿರಸ್ಮರಣೀಯವಾಗಿವೆ.

ಬಾಬರನು ತಂದೆಯ ಕಡೆಯಿಂದ ಭಾರತದ ಮೇಲೆ ಕ್ರೂರ ಧಾಳಿಯನ್ನು ನಡೆಸಿದ ತೈಮೂರನ ಐದನೆಯ ತಲೆಮಾರಿನವನು, ತಾಯಿ ಕಡೆಯಿಂದ ಮಹಾನ್ ಸಾಮ್ರಾಜ್ಯ ಸ್ಥಾಪಕವಾದ ಚಂಗೀಸ್ ಖಾನನ ಐದನೇ ವಂಶಸ್ಥ, ಈ ಎರಡೂ ವಂಶಸ್ಥರ ಗುಣಗಳು ಬಾಬರನಲ್ಲಿದ್ದವು.

ಬಾಬರನ ಪ್ರಾರಂಭದ ಜೀವನ : ಬಾಬರ್ ಕ್ರಿ.ಶ. 1483 ಫೆಬ್ರವರಿ 14ರಂದು ಫರಘಾನದಲ್ಲಿ ಜನಿಸಿದನು. ಈತನ ತಂದೆ ಉಮರ್‌ ಷೇಖ್ ಮಿರ್ಜಾ. ತಾಯಿ ಕುತ್ತುಗ್ ನಿಗ್ ಖನುಂ, ಬಾಬರ್‌ನ ತಂದೆಯು ಟ್ರಾನ್ಸ್-ಆಕ್ಸಿಯಾನದಲ್ಲಿನ ಫ‌ರ್ ಘಾನ ಎಂಬ ಸಣ್ಣ ರಾಜ್ಯದ ಅರಸನಾಗಿದ್ದನು. ಕ್ರಿ.ಶ. 1494ರಲ್ಲಿ ಬಾಬರ್‌ನ ತಂದೆ ಮರಣ ಹೊಂದಿದಾಗ, ಆಗ ಇನ್ನೂ ಹನ್ನೊಂದು ವರ್ಷದ ಬಾಲಕನಾಗಿದ್ದ ಬಾಬರ್ ಫರ್ಫಾನದ ಸಿಂಹಾಸನವನ್ನೇರಿದನು. ತದನಂತರ ಸಮರ್ ಖಂಡವನ್ನು ಪ್ರಬಲ ಹೋರಾಟ ನಡೆಸಿ ವಶಪಡಿಸಿಕೊಂಡನು.

ಆದರೆ ಈ ಮಧ್ಯೆ ಅನಾರೋಗ್ಯದಿಂದ ಹಾಸಿಗೆ ಹಿಡಿದ ಬಾಬರ್‌ನು ಸತ್ತನೆಂದು ಸುಳ್ಳುಸುದ್ದಿಯನ್ನು ಬಾಬರನ ಸಂಬಂಧಿಕರು ಹಾಗೂ ಮಂತ್ರಿಗಳು ಫರ್ಘಾನದಲ್ಲಿ ಹರಡಿ, ಬಾಬರನ ಸಹೋದರನಾದ ಜಹಾಂಗೀರನನ್ನು ಅಧಿಕಾರಕ್ಕೆ ತಂದರು. ಕಾಯಿಲೆಯಿಂದ ಚೇತರಿಸಿಕೊಂಡು ಬಾಬ‌ನನು ಫರ್‌ ಘಾನವನ್ನು ಪುನಃ ವಶಪಡಿಸಿಕೊಳ್ಳಲು ಮಾಡಿದ ಯತ್ನ ವಿಫಲವಾಯಿತು. ಬಾಬರ್‌ನು ಮರಳಿ ಸಮರ್ ಖಂಡಕ್ಕೆ ತೆರಳುವಷ್ಟರಲ್ಲಿ ಆ ನಗರವೂ ಸಹ ಆತನ ಹತೋಟಿಯಿಂದ ತಪ್ಪಿ ಹೋಗಿತ್ತು.

ಫರ್‌ಫಾನ ಮತ್ತು ಸಮರ್ ಖಂಡಗಳನ್ನು ಕಳೆದುಕೊಂಡು ರಾಜಭ್ರಷ್ಟನಾದ ಬಾಬರ್‌ನು ಅಲೆಮಾರಿ ಜೀವನದ ಕಷ್ಟನಷ್ಟಗಳನ್ನು ಅನುಭವಿಸಿ, ಆ ಕಷ್ಟನಷ್ಟಗಳ ಶಾಲೆಯಲ್ಲಿ ತರಬೇತಿ ಹೊಂದಿ, ತನ್ನ ಮುಂದಿನ ಜೀವನವನ್ನು ಉಜ್ವಲಗೊಳಿಸುವಲ್ಲಿ ಯಶಸ್ವಿಯಾದನು. ಕ್ರಿ.ಶ. 1504 ರಲ್ಲಿ ಬಾಬರ್‌ನು ಕಾಬೂಲನ್ನು ಜಯಿಸಿಕೊಂಡ ಪರಿಣಾಮವಾಗಿ ಈತನ ಅಲೆಮಾರಿ ಜೀವನ ಅಂತ್ಯಗೊಂಡಿತು. ಕ್ರಿ.ಶ. 1507ರಲ್ಲಿ ಪಾದಶಹ (ಸಾಮ್ರಾಟ) ಎಂಬ ಬಿರುದನ್ನು ಧರಿಸಿದನು. ಕ್ರಿ.ಶ. 1508ರಲ್ಲಿ ಬಾಬರ್‌ನ ಹಿರಿಯ ಪುತ್ರ ಹುಮಾಯೂನ್ ಜನಿಸಿದನು.

ಭಾರತದಲ್ಲಿ ಬಾಬರನ ಆಕ್ರಮಣ : ಭಾರತದಲ್ಲಿನ ಆಗಾಧ ಸಂಪತ್ತು ಬಾಬರನ ಧಾಳಿಯ ಆಸೆಯನ್ನು ಕೆರಳಿಸಿತು. ಕ್ರಿ.ಶ. 1505 ರಲ್ಲಿ ಬಾಬರನು ಸಿಂಧೂ ನದಿಯವರೆಗಿನ ಭಾರತದ ಗಡಿ ಪ್ರದೇಶದಲ್ಲಿ ಆಕ್ರಮಣವೆಸಗಿದನು. ಕ್ರಿ.ಶ.1519 ರಲ್ಲಿ ಸಿಂಧೂನದಿಯನ್ನು ದಾಟಿ, ಪಂಜಾಬಿನ ವಾಯುವ್ಯ ಭಾಗವನ್ನು ಆಕ್ರಮಿಸಿದನು.

