ಮಧ್ಯಕಾಲೀನ ಭಾರತದ ಇತಿಹಾಸ
- ದೆಹಲಿ ಸುಲ್ತಾನರು
- ವಿಜಯನಗರ ಸಾಮ್ರಾಜ್ಯ
- ಕಬೀರ್, ನಾನಕ್, ಮೀರಾಬಾಯಿ, ಸೂಫಿ ಪಂಥ
- ರಜಪೂತರು
- ಮೊಘಲ್ ಸಾಮ್ರಾಜ್ಯ
- ಮರಾಠರು
- ಯುರೋಪಿಯನ್ನರ ಆಗಮನ
ದೆಹಲಿ ಸುಲ್ತಾನರ ಕೊಡುಗೆಗಳು
13ನೇ ಶತಮಾನದಿಂದ 16ನೇ ಶತಮಾನದವರೆಗೆ ಭಾರತದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ಆಡಳಿತವೇ ದೆಹಲಿ ಸುಲ್ತಾನರ ಆಡಳಿತ. ಇವರು ಆಡಳಿತ, ಸೇನಾ ವ್ಯವಸ್ಥೆ, ಸಾಹಿತ್ಯ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.
ಅಲ್ಲಾವುದ್ದೀನ್ ಖಿಲ್ಜಿಯ ಸುಧಾರಣೆಗಳು
ಅಲ್ಲಾವುದ್ದೀನ್ ಖಿಲ್ಜಿ ದೆಹಲಿ ಸುಲ್ತಾನರ ಶಕ್ತಿಶಾಲಿ ಆಡಳಿತಗಾರರಲ್ಲಿ ಒಬ್ಬರು. ಅವರ ಆಡಳಿತದಲ್ಲಿ ರಾಜಕೀಯ, ಆರ್ಥಿಕ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿ ಹಲವು ಮಹತ್ವದ ಸುಧಾರಣೆಗಳನ್ನು ಜಾರಿಗೆ ತರಲಾಯಿತು.
ಅಲ್ಲಾವುದ್ದೀನ್ ಖಿಲ್ಜಿಯ ದಕ್ಷಿಣ ದಂಡಯಾತ್ರೆಗಳು
ಅಲ್ಲಾವುದ್ದೀನ್ ಖಿಲ್ಜಿ ಮಧ್ಯಕಾಲೀನ ಭಾರತದ ಶಕ್ತಿಶಾಲಿ ಸುಲ್ತಾನರಲ್ಲಿ ಒಬ್ಬನಾಗಿದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ದಕ್ಷಿಣ ಭಾರತದಲ್ಲಿ ಅನೇಕ ದಂಡಯಾತ್ರೆಗಳನ್ನು ನಡೆಸಿದನು. ಈ ದಂಡಯಾತ್ರೆಗಳು ದೆಹಲಿ ಸುಲ್ತಾನರ ಸಾಮ್ರಾಜ್ಯಕ್ಕೆ ಅಪಾರ ಸಂಪತ್ತು ಮತ್ತು ರಾಜಕೀಯ ಪ್ರಭಾವವನ್ನು ತಂದುಕೊಟ್ಟವು.
ಕುತುಬ್-ಉದ್-ದೀನ್-ಐಬಕ್ ಮತ್ತು ದೆಹಲಿ ಸಾಮ್ರಾಜ್ಯದ ಸ್ಥಾಪನೆ
ಕುತುಬ್-ಉದ್-ದೀನ್ ಐಬಕ್ ದೆಹಲಿ ಸುಲ್ತಾನತಿಯ ಸ್ಥಾಪಕನಾಗಿ ಭಾರತದ ಮಧ್ಯಯುಗೀನ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದನು.
ಗುಲಾಮನಾಗಿ ಆರಂಭಿಸಿದ ಅವನ ಜೀವನ ಕೊನೆಗೆ ದೆಹಲಿಯ ಸುಲ್ತಾನನಾಗುವ ಮಹತ್ತರ ಸಾಧನೆಗೆ ದಾರಿ ಮಾಡಿಕೊಟ್ಟಿತು.