ಕ್ರಿ.ಶ. 1524 ರಲ್ಲಿ ಬಾಬರನಿಗೆ ಒಂದು ಒಳ್ಳೆಯ ಅವಕಾಶ ಒದಗಿತು. ಪಂಜಾಬಿನ ದೌಲತ್ ಖಾನ್ ಮತ್ತು ಇಬ್ರಾಹಿಂಲೋದಿಯ ಚಿಕ್ಕಪ್ಪನಾದ ಅಲಂಖಾನ್ ಇವರು ಭಾರತದ ಮೇಲೆ ದಾಳಿಯಿಡುವಂತೆ ಬಾಬರನನ್ನು ಆಮಂತ್ರಿಸಿದರು. ಬಾಬರನು ಕ್ರಿ.ಶ. 1524 ರಲ್ಲಿ ಪಂಜಾಬನ್ನು ಪ್ರವೇಶಿಸಿ ಲಾಹೋರನ್ನು ಆಕ್ರಮಿಸಿದನು. ಹಿಂದೂಸ್ಥಾನದಲ್ಲಿ ಶಾಶ್ವತ ರಾಜ್ಯ ಸ್ಥಾಪನೆಯ ಗುರಿಹೊಂದಿರುವುದನ್ನು ಕಂಡು ದೌಲತ್ ಖಾನ್ ಮತ್ತು ಅಲಂಖಾನರು ಬಾಬರನ ವಿರೋಧಿಗಳಾದರು. ಬಾಬರನು ಕಾಬೂಲಿಗೆ ಹಿಂತಿರುಗಿ ತನ್ನ ಸೈನಿಕ ಬಲವನ್ನು ಹೆಚ್ಚಿಸಿಕೊಂಡನು. ಕ್ರಿ.ಶ. 1525 ರಲ್ಲಿ ಬಾಬರನು ಪಂಜಾಬನ್ನು ಆಕ್ರಮಿಸಿ ದೌಲತ್ ಖಾನನ ಶರಣಾಗತಿಯನ್ನು ಪಡೆದನು. ಅನಂತರ ಇಬ್ರಾಹಿಂಲೋದಿಯನ್ನು ಎದುರಿಸಲು ಪಂಜಾಬಿನಿಂದ ಪಾಣೀಪತ್ ರಣಾಂಗಣಕ್ಕೆ ಸೈನ್ಯಸಮೇತ ಸಾಗಿದನು.

ಪಾಣಿಪತ್‌ ಕದನ (1526 ಏಪ್ರಿಲ್‌ 21)  : ಕ್ರಿ.ಶ. 1526 ಏಪ್ರಿಲ್‌ 21 ರಂದು ಬಾಬರ್‌ ಮತ್ತು ದೆಹಲಿಯ ಇಬ್ರಾಹಿಂಲೋದಿ ನಡುವೆ ನಡೆದ ಮೊದಲನೇ ಪಾಣೀಪತ್ ಕದನಕ್ಕೆ ಕೆಳಗಿನ ಕಾರಣಗಳಿವೆ.

  1. ಬಾಬರನು ಯುದ್ಧಪ್ರಿಯ ಮತ್ತು ಮಹಾಪರಾಕ್ರಮಿಯಾಗಿದ್ದನು. ಕಾಬೂಲಿನ ದೊರೆಯಾಗಿ ಹಲವು ವರ್ಷಗಳ ಕಾಲ ಆಡಳಿತ ನಡೆಸಿದರು, ಅವನ ಮಹತ್ವಾಕಾಂಕ್ಷೆ ಭಾರತದಲ್ಲಿ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸುವುದಾಗಿತ್ತು.
  2. ಭಾರತದ ಪ್ರಸಿದ್ದಿ ಮತ್ತು ಉತ್ಕೃಷ್ಟತೆ ಬಾಬರನಿಗೆ ಮೊಘಲ್ ಸಾಮ್ರಾಜ್ಯ ಸ್ಥಾಪಿಸಲು ಪೋಷಕವಾದವು. ಇವುಗಳು ಅವನ ಹೆಬ್ಬಯಕೆಗೆ ಪ್ರೇರಕ ಶಕ್ತಿಗಳಾಗಿ ಪರಿಣಮಿಸಿದವು.
  3. ಕ್ರಿ.ಶ. 1526ರ ಮೊದಲನೇ ಪಾಣಿಪತ್ ಕದನಕ್ಕಿಂತ ಪೂರ್ವದಲ್ಲಿ ಬಾಬರನು ಮಾಡಿದ ಕ್ರಿ.ಶ. 1519, ಕ್ರಿ.ಶ. 1520, ಕ್ರಿ.ಶ. 1524ರ ದಂಡಯಾತ್ರೆಗಳು ಭಾರತದ ಕಡೆ ಸಾಗಲು ದಾರಿಯನ್ನು ಸುಗಮಗೊಳಿಸಿದವು.
  4. ಬಾಬರನ ಕಾಲಕ್ಕೆ ಉತ್ತರ ಭಾರತದ ರಾಜಕೀಯ ಪರಿಸ್ಥಿತಿಯು ತುಂಬಾ ಹದಗೆಟ್ಟಿತ್ತು. ಮಾಳವ, ಗುಜರಾತ್, ರಜಪೂತ ಮೊದಲಾದ ರಾಜರುಗಳಲ್ಲಿ ಆಗಾಗ್ಗೆ ಯುದ್ಧಗಳಾಗುತ್ತಿದ್ದವು. ಉತ್ತರ ಭಾರತದಲ್ಲಿ ರಾಜಕೀಯ ಐಕ್ಯಮತ್ಯವಿಲ್ಲದ್ದು ಭಾರತದ ಮೇಲೆ ದಾಳಿ ಮಾಡಲು ಮತ್ತು ಭಾರತದಲ್ಲಿ ಶಾಶ್ವತವಾದ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸಲು ಅವಕಾಶ ಒದಗಿದಂತಾಯಿತು.
  5. ಕ್ರಿ.ಶ. 1526ರ ಹೊತ್ತಿಗೆ ದೆಹಲಿ ಸಾಮ್ರಾಜ್ಯದ ರಾಜಕೀಯ ಪರಿಸ್ಥಿತಿಯು ಇನ್ನಷ್ಟು ಹದಗೆಟ್ಟಿತ್ತು. ಇಬ್ರಾಹಿಂಲೋದಿಯ ಅಸಮರ್ಪಕ ಆಳ್ವಿಕೆಯಿಂದ ಹೆಚ್ಚಾದ ವಿರೋಧಿಗಳು ಅವನ ವಿರುದ್ಧ ಬಂಡಾಯವೇಳುವಷ್ಟು ಪ್ರಬಲರಾದರು. ಈ ಪರಿಸ್ಥಿತಿಯನ್ನೆಲ್ಲ ವೀಕ್ಷಿಸಿ, ನಿರೀಕ್ಷಿಸಿ, ವಿವೇಚಿಸಿದ ಬಾಬರ್ ಭಾರತದ ಮೇಲೆ ದಂಡೆತ್ತಿ ಬರುವ ನಿರ್ಧಾರವನ್ನು ತೆಗೆದುಕೊಂಡನು.
  6. ಕ್ರಿ.ಶ.1524 ರಲ್ಲಿ ಪಂಜಾಬಿನ ದೌಲತ್ ಖಾನ್ ಮತ್ತು ದೆಹಲಿಯ ಇಬ್ರಾಹಿಂಲೋದಿಯ ಚಿಕ್ಕಪ್ಪನಾದ ಅಲಂಖಾನ್-ಇವರು ಭಾರತದ ಮೇಲೆ ದಾಳಿಮಾಡುವಂತೆ ಬಾಬರ್‌ನಿಗೆ ಆಹ್ವಾನ ನೀಡಿದರು. ಈ ನಂತರ ಪಂಜಾಬನ್ನೇ ಆಕ್ರಮಿಸಿ ದೌಲತ್‌ ಖಾನನ ಶರಣಾಗತಿಯನ್ನು ಪಡೆದನು. ಆನಂತರ ಇಬ್ರಾಹಿಂಲೋದಿಯನ್ನು ಎದುರಿಸಲು ಪಂಜಾಬಿನಿಂದ ಪಾಣಿಪತ್ ರಣಾಂಗಣಕ್ಕೆ ಸೈನ್ಯಸಮೇತ ಹೊರಟನು.

ಪ್ರಧಾನ ಘಟನೆಗಳು : ಬಾಬರನ ಸೈನ್ಯವು ದೆಹಲಿಯತ್ತ ಮುನ್ನುಗ್ಗಿದಂತೆ, ಇಬ್ರಾಹಿಂಲೂದಿಯು ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡು ಮುನ್ನಡೆದನು. ಬಾಬರನು ತನ್ನ ಜೀವನವೃತ್ತಾಂತದಲ್ಲಿ ತಾನು 12000 ಸೈನಿಕರಿಂದ ಪಾಣಿಪತ್ ಯುದ್ಧರಂಗದಲ್ಲಿ ಇಬ್ರಾಹಿಂ ಲೂದಿಯ ಒಂದು ಲಕ್ಷ ಸೈನಿಕರಿಂದ ಮತ್ತು ಒಂದು ಸಾವಿರ ಆನೆಗಳಿಂದ ಕೂಡಿದ್ದ ಸೈನ್ಯವನ್ನು ಸೋಲಿಸಿದನೆಂದು ಹೇಳಿಕೊಂಡಿದ್ದಾನೆ. ಡಾ.ಎಲ್.ಶ್ರೀವಾಸ್ತವ ಅವರು ಬಾಬರನ ಸೈನ್ಯ ಸುಮಾರು 25000, ಇದ್ದಿರಬಹುದೆಂದು ಊಹಿಸಿದ್ದಾರೆ. ಬಾಬರನ ಮತ್ತು ಇಬ್ರಾಹಿಂಲೂದಿಯ ಸೈನ್ಯಗಳು ಐತಿಹಾಸಿಕ ಯುದ್ಧಭೂಮಿಯಾದ ಪಾಣಿಪತ್‌ನಲ್ಲಿ ಕ್ರಿ.ಶ. 1526ರ ಏ. 21 ರಂದು ಸಂಧಿಸಿದವು. ಈ ಎರಡು ಸೇನೆಗಳ ನಡುವೆ ನಡೆದ ಕದನವೇ ಮೊದಲನೇ ಪಾಣಿಪತ್ ಕದನ. ಇದೊಂದು ಭಾರತದ ಇತಿಹಾಸದ ಐತಿಹಾಸಿಕ ಮತ್ತು ನಿರ್ಣಾಯಕ ಕದನ.

ಈ ಕದನ ಬೆಳಗಿನ 9 ರಿಂದ ಮಧ್ಯಾಹ್ನದವರೆಗೆ ನಡೆಯಿತು. ಬಾಬರನು ತನ್ನ ಅಪ್ರತಿಮ ಧೈರ್ಯ, ಶೌರ್ಯ, ಯುದ್ಧ ನೈಪುಣ್ಯ, ಉತ್ತಮ ದಂಡನಾಯಕತ್ವ, ಫಿರಂಗಿದಳದ ಚಾಣಾಕ್ಷ ಬಳಕೆಯಿಂದಾಗಿ ಲೂಧಿಸುಲ್ತಾನನ ವಿರುದ್ಧ ನಿರ್ಣಾಯಕ ವಿಜಯ ಪಡೆದನು. ಇಬ್ರಾಹಿಂಲೋದಿಯು ವೀರಾವೇಶದಿಂದ ಹೋರಾಡಿ ಯುದ್ಧರಂಗದಲ್ಲಿಯೇ ಮಡಿದನು. ಈತನೊಂದಿಗೆ 15 ರಿಂದ 16 ಸಾವಿರ ಸೈನಿಕರು ಸಾವನ್ನಪ್ಪಿದರು. ಬಾಬರನಿಗೆ ವಿಜಯಲಕ್ಷ್ಮಿ ಒಲಿದಳು. ಅಸಂಖ್ಯಾತ ಆನೆಗಳು ಮತ್ತು ಅಪಾರ ಸಂಪತ್ತಿನ ಜೊತೆಗೆ ದೆಹಲಿ ಮತ್ತು ಆಗ್ರಾ ನಗರಗಳು ಬಾಬರನ ವಶವಾದವು. ಈ ಕದನ ಭಾರತದ ಇತಿಹಾಸದಲ್ಲಿ ನಿರ್ಣಾಯಕ ಘಟನೆಯಾಯಿತು.

ಪರಿಣಾಮಗಳು : ಪ್ರಥಮ ಪಾಣೀಪತ್ ಕದನವು ಭಾರತದ ಇತಿಹಾಸದಲ್ಲಿ ಸಂಭವಿಸಿದ ಕದನಗಳಲ್ಲೇ ಅತ್ಯಂತ ಪ್ರಮುಖವಾದುದು. ಇದರ ಪರಿಣಾಮಗಳು ಈ ಕೆಳಗಿನಂತಿವೆ.