ಮಹಮ್ಮದ್-ಬಿನ್ – ತುಘಲಕನ ಆಡಳಿತಾತ್ಮಕ ಪ್ರಯೋಗಗಳು
ಹುಚ್ಚುದೊರೆಯೆಂದು ಖ್ಯಾತನಾದ ಮಹಮ್ಮದ್ ಬಿನ್ ತುಗಲಕ್. ಅವನ ಆಡಳಿತಾತ್ಮಕ ಪ್ರಯೋಗಗಳ ಕಾರಣ ಮತ್ತು ಹಿನ್ನೆಲೆಯ ಮೂಲಕ ಅವನ ಅಸಾಧಾರಣ ವ್ಯಕ್ತಿತ್ವದ ಪರಿಚಯ ಮಾಡಿಕೊಳ್ಳಬಹುದು.
ಶ್ರೀ ಕೃಷ್ಣದೇವರಾಯನ ಸಾಧನೆಗಳು
ಕೃಷ್ಣದೇವರಾಯ ವಿಜಯನಗರ ಅರಸರಲ್ಲಿಯೇ ಶ್ರೇಷ್ಠದೊರೆ ಎಂದು ಪ್ರಸಿದ್ಧನಾಗಿದ್ದಾನೆ. ಸುಮಾರು 20 ವರ್ಷಗಳ ಕಾಲದ ಇವನ ಆಳ್ವಿಕೆ ವಿಜಯನಗರದ ಸುವರ್ಣಯುಗ. ನಿಮಗೊಂದು ಪಕ್ಷಿನೋಟ.
ಪುರಂದರದಾಸರು(1484-1564)
ಪುರಂದರದಾಸ ಅವರು ಕನ್ನಡ ಭಕ್ತಿ ಸಾಹಿತ್ಯ ಮತ್ತು ಕರ್ನಾಟಕ ಸಂಗೀತದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದ ಮಹಾನ್ ಸಂತರು. ಭಕ್ತಿ, ನೀತಿ ಮತ್ತು ಸಮಾಜಸुधಾರಣೆಯ ಸಂದೇಶವನ್ನು ತಮ್ಮ ಕೀರ್ತನೆಗಳ ಮೂಲಕ ಜನರಿಗೆ ಹರಡಿದರು.
ರಾಮಾನುಜಾಚಾರ್ಯರ ಜೀವನ ಮತ್ತು ಬೋಧನೆಗಳು
ಭಾರತೀಯ ಆಧ್ಯಾತ್ಮಿಕ ಇತಿಹಾಸದಲ್ಲಿ ರಾಮಾನುಜಾಚಾರ್ಯ ಮಹತ್ವದ ಸ್ಥಾನ ಹೊಂದಿದ್ದಾರೆ. ಅವರ ವಿಶಿಷ್ಟಾದ್ವೈತ ತತ್ವಶಾಸ್ತ್ರ ಮತ್ತು ಸಾಮಾಜಿಕ ಸಮಾನತೆಯ ಸಂದೇಶವು ಇಂದಿಗೂ ಸಮಾಜಕ್ಕೆ ದಾರಿ ತೋರಿಸುತ್ತಿದೆ.
ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳು
ಮಧ್ವಾಚಾರ್ಯರು ಹಿಂದೂ ಧಾರ್ಮಿಕ ಹಾಗೂ ತತ್ತ್ವಶಾಸ್ತ್ರದ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿದ ಮಹಾನ್ ಆಚಾರ್ಯರು. ಅವರು ಪ್ರತಿಪಾದಿಸಿದ ದ್ವೈತ ತತ್ತ್ವಶಾಸ್ತ್ರ ಭಕ್ತಿ, ಜ್ಞಾನ ಮತ್ತು ಆಧ್ಯಾತ್ಮಿಕ ಜೀವನಕ್ಕೆ ಹೊಸ ದಾರಿಯನ್ನು ತೋರಿಸಿತು.