  1. ಇಬ್ರಾಹಿಲೋದಿ ಮತ್ತು ಬಾಬರನ ನಿರ್ಣಯಕ ಯುದ್ಧವಾದ ಈ ಕದನದಲ್ಲಿ ಲೋದಿ ಸೈನಿಕ ಶಕ್ತಿಯು ಸಂಪೂರ್ಣವಾಗಿ ನಾಶವಾಯಿತಲ್ಲದೆ ದೆಹಲಿ ಸಾಮ್ರಾಜ್ಯ ಹೇಳ ಹೆಸರಿಲ್ಲದಂತೆ ನಾಶವಾಯಿತು.
  2. ದೆಹಲಿ ದೊರೆ ಇಬ್ರಾಹಿಂಲೋದಿ ರಣರಂಗದಲ್ಲಿ ಸಾವನ್ನಪ್ಪಿದನು.
  3. ದೆಹಲಿ ಸಾಮ್ರಾಜ್ಯವು ಮೊಗಲ್ ದೊರೆ ಬಾಬರನ ವಶವಾಯಿತು.
  4. ಯುದ್ಧಾನಂತರ ಬಾಬರನ ಕೈಗೆ ಅಪಾರ ಸಂಪತ್ತು ದೊರಕಿತು. ಈ ಬಹುದೊಡ್ಡ ಪ್ರಮಾಣದ ಸಂಪತ್ತನ್ನು ಬಾಬರನು ತನ್ನ ಸಂಬಂಧಿಕರಿಗೆ ಮತ್ತು ಅಧಿಕಾರಿಗಳಿಗೆ ಹಂಚಿದನು.
  5. ಬಾಬರನು ಪವಿತ್ರ ಸ್ಥಳಗಳಾದ ಮೆಕ್ಕಾ ಮತ್ತು ಮದೀನಾಗಳಿಗೂ ಕಾಣಿಕೆ ಸಲ್ಲಿಸಿದನು.
  6. ಒಟ್ಟಿನಲ್ಲಿ ಈ ಕದನ ದೆಹಲಿ ಸುಲ್ತಾನರ ಸಾಮ್ರಾಜ್ಯವನ್ನು ನಾಶಗೊಳಿಸಿ, ಮೊಗಲ್ ಸಾಮ್ರಾಜ್ಯದ ಅಡಿಗಲ್ಲನ್ನು ಹಾಕಿತು.            ಬಾಬರನ ವಿಜಯಕ್ಕೆ ಕಾರಣಗಳು
    1. ಉನ್ನತ ಮಟ್ಟದ ಸೇನಾಧಿಪತ್ಯ ಮತ್ತು ಹೆಚ್ಚಿನ ಯುದ್ಧ ತಂತ್ರ,
    2. ತರಬೇತಿ ಹೊಂದಿದ ಮತ್ತು ಶಿಸ್ತಿನ ಮೊಗಲ್ ಸೈನ್ಯ.
    3. ಬಲಾಡ್ಯವಾದ ಫಿರಂಗಿ ಪಡೆ
    4. ಭಾರತೀಯರಲ್ಲಿದ್ದ ಅನೈಕ್ಯತೆ
    5. ಇಬ್ರಾಹಿಂ ಲೂದಿಯ ಅಸಾಮರ್ಥ್ಯತೆ ಮತ್ತು ಆತನ ಸೈನ್ಯದಲ್ಲಿದ್ದ ಅನೈಕ್ಯತೆ.

ಕಣ್ವ ಕಾಳಗ (1527 ಮಾರ್ಚ್ 16)

ಪಾಣಿಪತ್ ಕದನದ ವಿಜಯದಿಂದ ಬಾಬರ್ ಉತ್ತರ ಭಾರತದಲ್ಲಿ ಸಂಪೂರ್ಣವಾಗಿ ತನ್ನ ಯಜಮಾನಿಕೆಯನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಈ ಕದನಕ್ಕಿಂತಲೂ ಭೀಕರವಾದ ಮತ್ತೊಂದು ಕದನದಲ್ಲಿ ಅವನು ತೊಡಗಬೇಕಾಯಿತು. ಇದೇ ಕಣ್ವ ಕದನ.

ಬಾಬರ್ ಭಾರತದಲ್ಲಿ ಇಬ್ರಾಹಿಂ ಲೂದಿಗಿಂತ ಪ್ರಬಲ ಶತ್ರುಗಳನ್ನು ಎದುರಿಸಬೇಕಾಯಿತು. ಇಂತಹ ಶತ್ರುಗಳಲ್ಲಿ ಮೇವಾಡದ ರಾಣಾ ಸಂಗ್ರಾಮ ಸಿಂಹ ಅಥವಾ ರಾಣಾ ಸಂಗ ಪ್ರಮುಖವಾಗಿದ್ದನು. ರಾಣಾ ಸಂಗನನ್ನು ರಜಪೂತ ಮುಖಂಡರೆಲ್ಲಾ ಒಪ್ಪಿಕೊಂಡಿದ್ದರು. ಈತ ಮಹತ್ವಾಕಾಂಕ್ಷಿಯಾಗಿದ್ದು, ದೆಹಲಿಯ ಸಿಂಹಾಸನದ ಮೇಲೆ ಕಣ್ಣಿಟ್ಟಿದ್ದನು.

ತೈಮೂರನಂತೆ ಬಾಬರನೂ ಸಹ ಭಾರತದ ಸಂಪತ್ತನ್ನು ಲೂಟಿ ಮಾಡಿ ಹಿಂದಿರುಗುವನೆಂದು ಭಾವಿಸಿದ್ದ. ಆದರೆ ಬಾಬರನು ದೆಹಲಿಯಲ್ಲಿ ನೆಲೆಸಲು ನಿರ್ಧರಿಸಿದ್ದರಿಂದ ರಾಣಾನು ಆತನ ವಿರುದ್ಧ ಹೋರಾಟಕ್ಕೆ ನಿಂತ. ಮೊಗಲರ ವಿರುದ್ಧ ಹೋರಾಡಲು ಹಲವು ರಜಪೂತ ನಾಯಕರು ರಾಣಾ ಸಂಗನ ನೇತೃತ್ವದಲ್ಲಿ ಒಂದಾದರು. ಇಬ್ರಾಹಿಂ ಲೂದಿಯ ಸಹೋದರ ಮಹಮದ್ ಲೂದಿ ಮತ್ತು ಹಸನ್ ಖಾನ್ ಮೇವಾತಿಯೂ ಸಹ ರಾಣಾನೊಂದಿಗೆ ಕೈಜೋಡಿಸಿದ. ರಾಣಾನು ಬಾಬರನಂತಹ ಬಲಿಷ್ಠನನ್ನು ಹೊರ ಹಾಕಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ. ರಾಣಾನ ಸೈನಿಕರು ಯುದ್ಧರಂಗದಲ್ಲಿ ಎಂತಹ ಪ್ರಬಲ ಶತ್ರುಗಳನ್ನಾದರು ಎದುರಿಸಿ ಹೋರಾಡಿ ದೇಶದ ಗೌರವ ಮತ್ತು ಆತ್ಮಗೌರವಗಳನ್ನು ಕಾಪಾಡಿಕೊಳ್ಳುವ ಧೃಡ ನಿರ್ಧಾರದಿಂದ ಬಾಬರನ ವಿರುದ್ಧ ದಂಡೆತ್ತಿ ನಡೆದರು. ರಾಣಾಸಂಗನು ಅಜೇಯನೆಂಬ ಖ್ಯಾತಿಯನ್ನು ಗಳಿಸಿದ್ದನು. ತತ್ಪರಿಣಾಮವಾಗಿ ಬಾಬರನ ಸೈನಿಕರು ಭಯಭೀತರಾದರು. ಕಾಬೂಲ್ ನಿಂದ ಬಂದ ಹೆಚ್ಚಿನ ಸೇನೆಯಿಂದ ಬಾಬರನ ಸೈನಿಕರಲ್ಲಿ ಉತ್ಸಾಹ ಉಂಟಾಯಿತು. ಆದರೆ ಜ್ಯೋತಿಷ್ಯಕಾರರ ಮಾತಿನಂತೆ ಬಾಬರನಿಗೆ ಸೋಲುಂಟಾಗುವುದೆಂಬ ವಾರ್ತೆಹಬ್ಬಿತು. ತತ್ಪರಿಣಾಮವಾಗಿ ಬಾಬರನ ಸೈನಿಕರು ಮತ್ತಷ್ಟು ಭಯಭ್ರಾಂತಿಗೆ ಗುರಿಯಾದರು. ಬಾಬರ್ ಮಾತ್ರ ಗಾಬರಿಯಾಗದೆ ಸನ್ನಿವೇಶವನ್ನು ಆಸಾಧಾರಣ ಮಾನಸಿಕ ತಾಳ್ಮೆಯಿಂದ ಎದುರಿಸಿದ. ‘ಅಲ್ಲಾ’ ನ ಹೆಸರಿನಲ್ಲಿ ತನ್ನ ಸೈನಿಕರಲ್ಲಿ ಮಾನಸಿಕ ಸ್ಥೆರ್ಯವನ್ನು ತುಂಬಿದ.

ನಾಟಕೀಯವಾಗಿ ಪಾನಪಾತ್ರೆಗಳನ್ನು ಒಡೆದು ಹಾಕಿ, ತನ್ನಲ್ಲಿದ್ದ ಮದ್ಯವನ್ನೆಲ್ಲಾ ಚೆಲ್ಲಿದನು. ತನ್ನ ಹಿಂದಿನ ತಪ್ಪುಗಳಿಗೆಲ್ಲಾ ಪಶ್ಚಾತ್ತಾಪ ವ್ಯಕ್ತಪಡಿಸಿ ತಾನು ಮುಂದೆಂದೂ ಮದ್ಯಪಾನ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು. ಕುಡಿಯುವ ಚಿನ್ನದ ಮತ್ತು ಬೆಳ್ಳಿಯ ಪಾತ್ರೆಗಳನ್ನು ಚೂರುಮಾಡಿ ಬಡವರಿಗೆ ಮತ್ತು ಮುಸ್ಲಿಂ ಸಂತರಿಗೆ ಹಂಚಿದನು, ರಾಣಾ ಮತ್ತು ರಜಪೂತರ ಮೇಲೆ ಜಿಹಾದ್ ಅಥವಾ ಧರ್ಮಯುದ್ಧ ಮಾಡುವುದಾಗಿ ತಿಳಿಸಿದೆ.

ಮೊಗಲರು ಮತ್ತು ರಜಪೂತರ ನಡುವೆ ಭೀಕರ ಹೋರಾಟ

ಕ್ರಿ.ಶ. 1527ರ ಮಾ.16 ರಂದು ಕಣ್ಣ ಎಂಬಲ್ಲಿ ಸಂಭವಿಸಿತು. ಬಾಬರನು ಪಾಣಿಪತ್ ಕದನದಲ್ಲಿ ಉಪಯೋಗಿಸಿದ ಯುದ್ಧ ತಂತ್ರಗಳನ್ನೇ ಈ ಕದನದಲ್ಲಿಯೂ ಅನುಸರಿಸಿದನು. ರಜಪೂತರು ರಾಣಾಸಂಗನ ನಾಯಕತ್ವದಲ್ಲಿ ಜೀವದ ಹಂಗನ್ನು ತೊರೆದು ವೀರಾವೇಶದಿಂದ ಹೋರಾಡಿದರು. ಆದರೆ ಬಾಬರನು ತನ್ನ ಉತ್ತಮ ದಂಡನಾಯಕತ್ವ, ಸೈನಿಕ ಚಾಕಚಕ್ಯತೆ ಮತ್ತು ಪ್ರಬಲ ಫಿರಂಗಿ ಪಡೆಯ ನೆರವಿನಿಂದ ಜಯಗಳಿಸುವಲ್ಲಿ ಯಶಸ್ವಿಯಾದನು. ರಜಪೂತರಿಗೆ ಸಂಪೂರ್ಣ ಸೋಲುಂಟಾಯಿತು. ತೀವ್ರವಾಗಿ ಗಾಯಗೊಂಡಿದ್ದ ರಾಣಾಸಂಗನನ್ನು ಯುದ್ಧ ರಂಗದಿಂದ, ಆತನ ಸೈನಿಕರು ಸಾಗಿಸಿದರು. ಹತ್ತು ಗಂಟೆಗಳ ಕಾಲ ಜರುಗಿದ ಕಣ್ವ ಕದನದಲ್ಲಿ ಜಯಶೀಲನಾದ ಬಾಬರ್ ರಾಣಾನ ಶಿಬಿರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡನು.

ಬಾಬರನ ಇತರ ಆಕ್ರಮಣಗಳು

ಚಾಂದೇರಿ ಪತನ : ಕ್ರಿ.ಶ. 1528ರ ಜನವರಿ ತಿಂಗಳಲ್ಲಿ ಬಾಬರನು ಚಾಂದೇರಿ ಕೋಟೆಯನ್ನು ಮುತ್ತಿದನು. ಚಾಂದೇರಿ ರಾಜ್ಯ ಮೇದಿನರಾಯ್ ಎಂಬ ಸುಪ್ರಸಿದ್ಧ ರಜಪೂತ ದೊರೆಯ ಅಧಿಪತ್ಯಕ್ಕೆ ಒಳಪಟ್ಟಿತ್ತು. ಬಾಬರನು ಚಾಂದೇರಿ ಕೋಟೆಯನ್ನು ಮುತ್ತಿಗೆ ಹಾಕಿದ್ದನ್ನು ಕಂಡು, ಸೋಲಿನಿಂದ ಪಾರಾಗುವುದು ಅಸಾಧ್ಯವೆಂದು ಅರಿತ ರಜಪೂತ ಮಹಿಳೆಯರು ಚೌಹಾರ್ ಪದ್ಧತಿಯನ್ನು ಅನುಸರಿಸಿ ಅಗ್ನಿಗೆ ಆಹುತಿಯಾದರು. ಕೋಟೆಯಲ್ಲಿದ್ದ ಎಲ್ಲ ಸೈನಿಕರು ಹತರಾದರು. ಕ್ರಿ.ಶ. 1528ರ ಜನವರಿ 29ರಂದು ಬಾಬರನು ಚಾಂದೇರಿ ಕೋಟೆಯನ್ನು ತನ್ನ ಹಿಡಿತಕ್ಕೆ ಒಳಪಡಿಸಿಕೊಂಡನು. ಅಲ್ಲದೆ ಬಾಬರನಿಗೆ ಇಲ್ಲಿ ಆಗಾಧ ಪ್ರಮಾಣದ ಸಂಪತ್ತು ಕೈಸೇರಿತು.