ಬಸವೇಶ್ವರರ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು
ಬಸವೇಶ್ವರ ಅವರು ಕರ್ನಾಟಕದ ಮಹಾನ್ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಕರಲ್ಲಿ ಒಬ್ಬರು. ಸಮಾನತೆ, ಕಾಯಕದ ಮಹತ್ವ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಸ್ಥಾಪಿಸಲು ಅವರು ಮಹತ್ತರ ಪಾತ್ರವಹಿಸಿದರು.
ಸೂಫಿ ಪಂಥ
ದೆಹಲಿ ಸುಲ್ತಾನರ ಕಾಲದಲ್ಲಿ ಸೂಫಿ ಪಂಥವು ಭಾರತೀಯ ಸಮಾಜದ ಮೇಲೆ ಮಹತ್ವದ ಪ್ರಭಾವ ಬೀರಿತು. ಪ್ರೀತಿ, ಭಕ್ತಿ ಮತ್ತು ಮಾನವ ಸಮಾನತೆಯ ಸಂದೇಶವನ್ನು ಸಾರಿದ ಈ ಪಂಥವು ಧಾರ್ಮಿಕ ಸಹಿಷ್ಣುತೆಯನ್ನು ಉತ್ತೇಜಿಸಿತು.
ಮಹಾತ್ಮ ಕಬೀರ್ ಮತ್ತು ಗುರುನಾನಕರು
ಕಬೀರ್ ಮತ್ತು ಗುರುನಾನಕ್ ಇಬ್ಬರೂ ಮಧ್ಯಕಾಲೀನ ಭಾರತದ ಮಹಾನ್ ಸಂತರು ಹಾಗೂ ಸಮಾಜ ಸುಧಾರಕರಾಗಿದ್ದಾರೆ. ಇವರ ಜೀವನ ಮತ್ತು ಬೋಧನೆಯನ್ನು ತಿಳಿಯಿರಿ
ರಜಪೂತರ ಮೂಲ
ರಜಪೂತಗಳ ಮೂಲದ ಪ್ರಶ್ನೆ ಭಾರತೀಯ ಇತಿಹಾಸಲೇಖನದಲ್ಲಿ ದೀರ್ಘಕಾಲದಿಂದಲೂ ಚರ್ಚೆಗೆ ಒಳಗಾಗಿರುವ ಮಹತ್ವದ ವಿಷಯವಾಗಿದೆ. ಕೆಲ ಪಂಡಿತರು ರಾಜಪುತರಿಗೆ ವಿದೇಶೀ ಮೂಲವಿದೆ ಎಂದು ವಾದಿಸಿದರೆ, ಇನ್ನಿತರರು ಅವು ಸಂಪೂರ್ಣವಾಗಿ ಭಾರತೀಯ ಮೂಲದವರೇ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ವಿಭಿನ್ನ ಸಾಕ್ಷ್ಯಗಳು ಮತ್ತು ವಿಧಾನಗಳನ್ನು ಆಧರಿಸಿದ ಈ ಪರಸ್ಪರ ವಿರೋಧಿ ಅಭಿಪ್ರಾಯಗಳು ಪಂಡಿತರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿವೆ.
ರಜಪೂತರ ಕಾಲದ ಸಾಹಿತ್ಯ
ಮಧ್ಯಯುಗದ ರಾಜಪುತ ರಾಜಸಭೆಗಳು ಕೇವಲ ಯುದ್ಧವೀರತೆಯ ಕೇಂದ್ರಗಳಾಗಿರಲಿಲ್ಲ; ಅವು ಬೌದ್ಧಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಚೈತನ್ಯಮಯ ಕೇಂದ್ರಗಳಾಗಿದ್ದವು.