ಗೋಗ್ರ ಕದನ : ಇಬ್ರಾಹಿಂ ಲೋದಿಯ ಸಹೋದರನಾದ ಮಹಮದ್ ಲೋದಿ ಬಿಹಾರದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ್ದಲ್ಲದೆ ಒಂದು ಲಕ್ಷ ಸೈನ್ಯವನ್ನು ಸಂಘಟಿಸಿದ್ದನು. ಬಂಗಾಳ ಮತ್ತು ಬಿಹಾರದ ಆಫ್‌ಘಾನರ ತೊಂದರೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅವರ ಮೇಲೆ ಯುದ್ಧಮಾಡುವುದೊಂದೇ ಉತ್ತಮದಾರಿಯೆಂದು ಬಾಬರ್ ನಿರ್ಧರಿಸಿದ. ಬಾಬರ್ ಕ್ರಿ.ಶ. 1529ರಲ್ಲಿ ಆಗ್ರಾವನ್ನು ಬಿಟ್ಟು ಆಫ್‌ಘನ್ನರನ್ನು ಎದುರಿಸಲು ಹೊರಟ ಕ್ರಿ.ಶ. 1529 ಮೇ 6ರಂದು ಗಂಗಾ ಮತ್ತು ಅದರ ಉಪನದಿಯಾದ ಗೋಗ್ರಾ ಇವುಗಳ ಸಂಗಮ ಸ್ಥಳದಲ್ಲಿ (ಪಾಟ್ನಾದ ಮೇಲ್ಗಡೆ) ಬಾಬರ್ ಮತ್ತು ಅಫಘಾನ್ನರ ನಡುವೆ ಕಾಳಗ ಸಂಭವಿಸಿತು. ಇದರಲ್ಲಿ ಅಫಘಾನ್ನರು ಸಂಪೂರ್ಣವಾಗಿ ಅಪಜಯ ಹೊಂದಿದರು. ಲೋದಿಗಳ ಆಸೆ ಕನಸಾಯಿತು. ಹಲವು ಪ್ರಮುಖ ಅಫಘಾನ ಸರದಾರರು ಬಾಬರನಿಗೆ ಶರಣಾದರು. ಈ ವಿಜಯದ ನಂತರ ಬಾಬನನು ಬಿಹಾರದ ಮೇಲೆ ತನ್ನ ಪ್ರಭುತ್ವ ಸ್ಥಾಪಿಸಿದನು. ಈ ರೀತಿ ಬಾಬರನು ಪಡೆದ ಎಲ್ಲಾ ವಿಜಯಗಳು ಆತನು ಭಾರತದಲ್ಲಿ ಮೊಗಲ್ ಸಂತತಿ ಮತ್ತು ಸಾಮ್ರಾಜ್ಯಗಳ ಸ್ಥಾಪನೆಗೆ ಅಡಿಪಾಯ ಹಾಕಿದವು.

ಬಾಬರನ ಅಂತಿಮ ದಿನಗಳು : ಬಾಬರ್ ತಾನು ಶ್ರಮಪಟ್ಟು ಸಾಧಿಸಿದ್ದ ವಿಜಯಗಳ ಪ್ರತಿಫಲವನ್ನು ಅನುಭವಿಸಲು ಬಹಳ ಕಾಲ ಜೀವಿಸಲಿಲ್ಲ. ಕ್ರಿ.ಶ. 1530 ಡಿ. 26 ರಂದು ಆಗ್ರಾದಲ್ಲಿ ಬಾಬರ್‌ನು ಮರಣಹೊಂದಿದನು. ಈತನ ಮರಣದ ಬಗ್ಗೆ ಹಲವು ಅಭಿಪ್ರಾಯಗಳಿವೆ. ಆದರೆ ಪ್ರೊ. ಶ್ರೀರಾಮ ಶರ್ಮರು ಬಾಬರನ ಮರಣದ ಬಗ್ಗೆ ಅಬುಲ್ ಫಜಲ್ ಕಟ್ಟಿರುವ ಕಾಲ್ಪನಿಕ ಕಥೆಯನ್ನು ನಂಬಲು ಯಾವುದೇ ಆಧಾರವಿಲ್ಲವೆಂದು ತಿಳಿಸಿದ್ದಾರೆ. ಬಾಬರನ ಮೃತದೇಹವನ್ನು ಪ್ರಾರಂಭದಲ್ಲಿ ಆಗ್ರಾದ ಆರಾಮಬಾಗ್‌ನಲ್ಲಿ ಸಮಾಧಿ ಮಾಡಿದರು. ತದನಂತರ ಅದನ್ನು ಕಾಬೂಲಿಗೆ ತರಲಾಯಿತು.

ಬಾಬರ್‌ನ ವ್ಯಕ್ತಿತ್ವ: ಬಾಬರ್‌ನು ಮಧ್ಯಕಾಲೀನ ವಿಷಿಯಾದ ಸರ್ವಶ್ರೇಷ್ಠ ದೊರೆಗಳಲ್ಲೊಬ್ಬನೆಂದು ಸಮಕಾಲೀನ ಹಾಗೂ ಆಧುನಿಕ ಇತಿಹಾಸಕಾರರೆಲ್ಲರೂ ಒಪ್ಪಿಕೊಂಡಿದ್ದಾರೆ. ಈತನ ಸಹೋದರ ಮಿರ್ಜಹೈದರನು ವಿವರಿಸುವಂತೆ “ಶೌರ್ಯ ಮತ್ತು ಮಾನವೀಯತೆಯೂ ಸೇರಿದಂತೆ ಹಲವಾರು ಸದ್ಗುಣಗಳು ಮತ್ತು ಶ್ರೇಷ್ಠತೆಗಳು ಇವನಲ್ಲಿದ್ದವು”, ಗುಲ್‌ಬದನ್ ಬೇಗಂ ತನ್ನ ‘ಹುಮಾಯೂನ್‌ ನಾಮ” ದಲ್ಲಿ ಇಂತಹ ಭಾವನೆಗಳನ್ನೆ ವ್ಯಕ್ತಪಡಿಸಿದ್ದಾಳೆ. ಡಾ|| ವಿ.ಎ. ಸ್ಮಿತ್ ಬಾಬರ್‌ನನ್ನು ಆ ಯುಗದ ಅತ್ಯಂತ ಶ್ರೇಷ್ಠ ರಾಜಕುಮಾರನಾಗಿದ್ದ ಎಂದಿದ್ದಾರೆ. ಹಾವೆಲ್ಲರ ಪ್ರಕಾರ ಈತ ಇಸ್ಲಾಮಿನ ಇತಿಹಾಸದ ಅತ್ಯಂತ ಆಕರ್ಷಕ ವ್ಯಕ್ತಿಗಳಲ್ಲಿ ಒಬ್ಬನು.

ಬಾಬರನಿಗೆ ಸಂಗೀತದಲ್ಲಿ ಸಾಕಷ್ಟು ತಿಳುವಳಿಕೆ ಇತ್ತು. ಯುದ್ಧ ಹಾಗೂ ರಾಜತಾಂತ್ರಿಕ ತಂತ್ರಗಳು ಪೂರ್ವನಿರ್ಧಾರಿತವಾಗಿದ್ದವು ಹಾಗೂ ಲೆಕ್ಕಾಚಾರದಿಂದ ಕೂಡಿದ್ದವು. ಅವನ ಆಕಾಲಿಕ ಸಾವಿನಿಂದಾಗಿ ಅವನ ಆಡಳಿತಾತ್ಮಕ ಅಂಶಗಳನ್ನು ತಿಳಿಯಲು ಸಾಧ್ಯವೇ ಇಲ್ಲ. ಪದ್ಯ ಮತ್ತು ಗದ್ಯ ರಚನೆಯಲ್ಲಿ ಅವನ ಅಸಾಧಾರಣ ಪ್ರತಿಭೆಯನ್ನು ಕಾಣಬಹುದು. ಅವನು ತನ್ನ ಅನುಭವಗಳನ್ನು ಮುಚ್ಚುಮರೆಯಿಲ್ಲದೆ ನಿರೂಪಿಸಿದ್ದಾನೆ. ತನ್ನ ದೌರ್ಬಲ್ಯಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾನೆ. ಬಾಬರ್‌ನು ಪರ್ಶಿಯನ್, ಅರೇಬಿಕ್ ಮತ್ತು ತುರ್ಕಿಭಾಷೆಗಳಲ್ಲಿ ಅತ್ಯುತ್ತಮ ಬರಹಗಾರನಾಗಿದ್ದನು. ಇವನ ಆತ್ಮಚರಿತ್ರೆ ತುಜುಕ್-ಇ-ಬಾಬರೀ (ಬಾಬರ್ ನಾಮಾ) ಪ್ರಪಂಚದ ಆತ್ಮಚರಿತ್ರೆಯ ಸಾಹಿತ್ಯದಲ್ಲಿ ಮಹತ್ವಪೂರ್ಣ ಕೃತಿಯಾಗಿದೆ.

ಬಾಬರನಿಗೆ ಹುಮಾಯೂನ್, ಕಮ್ರಾನ್, ಹಿಂದಾಲ್ ಮತ್ತು ಆಸ್ಕರಿ ಎಂಬ ನಾಲ್ಕು ಗಂಡು ಮಕ್ಕಳಿದ್ದರು. ಬಾಬರನ ನಿಧನದ ಮೂರು ದಿನಗಳ ನಂತರ ಆತನ ಹಿರಿಯ ಪುತ್ರ ಹುಮಾಯೂನ್ ಮೊಗಲ್ ಪಟ್ಟವೇರಿದನು. ಆದರೆ ಇವನ ಚಾರಿತ್ರ್ಯದಲ್ಲಿನ ದೋಷಗಳೇ ಷೇರ್‌ಷಹನ ಏಳಿಗೆಗೆ ಕಾರಣವಾಯಿತು.

ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ

ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ

ಧಾರ್ಮಿಕ ನೀತಿ:

ಭಾರತವನ್ನಾಳಿದ ಮುಸ್ಲಿಂ ಚಕ್ರವರ್ತಿಗಳಲ್ಲಿ ಅಕ್ಬರ್‌ ಅತ್ಯಂತ ಶ್ರೇಷ್ಠ ದೊರೆಯಾಗಿದ್ದನು. ಇವನು ಉದಾರವಾದಿ, ಧಾರ್ಮಿಕ ಸಹಿಷ್ಣು ಎಲ್ಲಕ್ಕಿಂತ ಮಿಗಿಲಾಗಿ ಬಡವರ ಬಗ್ಗೆ ಪ್ರೀತಿ ಹಾಗೂ ಅನುಕಂಪವುಳ್ಳವನಾಗಿದ್ದನು. ಅಕ್ಬರನ ತಾಯಿ ಪರ್ಶಿಯನ್ ವಿದ್ವಾಂಸಳಾಗಿದ್ದು ಆಕೆ ಅಕ್ಬರನಲ್ಲಿ ಸಹಿಷ್ಣುತಾ ಭಾವನೆಗಳನ್ನು ಬಿತ್ತಿದಳು. ಅಕ್ಬರನ ಹೆಂಡತಿ ಅಕ್ಬರನಲ್ಲಿ ಧಾರ್ಮಿಕ ಮನೋಭಾವನೆಗಳನ್ನು ಮೂಡಿಸಿದ್ದಳು. ಇವನು ಸೂಫಿ ಸಂತರಿಂದ ಪ್ರಭಾವಿತನಾಗಿದ್ದನು. ಹೀಗಾಗಿ ಅವನು ರಾಜ್ಯದ ವಿವಿಧ ಧರ್ಮಗಳ ತಿರುಳನ್ನು ಅರ್ಥಮಾಡಿಕೊಳ್ಳ ಬಯಸಿದ್ದನು. ಜೊತೆಗೆ ಹಿಂದುಗಳೇ ಅಧಿಕವಾಗಿದ್ದ ಮೊಗಲ್ ಸಾಮ್ರಾಜ್ಯದಲ್ಲಿ ಅವರನ್ನು ತನ್ನೆಡೆಗೆ ಒಲಿಸಿಕೊಳ್ಳಲು ಉತ್ಸುಕನಾಗಿದ್ದನು. ಅಕ್ಬರ್‌ ಮಹಾಶಯ ಶೇಕ್‌ ಸಲೀಂ ಚಿಸ್ತಿಯ ಪರಮ ಭಕ್ತನಾಗಿದ್ದರಿಂದ ಫತೇಪುರ ಸಿಕ್ರಿಯಲ್ಲಿ ‘ಇಬಾದತ್‌ಖಾನ’ ಎಂಬ ಭವ್ಯ ಕಟ್ಟಡವನ್ನು ನಿರ್ಮಿಸಿದನು. ಪ್ರತಿ ಗುರುವಾರ ಇಸ್ಲಾಂ, ಹಿಂದೂ, ಜೈನ, ಕ್ರೈಸ್ತ ಹಾಗೂ ಸಿಖ್ ಧರ್ಮಗುರುಗಳನ್ನು ಅಲ್ಲಿಗೆ ಆಹ್ವಾನಿಸಿ ಧಾರ್ಮಿಕ ವಿಷಯಗಳ ಕುರಿತು ಚರ್ಚೆ ನಡೆಸುತ್ತಿದ್ದನು. ಕ್ರಿ.ಶ. 1579 ರಲ್ಲಿ ಅಕ್ಬರನು ಸುನಿಶ್ಚಯ ಶಾಸನವನ್ನು ಹೊರಡಿಸಿ ಧಾರ್ಮಿಕ ವಿಷಯಗಳಲ್ಲಿ ಧಾರ್ಮಿಕ ಪಂಡಿತರ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಅಂತಿಮ ನಿರ್ಣಯವನ್ನು ಕೊಡುವ ಅಧಿಕಾರವನ್ನು ಬಾದಶಹ ಹೊಂದಿದ್ದನು.

ದಿನ್-ಇ-ಇಲಾಹಿ :

ಅಕ್ಷರನು ಸಾ.ಶ. 1582 ರಲ್ಲಿ ದಿನ್-ಇ-ಇಲಾಹಿ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದನು. ಈ ಹೊಸ ಧರ್ಮವು ಈ ಕೆಳಗಿನ ಪ್ರಮುಖ ತತ್ವಗಳನ್ನು ಒಳಗೊಂಡಿತ್ತು.

1) ಇದು ಸುಲ್-ಎ-ಕುಲ್ (ಸರ್ವರಿಗೂ ಶಾಂತಿ) ಎಂಬ ತತ್ವವನ್ನು ಒಳಗೊಂಡಿತ್ತು.

2) ಸ್ವಾತಂತ್ರ್ಯ ಮತ್ತು ಪರೋಪಕಾರ.

3) ಲೌಕಿಕ ವಿಚಾರಗಳಿಂದ ದೂರವಾಗಿರುವುದು.

4) ಏಕೀಶ್ವರ ತತ್ವಗಳ ತಳಹದಿಯನ್ನು ಹೊಂದಿತ್ತು.