ರಜಪೂತರ ಕಾಲದ ಸಾಮಾಜಿಕ ಜೀವನ
ರಜಪೂತರ ಕಾಲದ ಸಾಮಾಜಿಕ ವ್ಯವಸ್ಥೆ ಚಾತುರ್ವಣ್ರ ಪದ್ಧತಿಯ ಅಡಿಪಾಯದ ಮೇಲೆ ನಿರ್ಮಾಣವಾಗಿತ್ತು. ಇದರಿಂದ ಜಾತಿ ಪದ್ಧತಿ ಆ ಕಾಲದಲ್ಲಿಯೂ ಅತ್ಯಂತ ಕಠಿಣವಾಗಿತ್ತು ಎಂಬುದನ್ನು ತಿಳಿಯಬಹುದು.
ರಜಪೂತರ ಕಾಲದ ಆಡಳಿತ
ರಾಜಪೂತ ರಾಜ್ಯಗಳಾದ ಮೇವಾರ್, ಮಾರ್ವಾರ್, ಅಂಬರ್ ಮೊದಲಾದವುಗ ಆಡಳಿತ ವ್ಯವಸ್ಥೆ ವಿಭಿನ್ನ ರೂಪಗಳಲ್ಲಿ ಕಂಡುಬಂದರೂ, ಅದರ ಮೂಲ ಸ್ವರೂಪ ಸಾಮಾನ್ಯವಾಗಿತ್ತು.
ರಜಪೂತರ ಕಲೆ ಹಾಗೂ ವಾಸ್ತುಶಿಲ್ಪ
ರಜಪೂತ ಅರಸರು ಸಾಹಿತ್ಯ ಪೋಷಕರು ಮತ್ತು ಧರ್ಮ ಸಹಿಷ್ಣುರಾಗಿದ್ದಂತೆ ಕಲಾಭಿಮಾನಿಗಳು ಮತ್ತು ಕಲೋಪಾಸಕರಾಗಿದ್ದರು. ಭಾರತೀಯ ಕಲಾ ಪರಂಪರೆಯಲ್ಲಿ ರಜಪೂತರಿಂದ ಹೊಸದೊಂದು ಯುಗ ಆರಂಭಗೊಂಡಿತು. ರಜಪೂತರಿಂದ ರಚನೆಗೊಂಡ ಕಲಾಸ್ಮಾರಕಗಳೆಂದರೆ:- ದೇವಾಲಯಗಳು, ಅರಮನೆಗಳು, ಕೋಟೆಕೊತ್ತಲಗಳು, ಸ್ನಾನಘಟ್ಟಗಳು, ನೀರಾವರಿ ಅಣೆಕಟ್ಟುಗಳು ಮೊದಲಾದವು.
ಮೂರನೆಯ ಪೃಥ್ವಿರಾಜ್ (1178-1192)
ಚೌಹಾನ್ ಸಂತತಿಯಲ್ಲಿ ಮೂರನೆಯ ಪೃಥ್ವಿರಾಜ್ ಚೌಹಾನ್ ಅತ್ಯಂತ ಪ್ರಸಿದ್ಧ ದೊರೆ. ಇವನು ಚೌಹಾನರ ಇತಿಹಾಸದಲ್ಲಿ ನೂತನ ಯುಗವೊಂದನ್ನು ಆರಂಭಿಸಿದನು
ಮೊಗಲ್ ಸಾಮ್ರಾಜ್ಯದ ಸ್ಥಾಪನೆ ಮತ್ತು ಬಾಬರ್
ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಸ್ಥಾಪಕನಾದ ಬಾಬರ್ ನು ಆ ಸಾಮ್ರಾಜ್ಯಕ್ಕೆ ಭದ್ರ ಮತ್ತು ಶಾಶ್ವತವಾದ ಬುನಾದಿಯನ್ನು ಹಾಕಿದನು. ಅವನ ಮಹತ್ ಸಾಧನೆಗಳು ಚಿರಸ್ಮರಣೀಯವಾಗಿವೆ.
ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ
ಭಾರತವನ್ನಾಳಿದ ಮುಸ್ಲಿಂ ಚಕ್ರವರ್ತಿಗಳಲ್ಲಿ ಅಕ್ಬರ್ ಅತ್ಯಂತ ಶ್ರೇಷ್ಠ ದೊರೆಯಾಗಿದ್ದನು. ಇವನು ಉದಾರವಾದಿ, ಧಾರ್ಮಿಕ ಸಹಿಷ್ಣು ಎಲ್ಲಕ್ಕಿಂತ ಮಿಗಿಲಾಗಿ ಬಡವರ ಬಗ್ಗೆ ಪ್ರೀತಿ ಹಾಗೂ ಅನುಕಂಪವುಳ್ಳವನಾಗಿದ್ದನು. ಅಕ್ಬರನ ತಾಯಿ ಪರ್ಶಿಯನ್ ವಿದ್ವಾಂಸಳಾಗಿದ್ದು ಆಕೆ ಅಕ್ಬರನಲ್ಲಿ ಸಹಿಷ್ಣುತಾ ಭಾವನೆಗಳನ್ನು ಬಿತ್ತಿದಳು. ಅಕ್ಬರನ ಹೆಂಡತಿ ಅಕ್ಬರನಲ್ಲಿ ಧಾರ್ಮಿಕ ಮನೋಭಾವನೆಗಳನ್ನು ಮೂಡಿಸಿದ್ದಳು. ಇವನು ಸೂಫಿ ಸಂತರಿಂದ ಪ್ರಭಾವಿತನಾಗಿದ್ದನು. ಹೀಗಾಗಿ ಅವನು ರಾಜ್ಯದ ವಿವಿಧ ಧರ್ಮಗಳ ತಿರುಳನ್ನು ಅರ್ಥಮಾಡಿಕೊಳ್ಳ ಬಯಸಿದ್ದನು
ಶಿವಾಜಿಯ ಆಡಳಿತ ಪದ್ಧತಿ
ದಕ್ಷ ಆಡಳಿತಗಾರ,ರಾಜನೀತಿ ನಿಪುಣನಾಗಿದ್ದ ಶಿವಾಜಿಯು ನಿರಂಕುಶಾಧಿಕಾರಿಯಂತೆ ವರ್ತಿಸಲಿಲ್ಲ. ಪ್ರಜೆಗಳ ಕಲ್ಯಾಣದಲ್ಲಿಯೇ ತೃಪ್ತಿ ಕಾಣುತ್ತಿದ್ದ ಅವನ ಬಗ್ಗೆ ಒಂದು ಪಕ್ಷಿನೋಟ.
ಭಾರತದಲ್ಲಿ ಪೋರ್ಚುಗೀಸರು
ಭಾರತಕ್ಕೆ ಹೊಸ ಸಮುದ್ರಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದ ಮೊದಲ ಯುರೋಪಿಯನ್ನರೆಂದರೆ ಪೋರ್ಚುಗೀಸರು. ಕ್ರಿ.ಶ. 1498ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪ್ರಥಮ ಪೋರ್ಚುಗೀಸ್ ನಾವಿಕನೆಂದರೆ ವಾಸ್ಕೋ-ಡ-ಗಾಮಾ. ಈತನ ಭೂ ಅನ್ವೇಷಣೆಯ ನಂತರ ಭಾರತಕ್ಕೆ ಪೋರ್ಚುಗೀಸರು ಡಚ್ಚರು, ಫ್ರೆಂಚರು ಹಾಗೂ ಇಂಗ್ಲೀಷರು ಒಬ್ಬೊಬ್ಬರಾಗಿ ಆಗಮಿಸಿದರು



