5) ಯಾರೊಬ್ಬರ ಮನಸ್ಸನ್ನು ನೋಯಿಸದೆ ಮೃದುವಾಗಿ, ಹಿತವಾಗಿ ಸಭ್ಯತೆಯಿಂದ ನುಡಿಯುವುದು.

6) ದೇವರಿಗೆ ಆತ್ಮವನ್ನು ಅರ್ಪಿಸುವುದು. ಅಬುಲ್‌ ಫಜಲ್ ದಿನ್-ಇಲಾಹಿಯ ಪುರೋಹಿತನಾಗಿದ್ದನು. ಯಾರೇ ಈ ಧರ್ಮವನ್ನು ಸ್ವೀಕರಿಸಲು ಮುಂದೆ ಬಂದರೆ ಅಬುಲ್ ಫಜಲ್ ಆತನನ್ನು ಚಕ್ರವರ್ತಿಗೆ ಪರಿಚಯಿಸುತ್ತಿದ್ದನು. ಆಗ ಆ ವ್ಯಕ್ತಿ ತನ್ನ ರುಮಾಲನ್ನು ಕೈಯಲ್ಲಿರಿಸಿಕೊಂಡು ಚಕ್ರವರ್ತಿಯ ಪಾದಗಳಿಗೆ ನಮಸ್ಕರಿಸಬೇಕಿತ್ತು. ಚಕ್ರವರ್ತಿ ಆತನನ್ನು ಎಬ್ಬಿಸಿ ರುಮಾಲನ್ನು ಆತನ ತಲೆಯ ಮೇಲೆ ಇರಿಸುತ್ತಿದ್ದನು. ನಂತರ ‘ಶಸ್ತ್ರ’ ಎಂಬ ಸಂಕೇತವನ್ನು ಕೊಡುತ್ತಿದ್ದನು. ಆ ಸಂಕೇತದ ಮೇಲೆ ‘ಅಲ್ಲಾಹೂ ಅಕ್ಬರ್’ ಎಂದು ಬರೆಯಲಾಗಿತ್ತು. ಆದರೆ ದಿನ್-ಇಲಾಹಿಯನ್ನು ಬೆರಳೆಣಿಕೆಯಷ್ಟು ಜನ ಬಿಟ್ಟರೆ ಬೇರೆ ಯಾರೂ ಸ್ವೀಕರಿಸಲಿಲ್ಲ. ಅಕ್ಬರನ ಮರಣದ ನಂತರ ಅವನ ಹಿಂದೆಯೇ ಅದು ನಿರ್ನಾಮವಾಯಿತು.

ರಜಪೂತ ನೀತಿ:

ಅಕ್ಬರನ ರಜಪೂತ ಧೋರಣೆಯು ರಾಜಕೀಯ ಹಿತಾಸಕ್ತಿ, ನ್ಯಾಯ ಹಾಗೂ ಸಮಾನತೆಯ ತತ್ವಗಳನ್ನು ಆಧರಿಸಿತ್ತು. ಹೊರನಾಡಿನವರಾದ ಮುಸಲ್ಮಾನ ಅಧಿಕಾರಿಗಳು ಹಾಗೂ ಸರದಾರರನ್ನು ಸಂಪೂರ್ಣವಾಗಿ ನಂಬುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ಅಕ್ಷರನಿಗೆ ತನ್ನ ಆಡಳಿತದ ಮೊದಲ ವರ್ಷದಲ್ಲಿಯೇ ಮನವರಿಕೆಯಾಯಿತು. ಮುಸಲ್ಮಾನರು ಸ್ವಹಿತಕ್ಕಾಗಿ ದುಡಿಯುವರೆಂಬ ಸತ್ಯ ಅವನಿಗೆ ಆಗಲೇ ಮನದಟ್ಟಾಯಿತು. ಈ ಕಾರಣದಿಂದಾಗಿ ಅಕ್ಬರನು ಮೊಗಲ್ ಸಾಮ್ರಾಜ್ಯದಲ್ಲಿ ಬಹುಸಂಖ್ಯಾತರಾಗಿದ್ದ ಹಿಂದೂಗಳು ಅದರಲ್ಲೂ ರಜಪೂತರನ್ನು ಅತ್ಯಂತ ವಿಶ್ವಾಸಪೂರ್ವಕವಾಗಿ ನಡೆಸಿಕೊಂಡುದುದನ್ನು ಭಾರತೀಯ ಇತಿಹಾಸಕಾರರು ಮುಕ್ತಕಂಠದಿಂದ ಹೊಗಳಿದ್ದಾರೆ. ಈ ಹಿಂದೆ ಬಾಬರನಾಗಲಿ, ಹುಮಾಯೂನನಾಗಲೀ ರಜಪೂತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಲಿಲ್ಲ. ಸರ್ಕಾರದ ಉನ್ನತ ಹುದ್ದೆಗೆ ಅವರನ್ನು ನೇಮಕವನ್ನು ಮಾಡಿರಲಿಲ್ಲ. ಆದರೆ ಅಕ್ಬರ್‌ ಮಾತ್ರ ರಜಪೂತರಿಗೆ ರಾಜಕೀಯದಲ್ಲಿ ಅಗ್ರಸ್ಥಾನವನ್ನು ನೀಡಿದನು. ಇದರಿಂದಾಗಿ ಅಕ್ಬರ್‌ ಭಾರತೀಯ ಇತಿಹಾಸದಲ್ಲಿ ವಿಶಿಷ್ಠವಾದ ಸ್ಥಾನವನ್ನು ಪಡೆದಿದ್ದಾನೆ.

1) ಅಕ್ಬರನು ತನ್ನ ಸೈನಿಕ ಶಿಬಿರ ಹಾಗೂ ದರ್ಬಾರಿನಲ್ಲಿಯೇ ದಂಗೆಕೋರರನ್ನು ಎದುರಿಸಬೇಕಾಗಿದ್ದ ಕಾರಣದಿಂದ ಅವನು ರಜಪೂತರ ಬಗ್ಗೆ ಸೌಮ್ಯ ನೀತಿಯನ್ನು ಅನುಸರಿಸಿದನು.

2) ಅಕ್ಬರನ ಪ್ರಧಾನಮಂತ್ರಿಯಾಗಿದ್ದ ಶಹ ಮನ್ಸೂರ್ ಅಕ್ಬರನ ಮಲತಮ್ಮನಾದ ಮಹಮ್ಮದ್ ಹಕೀಂನಿಗೆ ಬೆಂಬಲ ನೀಡಿ ದ್ರೋಹ ಬಗೆದುದು ಅಕ್ಬರನು ರಜಪೂತರ ಬಗ್ಗೆ ಕಾಳಜಿ ವಹಿಸಲು ಕಾರಣವಾಯಿತು.

3 ) ಬೈರಾಂಖಾನನು ಅಕ್ಬರನ ವಿರುದ್ಧ ದಂಗೆ ಎದ್ದುದು ಹಾಗೂ ಮಹಮ್ ಅನಗಾ ಸ್ವಾರ್ಥಿಯಾದುದು ಅಕ್ಬರನು ರಜಪೂತರ ಬಗ್ಗೆ ನಿಷ್ಟೆ ತೋರಲು ಕಾರಣವಾಯಿತು.